ಭಾನುವಾರ, ಫೆಬ್ರವರಿ 28, 2016

ಕೇವಲ ವಿರೋದಿಸುವುದಕ್ಕಾಗಿ..?

ದೇಶದ ವಿಷಯ ಬ್ಯಾಡಮ್ಮ ಶಿಶ್ಯ! ಅನ್ನುವಂತಾಗಿದೆ.

ಇಂದು ಎರಡು ದೊಡ್ಡ ಗುಂಪುಗಳು ದೇಶದಲ್ಲಿ ಹುಟ್ಟಿಕೊಂಡಿವೆ.
೧.ಮೋದಿ ಸರ್ಕಾರ.
೨. ಮೋದಿಯನ್ನು ಕಂಡರೇ ಮೈ ಪರಚಿಕೊಳ್ಳುವವರೆಲ್ಲಾ ಯಾವುದೇ ಪಕ್ಷ ಬೇದ ಮರೆತು ವಿರೋಧಿಗಳ ಬಣ ಮಾಡಿಕೊಂಡಿದ್ದಾರೆ.

ದೇಶದ ಯಾವುದೇ ಮೊಲೆಯಲ್ಲಿ ಸಣ್ಣದೂಂದು ಘಟನೆ ಜರುಗಿದರೂ ಅದಕ್ಕೆ ಮೋದಿ ಕಾರಣ ಎನ್ನುವಂತಾಗಿದೆ. ಇದಕ್ಕೆ ಮೋದಿಯ ಜನಪ್ರೀಯತೆ ಕಾರಣವೋ? ಅಥವಾ ಮೋದಿ ಹಾಗೆಲ್ಲಾ ಕೊಚ್ಚಿಕೊಂಡು ಅಧಿಕಾರಕ್ಕೆ ಬಂದಿದ್ದಾರಲ್ಲಾ ಅದಕ್ಕೆ ಇದರ ಹೊಣೆ ನೀ ಹೊರು ಎನ್ನುವಂತಾಗಿದೆ.

ಮೋದಿಯ ಇತಿಹಾಸ ಎಲ್ಲರೂ ಬಲ್ಲರು. ಅವರು ಸತತ ಮೂರು ವರುಷ ಗುಜರಾತ್ ನಲ್ಲಿ ಆಡಳಿತ ನಡೆಸಿರುವವರು. ಗುಜರಾತ್ ಅಭಿವೃದ್ಧಿಗಿಂತ, ಗುಜರಾತ್ ನಲ್ಲಿ ಜರುಗಿದ ಗೋದ್ರ ರೂವಾರಿ ಮೋದಿ, ವಿರೋಧಿಗಳಿಂದ ಪ್ರಸಿದ್ಧರಾಗಿರುವುದೇ, ಮೋದಿಯ ಬಗ್ಗೆ ಪ್ರತಿಯೊಬ್ಬರೂ ನೇಗೆಟಿವ್ ಆಗಿ ಚಿಂತಿಸುವಂತಾಗಿರುವುದು.

ಕೋರ್ಟ ನಲ್ಲಿ ಗೋದ್ರ ಘಟನೆಯಲ್ಲಿ ಮೋದಿಯ ಕೈ ಏನೂ ಇಲ್ಲ ಎಂದು ಕ್ಲೀನ್ ಚೀಟ್ ಪಡೆದಿದ್ದರೂ ವಿರೋಧಿಗಳು ಇನ್ನೂ ಅದನ್ನು ನೆಪಮಾಡಿ ಯಾವುದೇ ವಿಚಿತ್ರ ಘಟನೆ ನಡೆದರೂ ಮೋದಿಯಿಂದ ಇಷ್ಟು ಅದ್ವಾನವಾಗುತ್ತಿದೆ ಎನ್ನುತ್ತಿದ್ದಾರೆ.

ಇಂದು ದೇಶದಲ್ಲಿ ಮೇಲೆ ಹೇಳಿದ ಎರಡೇ ಎರಡು ಬಣಗಳಿವೆ. ಒಂದು ಮೋದಿ ಲೈಕ್ ಮಾಡುವವರು. ಇನ್ನೊಂದು ಮೋದಿ ವಿರೋಧಿಸುವವರದು.

