ಶನಿವಾರ, ಡಿಸೆಂಬರ್ 16, 2017

ಇಷ್ಟಪಡುವುದು ನಿಮ್ಮ ಬರಹಗಳನ್ನು

ಕಳೆದ ವಾರ ಎಲ್ಲರೂ ಒಕ್ಕೂರೊಲಿನಿಂದ ಹೇಳಿದ್ದೇ ಹೇಳಿದ್ದು. ನೀ ಮೊದಲು ಟಿ.ವಿ ನೋಡು. ನಾನು ಯಾಕಾಪ್ಪಾ ಹೀಗೆ? ಇವರೆಲ್ಲಾ ಪ್ರೀತಿಯಿಂದ ಟಿ.ವಿ ನ್ಯೂಸ್ ಚಾನಲ್ ನೋಡಲು  ನನ್ನ ದಂಬಾಲು ಬಿದ್ದಿದ್ದಾರೆ? ಎಂದುಕೊಂಡು ಟಿ.ವಿ ಆನ್ ಮಾಡಿದೆ.

ಬ್ರೇಕಿಂಗ್ ನ್ಯೂಸ್ ’ಬೆಳೆಗೆರೆ ಆರೇಸ್ಟ!’.

ನಮ್ಮ ಮನೆ ಸ್ನೇಹಿತರಾದಿ ಕೇಳಿದ್ದೇ. ನೋಡಿದಿಯಾ ನೀನು ಓದುತ್ತಿದ್ದಾ ನೆಚ್ಚಿನ ಲೇಖಕನ ಅಸಲಿ ಮುಖ! ನಿನ್ನ ಲೇಖಕ ಸುಪಾರಿಯಿಂದ ಜೈಲು ಪಾಲು!

ಹೌದು. ಬೆಳೆಗೆರೆ ಬರಹಗಳನ್ನು ಪ್ರೀತಿಪಟ್ಟು ಓದುತ್ತಿದ್ದೇ. ಹಾಯ್ ಬೆಂಗಳೂರ್ ಖರೀದಿಸುತ್ತಿದ್ದುದೆ ರವಿಯ ಖಾಸ್ ಬಾತ್ , ಹಲೋ, ಬಾಟಂ ಐಟ್ಂ, ಸಾಪ್ಟ್ ಕಾರ್ನಾರ್, ಲವಲವಿಕೆ ಮತ್ತು ಧಾರಾವಾಹಿಗಳಿಗಾಗಿ.

ಪೇಪರ್ ಕೊಂಡುಕೊಂಡ ಅರ್ಧ ತಾಸಿನಲ್ಲಿ ಅವರು ಬರೆದಿರುವ ಎಲ್ಲವನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿ ಮುಂದೇನು ಎಂದು ಮುಂದಿನ ವಾರದ ಪತ್ರಿಕೆಗೆ ಕಾಯುತ್ತಿದ್ದಂತಹ ನಿತ್ಯ ಓದುಗನಾಗಿದ್ದೆ. ಅದು ಹಳೆ ಕಾಲ ಬಿಡಿ.

ಅಷ್ಟರ ಮಟ್ಟಿಗೆ ಬೆಳೆಗೆರೆಯ ಅಕ್ಷರಗಳ ಮೋಡಿ ಇಡೀ ಕರ್ನಾಟಕದಲ್ಲಿ ಮನೆ ಮಾಡಿತ್ತು ಎಂದರೇ ಅತಿಶಯೋಕ್ತಿಯಲ್ಲ.

ಅವರೇ ಪತ್ರಿಕೆಗಳಲ್ಲಿ ಬರೆದುಕೊಳ್ಳುತ್ತಿದ್ದಂತೆ, ಕಷ್ಟಪಟ್ಟುಕೊಂಡೇ ಈ ಎತ್ತರಕ್ಕೆ ಬೆಳೆದು, ಕೋಟಿ ಕೋಟಿ ಒಡೆಯನಾಗಿರುವುದೇ ಪ್ರತಿಯೊಬ್ಬರಿಗೆ ಮಾದರಿಯಾಗಿತ್ತು. ಕಷ್ಟಪಟ್ಟು ಸಾಧಿಸಿದರೇ ಯಾವುದು ದೊಡ್ಡದಲ್ಲ! ಜೀವನದಲ್ಲಿ ಬೆಳೆಗೆರೆಯಂತೆ ಬೆಳೆಯಬೇಕು ಎಂದುಕೊಂಡ ಅದೇಷ್ಟೋ ಹದಿಹರೆಯದ ಮನಸ್ಸುಗಳಿಗೆ ಈ ಸುದ್ದಿ ಬಲೂನಿಗೆ ಸೂಜಿ ಚುಚ್ಚಿದಂತಾಗಿದೆ.

ಇಂದಿಗೂ ಕನ್ನಡದಲ್ಲಿ ಹೆಚ್ಚು ಪುಸ್ತಕಗಳು ಮಾರಾಟವಾಗುವುದು ಮತ್ತು ಆಲ್ ಟೈಂ ದೀ ಬೆಸ್ಟ್ ಎಂದರೇ.. ಎಸ್.ಎಲ್ ಬೈರಪ್ಪ ಮತ್ತು ಬೆಳೆಗೆರೆಯ ಪುಸ್ತಕಗಳು.

ಜನಪ್ರಿಯ ಲೇಖಕರ ಸಾಲಿನಲ್ಲಿ ಬೆಳೆಗೆರೆ ಹೆಸರು ನಿತ್ಯ ಮುಂದು.

ಅವರ ಅಕ್ಷರಗಳ ಸಾಲಿಗೆ ಕರಗಿ ನೀರಾಗದವರು ಯಾರು ಇಲ್ಲ. ಬರೆದುಕೊಂಡೇ ಈ ಮಟ್ಟಕ್ಕೆ ಬೇಳೆದಿದ್ದಾರೆ ಎಂದೇ ಸಾಮಾನ್ಯ ಓದುಗನಿಗೆ ಹೆಮ್ಮೆ.

ಪ್ರತಿ ಪುಸ್ತಕದಲ್ಲಿ ಅವರೇ ಹೇಳುತ್ತಿದ್ದರೂ. ನಾನು ೧ ರೂಪಾಯಿ ಪೆನ್ನು ಇಟ್ಟುಕೊಂಡು ಬಂದವನು. ಓದುಗರು ಕೊಟ್ಟ ಹತ್ತು ಹತ್ತು ರೂಪಾಯಿ ಪೇಪರ್ ದುಡ್ಡೇ ಇಂದು ನಾನು ಶಾಲೆ, ಟಿವಿ,ಸಿ.ಡಿ, ರೇಡಿಯೋ ಇತ್ಯಾದಿ ಎಲ್ಲಾ ಕಟ್ಟುವಂತೆ ಮಾಡಿದೆ.

ಪ್ರತಿ ರೂಪಾಯಿಗೂ ಪೈಸಾ ವಸೂಲ್ ಮಾಡುವಂತಹ ಬರಹ, ಕಾದಂಬರಿ, ಕಥೆಗಳನ್ನು ಕೊಡುತ್ತಿನಿ. ನನ್ನನ್ನು ಬರವಣಿಗೆಯಲ್ಲಿ ಯಾರು ಎಂದಿಗೂ ಮೀರಿಸಲೂ ಸಾಧವಿಲ್ಲ. ಟೈಂ ಇಟ್ಟುಕೊಂಡು ಬರೆಯುವವನು ನಾನೊಬ್ಬನೇ. ಒಂದೇ ಎರಡೇ ಅವರೇ ಅವರ ಬಗ್ಗೆ ಬರೆದು(ಕೊಚ್ಚಿ)ಕೊಳ್ಳುತ್ತಿದ್ದದ್ದು. ಅದೇ ನಮಗೆಲ್ಲಾ ಹೆಚ್ಚು ಇಷ್ಟಪಟ್ಟು ಓದುವಂತೆ ಮಾಡುತ್ತಿತ್ತು.

ಪ್ರತಿ ಓದುಗನಿಗೂ ಹೊಟ್ಟೆ ಕಿಚ್ಚಾಗುವಂತೆ ಬರೆಯುತ್ತಿದ್ದರೂ.

ಪ್ರತಿಯೊಬ್ಬರೂ ತಮ್ಮ ತಮ್ಮೊಳಗೆ ಗೊತ್ತಿಲ್ಲದೆ ಬೆಳೆಗೆರೆ ಶೈಲಿಯನ್ನು ರೂಢಿಸಿಕೊಳ್ಳುತ್ತಿದ್ದರು.

ಅಷ್ಟೊಂದು ಅಭಿಮಾನಿಗಳನ್ನು ಹೊಂದಿದ್ದರೂ ಎಂದರೇ ಅದು ಕೇವಲ ಅವರ ಅಕ್ಷರಗಳು ಮತ್ತು ಬರಹಗಳಿಂದ ಮಾತ್ರ.

ದೂರದಲ್ಲಿರುವ ಓದುಗನಿಗೆ ಬರೆಯುವ ಬರಹಗಾರ ಹತ್ತಿರವಾಗುವುದು ಅವನ ಬರಹಗಳಿಂದ ಮಾತ್ರ.

ಸಾಮಾನ್ಯ ಓದುಗ ಪ್ರೀತಿಯಿಂದ ತಾನು ಓದುವ ಪ್ರತಿ ಅಕ್ಷರದ ಮೂಲಕ ಅದನ್ನು ಬರೆದ ಕತೃವಿನ ಬಗ್ಗೆ ಬೇರೊಂದು ರೂಪವನ್ನು ತನ್ನ ಮನದಲ್ಲಿಯೇ ಕಟ್ಟಿಕೊಂಡುಬಿಡುತ್ತಾನೆ.

ಇಂದು ಅಂಥ ಎಲ್ಲಾ ಸಹಸ್ರ ಸಹೃದಯಗಳಿಗೆ ಅಘಾತವಾದ ದಿನ!

ಮೊದಲಿನಿಂದಲೂ ಸುತ್ತ-ಮುತ್ತ, ಅಲ್ಲಿ-ಇಲ್ಲಿ ಬೆಳೆಗೆರೆ ಹಾಗೆಯೇಂತೆ. ಹೀಗೆಯಂತೆ. ಎಂಬ ಗಾಳಿ ಸುದ್ಧಿಗಳು ಕಿವಿಗೆ ಬಿದ್ದರೂ. ನಾವು ಬಿಡು ಗುರು! ನದಿ ಮೊಲ ಋಷಿ ಮೊಲ ಯಾಕ್ ಬೇಕು?  ಬೆಳೆದವರನ್ನು ಕಂಡರೇ ಸಾವಿರಾ ಗಾಸಿಫ್ ಗಳ ಜಮಾನ ಇದು. ಬಿಡು ಗುರು! ಎಂದುಕೊಂಡು  ಪುನಃ ಹೆಚ್ಚು ಓದುತ್ತಿದ್ದಿವಿ.

ಆಗ ಕಡೆಗಣಿಸಿದ್ದವರಿಗೆ ಹೃದಯ ಭಾರವಾದ ಸಮಯ.

ಇದೇನಾ ನಮ್ಮ ಸೂಪರ್ ಪವರ್ ಪುಲ್ ಲೇಖಕನ ಮುಖ ಟಿ.ವಿ ಪರದೆಯ ಮೇಲೆ? ತಾನೇ ಸುಪಾರಿ ಕಿಲ್ಲಾರಗಳ ಬಗ್ಗೆ ಹೆಡ್ ಲೈನ್ ಸುದ್ಧಿ ವರದಿ ಮಾಡುತ್ತಿದ್ದವರು. ಈಗ ತಮ್ಮದೇ ಸುದ್ಧಿಯನ್ನು ತನ್ನ ಪೇಪರ್ ನಲ್ಲಿಯೇ ಕಾಣಬೇಕಾಯಿತಲ್ಲಾ!!

ಓ ಗಾಡ್!!

ಅಯ್ಯೋ ಇವರೇನಾ ನಾವು ಇಷ್ಟಪಟ್ಟು ಓದುತ್ತಿದ್ದ ಬರಹಗಾರ?  ಎಂದು ಬೇಸರವಾಯಿತು.

ಪ್ರತಿ ಬರಹಗಾರರು ಬರದಂತೆ ಬದುಕವವರು ಎಂದುಕೊಂಡಿದ್ದು ನಮ್ಮ ಮುಗ್ಧ ಮನಸ್ಸು ಎನಿಸಿತು.

ಓದುವುದು ಬೇರೆ. ಬರೆಯುವುದು ಬೇರೆ. ಬದುಕುವುದು ಬೇರೆಯೇ ಅನಿಸಿತು.

ಬರಹಗಾರ ಎಂದರೇ ಸರಸ್ವತಿಯ ಪುತ್ರನೇ ಸರಿ. ಓದುಗನು ಇಷ್ಟಪಡುವಂತಹ ಕಲ್ಪನೆಯ ಜಗತ್ತನೆ ಸೃಷ್ಟಿ ಮಾಡಿ. ಭಾವನಾ ಪ್ರಪಂಚದಲ್ಲಿ ಸಂಬಂಧಗಳನ್ನು  ಕಟ್ಟಿಕೊಟ್ಟು ನಮ್ಮನ್ನೇಲ್ಲಾ ಗೆಲ್ಲುವಂತಹ ಬರಹಗಳನ್ನು ನೀಡುವ ಅಕ್ಷರಗಳ ಮಾಂತ್ರಿಕನಿಗೆ ಮೀಗಿಲಾದವನು ಯಾರು ಇಲ್ಲ ಎಂದುಕೊಂಡವರು ನಾವು.

ಆದರೇ.....!

ನಾನಂತೂ ಇದುವರೆಗೂ ಯಾವುದೇ ಲೇಖಕರನ್ನು ಮುಖತಃ ಬೇಟಿ ಮಾಡಿಲ್ಲ. ನನಗೆ ಹಾಗೇ ಬೇಟಿ ಮಾಡಲು ಇಷ್ಟವು ಆಗುವುದಿಲ್ಲ. ಯಾಕೆಂದರೇ ಅವರನ್ನು ಅವರು ಬರೆದಿರುವ ಪುಸ್ತಕಗಳಲ್ಲಿ ಕಂಡುಕೊಳ್ಳಲು ಹೆಚ್ಚು ಇಷ್ಟಪಡುತ್ತಿನಿ.

ಹಾಗೆಯೇ ನಾವು ಓದುವ ನಮ್ಮ ನೆಚ್ಚಿನ ಬರಹಗಾರನನ್ನು ಯಾವ ಓದುಗನು ಕೇವಲವಾಗಿ ಕಾಣಲು ಎಂದಿಗೂ ಇಷ್ಟಪಡುವುದಿಲ್ಲ. ಲೇಖಕನ ಸ್ಥಾನ ಸಿಗುವುದು ಒಂದು ವರವೇ ಸರಿ. ಆ ಸ್ಥಾನಕ್ಕೆ ತಕ್ಕ ಹಾಗೆಯೇ ನಡೆದುಕೊಳ್ಳುವುದು ಅವರಿಗೂ ಕಷ್ಟವೇ ಸರಿ. ಆದರೂ ತಲೆ ತಗ್ಗಿಸುವಂತಹ ರೀತಿಯಲ್ಲಿ ಯಾವ ಲೇಖಕನು ಎಂದಿಗೂ ವರ್ತಿಸಬಾರದು.

ಬರೆದಂತೆ ಬದುಕಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ನಿಕೃಷ್ಠವಾದ ವ್ಯಕ್ತಿತ್ವ ಮತ್ತು ಮನೋಸ್ಥಿತಿ ಎಂದಿಗೂ ಬರಬಾರದು.

ನೀವು ಹೇಳಬಹುದು ಬರಹಗಾರನು ಮತ್ತೊಬ್ಬ ಮನುಷ್ಯ ಮಾತ್ರ. ಅವನಿಗೂ ಬೇರೆ ಮನುಷ್ಯರಿಗೆ ಇರುವ ದೌರ್ಬಲ್ಯಗಳು ಇರುವುದು ಸಹಜ ಅನ್ನಬಹುದು.

ಆದರೂ ನಾನು ಇಷ್ಟಪಟ್ಟ ಬರಹಗಾರ ಯಾವಾಗಲೂ ಟಾಪ್ ನಲ್ಲಿಯೇ ಇರಬೇಕು ಎನ್ನುವುದೇ ನನ್ನ ಮನದಾಸೆ! ಇದು ಎಲ್ಲಾ ಓದುಗರ ಒಮ್ಮತದ ಆಸೆ ಕೊಡಾ.

ಗೊತ್ತೂ. ಅವನ ಕಷ್ಟಗಳು ನಮಗೆ ಪಾಠವಾಗಬಹುದು. ಅವನ ನೋವುಗಳು ನಮಗೆ ಧಾರಿ ದೀಪವಾಗಬಹುದು. ಅವನ ಅವಮಾನಗಳು ನಮಗೆ ಗುರುವಾಗಬಹುದು. ಆದರೇ ಅವನ ತಪ್ಪುಗಳು?

ಆದರೇ ತಾನೇ ಮತ್ತೊಬ್ಬರನ್ನು ಕೊಲ್ಲುವಂತಹ ಮನಸ್ಸಿರುವವನು ಅದು ಹೇಗೆ ಲೇಖಕನಾಗುವನು ದೇವರೇ ಅನಿಸುತ್ತದೆ??

ಇವನೇನಾ ಇದುವರೆಗೂ ಅಸಂಖ್ಯಾತ ಓದುಗರಿಗೆ ತಂದೆಯಾಗಿ, ಗುರುವಾಗಿ, ಅಣ್ಣನಾಗಿ ಸಮಾಧಾನ ಹೇಳುತ್ತಿದ್ದುದು?

ಇದು ಎಲ್ಲಾ ಸುಳ್ಳೂ ಅನಿಸಿಬಿಟ್ಟ ಕ್ಷಣ ಓದುಗನ ಮನಸ್ಸನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ!

ಈ ರೀತಿಯ ಸನ್ನಿವೇಶ ಮತ್ತೇ ಮುಂದಿನ ದಿನಗಳಲ್ಲಿ ಯಾವುದೇ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲೂ ಮರುಕಳಿಸಬಾರದು. ಇದೇ ನನ್ನ ಹಂಬಲ.

ಬರಹಗಾರರೆಂದರೇ ನಾವುಗಳೆಲ್ಲಾ ಕೊಟ್ಟಿರುವ ಸ್ಥಾನ ಅತಿ ಉನ್ನತವಾದದ್ದು.

