ಹೆಚ್ಚು ತಿಳಿದುಕೊಂಡಂತೆ ಬೇರೆಯವರೊಂದಿಗಿನ ಅವಲಂಬನೆ ಕಡಿಮೆಯಾಗುತ್ತದೆ ಅನಿಸುತ್ತದೆ.
ಚಿಕ್ಕ ವಯಸ್ಸಿನ ಮಕ್ಕಳ ನಡವಳಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಹಾಲುಗಲ್ಲದ ಹಸುಗೂಸು ಪೂರ್ತಿ ಅಮ್ಮನನ್ನೇ ಅವಲಂಭಿಸಿರುತ್ತದೆ. ಅಮ್ಮ ಕುಡಿಸಿದಾಗ ಮಾತ್ರ ಹೊಟ್ಟೆ ತುಂಬುವುದು. ಅಮ್ಮ ಹೆತ್ತಿಕೊಂಡು ಹೋದರೆ ಮಾತ್ರ ತಾನು ಇರುವ ತನ್ನ ಜಾಗ ಬದಲಿಸುವುದು. ಇಲ್ಲ ಎಂದರೇ ಏನೇಂದರೂ ಏನಾಗುವುದಿಲ್ಲ.
ಇದು ಏನನ್ನು ಸೂಚಿಸುತ್ತದೆ ಎಂದರೇ ತನ್ನ ಕೈಯಲ್ಲಿ ಆಗದ, ಸಾಮರ್ಥ್ಯಕ್ಕೆ ಸಿಲುಕದವನ್ನು ತನ್ನ ಸುತ್ತಲಿರುವ ತಾಯಿ, ತಂದೆ ಮತ್ತು ಕುಟುಂಬದವರಿಂದ ಪಡೆಯುವೆವು.
ಮಗು ತನ್ನ ಸುತ್ತಲಿನಲ್ಲಿ ನಡೆಯುವ ಚಿಕ್ಕ ಚಿಕ್ಕ ಘಟನೆ, ನೋಟ, ಮಾತು, ರುಚಿಗಳ ಮೊಲಕ ತನ್ನ ಜಾಣ್ಮೆಯನ್ನು ಬೆಳೆಸಿಕೊಳ್ಳುತ್ತದೆ. ಹಾಗೆಯೇ ತಾನು ಬೇರೆಯವರೊಂದಿಗಿನ ತನ್ನ ಅವಲಂಬನೆಯನ್ನು ಕಳಚಿಕೊಳ್ಳುತ್ತಾ ಹೋಗುತ್ತದೆ.
ಹೆತ್ತ ಅಮ್ಮನಿಗೆ ಆಶ್ಚರ್ಯವಾಗುತ್ತದೆ. ಯಾಕೋ ದಿನ ದಿನಕೆ ಮಗ/ಮಗಳು ತನ್ನಿಂದ ದೂರವಾಗುತ್ತಿದ್ದಾರೆ ಅನಿಸುತ್ತದೆ. ಪ್ರತಿಯೊಂದಕ್ಕೊ ನನ್ನ ಅಣತಿಯನ್ನು ಕಾಯಿತ್ತಿದ್ದ ಕೂಸುಗಳು ಇವೆಯೇ ಏನೂ ಅನಿಸುತ್ತದೆ.
ಹತ್ತಿರವಿದ್ದರೂ ದೂರವಿರುವಂತೆ ಮನಸ್ಸಿಗೆ ಫೀಲ್ ಆಗುತ್ತದೆ.
ಆದರೇ ಪ್ರತಿಯೊಬ್ಬರೂ ತನ್ನ ಮಕ್ಕಳು ಬೇರೆಯವರಿಗೆ ಹೊರೆಯಾಗಿ ಜೀವನ ನಡೆಸುವುದನ್ನು ಎಂದಿಗೂ ಇಷ್ಟಪಡುವುದಿಲ್ಲ.