ಪ್ರತಿಯೊಂದು ರಾಜಕೀಯ, ಸಂಘಟನೆ, ಸಾಹಿತಿಗಳು, ನಾಯಕರು, ವಿದ್ಯಾರ್ಥಿಗಳು ಹೀಗೆ ಪ್ರತಿಯೊಬ್ಬರೂ ಈ ಎರಡು ಬಣಗಳಲ್ಲಿ ಯಾವುದೇ ಬೇದವಿಲ್ಲದೇ ತಮ್ಮನ್ನು ಗುರುತಿಸಿಕೊಳ್ಳುವ ಮಟ್ಟಿಗೆ ಈ ಎರಡು ವರುಷದಲ್ಲಿ ಅಸಹಿಷ್ಣುತೆಯ ಗುಲ್ಲು ಗುಲ್ಲೇ ಎದ್ದಿದೆ.

ಪಾಪ ಏನೂ ಬಾಯಿಬಿಟ್ಟರು ಕಷ್ಟ ಎನ್ನುವಂತಾಗಿದೆ.

ಒಂದು ಹಳ್ಳಿಯ ಯಾವುದೋ ಒಂದು ಮೊಲೆಯಲ್ಲಿ ಏನಾದರೂ ಅಹಿತಕರ ಘಟನೆ ನೆಡೆದರೆ ಮೋದಿಯ ಎಪೇಕ್ಟ್ ಅನ್ನುವಂತಾಗಿದೆ. ಬಿ.ಜೆ.ಪಿ ತನ್ನ ಹಿಡನ್ ಅಜೆಂಡವನ್ನು ಭಾರತದ ಪ್ರತಿಯೊಬ್ಬರ ಮೇಲೂ ಹೇರುತ್ತಿದೆ. ಈ ದೇಶದಲ್ಲಿ ಯಾವುದೂ ಸರಿಯಿಲ್ಲ! ನಮಗೆ ಹಿಂದೆ ಇದ್ದ ಸಾಮಾಜಿಕ ಕಾಳಜಿ, ಸಮಾಜ ವಾದ, ಬಡವರ ಪರವಾದ, ಬಿ.ಜೆ.ಪಿ ವಿರೋಧಿ ಸರ್ಕಾರಗಳೇ ಕ್ಷೇಮವೆನ್ನುತ್ತಿದ್ದಾರೆ.

ದೇಶದ ಒಳ್ಳೆಯದು , ಅಭಿವೃದ್ಧಿ ಈ ವಿಷಯಗಳ ಚರ್ಚೆಗಿಂತ ಹೇಗಾದರೂ ಮಾಡಿ ಮುಂದಿನ ಸಂಸತ್ತು ಚುನಾವಣೆಯ ಹೊತ್ತಿಗೆ ಮೋದಿ ನೇಮ್ ಪೂರ ಬರಬಾದ್ ಮಾಡಲೇಬೇಕು ಎನ್ನುವಂತೆ ಮೋದಿ ವಿರೋಧಿ ಸೇನೆಯೇ ನಿಂತಿದೆ.

ಮೋದಿ ರೂಪಿಸಿರುವ ಎಲ್ಲಾ ಯೋಜನೆಗಳನ್ನು ಅನುಮಾನದ ಹುತ್ತದಲ್ಲಿ ಜನಗಳು ಕಾಣುವಂತೆ ಮೀಡಿಯಾಗಳು ಬಿತರಿಸುತ್ತಿವೆ. ಮೋದಿ ಕೊಟ್ಟ ಆಶ್ವಾಸನೆಗಳು ಈಗ ಎಲ್ಲಿ ಕೆಲಸ ಮಾಡುತ್ತಿವೆ ಎಂದು ಕೇಳುತ್ತಿದ್ದಾರೆ.

ಮೋದಿ ಪುಲ್ ಮೇಜಾರಟಿಯಲ್ಲಿ ಗೆದ್ದರೆ ಸಾಕೇ..? ಎಲ್ಲಾ ಸುಳ್ಳು ಪೊಳ್ಳು ಭರವಸೆಗಳಿಂದ ಅಧಿಕಾರ ಹಿಡಿದರೇ ಸಾಕೇ..?  ಭಾರತವನ್ನು ಸ್ವರ್ಗ ಮಾಡುತ್ತಿನಿ ಎಂದೆ. ಎಲ್ಲಿ ಸ್ವಚ್ಛ ಭಾರತ? ಯಾವ ಡಿಜಿಟಲ್? ಅದು ಏನೂ ಬಡವರ ಹೊಟ್ಟೆ ತುಂಬಿಸುತ್ತಾ?

ಭಾ ಮೋದಿ ನಮ್ಮೊರಿಗೆ ನೀ ಬಂದು ಪೊರಕೆ ಹಿಡಿದು ಗುಡಿಸು ಎನ್ನುತ್ತಿದ್ದಾರೆ.

