ಬುಧವಾರ, ನವೆಂಬರ್ 23, 2016

ಇದು ಎಂದು ನಿಲ್ಲುವುದೋ

ನವಂಬರ್ ೮ ಇಡೀ ವಿಶ್ವ ಅಮೆರಿಕಾದ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ. ಮೋದಿ ಶಾಕಿಂಗ್ ನ್ಯೂಸ್ ನ್ನು ಭಾರತೀಯರಿಗೆ ನೋಟ್ ಬ್ಯಾನ್ ಮಾಡುವ ಮೂಲಕ ಕೊಟ್ಟರು.

ವಿಶ್ವವೇ ಒಂದು ಕ್ಷಣ ಮೋದಿಯ ಮತ್ತು ಭಾರತ ಸರ್ಕಾರದ ನಿರ್ಧಾರದಿಂದ ನಿಬ್ಬೇರಗಾಗಿತು.

೧೦೦೦ , ೫೦೦ ರ ನೋಟಗಳು ಸರಿ ರಾತ್ರಿಯಿಂದ ಪೂರಾ ಬಂದ್. ನಾಳೆ ಬದಲಿಸಿಕೊಂಡರೇ ಮಾತ್ರ ಅವುಗಳಿಗೆ ಬೆಲೆ.

ಕೆಲವರಿಗೆ ಈ ರೂಲ್ ನುಂಗಲಾರದ ತುತ್ತಾಗಿದ್ದಂತೂ ನಿಜ.

ಮಾರನೇಯ ದಿನದಿಂದ ಸಾಲು ಸಾಲು ಮಂದಿ ಬ್ಯಾಂಕ್ ಗಳ ಮುಂದೆ ನೋಟ್ ಬದಲಿಸಿಕೊಳ್ಳಲು ನಿಂತಿದ್ದೇ ಬಂತು.

ಸಾಕಷ್ಟು ಜನ ಸಾಮಾನ್ಯರು ಈ ನಿರ್ಧಾರವನ್ನು ಮೆಚ್ಚಿದರು. ಹಾಗೆಯೇ ಕೆಲವರು ಮೋದಿಯನ್ನು ಶಪಿಸಿದರು.

ರಾಜಕೀಯ ನಾಯಕರುಗಳು ತಮ್ಮದೇಯಾದ ದಾಟಿಯಲ್ಲಿ ಈ ನಿರ್ಧಾರವನ್ನು ಖಂಡತುಂಡವಾಗಿ ಖಂಡಿಸಿದರು.

ಮೋದಿ ಕೇವಲ ಬ್ಯುಸಿನೇಸ್ ಮ್ಯಾನ್ ಮತ್ತು ಶ್ರೀಮಂತರ ಪರ. ಇವರುಗಳನ್ನು ಓಲೈಸುವ ಸಲುವಾಗಿ ಈ ಕಾನೂನು ತಂದಿದ್ದಾರೆ. ಬಡ ಜನರು, ರೈತರು, ಸಣ್ಣ ವ್ಯಾಪರಿಗಳು ಎಲ್ಲಿಗೆ ಹೋಗಲಿ? ಅದು ಹೇಗೆ ಪ್ರತಿಯೂಬ್ಬರೂ ಬ್ಯಾಂಕ್ ಆಕೌಂಟ್ ಇಟ್ಟುಕೊಳ್ಳಲು ಸಾಧ್ಯ. ಜನರ ಬಗ್ಗೆ ಮೋದಿಗೆ ಕರುಣೆಯೇ ಇಲ್ಲ. ಇದು ಒಂದು ದೊಡ್ಡ ನೋಟ್ ಹಗರಣ. ಬಡ ಜನರ ಸಾವುಗಳು ಬ್ಯಾಂಕ್ ಕ್ಯೂ ನಲ್ಲಿ ನಡೆಯುತ್ತಿದೆ. ಹೀಗೆ ವಿರೋಧದ ಮಾತು ಮಾತು ಚರ್ಚೆಗಳು ಇನ್ನೂ ನಡೆಯುತ್ತಿವೆ.