ಮಕ್ಕಳು ತಮ್ಮ ದೇಹ ಬುದ್ಧಿ ಬೆಳೆದಂತೆ ತಮ್ಮ ದಾರಿಯನ್ನು ತಾನು ಕಂಡುಕೊಳ್ಳಲಿ ಎಂಬುದೇ ಜಗತ್ತಿನ ಎಲ್ಲಾ ಜೀವಿಗಳ ಆಶಯ.
ನೀವು ನೋಡಿರಬಹುದು ಕಾಲೇಜು ಮುಗಿಯಿತು ಎಂದರೇ ಸಾಕು. ಏಯ್ ಮಗಾ ಮೊದಲು ನಿನ್ನ ಕಾಲ ಮೇಲೆ ನೀನು ನಿಲ್ಲುವಂತಾಗು. ಯಾವುದಾದರೂ ಕೆಲಸ ಹುಡುಕಿಕೋ ಅನ್ನುತ್ತಾರೆ.
ದೊಡ್ಡವರಾಗುತ್ತಾ ಆಗುತ್ತಾ ನಾವುಗಳು ಸರ್ವ ಸ್ವತಂತ್ರರಾಗಲು ಶ್ರಮಿಸುವುವೆವು. ರೆಕ್ಕೆ ಬಂದ ಹಕ್ಕಿಯ ರೀತಿಯಲ್ಲಿ ತನ್ನದೆಯಾದ ಬದುಕನ್ನು ಕಟ್ಟಿಕೊಳ್ಳಲು ತೊಡಗುವೆವು. ಹೆತ್ತವರ ಮಡಿಲಲ್ಲಿ ಬೆಳೆದು ದೊಡ್ಡವರಾಗಿ ಹೊಸ ತೀರದ ಹುಡುಕಾಟಕ್ಕೆ ದಾಪುಗಾಲು ಇಡುವೆವು.
ಇದು ಕೇವಲ ಮನುಷ್ಯ ಜಾತಿಯಲ್ಲಿ ಮಾತ್ರವಲ್ಲ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಪಾಡು ಇದು. ತಾನು ಯಾರ ಮೇಲು ಡಿಪೆಂಡ್ ಆಗಿಲ್ಲ ಎಂಬುದನ್ನು ನಿರೂಪಿಸುವ ಚಾಲೇಂಜು.
ಇದೆ ಜೀವನದ ಮರ್ಮ ತಾನು ತನ್ನವರಿಂದ ಕಲಿತ ಪಾಠವನ್ನು ಸ್ವತಂತ್ರವಾಗಿ ಬಳಸುವುದು. ತಾನೇ ಎಲ್ಲದಕ್ಕೂ ಹೊಣೆಯಾಗಿ ಜೀವನದ ಅತ್ಯಂತ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು.
ತೆಗೆದುಕೊಂಡ ನಿರ್ಧಾರಗಳು, ಮಾಡಲು ತೊಡಗುವ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುವುದೇ ನಮ್ಮಲ್ಲಿ ನಾವು ಮುಂದಿನ ಯೋಜನೆಗಳ ಪ್ಲಾನ್ ಗೆ ಬಹು ದೊಡ್ಡ ಆಸರೆ.
ಮನುಷ್ಯ ಸಂಘ ಜೀವಿ. ಅವಲಂಬನೆ ಮನುಷ್ಯನಿಗೆ ಅನಿವಾರ್ಯವಾದರೂ ಅದರಿಂದ ಬಿಡುಗಡೆಯನ್ನು ಅನುಭವಿಸುವುದರಲ್ಲಿಯೇ ಪ್ರತಿಯೊಬ್ಬರೂ ಸಂತಸಪಡುವವರು.
ತಾನೇ ಗಳಿಸಿದ ಪ್ರತಿಯೊಂದು ಯಶಸ್ಸು ಅತಿ ಹೆಚ್ಚು ಸಂತೋಷದಾಯಕವಾಗಿರುತ್ತದೆ.