ನೀ ರೂಪಿಸಿದ ಯೋಜನೆಗೆ ನೀನೆ ಹೊಣೆ ಅನ್ನುತ್ತಿದ್ದಾರೆ.

ಒಬ್ಬ ಮೋದಿ ಎಲ್ಲ ಕಡೆ ಅದು ಹೇಗೆ ಕೈ ಹಾಕುವುದು ನೀವೆ ಹೇಳಿ?

ಇಷ್ಟರ ಮಟ್ಟಿಗೆ ಜನ ಮೋದಿಯನ್ನು ದ್ವೇಷಿಸುವುದು0ಟ ಎಂದೆನಿಸುತ್ತಿದೆ.

ಮೋದಿ ಏನಾದರೂ ದೇಶದ ಶತ್ರುವನ್ನು ವಿರೋಧಿಸಿದರೇ.. ಇವರುಗಳು ಅವನನ್ನೇ ಜೈ ಅಂದು ಬಿಡುತ್ತಾರೆ. ಹಿಂದೆ ಮುಂದೆ ನೋಡದೆ.

ಯಾರೊಬ್ಬರೂ ಅವರ ನಿಜವಾದ ಕನಸು ಹೋರಾಟವನ್ನು ಮನನ ಮಾಡಿಕೊಳ್ಳುತ್ತಿಲ್ಲ. ಕೇವಲ ಮೀಡಿಯಾದಲ್ಲಿ ಬರುತ್ತಿರುವುದೇ ನಿಜವೆಂದುಕೊಂಡಿದ್ದಾರೆ. ಪ್ರತಿಯೊಂದಕ್ಕೂ ವಿರೋಧ ವಿರೋಧ. ಮೋದಿಗೂ ತಾನು ಯಾಕಾದರೂ ಪ್ರದಾನಿಯಾದೇನೂ ಎಂದು ಅನಿಸಿರಬೇಕು.

ಆದರೇ ಮೋದಿಯ ಮಾತಿಗೆ ವಿಶ್ವವೇ ಕಿವಿಯಾಗಲು ಕಾತುರವಾಗಿದೆ.

ಭಾರತದಲ್ಲಿ ಮಾತ್ರ ಸಾಕಷ್ಟು ವಿರೋಧಿಗಳಿಗೆ ಮೋದಿಯ ಹೆಸರೇ ದುಃಸ್ವಪ್ನವಾಗಿದೆ.

ಯಾವುದೇ ವೀಕ್ ನೆಸ್ ಇಲ್ಲದ ಮನುಷ್ಯರನ್ನು ಸೋಲಿಸುವುದು ಸುಲಭವಲ್ಲ! ಅದಕ್ಕೆ ಈ ರೀತಿಯ ಜಾತಿ, ಧರ್ಮ, ಶಿಕ್ಷಣ ರಂಗಗಳನ್ನು ಬಳಸಿಕೊಂಡು ಸರಕಾರವನ್ನು ರಾಜಕೀಯವಾಗಿ ಬಡಿಯಲು ಸನ್ನದ್ಧರಾಗಿದ್ದಾರೆ.

ಐದು ವರುಷ ಕಾದು ನೋಡುವ ತಾಳ್ಮೆಯನ್ನು ಭಾರತ ಕಳೆದುಕೊಂಡುಬಿಟ್ಟಿದೆ ಅನಿಸುತ್ತದೆ. ಅದು ಸರಿ! ಸುಮಾರು ಅರುವತ್ತು ವರ್ಷ ಒಳ್ಳೆಯ ದಿನಗಳಿಗೆ ಕಾದು ಕಾದು ಸುಸ್ತಾದ ಮಂದಿ ಮೋದಿಯನ್ನು ಈ ರೀತಿಯ ಭರ್ಜರಿ ಜಯದಲ್ಲಿ ಆರಿಸಿರುವುದು ಯಾಕೆ..? ಅದಕ್ಕೆ ಅವರು ಮೋದಿಯಿಂದ ಮ್ಯಾಜಿಕ್ ಕನಸು ಕಾಣುತ್ತಿದ್ದಾರೆ.

ಅದು ಅಷ್ಟು ಸುಲಭವಲ್ಲ!

ಬೀಜ ಬಿತ್ತಬೇಕು, ನೀರು ಎರೆಯಬೇಕು, ಬಳ್ಳಿ ಜೋಪಾನ ಮಾಡಬೇಕು. ಆ ಬಳಿಕ ನಿಜವಾದ ಫಲ ದೊರೆಯುವುದು.

