ಗುರುವಾರ, ಜುಲೈ 25, 2024

ಹಾಟ್ ಏರ್ ಬಲೂನ್

 ಅಮೇರಿಕಾದ ಇಲ್ಲಿನ ನಗರಗಳಲ್ಲಿ ಬೇಸಿಗೆ ರಜೆಗೆ ವಿವಿಧ ರೀತಿಯ ಹತ್ತು ಹಲವಾರು ಕಾರ್ಯಕ್ರಮಗಳನ್ನು  ಆಯೋಜಿಸಿರುತ್ತಾರೆ. ಇಲ್ಲಿಯ ಬೇಸಿಗೆ 'ಸಮ್ಮರ್' ಸಂತೋಷ ನೋಡಿಯೇ  ಖುಷಿ ಪಡಬೇಕು. 

ಮಕ್ಕಳಿಗೆ ಭರಪೂರ ೨ ತಿಂಗಳು ರಜೆಯ ಮಜಾ. ಹೀಗಾಗಿ ಈ ದಿನಗಳನ್ನು ಇಲ್ಲಿಯ ಜನ ವಿಶೇಷವಾಗಿ ಉಪಯೋಸಗಿಸಿಕೊಳ್ಳುತ್ತಾರೆ. ಮಕ್ಕಳ ನೆಪದಲ್ಲಿ ಹೆತ್ತವರು ಹಿರಿಯರು ಅಲ್ಲಿ ಇಲ್ಲಿ ವಾರಾಂತ್ಯದ ಕಾರ್ಯಕ್ರಮಗಳಲ್ಲಿ ಪೂರ್ಣವಾಗಿ ಭಾಗವಯಿಸಿ  ಖುಷಿಪಡುತ್ತಾರೆ.  

ಈ ದಿನಗಳಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳು ಜನರಿಂದ ಜೀ  ಎಂದು ತುಂಬಿರುತ್ತವೆ. ಹೋಟೆಲ್, ವಿಮಾನಗಳ ದರ ಕೇಳುವುದೇ  ಬೇಡ ಅಷ್ಟು ದುಪ್ಪಟ್ಟು. 


ನಮ್ಮ ಭಾರತೀಯರು ಸಹ ತಮ್ಮ ತಮ್ಮ ಹೆತ್ತವರನ್ನು ಈ ರಜಾ  ದಿನಗಳಿಗಾಗಿ  ಭಾರತದಿಂದ ಕರೆಸಿಕೊಂಡು  ಅಮೇರಿಕವನ್ನು ಒಂದು ಸುತ್ತು ತೋರಿಸುತ್ತಾರೆ. 

ಮಕ್ಕಳಿಗೆ ಅಜ್ಜ ಅಜ್ಜಿ ಜೊತೆಯಲ್ಲಿ ತಿರುಗುವ, ಪ್ರವಾಸ ಹೋಗುವ  ಮಜವೇ ಬೇರೆ ಬಿಡಿ.

ಹೀಗೆ ಈ ವಾರಾಂತ್ಯದಲ್ಲಿ ನಾವು ಸಹ ನಮ್ಮ ಹೆತ್ತವರೊಡಗೂಡಿ ಇಲ್ಲಿಯ ಮಿಡಲ್ ಟೌನ್ ನ ಓಹಿಯೋ ಚಾಲೆಂಜ್ ಹಾಟ್ ಏರ್ ಬಲೂನ್ ಷೋ ಗೆ ಹೋಗಿದ್ದೆವು. 

ಅಲ್ಲಿ ಈ ದೊಡ್ಡ ದೊಡ್ಡ ರಂಗು ರಂಗಿನ ಬಣ್ಣದ ಬಲೂನ್ ಗಳನ್ನು ನೋಡಿ ದಿಗ್ಬ್ರಮೆಯಾಯಿತು.


ಇಷ್ಟು ದೊಡ್ಡ ದೊಡ್ಡ ಬಲೂನಗಳ ಹಾರಾಟವನ್ನು ಇದೆ ಮೊದಲು ನೋಡಿದ್ದು. 

ಹಾಟ್ ಏರ್ ಬಲೂನ್ ನನ್ನು ಹಗುರವಾದ ವಸ್ತುಗಳಿಂದ ತಯಾರಿಸಿರುತ್ತಾರೆ. ಈ ಬಲೂನ್ಗಳನ್ನು ನೈಲಾನ್ ಬಟ್ಟೆಯಲ್ಲಿ ಮಾಡಿರುತ್ತಾರೆ. ಕೆಳ ಬಾಗವನ್ನು ಬೆಂಕಿ ಪ್ರತಿರೋಧಕ ವಸ್ತುಗಳಿಂದ ತಯಾರಿಸುತ್ತಾರೆ.   ಇದು ಮುಖ್ಯವಾಗಿ ಮೂರೂ ಬಾಗಗಳಿಂದ ಕೊಡಿರುತ್ತದೆ. ಬಲೂನ್ ಹೊರ ಬಾಗ( ಬಲೂನ್), ಬರ್ನರ್ ಮತ್ತು ಪ್ರಯಾಣಿಕರು ಕುರುವ ಪುಟ್ಟಿ. 