ಇದು ಕಾಳಧನ ಸಂಗ್ರಹಕಾರರಿಗೆ ದುಃಸಪ್ನ. ಭ್ರಷ್ಟ ಜನರಿಗೆ ಸರಿಯಾದ ಶಾಸ್ತಿಯಾಯಿತು. ಇನ್ನಾದರೂ ಬ್ಲಾಕ್ ಮನಿ ಹೇಳ ಹೆಸರಿಲ್ಲದ ರೀತಿಯಲ್ಲಿ ನಾಶವಾಗುತ್ತದೆ. ಮೋದಿಯೆಂದರೇ ತಾತ್ಸಾರ ಮಾಡಿದವರಿಗೆ ಮೋದಿ ಸರ್ಕಾರ ಸರಿಯಾಗಿ ತೋರಿಸಿತು. ಬಡವರಿಗೂ ಸಹ ಸರ್ಕಾರದಲ್ಲಿ ನಂಬಿಕೆ ಬರುವ ನಿರ್ಧಾರ ಇದು. ಭಾರತ ಇಂದಿಗೆ ಬೆಳಕನ್ನು ಕಂಡಿತು. ಶ್ರೀಮಂತರ ದರ್ಬಾರಿಗೆ ಕಡಿವಾಣ ಮೋದಿ ಹಾಕಿದರು. ಇಂಥ ಪ್ರಧಾನಿಯನ್ನು ಕಂಡ ಭಾರತ ಧ್ಯನ್ಯ! ಹೀಗೆ ಪರವಾದ ಮಾತುಗಳು ಪ್ರತಿ ಮೀಡಿಯಾಗಳಲ್ಲಿ ಪಸರಿಸಿತು.

ಯಾವುದೇ ಒಂದು ಕೆಲಸ, ಘಟನೆ, ವಿಚಾರ ನಡೆದರೂ ಪರ ಮತ್ತು ವಿರೋಧದ ಮಾತು ಕೇಳುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ.
ಯಾಕೆಂದರೇ ಪ್ರತಿಯೊಬ್ಬರಿಗೂ ತಮ್ಮ ಅಭಿವ್ಯಕ್ತಿಯನ್ನು ತಮ್ಮನುಸಾರ ವ್ಯಕ್ತಪಡಿಸಲು ಸರ್ವ ಸ್ವತಂತ್ರರು.

ಆದರೇ ನೋಟ್ ಬ್ಯಾನ್ ನಿಂದ ಎಷ್ಟು ಅನುಕೂಲವಾಗಬಹುದೋ ಅಷ್ಟೇ ಅನಾನುಕೂಲಗಳು ಸ್ವಲ್ಪ ದಿನಗಳು ಜನಸಾಮನ್ಯರು ಅನುಭವಿಸುವುದು ನಿಜ.

ಸರ್ಕಾರ ಯಾವುದೇ ರೀತಿಯ ಮುಂದಾಲೋಚನೆಯಿಲ್ಲದೆ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಆದರೂ ಇಂದು ನೋಟ್ ಬದಲಾವಣೆಯ ಭರಾಟೆಯಲ್ಲಿ ಸಾಮನ್ಯ ಜನರ ಸಾವುಗಳು ಮಾತ್ರ ಅಕ್ಷಮ್ಯ. ಇದಕ್ಕೆ ಯಾರು ಹೊಣೆಯಾಗುವರೊ ಗೊತ್ತಿಲ್ಲ!

ಯಾಕೆಂದರೇ ಯಾವುದೇ ಸುಧಾರಣೆ ಒಂದು ಜೀವಕ್ಕಿಂತ ಅಮೊಲ್ಯವಲ್ಲ.

ಇದನ್ನೇ ಕೆಲವರು ಕೇವಲವಾಗಿ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಇಂದಿನ ಕಷ್ಟಗಳು ಅವಶ್ಯಕ ಎನ್ನುವ ಉದ್ಧಟತನ ತೋರಿಸುತ್ತಿದ್ದಾರೆ. ಈ ರೀತಿಯ ಮನೋಭಾವನೆ ಯಾರೂ ಒಪ್ಪವಂತದ್ದಲ್ಲ.

ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಗಳು ಸಾಮಾನ್ಯ ಜನಗಳು, ಹಾಗೆಯೇ ಯಾವುದೇ ಕಾಯದೆ ಕಾನೂನುಗಳಿಂದ ಕಷ್ಟ ಅನುಭವಿಸುವುದು ಈ ಸಾಮಾನ್ಯ ಜನಗಳೇ.

ಉಳ್ಳವರಿಗೆ ಯಾವುದೇ ತೊಂದರೆ ಎಂದಿಗೂ ಆಗುವುದಿಲ್ಲ. ಅದಕ್ಕೆ ಇರಬೇಕು ಪ್ರತಿಯೊಬ್ಬರೂ ಉನ್ನತವಾದದ್ದನ್ನು ಪಡೆದುಕೊಳ್ಳಲು ತವಕಪಡುವುದು.

ಸರ್ಕಾರದ ಜಾಗದಲ್ಲಿರುವ ನಾಯಕರುಗಳು ಹಿಂದಿನಿಂದಲೂ ಬಡವರನ್ನೆ ತಮ್ಮ ಟ್ರಂಪ್ ಕಾರ್ಡ ಮಾಡಿಕೊಂಡಿದ್ದಾರೆ. ಬಡವರ ಉದ್ಧಾರದ ಹೆಸರಲ್ಲಿ ಅವರನ್ನು ಇನ್ನೂ ಅದೇ ಸ್ಥಿತಿಯಲ್ಲಿ ಇಡುವುದು ಅವರಿಗೆ ಲಾಭ. ಅದಕ್ಕೆ ಈ ಅಧಿಕಾರದ ಮಧದಲ್ಲಿರುವವರ ಮಾತುಗಳು ಯಾವುದು ನಿಜ ಯಾವುದು ಸುಳ್ಳೆಂದು ಅರಿಯುವುದು ಅಷ್ಟು ಸುಲಭವಲ್ಲ.

