ಶುಕ್ರವಾರ, ಜೂನ್ 24, 2016

ಟಾಪರ್ ಸುಮಿತ್ರಾ

ಅವಳ ಹೆಸರು ಸುಮಿತ್ರಾ. ನಾನು ಅವಳನ್ನು ಮೊದಲು ನೋಡಿದ್ದು ಪಿ.ಯು.ಸಿ ಯಲ್ಲಿ ಅನಿಸುತ್ತೇ.

ಮೊನ್ನೇ ಅವಳನ್ನು ಪೇಸ್ ಬುಕ್ ನಲ್ಲಿ ಕಂಡು ಅಚ್ಚರಿಯಾಯಿತು. ಅದೇ ಮುಖ ಆ ದಿನಗಳ ನಗು ಇನ್ನು ಮರೆಯಾಗಿಲ್ಲ.

ಇದೆ ಅನಿಸುತ್ತೇ ಒಂದಷ್ಟು ಜನಗಳು ಏನೇ ಏನು ಎಂದರೂ ಬದಲಾಗಲಾರರು.

ಕಾಲ ಮಾತ್ರ ಬದಲಾಗಬೇಕು ಅಷ್ಟೇ!

ಬಹಳ ದಿನಗಳ ಅನಂತರ ಸಿಕ್ಕಿದ ಗೆಳತಿಯನ್ನು ಏನಮ್ಮಾ ಎಲ್ಲಿ ಹೋಗಿದ್ದೇ? ಎಂದು ಅದೇ ಗೆಳೆತನದ ರೀತಿಯಲ್ಲಿ ಕೇಳಿದೇ.

ಅಂದಿನ ಆ ಸುಮಿತ್ರಾ ಇಂದು ಸುಮಿತ್ರಾ ಸಾಗರ್ ಆಗಿ ದೂರದ ಅಮೆರಿಕಾದಲ್ಲಿ  ವಾಸಿಸುತ್ತಿದ್ದಾರಂತೆ.  ಸಾಕಷ್ಟು ಬದಲಾವಣೆಯ ಗಾಳಿ ಉಂಟಾಗಿದೆ ಎಂಬುದು ಚಾಟ್ ಮೂಲಕ ತಿಳಿಯಿತು. ಮುದ್ದಾದ ಎರಡು ಮಕ್ಕಳು ಮತ್ತು ಸಾಪ್ಟವೇರ್ ಸಂಗಾತಿಯ ಜೊತೆಯಲ್ಲಿ ಚೆನ್ನಾಗಿಯೇ ಇದ್ದೀನಿ ಎಂದು ಸ್ಮೈಲ್ ಐಕಾನ್ ಮೊಲಕ ತಿಳಿಸಿದಳು.

ಇನ್ನೊಮ್ಮೆ ಚಾಟ್ ಮಾಡೋಣ ಬಾಯ್ ಎಂದು ಲಾಗೌಟ್ ಆದಳು.

ಪೇಸ್ ಬುಕ್ ಈ ರೀತಿಯಲ್ಲಿ ಉಪಯೋಗವಾಗುವುದು. ಸುದ್ಧಿಯೇ ಇಲ್ಲದೇ ಕಳೆದು ಹೋದ ಗೆಳೆಯರು, ಗೆಳೆಯತಿಯರು, ನೆರೆಹೊರೆಯವರು ದೂರದವರು ಪ್ರತಿಯೊಬ್ಬರನ್ನು ಒಂದಲ್ಲಾ ಒಂದು ಸಮಯದಲ್ಲಿ ದುತ್ತನೇ ಪ್ರತ್ಯಕ್ಷ ಮಾಡಿಸುತ್ತದೆ.

ಈ ಸುಮಿತ್ರಾ ಪ್ರಥಮ ಪಿ.ಯು ದಿಂದ ಇಂಜಿನಿಯರಿಂಗ್ ಮುಗಿಯುವವರೆಗೂ ಜೊತೆಯಲ್ಲಿಯೇ ಓದುತ್ತಾ ಪರಿಚಯದ ಹುಡುಗಿಯಾಗಿದ್ದರು.

ಓದುವ ವೇಳೆಯಲ್ಲಿ ನಮಗೆಲ್ಲಿ ಗೊತ್ತೂ.. ಹೀಗೆಲ್ಲಾ ಜೀವನ ನಮ್ಮನ್ನೆಲ್ಲಾ ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗುತ್ತದೆಂದು?