ಚಿಕ್ಕ ದೊಡ್ಡ ಹೀಗೆ ವಿವಿಧ ಅಳತೆಯ ಬಲೂನ್ ಗಳು ಇರುತ್ತೆ. ನಾವು ನೋಡಿದ ಇಲ್ಲಿಯ ಒಂದೊಂದು ಬಲೂನ್ ಗಳು ದೊಡ್ಡ ಮನೆಯಷ್ಟು ದೊಡ್ಡದಾಗಿ ಮತ್ತು ಅತ್ಯಂತ  ಎತ್ತರ ಇದ್ದವು. ಸುಮಾರು ೨೦-೨೫ ವಿವಿಧ ಬಗೆಯ ಬಣ್ಣದ, ರೂಪದ ಬಲೂನ್ ಗಳನ್ನೂ ನೋಡಿ ಪ್ರತಿಯೊಬ್ಬರೂ ಮೂಕವಿಸ್ಮಿತಾರದರು. 



ಅವುಗಳ ಹಾರಾಟವು ಅಷ್ಟೇ ಸುಂದರವಾಗಿತ್ತು. ಸುಂದರವಾದ ಸೂರ್ಯ ಮುಳುಗುವ  ಸಮಯದ ಆ ಕೆಂಧೂಳ ಆಕಾಶಕ್ಕೆ ಬಣ್ಣ ಬಣ್ಣ ದ ಪುಟ್ಟ ಪುಟ್ಟ ಬಣ್ಣದ ದೀಪಗಳನ್ನು ಜೋಡಿಸಿಟ್ಟಂತೆ ಕಣ್ಣಿಗೆ ಕಾಣುತ್ತಿತ್ತು. 

ಈ ಪ್ರಪಂಚದಲ್ಲಿ ಮೊದಲು ಈ  ಬಿಸಿ ಗಾಳಿ  ಬಲೂನ್ ನ್ನು ತಯಾರಿಸಿ ಹಾರಿಸಿದ್ದು ಫ್ರಾನ್ಸ್ ನಲ್ಲಿ ( 1783). 

ಪೈಲಟ್ ನ ಕೈ ಛಳಕ ಇಲ್ಲಿ ಮುಖ್ಯವಾಗುತ್ತದೆ. ಅವನು ಬಲೂನ್ ಹೇಗೆ  ಮೇಲೆ,  ಹೇಗೆ ಕೆಳಗೆ ಬರಬೇಕು ಎಂಬುದನ್ನು, ಬಿಸಿ ಗಾಳಿಯನ್ನು ಯಾವಾಗ ಹೇಗೆ ಬಲೂನ್ ಗೆ ಹರಿಸಿ ಭೂಮಿಯ ಗುರುತ್ವಾಕರ್ಷಣೆಗೆ ವಿರುದ್ಧವಾಗಿ  ಹಾರಿವುದು, ದಿಕ್ಕುಗಳನ್ನೂ ಹೇಗೆ ಬದಲಿಸಬೇಕು ಎಂಬ  ಅವನ ಜಾಣ್ಮೆಗೆ ಜೈ. 

ಇದಂತೂ ವಿಸ್ಮಯವೇ ಸರಿ. ಅಲ್ಲಿ  ಸೇರಿದ್ದ ಸಾವಿರಾರು ಜನರು ಹಾಟ್  ಏರ್ ಬಲೂನ್ ಹಾರಾಟವನ್ನು ಅಚ್ಚರಿಯ ರೀತಿಯಲ್ಲಿ ಕಣ್ಣು ತುಂಬಿಕೊಳ್ಳುತ್ತಿದ್ದರು. ಮಕ್ಕಳಂತೂ ನಾವು ಯಾವಾಗ ಹೀಗೆ ಬಲೂನ್ ನಲ್ಲಿ ಮೇಲೆ ಹಾರುವುದು ಎಂದು ಯೋಸಚಿಸುತ್ತಿದ್ದರೋ ಏನೋ ! 

ಹಾರಾಟ ಮುಗಿದ ಮೇಲೆ ಎಲ್ಲಾ ಬಲೂನ್ ಗಳನ್ನು ಒಂದು ಬದಿಗೆ ಸಾಲಾಗಿ ನಿಲ್ಲಿಸಿದಾಗ ಪ್ರತಿಯೊಬ್ಬರೂ ಅವುಗಳ ಫೋಟೋ ಕ್ಲಿಕ್ಕಿಸುವುದರಲ್ಲಿ ಬ್ಯುಸಿಯೋ ಬ್ಯುಸಿ. ಯಾರೋಬ್ಬರಿಗೂ ಸಮಾದಾನವೇ ಇಲ್ಲ. ತಮ್ಮ ತಮ್ಮ ಮಕ್ಕಳನ್ನು  ಬಲೂನ್ ಮುಂದೆ ನಿಲ್ಲಿಸಿ ಬೆಸ್ಟ್ ಫೋಟೋ ತೆಗೆಯುವ ತವಕ. ಮಕ್ಕಳಿಗೆ ಇದು ಯಾವುದು ಬೇಕಾಗದೆ ಬಲೂನ್ ಕಣ್ತುಂಬಿಕೊಳ್ಳುವುದು ಮಾತ್ರವೇ ಸಮಾಧಾನ.  

ಹೀಗೆ ಆ ಸಂಜೆ ಪ್ರತಿಯೊಬ್ಬರಿಗು ರಂಗು ರಂಗಿನ ಬೇರೊಂದು ಲೋಕದಲ್ಲಿ ತೇಲಾಡಿದ ಅನುಭವ. 