ಇಂದು ಪ್ರತಿಯೊಂದನ್ನು ಸಂಶಯದ ಮನಸ್ಸಿನಲ್ಲಿ ನೋಡುವಂತಾಗಿದೆ.

ಮೋದಿ ಏನೇ ಒಳ್ಳೆಯದನ್ನು ದೇಶಕ್ಕಾಗಿ ಮಾಡಲು ನಿರ್ಧರಿಸಿದರೂ ಪ್ರತಿಯೊಬ್ಬರೂ ಸಂಶಯದಲ್ಲಿ ಕಾಣುವುಂತಾಗಿದೆ.

ಇದು ಯಾಕೇ?

ದೇಶಕ್ಕಾಗಿ ಒಳ್ಳೆಯದನ್ನು ಮಾಡುವ ಮನುಷ್ಯನೇ ಹುಟ್ಟಿಲ್ಲ ಎನ್ನುತ್ತಿದ್ದಾರೆ.

ಅದು ಹೇಗೆ ನಮ್ಮ ಜನ ಗಾಂಧಿಯನ್ನು ನಂಬಿದರು? ಅದು ಯಾವ ಗುಣ ಗಾಂಧಿಯ ಮಾತನ್ನು ಇಡೀ ದೇಶ ಪಾಲಿಸುವಂತೆ ಮಾಡಿತು?

ಪ್ರಜಾಪ್ರಭುತ್ವವಿರುವ ಸರ್ಕಾರದಲ್ಲಿ ಪ್ರಜೆಯೇ ಪ್ರಭು ಎಂಬುದು ಕೇವಲ ಬಾಯಿ ಮಾತಾಗಿದೆ. ಯಾಕೆಂದರೇ ಸ್ವಾತಂತ್ರ್ಯ ಬಂದ ೭೦ ವರುಷದಲ್ಲಿ ನಮ್ಮನಾಳಿದ ನಾಯಕರುಗಳ ಜೊಳ್ಳು ಧೋರಣೆಯ ಮಾತುಗಳು. ಅವರುಗಳು ತಿಂದು ತೇಗಿದ ರೀತಿ. ಬಡವರ ಬಗ್ಗೆ ಅವರು ಮಾತನಾಡುವುದಕ್ಕೂ, ಅವರನ್ನು ಕಾಣುವುದಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ.

ದೇಶ ಉನ್ನತಿಯಾಗಬೇಕಾದರೇ ದೇಶದ ನಾಯಕರುಗಳು ಒಳ್ಳೆಯವರಾಗಿರಬೇಕು. ಒಳ್ಳೆಯ ನಾಯಕ ಸಿಗಬೇಕಾದರೇ ದೇಶದ ಜನರು ಅಂಥ ನಾಯಕರನ್ನು ಆರಿಸಬೇಕು.

ಆದರೇ ಎಲ್ಲೋ ಏನೋ ವ್ಯತ್ಯಾಸ ಕಾಣುತ್ತಿದೆ. ಅಧಿಕಾರ ಸಿಕ್ಕಿದರೇ ಸಾಕು ತಾನು ತನ್ನ ಕುಟುಂಬ ಮಾತ್ರ ಚೆನ್ನಾಗಿರಬೇಕು ಎನ್ನುವ ಮಟ್ಟಿಗೆ ಕೊಳ್ಳೆ ಹೊಡೆಯುವವರನ್ನೇ ಕಂಡ ನಮಗೆ ಮೋದಿಯ ನಡೆ ಸ್ವಲ್ಪ ವಿಭಿನ್ನ ಅನಿಸುತ್ತಿದೆ. ಇದಕ್ಕೆ ಇರಬೇಕು ನಮ್ಮ ಜನ ಈ ಬದಲಾವಣೆಯನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.


ಯಾವುದೇ ಬದಲಾವಣೆ ಸುಧಾರಣೆ ಬೇಡ ಗುರು! ನಾನು ಚೆನ್ನಾಗಿದ್ದರೇ ಸಾಕು. ಯಾವನ್ ಕ್ಯೂ ನಲ್ಲಿ ನಿಲ್ಲಬೇಕು? ನನ್ನ ದುಡ್ಡು ನನ್ನದಾಗಿದ್ದರೇ ಸಾಕು. ಯಾರು ಎಷ್ಟು ಬೇಕಾದರೂ ಇಟ್ಟುಕೊಂಡಿರಲಿ. ಈ ರೀತಿಯ ನಮ್ಮ ಮನೋಭಾವನೆಯನ್ನೇ ಎನ್ ಕ್ಯಾಷ್ ಮಾಡಿಕೊಂಡಿರುವ ನಮ್ಮ ಸೋ ಕಾಲ್ಡ್ ರಾಜಕೀಯ ನಾಯಕರುಗಳು ನಮ್ಮ ಬದುಕನ್ನು ಇನ್ನೂ ಮೂರ ಬಟ್ಟೆ ಮಾಡಲು ಸಿದ್ಧರಾಗಿದ್ದಾರೆ. ಇದು ನಿಜ!

