ಗುರುವಾರ, ಅಕ್ಟೋಬರ್ 20, 2016

ಪೇಪರ್ ಲೆಸ್ ಯುಗ

ಪೇಪರ್ ಲೆಸ್ ಯುಗ ಅಂದರೇ ಇದೆ ಇರಬೇಕು. ಪೆನ್ನು ಪೇಪರ್ ಗಳ ಬಳಕೆಯೇ ಗೌಣವಾಗಿದೆ. ಕಂಪ್ಯೂಟರ್ ಮೊಬೈಲ್ ಗಳು  ಶೇ ೯೯ರಷ್ಟು ಮಾನವನ ಕೈಯಾರೆ ಬರೆಯುವ ಬರವಣಿಗೆಯನ್ನು ನಿಲ್ಲಿಸಿದೆ.

ಹಿಂದೆ ಬಾಲ್ಯದಿಂದಲೇ ಬಳಪ, ಸ್ಲೇಟ್ ಅಕ್ಷರಾಭ್ಯಾಸಕ್ಕೆ ಬಳಸುತ್ತಿದ್ದರು. ಬಳಪಗಳೋ ವಿಧ ವಿಧವಾದವುಗಳಿದ್ದವು. ಸ್ಲೇಟ್ ಗಳಲ್ಲೂ ಎಷ್ಟೊಂದು ಬಗೆ ಕಲ್ಲಿನ ಸ್ಲೇಟ್, ತಗಡಿನ ಸ್ಲೇಟ್, ತೀರಾ ಇತ್ತೀಚೆಗೆ ಪ್ಲಾಸ್ಟಿಕ್ ಸ್ಲೇಟ್ ಬಳಕೆ ಪ್ರಾರಂಭವಾಯಿತು.

ಸ್ವಲ್ಪ ದೊಡ್ಡವರಾದಂತೆ ಸೀಸದ ಕಡ್ಡಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದೆವು ಮತ್ತು ಕಲಿಯುತ್ತಿದ್ದೇವು.

ಮುಂದೆ ಮುಂದೆ ದೊಡ್ಡ ದೊಡ್ಡ ತರಗತಿಗಳಿಗೆ ಹೋದಂತೆ ಎಕ್ಸಸೈಜ್, ಪೇಪರ್ ಮತ್ತು ಪೆನ್ನುಗಳ ಬಳಕೆ ಮಾಡುವುದು ಮಾಮೂಲುಯಿತು.

ಪೆನ್ನಲ್ಲಿ ಬರೆಯುವುದಕ್ಕೂ ಮೊದಲು ಸೀಸದ ಕಡ್ಡಿಯಲ್ಲಿ ಬರೆದು ಅಭ್ಯಾಸ ಮಾಡಿದರೇ ಅಕ್ಷರಗಳ ಬರವಣಿಗೆ ಉತ್ತಮವಾಗುವುದು ಎಂದು ಹೇಳುತ್ತಿದ್ದುದು ಪ್ರತೀತಿ.

ಪೆನ್ನುಗಳಲ್ಲೂ ಸಹ ಹಲವು ವಿಧ. ಒಂದೊಂದು ಪೆನ್ನು ಒಂದೊಂದು ಥರ. ಆದರೇ ಎಲ್ಲಾ ಪೆನ್ನುಗಳು ಬರೆಯುವುದು ಒಂದೇ ಬಗೆ. ವಿವಿಧತೆಯಲ್ಲಿ ಏಕತೆ!

ಇಂಕ್ ಪೆನ್ನಲ್ಲಿ ಬರೆದರೇ ವಜಾನ್ ಜಾಸ್ತಿ, ಅದು ಬರವಣಿಗೆಗೆ ಅತ್ಯುತ್ತಮ ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಅದರ ಬಳಕೆ ವಿದ್ಯಾರ್ಥಿಗಳಿಗೆ ಬಲು ಕಷ್ಟ. ಸ್ವಲ್ಪ ಅಜಾಗರೂಕತೆಯಲ್ಲಿ ಬಳಸಿದರೇ ಮೈಕೈಯೆಲ್ಲಾ ಮಸಿ. ಮಸಿ ಕಾಲಿಯಾಗುವುದು. ಅದನ್ನು ನಿತ್ಯ ತುಂಬುವುದು. ಗಾಳಿಗೆ ಅದು ಒಣಗಿ ಬರೆಯದೆ ಇರುವುದು. ಅದಕ್ಕಾಗಿ ಕೈಯಲ್ಲಿ ಒಮ್ಮೆ ಗಾಳಿಯಲ್ಲಿ ಹೊಡೆಯುವುದು.ಮಸಿ ಬೇರೆಯವರಿಗೆ ಸಿಡಿಯುವುದು. ಇತ್ಯಾದಿ ಚಟುವಟಿಗೆಗಳ ನಂಟು ಪೆನ್ನುಗಳದ್ದು.