ನಮ್ಮ ಹೆತ್ತವರು ಸಹ  ಈ ರೀತಿಯ  ಅತಿ ದೊಡ್ಡ ಬಲೂನ್ ಆಕಾಶದಲ್ಲಿ ಹಾರುವುದನ್ನು ಇದೆ ಮೊದಲು ಕಂಡಿದ್ದು ಅನಿಸುತ್ತದೆ. ಅವರು ಸಹ ಮನುಷ್ಯನ ಈ ಒಂದು ಚಮತ್ಕಾರನ್ನು ತೀರಾ ಹತ್ತಿರದಿಂದ ಕಂಡು ಖುಷಿಪಟ್ಟರು. 


ಅಮೇರಿಕದಲ್ಲಿ ಈ ರೀತಿಯ ಪ್ರಸಿದ್ಧ ಬಿಸಿ ಗಾಳಿ   ಬಲೂನ್ ಷೋ ಗಳನ್ನು ವಿವಿಧ ಪ್ರದೇಶಗಲ್ಲಿ ಪ್ರತಿ ವರುಷ ಬೇಸಿಗೆಯಲ್ಲಿ ಏರ್ಪಡಿಸುತ್ತಾರೆ. ಅವುಗಳೆಂದರೆ ನ್ಯೂ ಮೆಕ್ಸಿಕೋ, ನೆವಾಡಾ , ಟೆಕ್ಸಸ್, ನ್ಯೂರ್ಯಾಕ್  ನಗರಗಳ ಅತಿ ದೊಡ್ಡ ಬಲೂನ್ ಷೋ. 

ಭಾರತದಲ್ಲೂ ಪ್ರತಿ ವರುಷ ಚೆನ್ನೈ , ಫುಲಾಚಿ, ಕಾಶಿ, ಜೈಪುರ ಗೋವಾ  ಮುಂತಾದ ಬಾಗಗಳಲ್ಲಿ ದೊಡ್ಡ ರೀತಿಯಲ್ಲಿ ಈ  ಬಿಸಿ ಗಾಳಿ ಬಲೂನ್ ಹಾರಾಟಗಳನ್ನು ಅಯೋಜಿಸಿ ನಡೆಸುತ್ತಾರೆ. 

ಹಾಗೆಯೇ ಅಂದು ಸಂಜೆಯಾದ ಮೇಲೆ ನಡೆದ ವಿವಿಧ ಕಾರ್ಯಕ್ರಮಗಳು ತುಂಬಾ ಚೆನ್ನಾಗಿದ್ದವು . ಅದರಲ್ಲಿ ಮುಖ್ಯವಾದದ್ದು ಪ್ಯಾರಾಚೂಟ್ ನಲ್ಲಿ ಹಾರುವವರು   ಆಕಾಶದಲ್ಲಿ  ಪಟಾಕಿಗಳನ್ನು ಸಿಡಿಸಿದ್ದು. ನಾವುಗಳು ಭೂಮಿಯ ಮೇಲೆ ಪಟಾಕಿಗಳನ್ನು ಆಕಾಶಕ್ಕೆ ಆರಿಸುವದನ್ನ ಮಾತ್ರ   ನೋಡಿದ್ದೇವು. ಆದರೆ ಇವರುಗಳು ೪-೫ ಪ್ಯಾರಾಚೂಟ್ ನಲ್ಲಿ  ಹಾರುತ್ತ ಹಾರುತ್ತ ಭೂಮಿಗೆ ಇಳಿಯುವ ಸಮಯದಲ್ಲಿ  ತಮ್ಮಲ್ಲಿರುವ ವಿವಿಧ ಬಗೆಯ ಬಣ್ಣ ಬಣ್ಣದ ಪಟಾಕಿಗಳನ್ನು ಹಾರಿಸುತ್ತ ಹಾರಿಸುತ್ತ ಬೆಳಕಿನ ಚಿತ್ತಾರವನ್ನು ಆಕಾಶದಲ್ಲಿ ರಚಿಸುದ್ದು 'ದ್ ಬೆಸ್ಟ್ ಷೋ' ಅನಿಸಿತು. ಅದು ಎಷ್ಟು ಅಪಾಯವೆಂದರೆ ಆದರೂ ತಮ್ಮ ಕೈ ಛಳಕ ಮತ್ತು ಪರಿಶ್ರಮದ ಕಲಿಕೆಯಿಂದ ಅದ್ಭುತವಾದದ್ದನ್ನು ಭೂಮಿಯಿಂದ 10 - 14 ಸಾವಿರ ಅಡಿ ಎತ್ತರದಲ್ಲಿ ಮಾಡಿ ತೋರಿಸಿದರು. 


ಕೊನೆಗೆ ಡ್ರೋನ್ ಷೋ, ಪಟಾಕಿಗಳ ರಂಗು ರಂಗು ಬಿರುಸು ಕಿಡಿಗಳಿಂದ ಆಕಾಶದಲ್ಲಿ ಅದ್ಭುತವಾದ  ವಿವಿಧ ಬಗೆಯ  ಚಿತ್ತಾರವನ್ನು ರಚಿಸುತ್ತ ಜನಮನವನ್ನ ಆಯೋಜಕರು ಗೆದ್ದರು. 

