ಬುಧವಾರ, ಮಾರ್ಚ್ 10, 2010

ಆನಂದ ಪ್ರೇಮ


ಪ್ರತಿಯೊಂದು ಜೀವಿಯಲ್ಲಿ ಉತ್ಸಹ ಮತ್ತು ನವ ಚೈತನ್ಯವನ್ನು ಹಿಡಿದಿಡುವಂತೆ ಮಾಡುವ ಏಕೈಕ ಸೆಲೆಯೆಂದರೇ "ಪ್ರೀತಿ" ಎಂಬ ಎರಡಕ್ಷರದ ಭಾವನೆ.

ಈ ಎರಡಕ್ಷರದ ಮಹಾತ್ಮೆಯನ್ನು ಎಷ್ಟು ಬಾರಿ, ಎಷ್ಟು ರೀತಿ ತಿಳಿದರೂ, ನೋಡಿದರೂ, ಓದಿದರೂ, ಕೇಳಿದರೂ ಬೇಸರ ಎನ್ನುವುದೇ ಇಲ್ಲ ಬಿಡಿ.

ಈ ನಮ್ಮ ಪ್ರಪಂಚದ ಎಲ್ಲಾ ಭಾಗದಲ್ಲೂ ಯಾವುದೇ ಬೇದ ಭಾವವೆನ್ನದೇ ಎಲ್ಲಾರಲ್ಲೂ ಸಮಾನವಾಗಿ ಪ್ರಸರಿಸಿರುವ ಜೀವನ್ಮುಕಿ ಜಲಧಾರೆಯಾಗಿ ಹರಿಯುತ್ತಿರುವ ಈ ಜೀವ ಜಲಕ್ಕೆ ಕ್ಷಾಮವೇ ಇಲ್ಲ.

ಮನುಷ್ಯನು ತಾನು ಎಷ್ಟೇ ಸಂಪಾದಿಸಲಿ, ಎಷ್ಟೇ ಮುಂದುವರಿದಿದ್ದರೂ ತನ್ನ ಆ ಸಮಯಕ್ಕೆ ಸಮಾಧಾನ ಮತ್ತು ಸಂತೋಷದ ಗಳಿಗಗಳನ್ನು ವ್ಯಕ್ತಪಡಿಸಲು ಪರಿತಪಿಸುವುದು ತನ್ನ ಸುತ್ತಲಿನ ಆತ್ಮೀಯ ಮತ್ತು ನಮ್ಮವರು ಎಂಬ ಕಣ್ಣುಗಳನ್ನು. ಏನೇ ಸಾಧಿಸಿದರೂ ಅದು ಈ "ಪ್ರೀತಿ - ಪ್ರೇಮ" ಮಯ ಸಂಬಂಧಕ್ಕೆ ಪೂರಕವಾಗಿದ್ದಾಗ ಮಾತ್ರ ಯಾವುದೇ ಸಾಧನೆಯ ಸವಿ ರುಚಿಸುವುದು.

ಇದಕ್ಕೆ ಇರಬೇಕು ನಮ್ಮ ಪುರಾಣ ಪುಣ್ಯ ಕಥೆಗಳಿಂದ ಪ್ರಾರಂಭಿಸಿ ಇಂದಿನ ಕಥೆ - ಕಾದಂಬರಿ - ಕವಿತೆ ಮತ್ತು ಮಹಾ ಕಾವ್ಯಗಳ ಮೂಲಕ ನಮ್ಮ ಇತ್ತೀಚಿನ ಎಲ್ಲಾ ಸಿನಿಮಾ, ದಾರವಾಹಿಗಳಲ್ಲಿ ಅತಿ ಹೆಚ್ಚು ಜನಪ್ರಿಯವಾದ ಮಾದ್ಯಮ ಸರಕುಗಳಾಗಿ ನಿತ್ಯ ಚಾಲ್ತಿಯಲ್ಲಿರುವ ಸಬ್ಜೇಕ್ಟ್ ಅಂದರೆ ಈ ಮಾನವ ಸಂಬಂಧಗಳು ಮತ್ತು ತರುಣ ತರುಣಿಯರ ಪ್ರೇಮ ಕಥೆಗಳು.