ಸಂಸತ್ತನಲ್ಲಿ ಎಲ್ಲ ಪ್ರತಿಪಕ್ಷಗಳು ಈ ನೋಟ್ ಬ್ಯಾನ್ ಮಾಡಿರುವ ವಿರುದ್ಧ ತೊಡೆತಟ್ಟಿಕೊಂಡು ವಿರೋಧಿಸುತ್ತಿರುವುದನ್ನು ನೋಡಿದರೇ ನಮಗೆ ನಾವೇ ನಾಚಿಕೆಪಟ್ಟುಕೊಳ್ಳಬೇಕೇನೋ..?

ಏನೂ ಮಾಡುವ ಆಗಿಲ್ಲ. ನಾವೇ ಆರಿಸಿಕಳಿಸಿರುವ ಪ್ರತಿನಿಧಿಗಳು. ಅವರುಗಳು ನಮ್ಮಗಳ ಬಗ್ಗೆ ಬಾಯಿ ತುಂಬ ಹರಿಸುತ್ತಿರುವ ನುಡಿಗಳು ಕೇಳಬೇಕು. ಅವರಿಗೆ ನಮ್ಮ ಜನಗಳು ಇನ್ನೂ ಅದೇ ಸ್ಥಿತಿಯಲ್ಲಿದ್ದಷ್ಟು ಲಾಭ.

ಸತತ ೭೦ ವರುಷ ನಮ್ಮವರ ಏಳ್ಗೆಯನ್ನಾಗಲಿ, ನಮ್ಮ ಜನರನ್ನು ಹೆಚ್ಚು ಅಕ್ಷರಸ್ಥರನ್ನಾಗಿ ಮಾಡೋಣ, ಹೆಚ್ಚು ತಿಳುವಳಿಕೆಯುಳ್ಳವರನ್ನಾಗಿ ಮಾಡೋಣ ಎನ್ನುವುದರ ಬಗ್ಗೆ ಈ ರೀತಿಯ ಒಗ್ಗಟ್ಟನ್ನು ಪ್ರದರ್ಶಿದ್ದರೇ ನಮ್ಮ ಭಾರತ ಇಂದು ಅದು ಎಲ್ಲೋ ಇರುತ್ತಿತ್ತು.

ಆದರೇ ನಮ್ಮ ಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ಅದಕ್ಕಾಗಿ ಇವರುಗಳು ಮಾಡುತ್ತಿರುವ ನಾಟಕಗಳನ್ನು ನೋಡಿದರೇ ಇವರಿಗೆ ಮೋದಿ ನಡೆ ಮಾತ್ರ ತಪ್ಪಾಗಿ ಕಾಣುತ್ತಿದೆ. ಅದಕ್ಕಾಗಿ ಸಾಮಾನ್ಯ ಜನರ ಮನಸ್ಸನ್ನು ಬಡಿದೆಬ್ಬಿಸಿ ಸರ್ಕಾರದ ವಿರುದ್ಧ ದಂಗೆಯೇಳಿಸಬೇಕು. ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಆರಿಸಲಿ ಎಂಬ ದೂರಾಲೋಚನೆಯಂತಿದೆ.

ಇದು ಎಂದು ನಿಲ್ಲುವುದೋ ಕಾದು ನೋಡಬೇಕು.

ಗುರುವಾರ, ನವೆಂಬರ್ 10, 2016

ಸುದ್ಧಿಗಳು ಮತ್ತು ಸಮಾಜ



ಸಂವಹನ ಮಾಧ್ಯಮಗಳ ಜವಬ್ದಾರಿಯ ಬಗ್ಗೆ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಟಿ.ವಿ  ನ್ಯೂಸ್ ಚಾನಲ್ ಗಳು ಬಂದ ಮೇಲೊಂತೂ ಪರಿ ಪರಿಯಾಗಿ ಅವುಗಳ ಸಮಾಜಿಕ ಕಳ ಕಳಿಯ ಬಗ್ಗೆ ಸಾಮಾನ್ಯ ಜನರುಗಳು ಪ್ರಶ್ನೇ ಮಾಡುತ್ತಿದ್ದಾರೆ.