ಓದುವುದು ಒಂದು ಮಾಡುವುದು ಮತ್ತೊಂದು. ಓದಿಗೆ ತಕ್ಕನಾದ ಕೆಲಸ ಸಿಕ್ಕುವುದಾದರೇ ನಮ್ಮಗಳ ಪಾಡು ಹೀಗೆ ಯಾಕೆ ಇರುತ್ತಿತ್ತು.

ಹಾಗೆಯೇ ಕೆಲಸಕ್ಕಾಗಿಯೇ ಎಂದು ಓದಬಾರದು. ಪದೆ ಪದೆ ಹೀಗೆ ಹೇಳುತ್ತಿದ್ದ ನಮ್ಮ ಇಂಜಿನಿಯರಿಂಗ್ ಕಾಲೇಜು ಲೆಕ್ಚ್ ರ್ ಮಾತು.

ಎಷ್ಟು ಸತ್ಯ!

ಈಗ ಸುಮಿತ್ರಾ ನನ್ನೇ ತೆಗುದುಕೊಂಡರೇ... ಆಗ ಓದುತ್ತಿದ್ದ ಸ್ಪೀಡ್ ಗೆ ಇಲ್ಲಿಯೇ ಭಾರತದಲ್ಲಿ ಯಾವುದಾದರೂ ದೊಡ್ಡ ಆಫೀಸ್ ನಲ್ಲಿ ಅಥವಾ ದೊಡ್ಡ ಹುದ್ದೆಯಲ್ಲಿಯೇ ಇರಬೇಕಾಗಿತ್ತು.

ನಾವಂತೂ ಸುಮಿತ್ರ ಓದುವ ಕ್ಯಪಾಸಿಟಿಗೆ ಥಂಡಾ ಹೋಗಿಬಿಟ್ಟಿದ್ದೀವಿ.

ಸತತ ನಾಲ್ಕು ವರುಷಗಳು ಕಾಲೇಜಿಗೆ ಒಬ್ಬಳೇ ಟಾಪರ್. ನಾವು ಯಾರೊಬ್ಬರೂ ಓದುವುದರಲ್ಲಿ ಅವಳ ಸರಿ ಸಮ ಬರಲು ಹಾಗಲೇ ಇಲ್ಲ!

ಅದು ಓದುವ ದಿನಗಳು. ಮತ್ತೆ ಎಂದು ನಮಗೆ ಮರಳಿ ಬರಲಾರವು.

ಕೇವಲ ನೆನಪುಗಳು ಮಾತ್ರ!

ಆದರೇ ಇಂದು ಸುಮಿತ್ರಾ ತುಂಬು ಗೃಹಿಣಿಯಾಗಿ ಎರಡು ಮಕ್ಕಳ ಮತ್ತು ಗಂಡನ ಕ್ಷೇಮ ಮಾತ್ರ ನೋಡಿಕೊಳ್ಳುತ್ತಿರುವುದು. ಅದೇ ಟಾಪರ್ ಸುಮಿತ್ರಾನ ಅನಿಸುತ್ತದೆ!

ಕಾಲ ಎಲ್ಲಿಂದ ಎಲ್ಲಿಗೂ ಚಲಿಸಿದೆ.

ಜೀವನ ದೊಡ್ಡದು!

ಅಂದುಕೊಂಡದ್ದು ಯಾವುದು ಸಿಗಲಾರದು. ಬದುಕಿಗೆ ತಕ್ಕಂತೆ ಹೊಂದಿಕೊಳ್ಳಬೇಕು. ಅದೇ ಜೀವನ ಮರ್ಮ!

ಈಗ ನೆನಪಿಸಿಕೊಂಡರೇ ಅದೇ ಅಚ್ಚರಿಯಾಯಿತು.

ಅಲ್ಲಾ ನಾವೆಲ್ಲಾ ಅಷ್ಟು ಸಾಹಸಪಟ್ಟಿದ್ದು ಇದಕ್ಕೇನಾ ಅನಿಸುತ್ತದೆ. ಅಂದು ಚೆನ್ನಾಗಿ ಓದಿದ ಮೇಡಮ್ಮ ಇಂದು ಮನೆಯಲ್ಲಿದ್ದಾರೆ. ನಾವುಗಳು ಯುಜ್ ಲೇಸ್ ಎಂದುಕೊಂಡವರು ಟಸ್ಸು ಪುಸ್ ಎಂದುಕೊಂಡು ಕೊರಳಿಗೆ ಟ್ಯಾಗ್ ಹಾಕಿಕೊಂಡು ಮಿಂಚುವ ಎಂ.ಎನ್.ಸಿ ಯಲ್ಲಿ ದುಡಿಯುತ್ತಿದ್ದೇವೆ.