ಅದಕ್ಕಾಗಿ ನಾವುಗಳು ನಿರೀಕ್ಷೆ ಮಾಡುವುದು. ಬರೆಯುತ್ತಿದ್ದೇವೆ ಎನ್ನುವ ಕಾರಣಕ್ಕಾದರೂ ಅಕ್ಷರ ಮಾಂತ್ರಿಕರು ಸಮಾಜದಲ್ಲಿ ಸಭ್ಯರಾಗಿ ಬದುಕಲು ಪ್ರಯತ್ನಿಸಿ ಎನ್ನುವುದು ನನ್ನ ಕಳಕಳಿಯ ಸಲಹೆ.

ಯಾಕೆಂದರೇ ನಾವು ಇಷ್ಟಪಡುವುದು ನಿಮ್ಮ ಬರಹಗಳನ್ನು. ನಿಮ್ಮನ್ನೂ ಸಹ ಎಂದು ಪ್ರತ್ಯೇಕವಾಗಿ ಹೇಳಲಾಗದು.!!!

ಭಾನುವಾರ, ನವೆಂಬರ್ 12, 2017

ಯಾಕೆ ಬರೆಯುತ್ತಿವಿ ಎಂದರೇ

ನಾವು ಯಾಕೆ ಬರೆಯುತ್ತಿವಿ ಎಂದರೇ ನಮ್ಮ ತೃಪ್ತಿಗೆ ಎನ್ನಬಹುದು. ಅದು ಬಿಟ್ಟು ಮತ್ತೊಬ್ಬರಿಗಾಗಿ ಬರೆಯುತ್ತಿದ್ದೇವೆ ಅಂದರೇ ನಮ್ಮನ್ನು ನಾವು ಕಳೆದುಕೊಂಡಂತೆಯೇ?

ಹಾಗೆಯೇ ಅನಿಸುತ್ತಿದೆ. ಬರವಣಿಗೆಯಾಗಲಿ ಇನ್ನು ಏನೇ ಆಗಲಿ ನಮಗೆ ಖುಷಿ ಕೊಟ್ಟಂತೆ ಸಾಗಬೇಕು. ಮತ್ತೊಬ್ಬರ ಖುಷಿಗಾಗಿ ಎನ್ನುವುದು ಮನದ ಮೊಲೆಯಲ್ಲಿ ಕೂತರೇ ಮುಗಿಯಿತು. ನಮ್ಮ ಯೋಚನೆ ಮತ್ತು ವರ್ತನೆಯ ದಾಟಿಯೇ ಬದಲಾಗಿಬಿಡುತ್ತದೆ.

ಆ ಹುಡುಗಿ ಹೇಳುತ್ತಿದ್ದಳು ಇಂದಿನ ಯುವಕರು ಇಷ್ಟಪಡುವಂತದ್ದನ್ನು ನೀ ಏನಾದರೂ ಬರೆಯಬೇಕು. ಬರೀ ನಿನ್ನ ವಯಸ್ಸಿನ  ನಿನ್ನ ಕಾಲದ ಕತೆಯನ್ನು ಬರೆದರೇ ಓದುವವರು ಯಾರು? ಅವನು ಹೇಳಿದ - ಅಲ್ಲಾ ನನಗೆ ತಿಳಿದಿದ್ದೂ ನನಗೆ ಗೊತ್ತಿದ್ದು ಅನುಭವಿಸಿದ್ದನ್ನು ಮಾತ್ರ ನಾ ಬರೆಯಬಲ್ಲೇ. ಕತೆಯಾಗಿ ಹೇಳಬಲ್ಲೇ! ಕೇವಲ ಯಾರಿಗೋ ಇಷ್ಟ ಆಗಲಿ ಎಂದು ಸುಳ್ಳು ಸುಳ್ಳೆ ಕತೆ ಕಟ್ಟಿ ಎಷ್ಟು ಅಂಥ ನಾ ಬರೆಯಬಲ್ಲೆ ? ಎಷ್ಟು ಅಂಥ ನಾನು ನಾನಾಗದೇ ವರ್ತಿಸಬಲ್ಲೇ?

ನಮ್ಮ ನಮ್ಮ ಅನುಭವದ ಮೊಟೆಯೇ ನಮ್ಮ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ನಾವು ನಾವಿದ್ದಾಗ ಮಾತ್ರ ನಮಗೆ ಬೆಲೆ. ನಾವು ಮತ್ಯಾರೋ ನಾವಾಗಲಾರೆವು. ಅದು ನಾಟಕ ಎಂದು ಒಂದು ನಿಮಿಷದಲ್ಲಿಯೇ ಗೊತ್ತಾಗುತ್ತದೆ.

ಈ ಹುಡುಗಿಯ ಕೋರಿಕೆಯೆಂದರೇ ಭಯಂಕರ ಸುಂದರವಾದ ಮತ್ತು ಪ್ರತಿಯೊಬ್ಬರೂ ಮನಸೋತು ಕರಗಿ ಹೋಗುವಂತಹ, ತಾನು ಇಷ್ಟ ಪಟ್ಟು ಓದುವ, ತಾನು ಹೀಗಾಗಲೇ ನೋಡಿರುವಂತ ಸಿನಿಮಾ ರೀತಿಯ ಪ್ರೇಮ ಕತೆ ಬರೀಬೇಕೆಂಬುದು.

ಹುಚ್ಚುಕೋಡಿಯ ಕನಸು!!

ಅಂಥ ಕತೆಯನ್ನು ಹತ್ತಿರದಿಂದ ನೋಡಿರಬೇಕು. ಅಥವಾ ಅಂಥ ಪ್ರೇಮವನ್ನು ಅವನೇ ಅನುಭವಿಸಿದ್ದರೇ ಸುಲಭವಾಗಿ ಕತೆಯಾಗಿಸಬಹುದು. ಎಷ್ಟೇ ಕಲ್ಪಿಸಿಕೊಂಡರೂ ಸ್ವ ಅನುಭವವಿಲ್ಲದ ಕತೆ ಕತೆಯಲ್ಲಾ ಬಿಡಿ!

ಯಾವುದೇ ಕತೆಯನ್ನು ಎಷ್ಟಂತಾ ಕಲ್ಪಿಸಿಕೊಂಡು ಬರೆಯಲಾಗುತ್ತೇ? ಯಾರಾದರೂ ಓದಿದರೇ ಮನಕರಗುವುದು ಪಕ್ಕಾ ಸುಳ್ಳು. ಮೂಲ ಕತೆಯ ಎಳೆ ತುಂಬ ಬಲವಾಗಿದ್ದಾರೆ ಸಾಹಿತ್ಯಕ ರಸವನ್ನು ಬಳಸಿ ಮತ್ತಷ್ಟು ಸುಂದರವಾಗಿಸಬಹುದು. ಬರೀ ಪದಗಳ ಆಭರಣದಿಂದ ಉನ್ನತ ಕೃತಿಯಾಗುವುದಿಲ್ಲ ಅಲ್ಲವಾ? ಆದರೇ ಆ ಅನುಭವ ಅಂಥ ಘಟನೆಗೆ ಲೇಖಕ ಯಾವುದೋ ಸಮಯದಲ್ಲಿ ಸಾಕ್ಷಿಯಾಗಿರಬೇಕು.

ಆಗಲೇ ಗೃಹಭಂಗದಂತ ಕಾದಂಬರಿ ಸಿಗುವುದು!

ಕೇಳಿದ್ದನೆಲ್ಲಾ ಕೃತಿಯಾಗಿಸುವುದಾಗಿದ್ದಾರೇ ಕಥೆಗಳಿಗೆ, ಕಾದಂಬರಿಗಳಿಗೆ ಬೆಲೆ ಇರುತ್ತಿರಲಿಲ್ಲ ಬಿಡಿ. ಕೃತಿಯೆಂದರೇ ಅದು ಯಾವುದೋ ಒಂದು ಗೊತ್ತಿರದ ಅನುಭೂತಿಯನ್ನು ಓದುಗನಿಗೆ ಸಹೃದಯನಿಗೆ ಒದಗಿಸುವ ಆಕಾರ.

ಗಮನಿಸಿ ಹೆಚ್ಚು ಮೆಚ್ಚುಗೆಯ ಪ್ರತಿಯೊಂದು ಪುಸ್ತಕವಾಗಲಿ, ಸಿನಿಮಾವಾಗಲಿ, ಕತೆಯಾಗಲಿ ಅದರಲ್ಲಿ ಏನೋ ಒಂದು ವಿಭಿನ್ನವಾದ ಅಂಶವನ್ನು ಹೊಂದಿರುತ್ತವೆ. ಯಾವುದೋ ಒಂದು ಹೊಸ ಅಲೆಯ ಸೆಲೆ ಇರುತ್ತದೆ. ಅದು ಪ್ರತಿಯೊಬ್ಬರಿಗೂ ಅನುಭವ ಜನ್ಯವಾಗಿರುತ್ತದೆ. ಪ್ರತಿಯೊಬ್ಬನ ಹೃದಯವನ್ನು ಸೂರೆ ಮಾಡಿರುತ್ತದೆ. ಅದು ಪ್ರತಿಯೊಬ್ಬನನ್ನು ಅದೇ ಲೋಕಕ್ಕೆ ಎಳೆದುಕೊಂಡಿರುತ್ತದೆ. ಸಹೃದಯನನ್ನು ಕಥಾ ಅಂದರದೊಳಗೆ ಪಾಲು ಮಾಡಿಕೊಂಡು ಬರುವ ಪಾತ್ರಗಳನ್ನು ಕಣ್ಣಿಂದ ಮನದಿಂದ ನೋಡುವಂತೆ ಮಾಡುತ್ತದೆ.

ಈ ರೀತಿಯಲ್ಲಿ ಮನಸ್ಸನ್ನೇ ಗೆಲ್ಲುವ ಕೃತಿಯಲ್ಲಿ ಮತ್ತೇನೇನೋ ಇರುತ್ತದೆ. ಅದು ಕತೃನ ನಿಜವಾದ ತಾಕತ್ತೇ ಸರಿ. ಅಂಥ ಕೃತಿಗಳು ಬೆರಳೆಣಿಕೆಯೇ ಸರಿ. ಅದು ನವ ಮಾಸದ ಪ್ರಸವವೇ ಸರಿ.

ಅದು ಹೇಗೆ ಪುಸ್ತಕ ಲೇಖಕಕರು ಚಿಂತಿಸುತ್ತಾರೆ? ಆ ರೀತಿಯಲ್ಲಿ ಕೃತಿಗಳನ್ನು ಎಲ್ಲರೂ ಮೆಚ್ಚುವ ರೀತಿಯಲ್ಲಿ ಅದು ಹೇಗೆ ಓದಿಸುತ್ತಾರೋ.. ಅದು ಆ ಬರಹಗಾರನಿಗೆ ದೇವರು ಕೊಟ್ಟ ವರವೇ ಸರಿ.

ನಮಗೂ ಎಲ್ಲಾ ಪದಗಳು ಗೊತ್ತು. ನಾವು ಕನ್ನಡ ಮತ್ತು ಬೇರೆ ಬಾಷೇಗಳನ್ನು ಚೆನ್ನಾಗಿಯೇ ಮಾತನ್ನಾಡುತ್ತವೆ. ಆದರೇ ಪದಗಳ ಜಾದುವನ್ನು ಕವಿ, ಕಾದಂಬರಿಕಾರ ದುಡಿಸಿಕೊಳ್ಳುವಷ್ಟು ನಾವುಗಳೆಂದು ಉಪಯೋಗಿಸಲಾರೆವು.

ಲೇಖಕನ ಅನುಭವವೇ ನಮ್ಮ ಅನುಭವವಾಗಿ ಓದುತ್ತೇವೆ. ಪ್ರತಿಯೊಂದು ಸಾಲನ್ನು ನಮ್ಮದೇ ಎನ್ನುವಂತೆ ಪ್ರೀತಿಯಿಂದ ಓದುವಂತೆ ಮಾಡುವ ಕೌಶಲ್ಯ ಲೇಖಕನದ್ದಾಗಿರುತ್ತದೆ.

ಪ್ರತಿ ಪಾತ್ರವನ್ನು ಅದು ಹೇಗೆ ಒಬ್ಬನೇ ಕತೃ ರಚಿಸುತ್ತಾನೋ ದೇವರಿಗೆ ಗೊತ್ತು. ಅದಕ್ಕೆ ಹೇಳುವುದು ಅವರುಗಳೆಲ್ಲ ಸರಸ್ವತಿ ಪುತ್ರರೆಂದು.

ಹೊಸ ಹೊಸತನದ ಕತೆ ಕವನಗಳನ್ನು ಕವಿಗಳು ಅದು ಹೇಗೆ ಮನದಲ್ಲಿಯೇ ಕಟ್ಟಿ ಪದಗಳಲ್ಲಿ ಹೇಳುತ್ತಾರೆ. ಬರದಿದ್ದೆಲ್ಲಾ ಸರ್ವಾಕಲಿಕ ಸತ್ಯವಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ.  ಪ್ರತಿ ಕೃತಿಯು ಎಂದೆಂದಿಗೂ ಎಲ್ಲಾ ಕಾಲಕ್ಕೂ ದಕ್ಕುತ್ತದೆ. ಯಾವಾಗ ಓದಿದರೂ, ಯಾವಾಗ ನೋಡಿದರು ಏನೊಂದು ಮುಕ್ಕಾಗದೆ ಹಾಗೆಯೇ ಹೊಸ ಹೊಸ ಅನುಭವವನ್ನು ಪ್ರತಿಯೊಬ್ಬರಿಗೂ ಕೊಡುತ್ತದೆ.

ಇಂಥ ಕೃತಿಗಳೇ ಎವರ್ ಗ್ರೀನ್ ಎಂದು ಕರೆಯುವುದು.

ಮನುಷ್ಯ ಬುದ್ಧಿವಂತನಾಗಿದ್ದಿನಿಂದ ತನಗೆ ಅನಿಸಿದ ಘಟನೆ, ನೋಟಗಳನ್ನು ಬೇರೆಯದೇ ರೀತಿಯಲ್ಲಿ ವಿಶ್ಲೇಷಕ ದೃಷ್ಟಿಯಲ್ಲಿ ತನ್ನ ನೋಟದಲ್ಲಿ ಚಿತ್ರಿಸುವುದರಿಂದಲೇ ಓದುಗನಿಗೆ ದಟ್ಟವಾಗಿ ಕಾಡುವುದು. ನಮ್ಮಂಥಹ ಸಾಮಾನ್ಯರುಗಳು ನಿತ್ಯ ನೂರು ಘಟನೆಗಳನ್ನು ನೋಡಿರುತ್ತೇವೆ. ನಾವುಗಳು ನಿತ್ಯ ನೂರು ಲವ್ ಸ್ಟೋರಿಗಳನ್ನು ಕೇಳಿರುತ್ತೇವೆ. ಆದರೇ ಅದೇ ನಾವುಗಳು ಹೇಳಿದರೇ ಯಾರು ಕೇಳುತ್ತಾರೆ. ನಾವು ಹೇಳಿದರೇ ಅದು ಹೇಳಿಕೆಯಾಗುತ್ತದೆ ಅಷ್ಟೇ.

ಆದರೇ ಅದೇ ಕವಿ, ಕಾದಂಬರಿಕಾರ, ಕಥೆಗಾರ, ಸಿನಿಮಾ ನಿರ್ದೇಶಕನ ಮನದ ಮೊಸೆಯಲ್ಲಿ ಕೇವಲ ಕತೆಯಾಗದೇ ಅದೇ ಒಂದು ಕೃತಿಯಾಗಿ ದಿವ್ಯ ದರ್ಶನವನ್ನು ನೀಡುತ್ತದೆ.

ಓದುವ ನೋಡುವ ಮನಸುಗಳಿಗೆ ಮನಸೋರೆಯಾಗುವುದೇ ಸರಿ. ಅದಕ್ಕೆ ಎಂಥೆಂತ ಕೃತಿಗಳು ಇಂದು ಮುಂದು ಅಚ್ಚಳಿಗಯದೇ ಎಂದೆಂದೂ ಉಳಿಯುವುದು.

ಈ ಕೃತಿಗಳು ನಮ್ಮ ಬಾಳಿಗೆ ದಿವ್ಯ ಜ್ಯೋತಿಯಾಗಿ ಹೊಸ ಕಿರಣವಾಗಿ ನಿತ್ಯ ಕಾಡುತ್ತವೆ. ಅವರ ಅನುಭವವನ್ನು ನಮ್ಮದಾಗಿಸಿಕೊಳ್ಳುವ ಮನಸ್ಸು ಮಾತ್ರ ಇದ್ದಾರೆ ಸಾಕು. ನಾವು ಕಂಡ ಘಟನೆಗಳು ಅನುಭವಗಳನ್ನು ಆ ಲೇಖಕನ ಭಾಷೇಯಲ್ಲಿ ಓದಿದರಂತೂ ಕೇಳುವುದೇ ಬೇಡ ಪರಮಾನಂದವಾಗಿಬಿಡುತ್ತದೆ.

ಆದಕ್ಕೆ ನಾವು ನೋಡಿದ ಎಷ್ಟೋ ಸಿನಿಮಾ ಓದಿದ ಎಷ್ಟೊ ಕವನಗಳು, ಕತೆ-ಕಾದಂಬರಿಗಳು ದಿ ಬೇಸ್ಟ್ ಎಂದು ಜೀವಮಾನದಲ್ಲಿ ಯಾವಾಗಲೂ ಮರೆಯದಂತೆ ಮನದಲ್ಲಿ ಉಳಿದುಬಿಡುತ್ತವೆ.

ನೋಡಬೇಕು. ಆ ಗೆಳೆಯ ಆ ಹುಡುಗಿಯ ಕೋರಿಕೆಯನ್ನು ಅದು ಯಾವಾಗ ಈಡೇರಿಸುತ್ತಾನೋ...!

ಶನಿವಾರ, ಸೆಪ್ಟೆಂಬರ್ 9, 2017

ನಾವೇ ಬದಲಿಸಬೇಕು

ಇಂದು ನಾವು ಎಂಥ ದಿನಗಳಲ್ಲಿ ಬದುಕುತ್ತಿದ್ದೇವೆ ಎಂದರೇ ಯಾವುದೇ ಭರವಸೆಯೇ ಇಲ್ಲದಂತಾಗುತ್ತದೆ.

ನಮ್ಮ ಸರ್ಕಾರ, ಸಮಾಜ, ನಾಯಕರು, ಹತ್ತಿರದವರು ಹೀಗೆ ಪ್ರತಿಯೊಂದು ವ್ಯವಸ್ಥೆಯ ವಿರುದ್ಧವಾಗಿದ್ದವೇನೋ ಅನಿಸುತ್ತದೆ.

