ಅಂತು ಇಂತು ಕೊರೋನ ಮುಗಿಯುತ್ತಿದೆ ಎನ್ನುವ ಹೊತ್ತಿಗೆ ನಮ್ಮ ರಾಜ್ಯದಲ್ಲಿ ಹಿಜಾಬ್ ಸಂಘರ್ಷದ ಕಿಡಿ ಹೊತ್ತಿಕೊಂಡಿದೆ.
ವಿದ್ವಂಸಕ ಪುಡಾರಿಗಳಿಗೆ ನಮ್ಮ ಜನರನ್ನು, ವಿದ್ಯಾರ್ಥಿಗಳನ್ನು ನೆಮ್ಮದಿಯಾಗಿ ಎಂದು ಇರಲು ಬೀಡಲೇ ಬಾರದು ಎನ್ನುವ ಮನಸ್ಸಿರಬೇಕು.
ಅದು ಯಾರು ಈ ಮತೀಯಾ, ಧರ್ಮಕ್ಕೆ ಸೇರಿದ ಪರ ವಿರೋಧದ ದ್ವೇಷವನ್ನು ಮುದ್ದು ಮುದ್ದು ಮನಸ್ಸುಗಳೊಳಗೆ ತುಂಬಿದರೋ ಕೇಸ್ ಹೈಕೋರ್ಟ ಅಂಗಳಕ್ಕೆ ಹೋಗಿದೆ.
ಎಲ್ಲೆಲ್ಲೂ ನಮ್ಮ ಶಾಲಾ ಕಾಲೇಜುಗಳು ಅಕ್ಷರಶ: ರಣರಂಗವೇ ಆಗಿಬಿಟ್ಟು, ಸರ್ಕಾರ ಶಾಲೆಗಳನ್ನು ಬಂದ್ ಮಾಡಿ ರಜೆ ಘೋಷಣೆ ಮಾಡುವ ಮಟ್ಟಿಗೆ. ಈ ಧರ್ಮ ವಸ್ತ್ರ ವಿಷಯವನ್ನು ಇಷ್ಟು ದೊಡ್ಡದು ಮಾಡಿ ತಮಾಷೆ ನೋಡುತ್ತಿರುವ ಈ ಕಳ್ಳ ಮನಸ್ಸುಗಳೇ ಉತ್ತರಿಸಬೇಕು.
ಇಷ್ಟು ದಿನ ಅದು ಹೇಗೆ ಇತ್ತೋ ಗೊತ್ತಿಲ್ಲ ಇನ್ನು ಮುಂದಿನದೂ ಬೇರೆ ಲೆಕ್ಕ! ಎನ್ನುವ ಮಟ್ಟಿಗೆ ಹಿಂದೂ ಮುಸ್ಲಿಮ್ ವಿದ್ಯಾರ್ಥಿಗಳು, ಮುಖಂಡರಗಳು, ಧರ್ಮ ಗುರುಗಳು, ಮಕ್ಕಳ ಹೆತ್ತವರು ಹೀಗೆ ಪ್ರತಿಯೊಬ್ಬರೂ ಪರ ವಿರೋಧದ ಗುಂಪುಗಳಾಗಿಬಿಟ್ಟಿವೆ.
ಕೋರ್ಟ ಯಥಾ ಸ್ಥಿತಿ ಪಾಲಿಸಿಕೊಂಡು ಇರೀ ನಾವು ತೀರ್ಪು ಹೇಳುವವರಿಗೂ ಅಂದರೇ.. ನೋ ಎಂದು ಯಾರೊಬ್ಬರೂ ಕೋರ್ಟ್ ಆದೇಶಕ್ಕೂ ಕವಡೇ ಕಾಸಿನ ಕಿಮ್ಮತ್ತು ಕೊಡದೇ ಮತ್ತೆ ಅದೇ ರೀತಿಯ ದೊಂಬಿಯನ್ನು ಶಾಲಾ ಕಾಲೇಜುಗಳಲ್ಲಿ ನಡೆಸುತ್ತಿದ್ದಾರೆ.
ನಾವೆಲ್ಲಾರೂ ಒಂದೇ ನಮ್ಮ ದೇಶ ಒಂದೇ ಭಾರತವೇ ಧರ್ಮ ಎಂದು ಪಾಠ ಹೇಳುವ ಮಂದಿರಗಳು ಹೊಡೆದಾಡುವ ಜಾಗಗಳಾಗಿರುವುದು ವಿಪರ್ಯಾಸ.