ಇಲ್ಲಿ ಯಾರು ಮುಂದೆ? ಯಾರು ಹಿಂದೆ? ಗೊತ್ತಾಗುತ್ತಿಲ್ಲ!

ನನಗೆ ಅನಿಸುತ್ತದೆ. ಸುಮಿತ್ರ ಏನಾದರೂ ಒಮ್ಮೆಯಾದರೂ ಅಂದಿನ ಕಾಲೇಜು ದಿನಗಳಲ್ಲಿನ ಭರವಸೆಯ ಕನಸಿನ ಬಗ್ಗೆ ಈಗ ಯೋಚಿಸಿರುವಳೆ? ಅಂದಿನ ನೆನಪು ಇಂದು ಇಲ್ಲವೇ? ಏನಾದರೂ ಪಶ್ಚಾತಪದ ಬೇಸರ ಮನದಲ್ಲಿ ಉಂಟಾಗಿದೆಯೇ?

ಮತ್ಯಾವತ್ತಾದರೂ ಚಾಟ್ ಗೆ ಸಿಕ್ಕಾಗೆ ಕೇಳೇ ಕೇಳುತ್ತೇನೆ.

ಕೆಲಸ ಸಿಕ್ಕಿ ಹೆಚ್ಚು ದುಡಿದರೇ ಮಾತ್ರ ಓದಿದ್ದು ಸಾರ್ಥಕವಾ?

ಓದುವುದು ದುಡಿಯುವುದಕ್ಕೆ ಮಾತ್ರನಾ?

ಅಲ್ಲಾ ಅಷ್ಟೆಲ್ಲಾ ಓದಿ ಮೊಡಿಗೆರೆ ಎಂಬ ಹಳ್ಳಿಗೆ ಬಂದು ವ್ಯವಸಾಯ ಮಾಡಿದ ತೇಜಸ್ವಿ ಗ್ರೇಟ್ ಅಲ್ಲವಾ? ನಗರದಲ್ಲಿಯೇ ಇದ್ದುಕೊಂಡು ಯಾರು ಸಾಧಿಸಲಾಗರದದ್ದನ್ನು ಗದ್ದೆ, ಕಾಡು, ಪ್ರಾಣಿ, ಸಸ್ಯಗಳ ಮದ್ಯೆಯೇ ಇದ್ದುಕೊಂಡು ವಿಶ್ವಕ್ಕೆ ಗೋಚರಿಸಿದ್ದು ಕಡಿಮೆ ಸಾಧನೆಯೆನಲ್ಲ!

ಅಲ್ಲವಾ ನೀವೇ ಹೇಳಿ! ವಿಶ್ವ ವಿದ್ಯಾಲಯದಲ್ಲಿರುವವರು ತೇಜಸ್ವಿ ಬರೆದಿದ್ದನ್ನು ಸಿಲಬಸ್ ಆಗಿ ಅಧ್ಯಯನ ಮಾಡುತ್ತಿದ್ದಾರೆ.

ತೇಜಸ್ವಿ ರೀತಿ ಯಾಕೆ ಯಾರು ಯೋಚನೆ ಮಾಡುವುದಿಲ್ಲ?

ಸುಮಿತ್ರ ಳನ್ನು ಕಂಡು ನಾನು ಯಾಕೆ ತಕ್ಷಣ ಹಾಗೆ ಯೋಚಿಸಿದೆ?

ಓದಿದ್ದಾರೆ ಎಂದರೇ ಅಫೀಸ್ ನಲ್ಲಿ ಮಾತ್ರ ಕೆಲಸ ಮಾಡಬೇಕೇ? ಮತ್ತಿನೇನನ್ನೂ ಮಾಡಬಾರದೇ?

ನಿಜವಾದ ಪ್ರತಿಭೆ ಎಂದರೇ ಏನು?

ಓದುವುದು ತಿಳುವಳಿಕೆಗೆ ಮಾತ್ರ ಎಂದು ಯಾಕೆ ಯಾರೊಬ್ಬರೂ ಯೋಚಿಸಲಾರರು.

ದುಡ್ಡು ಗಳಿಸುವುದೊಂದೇ ಬದುಕಾ? ಬದುಕುವುದಕ್ಕಾಗಿ ದುಡ್ಡು ಬೇಕು, ದುಡ್ಡಿಗಾಗಿ ಬದುಕುವುದೇ ಜೀವನವಾ?