ನ್ಯಾಯವನ್ನು ಕೇಳುವವರೆ ಇಲ್ಲ. ಜನರ ಬಗ್ಗೆ, ಅವರ ಆಸೆಗಳ ಬಗ್ಗೆ ನಗಣ್ಯ ಕನಿಕರವನ್ನು ಪ್ರದರ್ಶಿಸುವ ವಾತಾವರಣ.

ಇಲ್ಲಿ ಬದುಕ ಬೇಕೆಂದರೇ ಇವುಗಳನ್ನೆಲ್ಲಾ ಅನುಭವಿಸಿಯೇ ತೀರಬೇಕು ಎನ್ನುವ ಮಟ್ಟಿಗೆ.

ಮನುಷ್ಯ ಮನುಷ್ಯರು ಬಾಳಲು ಇಷ್ಟೆಲ್ಲಾ ತಿಕ್ಕಾಟಗಳು ಬೇಕಾ ಎನಿಸುತ್ತದೆ.

ಒಂದು ರಾಜ್ಯದಲ್ಲಿರುವವರೆಲ್ಲ ಒಂದೇ ಎಂಬ ಭಾವನೆಯನ್ನು ಮರೆತಂತೆ ಅಕ್ಕಪಕ್ಕದವರ ಮೇಲೆ ನಿತ್ಯ ಹಲ್ಲು ಮಸೆಯುವುದು.

ಪ್ರತಿಯೊಂದಕ್ಕೂ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ.

ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಅಕ್ಷೇಪ. ವಿರೋಧ ಪಕ್ಷಗಳ ಮೇಲೆ ರೂಲಿಂಗ ಪಾರ್ಟಿಯ ಪ್ರಲಾಪ. ಅವರು ಮಾಡಿದ್ದು ಇವರಿಗೆ ಸರಿ ಬರಲ್ಲ. ಇವರು ಮಾಡಿದ್ದು ಅವರಿಗೆ ಸರಿ ಬರಲ್ಲ.

ಒಬ್ಬರನ್ನೊಬ್ಬರೂ ಕೇವಲ ಹಳಿಯುವುದರಲ್ಲಿಯೇ ನಿತ್ಯ ದಿನದೂಡುತ್ತಾರೆ. ಜನ ಸಾಮನ್ಯನ ಕೂಗು ಯಾರಿಗೂ ಬೇಡವಾದ ವಿಷಯ.

ಯಾವುದೇ ಸಮಸ್ಯೆಗಳನ್ನು ಪರಿಪೂರ್ಣವಾಗಿ ಬಗೆಹರಿಸುವುದರಲ್ಲಿ ಯಾರೊಬ್ಬರೂ ಪ್ರಯತ್ನಿಸುವುದಿಲ್ಲ. ಕೇಳಿದರೇ ಪುನಃ ವೈಕ್ತಿಕವಾಗಿ ಪ್ರಶ್ನೆ ಮಾಡಿದವರ ಮೇಲೆ ಪ್ರತಿ ದಾಳಿ. ನೀನು ಅಂದು ಹಾಗೆ ಮಾಡಿದ್ದೀಯಾ. ನೀನಗೆ ಯಾವ ಅರ್ಹತೆಯಿದೆ ಪ್ರಶ್ನೇ ಕೇಳಲು? ನೀವು ಮಾಡಿದ್ದೀರಾ ನಾವು ಮಾಡುತ್ತೇವೆ. ಹಾಗೆ ಹೀಗೆ ಎಂದು ನಾವು ಮಾಡಿದ್ದೇ ಸರಿ ಎಂಬ ಧಿಮಾಕನ್ನು ಅಧಿಕಾರಶಾಹಿಯಲ್ಲಿರುವವರೆಲ್ಲ ವರ್ತಿಸುತ್ತಿದ್ದಾರೆ.

ಜನ ಮೆಚ್ಚುವ ಕೆಲಸ ಮಾಡಲಿ ಎಂದು ಪ್ರಜಾಪ್ರಭುತ್ವದಲ್ಲಿ ಜನರು ಸರ್ಕಾರವನ್ನು ಆರಿಸುವುದು. ಅದು ಬಿಟ್ಟು ಒಂದು ಜಾತಿಯವರನ್ನೇ ಒಲೈಸುವ ರೀತಿಯಲ್ಲಿ ಅವರುಗಳಿಗೆ ಮಾತ್ರ ಸರ್ಕಾರಿ ಯೋಜನೆಗಳನ್ನು ರೂಪಿಸುವುದು ಯಾವ ನ್ಯಾಯ.

ಪ್ರತಿಯೊಂದು ಪಕ್ಷಗಳ ನಾಯಕರು ಬಾಯಲ್ಲಿ ಜಾತ್ಯತೀತೆಯನ್ನು ಜಪ ಮಾಡುತ್ತಾರೆ. ಆದರೇ ಕ್ರೀಯಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಪುನಃ ಈ ಜಾತಿ ಜಗಳಗಳಲ್ಲಿ.

ಇದನ್ನು ಯಾರು ನಿರೀಕ್ಷೆ ಮಾಡಲಾರರು. ಇನ್ನೂ ಈ ದೇಶದಲ್ಲಿ ಜಾತಿಯ ಜಗ್ಗಾಟ ನಿತ್ಯ ನೂತನವಾಗಿದೆ.

ಕೆಲವು ವರುಷಗಳಲ್ಲಿ ನಡೆಯುತ್ತಿರುವ ಘಟನೆಗಳು ಪ್ರತಿಯೊಬ್ಬರನ್ನೂ ಭ್ರಾಂತಿಯಲ್ಲಿ ಕೆಡುವುತ್ತಿವೆ.

ಜನರಂದೊಕೊಂಡಂತೆ ಯಾವುಂದೂ ಘಟನೆಗಳು ಇತ್ಯಾರ್ಥವಾಗಿರುವುದನ್ನು ಇದುವರೆಗೂ ನಾವು ನೋಡಿಲ್ಲ.

ಯಾರೇ ಆದರೂ ಜೀವಗಳ ಜೊತೆಯಲ್ಲಿ ಆಟವಾಡಬಾರದು.

ಯಾರಿಗೂ ಅಧಿಕಾರ ಶಾಶ್ವತವಲ್ಲ.

ಅಧಿಕಾರಕ್ಕಾಗಿ ಜನರಲ್ಲಿಯೇ ಧಂಗೆಯೇಳುವ ರೀತಿಯಲ್ಲಿ ಹೊಡೆದು ಆಳುವ ನಾಯಕರು ನಮಗೆ ಬೇಕಾಗಿಲ್ಲ.

ವಿದ್ಯಾವಂತರು ಎನಿಸಿಕೊಂಡವರೇ ಕೊಲ್ಲು, ಕೊಚ್ಚು ಎಂಬ ಮನೋಭಾವನೆಯನ್ನು ಹೊಂದಿರುವುದು ಸಮಾಜ ಯಾವ ದಿಕ್ಕಿಗೆ ಸಾಗುತ್ತಿದೆನಿಸುತ್ತದೆ?

ಪ್ರತಿಯೊಬ್ಬರೂ ವಿಚಾರವಾದಿಗಳು ಎನಿಸಿಕೊಳ್ಳಬೇಕೆಂಬ ಧಾವಂತದಲ್ಲಿ ಸುಖ ಸುಮ್ಮನೇ ಹಿಂದು ಧಾರ್ಮಿಕ ಪದ್ಧತಿಗಳನ್ನು , ದೇವರು ದಿಂಡಿರುಗಳನ್ನು, ಜನರ ನಂಬಿಕೆ, ಆಚಾರಗಳನ್ನ್ನು ಎಕ್ಕಾ ಮೆಕ್ಕಾ ಬೈಯುವುದೇ ಪ್ರಗತಿಪರ ಸಿದ್ಧಾಂತ ಮಾಡಿಕೊಂಡಿದ್ದಾರೆ.

ತೀರಾ ಸಾಮಾನ್ಯನಿಗೂ ಮನಸ್ಸಲ್ಲಿ ಮೂಡುವ ಪ್ರಶ್ನೇ - ಅಲ್ಲಾ ಈ ಬುದ್ಧಿ ಜೀವಿಗಳು ಇಷ್ಟೇ ಸುಲಭವಾಗಿ ಹಿಂದೂಹೇತರ ಧರ್ಮ, ದೇವರುಗಳ ಬಗ್ಗೆ, ಅವರ ಆಚಾರಗಳನ್ನು ಪ್ರಶ್ನಿಸಿವವರೇ?

ಇದು ಹಿಂದಿನಿಂದಲೂ ನಡೆಯುತ್ತಿರುವ ಜನರ ನಡುವಿನ ಭಿನ್ನಾಬಿಪ್ರಾಯಗಳು. ಈ ರೀತಿಯ ವಿಮರ್ಶೆ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯ.

ವಿಚಾರವಂತರೂ ತಮ್ಮ ಬುದ್ಧಿವಂತಿಕೆಯಿಂದ ಜನರ ಕಷ್ಟಗಳನ್ನು ಪರಿಹರಿಸುವ ಮಾರ್ಗವನ್ನು ತೋರಿಸಬೇಕು. ಅದು ಬಿಟ್ಟು ಹಾಗೆ ಮಾಡುವವರನ್ನೇ ಪ್ರತ್ಯೇಕವಾಗಿ ಬೇರೆಯಾಗಿ ಸಮಾಜದಿಂದ ಹೊರದೂಡಬಾರದು.

ಇವರೇನೂ ಯಾವ ಬೇರೊಂದು ಲೋಕದಿಂದ ಬಂದವರೇನಲ್ಲ.

ಹಾಗೆಯೇ ಸಾಮಾನ್ಯ ಹಳ್ಳಿ ಮುಕ್ಕನಿಗೆ ಇದು ಏನೊಂದು ಸಹ ಗಮನಕ್ಕೂ ಬರಲಾರದು. ಅವನ ನಿತ್ಯ ಕಾಯಕ ಬದುಕನ್ನು ಸುತ್ತಲಿನಲ್ಲಿರುವವರನ್ನೊಡನೆ ತನ್ನ ಪಾಡಿಗೆ ತಾನು ಕಟ್ಟಿಕೊಳ್ಳುತ್ತಾ ಮುಂದಡಿಯಿಡುತ್ತಿರುತ್ತಾನೆ.

ಮನುಷ್ಯ ಮನುಷ್ಯರ ಮಧ್ಯೆ ದ್ವೇಷವನ್ನು ಪಚೋಧಿಸುವುದು. ಕಾನೂನನ್ನು ದಿಕ್ಕರಿಸುವವನ್ನು ಮೆರೆಸುವುದು. ಕೊಲ್ಲುವವನನ್ನು ಕೂರಿಸಿ ಉಪಚರಿಸುವುದು ನಿಲ್ಲಬೇಕು.

ಅವನು ಆ ಧರ್ಮದವನು. ಅವನಿಗೆ ದೊಡ್ಡವರ ಅಸರೆ ಇದೆ.ಅವನಿಗೆ ಅಧಿಕಾರ ಜೊತೆಯಿದೆ ಎಂಬ ಯಾವುದೂ ಬೇರೆ ಕಾರಣಕ್ಕೆ ವಿಭಿನ್ನವಾದ ರೀಯಾಯಿತಿ ದೂರಕಕೊಡದು.

ಒಂದೇ ನೆಲದಲ್ಲಿರುವ ಪ್ರತಿಯೊಬ್ಬರಿಗೂ ಒಂದೇ ನ್ಯಾಯವಿರಬೇಕು.

ಇಂದು ನಮ್ಮ ನಡುವೆ ಜರುಗುತಿರುವ ನಿತ್ಯ ಘಟನೆಗಳು ಒಳ್ಳೆಯವನಿಗೆ ಸೂಕ್ತ ಕಾಲವಲ್ಲ ಎಂದು ನಿರೂಪಿಸುತ್ತಿವೆ.

ಯಾರೋ ಹೆಚ್ಚು ಹಣವನ್ನು ಹೊಂದಿರುವುದನ್ನು ಸರ್ಕಾರ ಹೇಗೆ ಸಂಪಾಧಿಸಿದ್ದಿಯಾಪ್ಪ ಎಂದು ಶೋಧಿಸಿದರೇ.. ಅವನ ಹಿಂಬಾಲಕರು ಬೊಬ್ಬೇ ಹೊಡೆಯುವುದು..

ಯಾರನ್ನೋ ನೀ ತಪ್ಪು ಮಾಡಿದ್ದೀಯಾಪ್ಪಶಿಕ್ಷೇ ಅನುಭವಿಸು ಎಂದು ನ್ಯಾಯಾಂಗ ತೀರ್ಪು ನೀಡಿದರೇ.. ಇಡೀ ಪಟ್ಟಣಕ್ಕೆ ಬೆಂಕಿಯಿಡುವುದು..

ಇದು ಯಾವ ಜಗತ್ತು ಎಂದು ಆಶ್ಚರ್ಯಪಡಿಸಿದರೇ ಅತಿಶಯೋಕ್ತಿಯಲ್ಲ.   ಕೆಟ್ಟವನಾಗಿದ್ದರೇ ಉತ್ತಮ ಪುರಸ್ಕಾರವೆನ್ನುವಂತಾಗಿದೆ. ಒಳ್ಳೆಯದು ಯಾವುದೋ ಕಾಲಕ್ಕೆ ಕೊನೆಯಾಗಿದೆ ಎನ್ನುವುಂತಾಗಿದೆ.

ಅದಕ್ಕೆ ಹಳ್ಳಿಯ ಮುಕ್ಕ ಹೇಳುವುದು ಯಾವ ರಾಜ ಬಂದರೂ ಬೀಸೋದೂ ತಪ್ಪಲ್ಲ. ಮಾಡೋ ಕೆಲಸ ನಿಲ್ಲಲ್ಲ. ಅದು ಸತ್ಯ.

ಪ್ರತಿಯೊಬ್ಬರೂ ಆಶಿಸುವುದು  ಸರ್ಕಾರದಿಂದ ಮೊಲಭೂತ ಸೌಲಭ್ಯಗಳು ಸಿಕ್ಕಿದರೇ. ಪ್ರಕೃತಿ ಮಾತೆ ಕಾಲ ಕಾಲಕ್ಕೆ ಸರಿಯಾಗಿ ಮಳೆ ನಡೆಸಿದರೇ. ಸಾಮಾನ್ಯ ರೈತ ಏನನ್ನೂ ನಿರೀಕ್ಷಿಸುವುದಿಲ್ಲ.

ಇಂದು ಮೀಡಿಯಾ ದುನಿಯಾ! ಸುದ್ಧಿಗಾಗಿ ಕಾಯುವ ಜಮಾನ. ಚಿಕ್ಕದ್ದು ಸಿಕ್ಕಿದರೇ ಹುಲಿ ಹೋಯ್ತು ಎಂದು ಟಾಂ ಟಾಂ ಮಾಡುವರು. ಪ್ರತಿಯೊಂದನ್ನು ತಮ್ಮ ಮೂಗಿನ ನೇರಕ್ಕೆ ತಿರುಚುವರು. ಸತ್ಯಕ್ಕೆ ಗೋಲಿ ಮಾರೋ. ಸಮಸ್ತ ಸಮಾಜಕ್ಕೆ ಸುಳ್ಳನ್ನೇ ಎಂಟು ಬಾರಿ ಹೇಳಿ ಸತ್ಯವೆನಿಸುವವರು.

ಜನರನ್ನು ನಿತ್ಯ ಕೆರಳಿಸುವುದೇ  ದೊಡ್ಡ ಭಾಗ್ಯವೆನ್ನುವಂತಾಗಿದೆ. ಪ್ರತಿಯೊಂದು ಘಟನೆ ,ವ್ಯಾಜ್ಯದಿಂದ ಎಷ್ಟು ಲಾಭ ಸಿಗುತ್ತದೆ ಎಂದು ಕ್ಯಾಲ್ಯುಕೆಟರ ಇಟ್ಟುಕೊಂಡು ಕುಳಿತು ತೂಗುತ್ತಾರೆ.

ಇದು ಜನರ ನಂಬಿಕೆಗೆ ದ್ರೋಹ. ಶಾಂತಿಯ ದೋಟವನ್ನು ಮಾಡಬೇಕೆಂದು ಸ್ವಾಸ್ಥ್ಯ ಸಮಾಜವನ್ನು ಕತ್ತಲ ಕಡೆಗೆ ತೆಗೆದುಕೊಂಡು ಹೋಗುತ್ತಿರುವುದು ವಿಪಾರ್ಯಾಸ!!

ನಮ್ಮ ನಮ್ಮಲ್ಲಿ ನಾವುಗಳು ಯಾವಾಗ  ಬದಲಾಗುವೆವೋ?  ಆಗ ಎಲ್ಲ ಕಡೆ ಬದಲಾವಣೆ ಕಾಣಲು ಸಾಧ್ಯ. ಅದಕ್ಕಾಗಿ ಯಾವುದೇ ನಾಯಕನಿಗಾಗಿ ನಾವು ಕಾಯುವುದು ಬೇಕಿಲ್ಲ.

ಬನ್ನಿ ಬದಲಾವಣೆಯ ಸಿಹಿಗಾಳಿಯನ್ನು ನಮ್ಮಿಂದಲೇ ಪ್ರಾರಂಭಿಸೋಣ...

ಶನಿವಾರ, ಏಪ್ರಿಲ್ 29, 2017

ವಾರಂತ್ಯ ವಿರಾಮ

ಶನಿವಾರ ಭಾನುವಾರವೆಂದರೇ ರಜೆಯ ದಿನಗಳು. ಎರಡು ದಿನ ರಜೆ ಐ.ಟಿ , ಬಿ.ಟಿ ಯಲ್ಲಿ ಕೆಲಸ ಮಾಡುವವರಿಗೆ ಸಿಗುವ ವಿರಾಮ ದಿನಗಳು. ಸರ್ಕಾರಿ ಮತ್ತು ಬೇರೆ ನೌಕರರಿಗೆ ಶನಿವಾರದ ರಜೆ ತಿಂಗಳಲ್ಲಿ ಒಂದು ಭಾರಿ ಮಾತ್ರ ಸಿಗುವುದು.