ಜಗತ್ತಿನಲ್ಲಿ ಸರ್ವ ಸ್ವತಂತ್ರರಾಗಿ ಸಾಧಿಸಿದ ಸಾಧನೆಗಳನ್ನು ಸಾಧಕರನ್ನು ಸಮಾಜ ಬಹು ಮನ್ನಣೆಯಿಂದ ಗಮನಿಸುತ್ತದೆ.
ಇದು ಕೇವಲ ಕುಟುಂಬ, ನೆರೆಹೊರೆಗೆ ಸೀಮಿತಾಗಿಲ್ಲ. ಯಾವುದೇ ಕಛೇರಿ, ನೌಕರಿ, ದೇಶಾಂತರದ ಯೋಜನೆಗಳು ಹೀಗೆ ಪ್ರತಿಯೊಂದು ಹೆಚ್ಚು ಹೊರೆಯಿಲ್ಲದೇ ಮತ್ತು ಬೇರೆಯವರ ಸಹಾಯವಿಲ್ಲದೇ ಗಳಿಸಿದ ಗೆಲುವಿಗೆ ಬೆಲೆ.
ಗುರಿಗೆ ಗುರು ಬೇಕು.. ಶಿಷ್ಯ ಗುರುವಿನ ಮಾರ್ಗದರ್ಶನ ಪಡೆಯಲೇಬೇಕು. ಆದರೇ ಗುರುವನ್ನೇ ಜೊತೆಯಲ್ಲಿ ಯಾವಾಗಲು ಇಟ್ಟುಕೊಳ್ಳಬಾರದು.
ಇಂದಿನ ದಿನದಲ್ಲಿ ಏಕಲವ್ಯನಂತವನಿಗೆ ಹೆಚ್ಚು ಬೆಲೆ.
ಯಾರು ಬಹುಬೇಗ ಬೇಕಾದ ವಿಷಯಗಳನ್ನು ತಿಳಿದುಕೊಂಡು ಒಂಟಿಯಾಗಿ ಕೊಟ್ಟ ಕೆಲಸವನ್ನು ಮುಗಿಸುವುವರೋ ಅವರಿಗೆ ಎಲ್ಲಾ ನೌಕರಿಗಳಲ್ಲಿಯು ಮೊದಲ ಆಧ್ಯತೆ.
ಹಾಗಾಗಿ ಬಾಲ್ಯದಿಂದಲೇ ಕಲಿಯುವ ತಿಳಿಯುವ ತಿಳುವಳಿಕೆ, ಅವಲಂಬನೆಯಿಲ್ಲದೆ ಹಿಡಿದ ಕೆಲಸಗಳನ್ನು ಮಾಡಿ ಮುಗಿಸುವ ವ್ಯವಹಾರ ಬುದ್ಧಿ ನಮ್ಮ ಮಕ್ಕಳಿಗೆ ಬೇಕಾಗಿದೆ.
ನೀವು ಕೇಳಿರಬಹುದು. ಜೀವನ ಸಂಗಾತಿ ಎನಿಸಿಕೊಂಡ ಜೀವನ ಗೆಳತಿಯೇ ನಾನು ಸ್ವತಂತ್ರವಾಗಿ ಬಾಳಬೇಕು... ಅದಕ್ಕಾಗಿ ನಾನು ಕೆಲಸ ಮಾಡುವೆ. ನಾನು ನನ್ನ ಕಾಲ ಮೇಲೆ ನಿಲ್ಲಬೇಕು. ಹೀಗೆಲ್ಲಾ ಹೇಳುವವರು.
ಹೌದು ಇಂದು ಯಾರು ಯಾರನ್ನು ಯಾವುದಕ್ಕಾಗಿಯು ಆಶ್ರಯಿಸುವ ಕಾಲವಲ್ಲ. ಎಲ್ಲರೂ ತಮ್ಮದೇಯಾದ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಮಟ್ಟಿಗೆ ಜಾಣ ಜಾಣೆಯಾರಾಗಿದ್ದಾರೆ.