ಓದುವ ಸಮಯದಲ್ಲಿ ಕೇವಲ ಕೆಲಸ ಗಳಿಸುವುದೊಂದೆ ಗುರಿಯಾಗುವುದು ಯಾಕೆ? ಆ ಸಮಯದಲ್ಲಿ ಬೇರೆ ಯಾವ ಯೋಚನೆಯು ಮನದಲ್ಲಿ ಸುಳಿಯಲಾರದಂತೆ ಮಾಡಿರುವ ವ್ಯವಸ್ಥೆಯ ಕೈಯಾದರೂ ಯಾವುದು?

ಪ್ರತಿಭೆಗಳು ಅರಳಬೇಕಂತೆ. ಅರಳುವ ಸಮಯ ಮತ್ತು ಸ್ಥಳಗಳೆಂದರೇ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಯ ಅಂಗಳಗಳಂತೆ. ಆದರೇ ಈ ಅಂಗಳಗಳು ಇಂದು ಕೇವಲ ಕೆಲಸ ಮಾಡುವ ಕಾರ್ಮಿಕರನ್ನು ತಯಾರು ಮಾಡುವ ಕಾರ್ಖನೆಗಳಾಗುತ್ತಿವೆಯೆಲ್ಲ ಇದು ಸರಿಯೇ?

ಹೊಸದಾಗಿ ಯೋಚಿಸುವಂತಹ ಮನಸ್ಸುಗಳ ನಿರ್ಮಾಣ ಮಾಡುವ ತಾಣಗಳಗಾಬೇಕಿದ್ದ ಕಾಲೇಜು, ವಿಶ್ವವಿದ್ಯಾನಿಲಯಗಳು ಯಾಕೆ ಇಂದು ಮಂಕಾಗಿವೆ ಅನಿಸುತ್ತಿವೆ ಇಂದು?

ಓದಿದ ಮನಸ್ಸುಗಳಿಗೆ ಕೆಲಸ ಸಿಗುತ್ತಿಲ್ಲ, ಕೆಲಸಕ್ಕೆ ಹೋಗುತ್ತಿಲ್ಲ ಎಂದರೇ ಯಾಕೆ ಬೇಜಾರು ಆಗುವುದು? ಕೆಲಸವಲ್ಲದೇ ಬೇರೆ ಬೇರೆ ಮನ ಕುಣಿಯುವ ಚಟುವಟಿಕೆಯ ಕೇಂದ್ರಗಳ್ಯಾಕಾಗುತ್ತಿಲ್ಲ?

ಅದೇ ಅಕ್ಕ ಪಕ್ಕದವರು ಏನು ಅನ್ನುತ್ತಾರೋ.. ಅಲ್ಲಿಯ ಗೆಳೆಯನಿಗೆ ಎಲ್ಲೋ ಕೆಲಸ ಸಿಕ್ಕಿತು.. ಆ ಗೆಳತಿ ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ.. ನಾನು ಮಾತ್ರ ಇನ್ನೂ ಏನು ಮಾಡುತ್ತಿಲ್ಲಾ..ಓದಿದ್ದೇಲ್ಲಾ ವೇಸ್ಟ್.. ಹಾಗೆ ಹೀಗೆ ಎಂದು ಜಿಗುಪ್ಸೆಪಡುವುದು ಇಂದಿಗೂ ನಿಲ್ಲುತ್ತಿಲ್ಲ.

ಓದು ಹೊಸತನದ ಪ್ರತಿಭೆಗೆ ಮೊದಲ ಹೆಜ್ಜೆಯಾಗಬೇಕು. ನವ್ಯವಾಗಿ ಚಿಂತಿಸುವ ಮನಸ್ಸುಗಳಾಗಬೇಕು. ಈ ರೀತಿಯ ಮನೋಭಾವನೆಯನ್ನು ರೂಪಿಸುವ ಕ್ಲಾಸ್ ರೋಂ ಗಳಾಗಬೇಕಿರುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಸಿದ್ಧಾಂತವಾಗಬೇಕು.

ಸುಮಿತ್ರಾರನ್ನು ನೋಡಿದ ಮೇಲೆ ಹೀಗೆಲ್ಲಾ ಲಹರಿ ಬಂದು ಮಾತನಾಡಿದ್ದು ಕಣ್ರೀ.

ಅದು ಯಾಕೋ ಟಾಪರ್ ಸುಮಿತ್ರಾನನ್ನು ಇನ್ನು ಈ ನನ್ನ ಮನ ಮರೆಯಲಾರದೋ?

ಅವರನ್ನೇ ಕೇಳಿ ಹೇಳುತ್ತೇನೆ.

ಶುಕ್ರವಾರ, ಜೂನ್ 10, 2016

ಸರ್ಕಾರಿ ಶಾಲೆಗಳನ್ನು ಕೇಳುವವರು ಯಾರು

ಶಾಲೆಗಳು ದೂಳು ಕೊಡವಿಕೊಂಡು ಪ್ರಾರಂಭವಾಗಿವೆ.


