ಬುಧವಾರ, ನವೆಂಬರ್ 23, 2016

ಇದು ಎಂದು ನಿಲ್ಲುವುದೋ

ನವಂಬರ್ ೮ ಇಡೀ ವಿಶ್ವ ಅಮೆರಿಕಾದ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ. ಮೋದಿ ಶಾಕಿಂಗ್ ನ್ಯೂಸ್ ನ್ನು ಭಾರತೀಯರಿಗೆ ನೋಟ್ ಬ್ಯಾನ್ ಮಾಡುವ ಮೂಲಕ ಕೊಟ್ಟರು.

ವಿಶ್ವವೇ ಒಂದು ಕ್ಷಣ ಮೋದಿಯ ಮತ್ತು ಭಾರತ ಸರ್ಕಾರದ ನಿರ್ಧಾರದಿಂದ ನಿಬ್ಬೇರಗಾಗಿತು.

೧೦೦೦ , ೫೦೦ ರ ನೋಟಗಳು ಸರಿ ರಾತ್ರಿಯಿಂದ ಪೂರಾ ಬಂದ್. ನಾಳೆ ಬದಲಿಸಿಕೊಂಡರೇ ಮಾತ್ರ ಅವುಗಳಿಗೆ ಬೆಲೆ.

ಕೆಲವರಿಗೆ ಈ ರೂಲ್ ನುಂಗಲಾರದ ತುತ್ತಾಗಿದ್ದಂತೂ ನಿಜ.

ಮಾರನೇಯ ದಿನದಿಂದ ಸಾಲು ಸಾಲು ಮಂದಿ ಬ್ಯಾಂಕ್ ಗಳ ಮುಂದೆ ನೋಟ್ ಬದಲಿಸಿಕೊಳ್ಳಲು ನಿಂತಿದ್ದೇ ಬಂತು.

ಸಾಕಷ್ಟು ಜನ ಸಾಮಾನ್ಯರು ಈ ನಿರ್ಧಾರವನ್ನು ಮೆಚ್ಚಿದರು. ಹಾಗೆಯೇ ಕೆಲವರು ಮೋದಿಯನ್ನು ಶಪಿಸಿದರು.

ರಾಜಕೀಯ ನಾಯಕರುಗಳು ತಮ್ಮದೇಯಾದ ದಾಟಿಯಲ್ಲಿ ಈ ನಿರ್ಧಾರವನ್ನು ಖಂಡತುಂಡವಾಗಿ ಖಂಡಿಸಿದರು.

ಮೋದಿ ಕೇವಲ ಬ್ಯುಸಿನೇಸ್ ಮ್ಯಾನ್ ಮತ್ತು ಶ್ರೀಮಂತರ ಪರ. ಇವರುಗಳನ್ನು ಓಲೈಸುವ ಸಲುವಾಗಿ ಈ ಕಾನೂನು ತಂದಿದ್ದಾರೆ. ಬಡ ಜನರು, ರೈತರು, ಸಣ್ಣ ವ್ಯಾಪರಿಗಳು ಎಲ್ಲಿಗೆ ಹೋಗಲಿ? ಅದು ಹೇಗೆ ಪ್ರತಿಯೂಬ್ಬರೂ ಬ್ಯಾಂಕ್ ಆಕೌಂಟ್ ಇಟ್ಟುಕೊಳ್ಳಲು ಸಾಧ್ಯ. ಜನರ ಬಗ್ಗೆ ಮೋದಿಗೆ ಕರುಣೆಯೇ ಇಲ್ಲ. ಇದು ಒಂದು ದೊಡ್ಡ ನೋಟ್ ಹಗರಣ. ಬಡ ಜನರ ಸಾವುಗಳು ಬ್ಯಾಂಕ್ ಕ್ಯೂ ನಲ್ಲಿ ನಡೆಯುತ್ತಿದೆ. ಹೀಗೆ ವಿರೋಧದ ಮಾತು ಮಾತು ಚರ್ಚೆಗಳು ಇನ್ನೂ ನಡೆಯುತ್ತಿವೆ.

