ಶನಿವಾರ, ಡಿಸೆಂಬರ್ 16, 2017

ಇಷ್ಟಪಡುವುದು ನಿಮ್ಮ ಬರಹಗಳನ್ನು

ಕಳೆದ ವಾರ ಎಲ್ಲರೂ ಒಕ್ಕೂರೊಲಿನಿಂದ ಹೇಳಿದ್ದೇ ಹೇಳಿದ್ದು. ನೀ ಮೊದಲು ಟಿ.ವಿ ನೋಡು. ನಾನು ಯಾಕಾಪ್ಪಾ ಹೀಗೆ? ಇವರೆಲ್ಲಾ ಪ್ರೀತಿಯಿಂದ ಟಿ.ವಿ ನ್ಯೂಸ್ ಚಾನಲ್ ನೋಡಲು  ನನ್ನ ದಂಬಾಲು ಬಿದ್ದಿದ್ದಾರೆ? ಎಂದುಕೊಂಡು ಟಿ.ವಿ ಆನ್ ಮಾಡಿದೆ.

ಬ್ರೇಕಿಂಗ್ ನ್ಯೂಸ್ ’ಬೆಳೆಗೆರೆ ಆರೇಸ್ಟ!’.

ನಮ್ಮ ಮನೆ ಸ್ನೇಹಿತರಾದಿ ಕೇಳಿದ್ದೇ. ನೋಡಿದಿಯಾ ನೀನು ಓದುತ್ತಿದ್ದಾ ನೆಚ್ಚಿನ ಲೇಖಕನ ಅಸಲಿ ಮುಖ! ನಿನ್ನ ಲೇಖಕ ಸುಪಾರಿಯಿಂದ ಜೈಲು ಪಾಲು!

ಹೌದು. ಬೆಳೆಗೆರೆ ಬರಹಗಳನ್ನು ಪ್ರೀತಿಪಟ್ಟು ಓದುತ್ತಿದ್ದೇ. ಹಾಯ್ ಬೆಂಗಳೂರ್ ಖರೀದಿಸುತ್ತಿದ್ದುದೆ ರವಿಯ ಖಾಸ್ ಬಾತ್ , ಹಲೋ, ಬಾಟಂ ಐಟ್ಂ, ಸಾಪ್ಟ್ ಕಾರ್ನಾರ್, ಲವಲವಿಕೆ ಮತ್ತು ಧಾರಾವಾಹಿಗಳಿಗಾಗಿ.

ಪೇಪರ್ ಕೊಂಡುಕೊಂಡ ಅರ್ಧ ತಾಸಿನಲ್ಲಿ ಅವರು ಬರೆದಿರುವ ಎಲ್ಲವನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿ ಮುಂದೇನು ಎಂದು ಮುಂದಿನ ವಾರದ ಪತ್ರಿಕೆಗೆ ಕಾಯುತ್ತಿದ್ದಂತಹ ನಿತ್ಯ ಓದುಗನಾಗಿದ್ದೆ. ಅದು ಹಳೆ ಕಾಲ ಬಿಡಿ.

ಅಷ್ಟರ ಮಟ್ಟಿಗೆ ಬೆಳೆಗೆರೆಯ ಅಕ್ಷರಗಳ ಮೋಡಿ ಇಡೀ ಕರ್ನಾಟಕದಲ್ಲಿ ಮನೆ ಮಾಡಿತ್ತು ಎಂದರೇ ಅತಿಶಯೋಕ್ತಿಯಲ್ಲ.