ಎಲ್ಲಾ, ಕಾಲಯಾ ತಸ್ಮಯ ನಮ:!
ಚಿಕ್ಕ ವಯಸ್ಸಿನ ಮಕ್ಕಳ ನಡವಳಿಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಹಾಲುಗಲ್ಲದ ಹಸುಗೂಸು ಪೂರ್ತಿ ಅಮ್ಮನನ್ನೇ ಅವಲಂಭಿಸಿರುತ್ತದೆ. ಅಮ್ಮ ಕುಡಿಸಿದಾಗ ಮಾತ್ರ ಹೊಟ್ಟೆ ತುಂಬುವುದು. ಅಮ್ಮ ಹೆತ್ತಿಕೊಂಡು ಹೋದರೆ ಮಾತ್ರ ತಾನು ಇರುವ ತನ್ನ ಜಾಗ ಬದಲಿಸುವುದು. ಇಲ್ಲ ಎಂದರೇ ಏನೇಂದರೂ ಏನಾಗುವುದಿಲ್ಲ.
ಇದು ಏನನ್ನು ಸೂಚಿಸುತ್ತದೆ ಎಂದರೇ ತನ್ನ ಕೈಯಲ್ಲಿ ಆಗದ, ಸಾಮರ್ಥ್ಯಕ್ಕೆ ಸಿಲುಕದವನ್ನು ತನ್ನ ಸುತ್ತಲಿರುವ ತಾಯಿ, ತಂದೆ ಮತ್ತು ಕುಟುಂಬದವರಿಂದ ಪಡೆಯುವೆವು.
ಮಗು ತನ್ನ ಸುತ್ತಲಿನಲ್ಲಿ ನಡೆಯುವ ಚಿಕ್ಕ ಚಿಕ್ಕ ಘಟನೆ, ನೋಟ, ಮಾತು, ರುಚಿಗಳ ಮೊಲಕ ತನ್ನ ಜಾಣ್ಮೆಯನ್ನು ಬೆಳೆಸಿಕೊಳ್ಳುತ್ತದೆ. ಹಾಗೆಯೇ ತಾನು ಬೇರೆಯವರೊಂದಿಗಿನ ತನ್ನ ಅವಲಂಬನೆಯನ್ನು ಕಳಚಿಕೊಳ್ಳುತ್ತಾ ಹೋಗುತ್ತದೆ.
ಹೆತ್ತ ಅಮ್ಮನಿಗೆ ಆಶ್ಚರ್ಯವಾಗುತ್ತದೆ. ಯಾಕೋ ದಿನ ದಿನಕೆ ಮಗ/ಮಗಳು ತನ್ನಿಂದ ದೂರವಾಗುತ್ತಿದ್ದಾರೆ ಅನಿಸುತ್ತದೆ. ಪ್ರತಿಯೊಂದಕ್ಕೊ ನನ್ನ ಅಣತಿಯನ್ನು ಕಾಯಿತ್ತಿದ್ದ ಕೂಸುಗಳು ಇವೆಯೇ ಏನೂ ಅನಿಸುತ್ತದೆ.
ಹತ್ತಿರವಿದ್ದರೂ ದೂರವಿರುವಂತೆ ಮನಸ್ಸಿಗೆ ಫೀಲ್ ಆಗುತ್ತದೆ.
ಆದರೇ ಪ್ರತಿಯೊಬ್ಬರೂ ತನ್ನ ಮಕ್ಕಳು ಬೇರೆಯವರಿಗೆ ಹೊರೆಯಾಗಿ ಜೀವನ ನಡೆಸುವುದನ್ನು ಎಂದಿಗೂ ಇಷ್ಟಪಡುವುದಿಲ್ಲ.
