ಸೋಮವಾರ, ಏಪ್ರಿಲ್ 22, 2024

ದೂರದ ದೇಶದಲ್ಲಿ ಕನ್ನಡ

ಭಾಷೆ ಎಂಬುದು ಎರಡು ಮನಸ್ಸುಗಳನ್ನು ಒಂದು ಕಡೆ ಕಟ್ಟಿಹಾಕುತ್ತದೆ. ಹಾಗೆಯೆ ನಮ್ಮ ಕನ್ನಡ ಭಾಷೆ ಈ ಅಮೇರಿಕಾದ ಡೇಟನ್ ನಗರದಲ್ಲಿ ವಿವಿಧ ಕನ್ನಡ ಕುಟುಂಬಗಳನ್ನು ಒಟ್ಟಿಗೆ ಒಂದು ಜಾಗದಲ್ಲಿ  ಸೇರುವಂತೆ ಮಾಡಿದೆ ಅಂದರೆ ಅತಿಶಯೋಕ್ತಿಯಲ್ಲ.

ಡೇಟನ್ ಸಿರಿಗನ್ನಡ ಸ್ಥಾಪಿತವಾಗಿ ಇಲ್ಲಿಯ ಎಲ್ಲಾ ಅಮೇರಿಕ ಕನ್ನಡಿಗರನ್ನು ಒಂದೇ ಸೂರಿನಲ್ಲಿ ತಂದಿದೆ. 



ಈ ಸಂಘವು ವರುಶದಲ್ಲಿ ಹಲವಾರು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿ ಕೊಂಡು ವರ್ಷವಿಡಿ ಕನ್ನಡಿಗರನ್ನು ಒಟ್ಟಿಗೆ ಪರಸ್ಪರ ಭೇಟಿ ಮಾಡಲು ಅನುವು ಮಾಡಿಕೊಟ್ಟಿದೆ ಅಂದ್ರೆ ತಪ್ಪಿಲ್ಲ. 

ಇಲ್ಲ ಅಂದ್ರೆ ಗೊತ್ತಲ್ಲ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸ ಕಾರ್ಯಗಳ ಮೊಲಕ ಈ ಬ್ಯುಸಿ ಲೈಫ್ ನಲ್ಲಿ ಮುಳುಗೇಳುತ್ತಿರುತ್ತಾರೆ. ಈ ರೀತಿಯ ಯಾ0ತ್ರಿಕ ಬದುಕಿನಿಂದ ಪ್ರತಿಯೊಬ್ಬ ಕನ್ನಡಿಗರನ್ನು ಹೊರತರುವಲ್ಲಿ ಈ ಕನ್ನಡ ಕೂಟವು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. 

ರಾಜ್ಯೋತ್ಸವ, ಯುಗಾದಿ, ಸ0ಕ್ರಾಂತಿ ಹೀಗೆ ಮುಖ್ಯ ಹಬ್ಬಗಳನ್ನು ಇಲ್ಲಿಯ  ಕನ್ನಡಿಗರೆಲ್ಲ ಒಟ್ಟಿಗೆ ಸೇರಿ ಒಂದೆಡೆ ಕಲೆತು ಬೆರೆತು ದೊಡ್ಡವರಿಂದ ಇಡಿದು ಚಿಕ್ಕ ಮಕ್ಕಳವರೆಗೆ ಕುಣಿದು, ಹಾಡಿ, ನಲಿದು, ತಾವೇ ತಮ್ಮ ಕೈಯಾರೆ ತಯಾರಿಸಿದ ತಿನಿಸುಗಳನ್ನು ಸವಿಯುತ್ತ ಕನ್ನಡದ ನೆಲದ ನೆನಪನ್ನು ಪುನರ್ ಮೆಲಕು  ಹಾಕಿಕೊಂಡು ಆಚರಿಸುತ್ತಾರೆ. 

ಇಲ್ಲಿಯೇ ಹುಟ್ಟಿ  ಬೆಳೆದ  ಮಕ್ಕಳಿಗೆ  ಕನ್ನಡದ ಮಣ್ಣಿನ ವಾಸನೆಯನ್ನು ಗ್ರಹಿಸುವ ಅವಕಾಶ. ಹೀಗೆ ನಮ್ಮ ರಾಜ್ಯದಿಂದ ದೊರವಿದ್ದರು ನಮ್ಮ ಮಾತೃ ಭಾಷೆಯಲ್ಲಿ  ಅದು  ಈ ಇಂಗ್ಲಿಷ್ ಮಯ ವಾತಾವರಣದಲ್ಲಿ ಎಲ್ಲರನ್ನು ಅತ್ಮೀಯವಾಗಿ ಮಾತನಾಡಿಸುವುದು ಸಂತೋಷವಾಗುತ್ತದೆ.  

ದೂರದ ದೇಶದಲ್ಲಿದ್ದಾಗ ಹತ್ತಿರವಿರುವರೇ ನೆಂಟರಲ್ಲವೇ? 