ಶಾಲಾ ಪಾಠ ಮತ್ತು ಪರೀಕ್ಷೆಗಿಂತ ಹಿಜಾಬೇ ಮುಖ್ಯ ಎಂದು ಮುಷ್ಕರ ಮಾಡುತ್ತಿರುವ ವಿದ್ಯಾರ್ಥಿನಿಯರು. ಅವರು ಹಿಜಾಬ್ ಹಾಕಿಕೊಂಡು ಬಂದರೇ ನಾವು ಕೇಸರಿ ಶಾಲೇ ಧರಿಸಿ ತರಗತಿಗಳಿಗೆ ಬರುತ್ತೇವೆ ಎನ್ನುವ ಹಿಂದು ಮನಸ್ಸುಗಳು.
ನೀವು ಸರಸ್ವತಿ ಪೂಜೆ, ಕುಂಕುಮ, ತಲೆಗೆ ಹೂವು ಎಲ್ಲಾ ಇಟ್ಟುಕೊಂಡು ಬರುತ್ತಿರಲ್ಲಾ ನಾವೇನಾದರೂ ಕೇಳಿದ್ದಿವಾ ಎನ್ನುವ ಮುಸ್ಲಿಂ ಮನಸ್ಸುಗಳು.
ನಾವಾ ನೀವಾ ಎನ್ನುತ್ತಾ ಇಡೀ ಕರ್ನಾಟಕವನ್ನು ಧರ್ಮ ಯುದ್ಧಕ್ಕೆ ಅಣಿ ಮಾಡಲು ಸಿದ್ಧವಾಗಿರುವಂತೆ ಪ್ರೇರಪಿಸುತ್ತಿರುವ ಅರೇ ಬೆಂದ ಈ ಮನಸ್ಸುಗಳನ್ನು ನೆನಸಿಕೊಂಡರೇ ಅಸಹ್ಯ ಹುಟ್ಟುತ್ತದೆ.
ಹತ್ತಿರವಿದ್ದರೂ ದೂರ ದೂರ ನಿಲ್ಲುತ್ತಿರುವ ಚಿಕ್ಕ-ದೊಡ್ಡ ಮನಸ್ಸಿನ ಈ ನಾಗರಿಕ ಮನುಷ್ಯರನ್ನು ಕಂಡು ಭಾರತಾಂಬೆಯೇ ಕಣ್ಣೀರಿಟ್ಟಿರಬೇಕು.
ಹೀಗೆ ಇನ್ನೂ ನಿತ್ಯ ಸಂಘರ್ಷ ಜಗಳಗಳ ನಡುವೆಯೇ ಶಿವಮೊಗ್ಗದಲ್ಲಿ ನಡೆದ ಹಿಂದು ಹುಡುಗನ ಕೊಲೆ ಇಡೀ ನಗರವನ್ನೆ ಎರಡು ದಿನಗಳ ಕಾಲ ಹತ್ತಿ ಉರಿಯುವಂತೆ ಮಾಡಿರುವುದು.. ಈ ಧರ್ಮ ಯುದ್ಧ ಎಲ್ಲಿಗೆ ಹೋಗಿ ನಿಲ್ಲುವುದೋ ಎಂದು ಇಡೀ ರಾಜ್ಯದ ಜನರನ್ನು ಚಿಂತೆಗೀಡು ಮಾಡಿದೆ.
ಅಲ್ಲಾ ಪುಟ್ಟ ಪುಟ್ಟ ಮನಸ್ಸುಗಳು ಈ ಮಟ್ಟಿಗೆ ಮಲಿನಗೊಳ್ಳುವಂತೆ ಮಾಡಿದ ಆ ಪ್ರಭುತಿಗಳು ಯಾರೂ ಅನಿಸುತ್ತದೆ. ರಾಜಕೀಯ ಬೇಳೇ ಬೆಯಿಸಿಕೊಳ್ಳಲು ಸಾಮಾರಸ್ಯದಿಂದ ಬದುಕುವಂತೆ ಬಿಡಲು ಯಾಕೇ ಇನ್ನೂ ನಮ್ಮ ನೇತಾರಾರಿಗೆ ಧರ್ಮ ಸೇವಕರಿಗೆ ಕೊಂಚ ಬುದ್ಧಿ ಬಂದಿಲ್ಲ.
ಇದೇಯೇನು ನಾವುಗಳು ನಮ್ಮ ಇತಿಹಾಸದಿಂದ ಇಷ್ಟು ದಿನ ಕಲಿತದ್ದೂ ಅನಿಸುತ್ತದೆ. ಇನ್ನೂ ಅದೇಷ್ಟು ಜನರನ್ನೂ ಕೊಂದು, ವಿರೋಧಿಸುತ್ತಾ ನಿತ್ಯ ಕಲಹದೊಂದಿಗೆ ನಾವು ಬಾಳಬೇಕು?