ನೇರದ್ದಿದ್ದ ಪ್ರತಿಯೊಬ್ಬರೂ ಹರ್ಷದೊಗಾರ ಮಾಡಿ ತಮ್ಮ ವಂದನೆಗಳನ್ನು ಚಪ್ಪಾಳೆಯ ಮೂಲಕ ಪ್ರತಿಯೊಬ್ಬ ಕಾರ್ಯಕ್ರಮದ ಕಾರ್ಯಕರ್ತರಿಗೆ ಅರ್ಪಿಸಿದರು. 


ಇದಕ್ಕೂ  ಮೊದಲು ಇದ್ದ ವಿವಿಧ ಬಗೆಯ ಹಳೆ ಹೊಸ ಕಾರುಗಳ ಪ್ರದರ್ಶನ ಪ್ರತಿಯೊಬ್ಬರ ಮನಸ್ಸನ್ನ ಆಕರ್ಷಿಸಿತು. 

ಎಲ್ಲಾರಿಗೂ  ತಿಳಿದ ರೀತಿಯಲ್ಲಿ ತಿನ್ನುವುದಕ್ಕೆ ಕೊಳ್ಳುವುದಕ್ಕೂ  ಏನು ಕಡಿಮೆ ಇಲ್ಲದ ರೀತಿಯಲ್ಲಿ ನೂರಾರು ಚಿಕ್ಕ ಚಿಕ್ಕ ಫುಡ್ ಮತ್ತು  ಪನ್ ಸ್ಟಾಲುಗಳು  ಪ್ರತಿಯೋಬ್ಬರ ನಿರೀಕ್ಷೆಯನ್ನು ಸುಳ್ಳು ಮಾಡದ  ರೀತಿಯಲ್ಲಿ ಭರ್ತಿ ತುಂಬಿ ತುಳುಕುತ್ತಿದ್ದವು. ಮಕ್ಕಳು ಚಿಕ್ಕ ಚಿಕ್ಕ ಆಟಗಳನ್ನು ಆಡುತ್ತಾ ನಲಿದಾಡಿದರು.

ಅಲ್ಲಿ ಸೇರಿದ್ದ ಜನ ಸಮೂಹ ಕಂಡು ನಮ್ಮ ಹೆತ್ತವರು, ನಮ್ಮ ಭಾರತದಂತೆ ಎಲ್ಲಾರು ಒಮ್ಮೆಲೇ ಮನೆಗಳಿಗೆ  ತೆರೆಳಲು ಕಾರು ತೆಗೆ್ದರೇ ರಸ್ತೆ ಪೂರ್ತಿ ಟ್ರಾಫಿಕ್ ಜಾಮ್ ಎಂದು ಅನುಮಾನ ಪಟ್ಟಿದ್ದೆ ಬಂತು. ಆದರೆ ಇಲ್ಲಿನ ಅಚ್ಚುಕಟ್ಟು ಆಯೋಜನೆ ಒಂದು ನಿಮಿಷವೂ ಎಲ್ಲಿಯೂ ಟ್ರಾಫಿಕ್ ನಲ್ಲಿ ಸಿಲುಕಿಕೊಳ್ಳದ ರೀತಿಯಲ್ಲಿ ನಮ್ಮ ನಮ್ಮ ಕಾರೂಗಳನ್ನು ಅಲ್ಲಿನ  ಪಾರ್ಕ ಜಾಗದಿಂದ ಮುಖ್ಯ ರಸ್ತೆಗೆ ತಂದಾಗ ಹೆತ್ತವರು ವಿಸ್ಮಯದ ಕಣ್ಣು ಬಿಟ್ಟು ನನ್ನನೊಮ್ಮೆ ನೋಡಿದರು! 

ಬಹಳ ದಿನವಾದ ಮೇಲೆ ನಾವೆಲ್ಲರೂ ಒಂದು ಅತ್ಯತ್ತಮವಾದ ಕಾರ್ಯಕ್ರಮವನ್ನು ನೋಡಿದೆವು ಎಂಬ ತೃಪ್ತಿಯಾಯಿತು .  
 

ಸೋಮವಾರ, ಏಪ್ರಿಲ್ 22, 2024

ದೂರದ ದೇಶದಲ್ಲಿ ಕನ್ನಡ

ಭಾಷೆ ಎಂಬುದು ಎರಡು ಮನಸ್ಸುಗಳನ್ನು ಒಂದು ಕಡೆ ಕಟ್ಟಿಹಾಕುತ್ತದೆ. ಹಾಗೆಯೆ ನಮ್ಮ ಕನ್ನಡ ಭಾಷೆ ಈ ಅಮೇರಿಕಾದ ಡೇಟನ್ ನಗರದಲ್ಲಿ ವಿವಿಧ ಕನ್ನಡ ಕುಟುಂಬಗಳನ್ನು ಒಟ್ಟಿಗೆ ಒಂದು ಜಾಗದಲ್ಲಿ  ಸೇರುವಂತೆ ಮಾಡಿದೆ ಅಂದರೆ ಅತಿಶಯೋಕ್ತಿಯಲ್ಲ.

ಡೇಟನ್ ಸಿರಿಗನ್ನಡ ಸ್ಥಾಪಿತವಾಗಿ ಇಲ್ಲಿಯ ಎಲ್ಲಾ ಅಮೇರಿಕ ಕನ್ನಡಿಗರನ್ನು ಒಂದೇ ಸೂರಿನಲ್ಲಿ ತಂದಿದೆ. 