ಸ್ನೇಹಿತರುಗಳು ನಮ್ಮಲ್ಲಿಯೇ ಒಮ್ಮೊಮ್ಮೆ ಮಾತನಾಡಿಕೊಳ್ಳುತ್ತಿರುತ್ತೇವೆ. ವಾರದಲ್ಲಿ ಎರಡು ದಿನಗಳು ರಜೆ ಇರದಿದ್ದರೇ ಐ.ಟಿ ಯಲ್ಲಿ ಕೆಲಸ ಮಾಡುವ ಸಾಕಷ್ಟು ಮಂದಿ ಇಷ್ಟೊತ್ತಿಗೆ ಹರೆ ಹುಚ್ಚರಾಗಿಬಿಡುತ್ತಿದ್ದವೆಂದು.

ಹೌದು ಇಲ್ಲಿಯ ಕೆಲಸ ದೂರದಿಂದ ನೋಡುವವರಿಗೆ ಸಕತ್ ಮಜವಾಗಿ ಸಾಫ್ಟ್ ಆಗಿ ಕಾಣುತ್ತಿರುತ್ತದೆ. ನೋಡಿದರೇ ಸಾಫ್ಟ್ ವೇರ್ ಇಂಜಿನಿಯರ್ ಆಗಬೇಕು ಅನಿಸುತ್ತದೆ. ಅದು ನೋಡುವ ಡ್ರಸ್ ನಿಂದ, ದೊಡ್ಡ  ಮಹಡಿಯ ಹೊಳೆಯುವ ಗ್ಲಾಸ್ ಆಫೀಸನಿಂದ ಮಾತ್ರ.

ಒಳಗೆ ಹೆಜ್ಜೆ ಇಟ್ಟು ಕೆಲಸದ ಜಾಗದಲ್ಲಿ ನೋಡಿದಾಗ ತಿಳಿಯುತ್ತದೆ ನಿಜವಾದ ಸಾಪ್ಟವೇರ್ ಇಂಜಿನಿಯರ್ ನ ಹಾರ್ಡ್ ಕೆಲಸ.

ಹೌದು ಅಲ್ಲಿಯ ಕೆಲಸವನ್ನು ಸಾಮಾನ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಯ್ ಬಿಡು ಮಾರಾಯ ಅದು ಏನೂ ನೀವು ಯಾವಾಗಲೂ ಕಂಪ್ಯೂಟರ್ ಪರದೆ ನೋಡುತ್ತಾ ಕಾಲ ಕಳೆಯುತ್ತಿರುತ್ತಿರಾ  ಎಂದು ಹಗುರವಾಗಿ ಮಾತನಾಡಬಾರದು.

ಅವರ ಆ ಕೆಲಸ ದೇವರಿಗೆ ಪ್ರೀತಿ.

ನಿತ್ಯ ಕರಕ್ಟ್ ಟೈಂ ಗೆ ಆಫೀಸ್ ಗೆ ಬರುವುದು ಮಾತ್ರ ಗೊತ್ತು. ಅದೆ ಸಂಜೆ ಕರಕ್ಟ್ ಟೈಂ ಗೆ ಮನೆಗೆ ಹೋರಡುವವರೇ ಲಕ್ಕಿ ಪೇಲೋಗಳೂ. ಆ ಕೆಲಸದ ಕರಾಮತ್ತೇ ಹಾಗೆ. ಅದರ ವಿಚಾರವನ್ನು ಯಾರ ಬಳಿಯು ಸಹ ಹೇಳಿಕೊಳ್ಳುವ ಆಗಿಲ್ಲ.

ಅದಕ್ಕೆ ಇಂದಿಗೂ ಸರ್ಕಾರಿ ಕೆಲಸಗಳೆಂದರೇ ತುಂಬ ತೂಕವನ್ನು ಉಳಿಸಿಕೊಂಡಿರುವುದು. ಒಮ್ಮೆ ಸರ್ಕಾರಿ ಕೆಲಸ ಸಿಕ್ಕಿದರೇ ಮುಗಿಯಿತು. ೫೮-೬೦ ವರುಷದವರಿಗೂ ಯಾವನೂ ಕೆಮ್ಮಂಗಿಲ್ಲ!

ಅದೇ ಈ ಖಾಸಗಿ ಐ.ಟಿ ಬಿ.ಟಿ ನೌಕರರನ್ನು ಮಾತನಾಡಿಸಿ ನಿತ್ಯ ತಮ್ಮ ಕೆಲಸದ ಬಗ್ಗೆಯೇ ಯೋಚನೆ! ಹೇಗೆ  ತನ್ನ ಕೆಲಸ ಉಳಿಸಿಕೊಳ್ಳುವುದು, ವೇತನವನ್ನು ಹೆಚ್ಚಿಸಿಕೊಳ್ಳುವುದು, ಕ್ವಾರ್ಟ್ ರ್, ಮದ್ಯ ವಾರ್ಷಿಕ, ವಾರ್ಷಿಕ ಅಪ್ರೈಸಲ್  ನಲ್ಲಿ ರೇಟಿಂಗ ಜಾಸ್ತಿ ಪಡೆಯುವುದು.  ಹೀಗೆ ಕೆಲಸದ ಜೊತೆಯಲ್ಲಿ ಈ ಎಲ್ಲವುಗಳ ತಲೆನೋವು.

ಮೇಲಿನ ನೋಟಕ್ಕೆ ಆಹಾ! ಒಳಗಿನ ತನ್ನ ವ್ಯಥೆಯನ್ನು ಮತ್ತೊಬ್ಬ ಐ.ಟಿ ಉದ್ಯೋಗಿ ಮಾತ್ರ ಅರ್ಥ ಮಾಡಿಕೊಳ್ಳಬಲ್ಲನು.

ಈ ರಂಗದ ಉದ್ಯೋಗಿಯ ಕಷ್ಟವನ್ನು Even ತನ್ನ ಹೆಂಡತಿ, ಹೆತ್ತವರು, ಮತ್ತು ಹತ್ತಿರದವರು ಸಹ ತಿಳಿಯಲಾರರು.

ಆದ್ದರಿಂದ ವಾರದ ರಜೆಗೆ ಇಲ್ಲಿ ಬಲು ಮಹತ್ವ. ಅದಕ್ಕಾಗಿ ಜಾತಕ ಪಕ್ಷಿಗಳಂತೆ ಕಾದಿದ್ದೇ ಬಂತು. ವಾರ ಪೂರ್ತಿ ಗಡಿ ಬಿಡಿಯಲ್ಲಿ ಕೇವಲ ಅಫೀಸ್ ಕೆಲಸದಲ್ಲಿಯೇ ಮುಳುಗೇಳುವ ಮಂದಿಗೆ ಶನಿವಾರ, ಭಾನುವಾರ ಸ್ವಲ್ಪ ಪ್ರೀ!

ತನ್ನ ವೈಕ್ತಿಕ ಕೆಲಸಗಳನ್ನು ಮಾಡಿಕೊಳ್ಳಲು ಸಿಗುವ ಚಾನ್ಸ್. ಮನೆಯವರೊಂದಿಗೆ ಮನಬಿಚ್ಚಿ ಮಾತನಾಡಲು ಸಿಗುವ ಅಮೊಲ್ಯ ಕ್ಷಣಗಳೇ ಸರಿ.

ಆ ಎರಡು ದಿನವಾದರೂ ಆರಾಮಾಗಿ ಬೇಗ ಮಲಗಿ ಲೇಟಾಗಿ ಏಳುವ ಕನಸು. ಎರಡು ದಿನವಾದರೂ ಖುಷಿಯಾಗಿ ಎಲ್ಲರೊಂದಿಗೆ ಬೇರೆತು ಊಟ ಮಾಡುವ ಸಂತೋಷ. ಮನೆಯವರೊಂದಿಗೆ ತಾನು ಇರುವ ಜಾಗ ಬಿಟ್ಟು ಹೊರ ಸಂಚಾರ ಹೋಗುವ ಹಿತ. ಯಾವುದೋ ಪ್ರೀತಿಯ ಕಾದಂಬರಿಯ ಅರ್ಧ ಓದನ್ನು ಎರಡು ದಿನದಲ್ಲಿ ಮುಗಿಸುವ ಧಾವಂತ. ಹೀಗೆ ವಾರಂತ್ಯ ರಜೆ ನಿಜವಾಗಿಯೋ ಖುಷಿಯ ಮೊತ್ತವನ್ನೇ ಕಟ್ಟಿಕೊಂಡಿರುತ್ತದೆ.

ಇಂಥ ವಾರವಾದ ಈ ಶನಿವಾರ ಅದು ತಾನೊಬ್ಬನೆ ಮನೆಯಲ್ಲಿ ಸಂಭ್ರಮಿಸುವಾ ಎಂದು ಎದ್ದಿದ್ದೇ ಮುಂಜಾನೆ ೯. ಇಂದು ಯಾವುದೇ ಕಾಲು ಇಲ್ಲದೇ ಇದ್ದುದ್ದಕ್ಕೆ ಸ್ವಲ್ಪ ಖುಷಿ! ಇಲ್ಲದಿದ್ದರೇ, ಅದೇ ಲ್ಯಾಪ್ ಟಾಪ್ ತೆಗೆದು ಇಶ್ಯೂ ಚೆಕ್ ಮಾಡಬೇಕಾಗಿತ್ತು.

ಅಂತು ಅಪ್ಲಿಕೇಶನ್ ಸರಿಯಾಗಿ ಕೆಲಸ ಮಾಡುತ್ತಿದೆ. ಕಣ್ಣು ಬಿಟ್ಟರೆ ಇನ್ನೂ ಕತ್ತಲು , ಹೊರಗಡೆ ಆರ್ಭಟದ ಮಳೆ. ಗುಡುಗು ಸಿಡಿಲು ಮನೆಯ ಗೊಡೆಗೆ ಹೊಡೆಯುತ್ತಿದೇಯೇನೋ ಎನಿಸುತ್ತಿದೆ. ಸ್ವಲ್ಪ ಜರಿದು ಮೊಬೈಲ್ ನಲ್ಲಿ ಟೈಂ ನೋಡಿದರೇ, ಟೈಂ ಆಗಲೇ ೯. ಕಾರ್ಮೋಡ ಕತ್ತಲು. ಈ ಮಳೆ ರಾತ್ರಿಯಿಂದಲೂ ಹೀಗೆ ಬರುತ್ತಲೇ ಇದೆ.

ಹಾಸಿಗೆಯಲ್ಲಿಯೇ ಮೊಬೈಲ್ ತೆಗೆದು ವೇದರ್ ಆಫ್ ಚೆಕ್ ಮಾಡಿದೆ. ಮಳೆ ಮದ್ಯಾಹನದವರೆಗೂ ಇದೆ. ಇಲ್ಲಿಯ ವೇದರ್ ರಿಪೊರ್ಟ್ ಪಕ್ಕ ಪರಪೇಕ್ಟ್. ಗಂಟೆ ಗಂಟೆಗೂ ಕರಾರುವಾಕ್ಕದ ಮಾಹಿತಿ.

ಇನ್ನೂ ಏನು ಮಾಡುವುದು ಎಂದುಕೊಂಡು ಹಾಗೆಯೇ ನಿತ್ಯದ ಅಭ್ಯಾಸದಂತೆ ಆಫೀಸ್ ಮೈಲ್ ಬಾಕ್ಸ್ ಬ್ರೌಸ್ ಮಾಡಿದೆ. ಏನೂ ತೊಂದರೆಯಿಲ್ಲ ಎಂದುಕೊಂಡು ಪೇಸ್ ಬುಕ್ ಆಪ್ ಬ್ರೌಸ್ ಮಾಡಲು ಮನಸ್ಸು ಹೋಯಿತು. ಇಂದು ನ್ಯೂಸ್ ಪೇಪರಗಿಂತ ಪೇಸ್ ಬುಕ್ ಪಕ್ಕ ಅಪಟುಡೇಟು. ಯಾರ್ಯಾರೋ ತಮ್ಮ ವಾಲ್ ಗಳಿಗೆ ಬಸವ ಜಯಂತಿಯ ಶುಭಾಶಯಗಳ ಪೊಟೋ ಹಾಕಿದ್ದರು.

ಇಂದು ಬಸವಣ್ಣನವರ ಜಯಂತಿ. ಊರಲ್ಲಿದ್ದರೇ ಹಬ್ಬದ ಊಟ ಮತ್ತು ಸಂಭ್ರಮ. ಇಲ್ಲಿ ಒಂಟಿ ಜೀವ ಯಾರು ಕೇಳಬೇಕು?

ವಾಟ್ಸ್ ಪ್ ಮೇಸೆಜೆ ೩ ಬಂದಿದ್ದವು. ವಾಟ್ಸ್ ಗ್ರೂಫ್ ಮಜಾ ಎಂದರೇ.. ಶುರುವಾದ ಹೊಸತರಲ್ಲಿ ಏನ್ ಜೋರು ಮಳೆ!ಆಮೇಲೆ ಬರು ಬರುತ್ತಾ ಬರಸೀಮೆಯಾಗಿ ಬಿಡುತ್ತದೆ. ಮೋಡಕ್ಕಾಗಿ ಕಾಯಬೇಕಾಗುತ್ತದೆ. ಹಾಗೆಯೇ ಒಂದು ವಾರದಿಂದಲೂ ಏನೊಂದು ಮೇಸೆಜ್ ಇಲ್ಲದ ಗ್ರೂಪ್ ನಲ್ಲಿ ಮೇಸೆಜೊಂದು ಇತ್ತು. ಅದು ಬಸವ ಜಯಂತಿಯ ಶುಭಾಶಯದ್ದೂ. ಮತ್ತೊಂದು ಆಫೀಸ್ ಸ್ನೇಹಿತರ ಗ್ರೂಫ್ ನಲ್ಲಿ ವಿಡಿಯೋ ಮೆಸೇಜ್. ಪುನಃ ಐ.ಟಿ ಗಂಡ ತಾನು ಯಾಕೆ ಕುಡಿಯಬೇಕು ಎಂಬುದಕ್ಕೆ ಸಂಬಂಧಿಸಿದ್ದು.

ಇನ್ನೂ ಸಾಕು ಎಂದು ಪೋನ್ ಪಕ್ಕಕ್ಕಿಟ್ಟು. ಹೊದಿಕೆ ಮಡಿಸಿ ಸೀದಾ ಸ್ನಾನಕ್ಕೆ ಹೊರಟೆ. ಹೊರಗಡೇ ಏನ್ ಅಟ0ಬಾಂಬ ಸಿಡಿಸುತ್ತಿದ್ದಾರೋ ಎಂಬಂತೆ ಸಿಡಿಲು ಗುಡುಗು. ಇಲ್ಲಿಯ ಮಳೆಯ ಜಾದು ನೋಡಿಯೇ ಅನುಭವಿಸಬೇಕು. ನಮ್ಮೊರಿನಲ್ಲಿನಂತೆ ಮಳೆಯಲ್ಲ. ಜೋ ಎನ್ನುವಂತೆ ಮೋಡವೇ ಮನೆ ಮೇಲೆ ಕೂತಿರುವಂತೆ ಸುರಿಯುತ್ತದೆ. ಈ ರೀತಿಯ ಮಳೆ ಬೆಂಗಳೂರಿನಲ್ಲಿ ಒಂದು ಗಂಟೆ ಬಂದರೇ ಮುಗಿಯಿತು. ಬೆಂಗಳೂರಲ್ಲಿ ದೋಣಿ ಸೇವೆ ಆರಂಭಿಸಬೇಕಾಗುತ್ತದೆ. ಆದರೇ ಇಲ್ಲಿ ಅದು ಹೇಗೆ ಮ್ಯಾನೇಜ್ ಮಾಡುತ್ತಾರೋ ತಿಳಿಯದು. ಮಳೆ ನಿಂತ ಮರುಕ್ಷಣವೇ ಎಲ್ಲಿ ಯಾವಾಗ ಮಳೆ ಬಂತು ಎಂಬುವ ಕುರುಹು ಸಹ ಸಿಗುವುದಿಲ್ಲ. ಮೇಲಿನಿಂದ ಬಿದ್ದ ನೀರು ಅದು ಎಲ್ಲಿಗೆ ಸೇರಬೇಕು ಆ ಜಾಗಕ್ಕೆ ಸೇರಿ ಪಾವನವಾಗುತ್ತದೆ.

ಸ್ನಾನದ ನಂತರ ದೇವರಿಗೆ ನಮಸ್ಕಾರ ಮಾಡಿ ಅಡಿಗೆ ಮನೆಗೆ ಹೋಗಿ ಒಂದು ಲೋಟ ನೀರು ಕುಡಿದೆ. ಹಾಲಿಗೆ ಬಂದು ಟಿ.ವಿ೯ ನೋಡೋಣ ಎಂದು ಟಿ.ವಿ ಹಾನ್ ಮಾಡಿದರೇ ಬಸವಣ್ಣನವರ ಬಗ್ಗೆ ಚರ್ಚೆ ಬರುತ್ತಿತ್ತು. ಚರ್ಚೆ ವಿಷಯ ರಾಜಕೀಯ ಪಕ್ಷಗಳು ಬಸವಣ್ಣನವರನ್ನು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಯಾಕೆ ನೆನಪು ಮಾಡಿಕೊಳ್ಳುತ್ತಾರೆ ಎಂದು. ಬೇರೆ ಬೇರೆ ಪಕ್ಷಗಳದವರನ್ನು ಕುರಿಸಿಕೊಂಡು ಚರ್ಚಿಸುತ್ತಿದ್ದರು.

ಹಾಗೆಯೇ ಪುನಃ ಅಡಿಗೆ ಮನೆಗೆ ಬಂದು ನಿನ್ನೆ ಎದುರು ಮನೆಯವರು ಕೊಟ್ಟ ಅಡಿಗೆಯನ್ನು ಬಿಸಿ  ಮಾಡಿ ಬ್ರೇಕ್ ಪಾಸ್ಟ್ ಮುಗಿಸಿದೆ. ಅನಂತರ ಕಾಫಿ ಮಾಡಿಕೊಂಡು ಕುಡಿಯುತ್ತಾ ಹೆಂಡತಿಗೆ ಕಾಲ್ ಮಾಡಿ ಅದು ಇದು ವಿಚಾರಿಸಿ ನಿತ್ಯದ ಮಾತು ಮುಗಿಸಿದೆ.

ಅಷ್ಟೊತ್ತಿಗೆ ಸೂರ್ಯ ಭಗವಾನ್ ಮೋಡದ ಮರೆಯಲ್ಲಿಯೇ ಸ್ವಲ್ಪ ಸ್ವಲ್ಪ ಇಣುಕಲು ಪ್ರಾರಂಭಿಸಿದ. ಮಳೆರಾಯ ನನಗೇನೂ ಜಾಗ ಎಂದು ಹೋರಡಲು ಅನುವಾದ.