ಆದರೇ ಈ ವಿರೋಧಿ ಪಾಳ್ಯ ದೇಶ ದ್ರೋಹಿಗಳು ಈ ಮೋದಿ ಕಡೆಯವರು ಎನ್ನುವ ಮಟ್ಟಿಗೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಸಾಮಾಜಿಕ ನ್ಯಾಯವೆಲ್ಲ ಸತ್ತು ಹೋಗಿದೆ. ಕೇವಲ ಹಣವುಳ್ಳವರು ಮಾತ್ರ ಭಾರತದಲ್ಲಿ ಬದುಕಬಹುದೆಂದು ಮಾತನಾಡುತ್ತಿದ್ದಾರೆ.

ಅದಕ್ಕಾಗಿಯೇ ಕೆಲವು ಮಂದಿ ಸಜ್ಜಾಗಿ ತಮ್ಮ ಬಾಯಿಗಳನ್ನು ತೆರೆದುಕೊಂಡು ನಿಂತಿದ್ದಾರೆ. ಇದರ ಬಗ್ಗೆ ಏನಾದರೂ ಎಲ್ಲಾದರೂ ಹೇಳದಿದ್ದರೇ ನಾವೇನೋ ಕಳೆದುಕೊಳ್ಳುತ್ತಿದ್ದೇವೆನೋ ಅನ್ನುವ ಮಟ್ಟಿಗೆ ಜನರ ಭಾವನೆಗಳನ್ನು ಕೆರಳಿಸುವವ ಮಟ್ಟಿಗೆ ಇವರುಗಳು ಮುಂದುವರಿಯುತ್ತಿದ್ದಾರೆ.

ಮೋದಿ ಮುಂದುವರಿದ ಜನರ ನಾಯಕ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಅಲ್ಲಾ ಹಾಗೆಲ್ಲಾ ಒಂದೇ ಪಂಗಡದ ಜನ ಓಟು ಓತ್ತಿದ್ದರೆ ಮೋದಿ ಅಷ್ಟೊಂದು ಸೀಟು ಗೆದ್ದು ಅಧಿಕಾರ ಹಿಡಿಯುತ್ತಿದ್ದರಾ ಎಂದು ಚಿಕ್ಕದಾಗಿಯೂ ಯೋಚಿಸುತ್ತಿಲ್ಲ!

ಬಿ.ಜೆ.ಪಿ ಹೊರೆತೂ ಯಾವುದೇ ಪಕ್ಷ ಅಧಿಕಾರ ನಡೆಸಿದರೂ ಪರವಾಗಿಲ್ಲ! ಅದು ಕೇಸರಿ! ಅದು ಎಷ್ಟೇ ಪರಮ ಭ್ರಷ್ಟ ಪಕ್ಷವಾದರೂ/ಸರ್ಕಾರವದರೂ ಪರವಾಗಿಲ್ಲ, ಅನ್ನುವಷ್ಟು ಬಾಲಿಶ ಮನಸ್ಸು ಹಿರಿ, ಕಿರಿ ಬುದ್ಧಿ ಜೀವಿಗಳಿಗ್ಯಾಕೆ?

ನಿತ್ಯ ಒಂದಲ್ಲಾ ಒಂದು ಹೊಸ ಹೊಸ ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿ ಮಾಡುತ್ತಿದ್ದಾರೆ. ಅವುಗಳನ್ನೇಲ್ಲಾ ಪ್ರಸ್ತುತ ಕೇಂದ್ರ ಸರ್ಕಾರದ ಕೊರಳಿಗೆ ಕಟ್ಟುತ್ತಿದ್ದಾರೆ.

ಆಗುತ್ತಿರುವ ಒಳ್ಳೆಯ ಕೆಲಸಗಳನ್ನೆಲ್ಲಾ ನಗಣ್ಯ ಮಾಡಿ, ಕೆಟ್ಟ ಘಟನೆಗಳನ್ನೇ ಎಂಜಾಯ್ ಮಾಡುತ್ತಾ ದೇಶವನ್ನು ಅಭದ್ರತೆಯ ಸಂಚಿಗೆ ಸಿಲುಕಿಸುತ್ತಿರುವ ಈ ವಿರೋಧಿ ನಾಯಕರುಗಳು ನಿಜವಾದ ದೇಶದ ಬಗ್ಗೆ ಹೇಗೆ ಇವರು ಚಿಂತಿಸುವವರು? ಎಂದು ನಾವೆಲ್ಲಾ ಯೋಚಿಸಬೇಕು.