ಈ ಸಂಘವು ವರುಶದಲ್ಲಿ ಹಲವಾರು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿ ಕೊಂಡು ವರ್ಷವಿಡಿ ಕನ್ನಡಿಗರನ್ನು ಒಟ್ಟಿಗೆ ಪರಸ್ಪರ ಭೇಟಿ ಮಾಡಲು ಅನುವು ಮಾಡಿಕೊಟ್ಟಿದೆ ಅಂದ್ರೆ ತಪ್ಪಿಲ್ಲ. 

ಇಲ್ಲ ಅಂದ್ರೆ ಗೊತ್ತಲ್ಲ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸ ಕಾರ್ಯಗಳ ಮೊಲಕ ಈ ಬ್ಯುಸಿ ಲೈಫ್ ನಲ್ಲಿ ಮುಳುಗೇಳುತ್ತಿರುತ್ತಾರೆ. ಈ ರೀತಿಯ ಯಾ0ತ್ರಿಕ ಬದುಕಿನಿಂದ ಪ್ರತಿಯೊಬ್ಬ ಕನ್ನಡಿಗರನ್ನು ಹೊರತರುವಲ್ಲಿ ಈ ಕನ್ನಡ ಕೂಟವು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. 

ರಾಜ್ಯೋತ್ಸವ, ಯುಗಾದಿ, ಸ0ಕ್ರಾಂತಿ ಹೀಗೆ ಮುಖ್ಯ ಹಬ್ಬಗಳನ್ನು ಇಲ್ಲಿಯ  ಕನ್ನಡಿಗರೆಲ್ಲ ಒಟ್ಟಿಗೆ ಸೇರಿ ಒಂದೆಡೆ ಕಲೆತು ಬೆರೆತು ದೊಡ್ಡವರಿಂದ ಇಡಿದು ಚಿಕ್ಕ ಮಕ್ಕಳವರೆಗೆ ಕುಣಿದು, ಹಾಡಿ, ನಲಿದು, ತಾವೇ ತಮ್ಮ ಕೈಯಾರೆ ತಯಾರಿಸಿದ ತಿನಿಸುಗಳನ್ನು ಸವಿಯುತ್ತ ಕನ್ನಡದ ನೆಲದ ನೆನಪನ್ನು ಪುನರ್ ಮೆಲಕು  ಹಾಕಿಕೊಂಡು ಆಚರಿಸುತ್ತಾರೆ. 

ಇಲ್ಲಿಯೇ ಹುಟ್ಟಿ  ಬೆಳೆದ  ಮಕ್ಕಳಿಗೆ  ಕನ್ನಡದ ಮಣ್ಣಿನ ವಾಸನೆಯನ್ನು ಗ್ರಹಿಸುವ ಅವಕಾಶ. ಹೀಗೆ ನಮ್ಮ ರಾಜ್ಯದಿಂದ ದೊರವಿದ್ದರು ನಮ್ಮ ಮಾತೃ ಭಾಷೆಯಲ್ಲಿ  ಅದು  ಈ ಇಂಗ್ಲಿಷ್ ಮಯ ವಾತಾವರಣದಲ್ಲಿ ಎಲ್ಲರನ್ನು ಅತ್ಮೀಯವಾಗಿ ಮಾತನಾಡಿಸುವುದು ಸಂತೋಷವಾಗುತ್ತದೆ.  

ದೂರದ ದೇಶದಲ್ಲಿದ್ದಾಗ ಹತ್ತಿರವಿರುವರೇ ನೆಂಟರಲ್ಲವೇ? 

ಹೌದು ಆ  ಮೂಲಕ  ನಮ್ಮ ಈ  ಸಂಘದ ಕಾರ್ಯಕರ್ತರು  ಯಾವುದೇ ಒಂದು ಕಾರ್ಯಕ್ರಮ ಶುರುವಾಗುವ ಒಂದು ತಿಂಗಳು ಮುನ್ನ ಒಂದೊಂದು ಮನೆಯಲ್ಲಿ ಅಥವಾ ಪಾರ್ಕ್ ಗಳಲ್ಲಿ ಪೂರ್ವಬಾವಿ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ನಡೆಸುತ್ತಾರೆ. ಅದಕ್ಕೆ ತಮ್ಮ ತಮ್ಮ ಮಕ್ಕಳನ್ನು ಹೆತ್ತವರು ಕರೆದುಕೊಂಡು  ಬರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. 

ಪ್ರತಿ ಬಾರಿಯೂ ಪ್ರತಿಯೊಬ್ಬರು ಸರದಿ ಪ್ರಕಾರ ತಮ್ಮ ಮನೆಯಲ್ಲಿ ತಯಾರಿಸಿದ ತಿನಿಸುಗಳನ್ನ ಮಕ್ಕಳಿಗಾಗಿ ತರುವುದು. ಅದೂ ಕೂಡ ದೊಡ್ಡವರ  ಬಾಯಿ ರುಚಿಗೆ ಸಿಗುವುದು. ಅದರ ಬಗ್ಗೆ ಪುನ: ಏನೇನೋ ಮಾತು! ಇದನ್ನೆಲ್ಲ ನೋಡುವುದಕ್ಕೆ  ಎಷ್ಟು ಸಂತೋಷವಾಗುತ್ತದೆ.  