ಮದ್ಯಾಹನದ ಊಟಕ್ಕೆ ಹೇಗು ನೆನ್ನೆ ಮಾಡಿದ ಬೀಟ್ ರೋಟ್ ಪಲ್ಯ ಇದೆ. ೧೨.೩೦ ರ ಹೊತ್ತಿಗೆ ಚಪಾತಿ ಮಾಡಿದರೇ ಆಯಿತು ಎಂದುಕೊಂಡು ಟಿ.ವಿ ಮುಂದೆ ಕೂತುಕೊಂಡೇ.

ಪುನಃ ಬಾಹುಬಲಿ ೨ ರ ನಾಯಕನ ಬಗ್ಗೆ ಕಾರ್ಯಕ್ರಮ ಬಂತು. ಅನಂತರ ೯ರ ನ್ಯೂಸ್ ಯಡ್ಡಿ ಈಶ್ ಡಿಶುಮ್ ಡಿಶುಮ್ ರಾಜಕೀಯದ ಸುದ್ಧಿಗಳು. ಸಾಕು ಯಾವುದಾದರೊಂದು ಸಿನಿಮಾ ನೋಡೋಣ ಎಂದುಕೊಂಡು ಬಾಹುಬಲಿ ಸಿನಿಮಾ ನೋಡಲು ಶುರುಮಾಡಿದೆ.

ಹೊರಗಡೆ  ವಾತವರಣ ಸುಂದರವಾಗಿ ಕಾಣುತ್ತಿತ್ತು. ಇದೀಗ ತಾನೇ ಸ್ನಾನ ಮಾಡಿದ ಪ್ರಕೃತಿ ಮಾತೆಯಂತೆ ಹಚ್ಚಹಸಿರಾಗಿ ಕಂಗೊಳಿಸುತ್ತಿತ್ತು.

ಊಟ ಮಾಡಿ ಹೀಗೆ ವಾಕ್ ಹೋಗಿ ಬರೋಣವೆಂದುಕೊಂಡೆ. ಟೇಂಪರೆಚರ್ ೨೩ ತೋರಿಸುತ್ತಿತ್ತು. ಹಾಗೆಯೇ ಮನೆಯ ಕಸದ ಪೊಟ್ಟಣವನ್ನು ಕಸದ ಡಬ್ಬಿಗೆ ಹಾಕಲು ತೆಗೆದುಕೊಂಡು ಬಾಗಿಲಿಗಿ ಬೀಗ ಹಾಕುವ ಸಮಯದಲ್ಲಿ ನಮ್ಮ ಮನೆಯ ಮೇಲಿರುವ ಜನನಿ ಮತ್ತವರ ಮನೆಯವರು ಹೊರಗಿನಿಂದ ಬಂದರು. ಹಾಯ್ ಜನನಿ ಯಾವಾಗ ಇಂಡಿಯಾದಿಂದ ಬಂದಿದ್ದು? ಎಂದು ಮಾತನಾಡಿಸಿ ಹೊರ ಹೆಜ್ಜೆ ಇಟ್ಟೆ. ಹೊರಗಡೆ ಸ್ವಲ್ಪ ಬಿಸಿಲು ಅನಿಸಿತು. ಮಳೆ ಬಂದು ಇಳೆ ತಂಪಾಗಿತ್ತು. ಹಾಗೆಯೇ ಹೆಜ್ಜೆ ಹಾಕುತ್ತಾ ಹಾಕುತ್ತಿದ್ದಂತೆ ಬಿಸಿಲ ಜಳ ಜಾಸ್ತಿ ಅನಿಸಿತು. ಇಲ್ಲಿ ಪ್ರತಿಯೊಂದು ಎಕ್ಸ್ ಟ್ರಿಮ್. ೨೩ ಡಿಗ್ರಿ ಇದ್ದರೂ ಕಣ್ಣು ಬಿಡದಂತೆ ರವಿ ಕಿರಣಗಳು. ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬರಬೇಕಾಗಿತ್ತೆಂದು ಅನಿಸಿತು.

ವಾಕಿಂಗ ಲೇನ್ ನಲ್ಲಿ ಯಾರೊಬ್ಬರೂ ಇಲ್ಲ. ಅದು ದೂರದಲ್ಲಿ ಅಮೇರಿಕಾದ ಲೇಡಿ ರನ್ನಿಂಗ ಮಾಡಿಕೊಂಡು ಬರುತ್ತಿದ್ದಳು. ಹತ್ತಿರಕ್ಕೆ ಬಂದಾಗ ಹಾಯ್ ಎಂದು ಹಾಗೆಯೇ ಓಡುತ್ತಾ ಮರೆಯಾದಳು. ನಿತ್ಯ ಹೋಗುತ್ತಿದ್ದಷ್ಟು ದೂರ ಹೋಗಲು ಸಾಧ್ಯವಿಲ್ಲವೆಂದು ನಡೆಯುತ್ತಾ ಸಾಗಿದೆ. ವಿಪರೀತವಾದ ಸೂರ್ಯ ಕಿರಣಗಳು ಯಾಕೋ ಈಗ ವಾಕ್ ಬಂದು ತಪ್ಪು ಮಾಡಿದೆ  ಅನಿಸಿತು.

ಮನೆಗೆ ಬಂದಾಗ ಆಗಲೇ ಮೂರು ಮುಕ್ಕಾಲು. ಪುನಃ ಮೊಬೈಲ್  ಚೆಕ್ ಮಾಡಿ. ಲ್ಯಾಪ್ ಟಾಪ್ ನಲ್ಲಿ ಲಾಗಿನ್ ಆದೆ. ಆಪೀಸ್ ಗೆಳೆಯ ಪಿಂಗ್ ಮಾಡಿದ್ದಾ ಏಯ್ ರಾತ್ರಿ ಆಪ್ಲಿಕೇಷನ್ ಮೈಂಟನೇಸ್ ಆಕ್ಟಿವಿಟಿಗೆ ಆಪೀಸ್ ಗೆ ಬರುತ್ತಿಯಾ ಎಂದಿದ್ದಾ. ಅವನಿಗೆ ರಿಫ್ಲೇ ಮಾಡಿದೆ. ಹಾಗೆಯೇ ಸ್ವಲ್ಪ ಕೊಂಚ ಮಲಗೋಣವೆಂದುಕೊಂಡು ಲ್ಯಾಪ್ ಟಾಪ್ ಮುಚ್ಚಿ ಹೋದೆ.

ಹೊರಗಡೆ ಮಕ್ಕಳ ಆಟವಾಡುವ ಶಬ್ಧ ಕೇಳುತ್ತಿತ್ತು. ನೋಡಿದರೇ ಎಲ್ಲ ಹೊಸಬರು. ಕೇಳಗಡೆ ಮನೆಯಲ್ಲಿರುವವರು ಕಳೆದ ವಾರ ಬಂದಿರುವವರು. ಅವರು ಅವರಿಗೆ ಗೊತ್ತಿರುವ ಕುಟುಂಬದವರೆಲ್ಲ ಸೇರಿ ವಾರಂತ್ಯದ ಪಾರ್ಟಿ ಮಾಡುತ್ತಿರಬೇಕು. ಹೆತ್ತವರ ಜೊತೆ ಈ ಮಕ್ಕಳು ಬಂದಿದ್ದಾವೆ ಎನಿಸಿತು. ಅವರುಗಳ ಕಲರವ ಮತ್ತು ಕೇಕೆ ಮನಕ್ಕೆ ಖುಷಿ ಕೊಟ್ಟಿತು.

ಮಕ್ಕಳ ಮನಸ್ಸೇ ಸರಿ!

ರಾತ್ರಿಗೆ ಏನು ಅಡುಗೆ ಮಾಡುವುದು? ಹೊಟ್ಟೆ ನೆನಪು ಮಾತ್ರ ಇರಲೇಬೇಕು. ಒಬ್ಬರೂ ಇದ್ದರೂ ಅಡುಗೆ ಇಬ್ಬರೂ ಇದ್ದರೂ ಅಡುಗೆ ಮಾಡಲೇಬೇಕು. ಅವಲಕ್ಕಿ ಮಾಡಿದರೇ ಬೇಷ್ ಅನಿಸಿತು. ಅದನ್ನು ಸುಲಭವಾಗಿ ಮಾಡಿದರಾಯ್ತು ಎಂದುಕೊಂಡೆ.

ಪುನಃ ಲ್ಯಾಪ್ ಟಾಪ್ ಆನ್ ಮಾಡಿದೆ. ಹಾಗೆಯೇ ಪೇಸ್ ಬುಕ್ ಲಾಗಿನ್ ಆದ್ರೇ. ನನ್ನ ಪ್ರೇಂಡ್ ಲಿಸ್ಟ್ ನಲ್ಲಿರುವ ಗೆಳೆಯ ಅವನ ಪ್ರೇಂಡ್ ಗೆ ಕಾಮೆಂಟ್ ಹಾಕಿದ್ದಾ. ಏನ್ ಇರಬಹುದು ಎಂದು ಡಿಟೈಲ್ ನೋಡಿದರೆ. ಆ ಹುಡುಗಿ ಬಾಹುಬಲಿ -೨ ನೋಡುತ್ತಿದ್ದೇನೆ ಎಂದು ವಾಲ್ ಗೆ ಮೇಸೆಜ್ ಹಾಕಿದ್ದಳೆ. ಅದಕ್ಕೆ ಯಾರೋ ಒಬ್ಬ ಕನ್ನಡಾಭಿಮಾನಿ (?) ಏಯ್ ಕನ್ನಡ ಹೀಗೆನಾ ನೀನು ಉದ್ಧಾರ ಮಾಡದು? ಎಂದು ಕೇಳಿದ್ದಾನೆ. ಅದಕ್ಕೆ ಆ ಹುಡುಗಿ ನೀ ಯಾರ್ ಕೇಳದು ನಾನು ಯಾವ ಭಾಷೇ ಸಿನಿಮಾನಾದರೂ ನೋಡುತ್ತಿನಿ ಎಂದಿದ್ದಾಳೆ. ಅವನು ಬಿಡದೆ ಕಾಮೆಂಟ್ ಹಾಕಿ ವಾಮಗೋಚರವಾಗಿ ಬೈದಿದ್ದಾನೆ. ಅದಕ್ಕೆ ಇಯಮ್ಮಾ  ಉದ್ದನೇಯ ಪೋಸ್ಟ್ ನ್ನು ಬೈದು ಹಾಕಿದ್ದಾಳೆ.

ಉಫ್!

ಅವಲಕ್ಕಿ ರೇಡಿಯಾಯಿತು.

ಹಾಗೆಯೇ ನನ್ನ ಬ್ಲಾಗ್ ಕೊಂಡಿಯನ್ನು ಒಪನ್ ಮಾಡಿದೆ. ಅಲ್ಲಿರುವ ಮುಂದಿನ ಬ್ಲಾಗ್ ಕೊಂಡಿಯನ್ನು ಕ್ಲಿಕ್ಕಿಸಿದೆ. ಇನ್ನೊಂದು ಕನ್ನಡ ಬ್ಲಾಗ್ ಬಂತು. ಕವನಗಳ ಬ್ಲಾಗ್. ಉತ್ತಮ ಕವನಗಳಿದ್ದವು. ಹಾಗೆಯೇ ಮುಂದಿನ ಬ್ಲಾಗ್ ಲಿಂಕ್ ಒತ್ತಿದಾಗ ಮತ್ತೇ ಇನ್ನೊಂದು ಬ್ಲಾಗ್ ಹೀಗೆ ಹಲವಾರು ಕನ್ನಡ ಬ್ಲಾಗ್ ಗಳನ್ನು ಬ್ರೌಸ್ ಮಾಡುತ್ತಾ ಮಾಡುತ್ತಾ ಹೋದಾಗ ದಾರವಾಡ ಪೋಲಿಸ್ ಆಪೀಸ್ ಪೇಜ್ ಬಂತೂ. ನೋಡಿದರೆ ಅಲ್ಲಿ ನಿತ್ಯ ಕೇಸ್ ಗಳನ್ನು ಅನ್ ಲೈನ್ ನಲ್ಲಿ ಟ್ರ್ಯಾಕ್ ಮಾಡುತ್ತಿದ್ದಾರೆ. ಇದು ಉತ್ತಮ ಕೆಲಸ ಅನಿಸಿತು. ಆ ವ್ಯಾಪ್ತಿಯ ಘಟನೆಗಳು ಎಪ್.ಐ.ಆರ್ ವಿವರಗಳು ಆನಲೈನ್ ನಲ್ಲಿ. ಹೀಗೆಲ್ಲಾ ಬ್ಲಾಗ್ ಉಪಯೋಗವಾಗುವುದನ್ನು ಕಂಡು ಖುಷಿಯಾಯಿತು. ಇನ್ನೊಮ್ಮೆ ಇದನ್ನು ವಿವರವಾಗಿ ನೋಡೋಣವೆಂದುಕೊಂಡು. ಪುನಃ ಮುಂದಿನ ಬ್ಲಾಗ್ ಲಿಂಕ್ ಮೇಲೆ ಕ್ಲಿಕ್ಕಿಸಿದೆ. ಅದು ಸಾಹಿತ್ಯಕ್ಕೆ ಸಂಬಂಧಿಸಿದ ಬ್ಲಾಗ್. ಸೂರ್ಯಕಾಂತ ಪಂಡಿತ್ ಎಂಬುವವರು ಉತ್ತಮ ಪುಸ್ತಕ ವಿಮರ್ಶೆಗಳನ್ನು ಮಾಡಿದ್ದರು. ಬೈರಪ್ಪನವರ ಉತ್ತರಕಾಂಡ ಕಾದಂಬರಿಯ ಬಗ್ಗೆ ಬರೆದಿರುವುದನ್ನು ಪೂರ್ತಿ ಓದಿದೆ. ಮುಂದೆ ಇನ್ನೊಂದು ಲಿಂಕ್ ಕ್ಲಿಕ್ಕಿಸಿದಾಗ ಕೀರ್ತಿರಾಜ್ ಎಂಬುವವರ ಬ್ಲಾಗ್. ಅದು ಚೆನ್ನಾಗಿತ್ತು. ಅವರು ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಅವುಗಳನ್ನೇ ಬ್ಲಾಗ್ ನಲ್ಲಿ ಮುದ್ರಿಸಿದ್ದಾರೆ.

ಬ್ಲಾಗ್ ಲೋಕ ನಿಜವಾಗಿಯೂ ಮಸ್ತ್ ಲೋಕ. ತನ್ನದೇ ಭಾವನೆಗಳನ್ನು ಅಕ್ಷರದೊಳಕ್ಕೆ ಇಳಿಸಿಟ್ಟು ಕಾಪಾಡಿಕೊಳ್ಳುವುದು. ಯಾರು ಬೇಕಾದರೂ ಆನ್ ಲೈನ ನಲ್ಲಿ ಬರೆದುಕೊಳ್ಳಬಹುದು. ಹೀಗೆ ಬರೆಯುವವರ ವೈವಿಧ್ಯಮಯವಾದ ಬರಹಗಳು. ಎಲ್ಲಾ ಬಗೆಯಲ್ಲಿನ ಲೇಖನಗಳು  ದೊರೆಯುತ್ತವೆ. ಓದುವುದಕ್ಕೆ ಸಮಯವಿದ್ದಾರೆ ಅವರೆಲ್ಲಾರ ಅನುಭವಗಳನ್ನು ನಮ್ಮದಾಗಿಸಿಕೊಳ್ಳಬಹುದು. ವಾರಾಂತ್ಯಕ್ಕೆ ಇದಕ್ಕಿಂತ ಉತ್ತಮವಾದ ಸಂಗತಿ ಇನ್ನು ಏನು ಇದೆ?

ಶನಿವಾರದ ರಜೆ ಹೀಗೆ ಮುಗಿಯಿತು. ನಾಳೆ ಭಾನುವಾರ. ೧೨ ಕ್ಕೆ ಪಾಟ್ ಲಕ್ ಇದೆ. ನಮ್ಮದೇ ಆಪೀಸ್ ಗೆಳೆಯರೆಲ್ಲ ತಿಂಗಳಿಗೊಮ್ಮೆ ಒಟ್ಟಿಗೆ ಸೇರಿ ಕೆಲವು ಸಮಯಗಳನ್ನು ಖುಷಿಯಾಗಿ ಕಳೆಯುವುದು. ನಾವೆ ನಾವುಗಳು ಮಾಡಿಕೊಂಡು ಬಂದಂತಹ ವಿವಿಧ ಬಗೆಯ ತಿನಿಸು, ಭಕ್ಷ್ಯಗಳನ್ನು ಹಂಚಿಕೊಂಡು ಒಟ್ಟಿಗೆ ತಿನ್ನುವುದು. ಈ ಭಾರಿಯ ನನ್ನ ಪಾಲಿನ ತಿನಿಸು ವೇನಿಲಾ ಐಸ್ ಕ್ರೀಮ್.

ನನ್ನ ಅವಲಕ್ಕಿ ನನಗಾಗಿ ಕಾಯುತ್ತಿದೆ. ತಿಂದ ಬಳಿಕ ಸ್ವಲ್ಪ ರೇಸ್ಟ್ ತೆಗೆದುಕೊಂಡು ಆಪೀಸ್ ಗೆ ಹೋಗಬೇಕು...

ಇದೆ ಲೈಪ್ ಅಲ್ಲವಾ?

ಗುರುವಾರ, ಏಪ್ರಿಲ್ 27, 2017

ಓದು ಪುಸ್ತಕ. ಸುತ್ತು ದೇಶ!

ದೇಶ ಸುತ್ತು ಅಥವಾ ಕೋಶ ಓದು ಎಂದು ಹಿರಿಯರು ಹೇಳಿದ್ದು ಸತ್ಯ.

ಪ್ರಪಂಚವನ್ನು ಪೂರ್ತಿ ಸುತ್ತಲು ಈ ಒಂದು ಜನುಮ ಸಾಕಾಗುವುದಿಲ್ಲ. ಹಾಗೆಯೇ ಒಂದು ಜೀವಮಾನದಲ್ಲಿ ಜಗತ್ತಿನಲ್ಲಿರುವ ಎಲ್ಲ ಪುಸ್ತಕಗಳನ್ನು ಓದಲು ಸಹ ಆಗುವುದಿಲ್ಲ.