ಮಕ್ಕಳು ತಮ್ಮ ದೇಹ ಬುದ್ಧಿ ಬೆಳೆದಂತೆ ತಮ್ಮ ದಾರಿಯನ್ನು ತಾನು ಕಂಡುಕೊಳ್ಳಲಿ ಎಂಬುದೇ ಜಗತ್ತಿನ ಎಲ್ಲಾ ಜೀವಿಗಳ ಆಶಯ.
ನೀವು ನೋಡಿರಬಹುದು ಕಾಲೇಜು ಮುಗಿಯಿತು ಎಂದರೇ ಸಾಕು. ಏಯ್ ಮಗಾ ಮೊದಲು ನಿನ್ನ ಕಾಲ ಮೇಲೆ ನೀನು ನಿಲ್ಲುವಂತಾಗು. ಯಾವುದಾದರೂ ಕೆಲಸ ಹುಡುಕಿಕೋ ಅನ್ನುತ್ತಾರೆ.
ದೊಡ್ಡವರಾಗುತ್ತಾ ಆಗುತ್ತಾ ನಾವುಗಳು ಸರ್ವ ಸ್ವತಂತ್ರರಾಗಲು ಶ್ರಮಿಸುವುವೆವು. ರೆಕ್ಕೆ ಬಂದ ಹಕ್ಕಿಯ ರೀತಿಯಲ್ಲಿ ತನ್ನದೆಯಾದ ಬದುಕನ್ನು ಕಟ್ಟಿಕೊಳ್ಳಲು ತೊಡಗುವೆವು. ಹೆತ್ತವರ ಮಡಿಲಲ್ಲಿ ಬೆಳೆದು ದೊಡ್ಡವರಾಗಿ ಹೊಸ ತೀರದ ಹುಡುಕಾಟಕ್ಕೆ ದಾಪುಗಾಲು ಇಡುವೆವು.
ಇದು ಕೇವಲ ಮನುಷ್ಯ ಜಾತಿಯಲ್ಲಿ ಮಾತ್ರವಲ್ಲ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಪಾಡು ಇದು. ತಾನು ಯಾರ ಮೇಲು ಡಿಪೆಂಡ್ ಆಗಿಲ್ಲ ಎಂಬುದನ್ನು ನಿರೂಪಿಸುವ ಚಾಲೇಂಜು.
ಇದೆ ಜೀವನದ ಮರ್ಮ ತಾನು ತನ್ನವರಿಂದ ಕಲಿತ ಪಾಠವನ್ನು ಸ್ವತಂತ್ರವಾಗಿ ಬಳಸುವುದು. ತಾನೇ ಎಲ್ಲದಕ್ಕೂ ಹೊಣೆಯಾಗಿ ಜೀವನದ ಅತ್ಯಂತ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು.
ತೆಗೆದುಕೊಂಡ ನಿರ್ಧಾರಗಳು, ಮಾಡಲು ತೊಡಗುವ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುವುದೇ ನಮ್ಮಲ್ಲಿ ನಾವು ಮುಂದಿನ ಯೋಜನೆಗಳ ಪ್ಲಾನ್ ಗೆ ಬಹು ದೊಡ್ಡ ಆಸರೆ.
ಮನುಷ್ಯ ಸಂಘ ಜೀವಿ. ಅವಲಂಬನೆ ಮನುಷ್ಯನಿಗೆ ಅನಿವಾರ್ಯವಾದರೂ ಅದರಿಂದ ಬಿಡುಗಡೆಯನ್ನು ಅನುಭವಿಸುವುದರಲ್ಲಿಯೇ ಪ್ರತಿಯೊಬ್ಬರೂ ಸಂತಸಪಡುವವರು.
ತಾನೇ ಗಳಿಸಿದ ಪ್ರತಿಯೊಂದು ಯಶಸ್ಸು ಅತಿ ಹೆಚ್ಚು ಸಂತೋಷದಾಯಕವಾಗಿರುತ್ತದೆ.