ಸುದ್ಧಿ ಮಾಡುವುದೇ ಸುದ್ಧಿ ಮಾಧ್ಯಮಗಳ ಕರ್ತವ್ಯವಾ? ಅವುಗಳು ಏನೂ ಸಮಾಜಕ್ಕೆ ನೀಡಬಹುದು. ಅವು ಹೇಗೆ ಜನಗಳ ಸಮಸ್ಯೆಗಳನ್ನು ಪರಿಹರಿಸಬಹುದು. ಹೀಗೆ ಹತ್ತಾರು ಕೋನಗಳಲ್ಲಿ ಇವರನ್ನು ಕೇಳುತ್ತಿರುತ್ತಾರೆ.

ಪ್ರಬಲ ಮಾಧ್ಯಮ ಎಂದರೇ ಟಿ.ವಿ ಮಾಧ್ಯಮ. ಪತ್ರಿಕೆ, ರೇಡಿಯೊ ಗಳಿಗಿಂತ ಅತಿ ವೇಗವಾಗಿ ಜನರನ್ನು ತಲುಪುವ ಮಾರ್ಗ ಎಂದರೇ ಟಿ.ವಿ ಚಾನಲ್ ಗಳು ಮಾತ್ರ.

ಎಲ್ಲಾ ಭಾಷೆಗಳಲ್ಲು ಸಾಕಷ್ಟು ನ್ಯೂಸ್ ಚಾನಲ್ ಗಳು ಹುಟ್ಟಿಕೊಂಡಿವೆ. ಯಾವುದೇ ಘಟನೆಗಳು ನಡೆದರೂ ಕ್ಷಣ ಮಾತ್ರದಲ್ಲಿ  ಅದರ ವರದಿ ಬ್ರೇಕಿಂಗ್ ನ್ಯೂಸ್ ರೂಪದಲ್ಲಿ ಟಿ.ವಿ ಪರದೆಯಲ್ಲಿ ಪ್ರತ್ಯಕ್ಷವಾಗುತ್ತದೆ.

ಅದು ಜನರಿಗೆ ಎಷ್ಟು ಉಪಯೋಗವಾಗುತ್ತದೂ ಬಿಡುತ್ತದೂ ಗೊತ್ತಿಲ್ಲ. ಪ್ರಸಾರವನ್ನು ಮಾತ್ರ ಮಾಡುತ್ತಾರೆ. ಯಾವುದೇ ಘಟನೆಯನ್ನು ಯಥಾವತ್ ಪ್ರಸಾರ ಮಾಡುವುದೇ ಅವರ ಹೆಗ್ಗಳಿಕೆಯಾಗಿದೆ! ಎನ್ನುವ ಮಟ್ಟಿಗೆ.

ಆದರೇ ಕೆಲವೊಂದು ಸಮಯದಲ್ಲಿ ಸುದ್ಧಿ ಪ್ರಸಾರ ಮಾಡುವುದಷ್ಟೇ, ಮಾಡುವುದು ತಪ್ಪು ಅನಿಸುತ್ತದೆ. ಯಾವುದೋ ಒಂದು ಅಪಘಾತ, ಯಾವುದೋ ಒಂದು ಅವಘಡಗಳು ಸಂಭವಿಸಿದಾಗ, ಸಂಭವಿಸುವ ಸೂಚನೆ ಗೊತ್ತಿದ್ದಾಗ, ಈ ಮಾಧ್ಯಮಗಳು ಕೇವಲ ಕ್ಯಾಮರ ಮೈಕ್ ಗಳಿಗೆ ಕೆಲಸಗಳನ್ನು ಕೊಡುವುದನ್ನು ಬಿಟ್ಟು ಮನಸಾಕ್ಷಿಗೆ ಕೆಲಸಕೊಟ್ಟರೆ ಕ್ಷೇಮ.ಆ ಮೊಲಕ ಕೆಲವೊಂದು ಜೀವಗಳನ್ನು ಉಳಿಸಬಹುದಾಗಿತ್ತು ಎನಿಸುತ್ತದೆ.

ಹೀಗೆ ಅನಿಸುವುದು ಅವರೇ ಸುದ್ಧಿಯನ್ನು ಬೀತರಿಸುವಾಗ ನುಡಿಯುವ ಪುಂಕಾನು ಪುಂಕು ಮಾತುಗಳು ಮತ್ತು ಬೇರೆಯವರನ್ನು ಬೆಟ್ಟು ಮಾಡಿ ತೋರಿಸುವುದರಿಂದ.