ಎರಡು ಸಹ ಈ ಹುಲು ಮಾನವನಿಗೆ ಪೂರ್ಣವಾಗಿ ದಕ್ಕಲಾರದ ಸಂಗತಿಗಳು.

ಆದರೇ ಈ ಎರಡನ್ನು ಪಡೆಯಲು ತನ್ನ ಜೀವನ ಪೂರ್ತಿ ಪ್ರಯತ್ನಿಸುತ್ತ ಇರಬಹುದು.

ಈ ಜಗತ್ತು. ಈ ಭೂಮಿಯ ನಾಲ್ಕನೇ ಒಂದು ಬಾಗವೇ ವಾಸಿಸಲು ಯೋಗ್ಯವಾಗಿದ್ದು. ಮಿಕ್ಕಿದ್ದೇಲ್ಲಾ ನೀರಿನಿಂದ ವ್ಯಾಪಿಸಿದೆ. ಆ ಒಂದು ಭಾಗವನ್ನು ಸಹ ತಾನು ಪೂರ್ಣವಾಗಿ ಅನುಭವಿಸಲು ಸಾಧ್ಯವಿಲ್ಲ.  ಅದು ಕಷ್ಟವಾದ ಕೆಲಸ.

ಇಡೀ ಗೋಲವೇ ವೈವಿಧ್ಯಮಯವಾದ ಜೀವಜಲ ಸಂಪತ್ತಿನ ಆಗರವಾಗಿದೆ. ಸಾವಿರಾರು ವಿಧ ವಿಧ ಸಂಸ್ಕೃತಿ ಸಂಪತ್ತಿನ ತೊಟ್ಟಿಲಾಗಿದೆ. ಇಲ್ಲಿರುವ ವಿಷಯ ವಿಶೇಷಗಳನ್ನು ತಿಳಿದುಕೊಳ್ಳುವುದು ಸುಲಭದ ವಿಷಯವಲ್ಲ. ಓದು ಒಂದು ಮಾದ್ಯಮವಷ್ಟೇ. ಕೆಲವೊಂದು ವಿಷಯಗಳನ್ನು ಅನುಭವದ ಮೊಲಕ ನೋಡಿ ತಿಳಿಯಪಡಿಸಿಕೊಳ್ಳಬಹುದು. ಇನ್ನೂ ಕೆಲವನ್ನು ಆ ಜಾಗ, ವ್ಯಕ್ತಿ, ಜೀವ, ಜಲ, ಸಂಸ್ಕೃತಿ ಸಂಪತ್ತಿನೋಡನೆ ಬೆರೆತು ತನ್ನದಾಗಿಸಿಕೊಳ್ಳಬಹುದು.

ಮನುಷ್ಯನ ಆಯಸ್ಸು ಅತಿ ಕಡಿಮೆ. ಅಯಸ್ಸಿನ ಅಂದಾಜಿನಲ್ಲಿ ಪ್ರತಿಯೊಂದನ್ನು ಕಲಿತು, ತಿಳಿದು ತನ್ನದಾಗಿಸಿಕೊಳ್ಳುವುದು ತನ್ನ ನಿಲುವಿಗೆ ನಿಲುಕುವಂತದಲ್ಲ.

ಎಲ್ಲವನ್ನು ಗೊತ್ತು ಎಂದು ಹೇಳುವುದಕ್ಕೆ ಎಂದಿಗೂ ಆಗುವುದಿಲ್ಲ. ಹಾಗೆ ಹೇಳಿದ ಮರುಕ್ಷಣವೇ ಗೊತ್ತಿಲ್ಲದ ಅನುಭವಿಸಿರದ ಅಕೋಟಿ ಸಂಗತಿಗಳು ರೊಪ್ಪನೇ ತನ್ನ ಬುದ್ಧಿಗೆ ಕಾಣದಂತಾಗುತ್ತದೆ.

ಓದಿನ ಮಜಾ ಅನುಭವಿಸಿದವನೆಗೆ ಗೊತ್ತು. ಇದೊಂದು ಯಾರು ಹೇಗೆ ದೋಚದಂತ ವಿಧ್ಯೆ. ಕಡಿಮೆ ಖರ್ಚಿನಲ್ಲಿ ತನಗೆ ಬೇಕೆನಿಸಿದ್ದನ್ನು ಓದುತ್ತಾ ಬೇರೆಯವರ ಅನುಭವಗಳನ್ನು, ಭಾವನೆಗಳನ್ನು, ಬೇರೆಯ ಜನರ ಜಾಗದ ವಾಸನೆಯನ್ನು ಆಹ್ಲಾದಿಸಬಹುದು.

ಇದೊಂದು ತುಂಬ ಸುಲಭವಾದ ಪಯಣ ಅನಿಸುತ್ತದೆ. ಕುಳಿತಲ್ಲಿಯೇ ಪ್ರಪಂಚದ ಯಾವುದೋ ಗೊತ್ತಿರದ ದೂರದ ಪ್ರದೇಶಕ್ಕೆ ಹೋಗಿಬರಬಹುದು. ಕುಳಿತಲ್ಲಿಯೇ ಕಾಲದ ಯಾವ ಹಂಗಿಲ್ಲದ ಭೂತ ಭವಿಷ್ಯತ್ ನಲ್ಲಿ ಒಮ್ಮಲೇ ಸಂಚರಿಸಬಹುದು.

ಬರಹಗಾರನ ಅನುಭವವನ್ನು ತಾನು ರುಚಿಸಬಹುದು. ಬರಹಗಾರ ಕಂಡುಂಡ ಅನುಭವ ಭಾವನೆಗಳನ್ನು ತಾನು ಸ್ವತಃ ಅನುಭವಿಸಬಹುದು.

ತಾನೇ ನಿಬ್ಬೇರಗಾಗಿ ಯಾವುದೋ ಊರಿನ ಯಾವುದೋ ಮನೆಯ ಯಾರದೋ ವ್ಯಕ್ತಿಯ ಕಷ್ಟ, ನೋವು, ನಲಿವಿಗೆ ಸಾಕ್ಷಿಯಾಗಬಹುದು.

ಲೇಖಕನ ಅಭಿವ್ಯಕ್ತಿಗೆ ತಾನು ದ್ವನಿಯಾಗಬಹುದು. ಇದೇ ಓದಿನ ಜಾದು.

ತನ್ನ ಮನದ ತುಡಿತ-ಮೀಡಿತಕ್ಕೆ ಆ ಬರಹಗರನ ಪುಸ್ತಕ ಸಾಲುಗಳು ದ್ವನಿಯೇನೋ ಅನಿಸುತ್ತದೆ. ತನ್ನ ಮನದ ಚಿಂತನೆಯ ಭಾವನೆಯ ಆಸೆಗೆ ಕಾವ್ಯಗಾರನ ಚಿತ್ರಿತ ಪಾತ್ರ ಅಸರೆಯಾಗುತ್ತದೆ. ಓದುತ್ತಾ ಓದುತ್ತಾ ತಾನು ಯಾವುದೋ ಕಾಲದ ಕಲ್ಫಿತ ಘಟನೆಯಲ್ಲಿ ಒಂದಾಗಿ ಪಾತ್ರಗಳ ಒಳ ನೋಟಗಳಿಗೆ ಬೆಳಕಾಗಿ ಸಂತೃಪ್ತಿಯ ನಿಟ್ಟುಸಿರಾಗಿ ಕರಗಿ ಹೋಗಿಬಿಡಬಹುದು.

ಕಾಡುವ ಪುಸ್ತಕಗಳು ಪ್ರತಿಯೊಬ್ಬ ಓದುಗನನ್ನು ಜೀವನ ಪರಿ ಕಾಯುತ್ತವೆ.

ಎಂದು ಮರೆಯಲಾರದ ಪುಸ್ತಕಗಳು ಎಂದೆಂದಿಗೂ ಒಳ್ಳೆಯ ಸ್ನೇಹಿತರೇ ಸರಿ. ಒಂದೊಳ್ಳೆಯ ಪುಸ್ತಕ ಒಳ್ಳೆಯ ವ್ಯಕ್ತಿಯೇ ಸರಿ.

ಪುಸ್ತಕಗಳಿಲ್ಲದ ಮನೆ ಸ್ಮಶಾನಕ್ಕೆ ಸಮ ಎಂಬ ಗಾದೆಯ ಮಾತಿದೆ.

ಓದುವ ಅಭ್ಯಾಸ ಮನುಷ್ಯನಿಗೆ ದೇವರು ಕೊಟ್ಟ ಮಹಾನ್ ವರವೇ ಸರಿ.

ಇಂದು ಸಂತೋಷಕ್ಕಾಗಿ ಓದುವ ಮಂದಿ ತುಂಬ ಕಮ್ಮಿಯೇ. ವಿದ್ಯಾಭ್ಯಾಸಕ್ಕಾಗಿ ಮಾತ್ರ ಓದು. ವಿದ್ಯೇ ಕೆಲಸಕ್ಕಾಗಿ  ಮಾತ್ರ ಎಂಬ ಕಾಲದಲ್ಲಿ ನಾವೆಲ್ಲಾ ಜೀವಿಸುತ್ತಿದ್ದೇವೆ.

ಸಿಲಬಸ್ ಬಿಟ್ಟು ಮತ್ತೇನೂ ಓದಬೇಡ ನನ್ನ ಕಂದಾ ಎಂದು ಮುದ್ದಿನ ಅಮ್ಮಂದಿರು ಉಪದೇಶ ಮಾಡುವ ಕಾಲಘಟ್ಟದಲ್ಲಿರುವ ಸಂದರ್ಭದಲ್ಲಿ ಓದಿನ ಗಮ್ಮತ್ತನ್ನು ಹೇಗೆ ಹೇಳುವುದು.

ಓದುವುದು ಟೈಂ ವೇಷ್ಟ್ ಎನ್ನುವವರಿದ್ದಾರೆ.

ಅಂಗೈಯಲ್ಲಿಯೇ ಜಗತ್ತನ್ನು ಬ್ರೌಸ್ ಮಾಡುತ್ತಿರುವಾಗ ಕಥೆ ಕಾದಂಬರಿ ಕಾವ್ಯಗಳ ಜರೋರತು ಏಕೆ ಮಗಾ? ಎನ್ನುತ್ತಿದೆ ನಮ್ಮ ಹೈಟೆಕ್ ಹುಡುಗರು.

ಬೇಂದ್ರೆ - ಕುವೆಂಪು ಸಿಲಬಸ್ ಗೆ ಮಾತ್ರ ಸೀಮಿತವಾಗಿದ್ದಾರೆ.

ಬರಹಗಾರರೆಂದರೇ ಸಿಲಬಸ್ ಪುಸ್ತಕಗಳಿಗೆ ಬರೆಯುವವರು ಮಾತ್ರ ಎಂದು ಭಾವಿಸಿರುವ ಕಾನ್ವೇಂಟ್ ಜಮಾನದ ಈ ಸಮಯದಲ್ಲಿ ಕನ್ನಡದ ಪುಸ್ತಕ ಲೋಕದಲ್ಲಿ ಸಂಚರಿಸುವವರು ಯಾರು ಎಂದು ಕೇಳುವಂತಾಗಿದೆ.

ಕೇವಲ ಸಂತೋಷಕ್ಕಾಗಿ ಓದುವ ಯುವಕರನ್ನು ಬೆರಳೆಣಿಕೆಯಲ್ಲಿ ಎಣಿಸುವಂತಾಗಿದೆ.

ಆದರೂ ಪುನಃ ಹಿಂದಿನಂತೆ ಕೈಯಲ್ಲಿ ಪುಸ್ತಕ ಹಿಡಿದು ಓದುವ ಪದ್ಧತಿ ಪುನಃ ಪುನವರ್ತಿತವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಯುವ ಬರಹಗಾರರ ಪುಸ್ತಕಗಳ ಮಾರಾಟ ಜೋರಾಗುತ್ತಿರುವುದು ಖುಶಿಯ ಸಂಗತಿ.

ಒಲ್ಡ್ ಇಸ್ ಗೋಲ್ಡ್. ಏನೇ ಇದ್ದರೂ ಕೈಯಲ್ಲಿ ಪುಸ್ತಕ ಹಿಡಿದು ಹಾಳೆಯನ್ನು ತಿರುವುತ್ತಾ ಮೈಮರೆತು ಪುಸ್ತಕದ ಹುಳುವಾಗುವಲ್ಲಿನ ಸಂತೋಷ ಮತ್ತೊಂದಿಲ್ಲ!

ಓದುತ್ತಾ ಓದುತ್ತಾ ಜಗತ್ತನ್ನೇ ಒಂದು ಸುತ್ತು ಹಾಕಿಬರೋಣ ಎನ್ನುತ್ತಿದೆ ಹೃದಯ. ಏಯ್ ಅದು ಬೇಡ ಬಾ ಜಗತ್ತನ್ನೆ ಹಾರುತ್ತಾ , ನಡೆಯುತ್ತಾ ಒಂದು ಸುತ್ತಿ ಹಾಕಿ ಬರೋಣ ಎನ್ನುತ್ತಿದೆ ಮನ.

ಎರಡೋ ಸಹ ನಮ್ಮ ನಮ್ಮ ಶಕ್ತಿ, ಸಮಯಕ್ಕೆ ಸಂಬಂಧಿಸಿದ್ದು! ಆಸೆ ಆಕಾಶದಷ್ಟಿದ್ದರೂ ಕೇಳುವವರು ಯಾರು?

ಸಮಯ ಸಿಕ್ಕಾಗೆಲ್ಲಾ ಅಷ್ಟು ಇಷ್ಟು ಈಡೇರಿಸಿಕೊಳ್ಳಬೇಕು.

ಓದು ಪುಸ್ತಕ. ಸುತ್ತು ದೇಶ!

ಶನಿವಾರ, ಏಪ್ರಿಲ್ 15, 2017

ಕಾಯಕವೇ ಕೈಲಾಸವಲ್ಲವೇ?

ಇಂದು ಪ್ರತಿಯೊಂದಕ್ಕೂ ವಿವಾದದ ಮುಖವಾಡವನ್ನು ಹಾಕುತ್ತಿದ್ದಾರೆ. ಕೇವಲ ವಿವಾದ ಮಾಡುವುದಕ್ಕೆ ವಿವಾದ ಮಾಡಬಾರದು.

 

ಯಾವುದೇ ವಿಷಯಗಳು ಪುನಃ ಪುನಃ ಸಮಾಜದಲ್ಲಿ ಪ್ರಸ್ತಾಪವಾಗಿ ಆದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗುತ್ತಿವೆ. ಹಿಂದಿನ ದಿನಮಾನಗಳಿಗಿಂತ ಇಂದು ಯಾವುದೇ ಒಂದು ವಿಚಾರಗಳು/ವಿವಾದ ಅತಿ ವೇಗವಾಗಿ ಪ್ರತಿಯೊಬ್ಬರನ್ನು ತಲುಪುತ್ತವೆ.

 

ಮುಚ್ಚು ಮರೆಯಿಂದ ಬಚ್ಚಿಡಲು ಎಂದಿಗೂ ಸಾಧ್ಯವಿಲ್ಲ. ಈಗ ಪ್ರತಿಯೊಬ್ಬನೂ ಗಾಜಿನ ಮನೆಯಲ್ಲಿ ಜೀವಿಸುವ ಯುಗದಲ್ಲಿದ್ದೇವೆ.

 

ಇಂಟರ್ ನೆಟ್ ಕ್ರಾಂತಿಯಂತೂ ಇಡೀ ಜಗತ್ತನ್ನು ತನ್ನ ಅಂಗೈಯಲ್ಲಿಡಿದಿಡುವಂತೆ ಮಾಡಿದೆ. ತನ್ನೂರು ತನ್ನ ರಾಜ್ಯ ದೇಶವಲ್ಲದೇ ಬೇರೆ ದೇಶದ ಯಾವುದೋ ಒಂದು ಭಾಗದ ಘಟನೆಯನ್ನು ಕ್ಷಣ ಮಾತ್ರದಲ್ಲಿ ಕಾಣುವಂತಾಗಿದ್ದಾನೆ.

 

ಇಂದಿನ ಮನುಷ್ಯ ತನ್ನ ಚಿಂತನೆಯಿಂದ ತಾನು ಓದುವ ಶಿಕ್ಷಣಕ್ಕಿಂತ ಹೆಚ್ಚಿನ ಮಟ್ಟಿಗೆ ಯೋಚಿಸುವಂತಾಗಿದ್ದಾನೆ. ಏನನ್ನು ಸುಖ ಸುಮ್ಮನೆ ನಂಬದಂತಾಗಿದ್ದಾನೆ.

 

ಇದು ಈಗಾಗಲೇ ರಾಜಕೀಯ, ಸಾಮಾಜಿಕ, ಅರ್ಥಿಕ ರಂಗದಲ್ಲಿರುವವರಿಗೆ ಮನವರಿಕೆಯಾಗಿದೆ.

 

ತನಗೆ ಏನು ಬೇಕು ಎಂಬುದನ್ನು ತನಗೆ ತಾನೇ ಆರಿಸಿಕೊಳ್ಳುವ ಮಟ್ಟಿಗೆ ಸರ್ಕಾರ ಕೊಟ್ಟಿರುವ ಮೊಲಭೂತ ಹಕ್ಕುಗಳನ್ನು ಸರ್ವ ಸ್ವತಂತ್ರವಾಗಿ ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳುವಲ್ಲಿ ತಾನು ಸಾಕಷ್ಟು ಮುಂದಿದ್ದಾನೆ.

 

ಇಂದಿನ ರಾಜಕೀಯ ನೇತಾರರನ್ನು ಕಂಡರೇ ನನಗೆ ಅಯ್ಯೋ ಅನಿಸುತ್ತದೆ!

 

ಮೊದಲಂತೆ ಕೇವಲ ಬಾಯ್ ಭಾಷಣ, ಒಣ ಮಾತುಗಳಿಗೆ ಕುಗ್ರಾಮದ ಜನರುಗಳು ಸಹ ಮರುಳಾಗದ ಸ್ಥಿತಿಗೆ ಬಂದಿದ್ದಾರೆ. ಅದಕ್ಕೆ ಉದಾಹರಣೆಯೆಂಬಂತೆ ಇತ್ತೀಚಿನ ಚುನಾವಣೆಗಳ ಪಲಿತಾಂಶಗಳೇ ಸಾಕ್ಷಿ. ಒಮ್ಮೆ ಮತದಾರ ಕೊಟ್ಟ ಅವಕಾಶವನ್ನು ತಾನು ಏನಾದರೂ ಸರಿಯಾಗಿ ಬಳಸಿಕೊಂಡು ಆ ಕ್ಷೇತ್ರಕ್ಕೆ ಕೆಲಸ ಮಾಡಲಿಲ್ಲವೆಂದರೇ ಮುಂದಿನ ಚುನಾವಣೆಗಳಲ್ಲಿ ತಾನು ಏನಂದರೂ ಗೆಲ್ಲಲಾಗುವುದಿಲ್ಲ.