ಅವರೇ ಪತ್ರಿಕೆಗಳಲ್ಲಿ ಬರೆದುಕೊಳ್ಳುತ್ತಿದ್ದಂತೆ, ಕಷ್ಟಪಟ್ಟುಕೊಂಡೇ ಈ ಎತ್ತರಕ್ಕೆ ಬೆಳೆದು, ಕೋಟಿ ಕೋಟಿ ಒಡೆಯನಾಗಿರುವುದೇ ಪ್ರತಿಯೊಬ್ಬರಿಗೆ ಮಾದರಿಯಾಗಿತ್ತು. ಕಷ್ಟಪಟ್ಟು ಸಾಧಿಸಿದರೇ ಯಾವುದು ದೊಡ್ಡದಲ್ಲ! ಜೀವನದಲ್ಲಿ ಬೆಳೆಗೆರೆಯಂತೆ ಬೆಳೆಯಬೇಕು ಎಂದುಕೊಂಡ ಅದೇಷ್ಟೋ ಹದಿಹರೆಯದ ಮನಸ್ಸುಗಳಿಗೆ ಈ ಸುದ್ದಿ ಬಲೂನಿಗೆ ಸೂಜಿ ಚುಚ್ಚಿದಂತಾಗಿದೆ.

ಇಂದಿಗೂ ಕನ್ನಡದಲ್ಲಿ ಹೆಚ್ಚು ಪುಸ್ತಕಗಳು ಮಾರಾಟವಾಗುವುದು ಮತ್ತು ಆಲ್ ಟೈಂ ದೀ ಬೆಸ್ಟ್ ಎಂದರೇ.. ಎಸ್.ಎಲ್ ಬೈರಪ್ಪ ಮತ್ತು ಬೆಳೆಗೆರೆಯ ಪುಸ್ತಕಗಳು.

ಜನಪ್ರಿಯ ಲೇಖಕರ ಸಾಲಿನಲ್ಲಿ ಬೆಳೆಗೆರೆ ಹೆಸರು ನಿತ್ಯ ಮುಂದು.

ಅವರ ಅಕ್ಷರಗಳ ಸಾಲಿಗೆ ಕರಗಿ ನೀರಾಗದವರು ಯಾರು ಇಲ್ಲ. ಬರೆದುಕೊಂಡೇ ಈ ಮಟ್ಟಕ್ಕೆ ಬೇಳೆದಿದ್ದಾರೆ ಎಂದೇ ಸಾಮಾನ್ಯ ಓದುಗನಿಗೆ ಹೆಮ್ಮೆ.

ಪ್ರತಿ ಪುಸ್ತಕದಲ್ಲಿ ಅವರೇ ಹೇಳುತ್ತಿದ್ದರೂ. ನಾನು ೧ ರೂಪಾಯಿ ಪೆನ್ನು ಇಟ್ಟುಕೊಂಡು ಬಂದವನು. ಓದುಗರು ಕೊಟ್ಟ ಹತ್ತು ಹತ್ತು ರೂಪಾಯಿ ಪೇಪರ್ ದುಡ್ಡೇ ಇಂದು ನಾನು ಶಾಲೆ, ಟಿವಿ,ಸಿ.ಡಿ, ರೇಡಿಯೋ ಇತ್ಯಾದಿ ಎಲ್ಲಾ ಕಟ್ಟುವಂತೆ ಮಾಡಿದೆ.

ಪ್ರತಿ ರೂಪಾಯಿಗೂ ಪೈಸಾ ವಸೂಲ್ ಮಾಡುವಂತಹ ಬರಹ, ಕಾದಂಬರಿ, ಕಥೆಗಳನ್ನು ಕೊಡುತ್ತಿನಿ. ನನ್ನನ್ನು ಬರವಣಿಗೆಯಲ್ಲಿ ಯಾರು ಎಂದಿಗೂ ಮೀರಿಸಲೂ ಸಾಧವಿಲ್ಲ. ಟೈಂ ಇಟ್ಟುಕೊಂಡು ಬರೆಯುವವನು ನಾನೊಬ್ಬನೇ. ಒಂದೇ ಎರಡೇ ಅವರೇ ಅವರ ಬಗ್ಗೆ ಬರೆದು(ಕೊಚ್ಚಿ)ಕೊಳ್ಳುತ್ತಿದ್ದದ್ದು. ಅದೇ ನಮಗೆಲ್ಲಾ ಹೆಚ್ಚು ಇಷ್ಟಪಟ್ಟು ಓದುವಂತೆ ಮಾಡುತ್ತಿತ್ತು.