ಇದನ್ನೆಲ್ಲ ನೋಡಿದಾಗ ನನಗೆ ಹಳ್ಳಿಯಲ್ಲಿ ನನ್ನ ಅಮ್ಮ ಏನಾದ್ರು   ಹೊಸ ರುಚಿ ಮಾಡಿದಾಗ ಅಕ್ಕ ಪಕ್ಕದ ಮನೆಯವರಿಗೆ ಕೊಡುತ್ತಿದ್ದ ದಿನಗಳು  ನೆನಪಾಗುತ್ತದೆ. 

ಈ ರೀತಿಯಲ್ಲಿ  ನಾವೆಲ್ಲಾ ಒಂದೇ ಎಂಬ ಬಾವನೆಯಲ್ಲಿ ಜರುಗಿದ ಮೊನ್ನೆಯ ಯುಗಾದಿ  ಕಾರ್ಯಕ್ರಮವು ೪೨ ಕ್ಕೂ ಹೆಚ್ಚು ಕನ್ನಡ ಕುಟುಂಬಗಳನ್ನು  ಒಂದು ಕಡೆ ಸೇರಿಸಿ, ಅರ್ಧ ದಿನ ಪೂರ್ತಿ ವಿವಿಧ ವಿಭಿನ್ನವಾಗಿ ಮಕ್ಕಳ , ಹಿರಿಯರ ಹಾಡು, ಕುಣಿತ, ಮಾತು, ಕತೆ, ವಿವಿಧ ಬಗೆ ಬಗೆಯ ಸಿಹಿ ತಿನಿಸುಗಳು ಮತ್ತು  ಭರ್ಜರಿ ಹೋಳಿಗೆ ಊಟ ಸವಿದದ್ದನ್ನು ನೋಡಿದರೆ ನಾವು ನಿಜವಾಗಿಯೂ ಅಮೆರಿಕದಲ್ಲಿ ಇದ್ದವೊ ಅಥವಾ ಕನ್ನಡದ ಬೆ೦ಗಳೂರಲ್ಲಿ ಇದ್ದೇವೊ ಎಂಬ ರೋಮಾಂಚನವಾಯಿತು. 



ಇಲ್ಲಿಯ ಸಂಘದ ಕಾರ್ಯಕರ್ತರ ಸಂಭ್ರಮ ಮನ ತುಂಬಿ ಬಂದಿತು. ಹಾಗೆಯೇ ಕನ್ನಡಿಗರ ಸವಿ ವಿನಯ ಸಿಹಿ ಹೃದಯದ ಲವಲವಿಕೆ  ಪುನ: ಪುನ: ಮೇರು ನಟ ರಾಜಣ್ಣ ನ ವ್ಯಕ್ತಿತ್ವವೇ ಕಣ್ಮು0ದೇ ಬಂದಿತು. 

ಈ ರೀತಿಯ ಕನ್ನಡ ಸಂಘಗಳು ಹೊರ ದೇಶದ ವಿವಿಧ ಬಾಗಗಳಲ್ಲಿ ಇವೆ ಮತ್ತು ಅವುಗಳು ಇದೆ  ರೀತಿಯಲ್ಲಿ ಕನ್ನಡ ಜನರನ್ನು ಒಟ್ಟಿಗೆ ಸೇರಿಸಿ ಕನ್ನಡ ವಾತಾವರಣವನ್ನು ಸೃಷ್ಟಿಸಿ ಕನ್ನಡ ಮನಗಳನ್ನು ತೃಪ್ತಿಗೊಳಿಸುವಲ್ಲಿ ಮತ್ತು ಕನ್ನಡತನವನ್ನು ಉಳಿಸಿ ಬೆಳಸಲು ಅವಿರತ ಕಾಣಿಕೆ ಕೊಡುತ್ತಿರುವುದು ಶ್ಲಾಘನೀಯ!!

ಸೋಮವಾರ, ಫೆಬ್ರವರಿ 12, 2024

ನಿಮ್ಮ ಬಗ್ಗೆ ಹೇಳಿ

ಯಾರಾದಾರು ನಿಮ್ಮ ಬಗ್ಗೆ ಹೇಳಿ ಅಂದರೆ, ಏನು ಹೇಳುವುದು ಎಂದು ಚಿಂತೆ ಮಾಡಬೇಕಾಗುತ್ತೆ.

 ಅವರಿಗೆ ನಾವು ಹೇಳುವುದು ಸರಿ ಅನಿಸುತ್ತಾ ಅಥವಾ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ನಗು ಬರುತ್ತಾ! 

ಆದರೆ ಸಂದರ್ಶನದ ಸಮಯದಲ್ಲಿ ಹೇಳುವದು ಅನಿವಾರ್ಯ ಮತ್ತು ಕೇಳುವುದು ಕೇಳಿದರವರಿಗೂ ಅನಿವಾರ್ಯ! 

ಹಾಗೆಯೇ ಅವರ ಬಗ್ಗೆ ನಮಗೆ ಗೊತ್ತಾಗುವುದು. 

ನಾನು ಇಲ್ಲಿ ಹುಟ್ಟಿ, ಇಲ್ಲಿ ಓದಿ,  ಇಲ್ಲಿ ಈಗ  ಈ ಕೆಲಸ ಮಾಡುತ್ತಿದ್ದೇನೆ. 

ಕೇಳಿದವರಿಗೆ ಒಹ್ ಹೀಗೆಲ್ಲಾ  ಜೀವನದಲ್ಲಿ ಈ ಹುಡುಗ ಬಸವಾಳಿದಿದ್ದಾನೆ ಇಲ್ಲಿವರಿಗೆ ಎಂದು ಕೇಳಿಸಿಕೊಂಡವರು ಒಂದಿಷ್ಟು ಕನಿಕರ ಪಡಬಡಹುದು. 