 

ಇದು ಗಟ್ಟಿ ಆಶದಾಯಕ ಬೆಳವಣಿಗೆ. ಇದರಿಂದಲೇ ಪ್ರಜಾಪ್ರಭುತ್ವ ಬಲಿಷ್ಟವಾಗುವುದು. ಕೇವಲ ಜಾತಿ, ಹಣ, ಸುಳ್ಳು ಭರವಸೆಗಳಿಂದ ಗೆಲ್ಲುವ ಕಾಲ ದೂರವಾಗುವ ದಿನಗಳು ಬರುತ್ತಿವೆ.

 

ಜಗತ್ತು ಅತಿ ಚಿಕ್ಕದಾಗುತ್ತಿರುವ ಪಲಿತಾಂಶವೇ ಇದು.

 

ಹೌದು, ಪ್ರತಿಯೊಬ್ಬರೂ ತಮ್ಮನ್ನು ತಾವು ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿದ್ದಾರೆ. ಯುವಕರಂತೂ ಅತಿ ವೇಗವಾಗಿ ಹಲವು ವರ್ಷಗಳಿಗಿಂತ ಮುಂದಿದ್ದಾರೆ. ಯುವಕರು ಜಾತಿ ಮತಗಳನ್ನು ಮೀರಿ ಬೆಳೆಯುತ್ತಿದ್ದಾರೆ. ಹಳ್ಳಿ, ರಾಜ್ಯ, ದೇಶಗಳ ಉದ್ಧಾರದ ದೃಷ್ಟಿಯನ್ನು ತಾವುಗಳೇ ಕಂಡುಕೊಂಡಿದ್ದಾರೆ. ಕೇವಲ ಚುನಾವಣ ಮಾತುಗಳಿಂದ ನಮ್ಮಗಳ ಏಳ್ಗೆಯಾಗುವುದಿಲ್ಲ, ಸರ್ಕಾರದ ನಾಯಕ ಸರಿಯಾಗಿದ್ದಾರೆ ಹೇಗೆಲ್ಲಾ ನಮ್ಮ ಜನರ ಜೀವನ ಸುಧಾರಿಸಬಹುದು ಎಂಬುದನ್ನು ಅಕ್ಕ ಪಕ್ಕದ ಊರು, ರಾಜ್ಯ, ದೇಶ ಗಳನ್ನು ನೋಡಿ ತಿಳಿದುಕೊಳ್ಳುತ್ತಿದ್ದಾನೆ.

 

ಸರ್ಕಾರವೆಂಬುದು ನಮ್ಮನ್ನು ನಾವುಗಳು ಕಾಪಾಡಿಕೊಳ್ಳಲು ನಾವೇ ರಚಿಸಿಕೊಂಡಿರುವ ವ್ಯವಸ್ಥೆ.

 

ಜನಗಳೇ ಇಚ್ಛೆಪಟ್ಟು ಆರಿಸಿಕೊಳ್ಳು ತಮ್ಮ ಪ್ರತಿನಿಧಿಗಳ ಸೇವೆ ಹೇಗೆಲ್ಲಾ ಇರಬೇಕು ಎಂಬ ಕನಸು ಪ್ರತಿ ಮತದಾರನದಾಗಿದೆ. ಆದ್ದರಿಂದ ಹಿಂದೆ ಇದ್ದಂತಹ ಚುನಾವಣೆಯ ಜೋರೂ ಇಂದಿಲ್ಲ. ಮತದಾರ ತನ್ನ ಕ್ಷೇತ್ರದ ಪ್ರತಿನಿಧಿಯ ಕೆಲಸಗಳನ್ನು ಅವನ ಬಾಯಿಯಿಂದ ಚುನಾವಣ ಪ್ರಚಾರದ ಭಾಷಣ ಮಾತ್ರದಿಂದ ಕೇಳಿ ತಿಳಿಯಬೇಕಿಲ್ಲ. ಪ್ರತಿಯೊಬ್ಬರಿಗೂ ಆ ವ್ಯಕ್ತಿ ನಾಯಕರ ಬಗ್ಗೆ ಹಲವು ಮೊಲಗಳಿಂದ ಮೊದಲೇ ನಿಜವಾದ ಬಂಡವಾಳ ತಿಳಿದಿರುತ್ತದೆ. ಪಕ್ಷ ಗಳಿಗಿಂತ ವ್ಯಕ್ತಿ ಮುಖ್ಯ ಎಂಬುವ ಕಾಲ ಇದಾಗಿದೆ. ಈ ಪಕ್ಷದಿಂದ ಕತ್ತೆ ನಿಲ್ಲಿಸಿದರೂ (ಪಕ್ಷದ ಮುಖದಿಂದ) ಗೆಲ್ಲುವನು ಎಂಬುವ ಮಾತು ಒಭೀರಾಯನದಾಗಿದೆ.

 

ಇದೇ ಪ್ರಜಾಪ್ರಭುತ್ವದ ಮಹಾನ್ ಸೌಂದರ್ಯ. ದೇಶದ ಪ್ರಗತಿ ಮತ್ತು ಭವಿಷ್ಯತ್ ಉಜ್ವಲವಾಗಿರುತ್ತದೆ ಎನ್ನಲು ಇದಕ್ಕಿಂತ ಇನ್ನು ಏನು ಬೇಕು?

 

ಈಗಂತೂ ಪೊಳ್ಳು ಮಾತಿನ ಮಲ್ಲರು ದಿನಬೆಳಗಾದರೆ ಬೆತ್ತಲಾಗುತ್ತಿದ್ದಾರೆ. ಹಿಂದಿನ ಕಾಲದಂತೆ ಗೆದ್ದರೇ ಮುಗಿಯಿತು ಐದು ವರುಷ ಯಾರು ನನ್ನನ್ನು ಕೇಳುವಂತಿಲ್ಲ ಎನ್ನುವಂತಿಲ್ಲ.

 

ಸಾರ್ವಾಜನಿಕ ಜೀವನದಲ್ಲಿರುವ ಅಸಲಿಯತ್ತು ನಿತ್ಯ ದರ್ಶನವಾಗುತ್ತಿರುತ್ತದೆ. ಯಾರು ಬೂಟಾಟಿಕೆ ಮಾಡುತ್ತಿದ್ದಾರೆ. ಯಾರು ನಿಜವಾದ ಸಮಾಜ ಸೇವೆಯ ಕಳಕಳಿ ಒಂದಿದ್ದಾರೆ ಎಂಬ ವಿಚಾರ ಪ್ರತಿಯೊಬ್ಬ ಪ್ರಜೆಗೂ ತಿಳಿಯುತ್ತಿದೆ.

 

ಹೌದು ಸರ್ಕಾರದ ಯಜಮಾನ ಯೋಗ್ಯವಾಗಿದ್ದರೆ ಅಲ್ಲಿರುವ ಪ್ರತಿಯೊಂದು ಕಾರ್ಯವು ಸುಗಮವಾಗಿ ನಡೆಯುತ್ತದೆ. ಅಭಿವೃದ್ಧಿಯ ಮಾತು ಜನರ ಸಮಸ್ಯೆಯನ್ನು ಪರಿಹರಿಸುವ ನಮ್ಮ ಸಾಮಾನ್ಯ ನಾಯಕನ ಜರೂರತು ಇಂದು ಪಂಚಾಯಿತಿ ಪ್ರತಿನಿಧಿಯಿಂದ ಪ್ರಧಾನ ಮಂತ್ರಿಯವರೆಗೂ ಬೇಕಾಗಿದೆ.

 

ಇಷ್ಟು ದಿನ ನಮ್ಮನ್ನು ಆಳುವ ಪ್ರಭುಗಳ ಅಸಲಿತನ ತಿಳಿದದ್ದಾಗಿದೆ. ಕೇವಲ ಲೂಟಿಕೋರತನವನ್ನೆ ಬಂಡವಾಳ ಮಾಡಿಕೊಂಡು, ರಾಜಕೀಯ ಕ್ಷೇತ್ರವೆಂದರೇ ಹೆಚ್ಚು ಹಣ ಮಾಡುವ ರಂಗವೆಂಬಂತೆ ಮಾಡಿದ್ದಾರೆ.

 

ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ನಮಗೆ ನಮ್ಮ ನಗರಕ್ಕೆ ಏನು ಬೇಕು? ಹಿಂದೆ ಅಧಿಕಾರದಲ್ಲಿದ್ದ ನಾಯಕನು ಇಲ್ಲಿಯವರೆಗೆ ಯಾವ ರೀತಿಯಲ್ಲಿ ನಮ್ಮ ಊರನ್ನು ಅಭಿವೃದ್ಧಿ ಮಾಡಿದ್ದಾನೆ?

 

ಮತ್ತೆ ಮುಂದಿನ ಚುನಾವಣೆಯಲ್ಲಿ ಅದೇ ಭರವಸೆಯ ಆಸೆಯ ಸುಳ್ಳು ಮಾತನ್ನಾಡುತ್ತಾ ಬಂದರೇ ಸುಮ್ಮನೇ ಎಂದಿಗೂ ಕೂರಬಾರದು.

 

ಬೇರೆಯವರು ತಮ್ಮ ಕ್ಷೇತ್ರವನ್ನು ಆಗೆಲ್ಲಾ ಸುಧಾರಿಸಲು ಸಾಧ್ಯವಾಗಿದ್ದರೇ ಈ ಮಹಾಶಯನ ಕೈಯಲ್ಲಿ ಯಾಕಾಗಿಲ್ಲ? ಈ ಪ್ರಶ್ನೇ ಪ್ರತಿಯೊಬ್ಬರಲ್ಲೂ ಉದ್ಬವಿಸಿದರೇ ಬದಲಾವಣೆಯ ಹೊಸ ಗಾಳಿ ಬೀಸಿದಂತೆ.

 

ಈಗಲೂ ಇನ್ನೂ ನಮ್ಮ ಹಳೇ ಬುದ್ಧಿಯ ನಾಯಕ ಶಿಖಾಮಣಿಗಳು ಹಣವೊಂದಿದ್ದರೇ ಯಾವುದೇ ಚುನಾವಣೆ, ಅಧಿಕಾರವನ್ನು ತಮ್ಮದನ್ನಾಗಿಸಿಕೊಳ್ಳಬಹುದು ಎಂಬ ಸುಳ್ಳು ಭ್ರಮೆಯಲ್ಲಿ ಕಾಯುವಂತಿದ್ದರೇ.. ಅವರಂತಹ ಶತಃ ಮೂರ್ಖರೂ ಮತ್ತೊಬ್ಬರಿಲ್ಲ!

 

ಸೇವೆಗಾಗಿ ಬರುವ ನಾಯಕರಿಗೆ ಮಾತ್ರ ಇಂದಿನ ಪ್ರಜಪ್ರಭುತ್ವದಲ್ಲಿ ಜಾಗ. ಕೇವಲ ಪ್ರಸಿದ್ಧಿ ಪಡೆದಿರುವ ಪಕ್ಷ, ಪ್ರಸಿದ್ಧಿ ಪಡೆದ ಹಳೆ ಮನೆತನದ ಸಾಥ್ ಇದೆ. ಈಗಲೂ ನಾನೇ ಗೆಲ್ಲುವುದು ಎಂಬ ಗೀಳಿದ್ದರೇ, ಹೇಗೆ ಚುನಾವಣೆಯಲ್ಲಿ ಮತದಾರ ಮಕಾಡೆ ಮಲಗಿಸುವನು ಎಂಬುದನ್ನು ಅಲ್ಲಿ ಇಲ್ಲಿ ಈಗಾಗಲೇ ತೋರಿಸಿದ್ದಾನೆ.

 

ಇದು ಕೇವಲ ರಾಜಕೀಯ ರಂಗದ ಮಾತಲ್ಲ. ಪ್ರತಿಯೊಂದು ಕ್ಷೇತ್ರದ ಸಾರ್ವಜನಿಕ ರಂಗದಲ್ಲಿರುವವರ ವ್ಯಕ್ತಿಗತಃ ಎಚ್ಚರಿಕೆ.

 

ಜನ ಸಾಮಾನ್ಯರಿಗೆ ಏನೂ ತಿಳಿಯುವುದಿಲ್ಲ ಎಂದು ಕಣ್ಣು ಮುಚ್ಚಿ ಹಾಲು ಕುಡಿದರೇ ಬದುಕುವುದು ಈಗಂತೂ ಸಾಧ್ಯವಿಲ್ಲ.

 

ಇದರಿಂದಲೇ ಹಿಂದಿಗಿಂತ ಇಂದು ಸಾರ್ವಜನಿಕವಾಗಿ ಪ್ರಸಿದ್ಧರಾಗುವುದು ಮತ್ತು ಆ ಸ್ಥಾನವನ್ನು ಕೊನೆಯವರೆಗೂ ಕಾಪಾಡಿಕೊಳ್ಳುವುದು ಸುಲಭವಲ್ಲ. ಒಮ್ಮೆ ಸಿಕ್ಕಿದ ಉನ್ನತ ಸ್ಥಾನ ಮಾನವನ್ನು ಜೀವ ಇರುವವರೆಗೂ ಉಳಿಸಿಕೊಳ್ಳಲು ನಿತ್ಯವು ಅಷ್ಟೆ ಪರಿಶ್ರಮಪಡಬೇಕಾಗುತ್ತದೆ.

 

ಇದಕ್ಕೆ ಈಗಾಗಲೇ ನಮ್ಮ ಸುತ್ತ ಮುತ್ತ ಹತ್ತು ಹಲವಾರು ಉದಾಹರಣೆಗಳಿವೆ.

 

ಆದ್ದರಿಂದ ಯಾರೊಬ್ಬರೂ ಮೈಮರೆತು ಏನನ್ನು ಮಾಡುವಂತಿಲ್ಲ. ಪ್ರತಿಯೊಂದು ಚಲನೆಗೂ ಬೆಲೆ ಕಟ್ಟಲೇಬೇಕು.

 

ಸುಖ ಸುಮ್ಮನೇ ಹೆಸರು ಮಾಡಲು ಇಂದು ಸಾಧ್ಯವಿಲ್ಲ. ಯಾಕೆಂದರೇ ಪ್ರತಿಯೊಂದನ್ನು ಸಾಮಾನ್ಯ ಪ್ರಜೆ ಹಾಗೆಯೇ ಒಪ್ಪಿಕೊಳ್ಳುವುದಿಲ್ಲ. ಪ್ರಶ್ನೇ ಮಾಡುವ ಮಹಾತ್ತರ ಜವಾಬ್ದಾರಿನ್ನು ತನ್ನದಾಗಿಸಿಕೊಂಡಿದ್ದಾನೆ.

 

ಇದು ಹೀಗೆ ಮುಂದುವರಿಯುವುದು.. ಯಾಕೆಂದರೇ ನಾವಿರುವುದು ಮಾಹಿತಿ ಯುಗದಲ್ಲಿ... ಇದು ಹೀಗೆ ನಡೆದರೇ ಎಲ್ಲಿ ಹೋಗಿ ನಿಲ್ಲುವುದೋ.. ಬದಲಾವಣೆಯಂತೂ ಜಾರಿಯಲ್ಲಿದೆ. ಯಾರು ಯಾರು ಹೇಗೆಲ್ಲಾ ತಮ್ಮ ಸ್ಥಾನ ಕಾಪಾಡಿಕೊಳ್ಳುವರೋ ಬಲ್ಲವರಿಲ್ಲ.

 

ತಮ್ಮ ತಮ್ಮ ಜಾಗದಲ್ಲಿರುವವರು ತಮ್ಮ ತಮ್ಮ ಕಾಯಕವನ್ನು ತಪ್ಪದೇ ಸರಿಯಾಗಿ ಮಾಡಿದರೇ ಪರಶಿವನೇ ಮೆಚ್ಚುವನು. ಇನ್ನೂ ಸಾಮಾನ್ಯ ಜನಗಳ ಮಾತೇನು?

 

ಕಾಯಕವೇ ಕೈಲಾಸವಲ್ಲವೇ?

 

ಭಾನುವಾರ, ಜನವರಿ 1, 2017

ಹೊಸದಾಗಿ ಲವ್ ಪ್ರಪೋಸ್ ಮಾಡಬೇಕು

ಉಫ್ ಎಷ್ಟು ಬೇಗ ಒಂದು ವರುಷ ಕಳೆದು ಹೋಯಿತು.

ನೆನ್ನೆ ಮೊನ್ನೆಯೆಂಬಂತೆ ನಿನ್ನನ್ನು ದೂರದ ಬೆಂಗಳೂರಿಗೆ ಬಿಟ್ಟು ಬಂದ ನೆನಪು.

ನಿನ್ನ ಅವತ್ತಿನ ಮುಗುಳ್ನಗೆ ಇನ್ನು ಹಾಗೇ ನನ್ನ ಕಣ್ಣ ಪರದೆಯ ಮೇಲೆ ಶಾಶ್ವತವಾಗಿ ನಿಂತಿದೆ.

ಅಂದು ಜನವರಿ ೩೦ ಸಂಜೆ ಗೋದೂಳಿ ಬೆಳಕು. ದೂರದಲ್ಲಿ ಕೊನೆಯ ಬಸ್ ಸೌಂಡ್ ಮಾಡಿಕೊಂಡು ಬರುತ್ತಿದೆ. ನಿನ್ನ ಕೊನೆ ಭಾರಿ ನೋಡು ಭಾಗ್ಯ ಮುಂದಿನ ನಿಮಿಷದಿಂದ ಇಲ್ಲವಾಗುತ್ತಾಲ್ಲಪ್ಪಾ. ಎಂದು ಬೇಸರವಾಗಿತ್ತು.

ಅಂದು ಭಾರವಾದ ಮನಸ್ಸಿನಿಂದ ಬಿಳ್ಕೊಟ್ಟು ಮನೆ ಹಾದಿ ಹಿಡಿದಿದ್ದೆ. ರಾತ್ರಿಯೆಲ್ಲ ನಿದ್ದೆಯಿಲ್ಲ. ನಿನ್ನಿಂದ ಮುಂಜಾನೆ ಮೇಸೆಜ್ ಬಂದಾಗಲೇ ಗಡದ್ದಾಗಿ ನಿದ್ದೆ ಮಾಡಿದ್ದು.