ಕಾನ್ವೇಂಟ್ ಗಳಂತೂ ಒಂದು ತಿಂಗಳು ಮುಂಚೆಯೇ ಪ್ರಾರಂಭವಾಗಿವೆ. ಅಷ್ಟರ ಮಟ್ಟಿಗೆ ಕಾನ್ವೇಂಟ್ ಗಳು ಜನರ ಮನಸ್ಸನ್ನು ಸೆಳೆದಿವೆ.


ಸರ್ಕಾರಿ ಶಾಲೆಗಳನ್ನು ಕೇಳುವವರು ಯಾರು?


ಅವುಗಳು ಅದೇ ಹಳೆ ಸ್ಟೈಲ್ ನಲ್ಲಿ ಈ ತಿಂಗಳು ಶುರುವಾಗಿವೆ. ಆದರೇ ಶುರುವಾಗುವ ಸಮಯದಲ್ಲಿ ಕೆಟ್ಟ ಸುದ್ಧಿಯಂತೆ: ಸುಮಾರು ಮೂರು ಸಾವಿರ ಸರ್ಕಾರಿ ಕನ್ನಡ ಶಾಲೆಗಳ ಬಾಗಿಲನ್ನು ಶಾಶ್ವತವಾಗಿ ಮುಚ್ಚುವೆವು.. ಎಂಬ ಸುದ್ಧಿ, ಕನ್ನಡ ಮನಗಳನ್ನು ಕಲಿಕಿತು(?)


ಇದರ ಬಗ್ಗೆ ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಅಕ್ರೋಶವನ್ನು ಸೋಷಿಯಲ್ ಮೀಡಿಯಾದಲ್ಲಿ ಲೈಕ್ ಮತ್ತು ಶೇರ್ ಮಾಡುವ ಮೊಲಕ ಮಮ್ಮಲು ಮರುಗಿದರು.


ಕನ್ನಡದ ಬಗ್ಗೆ ಇಷ್ಟರ ಮಟ್ಟಿಗೆ ಹೋರಾಡುವ ಮನಸ್ಸುಗಳಾದರೂ ಇದ್ದಾವಲ್ಲ, ಕನ್ನಡಮ್ಮ ನೀ ಧನ್ಯ!!


ಪ್ರತಿ ವರುಷ ಹೀಗೆ ಕಂತು ಕಂತಿನಲ್ಲಿ ಸರ್ಕಾರಿ ಶಾಲೆಗಳು ಕಣ್ಣು ಮುಚ್ಚುತ್ತಿರುವುದು ಯಾವುದರ ಮುನ್ಸೂಚನೆಯೆಂಬುದು ಗೊತ್ತಾಗುತ್ತಿಲ್ಲ.


ಆದರೇ ಅಷ್ಟರ ಮಟ್ಟಿಗೆ ನಮ್ಮ ಕನ್ನಡಿಗರ ಮನಸ್ಸು ಕಾನ್ವೇಂಟ್ - ಇಂಗ್ಲೀಷ್ ಮಾಧ್ಯಮದ ಕಡೆ ಹರಿಯುತ್ತಿರುವ ದಿಕ್ಸೊಚಿ ಇದು, ಅಂದರೇ ತಪ್ಪಲ್ಲ.


ಪೇಸ್ ಬುಕ್ ಮತ್ತು ಸೋಷಿಯಲ್ ಮೀಡಿಯದಲ್ಲಿ ಲೈಕ್, ಶೇರ್ ಮಾಡಿದ ಮಂದಿಯೇ ತಮ್ಮ ಮಕ್ಕಳನ್ನು ಕಾನ್ವೇಂಟ್ ಗಳಿಗೆ ಇಂದಿಗೂ ಕಳಿಸುತ್ತಿದ್ದಾರೆ.



 Why? ಎಂದರೇ.. ಅದು ಬೇರೆ.. ನಾವು ಹೀಗೆ ಮರುಗುವುದು ಬೇರೆ.. ಎಂದು ಮೂಗು ಮುರಿಯುವವರು.


ಹೌದು ಸರ್ಕಾರಿ ಸ್ಕೋಲ್ ಮಾತ್ರ ಬೇಡ. ಸರ್ಕಾರಿ ಕೆಲಸ ಮಾತ್ರ ಇರಲಿ. ಎಂಬ ಮನೋಭಾವ ನಮ್ಮಲ್ಲಿ ಬೆಳೆಯುತ್ತಿರುವುದು ಯಾಕೋ ಸರಿ ಕಾಣುತ್ತಿಲ್ಲ.