ಪ್ರತಿ ಓದುಗನಿಗೂ ಹೊಟ್ಟೆ ಕಿಚ್ಚಾಗುವಂತೆ ಬರೆಯುತ್ತಿದ್ದರೂ.

ಪ್ರತಿಯೊಬ್ಬರೂ ತಮ್ಮ ತಮ್ಮೊಳಗೆ ಗೊತ್ತಿಲ್ಲದೆ ಬೆಳೆಗೆರೆ ಶೈಲಿಯನ್ನು ರೂಢಿಸಿಕೊಳ್ಳುತ್ತಿದ್ದರು.

ಅಷ್ಟೊಂದು ಅಭಿಮಾನಿಗಳನ್ನು ಹೊಂದಿದ್ದರೂ ಎಂದರೇ ಅದು ಕೇವಲ ಅವರ ಅಕ್ಷರಗಳು ಮತ್ತು ಬರಹಗಳಿಂದ ಮಾತ್ರ.

ದೂರದಲ್ಲಿರುವ ಓದುಗನಿಗೆ ಬರೆಯುವ ಬರಹಗಾರ ಹತ್ತಿರವಾಗುವುದು ಅವನ ಬರಹಗಳಿಂದ ಮಾತ್ರ.

ಸಾಮಾನ್ಯ ಓದುಗ ಪ್ರೀತಿಯಿಂದ ತಾನು ಓದುವ ಪ್ರತಿ ಅಕ್ಷರದ ಮೂಲಕ ಅದನ್ನು ಬರೆದ ಕತೃವಿನ ಬಗ್ಗೆ ಬೇರೊಂದು ರೂಪವನ್ನು ತನ್ನ ಮನದಲ್ಲಿಯೇ ಕಟ್ಟಿಕೊಂಡುಬಿಡುತ್ತಾನೆ.

ಇಂದು ಅಂಥ ಎಲ್ಲಾ ಸಹಸ್ರ ಸಹೃದಯಗಳಿಗೆ ಅಘಾತವಾದ ದಿನ!

ಮೊದಲಿನಿಂದಲೂ ಸುತ್ತ-ಮುತ್ತ, ಅಲ್ಲಿ-ಇಲ್ಲಿ ಬೆಳೆಗೆರೆ ಹಾಗೆಯೇಂತೆ. ಹೀಗೆಯಂತೆ. ಎಂಬ ಗಾಳಿ ಸುದ್ಧಿಗಳು ಕಿವಿಗೆ ಬಿದ್ದರೂ. ನಾವು ಬಿಡು ಗುರು! ನದಿ ಮೊಲ ಋಷಿ ಮೊಲ ಯಾಕ್ ಬೇಕು?  ಬೆಳೆದವರನ್ನು ಕಂಡರೇ ಸಾವಿರಾ ಗಾಸಿಫ್ ಗಳ ಜಮಾನ ಇದು. ಬಿಡು ಗುರು! ಎಂದುಕೊಂಡು  ಪುನಃ ಹೆಚ್ಚು ಓದುತ್ತಿದ್ದಿವಿ.

ಆಗ ಕಡೆಗಣಿಸಿದ್ದವರಿಗೆ ಹೃದಯ ಭಾರವಾದ ಸಮಯ.

ಇದೇನಾ ನಮ್ಮ ಸೂಪರ್ ಪವರ್ ಪುಲ್ ಲೇಖಕನ ಮುಖ ಟಿ.ವಿ ಪರದೆಯ ಮೇಲೆ? ತಾನೇ ಸುಪಾರಿ ಕಿಲ್ಲಾರಗಳ ಬಗ್ಗೆ ಹೆಡ್ ಲೈನ್ ಸುದ್ಧಿ ವರದಿ ಮಾಡುತ್ತಿದ್ದವರು. ಈಗ ತಮ್ಮದೇ ಸುದ್ಧಿಯನ್ನು ತನ್ನ ಪೇಪರ್ ನಲ್ಲಿಯೇ ಕಾಣಬೇಕಾಯಿತಲ್ಲಾ!!