ಇದು ಕಾಳಧನ ಸಂಗ್ರಹಕಾರರಿಗೆ ದುಃಸಪ್ನ. ಭ್ರಷ್ಟ ಜನರಿಗೆ ಸರಿಯಾದ ಶಾಸ್ತಿಯಾಯಿತು. ಇನ್ನಾದರೂ ಬ್ಲಾಕ್ ಮನಿ ಹೇಳ ಹೆಸರಿಲ್ಲದ ರೀತಿಯಲ್ಲಿ ನಾಶವಾಗುತ್ತದೆ. ಮೋದಿಯೆಂದರೇ ತಾತ್ಸಾರ ಮಾಡಿದವರಿಗೆ ಮೋದಿ ಸರ್ಕಾರ ಸರಿಯಾಗಿ ತೋರಿಸಿತು. ಬಡವರಿಗೂ ಸಹ ಸರ್ಕಾರದಲ್ಲಿ ನಂಬಿಕೆ ಬರುವ ನಿರ್ಧಾರ ಇದು. ಭಾರತ ಇಂದಿಗೆ ಬೆಳಕನ್ನು ಕಂಡಿತು. ಶ್ರೀಮಂತರ ದರ್ಬಾರಿಗೆ ಕಡಿವಾಣ ಮೋದಿ ಹಾಕಿದರು. ಇಂಥ ಪ್ರಧಾನಿಯನ್ನು ಕಂಡ ಭಾರತ ಧ್ಯನ್ಯ! ಹೀಗೆ ಪರವಾದ ಮಾತುಗಳು ಪ್ರತಿ ಮೀಡಿಯಾಗಳಲ್ಲಿ ಪಸರಿಸಿತು.

ಯಾವುದೇ ಒಂದು ಕೆಲಸ, ಘಟನೆ, ವಿಚಾರ ನಡೆದರೂ ಪರ ಮತ್ತು ವಿರೋಧದ ಮಾತು ಕೇಳುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ.
ಯಾಕೆಂದರೇ ಪ್ರತಿಯೊಬ್ಬರಿಗೂ ತಮ್ಮ ಅಭಿವ್ಯಕ್ತಿಯನ್ನು ತಮ್ಮನುಸಾರ ವ್ಯಕ್ತಪಡಿಸಲು ಸರ್ವ ಸ್ವತಂತ್ರರು.

ಆದರೇ ನೋಟ್ ಬ್ಯಾನ್ ನಿಂದ ಎಷ್ಟು ಅನುಕೂಲವಾಗಬಹುದೋ ಅಷ್ಟೇ ಅನಾನುಕೂಲಗಳು ಸ್ವಲ್ಪ ದಿನಗಳು ಜನಸಾಮನ್ಯರು ಅನುಭವಿಸುವುದು ನಿಜ.

ಸರ್ಕಾರ ಯಾವುದೇ ರೀತಿಯ ಮುಂದಾಲೋಚನೆಯಿಲ್ಲದೆ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಆದರೂ ಇಂದು ನೋಟ್ ಬದಲಾವಣೆಯ ಭರಾಟೆಯಲ್ಲಿ ಸಾಮನ್ಯ ಜನರ ಸಾವುಗಳು ಮಾತ್ರ ಅಕ್ಷಮ್ಯ. ಇದಕ್ಕೆ ಯಾರು ಹೊಣೆಯಾಗುವರೊ ಗೊತ್ತಿಲ್ಲ!

ಯಾಕೆಂದರೇ ಯಾವುದೇ ಸುಧಾರಣೆ ಒಂದು ಜೀವಕ್ಕಿಂತ ಅಮೊಲ್ಯವಲ್ಲ.

ಇದನ್ನೇ ಕೆಲವರು ಕೇವಲವಾಗಿ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಇಂದಿನ ಕಷ್ಟಗಳು ಅವಶ್ಯಕ ಎನ್ನುವ ಉದ್ಧಟತನ ತೋರಿಸುತ್ತಿದ್ದಾರೆ. ಈ ರೀತಿಯ ಮನೋಭಾವನೆ ಯಾರೂ ಒಪ್ಪವಂತದ್ದಲ್ಲ.

ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಗಳು ಸಾಮಾನ್ಯ ಜನಗಳು, ಹಾಗೆಯೇ ಯಾವುದೇ ಕಾಯದೆ ಕಾನೂನುಗಳಿಂದ ಕಷ್ಟ ಅನುಭವಿಸುವುದು ಈ ಸಾಮಾನ್ಯ ಜನಗಳೇ.

ಉಳ್ಳವರಿಗೆ ಯಾವುದೇ ತೊಂದರೆ ಎಂದಿಗೂ ಆಗುವುದಿಲ್ಲ. ಅದಕ್ಕೆ ಇರಬೇಕು ಪ್ರತಿಯೊಬ್ಬರೂ ಉನ್ನತವಾದದ್ದನ್ನು ಪಡೆದುಕೊಳ್ಳಲು ತವಕಪಡುವುದು.