ದೇಶ ಮೊದಲು ಎನ್ನುವ ಮಂತ್ರವನ್ನು ನಾವೆಲ್ಲಾ ಯಾಕೇ ಪುನಃ ಪುನಃ ಮರೆಯುತ್ತೇವೆ?
ಹೀಗೆ ನಮ್ಮ ರಾಜ್ಯ ಮತ್ತು ದೇಶದಲ್ಲಿ ಅಶಾಂತಿಯ ಕಾರ್ಮೋಡ ಕವಿತುಕೊಂಡು ಮುಂದೇನೋ ಎಂಬ ಬೀತಿಯಲ್ಲಿರುವ ಹೊತ್ತಿಗೆ..
ಮೂರನೇ ಮಹಾಯುದ್ಧವಂತೇ..
ಹೌದು. ವಿಶ್ವದಲ್ಲಿಯು ಕೊರೋನದ ಪ್ರಾಬಲ್ಯ ಇನ್ನೇನೂ ಕಡಿಮೆಯಾಯಿತು. ನಾವುಗಳು ಪುನಃ ಮಾಮೊಲಿ ಶೈಲಿಗೆ ಮರಳಬಹುದು ಎನ್ನುವಷ್ಟರಲ್ಲಿ ರಷ್ಯಾ ಉಕ್ರೇನ್ ತಮ್ಮ ತಮ್ಮ ಯುದ್ಧ ಉನ್ಮಾನದಲ್ಲಿ ಮೂರನೇ ವಿಶ್ವ ಯುದ್ಧದಲ್ಲಿ ತೊಡಗಿರುವ ದೃಶ್ಯ ಎಂಥವರ ಎದೆ ಹೊಡೆದು ಹೋಗುವಷ್ಟು ಬೀಕರವಾಗಿದೆ.
ಟಿವಿ ಪರದೆಯ ಮೇಲೆ ಮೂಡಿ ಬರುತ್ತಿರುವ ರಣರಂಗದ ಯುದ್ಧ ಚಿತ್ರಗಳು ಮೊದಲನೇ ಮತ್ತು ಎರಡನೇ ವಿಶ್ವ ಯುದ್ಧವನ್ನು ಇತಿಹಾಸದ ಪಾಠದಲ್ಲಿ ಓದಿದ ಮನಗಳಿಗೆ ತಣ್ಣನೆ ಭಯವನ್ನು ಮೂಡಿಸಿದೆ.
ಭವಿಷ್ಯದ ಬಗ್ಗೆ ಭರವಸೆಯೇ ಇಲ್ಲ ಅನಿಸುವಂತೆ ಮಾಡಿದೆ.
ಮಕ್ಕಳಿಂದ ವಯೋವೃದ್ಧರವರಿಗೇ ಉಕ್ರೇನ್ ನಲ್ಲಿ ಬೀಳುತ್ತಿರುವ ಆ ಬಾಂಬ್, ಬೆಂಕಿ, ಸಾವು, ನೋವುಗಳು ಇಲ್ಲಿಯೇ ನಮ್ಮ ಪಕ್ಕದಲ್ಲಿಯೇ ಜರುಗುತ್ತಿದೆಯೇನೋ ಎಂಬ ಆತಂಕವನ್ನುಂಟು ಮಾಡುತ್ತಿದೆ.
ಅದನ್ನು ನೋಡಿದ ಮುದ್ದು ಮಕ್ಕಳ ಪುಟ್ಟ ಪುಟ್ಟ ಪ್ರಶ್ನೆಗಳಿಗೆ ದೊಡ್ಡವರು ಏನೂ ಉತ್ತರ ಕೊಡಬೇಕೋ ಏನೂ ತಿಳಿಯದೇ ಸುಮ್ಮನೇ ಟಿ.ವಿ ನೋಡುತ್ತಾ ಕೂತು ನಾವು ಎಂಥ ಪ್ರಪಂಚದಲ್ಲಿದ್ದೇವೆ ಎಂದು ಜಿಗುಪ್ಸೆಪಡುವಂತಾಗಿದೆ.
ಪುನಃ ಈ ಮನುಷ್ಯ ವಿಶ್ವ ಚರಿತ್ರೆಯಿಂದ ಏನನ್ನೂ ಕಲಿಯಲೇ ಇಲ್ಲವೇನೋ ಅನಿಸುತ್ತದೆ.
ಹೌದು! ಉಕ್ರೇನ್ ನಲ್ಲಿರುವವರ ಪರಿಸ್ಥಿತಿ, ಯುದ್ಧದಿಂದ ಆಗುತ್ತಿರುವ ಹಿಂಸೆ, ನೋವು, ನಷ್ಟ ಇಡೀ ವಿಶ್ವಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಿದೆ.