ಕಡ್ಡಿ ಪೆನ್ನುಗಳದ್ದು ಇನ್ನೊಂದು ಕಥೆ. ರಿಫಿಲ್ ತುಂಬುದು, ಇಂಕ್ ಕಾಲಿಯಾಗಿದೆಯೋ ಇಲ್ಲವೋ ಎಂದು ನೋಡಲು ಪೆನ್ನು ಬಿಚ್ಚುವುದು. ಸ್ಪ್ರಿಂಗ್ ಹಾಕುವುದು. ಬಿಚ್ಚಿದಾಗ ಸ್ಪ್ರಿಂಗ್ ಕೈ ತಪ್ಪಿ ನೆಗೆಯುವುದು. ಬಟನ್ ಪೆನ್ನುಗಳನ್ನು ಹಾಗೆ ಹೀಗೆ ಒತ್ತುವುದು. ಟಕ್ ಟಕ್ ಶಬ್ಧ ಮಾಡುವುದು. ವೇಗವಾಗಿ ಬರೆಯಲು ರಿಪಿಲ್ ಪೆನ್ನುಗಳೇ ಬೇಸ್ಟ್ ಎಂದು ಮಾತನಾಡಿಕೊಳ್ಳುವುದು. ಕ್ಯಾಪ್ ಪೆನ್ನುಗಳ ರಾಜಾ ರೇನಾಲ್ಡ್ಸ್. ಎಕ್ಸಾಮ್ ಮೊದಲು ಹೊಸ ಪೆನ್ನು ಖರೀದಿ ಮಾಡುವುದು. ಅಷ್ಟರ ಮಟ್ಟಿಗೆ ಶಿಕ್ಷಣ ಪಡೆದವರೆಲ್ಲಾ ಇದರ ಓಡನಾಟದಲ್ಲಿ ಮಿಂದು ಎದ್ದಿರುವವರೆ.

ಓದು ಅಂದರೇ, ಬರವಣಿಗೆ ಎನ್ನುವುದು ಬಿಡಿಸಲಾರದ ಭಾಂದವ್ಯ. ಬರೆದುದು ಕೊನೆತನಕ. ಹೆಚ್ಚು ಓದುವುದು ಎಂದರೇ, ಹೆಚ್ಚು ಬರೆಯುವುದು. ಇದು ಅಂದಿನ ನಮ್ಮ ಗುರುಗಳ ಹೇಳಿಕೆ.

ನೋಟ್ಸ್ ಬರೆಯದೇ ಯಾರು ತಮ್ಮ ಶಿಕ್ಷಣ ಪೊರೈಸಿಲ್ಲಾ ಎಂದರೇ ತಪ್ಪಿಲ್ಲ.

ನಮ್ಮ ಬರವಣಿಗೆಯೇ ಕೊನೆ ಎಂದರೇ ನಮ್ಮ ಬಿ.ಎ, ಬಿ.ಈ ಅನಿಸುತ್ತದೆ. ಮತ್ತೆ ನಮ್ಮ ಜೇಬುಗಳು ಈ ಪೆನ್ನುಗಳನ್ನು ಕಂಡೇ ಇಲ್ಲ. ಪೆನ್ನಿನ ಅವಶ್ಯಕತೆಯೇ ಇಲ್ಲ ಎನ್ನುವ ಮಟ್ಟಿಗೆ ಅವುಗಳ ಬಳಕೆಯನ್ನು ಕಮ್ಮಿ ಮಾಡಿಕೊಂಡಿದ್ದೇವೆ. ಬರೆಯುವುದೇ ಮರೆತು ಹೋಗಿದೆ ಎನ್ನುವ ಮಟ್ಟಿಗೆ ಪೂರ್ತಿ ನಿಲ್ಲಿಸಿದ್ದೇವೆ.

ನಾವೆಲ್ಲಾ ಅಲ್ಲಿ ಇಲ್ಲಿ ಕೆಲಸ ದುಡಿತ ಎಂದು ತೊಡಗಿಕೊಂಡಿದ್ದೇವೆ. ಆದರೆ ಬರೆಯುವ ಜರೂರತು ಎಲ್ಲೂ ಇಲ್ಲ. ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್, ಟ್ಯಾಬ್ ಎಂಬ ಹತ್ತು ಹಲವು ಡಿಜಿಟಲ್ ಕೊಡುಗೆಗಳಲ್ಲಿ ನಮ್ಮ ಬರೆಯುವ ಕಲೆಯನ್ನು ನಿಲ್ಲಿಸಿಕೊಂಡುಬಿಟ್ಟಿದ್ದೇವೆ.

ಪೆನ್ನು ಪೇಪರ್ ಯಾವುದಕ್ಕೂ ಬೇಕಿಲ್ಲ. ಡಿಜಿಟಲ್ ಸ್ಕ್ರೀನ್ ಮೇಲೆ ಡಿಜಿಟಲ್ ಪೆನ್ನಿನಲ್ಲಿ ಸಹಿ ಮಾಡುವುದರ ಮಟ್ಟಿಗೆ ಬಂದು ನಿಂತಿದೆ.

ಹಿಂದೆ ಬ್ಯಾಂಕ್ ನಲ್ಲಿ ವ್ಯವಹಾರ ಮಾಡಬೇಕು ಎಂದರೇ ಪೆನ್ನು ಇಟ್ಟುಕೊಂಡು ಬ್ಯಾಂಕ್ ನೊಳಗೆ ಕಾಲು ಇಡಬೇಕಾಗಿತ್ತು. ಇಲ್ಲ ಅಂದರೇ ಹಣ ಪಡೆಯುವ ಮಾರ್ಗವೇ ಬಂದ್! ಇಂದು ನೋಡಿ ಎಲ್ಲಿ ಬೇಕಂದರೇ ಅಲ್ಲಿ ಹಣ ಪಡೆಯಬಹುದು ಅಥವಾ ಹಣವನ್ನು ಬ್ಯಾಂಕಿಗೆ ಜಮಾ ಮಾಡಬಹುದು. ಅದು ಯಾವುದೇ ಚಲನ್, ರಸೀದಿ ಸಹಿ ಏನೊಂದು ಭರ್ತಿ ಮಾಡದೇ.

ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಂದು ಡಿಜಿಟಲ್ ಮಯವಾಗಿದೆ. ಇಂದು ಯಾವುದೇ ದಪ್ಪ ದಪ್ಪ ಪುಸ್ತಕಗಳನ್ನು ಯಾವುದೇ ಕಛೇರಿಯಲ್ಲಿ ಪೋಷಿಸಿಕೊಳ್ಳಬೇಕಿಲ್ಲ. ಒಂದು ಚಿಕ್ಕ ಕಂಪ್ಯೂಟರ್ ಪರದೆಯೊಳಗೆ ಅಗಾಧವಾದ ಅಂಶಗಳನ್ನು ರಹಸ್ಯಗಳನ್ನು ಕಾಪಾಡಿಕೊಳ್ಳಬಹುದಾಗಿದೆ.

ಅಂಚೆ. ಅಂಚೆ ಕಾಗದಗಳ ಬಳಕೆ ನಿಂತು ಯಾವುದೋ ಕಾಲವಾಯಿತು.ನಾನು ನನ್ನ ಹತ್ತನೇಯ ತರಗತಿಯ ಪರೀಕ್ಷೆಯಲ್ಲಿ ಪತ್ರ ಬರೆದ ನೆನಪು. ಅನಂತರ ಅದರ ಬಳಕೆಯ ಜರೂರತೆಯೇ ಬಂದಿಲ್ಲ. ದೂರದ ಮಾಮನ ಕಾಗದಕ್ಕೆ ಕಾಯಬೇಕಿಲ್ಲ. ಇಂದು ಒಂದೇ ಕ್ಷಣದಲ್ಲಿ ಒಂದೇ ಕಾಲಿನಲ್ಲಿ ಎಲ್ಲಾ ವಿಚಾರಿಸಿಕೊಳ್ಳಬಹುದಾಗಿದೆ. ಅದು ವಿಡಿಯೋ ಮೊಲಕ ಡೈರಕ್ಟ್ ವಾಕಿ ಟಾಕಿ.

ಇಲ್ಲಿಗೆ ಬಂದು ನಿಂತಿದೆ ನಮ್ಮ ಸಂಹವನ.

ನಾನು ಬರೆದಿರುವ ಮೇಲಿನ ಪ್ರತಿಯೊಂದು ಅಕ್ಷರಗಳು ಲ್ಯಾಪ್ ಟಾಪ್ ಕೀಲಿ ಮಣಿಗಳಲ್ಲಿ ಕುಟ್ಟಿರುವುದು. ಪೆನ್ನು ಪೇಪರ್ ಯಾವುದೊಂದು ಇಲ್ಲದೇ ಬರೆದು ವೇಬ್ ಪೇಜ್ ಗೆ ಅಪಲೋಡ್ ಮಾಡಿದ ಲೇಖನ ಇದು.

ನಂಬಲು ತುಂಬ ಕಷ್ಟ ಆದರೇ ಇದೆ ನಿಜ.

ಅಷ್ಟರ ಮಟ್ಟಿಗೆ ಕಾಗದ ಕಾಗದವೆಂದು ಮರಗಿಡಗಳನ್ನು ಉಳಿಯಿಸಿದ್ದೀವಿ.

ಆದರೇ ಕೈಯಾರೇ ಪೆನ್ನಿನಲ್ಲಿ ಬಿಳಿ ಕಾಗದದ ಹಾಳೆಯ ಮೇಲೆ ಬರೆಯುವ ಸುಖ ಈ ಮೊಬೈಲ್, ಟ್ಯಾಬ್ ಗಳಲ್ಲಿ ಬರೆಯುವುದರಲ್ಲಿ ಸಿಗುವುದಿಲ್ಲ ಬಿಡಿ.

ಆದರೇ ಕಾಲ ಬದಲಾಗಿದೆ. ಅದಕ್ಕೆ ತಕ್ಕ ರೀತಿಯಲ್ಲಿ ತಾಂತ್ರಿಕತೆಯನ್ನು ಬಳಸಬೇಕಾಗಿದೆ. ವೇಗ ಅಂದರೇ ಇದೆ ಅನಿಸುತ್ತದೆ.

ಇಂದು ಹುಟ್ಟಿದ ಮಕ್ಕಳಿಗೂ ಅಕ್ಷರಗಳ ಓ ನಾಮವನ್ನು ಬಳಪಗಳಿಲ್ಲದೇ ಹೇಳಿಕೊಡಬಹುದಾಗಿದೆ. ಮಗ್ಗಿ ಪುಸ್ತಕಗಳಲ್ಲಿ ಕಲಿಯುತ್ತಿದ್ದ ಎಷ್ಟೊಂದು ಪ್ರಥಮ ಪಾಠಗಳನ್ನು ಯುಟೂಬ್ ನ ರೈಮ್ಸ್ ವಿಡೀಯೋಗಳಲ್ಲಿ ಹಿರಿಯರ ಸಹಾಯವಿಲ್ಲದೇ ಇಂದಿನ ಮಕ್ಕಳು ತಾವೇ ಕಲಿಯಯುತ್ತಿದ್ದಾವೆ.