ಈ ರೀತಿಯ ಕಥೆಗಳಿಗೆ ಬರಗಾಲವಿಲ್ಲ ಬಿಡಿ. ಅದೊಂದು ದಿನ ನಿತ್ಯ ಕಾಣುವ ಸೊರ್ಯೋದಯ. ಈ ನಮ್ಮ ಮಾನವ ಕುಲ ಭೊಮಿಯ ಮೇಲೆ ಇರುವವರಿಗೂ ಈ ರೀತಿಯ ವಿವಿಧ ನಿಜವಾದ ಮತ್ತು ಕಲ್ಪನೆಯ ಮೂಸೆಯಲ್ಲಿ ಹುಟ್ಟುವ ಆಕರ್ಷಕವಾದ ಮತ್ತು ನಮ್ಮ ಮನಸ್ಸನ್ನು ಖುಷಿಪಡಿಸುವ ಕಥೆಗಳು ನಮ್ಮ ಪ್ರತಿಭಾವಂತ ಕಲಾಕಾರರಿಂದ ಜನ್ಮ ತಾಳಿ ಬರತ್ತಲೇ ಇರುತ್ತವೆ. ಅವುಗಳನ್ನು ನಾವುಗಳು ಸಹೃದಯತೆಯಿಂದ ಆಸೆಪಟ್ಟು ಸ್ವೀಕರಿಸಿ ಎನ್ ಜಾಯ್ ಮಾಡುತ್ತಿರುತ್ತೇವೆ.

ಇದಕ್ಕೆ ಸಾಕ್ಷಿಯೆಂಬಂತೆ ನಾನು ಓದಿದ ಹಳೆಯ ಪ್ರಸಿದ್ಧ ಯಂಡುಮೋರಿ ವಿರೇಂದ್ರನಾಥ ರ "ಆನಂದೊ ಬ್ರಹ್ಮ" ಕೃತಿಯೇ ಸಾಕ್ಷಿ ಮತ್ತು ಈ ಮೇಲಿನ ನನ್ನ ಅನಿಸಿಕೆಗೆ ಸ್ಫೋರ್ತಿ.

ಕೃತಿಯಲ್ಲಿ ಲೇಖಕರು ನಿರೂಪಿಸಿರುವಂತೆ ನಾವುಗಳು ಈ ನಮ್ಮ ಮುಂದುವರಿದ ಕಂಪ್ಯೂಟರ್ ಜಗತ್ತಿನಲ್ಲಿದ್ದರೂ ನಮ್ಮ ಮಾನವ ಮನಸ್ಸುಗಳು ತಂತ್ರಙ್ಞಾನವನ್ನು ಇಷ್ಟಪಡದೇ ಹುಡುಕುವುದು "ಜೀವಂತ - ಜೀವ ಸೆಲೆಯೆನ್ನುವ ಹಸಿ ಸಂಬಂಧಗಳನ್ನು ಮತ್ತು ಸ್ನೇಹವನ್ನು". ಅದ್ದರಿಂದಲೇ ಇಂಥ ಕಥೆಗಳನ್ನು ಮುಗಿಬಿದ್ದು ಇಷ್ಟಪಟ್ಟು ಓದುತ್ತಾರೆ ಎಂಬುದನ್ನು ಪ್ರಖ್ಯಾತ ಲೇಕನಾದ "ಭರದ್ವಜ" ನ ಮೂಲಕ ಮತ್ತು ಅವನ ಕಥೆಯ ಪಾತ್ರಗಳಾದ ಸೋಮಯಾಜಿ - ಮಂದಾಕಿನಿಯರ ಉನ್ನತವಾದ ಆದರ್ಶಮಯವಾದ ಪ್ರೇಮ-ಜೀವನ-ಸಾಧನೆಯನ್ನು ಎಷ್ಟೋಂದು ಆತ್ಮೀಯವಾಗಿ ಚಿತ್ರಿಸಿದ್ದಾರೆಂದರೇ ಈ ಕೃತಿ ಸರ್ವಕಾಲಿಕವಾಗಿ ಕ್ಲಾಸಿಕ್ ಆಗಿ ನಿಲ್ಲುತ್ತದೆ.