ಹಾಗೆಯೇ ಒಹ್ ನನಗಿಂತ ಹೀಗೆ ಹೀಗೆ ಏನೇನೋ ಮಾಡಿದ್ದಾನೇ ಎಂದು ಅಚ್ಚರಿ ಪಡಬಹುದು.

 ಆದರೂ ಒಮ್ಮೊಮ್ಮೆ ನಮ್ಮ ಬಗ್ಗೆ ನಾವೇ ಏನ್ ಕೊಚ್ಚಿಕೊಳ್ಳುವುದು ಅನಿಸುತ್ತದೆ. 

 ಅದರೂ ಇಂದಿನ ದಿನಮಾನದಲ್ಲಿ ನಮ್ಮ ಮಾರ್ಕೆಟಿಂಗ್ ನಾವೇ ಮಾಡಬೇಕು. ಅದಕ್ಕೆ ಹೆಚ್ಚು ಬೆಲೆ.

 ಎಲೆ ಮರೆಯ ಕಾಯಿಯಂತೆ ಇದ್ದರೆ ಯಾರೊಬ್ಬರೂ ಮೂಸಿ ಸಹ ನೋಡುವುದಿಲ್ಲ. 

ಎಲ್ಲಾ ಪ್ರಚಾರ ದಿನದಲ್ಲಿ ಬದುಕುವ ಬವಣೆ. 

ಎಲ್ಲಿಯಾದರೂ ಕೆಲಸ ಬೇಕೆಂದರೆ ನಿನ್ನ ರೆಸ್ಯೋಮ್ ಚೆನ್ನಾಗಿರಬೇಕು. ಇಲ್ಲ ಅಂದರೆ ನಿಮಗೆ ಒಂದು ಕಾಲು ಸಹ ಬರುವುದಿಲ್ಲ. ಕಾಲ್ ಇಲ್ಲ ಅಂದ್ರೆ ಇಂಟರ್ವ್ಯೂ ಇಲ್ಲ. ಅದು ಇಲ್ಲ ಅಂದರೆ ಕೆಲಸನು ಇಲ್ಲ.

ಇಂದು A I  ಜಮಾನಾ! ಆರ್ಟಿಪಿಸಿಯಲ್ ಇಂಟಲಿಜೆನ್ಸ್ ಮೊಲಕ ಮನುಷ್ಯರು ರಚಿಸಿದ ಕೃತಿಗಳನ್ನು ಪರೀಕ್ಷಿಸುತ್ತಾರೆ. ಅದಕ್ಕೇನು ಗೊತ್ತು  ನಮ್ಮ ಕಷ್ಟ ಸುಖ ? ಆದರೆ ಮನುಷ್ಯರನ್ನ ನಂಬುವುದಕ್ಕಿಂತ ಮಿಷಿನ್ ನಂಬುವ ದಿನಗಳಲ್ಲಿ ನಾವು ಇದ್ದೇವೆ.  ಮನುಷ್ಯನೇ ಕಂಡು ಹಿಡಿದ ಯಂತ್ರ ಮನುಷ್ಯನ್ನನ್ನೇ ಪರೀಕ್ಷಿಸುತ್ತದೆ. ಇಲ್ಲಿಗೆ ಬಂದು ನಿಂತಿದ್ದೇವೆ. 

ಇಲ್ಲಿಗೆ ಬಂದಿದೆ ನಮ್ಮ ಜೀವನ. ಬರಿ ಓದಿದರೆ ಏನು ಸಾಲದು. 

ಓದು ಮುಗಿದ ಮೇಲೆಯೇ ಜೀವನ ಅಂದರೆ ಏನು ಎಂದು ತಿಳಿವಿಯುವುದು. 

ಇನ್ನು ಹೆಚ್ಚು ಬದುಕು ಅಂದರೆ ಏನು ಎಂದು ತಿಳಿಯಲು ಬೆಂಗಳೂರಿಗೆ ಬಂದು ನಾಲ್ಕು ಕಡೆ ತಿರುಗಾಡಿ ಕೆಲಸ ಹುಡುಕಿದಾಗ ನಮ್ಮ ತಿಳುವಳಿಕೆ, ನಾವು ಏನು ಓದಿದೀವಿ ಎನ್ನುವುದು ಗೊತ್ತಾಗುತ್ತೆ. 

ಬರಿ ಓದಿನ ಅಂಕಗಳು ಏನು ಉಪಯೋಗವಿಲ್ಲ ಎನ್ನುವುದು ಒಂದೇ ದಿನದಲ್ಲಿ ತಿಳಿಯುತ್ತದೆ. 

ಮತ್ತೆ ನಮ್ಮನ್ನು ನಾವು ಹೇಗೆ ಪ್ರೇಸಂಟ ಮಾಡಿಕೊಳ್ಳಬೇಕು ಎನ್ನುವುದನ್ನ ಕಲಿಯಲು ಪುನಃ ಯಾವುದಾರೂ ಕ್ರ್ಯಾಶ್ ಕೋರ್ಸಗೆ ಸೇರಬೇಕು. ಅಲ್ಲಿ ಅದು ಇದು ಬೇರೆ ಭಾಷೆಯಲ್ಲಿ ಪುನಃ ನುರಿಯಬೇಕು.