ಯಾಕೆಂದರೆ ಇತ್ತೀಚೆಗೆ ನಡೆದ ಇಬ್ಬರು ನಟರುಗಳ ಸಾವು. ಕಾವೇರಿ ಗಲಾಟೆಯಲ್ಲಿ ಆದ ಅನಾಹುತ. ಹಿಂದೆ ರಸ್ತೆ ಅಪಘಾತದಲ್ಲಿ ಅಸುನೀಗಿದ ಯುವಕನ ಘಟನೆ. ಹಿರಿಯ ಪೊಲೀಸ್ ಅಧಿಕಾರಿಯ ಆತ್ಮಹತ್ಯೆ. ಹೀಗೆ ಈ ಕೆಲವೊಂದು ಸುದ್ಧಿ ಪ್ರಸಾರಣೆಗಳು, ಮಾಧ್ಯಮಗಳು ಕೇವಲ ಕ್ಯಾಮರ ಕಣ್ಣಿನಿಂದ ನೋಡುವುದನ್ನು ಬಿಟ್ಟು ಹೃದಯದಿಂದ ನೋಡಬೇಕಾಗಿತ್ತು ಎಂದು ಪ್ರತಿಯೊಬ್ಬ ವೀಕ್ಷಕನನ್ನು ಕಲಕಿದ್ದಿದೆ.

ಘಟನೆ ಸಂಭವಿಸಿದ ಮೇಲೆ ಹೇಳುವ ನೂರು ಕಾರಣಗಳು. ಮತ್ಯಾರನ್ನೋ ಹೊಣೆಗಾರರನ್ನಾಗಿ ಮಾಡುವುದು ಉಪಯೋಗವಿಲ್ಲ. ಯಾಕೆಂದರೇ ತಾವೇ ಕಿವಿಯಾರೇ ಸತ್ಯವನ್ನು ಕೇಳಿ, ನೋಡಿದ ಮೇಲೆ ಜನರಿಗೆ ಟಿ.ವಿಯಲ್ಲಿ ತೋರಿಸುವುದು ಸುದ್ಧಿ ಸಂಸ್ಥೆಗಳು. ಆದ್ದರಿಂದ ಪ್ರಪ್ರಥಮವಾಗಿ ಇದರ ಬಗ್ಗೆ ತಿಳಿಯುವವರು ಮತ್ತು ವಿಷಯ ಗೊತ್ತಿರುವವರು ಈ ಮಾಧ್ಯಮದವರಿಗೆ. ಇವರುಗಳು ತಾವೇ ತಡೆಯಬಹುದಾಗಿದ್ದ ದುರಂತಗಳನ್ನು ಮತ್ಯಾರೋ ಬಂದು ನಿಲ್ಲಿಸಬಹುದಾಗಿತ್ತು ಎಂದು ಹೇಳುವುದು ತೀರ ಕ್ಷುಲ್ಲಕ ಅನಿಸುತ್ತದೆ.

ಇದೆ ನ್ಯೂಸ್ ಚಾನಲ್ ಗಳ ಉತ್ತಮ ಸಮಾಜ ನಿರ್ಮಾಣ, ದಿಟ್ಟ, ನೇರ ಸ್ವಾಸ್ಥ್ಯ ನಡವಳಿಕೆ?

ಕೇವಲ ವೇಗವಾದ ಸುದ್ಧಿ ಪ್ರಸಾರದಲ್ಲಿ ಮೇಲು ಗೈ ಸಾಧಿಸದೆ ಸಾಮಾಜಿಕ ಕಾಳಜಿಯಲ್ಲಿ ವೇಗವನ್ನು ಸಾಧಿಸುವುದು ಅತ್ಯಂತ ಅವಶ್ಯಕ ನಡೆಯಾಗಿದೆ. ಇದು ನಮ್ಮೆಲ್ಲಾರ ಕೋರಿಕೆಯು ಆಗಿದೆ.

ಒಮ್ಮೊಮ್ಮೆ ಅತಿರೇಕದ ವರ್ತನೆಯನ್ನು ಸುದ್ಧಿ ಸಂಗ್ರಹಿಸುವವರು ಮಾಡುವುದನ್ನು ನಿತ್ಯ ಟಿ.ವಿಗಳಲ್ಲಿ ಗಮನಿಸಬಹುದು. ಏನದರೊಂದು ಕಾಂಟ್ರವರ್ಸಿ ಕ್ರಿಯೇಟ್ ಮಾಡಿ ಅದನ್ನೆ ದೊಡ್ಡ ಸುದ್ಧಿ ಮಾಡುವುದು. ವ್ಯಕ್ತಿ ಮತ್ತು ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಯಾವುದೇ ಸುದ್ಧಿ ಪ್ರಸಾರ ಮಾಡುವುದು ಕ್ಷೇಮವೇ ಇಲ್ಲವೇ ಎಂದು ಪರಮರ್ಶಿಸುವ ಗೊಜಿಗೆ ಹೋಗದೇ ನೇರವಾಗಿ ಜನರ ಮುಂದೆ ಇಡುವುದು.