ಒಂದು ವರುಷದಿಂದ ಅದು ಹೇಗೆ ನೀನು ಓದು ಓದುತ್ತಿರುವಿಯೋ ದೇವರೇ ಬಲ್ಲ. ವರುಷದಲ್ಲಿ ಒಮ್ಮೆಯಾದರೂ ಹಳ್ಳಿಗೆ ಬಾ ಎಂದರೇ.. ನಿನ್ನದು ಅದೇ ವ್ರತ ಇಲ್ಲ ಈ ಕೋರ್ಸ್ ಮುಗಿಯುವುದು ಸರಿಯಾಗಿ ಮುಂದಿನ ಜನವರಿ ಒಂದು ವರುಷಕ್ಕೆ. ಅದು ಮುಗಿದ ತಕ್ಷಣ ಶಾಶ್ವತವಾಗಿ ಹಳ್ಳಿಗೆ ಬರುವೆನಲ್ಲ. ಅದು ಯಾಕೆ ಮಧ್ಯದಲ್ಲಿ ಹೋಗಿ ಬರುವ ಮಾತು ಎನ್ನುತ್ತಿಯ.

ಇರಬಹುದು ದೊಡ್ಡ ಓದಿನ ಹುಡುಗಿಗೆ ಸಮಯವಿಲ್ಲಿ ಸಿಗಬೇಕು?

ಆದರೂ ನೀನು ಬೇರೆಯವರ ರೀತಿಯಲ್ಲ. ಅದೇ ನಿನ್ನನ್ನು ಇನ್ನೂ ಹೆಚ್ಚು ಹೆಚ್ಚು ಹಚ್ಚಿಕೊಳ್ಳುವಂತೆ ಮಾಡುತ್ತಿರುವುದು.

ಇಂದು ಜಗತ್ತೆ ಒಂದು ಹಳ್ಳಿಯಾಗಿದೆ. ಬೆಂಗಳೂರು ಏನೂ ಅಲ್ಲ. ದೂರದ ನ್ಯೂಯಾರ್ಕ್ ಪಕ್ಕದ ಹಳ್ಳಿಯಂತಾಗಿದೆ. ನಿತ್ಯ ಪೊನ್, ವಿಡಿಯೋ ಕಾಲ್, ಎಫ್.ಬಿ, ವಾಟ್ಸಾಪ್ ಎಂದು ಪ್ರತಿಯೊಬ್ಬರೂ ದೂರವಿರುವವರನ್ನು ಹತ್ತಿರ ಮಾಡಿಕೊಂಡಿದ್ದಾರೆ. ಇಂಥ ಸಮಯದಲ್ಲಿ ನೀ ಈ ಎಲ್ಲವುದರಿಂದಲೂ ಬಹು ದೂರ ಇದ್ದಿಯಲ್ಲ?

ನೀನು ಅದು ಏಕೆ ಈ ಸಂಹವನ ಸಂಪರ್ಕ ಸಾಧನಗಳನ್ನು ಬಳಕೆ ಮಾಡುತ್ತಿಲ್ಲ ಎಂದು ಹಲವು ಭಾರಿ ಬೇಜಾರು ಮಾಡಿಕೊಂಡಿದ್ದೇನೆ. ಹಾಗೆಯೇ ನೀನು ಅತಿ ಹೆಚ್ಚು ಅಂತರವನ್ನು ಇವುಗಳಿಂದ ಉಳಿಸಿಕೊಂಡಿರುವುದನ್ನು ಕಂಡು ಖುಷಿಯನ್ನು ಪಟ್ಟಿದ್ದೇನೆ. ಹೌದು ನಾವುಗಳು ನಮ್ಮತನವನ್ನು ಇವುಗಳಿಗೆ ಕೊಡಬಾರದು. ಆದರೇ ಉಪಯೋಕ್ತವಾಗಿ ಬಳಸಿಕೊಂಡರೇ ಏನು ತಪ್ಪಿಲ್ಲ.

ಅದಕ್ಕೆ ನನಗೆ ಈ ಒಂದು ವರುಷ ಎನ್ನುವುದು ಎಷ್ಟು ಕಷ್ಟದ ಕಾಲವೆನಿಸಿದೆ. ನಿನ್ನ ಕರಾರುವಾಕ್ಕದ ವಾರದ ಒಂದು ಪೋನು ಕರೆ ಸ್ವಲ್ಪವಾದರೂ ಈ ನನ್ನ ಚೈತನ್ಯವನ್ನು ಉಳಿಸಿದೆ.

ಹುಡುಗಿಯರಿಗೆ ಹುಡುಗರನ್ನು ಗೋಳು ಹೊಯ್ದುಕೊಳ್ಳುವುದರಲ್ಲಿರುವ ಸುಖ ಇನ್ನು ಯಾವುದರಲ್ಲಿಯು ಇಲ್ಲ ಎನಿಸುತ್ತದೆ. ಅದಕ್ಕೆ ಹೀಗೆ ನೀ ನನ್ನ ಸತಾಯಿಸುತ್ತಿದ್ದೀಯಾ.

ನನ್ನ ಅಕ್ಕ ಪಕ್ಕ ಇರುವ ಮಂದಿಯೆಲ್ಲ ಸೋಷಿಯಲ್ ಮೀಡಿಯಾದಲ್ಲಿಯೇ ತಮ್ಮನ್ನು ತಾವು ಪೂರ್ಣವಾಗಿ ತೊಡಗಿಸಿಕೊಂಡು ದೂರವಿರುವರೆಲ್ಲನ್ನು ಹತ್ತಿರವಿರುವೆಂಬಂತೆ ಕಂಡು ಸಂಭ್ರಮಿಸುತ್ತಿದ್ದಾರೆ. ಅದನ್ನು ಕಂಡು ನಿನ್ನ ಮೇಲೆ ತುಂಬಾನೆ ಸಿಟ್ಟು ಬರುತ್ತದೆ. ಅಲ್ಲ ಲೇಟೆಸ್ಟ್ ಪೋಟು ಷೇರ್ ಮಾಡಿಕೊಳ್ಳುವ ಮಟ್ಟಿಗಾದರೂ ನೀ ಒಂದು ಪೇಸ್ ಬುಕ್  ಅಥವಾ  ವಾಟ್ಸಾಪ್ ಅಕೌಂಟ್ ಒಪನ್ ಮಾಡಿದ್ದರೇ ಏನು ಪ್ರಾಬ್ಲಮ್?

ಆದರೇ ನೀನು ಕೇಳಬೇಕಲ್ಲ. ನೋ ಅದೆಲ್ಲಾ ನನಗೆ ಸರಿ ಬರುವುದಿಲ್ಲ. ಅದು ಯಾಕೋ ನನಗೆ ಅವುಗಳನ್ನು ಉಪಯೋಗಿಸುತ್ತಾ ಉಪಯೋಗಿಸುತ್ತಾ ಕೂರುವುದು ಆಗುವುದಿಲ್ಲ.

ನನಗೆ ಅದೇ ಹಳೆ ಕಾಲದ ಪೋನು ಮಾತೇ ಇಷ್ಟ. ಶಾರ್ಟ್ ಅಂಡ್ ಸ್ವೀಟ್ ಆಗಿ. ನೋಡುವಂತಾದರೇ ಕುದ್ದು ಬೇಟಿ ಮಾಡಬೇಕು. ಅದೇ ಮನುಷ್ಯತ್ವ ಅನ್ನುತ್ತಿಯ. ಆದರೇ ಕುದ್ದು ಬೇಟಿ ಮಾಡಲು ಒಮ್ಮೆಯಾದರೂ ಮನಸ್ಸು ಮಾಡಿದ್ದೀಯಾ?

ನಿನಗೆ ನನ್ನ ಕಂಡರೇ ಪ್ರೀತಿಯೇ ಇಲ್ಲ ಅನಿಸುತ್ತದೆ!

ನಾನು ಬರುತ್ತೀನಿ ಬೆಂಗಳೂರಿಗೆ ಅಂದರೇ.. ಬೇಡವೇ ಬೇಡ ಅನ್ನುತ್ತಿಯಾ? ಅಲ್ಲ ನಿನ್ನ ಮನಸ್ಸಿನಲ್ಲಿರುವುದಾದರೂ ಏನು ಹೇಳ್ತಿಯಾ?

ಜನವರಿ ೨೦೧೭ ನನಗಂತೂ ತುಂಬ ಖುಷಿಯ ತಿಂಗಳು ಯಾಕೆಂದರೇ ನಿನ್ನ ಆ ಕೋರ್ಸ್ ಗೆ ದಿ ಎಂಡ್!

ಕೊನೆಗೂ ನೀ ನಿನ್ನ ತವರಿಗೆ ವಾಪಸ್ಸ್ ಬರುತ್ತಿಯಲ್ಲ. ಅಮೇಲೆ ಏನಿದ್ದರೂ ನಾನು ಹೇಳಿದ ರೀತಿ ನೀ ಕೇಳಬೇಕು.

ಪೆಬ್ರವರಿ ೧೫ ಕ್ಕೆ ನಾನು ನೀನಗೆ ಹೊಸದಾಗಿ ನನ್ನ ಲವ್ ಪ್ರಪೋಸ್ ಮಾಡಬೇಕು ಅನ್ನಿಸುತ್ತಿದೆ. ಹೌದು ಈ ೨೦೧೬ ನನಗೆ ತುಂಬ ಕಷ್ಟದ ವರುಷ. ಕಳೆದ ವರುಷದ ನೆನಪು ಮಾಸ ಬೇಕೆಂದರೇ ನನ್ನ ಪ್ರೀತಿಯನ್ನು ನವೀಕರಣ ಮಾಡಿಸಲೇ ಬೇಕು.

ಇನ್ನು ಏನು ಏನೋ ಕನಸುಗಳನ್ನು ಕಂಡಿದ್ದೀನಿ. ನಿನಗೆ ಗೊತ್ತಾ ನಮ್ಮ ಆ ಹೊಸ ತೋಟದಲ್ಲಿರುವ ಆ ಚಿಗುರು ಮಾವಿನ ಮರಗಳು ಈಗಾಗಲೇ ಫಲ ಕೊಡಲು ಪ್ರಾರಂಭಿಸಿವೆ. ಬರಗಾಲದಲ್ಲೂ ತೋಟ ಜಗಮಗ ಹಸಿರು ಹೊತ್ತು ನಿಂತಿವೆ. ಅಲ್ಲಿರುವ ಪ್ರತಿಯೊಂದು ಗಿಡ ಮರಗಳಿಗೂ ನಿನ್ನ ಕಾಣಲು ಕಾತುರವೆಂಬಂತೆ ಹೊ ಬಿಟ್ಟು ಸಂಭ್ರಮಿಸುತ್ತಿವೆ.  ನೀ ಬರಬೇಕು ಅದನ್ನು ನಿನ್ನ ಕಣ್ಣಾರೆ ನೋಡಬೇಕು.

ಆ ಕೋರ್ಸ್ ನಲ್ಲಿ ಕಲಿತ ವಿಷಯಗಳನ್ನು ಇಲ್ಲಿರುವ ತೋಟದಲ್ಲಿ ಪರಮರ್ಶಿಸಬೇಕು. ಓದಿಗಿಂತ ಕ್ರೀಯೆ ಮುಖ್ಯ!

ಗೊತ್ತಾ ನೀನು ನಾನು ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿನ ಆ ಒಂದು ಸೀನ್ ಗಾಗಿ ಎಷ್ಟು ಭಾರಿ ಸಿನಿಮಾ ನೋಡಿದ್ದು? ಹೌದು ನೂರು ಜನ್ಮಕ್ಕೂ ನೀ ನನ್ನವಳು ಎಂಬ ಭಾವ ನೊರೆಯಂತೆ ಅಚ್ಚೊತ್ತಿದ್ದು. ಎಂದು ಮರೆಯಲಾಗದ ದಿನಗಳು.

ಸುತ್ತಲಿನ ಪ್ರತಿಯೊಬ್ಬರಿಗೂ ಹೇಳಿ ಬಿಟ್ಟಿದ್ದೀನಿ. ನೀನೆ ಇಲ್ಲಿನ ಎಲ್ಲ ರೈತರ ಡಾಕ್ಟರ್. ಇಲ್ಲಿನ ಬೆಳೆಗಾರರ ವಿವಿಧ ಸಮಸ್ಯೆಗಳಿಗೆ ನಿನ್ನಿಂದ ಉಪಯೋಗವಾಗಲಿ. ನೀ ಕಲಿತ ವಿಧ್ಯೆ ಇಲ್ಲಿಯವರಿಗೆ ಆ ರೀತಿಯಲ್ಲಿ ಬಳಕೆಯಾಗಲಿ.

ಇಡೀ ದೇಶವೇ ಮೇಕಿಂಗ್ ಇಂಡಿಯಾದ ಕಡೆ ದಾಪುಗಾಲು ಹಾಕುವ ಈ ಸಮಯದಲ್ಲಿ ನೀನು ಮರಳಿ ಮಣ್ಣಿನ ಕಡೆಗೆ ಬರುತ್ತಿರುವುದು ಹೊಸ ವರುಷದ ಈ ಸಮಯದಲ್ಲಿ ಈ ನನ್ನ ಹಳ್ಳಿಗೆ ಹೊಸ ಭರವಸೆಯನ್ನು ಮೊಡಿಸುತ್ತಿದೆ.

ನಾನು ಕೇಳುವ ಚಿಕ್ಕ ಕೋರಿಕೆ ಪ್ಲೀಜ್ ನೀನು ಡಿಜಿಟಲ್ ಕ್ರಾಂತಿಯ ಬಳಕೆಯನ್ನು ಹೆಚ್ಚು ಕಂಡುಕೊಳ್ಳು. ಜಗತ್ತಿನಲ್ಲಿ ನಡೆಯುತ್ತಿರುವ ವಿವಿಧ ಕ್ಷೇತ್ರಗಳ ಬೆಳವಣಿಗಗಳನ್ನು ಅಂಗೈಯಲ್ಲಿ ತಿಳಿದುಕೊಳ್ಳಬಹುದು. ಇದು ನಿನಗೆ ತುಂಬ ಸಹಕಾರಿಯಾಗುತ್ತದೆ.

ಡಿಜಿಟಲ್ ಎಂದರೇ ಕೇವಲ ಸಮಯ ಹಾಳು ಮಾಡುವ ಎಫ್.ಬಿ ಅಥವಾ ವಾಟ್ಸಾಪ್ ಮಾತ್ರ ಅಲ್ಲ!

ನಾವಿಬ್ಬರೂ ಯೋಚಿಸಿದ ಯೋಜಿಸಿದ ಕಾರ್ಯಕ್ರಮಗಳ ಅನುಷ್ಟಾನದ ದಿನಗಳು ಬಂದಿವೆ. ಇನ್ನೂ ನಮ್ಮ ಕಾರ್ಯ ಕ್ಷೇತ್ರ ಇದೆ ನಮ್ಮಳ್ಳಿಯ ಭೂಮಿ. ಇದಕ್ಕೆ ಇರಬೇಕು ನೀನು ನನಗೆ ಮೊದಲ ಭಾರಿ ಬೇಟಿ ಮಾಡಿದಾಗ ಇಷ್ಟವಾಗಿದ್ದು. ಇಂದಿನ ಈ ಅಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ನಗರದ ಕಡೆ ಮುಖ ಮಾಡುವಾಗ ಏನಪ್ಪಾ ಈ ಹುಡುಗಿಯ ಥಿಂಕಿಂಗ್ ಹೀಗೆ ಅನಿಸಿದ್ದು.. ಇದೇ ನಿನ್ನನ್ನು ನನ್ನ ಪ್ರೀತಿಯನ್ನಾಗಿ ಮಾಡಿದ್ದು.

ಉಫ್ ಈ ಪತ್ರದಲ್ಲಿ ಎಲ್ಲಾ ಬರೆಯಾಲಾಗುವುದಿಲ್ಲ. ಬಾ ಬಂದ ಮೇಲೆ ಮುಗಿಯದ ಮಾತುಗಳನ್ನು ಅದೇ ದೂರದ ನಮ್ಮ ಪೇವರಿಟ್ ಜಾಗವಾದ ಒಂಟಿ ಮರವಿರುವ ಚಿಕ್ಕ ಹಳ್ಳದ ಸಾಲಿನ ಬೊಮ್ಮ ಗುಡ್ಡದ ಮೇಲೆ ಮತ್ತೆ ಮುಂದುವರಿಸೋಣ.

ಆ ಜಾಗಕ್ಕೆ ನೀ ಇಲ್ಲದ ಒಮ್ಮೆ ಹೋಗಿದ್ದೇ. ಯಾಕೋ ಅಲ್ಲಿ ಒಂದು ಕ್ಷಣವು ನಿಲ್ಲಲಾಗಲಿಲ್ಲ. ಅಲ್ಲಿರುವಷ್ಟು ಸಮಯವು ನಿನ್ನದೇ ನೆನಪು. ಅದಕ್ಕಾಗಿ ಕಳೆದ ವರುಷದಲ್ಲಿ ಒಮ್ಮೆಯು ಅತ್ತ ಕಡೆ ತಲೆ ಹಾಕಿಲ್ಲ ಗೊತ್ತಾ?

ನೀ ಯಾವಾಗ ಬೆಂಗಳೂರು ಬಿಡಿವಿಯೋ. ಇಲ್ಲಿಗೆ ಯಾವ ಬಸ್ ಗೆ ಬರುವಿಯೋ ತಿಳಿಸು.  ಈ ನಿನ್ನ ಯುವ ಪ್ರೇಮಿ ಕುದ್ದು ನಿನ್ನ ಕರೆದೊಯ್ಯಲು ಬಸ್ ಸ್ಟಾಪ್ ಗೆ ಬರುವನು..! ನನಗೆನೂ ದಾರಿ ಗೊತ್ತಿಲ್ಲವಾ ಹೋಗು. ಎಂದು ಮೂಗು ಮುರಿಯ ಬೇಡ..!

ಅಂತೂ ಮುಖತಾಃ ಬೇಟಿ ಮಾಡುವ ಕ್ಷಣಗಳು ಮುಂದಿವೆ. ಇದೇ ಸಂತೋಷದ ವಿಷಯ!

ಸಿಗುವ. ಬೇಗ ನಾಲ್ಕು ದಿನಗಳು ಪಾಸ್ಟಾಗಿ ಹೋಗ್ಲ್ ಪ್ಪಾ!

ಬಾಯ್!