ಹೀಗೆ ಮುಂದುವರಿದರೇ ಬರೆಯುವ ಕಲೆಯೇ ಇಲ್ಲದಂತಾಗಿ ಕೇವಲ ಸ್ಪರ್ಶ, ಟಚ್ , ಟೈಫ್ ಮಾಡುವುದರಲ್ಲಿ ನಿಪುಣರಾಗುವವರು ನಮ್ಮ ಮುಂದಿನ ಪೀಳಿಗೆ.  ಬರವಣಿಗೆ ಎಂದರೇ ಮೆಸೇಜ್ ಬರೆಯುವುದು. ಪ್ರಬಂಧವೆಂದರೇ ಪೇಸ್ ಬುಕ್ ವಾಲ್ ನಲ್ಲಿ ಕಾಮೆಂಟ್ ಹಾಕುವುದು ಎನ್ನುವಾಂತಾಗದಿರಲಿ ಎಂಬುದೇ ಎಲ್ಲಾರ ಹಂಬಲ.

ಏನೇ ವೇಗವಾದ ಡಿಜಿಟಲ್ ಯುಗವಿದ್ದರು, ಅದೇ ಹಳೆಯ ಕಾಲದಲ್ಲಿದ್ದ ಪೇಪರ್, ಪುಸ್ತಕಗಳು, ಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ಹತ್ತಿರದಿಂದ ಓದುವ ಸುಖವನ್ನು ಯಾವ ಕಾಲಕ್ಕೂ ಯಾರು ನೀಡಲಾರರು. ಇಂದಿಗೂ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಪ್ರತಿಯೊಬ್ಬರೂ ಇಷ್ಟಪಡುವುದು ಪ್ರಿಂಟೆಡ್ ಪುಸ್ತಕ ಮತ್ತು ಪತ್ರಿಕೆಗಳನ್ನೇ. ಇವುಗಳೇ ಜನಸಾಮಾನ್ಯರಿಗೆ ಎಲ್ಲಾ ಕಾಲಕ್ಕೂ ತೀರಾ ಹತ್ತಿರ ಮತ್ತು ಶಾಶ್ವತ.

ಬುಧವಾರ, ಅಕ್ಟೋಬರ್ 12, 2016

ಮನಸ್ಸು ಅವಳು ಊರು ನೆನಪು

ಅವತ್ತೇ ಅನಿಸಿತ್ತು ಇಷ್ಟು ಚೂಸಿಯಾಗಿ ಸಿಕ್ಕಿದ ಪ್ರೀತಿ ಕೊನೆಯವರೆಗೂ ಇರುವುದಾ? ಇದು ಯಾಕಾದರೂ ನನ್ನ ಮನಸ್ಸಿನಲ್ಲಿ ಅಂದು ಹಾಗೆ ಪಾಸ್ ಆಯಿತೋ? ಗೂತ್ತಿಲ್ಲ. ಸಿಕ್ತ್ ಸೇನ್ಸ್ ಎಂಬುದು ಒಮ್ಮೊಮ್ಮೆ ಹೀಗೆ ಕೆಲಸ ಮಾಡುತ್ತದೆ.

ಆದರೇ ಕಳೆದ ನಾಲ್ಕುವರೆ ವರುಷಗಳ ನೆನಪು ಇನ್ನು ಇಂದಿಗೂ ಹಸಿಯಾಗಿದೆ. ಅಂದು ಎಲ್ಲವೂ ಸುಂದರ. ಪ್ರತಿ ಘಳಿಗೆಯು ಏನೋ ಹೊಸತನ. ಅವಳೊಬ್ಬಳು ಜೊತೆ ಇದ್ದರೇ ಏನೂ ಬೇಕಾದರೂ ಜಯಿಸುವೆನು ಎಂಬ ದೈರ್ಯ.ಮುಂಜಾನೆಯ ಸೂರ್ಯನ ಕಿರಣಗಳನ್ನು ಕಾಣುವಂತಾ ಮನಸ್ಸು. ಯಾವಾಗ ಬೆಳಕಾಗುವುದೋ..  ಬೆಳ್ಳಂ ಬೆಳಗ್ಗೆಯಲ್ಲಿ ಯಾವಾಗ ನಮ್ಮೂರಿನ ಬಸ್ ನ ಮೊದಲ ಹಾರ್ನ್ ಕಿವಿಗೆ ಬೀಳುವುದೋ. ನಾನು ಕಾಲೇಜು ಎಂದುಕೊಂಡು.. ಎದ್ದು, ಬಿದ್ದು ಸಿದ್ಧವಾಗುವುದು.

ನಾನು ಪ್ರತಿದಿನ ಸೂರ್ಯ ಹುಟ್ಟುವುದಕ್ಕೂ ಮೊದಲು ಕಾಲೇಜಿಗೆ ಸಿದ್ಧವಾಗುತ್ತಿದ್ದ ರಭಸಕ್ಕೆ ಅಮ್ಮನೇ ದಂಗಾಗಿದ್ದಳು.

ಏನ್ ಮಗಾ ಎಷ್ಟು ಕಟ್ಟುನಿಟ್ಟಾಗಿ ಓದಿನ ಬಗ್ಗೆ ಪ್ರೀತಿ ಇಟ್ಟುಕೊಂಡಿದೆ. ಬಿಡು ಮುಂದೊಂದು ದಿನ ಊರಿಗೆ ದೊಡ್ಡ ಅಧಿಕಾರಿಯಾಗಿ ಬಂದೇ ಬರುತ್ತಾನೆ. ಎಂದು ಮನದಲ್ಲಿಯೇ ಸಂತಸಪಟ್ಟಿದ್ದಳು ಅನಿಸುತ್ತದೆ.