ಹೆಚ್ಚು ಹೆಚ್ಚು ವಸೂಲಿ ಮಾಡುವ ಖಾಸಗಿ ಶಾಲೆಗಳೇ ನಮ್ಮ ಕಣ್ಣುಗಳಿಗೆ ನಕ್ಷತ್ರಗಳಂತೆ ಹೊಳೆಯುತ್ತಿವೆ.



ಈಗಂತೂ ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗಲಿ ಎಂಬ ಪ್ರಾರ್ಥನೆಯೇ...?


ಹೇಗಾದರೂ ಸರಿ, ಎಷ್ಟೇ ಕಷ್ಟವಾದರೂ ಸರಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಸೂಲ ಮಾಡಿಯಾದರೂ, ಡೊನೇಷನ್ ಕಟ್ಟಿ ಸಾವಿರ ಸಾವಿರ ಸುರಿದು ಮಕ್ಕಳ ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಾರೆ.


ಸರ್ಕಾರಿ ಶಾಲೆಗಳು ಉಪಯೋಗವಿಲ್ಲದ್ದವೂ ಎಂಬ ಕೀಳು ಮನೋಭಾವನೆ ಎಲ್ಲಿಂದ ಬಂತೋ ದೇವರೇ ಬಲ್ಲ! ಬಡವರಿಗೆ ಮಾತ್ರ.  ಕೈಲಿ ಏನೂ ಸಾಧ್ಯವಿಲ್ಲದವರಿಗೆ ಮಾತ್ರ ಈ ಶಾಲೆಗಳು.






ಅಯ್ಯೋ ಪಾಪ!




ಸರ್ಕಾರದವರೂ ಸಹ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಅದಕ್ಕೆ ಒಂದು ದೊಡ್ಡ ಇಲಾಖೆ, ಮಂತ್ರಿಗಳು ,



ದೊಡ್ಡ ಅಧಿಕಾರಿಗಳು, ಮಾಸ್ತರುಗಳು ಎಲ್ಲ ಇದ್ದಾರೆ. ಆದರೇ ಮಕ್ಕಳು ಮಾತ್ರ ಕಡಿಮೆ.


ಅದಕ್ಕೆ ಪ್ರತಿ ವರುಷ ಸಾವಿರ ಸಾವಿರ ಶಾಲೆಗಳು ಶಾಶ್ವತ ಬೀಗ ಜಡಿಸಿಕೊಳ್ಳುತ್ತಿವೆ.


ನಮ್ಮ ಜನಗಳ ಕ್ರೇಜ್ ಇಷ್ಟರ ಮಟ್ಟಿಗೆ ಕಾನ್ವೇಂಟ್ ಮಯವಾಗಿದೆ. ಚಿಕ್ಕ ಚಿಕ್ಕ ಮಕ್ಕಳ ಬಾಯಲ್ಲಿ ಅಸ್ಪಷ್ಟ ಇಂಗ್ಲೀಷ್ ಕೇಳಿದರೇ ಅದು ಏನೋ ಸಂಭ್ರಮ. ತೂದಲು ಮಾತಿನ ಇಂಗ್ಲೀಷ್ ಆ ಮಗುವಿನ ಮುಂದಿನ ಭವಿಷ್ಯ ರೂಪಿಸುವುದು ಎಂಬ ಭ್ರಮೆಯಲ್ಲಿ ಪ್ರತಿಯೊಬ್ಬ ಪೋಷಕರು ಬಂದಿಯಾಗಿರುವವರು.



ಹೆಚ್ಚು ಹಣ ಪಡೆಯುವುದು ಇದಕ್ಕೆ. ಅವರು ಅಷ್ಟು ದುಡ್ಡು ವಸೂಲಿ ಮಾಡುತ್ತಾರೆ ಎಂದರೇ ಅಷ್ಟು ಚೆನ್ನಾಗಿ ಕಲಿಸಿಯೇ ಕಲಿಸುತ್ತಾರೆ ಎನ್ನುತ್ತಾರೆ. ಈ ಸರ್ಕಾರಿ ಶಾಲೆಗಳಲ್ಲಿ ಏನೂ ಕಲಿಸುತ್ತಾರೆ ಗುರು? ಅಲ್ಲಿ ನೆಟ್ಟಗೆ ಒಬ್ಬ ಮೇಷ್ಟ್ರೇ ಇಲ್ಲ ಎನ್ನುತ್ತಾರೆ.