ದುಃಖದಲ್ಲಿರುವವರನ್ನು ಪದೆ ಪದೆ ಪ್ರಶ್ನೆ ಮಾಡುವುದು ಮಾನವೀಯತೆಯನ್ನೇ ಕಳೆದುಕೊಂಡಂತೆ ಅನ್ನಿಸುತ್ತದೆ. ಕೈಯಲ್ಲಿ ಮೈಕ್ ಇದ್ದ ತಕ್ಷಣ ಯಾವುದೋ ಲೋಕದಿಂದ ಇಳಿದು ಬಂದವರಂತೆ ವರ್ತಿಸಬಾರದು.

ಮಾಧ್ಯಮ ತನ್ನ ಇತಿಮೀತಿಯನ್ನು ಹರಿತು ನಡೆದರೆ ತುಂಬ ಒಳಿತು.

ಈ ಹಿಂದೆ ಒಂದು ಕಿರು ಚಿತ್ರ ಬಂದಿತ್ತು. ಅದರಲ್ಲಿ ಹೀಗೆ ದಾರಿಯಲ್ಲಿ ತರುಣನೊಬ್ಬ ಸಾಗುತ್ತಿರುತ್ತಾನೆ. ಅದೇ ಸಮಯದಲ್ಲಿ ಇವನಿಗೆ ಯಾರೋ ವಯಸ್ಸಾದ ಮನುಷ್ಯ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮರವನ್ನು ಏರುತ್ತಿರುವುದು ಕಾಣುತ್ತದೆ. ಈ ಹುಡುಗನಿಗೆ ಕುತೂಹಲ ಜೇಬಲ್ಲಿದ್ದ ಗ್ಯಾಲಕ್ಸಿ ಮೊಬೈಲ್ ತೆಗೆದು ವಿಡಿಯೋ ಆನ್ ಮಾಡಿ ಕಳ್ಳಿ ಮರೆಯಲ್ಲಿ ರೇಕಾರ್ಡ್ ಮಾಡಲು ಕುರುತ್ತಾನೆ. ಅದು ಉಸಿರು ಬಿಗಿ ಹಿಡಿದು. ಅದು ಎಲ್ಲಿ ಆ ವ್ಯಕ್ತಿಗೆ ತನ್ನ ಇರುವಿಕೆ ತಿಳಿಯುವುದೋ ಎಂದು!

ವಯಸ್ಸದ ಆ ವ್ಯಕ್ತಿ ಮರ ಹತ್ತಿ ಸುತ್ತ ಮುತ್ತ ನೋಡುತ್ತಾನೆ. ಹಾಗೆಯೇ ಗಟ್ಟಿ ಕೊಂಬೆಯನ್ನು ಹುಡುಕಲು ತೊಡಗುತ್ತಾನೆ. ಕೊನೆಗೆ ಬಲ ಬದಿಗೆ ಒಂದೊಂದೆ ಹೆಜ್ಜೆ ಜಾರುತ್ತನೆ. ಕೈಯಲ್ಲಿದ್ದ ಹಗ್ಗವನ್ನು ಕೊಂಬೆಗೆ ಕಟ್ಟುತ್ತಾನೆ. ಇನ್ನೊಂದು ಹಗ್ಗದ ತುದಿಯನ್ನು ಕುಣಿಕೆ ಕಟ್ಟಿ ತನ್ನ ಕೊರಳಿಗೆ ಹಾಕಿಕೊಳ್ಳುತ್ತಾನೆ. ಕಣ್ಣಲ್ಲಿ ಧಾರಾಕಾರ ನೀರು! ಮೇಲೆ ಒಮ್ಮೆ ನೋಡುತ್ತಾನೆ. ಹಾಗೆಯೇ ತಲೆ ತಗ್ಗಿಸುತ್ತಾನೆ. ಅದು ಏನು ಏನೋ ಬಾಯಲ್ಲಿ ದುಃಖದಿಂದ ಪ್ರಲಾಪಿಸುತ್ತಾನೆ. ಆದರೂ ತಾನು ಬಂದಿರುವ ಕಾರ್ಯವನ್ನು ಮುಗಿಸುವ ಆತುರದಲ್ಲಿ ಕಣ್ಣು ಮುಚ್ಚಿ ಒಮ್ಮೆಯೇ ಜೀಗಿಯುತ್ತಾನೆ. ಅಷ್ಟೇ! ಇದೆಲ್ಲಾವನ್ನು ಈ ತರುಣ ತನ್ನ ಮೊಬೈಲ್ ವಿಡಿಯೋದಲ್ಲಿ ರೇಕಾರ್ಡ ಮಾಡುತ್ತಾ ನೋಡುತ್ತಿರುತ್ತಾನೆ. ಕೊನೆಗೆ ವ್ಯಕ್ತಿಯ ಶವ ನೆತಾಡುತ್ತದೆ. ರೇಕಾರ್ಡ್ ನಿಲ್ಲುತ್ತದೆ.ಅನಂತರ ಅದನ್ನು ಯಾರಿಗೋ ಕಳಿಸಲು ತೊಡಗುತ್ತಾನೆ.ಅಲ್ಲಿಗೆ ಈ ಕಿರುಚಿತ್ರ ಮುಗಿಯುತ್ತದೆ.