ಸರ್ಕಾರದ ಜಾಗದಲ್ಲಿರುವ ನಾಯಕರುಗಳು ಹಿಂದಿನಿಂದಲೂ ಬಡವರನ್ನೆ ತಮ್ಮ ಟ್ರಂಪ್ ಕಾರ್ಡ ಮಾಡಿಕೊಂಡಿದ್ದಾರೆ. ಬಡವರ ಉದ್ಧಾರದ ಹೆಸರಲ್ಲಿ ಅವರನ್ನು ಇನ್ನೂ ಅದೇ ಸ್ಥಿತಿಯಲ್ಲಿ ಇಡುವುದು ಅವರಿಗೆ ಲಾಭ. ಅದಕ್ಕೆ ಈ ಅಧಿಕಾರದ ಮಧದಲ್ಲಿರುವವರ ಮಾತುಗಳು ಯಾವುದು ನಿಜ ಯಾವುದು ಸುಳ್ಳೆಂದು ಅರಿಯುವುದು ಅಷ್ಟು ಸುಲಭವಲ್ಲ.

ಇಂದು ಪ್ರತಿಯೊಂದನ್ನು ಸಂಶಯದ ಮನಸ್ಸಿನಲ್ಲಿ ನೋಡುವಂತಾಗಿದೆ.

ಮೋದಿ ಏನೇ ಒಳ್ಳೆಯದನ್ನು ದೇಶಕ್ಕಾಗಿ ಮಾಡಲು ನಿರ್ಧರಿಸಿದರೂ ಪ್ರತಿಯೊಬ್ಬರೂ ಸಂಶಯದಲ್ಲಿ ಕಾಣುವುಂತಾಗಿದೆ.

ಇದು ಯಾಕೇ?

ದೇಶಕ್ಕಾಗಿ ಒಳ್ಳೆಯದನ್ನು ಮಾಡುವ ಮನುಷ್ಯನೇ ಹುಟ್ಟಿಲ್ಲ ಎನ್ನುತ್ತಿದ್ದಾರೆ.

ಅದು ಹೇಗೆ ನಮ್ಮ ಜನ ಗಾಂಧಿಯನ್ನು ನಂಬಿದರು? ಅದು ಯಾವ ಗುಣ ಗಾಂಧಿಯ ಮಾತನ್ನು ಇಡೀ ದೇಶ ಪಾಲಿಸುವಂತೆ ಮಾಡಿತು?

ಪ್ರಜಾಪ್ರಭುತ್ವವಿರುವ ಸರ್ಕಾರದಲ್ಲಿ ಪ್ರಜೆಯೇ ಪ್ರಭು ಎಂಬುದು ಕೇವಲ ಬಾಯಿ ಮಾತಾಗಿದೆ. ಯಾಕೆಂದರೇ ಸ್ವಾತಂತ್ರ್ಯ ಬಂದ ೭೦ ವರುಷದಲ್ಲಿ ನಮ್ಮನಾಳಿದ ನಾಯಕರುಗಳ ಜೊಳ್ಳು ಧೋರಣೆಯ ಮಾತುಗಳು. ಅವರುಗಳು ತಿಂದು ತೇಗಿದ ರೀತಿ. ಬಡವರ ಬಗ್ಗೆ ಅವರು ಮಾತನಾಡುವುದಕ್ಕೂ, ಅವರನ್ನು ಕಾಣುವುದಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ.

ದೇಶ ಉನ್ನತಿಯಾಗಬೇಕಾದರೇ ದೇಶದ ನಾಯಕರುಗಳು ಒಳ್ಳೆಯವರಾಗಿರಬೇಕು. ಒಳ್ಳೆಯ ನಾಯಕ ಸಿಗಬೇಕಾದರೇ ದೇಶದ ಜನರು ಅಂಥ ನಾಯಕರನ್ನು ಆರಿಸಬೇಕು.

ಆದರೇ ಎಲ್ಲೋ ಏನೋ ವ್ಯತ್ಯಾಸ ಕಾಣುತ್ತಿದೆ. ಅಧಿಕಾರ ಸಿಕ್ಕಿದರೇ ಸಾಕು ತಾನು ತನ್ನ ಕುಟುಂಬ ಮಾತ್ರ ಚೆನ್ನಾಗಿರಬೇಕು ಎನ್ನುವ ಮಟ್ಟಿಗೆ ಕೊಳ್ಳೆ ಹೊಡೆಯುವವರನ್ನೇ ಕಂಡ ನಮಗೆ ಮೋದಿಯ ನಡೆ ಸ್ವಲ್ಪ ವಿಭಿನ್ನ ಅನಿಸುತ್ತಿದೆ. ಇದಕ್ಕೆ ಇರಬೇಕು ನಮ್ಮ ಜನ ಈ ಬದಲಾವಣೆಯನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.