ಜಗತ್ತಿನಲ್ಲಿ ಸರ್ವ ಸ್ವತಂತ್ರರಾಗಿ ಸಾಧಿಸಿದ ಸಾಧನೆಗಳನ್ನು ಸಾಧಕರನ್ನು ಸಮಾಜ ಬಹು ಮನ್ನಣೆಯಿಂದ ಗಮನಿಸುತ್ತದೆ.
ಇದು ಕೇವಲ ಕುಟುಂಬ, ನೆರೆಹೊರೆಗೆ ಸೀಮಿತಾಗಿಲ್ಲ. ಯಾವುದೇ ಕಛೇರಿ, ನೌಕರಿ, ದೇಶಾಂತರದ ಯೋಜನೆಗಳು ಹೀಗೆ ಪ್ರತಿಯೊಂದು ಹೆಚ್ಚು ಹೊರೆಯಿಲ್ಲದೇ ಮತ್ತು ಬೇರೆಯವರ ಸಹಾಯವಿಲ್ಲದೇ ಗಳಿಸಿದ ಗೆಲುವಿಗೆ ಬೆಲೆ.
ಗುರಿಗೆ ಗುರು ಬೇಕು.. ಶಿಷ್ಯ ಗುರುವಿನ ಮಾರ್ಗದರ್ಶನ ಪಡೆಯಲೇಬೇಕು. ಆದರೇ ಗುರುವನ್ನೇ ಜೊತೆಯಲ್ಲಿ ಯಾವಾಗಲು ಇಟ್ಟುಕೊಳ್ಳಬಾರದು.
ಇಂದಿನ ದಿನದಲ್ಲಿ ಏಕಲವ್ಯನಂತವನಿಗೆ ಹೆಚ್ಚು ಬೆಲೆ.
ಯಾರು ಬಹುಬೇಗ ಬೇಕಾದ ವಿಷಯಗಳನ್ನು ತಿಳಿದುಕೊಂಡು ಒಂಟಿಯಾಗಿ ಕೊಟ್ಟ ಕೆಲಸವನ್ನು ಮುಗಿಸುವುವರೋ ಅವರಿಗೆ ಎಲ್ಲಾ ನೌಕರಿಗಳಲ್ಲಿಯು ಮೊದಲ ಆಧ್ಯತೆ.
ಹಾಗಾಗಿ ಬಾಲ್ಯದಿಂದಲೇ ಕಲಿಯುವ ತಿಳಿಯುವ ತಿಳುವಳಿಕೆ, ಅವಲಂಬನೆಯಿಲ್ಲದೆ ಹಿಡಿದ ಕೆಲಸಗಳನ್ನು ಮಾಡಿ ಮುಗಿಸುವ ವ್ಯವಹಾರ ಬುದ್ಧಿ ನಮ್ಮ ಮಕ್ಕಳಿಗೆ ಬೇಕಾಗಿದೆ.
ನೀವು ಕೇಳಿರಬಹುದು. ಜೀವನ ಸಂಗಾತಿ ಎನಿಸಿಕೊಂಡ ಜೀವನ ಗೆಳತಿಯೇ ನಾನು ಸ್ವತಂತ್ರವಾಗಿ ಬಾಳಬೇಕು... ಅದಕ್ಕಾಗಿ ನಾನು ಕೆಲಸ ಮಾಡುವೆ. ನಾನು ನನ್ನ ಕಾಲ ಮೇಲೆ ನಿಲ್ಲಬೇಕು. ಹೀಗೆಲ್ಲಾ ಹೇಳುವವರು.
ಹೌದು ಇಂದು ಯಾರು ಯಾರನ್ನು ಯಾವುದಕ್ಕಾಗಿಯು ಆಶ್ರಯಿಸುವ ಕಾಲವಲ್ಲ. ಎಲ್ಲರೂ ತಮ್ಮದೇಯಾದ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಮಟ್ಟಿಗೆ ಜಾಣ ಜಾಣೆಯಾರಾಗಿದ್ದಾರೆ.
ಎಲ್ಲಾ, ಕಾಲಯಾ ತಸ್ಮಯ ನಮ:!