ಹೌದು ಆ  ಮೂಲಕ  ನಮ್ಮ ಈ  ಸಂಘದ ಕಾರ್ಯಕರ್ತರು  ಯಾವುದೇ ಒಂದು ಕಾರ್ಯಕ್ರಮ ಶುರುವಾಗುವ ಒಂದು ತಿಂಗಳು ಮುನ್ನ ಒಂದೊಂದು ಮನೆಯಲ್ಲಿ ಅಥವಾ ಪಾರ್ಕ್ ಗಳಲ್ಲಿ ಪೂರ್ವಬಾವಿ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ನಡೆಸುತ್ತಾರೆ. ಅದಕ್ಕೆ ತಮ್ಮ ತಮ್ಮ ಮಕ್ಕಳನ್ನು ಹೆತ್ತವರು ಕರೆದುಕೊಂಡು  ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. 

ಪ್ರತಿ ಬಾರಿಯೂ ಪ್ರತಿಯೊಬ್ಬರು ಸರದಿ ಪ್ರಕಾರ ತಮ್ಮ ಮನೆಯಲ್ಲಿ ತಯಾರಿಸಿದ ತಿನಿಸುಗಳನ್ನ ಮಕ್ಕಳಿಗಾಗಿ ತರುವುದು. ಅದೂ ಕೂಡ ದೊಡ್ಡವರ  ಬಾಯಿ ರುಚಿಗೆ ಸಿಗುವುದು. ಅದರ ಬಗ್ಗೆ ಪುನ: ಏನೇನೋ ಮಾತು! ಇದನ್ನೆಲ್ಲ ನೋಡುವುದಕ್ಕೆ  ಎಷ್ಟು ಸಂತೋಷವಾಗುತ್ತದೆ.  

ಇದನ್ನೆಲ್ಲ ನೋಡಿದಾಗ ನನಗೆ ಹಳ್ಳಿಯಲ್ಲಿ ನನ್ನ ಅಮ್ಮ ಏನಾದ್ರು   ಹೊಸ ರುಚಿ ಮಾಡಿದಾಗ ಅಕ್ಕ ಪಕ್ಕದ ಮನೆಯವರಿಗೆ ಕೊಡುತ್ತಿದ್ದ ದಿನಗಳು  ನೆನಪಾಗುತ್ತದೆ. 

ಈ ರೀತಿಯಲ್ಲಿ  ನಾವೆಲ್ಲಾ ಒಂದೇ ಎಂಬ ಬಾವನೆಯಲ್ಲಿ ಜರುಗಿದ ಮೊನ್ನೆಯ ಯುಗಾದಿ  ಕಾರ್ಯಕ್ರಮವು ೪೨ ಕ್ಕೂ ಹೆಚ್ಚು ಕನ್ನಡ ಕುಟುಂಬಗಳನ್ನು  ಒಂದು ಕಡೆ ಸೇರಿಸಿ, ಅರ್ಧ ದಿನ ಪೂರ್ತಿ ವಿವಿಧ ವಿಭಿನ್ನವಾಗಿ ಮಕ್ಕಳ , ಹಿರಿಯರ ಹಾಡು, ಕುಣಿತ, ಮಾತು, ಕತೆ, ವಿವಿಧ ಬಗೆ ಬಗೆಯ ಸಿಹಿ ತಿನಿಸುಗಳು ಮತ್ತು  ಭರ್ಜರಿ ಹೋಳಿಗೆ ಊಟ ಸವಿದದ್ದನ್ನು ನೋಡಿದರೆ ನಾವು ನಿಜವಾಗಿಯೂ ಅಮೆರಿಕದಲ್ಲಿ ಇದ್ದವೊ ಅಥವಾ ಕನ್ನಡದ ಬೆ೦ಗಳೂರಲ್ಲಿ ಇದ್ದೇವೊ ಎಂಬ ರೋಮಾಂಚನವಾಯಿತು. 



ಇಲ್ಲಿಯ ಸಂಘದ ಕಾರ್ಯಕರ್ತರ ಸಂಭ್ರಮ ಮನ ತುಂಬಿ ಬಂದಿತು. ಹಾಗೆಯೇ ಕನ್ನಡಿಗರ ಸವಿ ವಿನಯ ಸಿಹಿ ಹೃದಯದ ಲವಲವಿಕೆ  ಪುನ: ಪುನ: ಮೇರು ನಟ ರಾಜಣ್ಣ ನ ವ್ಯಕ್ತಿತ್ವವೇ ಕಣ್ಮು0ದೇ ಬಂದಿತು. 

ಈ ರೀತಿಯ ಕನ್ನಡ ಸಂಘಗಳು ಹೊರ ದೇಶದ ವಿವಿಧ ಬಾಗಗಳಲ್ಲಿ ಇವೆ ಮತ್ತು ಅವುಗಳು ಇದೆ  ರೀತಿಯಲ್ಲಿ ಕನ್ನಡ ಜನರನ್ನು ಒಟ್ಟಿಗೆ ಸೇರಿಸಿ ಕನ್ನಡ ವಾತಾವರಣವನ್ನು ಸೃಷ್ಟಿಸಿ ಕನ್ನಡ ಮನಗಳನ್ನು ತೃಪ್ತಿಗೊಳಿಸುವಲ್ಲಿ ಮತ್ತು ಕನ್ನಡತನವನ್ನು ಉಳಿಸಿ ಬೆಳಸಲು ಅವಿರತ ಕಾಣಿಕೆ ಕೊಡುತ್ತಿರುವುದು ಶ್ಲಾಘನೀಯ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