ಬೇಡವೆಂದರೂ ರಾತ್ರಿ ಉಳಿಸಿದ ಹಾಲನ್ನು ಬಿಸಿ ಮಾಡಿ ಕಾಫಿ ಪೌಡರ ಮಿಕ್ಸ್ ಮಾಡಿ ನನಗೆ ಎಂದೇ ಕಾಫಿ ಮಾಡಿಕೊಡುತ್ತಿದ್ದುದು. ಎಲ್ಲೋ ಉಳಿಸಿ, ಹಾಗೆಯೇ ಮಡಿಸಿದ ಒದ್ದೆ ಒದ್ದೆಯ ಹತ್ತರ ಎರಡು ನೋಟುಗಳನ್ನು ನನ್ನ ಎದೆ ಮೇಲಿನ ಜೋಬಿಗೆ ನಿತ್ಯ ಇಡುತ್ತಿದ್ದುದು.

ಅದು ತಾಯಿ ಪ್ರೀತಿ! ಈ ಪ್ರೀತಿ ಒಂದೇ ನಾನು ಈಗಲೂ ಜೀವಂತವಾಗಿ ಇರುವಂತೆ ಮಾಡಿರುವುದು.

ಅಂದು ಇದನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ನನ್ನದಾಗಿರಲಿಲ್ಲ.

ಬಸ್ ನಲ್ಲಿ ಕುಳಿತರೂ ವರುಷವಾದಂತೆ. ಯಾವಾಗ ಈ ಡ್ರೈವರ್ ಬರುವನೋ? ಯಾವಾಗ ಹೊರಡುವನೋ? ಎಂದು ಪೂರ್ತಿ ಸಿಟ್ಟಲ್ಲಿ ಕಿಟಕಿಯಾಚೆ ನಿಂತು ಟೀ ಕುಡಿಯುತ್ತಿರುವವನ್ನು ಮನದಲ್ಲಿಯೇ ಶಪಿಸುತ್ತಿದ್ದೆ.

ಮುಂಜಾನೆಯ ಸಮಯ ಓದುವುದಕ್ಕೆ ಹೇಳಿ ಮಾಡಿಸಿದ ಸಮಯವಂತೆ. ಆಗ ಏನೂ ನೆನಪು ಮಾಡಿಕೊಂಡರು, ಓದಿದರೂ ಮನಸ್ಸಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವುದಂತೆ. ಆದರೇ ಆ ಸಮಯದಲ್ಲಿ ಅವಳ ನೆನಪಲ್ಲದೇ ಇನ್ನು ಏನೂ ಮನದಲ್ಲಿರಲಿಲ್ಲ. ಆದಕ್ಕೆ ಇರಬೇಕು ಈಗಲೂ ಅವಳ ಪ್ರತಿ ಚಲನೆಯು ಹಾಗೆಯೇ ಪ್ರತಿಭಾರಿ ಮೈ ಮನ ತಟ್ಟುತ್ತದೆ.

ಬಸ್ ಸ್ವಲ್ಪ ಸ್ವಲ್ಪ ಸೌಂಡ ಮಾಡಿಕೊಳ್ಳುತ್ತಾ ಹಳ್ಳವನ್ನು ಶಕ್ತಿಯಿಲ್ಲದ ಹುಡುಗನಂತೆ ಉಸಿರು ಬಿಗಿ ಇಟ್ಟುಕೊಂಡು ಏರುತ್ತಿದ್ದರೇ.. ಆ ದಡದ ಮೇಲಿರುವ ನನ್ನ ಹುಡುಗಿಯ ಊರಿನ ಒಂದೊಂದೇ ನೋಟ ಕಂಡು ಎದೆಯ ಬಡಿತ ಏರುತ್ತಿತ್ತು. ಅವಳು ಬಂದಿರುತ್ತಾಳೆ. ಅವಳಿಗೂ ನನ್ನ ಕಾತರ ಇದ್ದೇ ಇರುತ್ತದೆ. ಎಂದುಕೊಂಡು ನಿತ್ಯ ಖುಷಿಯಾಗುತ್ತಿದ್ದೆ.

ಇಂದು ರಾತ್ರಿಯೇ ಮೇಸೆಜ್ ಮಾಡಿದ್ದಳು. ಯಾಕೋ ಕಣೋ ನಿನ್ನ ಹೆಚ್ಚು ಮಿಸ್ ಮಾಡಿಕೊಂಡಂಗೇ ಆಗ್ತಾ ಇದೆ. ನಾಳೆ ನಿನ್ನ ಇಷ್ಟದ ಚೋಡಿದಾರ ಹಾಕಿಕೊಂಡು ಬರುತ್ತೇನೆ.. ಅಂದಿದ್ದಳು. ನಾನು ಲವ್ ಯು ಎಂದು ಹಾಗೆಯೇ ನಿದ್ದೆಗೆ ಜಾರಿದ್ದೆ.

ಬಸ್ ಅಂತೂ ಎಡಕ್ಕೆ ತಿರುಗಿ ಅಲ್ಲಿಯೇ ಬಂದ ಬಸ್ ಸ್ಟಾಪ್ ನಲ್ಲಿ ನಿಂತಿತು.