ಇದು ಮನ ಕಲುಕುವ ಸನ್ನಿವೇಶ. ನಮ್ಮತನವನ್ನು ಕಳೆದುಕೊಂಡು ವರ್ತಿಸುವ ಹುಚ್ಚುತನ. ಈ ರೀತಿಯ ಗೀಳು ಯಾರಿಗೂ ಎಂದಿಗೂ ಬರಬಾರದು. ಇಂಥ ಸಮಯದಲ್ಲಿ ಮನುಷ್ಯತ್ವ ಜಾಗೃತವಾಗಬೇಕು.

ಇಂದು ಪ್ರತಿಯೊಂದನ್ನು ವಿಡಿಯೋ, ಪೊಟೋ ತೆಗೆದು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುವುದು ಖ(ಕಾ)ಯಾಲಿಯಾಗಿದೆ.

ಒಮ್ಮೊಮ್ಮೆ ಆ ಒಂದು ವಿಡಿಯೋ ಪೊಟೋ ತುಣುಕು ಇಡೀ ಸಮಾಜವನ್ನೆ ತಲ್ಲಣಗೊಳಿಸಿಬಿಡುವುದು. ಇಲ್ಲಿ ಯಾರ ಕಡಿವಾಣವಿಲ್ಲ. ಪ್ರತಿಯೊಬ್ಬರೂ ಅವರವರ ಮನಸೊ ಇಚ್ಛೆ ಏನದರೂ ಪ್ರಸಾರ ಮಾಡಬಹುದು. ತಮಗೆ ತಾವೇ ರೀಪೊರ್ಟರ್!

ಆದರೇ ಈ ರೀತಿಯ ವರ್ತನೆ ಘನತೆಯುಳ್ಳ ಸುದ್ಧಿ ಸಂಸ್ಥೆಗಳಿಂದ ನಡೆಯಬಾರದು.

ಟಿ.ವಿ, ಪತ್ರಿಕೆ, ಸುದ್ಧಿ ಮಾಧ್ಯಮಗಳನ್ನು ಶಾಸಕಾಂಗದ ನಾಲ್ಕನೇಯ ಅಂಗ ಎಂದು ಸಂವಿಧಾನವೇ ಗುರುತಿಸಿದೆ. ಸ್ವಾಸ್ಥ್ಯ ಸಮಾಜ ಮತ್ತು ಶಾಂತ ಸಮಾಜದ ನಿರ್ಮಾಣ ಇವುಗಳ ಕೈಯಲ್ಲಿಯೇ ಜಾಸ್ತಿಯಿದೆ.

ಇಂದು ಮಾಧ್ಯಮಗಳಿಂದ ಜಗತ್ತೆ ಒಂದು ಪುಟ್ಟ ಹಳ್ಳಿಯಾಗಿದೆ. ಜಗತ್ತಿನ ಯಾವುದೇ ಮೊಲೆಯಲ್ಲಿ ಜರುಗಿದ ಚಿಕ್ಕ ಘಟನೆಗಳು ಸಹ ಕ್ಷಣ ಮಾತ್ರದಲ್ಲಿ ಮನೆ ಮನವನ್ನುತಲುಪುತ್ತಿವೆ. ಇದಕ್ಕೆ ಪ್ರತಿಯೊಬ್ಬರೂ ಅಭಾರಿಗಳು. ಇದರಿಂದ ಮಾಧ್ಯಮಗಳು ಲಾಭವನ್ನುಗಳಿಸುತ್ತಿವೆ. ಹಾಗೆಯೇ ಸಾಮಾನ್ಯ ಜನರುಗಳು ಸಹ ಹೆಚ್ಚು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಯಾವುದೇ ದೊಡ್ಡ/ಚಿಕ್ಕ ಸುದ್ಧಿ ಅಥವಾ ವಿಚಾರ ಒಂದು ಅಮೊಲ್ಯ ಜೀವಕ್ಕಿಂತ ಎಂದಿಗೂ ದೊಡ್ಡದಲ್ಲ. ಆದ್ದರಿಂದ ಜೀವಪರ ಕಾಳಜಿಯನ್ನು ಪ್ರತಿಯೊಂದು ಚಾನಲ್ ಮತ್ತು ಪ್ರತಿ ಮಾಧ್ಯಮಗಳು ಹೊಂದುವುದು ಇಂದಿನ ಜರೂರತಾಗಿದೆ.

ಇಲ್ಲವೆಂದರೇ ಹೇಳುವುದೊಂದು ಮಾಡುವುದೊಂದು ಅನ್ನುವಂತಾಗುತ್ತದೆ.