ಮನುಷ್ಯನಿಗೆ ನಿಲುಕದ ಸಮಸ್ಯೆ ಯಾವುದೂ ಇಲ್ಲ. ತನ್ನ ಬುದ್ಧಿ ಮತ್ತು ಚಾಕಚಕ್ಯತೆಯಿಂದ ಏನಾನ್ನದರೂ ಬಗೆಹರಿಸಬಲ್ಲ. ಆದರೇ ಈ ಯುದ್ಧ ಮನ ಸ್ಥಿತಿಯನ್ನು ಕಳೆದುಕೊಳ್ಳುವ ಅಥವಾ ಯುದ್ಧವನ್ನು ತಡೆಯುವಂತೆ ಮಾಡುವ ಯಾರೊಬ್ಬರೂ ಈ ಪ್ರಪಂಪಚದಲ್ಲಿ ಹಿಂದೆಯು ಇರಲಿಲ್ಲ, ಇಂದೂ ಇಲ್ಲ ಮತ್ತು ಮುಂದೆನೂ ಇರುವುದಿಲ್ಲ ಎಂಬುದು ಜಗತ್ತಿನ ಎಲ್ಲಾ ಮನುಷ್ಯರಿಗೆ ಈ ಎರಡು ದಿನಗಳಲ್ಲಿ ಗೊತ್ತಾಗಿಬಿಟ್ಟಿದೆ.
ವಿಶ್ವ ಸಂಸ್ಥೆ, ಶಾಂತಿ ಒಕ್ಕೋಟ, ಈ ದೊಡ್ಡಣ್ಣ, ಚಿಕ್ಕಣ್ಣ, ಆ ನೆರೆಯ, ಸ್ನೇಹಿ ದೇಶ ಹೀಗೆ ಯಾರೊಬ್ಬರೂ ಯಾರನ್ನೂ ರಕ್ಷಿಸಲಾರರರು. ತಮ್ಮನ್ನು ತಾವೇ ಎಂದಿಗೂ ರಕ್ಷಿಸಿಕೊಳ್ಳಬೇಕು. ನಮ್ಮ ಮನೆ ಉರಿದರೇ ನಮಗೆ ನಷ್ಟ. ಬೇರೆಯವರು ಕೇವಲ ಪ್ರೇಕ್ಷಕರೇ ಎಂದೆಂದಿಗೂ. ಅದು ದೇಶವಾಗಲಿ, ರಾಜ್ಯವಾಗಲಿ, ನಮ್ಮ ನಮ್ಮ ಮನೆಯಾಗಲಿ.
ಅದೇ ಉಕ್ರೇನ್ ಸ್ಥಿ ತಿ ಇಂದು!!
ಮಾತಿನಲ್ಲಿ ಬಗೆಹರಿಸುವಂತ ಪ್ರತಿಯೊಂದು ವಿಷಯವನ್ನು ಕೇವಲ ಸಾವು ನೋವುಗಳಿಂದ ಬಗೆಹರಿಸುತ್ತೇವೆ ಎಂದು ಹೋಗುತ್ತಿರುವ ಈಗಿನ ಈ ಹೀನಾ ಮನಸ್ಸುಗಳಿಗೆ ಯಾರು ಬುದ್ಧಿ ಹೇಳುವವರೋ ತಿಳಿಯದಾಗಿದೆ.
ಪ್ರತಿಯೊಬ್ಬರೂ ಎಲ್ಲಾ ಗೊತ್ತಿರುವವರಂತೆ ಮತ್ತು ಅಫೀಮು ತಿಂದವರಂತೆ ತಮ್ಮದೇ ನೀತಿಯಲ್ಲಿ ಶಾಂತಿಯೆಂಬುದು ಈ ಪ್ರಪಂಚದ್ದಲ್ಲಾ ಎಂಬಂತೆ ಎಲ್ಲರನ್ನೂ ಯಾವಾಗಲೂ ಬೀತಿಯಲ್ಲಿಟ್ಟಿರಬೇಕು ಎಂಬಂತೆ ವರ್ತಿಸುವ ಪ್ರತಿ ಮನಸ್ಸುಗಳ ಮನಸ್ಥಿತಿಯನ್ನು ಬದಲಾಯಿಸಲೂ ಮತ್ತೊಮ್ಮೆ ಆ ಶ್ರೀ ಕೃಷ್ಣ ಪರಮಾತ್ಮ ಅದು ಯಾವ ಗೀತೆ ಬೋಧಿಸಬೇಕೋ ಗೊತ್ತಿಲ್ಲ!