ಕಣ್ಣರಳಿಸಿ ಮುಂದಿನ ಬಾಗಿಲನ್ನೂ ನೋಡಿದ್ದೇ ಬಂತು.

ಇಲ್ಲಿ ಬಸ್ ಸ್ವಲ್ಪ ಹೊತ್ತು ನಿಲ್ಲುವುದು ಮಾಮೂಲು. ಯಾಕೆಂದರೇ ಇದು ಮೊದಲನೇಯ ಊರು. ಇಲ್ಲಿಯು ಪುನಃ ಪ್ರತಿಯೊಬ್ಬರೂ ಟೀ-ತಿಂಡಿ ಸೇವಿಸುತ್ತಾರೆ. ಅದು ಇದು ಎಂದು  ಸಣ್ಣ ಕುಶೋಲಹಪರಿ ಪರಸ್ಪರ ನಡೆಯುತ್ತದೆ. ಮೂರು ಊರುಗಳಿಗೂ ಇದು ಒಂದೇ ಬಸ್ ಸ್ಟಾಪ್. ಜನಗಳು ಅಕ್ಕಪಕ್ಕದ ಎರಡು ಊರುಗಳಿಂದಲೂ ಮುಂಜಾನೆಯೇ ನಡೆದುಕೊಂಡು ಬರುತ್ತಾರೆ. ಪಾಪ ಬರಲಿ ಜನ. ಏನೂ ಐದು ಹತ್ತು ನಿಮಿಷ ಲೇಟ್ ಆದ್ರೆ ಪರವಾಗಿಲ್ಲ. ಚಿಹಳ್ಳಿಯಿಂದ ಚಚ್ಚಿದಾರಯಿತು ಎಂಬ ಕರುಣೆ ಈ ಬಸ್ಸಿನ ಡ್ರೈವರ್ ನದು.

ಆದರೇ ನನ್ನ ಹುಡುಗಿಯ ಸುಳಿವೇ ಇಲ್ಲ..!

ಏನೇ ಲೇಟ್ ಎಂದರೂ ಐದು ನಿಮಿಷಕ್ಕೂ ಜಾಸ್ತಿ ಲೇಟ್ ಮಾಡಿಲ್ಲ ಯಾವತ್ತು.

ಏನಾಗಿರಬಹುದು? ಮೇಸೆಜ್ ಮಾಡಲಾ.. ಕಾಲ್ ಮಾಡಲಾ ಎಂಬ ಕನಪ್ಯೂಸನ್ ನಲ್ಲಿ ಚಟಪಟಿಸಿದೆ.

ಹಿಂದಿನ ಸೀಟ್, ಮುಂದಿನ ಸೀಟ್ ನಲ್ಲಿ ನಮ್ಮ ಊರಿನವರ ದಂಡೇ ದಂಡು. ಸ್ವಲ್ಪ ಸಂಕೋಚ, ಹೆಚ್ಚು ಢವಢವ ಎದೆಯ ಬಡಿತದಲ್ಲಿ ಅವಳ ಮನೆಯಿರುವ ದಾರಿಯ ಕಡೆಗೆ ಬಲ ಬದಿಯ ಕಿಟಿಕಿಯಿಂದ ಹಾಗೆಯೇ ಕಣ್ಣು ಹಾಯಿಸಿದೆ.

ನೋ!  ಅವಳ ಸಪ್ಪಳವೇ ಇಲ್ಲ.

ಆಗಲೇ ಕಂಡಕ್ಟರ್ ರೈಟ್ -ರೈಟ್ ಹೇಳುತ್ತಿದ್ದಾನೆ... ಕಾಲ್ ಮಾಡಲು ಧೈರ್ಯ ಬರದೇ ಮೇಸೆಜ್ ಕುಟ್ಟಿದೆ.  ಮೇಸೆಜ್ ಸೆಂಡ್ ಆಗಿದ್ದು ಕನಪರ್ಮ್ ಮಾಡಿಕೊಂಡೆ ಹ್ಯಾಪು ಮೊರೆ ಮಾಡಿಕೊಂಡೆ.

ಬಸ್ ಹಾಗೆಯೇ ಬಲಕ್ಕೆ ಒರಳಿತು. ಜಾಲಿ ಮುಳ್ಳುಗಳಿರುವ ಸೆರಗಿನಲ್ಲಿ ತಿರುಗಿ ಮುಂದಿನ ಹಳ್ಳದೊಳಕ್ಕೆ ಇಳಿಯಲಾರಂಬಿಸಿತು. ದಾರಿ ದೂರವಾಯಿತು, ಅವಳು ಇನ್ನು ಹತ್ತಿರವಾದಳು.

ಪುನಃ ಆಸೆಯ ಕಣ್ಣಿನಿಂದ ಜನ ಜಂಗುಳಿಯ ಮಧ್ಯದಲ್ಲಿ ಪುನಃ ಹಿಂದಿನ ಬಸ್ ಗ್ಲಾಸ್ ನಲ್ಲಿ ಕಾಣದ ದಾರಿಯ ಕಡೆ ಬಿಟ್ಟ ಕಣ್ಣಲ್ಲಿ ನೋಡಿದೆ. ಹಿಂದಿನ ಸೀಟನಲ್ಲಿದ್ದ ದೊಡ್ಡ ಮೀಸೆಯ ಈರಜ್ಜ ಬೊಚ್ಚು ಬಾಯಲ್ಲಿ ನಕ್ಕಿದ್ದು ಮಾತ್ರ ಲಕ್ಷಣವಾಗಿ ಕಾಣಿಸಿತು.