ನಮ್ಮ ದೇಶದ ಸರ್ಕಾರಿ ಶಾಲೆಗಳನ್ನು ಮುಂದೆ ಇತಿಹಾಸದಲ್ಲಿ ಓದುವ ಕಾಲ ಬಂದರೇ ಸೋಜಿಗವಲ್ಲ.


ಈ ತಿಂಗಳಂತೂ ಮಕ್ಕಳಿಗೆ ಮತ್ತು ಹೆತ್ತವರಿಗೆ ಬ್ಯುಸಿ ತಿಂಗಳು. ಮಕ್ಕಳನ್ನು ಹೊಸ ಹೊಸ ಶಾಲೆಗಳಿಗೆ ಸೇರಿಸಲು ಎಷ್ಟೊಂದು ಕಷ್ಟಪಟ್ಟಿರುತ್ತಾರೆ. ಖಾಸಗಿ ಶಾಲೆಗಳಲ್ಲಿ ಸೀಟು ಸಿಗುವುದು ಅಷ್ಟು ಸುಲಭದ ಮಾತಲ್ಲ. ಅದರ ಪುರಾಣವೇ ಬೇರೆ. ಅದಕ್ಕಾಗಿ ವರುಷದಿಂದ ಕಾಯುತ್ತಿರುತ್ತಾರೆ.


ಅಂತೂ ಈ ತಿಂಗಳಿಂದ ಮಗು ಸ್ಕೊಲಿಗೆ ಹೋಯ್ತು ಎಂದು ನಿಟ್ಟುಸಿರುಬಿಟ್ಟಿರುತ್ತಾರೆ.


ಈ ಬದಲಾದ ಕಾಲ ಮತ್ತು ಜನಗಳ ಮನೋಭಾವ ಮಕ್ಕಳನ್ನು ಮಕ್ಕಳಾಗಿ ನೋಡಲಾರದಂತಾಗಿದೆ. ಚಿಕ್ಕ ಮಕ್ಕಳೇ ಸಿರಿಯ್ಸ್ ಆದ ದೊಡ್ಡವರಂತೆ ವರ್ತಿಸುತ್ತಿದ್ದಾರೆ. ಹೆತ್ತವರ ದುಡಿಮೆ ಮತ್ತು ಹಂಬಲ ತಮ್ಮ ಮುದ್ದು ಮಕ್ಕಳ ಮುಖದ ಮೇಲೆ ಕಾಣುತ್ತಿದೆಂಬಂತೆ ಭಾಸವಾಗುತ್ತಿದೆ.


ವಯಸ್ಸಿಗೆ ಮೀರಿದ ಮಾತು, ವಯಸ್ಸಿಗೆ ಮೀರಿದ ನಡಾವಳಿಕೆ ಮತ್ತು ಗಂಭೀರತೆ ಇಂದಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.


ನೀವು ನೋಡಿರಬಹುದು.. ಇಂದಿನ ನಮ್ಮ ಮನೆಯ ಟಿ.ವಿಯಲ್ಲಿ ಬರುವ ರೀಯಾಲಿಟಿ ಶೋ ನಲ್ಲಿ ಬಾಗಿಯಾಗುವ ಪುಟ್ಟ ಪುಟ್ಟ ಕಂದಮ್ಮಗಳ ಬಾಯಲ್ಲಿ ದೊಡ್ಡವರು ಮಾತನಾಡುವ ಮಾತುಗಳು.ಮಕ್ಕಳ ನಡೆ ನುಡಿಗಳು ಕಂಡು ದೊಡ್ಡವರೇ ನಾಚುವಂತಾಗಿದೆ.


ಪ್ರತಿಯೊಂದರಲ್ಲೂ ಸ್ವರ್ದೆ. ಮಕ್ಕಳು ಮಕ್ಕಳಾಗಿ ದೊಡ್ಡವರು ಬಿಟ್ಟೇ ಇಲ್ಲವೆಂದು ಅನಿಸುತ್ತದೆ.


ಆ ತುಂಟತನ, ಆಟ- ಪಾಠ ಎಲ್ಲಾ ಮಾಯವಾಗಿಬಿಟ್ಟಿದೆ! ಬಾಲ್ಯವೇ ಎಲ್ಲೋ ಕಳೆದು ಹೋಗುತ್ತಿದೆ


ಪ್ರತಿಯೊಂದರಲ್ಲೂ ’ದಿ ಬೇಸ್ಟ" ನೀ ಆಗಬೇಕು ಎಂಬ ಈ ಸುಸ್ತು ಮಕ್ಕಳ ಮನಸ್ಸಿನಲ್ಲಿ ಕಾಣುತ್ತಿದೇವೆಂದು ಅನಿಸುತ್ತದೆ.