ಓ ಗಾಡ್!!

ಅಯ್ಯೋ ಇವರೇನಾ ನಾವು ಇಷ್ಟಪಟ್ಟು ಓದುತ್ತಿದ್ದ ಬರಹಗಾರ?  ಎಂದು ಬೇಸರವಾಯಿತು.

ಪ್ರತಿ ಬರಹಗಾರರು ಬರದಂತೆ ಬದುಕವವರು ಎಂದುಕೊಂಡಿದ್ದು ನಮ್ಮ ಮುಗ್ಧ ಮನಸ್ಸು ಎನಿಸಿತು.

ಓದುವುದು ಬೇರೆ. ಬರೆಯುವುದು ಬೇರೆ. ಬದುಕುವುದು ಬೇರೆಯೇ ಅನಿಸಿತು.

ಬರಹಗಾರ ಎಂದರೇ ಸರಸ್ವತಿಯ ಪುತ್ರನೇ ಸರಿ. ಓದುಗನು ಇಷ್ಟಪಡುವಂತಹ ಕಲ್ಪನೆಯ ಜಗತ್ತನೆ ಸೃಷ್ಟಿ ಮಾಡಿ. ಭಾವನಾ ಪ್ರಪಂಚದಲ್ಲಿ ಸಂಬಂಧಗಳನ್ನು  ಕಟ್ಟಿಕೊಟ್ಟು ನಮ್ಮನ್ನೇಲ್ಲಾ ಗೆಲ್ಲುವಂತಹ ಬರಹಗಳನ್ನು ನೀಡುವ ಅಕ್ಷರಗಳ ಮಾಂತ್ರಿಕನಿಗೆ ಮೀಗಿಲಾದವನು ಯಾರು ಇಲ್ಲ ಎಂದುಕೊಂಡವರು ನಾವು.

ಆದರೇ.....!

ನಾನಂತೂ ಇದುವರೆಗೂ ಯಾವುದೇ ಲೇಖಕರನ್ನು ಮುಖತಃ ಬೇಟಿ ಮಾಡಿಲ್ಲ. ನನಗೆ ಹಾಗೇ ಬೇಟಿ ಮಾಡಲು ಇಷ್ಟವು ಆಗುವುದಿಲ್ಲ. ಯಾಕೆಂದರೇ ಅವರನ್ನು ಅವರು ಬರೆದಿರುವ ಪುಸ್ತಕಗಳಲ್ಲಿ ಕಂಡುಕೊಳ್ಳಲು ಹೆಚ್ಚು ಇಷ್ಟಪಡುತ್ತಿನಿ.

ಹಾಗೆಯೇ ನಾವು ಓದುವ ನಮ್ಮ ನೆಚ್ಚಿನ ಬರಹಗಾರನನ್ನು ಯಾವ ಓದುಗನು ಕೇವಲವಾಗಿ ಕಾಣಲು ಎಂದಿಗೂ ಇಷ್ಟಪಡುವುದಿಲ್ಲ. ಲೇಖಕನ ಸ್ಥಾನ ಸಿಗುವುದು ಒಂದು ವರವೇ ಸರಿ. ಆ ಸ್ಥಾನಕ್ಕೆ ತಕ್ಕ ಹಾಗೆಯೇ ನಡೆದುಕೊಳ್ಳುವುದು ಅವರಿಗೂ ಕಷ್ಟವೇ ಸರಿ. ಆದರೂ ತಲೆ ತಗ್ಗಿಸುವಂತಹ ರೀತಿಯಲ್ಲಿ ಯಾವ ಲೇಖಕನು ಎಂದಿಗೂ ವರ್ತಿಸಬಾರದು.

ಬರೆದಂತೆ ಬದುಕಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ನಿಕೃಷ್ಠವಾದ ವ್ಯಕ್ತಿತ್ವ ಮತ್ತು ಮನೋಸ್ಥಿತಿ ಎಂದಿಗೂ ಬರಬಾರದು.