ಈ ರೀತಿಯ ಕೃತಿಗಳಿಗೆ ಸಾವು ಎಂಬುದಿಲ್ಲ. ಎಷ್ಟೇ ರೀತಿಯ ಬದಲಾವಣೆಗಳು ನಮ್ಮ ಈ ಬದುಕಿನಲ್ಲಿ ಸಂಭವಿಸಿದರೂ ನಮ್ಮ ಮನದಾಳದ ಯಾವುದೂ ಮೂಲೆಯಲ್ಲಿ ಅದೇ ಬೊಗಸೆಯಷ್ಟು ಪ್ರೀತಿಯಲ್ಲಿ ನಾವುಗಳು ಗೆಳತಿ, ತಾಯಿ, ತಂದೆ, ಪತಿ, ಪತ್ನಿ, ಮಗ, ಮಗಳು.. ಹೀಗೆ ಹಲವರನ್ನು ಕಾಣಲು ತವಕಿಸುತ್ತಿರುತ್ತೇವೆ. ಯಾಕೆಂದರೆ ಈ ಮಾನವ ಸಂಬಂಧಗಳು ಆ ರೀತಿ ಯಾವುದೇ ಅಡೆ ತಡೆಯಿಲ್ಲದೆ ನಮ್ಮ ನಮ್ಮಲ್ಲಿ ಅದೃಶ್ಯ ರೀತಿಯಲ್ಲಿ ಒಂದಕ್ಕೂಂದು ಕೊಂಡಿಯೋಪಾದಿಯಲ್ಲಿ ಬೆಸೆದುಕೊಂಡಿರುತ್ತವೆ.

ಹೀಗೆಯೇ ಆದರ್ಶ ಪ್ರೇಮದ ಕುರುಹಾಗಿ "ರವಿ ಬೆಳೆಗೆರೆ" ಕೃತಿ "ಹೇಳಿ ಹೋಗು ಕಾರಣ" ಅನಾಮಧೆಯ ಓದುಗನಾದ "ಮಿಠಾಯಿ ಮಾರುವವನಿಗೆ" ಅರ್ಪಿತವಾಗಿ ಪ್ರಾರಂಭವಾಗುವ ಪ್ರೇಮ ಗ್ರಂಥ ತರುಣ - ತರುಣಿಯರಿಗೆ ನಾವು ಈ ರೀತಿಯ ಪ್ರೇಮ ಸುಳಿಯಲ್ಲಿ ಸಿಲುಕಬೇಕು ಎನ್ನುವಂತೆ ಮಾಡುತ್ತದೆ. ಅಲ್ಲಿನ ಕಥಾ ನಾಯಕನಾದ "ಹಿಮವಂತ" ನ ರೀತಿ ಪ್ರಾರ್ಥನೆಗಾಗಿ ಕಾಯಬೇಕು ಎಂಬ ನವ ಹುಮ್ಮಸ್ಸನ್ನು ಎಷ್ಟು ಬಾರಿ ಓದಿದರೂ ವಯಸ್ಸಿನ ಯಾವುದೇ ತಾರತಮ್ಯವಿಲ್ಲದೇ ಪ್ರಚಂಡವಾಗಿ ಎಲ್ಲರ ಮನವನ್ನು ಗೆಲ್ಲುತ್ತದೆ.

ಎವರ್ ಗ್ರೀನ್ ಲವ್ ಸ್ಟೋರಿ ಎಂದು ಹೇಳಬಹುದಾದ ಈ ರೀತಿಯ ಕೃತಿಗಳು ಸಹೃದಯರನ್ನು ಆ ಕ್ಷಣಕ್ಕೆ ಮಂತ್ರ ಮುಗ್ಧರನ್ನಾಗಿಸುತ್ತದೆ. ಮತ್ತು ನಮ್ಮನ್ನು ನಾವು ಮರೆತು ಆ ಪ್ರೇಮ ಪ್ರಪಂಚದಲ್ಲಿ ವಿಹಾರಿಸುವಂತೆ ಮಾಡಿ ಆ ನಾಯಕ - ನಾಯಕಿ ಪಾತ್ರಗಳು ನಾವಾಗುವಂತೆ ಮಾಡುತ್ತವಲ್ಲಾ ಇಟ್ಸ್ ಗ್ರೇಟ್!

ಈ ನಿರಂತರ ಪ್ರೇಮದ ತಣ್ಣನೆಯ ಝರಿ ನಮ್ಮೆಲ್ಲಾರಲ್ಲಿ ಸದಾ ಯಾವ ತಡೆಯೂ ಇಲ್ಲದೇ ಉತ್ಸಾಹದ ಚಿಲುಮೆಯಾಗಿ ಹರಿದು "ಚೆಲುವಿನ ಚಿತ್ತಾರವನ್ನು" ಮೂಡಿಸಲಿ ಎನ್ನುವ ಸಾಮಾನ್ಯ ..ಪ್ರೇಮಿ!

-ತಿಪುಟಪ್ರಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