ನಂಗೆ ರವಿಬೆಳೆಗೆರೆ ಕೊಡುತ್ತಿದ್ದ ವರುಷದ ಅಫಿಡವಿಟ್ ಅಥವಾ ಅವರು ಅವರ ಪುಸ್ತಕಗಳಲ್ಲಿ ತಮ್ಮ ಬಗ್ಗೆ ಹೇಳಿಕೊಳ್ಳುತ್ತಿದ್ದ  ಒಂದು ಪುಟದ ಸಾಲುಗಳು ತುಂಬಾ ಚೆನ್ನಾಗೇ ಕಾಣಿಸುತ್ತಿತ್ತು. ಹುಟ್ಟಿನಿಂದ ಪ್ರಾರಂಬಿಸಿ ಹೆಂಡತಿ,  ಮಕ್ಕಳು, ಮನೆ, ದುಡಿಮೆ, ಕಾರು, ಬಟ್ಟೆ ,ಪುಸ್ತಕಗಳಿಂದ ಹಿಡಿದು ಇತ್ತೀಚೆಗೆ ಕೊಂಡ ಕೆಜಿ ಬಂಗಾರ ಬೆಳ್ಳಿಯವರಿಗೆ  ಏನೆಲ್ಲಾ ಹೆಚ್ಚಾಗಿದೆ ಮತ್ತು ಕಡಿಮೆಯಾಗಿದೆ ಎಂಬುದನ್ನು  ಹೇಳಿಕೊಳ್ಳುತ್ತಿದ್ದರು. 

ಬದುಕಿದರೇ ಹೀಗ್ ದಿಲ್ ದಾರ್ ಮನುಷ್ಯನಾಗಿ ಬಾಳಬೇಕು ಎಂಬಂತೆ ಸಾಮಾನ್ಯ ಮನುಷ್ಯನಿಗೂ  ಉತ್ತೇಜನ ಕೊಡುವ  ರೀತಿಯ ಬರಹವಾಗಿತ್ತು ಅದು ಅವರ ಬಗ್ಗೆ ಅವರು ಹೇಳಿದ್ದ ಅಫಿಡವಿಟ್! 

 ನನಗೆ ಒಮ್ಮೊಮ್ಮೆ ಅನಿಸುತ್ತದೆ. ಅದು ಯಾಕೆ ಕಾಲೇಜು, ಶಾಲೆಗಳಲ್ಲಿ ಪಾಠಗಳ ಜೊತೆಯಲ್ಲಿ ಈ ಪಾಠಗಳನ್ನು ಯಾರೊಬ್ಬ ಗುರುವು  ನಮಗೆ ಹೇಳಿಕೊಡವುದಿಲ್ಲ. 

ಹಾಗೆಯೇ ಹಳ್ಳಿ ಮೊಲೆಯಲ್ಲಿ ಓದುವ ಬದಲು ಬೆಂಗಳೂರಲ್ಲಿ ಓದಿದವರ ಲಕ್ಕು ಚೆನ್ನ ಅನಿಸುತ್ತದೆ. 

ಬೆಂಗಳೂರಲ್ಲಿ ಇದ್ದಾರೆ ಅರ್ಧ ಲೈಫ್ ಪಾಠಗಳನ್ನು ಬೆಂಗಳೂರು ಗಾಳಿ ನಮಗೆ ತಿಳಿಸಿಕೊಟ್ಟುಬಿಡುತ್ತದೆ.

ಹೇಗೆ ಬದುಕಬೇಕು. ಯಾರನ್ನು ಹೇಗೆ ನಂಬಬೇಕು, ಹೀಗೆ ಜೀವನದ ಸತ್ಯಗಳನ್ನು ಯಾವ ವಿಶ್ವವಿದ್ಯಾನಿಲಯಗಳು ಹೇಳಿಕೊಡದದ್ದನ್ನು ಬೆಂಗಳೂರು ಒಂದು ದಿನದಲ್ಲಿ ಸುಲಭವಾಗಿ ಕಲಿಸಿಬಿಡುತ್ತದೆ. 

ಹಣಕ್ಕೆ ಇರುವ ಬೆಲೇ ಏನು ಎನ್ನುವುದನ್ನು ಕಾಲಿ ಜೇಬಿನಿಂದ್ ಒಂದು ಗಂಟೆ  ಈ ಮಹಾನಗರದ ದಾರಿಯಲ್ಲಿ ಸಾಗಿದರೆ ತಿಳಿಯುತ್ತದೆ. 

ಹೀಗೆ ಬದುಕು ನಾವು ನಮ್ಮ ಪಾಡಿಗೆ ಇದ್ದಾರೆ ನಾವು ಎಲ್ಲಿ ಇರುತ್ತೇವೊ ಅಲ್ಲಿಯೇ ಇರಬೇಕಾಗುತ್ತದೆ.

ಯಾರು ತನ್ನನ್ನ ತಾನು ಪ್ರೀತಿಸಿ ನಂಬಿ ತನ್ನ(ನ್ನು ತಾನು) ಚೆನ್ನಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವವನು ಅವನು ಈ ಪ್ರಪಂಚದಲ್ಲಿ ಗೆಲ್ಲುವನು.  

ಇನ್ನು ಯಾಕೆ ತಡ ನಿಮ್ಮ ಬಗ್ಗೆ ನೀವೇ ಹೇಳಿ!