ನನಗಂತೂ ಅಯ್ಯೋ ಪುಟ್ಟ ಪಾಪುವೇ ಎಂದೆನಿಸುತ್ತದೆ.


ಅಂಕ, ಸ್ಥಾನ, ಹುದ್ದೆ ಎಂಬ ಶಬ್ಧಗಳೇ ಅವುಗಳ ಗುರಿ ಮಾಡಿಬಿಟ್ಟಿದ್ದೇವೆನೋ.


ನೆನಸಿಕೊಂಡರೇ ಮೈ ಜುಂ ಅನಿಸುತ್ತದೆ.


ಈ ರೀತಿಯ ಭಾರಿ ಭರವಸೆಗಳ, ಕನಸುಗಳ, ಭವಿಷ್ಯದ ಬಾರವಾದ ಚೀಲಗಳನ್ನು ಹೊತ್ತುಕೊಂಡು ಮಕ್ಕಳು ತನ್ನ ಮೊದಲ ಹೆಜ್ಜೆಗಳನ್ನು ಶಾಲೆಗಳ ಕಡೆಗೆ ಈ ತಿಂಗಳು ಹಾಕಿಬಿಟ್ಟಿವೆ.


ಮುಂದಿನ ಒಂದು ವರುಷ ಓದುವುದೊಂದೆ ಅವುಗಳ ಕೆಲಸ. ಓದು ಓದು ಮತ್ತು ಓದು. ಹೆತ್ತವರಿಗೂ ಒತ್ತಡ ಮಕ್ಕಳಿಗೂ  ಒತ್ತಡ.


ಇಂದಿನ ಪೋಷಕರು ತಮ್ಮ ಮಕ್ಕಳ ಓದುವುದರ ಬಗ್ಗೆ ತಲೆ ಕೆಡಿಸಿಕೊಂಡಷ್ಟು ಮತ್ಯಾವುದರ ಬಗ್ಗೆಯು ಯೋಚಿಸಿರುವುದಿಲ್ಲ.


ಎಲ್ಲಾ ದುಭಾರಿ. ಒಂದು ಮಗು ಜನಿಸಿದರೇ ಸಾಕು ಹೆತ್ತವರ ಯೋಚನೆ ದುಪ್ಪಟ್ಟಾಗುತ್ತದೆ.


ಮಕ್ಕಳಾದ  ಮೇಲೆ ತಂದೆ ತಾಯಿಗಳ ಜೀವನ ಅಷ್ಟೇ. ಮಕ್ಕಳನ್ನು ಒಂದು ದಡ ಸೇರಿಸುವುದರಲ್ಲಿಯೇ ತಮ್ಮ ಪೂರ್ತಿ ಅಯುಷ್ಯವನ್ನು ಕಳೆದುಬಿಡುತ್ತಾರೆ.


ನಮ್ಮ ಹಿಂದಿನವರು ಹೀಗೆಲ್ಲಾ ಎಂದು ಚಿಂತಿಸಿರಲಾರರು. ಆದರೇ ಇದರ ಜರೂರತೂ ಇಂದು ಹೆಚ್ಚು. ಏನೂ ಮಾಡುವ ಆಗಿಲ್ಲ! ಕಾಲಕ್ಕೆ ತಕ್ಕಂತೆ ಬದುಕಬೇಕು. ಈಗ ಸುಮ್ಮನೇ ಓದಿದರೇ ಯಾರು ಮೂಸಿಯು ನೋಡುವುದಿಲ್ಲ. ಎಲ್ಲಾದರಲ್ಲೂ ಚ್ಯೂಟಿ ಇರುವವರೇ ಬೇಕು. ಅದಕ್ಕಾಗಿಯೇ ಪ್ರತಿಯೊಬ್ಬರೂ ಶಿಕ್ಷಣವನ್ನು ತಪಸ್ಸಿನಂತೆ ಜಪಿಸುತ್ತಾರೆ.


ಇದಕ್ಕಾಗಿ ನಮ್ಮ ಎಲ್ಲಾ ಖಾಸಗಿ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಕಟಿ ಬದ್ಧವಾಗಿವೆ!


ಓದು ಒಂದು ವ್ಯಾಪಾರವನ್ನಾಗಿ ಮಾಡಿತ್ತಿದ್ದೇವೆನೋ ಅನಿಸುತ್ತಿದೆ. ಅದು ಆಗಬಾರದು. ಎಂದೆಂದಿಗೂ. ಎಂಬುದೇ ನನ್ನ ಆಶಯ!