ಮನದಲ್ಲಿ ತಳಮಳ. ಮುಂದಿನ ಸ್ಟಾಪ್ ನಲ್ಲಿ ಹಿಳಿದು ಹೋಗವುದೇ ಎಂದು ಒಂದು ಮನಸ್ಸು ಕೇಳಿದರೇ.. ಇನ್ನೊಂದು ಮನಸ್ಸು ಈರಜ್ಜ ನ ನಗುವನ್ನು ನೆನಪಿಸಿ ಸುಮ್ಮನಿರು ಎಂದಿತು.

ಈ ಹುಡುಗಿಯರೇ ಹೀಗೆ ಅನಿಸುತ್ತದೆ. ಯಾವಾಗಲೂ ಹತ್ತಿರವೇ ಇರುತ್ತೇವೆ ಅನ್ನುತ್ತಾರೆ. ನೀನೇ ನನ್ನ ಜೀವ ಅನ್ನುತ್ತಾರೆ. ಮೀಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನುತ್ತಾರೆ. ನೀನು ಬೇಕು ಅನ್ನುತ್ತಾರೆ. ಆದರೇ ಈ ರೀತಿ ಹೇಳದೆ ಕೇಳದೇ ಕೈ ಕೊಡುತ್ತಾರೆ.

ಹುಡುಗಿಯರಿಗೆ ಏನೂ ಗೊತ್ತು ಗಂಡಸರ ದುಃಖ?

ಪುನಃ ಪುನಃ ಮೊಬೈಲ್ ಕಡೆ ಬಗ್ಗಿ ಬಗ್ಗಿ ನೋಡಿದ್ದೆ ಬಂತು.

ನೂ ರಿಪ್ಲೇ...!

ಎಷ್ಟು ಹೊತ್ತಿಗೆ ಕಾಲೇಜು ತಲುಪುವೇನೋ ಅನ್ನಿಸಿತು. ಈ ಬಸ್ , ಈ ರೋಡ್ ದೇವರಿಗೆ ಪ್ರೀತಿ ಅನಿಸಿತು. ಯಾಕೋ ಮುಂಜಾನೆಯ ಆಹ್ಲಾದತೆಯೇ ಇಲ್ಲವೇನಿಸಿತು. ಸೂರ್ಯ ಮಂಕಾಗಿದ್ದಾನೆ ಅನಿಸಿತು.

ಪುರದಲ್ಲಿ ಬಸ್ಸು ನಿಂತಾಗ ಒಂದು ಚಿಕ್ಕ ಹರಕೆಯನ್ನು ಲಕ್ಷ್ಮಿ ನರಸಿಂಹಸ್ವಾಮಿಯಲ್ಲಿ ಹೊತ್ತುಕೊಂಡೆ. ಕಾಲೇಜು ತಲುಪುವುದರಲ್ಲಿ ನನ್ನವಳ ಮೇಸೆಜ್ ಬರಲಿ. ನಾನು ಮುಂದಿನ ಶನಿವಾರ ಅವಳ ಜೊತೆಯಲ್ಲಿ ನಿನ್ನ ದರುಶನ ಮಾಡೇ ಮಾಡುವೆನೆಂದು!

ಕಾಲೇಜು ಅಂದರೇ ಕಾಲೇಜೇ. ಅಲ್ಲಿ ಎಂದೂ ಮರೆಯಲಾರದ ಕ್ಷಣಗಳಿರುತ್ತವೆ. ಗೆಳೆಯ ಗೆಳತಿಯರ ಜೊತೆಯಲ್ಲಿ ಕೊಡಿ ಕಲಿಯುವ ಪರಿಸರವಿರುತ್ತದೆ. ನಾವುಗಳು ನಮ್ಮನ್ನು ಅತ್ಯುತ್ತಮರನ್ನಾಗಿ ಮಾಡಿಕೊಳ್ಳುವ ಅವಕಾಶವಿರುತ್ತದೆ. ಕಲಿಯುವುದಕ್ಕೆ ವಿಫುಲವಾದ ವಾತವರಣವಿರುತ್ತದೆ. ಇಂಥ ಸರಸ್ವತಿಯ ನೆಲೆಯಾದ ಕಾಲೇಜಿಗೆ ನಿತ್ಯ ನಮಸ್ಕಾರ ಮಾಡಿ ಹೆಜ್ಜೆ ಇಡಬೇಕು.

ಪ್ರತಿಯೊಬ್ಬರ ಬದುಕಿಗೆ ಹೊಸ ಮಾರ್ಗ ತೋರುವ ನೆಲೆಬೀಡು ನಮ್ಮ ಶಿಕ್ಷಣ ಸಂಸ್ಥೆಗಳು.