ನೀವು ಹೇಳಬಹುದು ಬರಹಗಾರನು ಮತ್ತೊಬ್ಬ ಮನುಷ್ಯ ಮಾತ್ರ. ಅವನಿಗೂ ಬೇರೆ ಮನುಷ್ಯರಿಗೆ ಇರುವ ದೌರ್ಬಲ್ಯಗಳು ಇರುವುದು ಸಹಜ ಅನ್ನಬಹುದು.

ಆದರೂ ನಾನು ಇಷ್ಟಪಟ್ಟ ಬರಹಗಾರ ಯಾವಾಗಲೂ ಟಾಪ್ ನಲ್ಲಿಯೇ ಇರಬೇಕು ಎನ್ನುವುದೇ ನನ್ನ ಮನದಾಸೆ! ಇದು ಎಲ್ಲಾ ಓದುಗರ ಒಮ್ಮತದ ಆಸೆ ಕೊಡಾ.

ಗೊತ್ತೂ. ಅವನ ಕಷ್ಟಗಳು ನಮಗೆ ಪಾಠವಾಗಬಹುದು. ಅವನ ನೋವುಗಳು ನಮಗೆ ಧಾರಿ ದೀಪವಾಗಬಹುದು. ಅವನ ಅವಮಾನಗಳು ನಮಗೆ ಗುರುವಾಗಬಹುದು. ಆದರೇ ಅವನ ತಪ್ಪುಗಳು?

ಆದರೇ ತಾನೇ ಮತ್ತೊಬ್ಬರನ್ನು ಕೊಲ್ಲುವಂತಹ ಮನಸ್ಸಿರುವವನು ಅದು ಹೇಗೆ ಲೇಖಕನಾಗುವನು ದೇವರೇ ಅನಿಸುತ್ತದೆ??

ಇವನೇನಾ ಇದುವರೆಗೂ ಅಸಂಖ್ಯಾತ ಓದುಗರಿಗೆ ತಂದೆಯಾಗಿ, ಗುರುವಾಗಿ, ಅಣ್ಣನಾಗಿ ಸಮಾಧಾನ ಹೇಳುತ್ತಿದ್ದುದು?

ಇದು ಎಲ್ಲಾ ಸುಳ್ಳೂ ಅನಿಸಿಬಿಟ್ಟ ಕ್ಷಣ ಓದುಗನ ಮನಸ್ಸನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ!

ಈ ರೀತಿಯ ಸನ್ನಿವೇಶ ಮತ್ತೇ ಮುಂದಿನ ದಿನಗಳಲ್ಲಿ ಯಾವುದೇ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲೂ ಮರುಕಳಿಸಬಾರದು. ಇದೇ ನನ್ನ ಹಂಬಲ.

ಬರಹಗಾರರೆಂದರೇ ನಾವುಗಳೆಲ್ಲಾ ಕೊಟ್ಟಿರುವ ಸ್ಥಾನ ಅತಿ ಉನ್ನತವಾದದ್ದು.

ಅದಕ್ಕಾಗಿ ನಾವುಗಳು ನಿರೀಕ್ಷೆ ಮಾಡುವುದು. ಬರೆಯುತ್ತಿದ್ದೇವೆ ಎನ್ನುವ ಕಾರಣಕ್ಕಾದರೂ ಅಕ್ಷರ ಮಾಂತ್ರಿಕರು ಸಮಾಜದಲ್ಲಿ ಸಭ್ಯರಾಗಿ ಬದುಕಲು ಪ್ರಯತ್ನಿಸಿ ಎನ್ನುವುದು ನನ್ನ ಕಳಕಳಿಯ ಸಲಹೆ.

ಯಾಕೆಂದರೇ ನಾವು ಇಷ್ಟಪಡುವುದು ನಿಮ್ಮ ಬರಹಗಳನ್ನು. ನಿಮ್ಮನ್ನೂ ಸಹ ಎಂದು ಪ್ರತ್ಯೇಕವಾಗಿ ಹೇಳಲಾಗದು.!!!