ಯಾವುದೇ ಬದಲಾವಣೆ ಸುಧಾರಣೆ ಬೇಡ ಗುರು! ನಾನು ಚೆನ್ನಾಗಿದ್ದರೇ ಸಾಕು. ಯಾವನ್ ಕ್ಯೂ ನಲ್ಲಿ ನಿಲ್ಲಬೇಕು? ನನ್ನ ದುಡ್ಡು ನನ್ನದಾಗಿದ್ದರೇ ಸಾಕು. ಯಾರು ಎಷ್ಟು ಬೇಕಾದರೂ ಇಟ್ಟುಕೊಂಡಿರಲಿ. ಈ ರೀತಿಯ ನಮ್ಮ ಮನೋಭಾವನೆಯನ್ನೇ ಎನ್ ಕ್ಯಾಷ್ ಮಾಡಿಕೊಂಡಿರುವ ನಮ್ಮ ಸೋ ಕಾಲ್ಡ್ ರಾಜಕೀಯ ನಾಯಕರುಗಳು ನಮ್ಮ ಬದುಕನ್ನು ಇನ್ನೂ ಮೂರ ಬಟ್ಟೆ ಮಾಡಲು ಸಿದ್ಧರಾಗಿದ್ದಾರೆ. ಇದು ನಿಜ!

ಸಂಸತ್ತನಲ್ಲಿ ಎಲ್ಲ ಪ್ರತಿಪಕ್ಷಗಳು ಈ ನೋಟ್ ಬ್ಯಾನ್ ಮಾಡಿರುವ ವಿರುದ್ಧ ತೊಡೆತಟ್ಟಿಕೊಂಡು ವಿರೋಧಿಸುತ್ತಿರುವುದನ್ನು ನೋಡಿದರೇ ನಮಗೆ ನಾವೇ ನಾಚಿಕೆಪಟ್ಟುಕೊಳ್ಳಬೇಕೇನೋ..?

ಏನೂ ಮಾಡುವ ಆಗಿಲ್ಲ. ನಾವೇ ಆರಿಸಿಕಳಿಸಿರುವ ಪ್ರತಿನಿಧಿಗಳು. ಅವರುಗಳು ನಮ್ಮಗಳ ಬಗ್ಗೆ ಬಾಯಿ ತುಂಬ ಹರಿಸುತ್ತಿರುವ ನುಡಿಗಳು ಕೇಳಬೇಕು. ಅವರಿಗೆ ನಮ್ಮ ಜನಗಳು ಇನ್ನೂ ಅದೇ ಸ್ಥಿತಿಯಲ್ಲಿದ್ದಷ್ಟು ಲಾಭ.

ಸತತ ೭೦ ವರುಷ ನಮ್ಮವರ ಏಳ್ಗೆಯನ್ನಾಗಲಿ, ನಮ್ಮ ಜನರನ್ನು ಹೆಚ್ಚು ಅಕ್ಷರಸ್ಥರನ್ನಾಗಿ ಮಾಡೋಣ, ಹೆಚ್ಚು ತಿಳುವಳಿಕೆಯುಳ್ಳವರನ್ನಾಗಿ ಮಾಡೋಣ ಎನ್ನುವುದರ ಬಗ್ಗೆ ಈ ರೀತಿಯ ಒಗ್ಗಟ್ಟನ್ನು ಪ್ರದರ್ಶಿದ್ದರೇ ನಮ್ಮ ಭಾರತ ಇಂದು ಅದು ಎಲ್ಲೋ ಇರುತ್ತಿತ್ತು.

ಆದರೇ ನಮ್ಮ ಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ಅದಕ್ಕಾಗಿ ಇವರುಗಳು ಮಾಡುತ್ತಿರುವ ನಾಟಕಗಳನ್ನು ನೋಡಿದರೇ ಇವರಿಗೆ ಮೋದಿ ನಡೆ ಮಾತ್ರ ತಪ್ಪಾಗಿ ಕಾಣುತ್ತಿದೆ. ಅದಕ್ಕಾಗಿ ಸಾಮಾನ್ಯ ಜನರ ಮನಸ್ಸನ್ನು ಬಡಿದೆಬ್ಬಿಸಿ ಸರ್ಕಾರದ ವಿರುದ್ಧ ದಂಗೆಯೇಳಿಸಬೇಕು. ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಆರಿಸಲಿ ಎಂಬ ದೂರಾಲೋಚನೆಯಂತಿದೆ.

ಇದು ಎಂದು ನಿಲ್ಲುವುದೋ ಕಾದು ನೋಡಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