ಮನವಿಲ್ಲದ ಮನಸ್ಸಿನಲ್ಲಿ ಬಸ್ಸನಿಂದ ಇಳಿದು ಮೊದಲು ಮಾಡಿದ್ದು ೯೮೦೪೨೦೩೨೦೧ ನಂಬರ್ ಗೆ ಕಾಲು. ಕಾಲ್ ಕನಕ್ಟ್ ಆಗುವುದಕ್ಕೂ ತಾತ್ಸರ ಮಾಡುತ್ತಿದೆ ಇಂದು. ಇದು ಹೀಗೆ ಕಷ್ಟ ಕಾಲದಲ್ಲಿಯೇ ಆಳಿಗೊಂದು ಕಲ್ಲು ಅನ್ನುವ ರೀತಿಯಲ್ಲಿ. ಒಂದು, ಎರಡು ರೀಂಗ್ ಆಗಲು ಶುರುವಾಯಿತು. ಎದೆಯಲ್ಲಿ ಢವಢವ ಬಡಿತ. ನಾಲ್ಕನೇ ರೀಂಗ್ ಗೆ ಕಾಲ್ ಪೀಕ್ ಆಯ್ತು. ಆದರೇ ದ್ವನಿ ತೀರ ಅಪರಿಚಿತವೇನಿಸಿತು. ದೂಸರಾ ಮಾತನಾಡದೇ ಕಾಲ್ ಕಟ್ ಮಾಡಿದೆ.

ಅಲ್ಲ ಏನಾಯ್ತು ಇವಳಿಗೆ? ನೆನ್ನೆ ಸರೀ ರಾತ್ರಿಯವರೆಗೂ ಟಚ್ ಲ್ಲಿ ಇದ್ದವಳಿಗೆ. ಬೆಳಕು ಹರಿಯುವುದರಲ್ಲಿ ಸುದ್ಧಿಯೇ ಇಲ್ಲ! ಮೊಬೈಲ್ ನ್ನು ಒಂದು ಕ್ಷಣ  ಬಿಟ್ಟಿರಲಾರದವಳು. ಹೀಗೆ ಮತ್ತೊಬ್ಬರೂ ರೀಸಿವ್ ಮಾಡುತ್ತಿದ್ದಾರೆ ಎಂದರೇ...? ಏನೂ ಅರ್ಥವಾಗಲಿಲ್ಲ.

ಯಾಕೋ ತಣ್ಣಗೆ ಮನಸ್ಸಿಗೆ ಶಾಕ್ ಆಯಿತು.  ಭಾರವಾದ ಹೆಜ್ಜೆಯನ್ನು ಹಾಕಿಕೊಂಡು ಕಾಲೇಜು ಮೆಟ್ಟಿಲನ್ನು ಹತ್ತುತ್ತಿದ್ದಂತೆ ಸುಭಾಷ್ ಸಿಕ್ಕಿದ. ಅವನು ಬಾರೋ ಕ್ಯಾಂಟಿನ್ ಗೆ ಹೋಗೋಣ ಇನ್ನು ೩೦ ನಿಮಿಷ ಇದೆ ಎಂದ. ಆದರೆ ನಾನು ಅದು ಕಿವಿಗೆ ಬಿಳಿಸಿಕೊಳ್ಳದ ರೀತಿಯಲ್ಲಿ ಇನ್ನೊಂದು ಸ್ಟೆಪ್ ಇಟ್ಟೆ. ಹಿಂದಿನಿಂದ ಸರಿಯಾಗಿ ಗುದ್ದಿದ.  ಆಗ ಎಚ್ಚರವಾದಂತಾಗಿ ಹಾಯ್ ಎಂದೇ.

ಪುನಃ ಅವನೇ ಹೇಳಿದ. ಸಾಯೇಬ್ರ್ ಮೂಡ್ ಯಾಕೋ ಸರಿ ಇಲ್ಲಾ!

ಗೊತ್ತಾಯಿತು ಬಿಡು. ನೀ ಒಂಟಿಯಾಗಿ ಬಂದಾಗಲೇ ಅಂದುಕೊಂಡೆ! ಯಾಕೋ ನಿನ್ನ ಹುಡುಗಿ ನಿನ್ನ ಜೋತೆ ಬರಲಿಲ್ಲವಾ? ಒಂದೇ ಮಾತಲ್ಲಿ ’ಇಲ್ಲಾ’ ಎಂದೇ. ಏಯ್ ಬಿಡು ಗುರು. ಏನೋ ಕೆಲಸ ಇರುತ್ತೇ ಅದಕ್ಕೆ ಬಂದಿಲ್ಲ.  ಇಷ್ಟು ಚಿಕ್ಕ ವಿಷಯಗಳಿಗೆಲ್ಲ ಹುಡುಗರು ಬೇಜಾರು ಮಾಡಿಕೊಳ್ಳಬಾರದು. ಹುಡುಗಿಯ ಒಂದು ಮೇಸೆಜು, ಒಂದು ಕಾಲ್ ಬರದಿದ್ದರು ಜಗತ್ತೇ ಮುಳುಗಿದ ರೀತಿಯಲ್ಲಿ ವರ್ತಿಸುತ್ತಿರಾ ಕಣ್ರೋ .. ಎಂದು ಚಿಕ್ಕ ವೇದಾಂತ ಹೇಳಿ - ಬಾ ಈಗ ಕ್ಯಾಂಟಿನಗೆ ಹೋಗೋಣ. ನನಗೆ ಸಿಕ್ಕಪಟ್ಟೆ ಹಸಿವು ಎಂದ.

ಆದರೇ ನನ್ನ ಮನಸ್ಸು ಇನ್ನೂ ಅವಳ ಊರುಬಿಟ್ಟು ಬಂದಿರಲಿಲ್ಲ... ಯಾವುದೋ ಕೆಟ್ಟ ಘಟನೆಗೆ ಮುನೂಚನೆಯೆಂಬಂತೆ.