ಈ ವಿರೋದಿಸುವ ಭರದಲ್ಲಿ ದೇಶಕ್ಕೆ ಕಂಟಕವಾಗಿದ್ದ ಭಯೋತ್ವಾದಕರನ್ನು, ಶತ್ರು ದೇಶವಾಗಿರುವ ಪಾಕಿಸ್ತಾನವನ್ನು ಕೊಂಡಾಡುವ ಮಟ್ಟಿಗೆ ನಮ್ಮ ಜನಗಳು ಮುಂದುವರಿದಿರುವುದು ಯಾವುದರ ಸೂಚನೆ? ಇದಂತೂ ತುಂಬ ಅಘಾತಕಾರಿ ವಿಷಯವಾಗಿದೆ.

ಯಾರನ್ನೋ ಒಲೈಸುವ ಸಲುವಾಗಿ ಎಂಥವರನ್ನಾದರೂ ನಾವು ತಿಪ್ಪೇ ಸಾರಿಸಿ ಒಳ್ಳೆಯವರನ್ನಾಗಿ ಮಾಡುವವರಾಗಿದ್ದೇವೆ.

ಯಾವುದನ್ನು ಖಂಡಿಸಬೇಕು, ಯಾವುದನ್ನು ಮೆಚ್ಚಬೇಕು ಎಂಬ ಸೂಕ್ಷ್ಮ ಮನಸ್ಸನ್ನೇ ಕಳೆದುಕೊಂಡಿದ್ದೇವೆ.

ಇದು ಹೀಗಾಗಬಾರದು. ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು. ಇಂದು ದೇಶಕ್ಕೆ ರಕ್ಷಣೆಯಾಗಿ ನಿಂತು ಗಡಿ ಕಾಯುತ್ತಿರುವ ನಮ್ಮೆಲ್ಲರ ಪ್ರೀತಿಯ ಸೈನಿಕರ ಜೀವ ತ್ಯಾಗಕ್ಕೆ ನಾವೆಲ್ಲಾ ಅವಮಾನ ಮಾಡಿದಂತೆ ಸರಿ.

ಅಷ್ಟೇಲ್ಲಾ ಹೋರಾಡಿ ಅವರುಗಳು ದೇಶ ಕಾಯುತ್ತಿರುವುದರಿಂದಲೇ ನಾವುಗಳು ಇಂದು ಹೀಗೆ ಆರಾಮಾಗಿ ಬಾಳುತ್ತಿರುವುದು. ನಾವು ಆರಾಮಾಗಿ ಪುರುಸೊತ್ತಾಗಿದ್ದೇವೆ ಎಂದು ಏನೆಲ್ಲಾ ಅನಾಹುತಗಳನ್ನು ಮಾಡಿದರೇ ಯಾರೊಬ್ಬರೂ ಸಹಿಸುವುದಿಲ್ಲ.

ದೇಶಕ್ಕೆ ದಕ್ಕೆ ಬರುವಂತೆ - ದೇಶವಾಸಿಗಳ ಭಾವನೆಗಳನ್ನು ಕಡೆಗಣಿಸುವಂತ ವಿಚಾರ ವಿಷಯಗಳು, ಹೇಳಿಕೆಗಳನ್ನು ನೀಡುವವರಿಗೆ ಕಠಿಣ ಶಿಕ್ಷೆಯಾದರೇ ಮಾತ್ರ ಈ ರೀತಿಯ ದೊಂಬಿಗಳು ನಿಯಂತ್ರಣಕ್ಕೆ ಬರುವುದು ಸಾಧ್ಯ.

ವಿರೋಧಿಸುವುದಕ್ಕಾಗಿ ಎಲ್ಲಾದನ್ನೂ ವಿರೋಧಿಸಲು ಹೋಗಬಾರದು!

ಅಲ್ಲವಾ?



ಶುಕ್ರವಾರ, ಫೆಬ್ರವರಿ 19, 2016

ಮೊಬೈಲ್ ಮಹಿಮೆಗೆ ಶರಣು..!

ಮನುಷ್ಯ ತನ್ನ ಸಂಶೋಧನೆಯಿಂದ ಹೊಸ ಹೊಸ ವಸ್ತು ,ವಿಶೇಷಗಳನ್ನು ತನ್ನ ಜೀವನಕ್ಕೆ ಅಳವಡಿಸಿಕೊಳ್ಳುತ್ತಾನೆ. ಹೊಸ ಪೂರಕ ವಸ್ತುಗಳು ಅವನ ಜೀವನ ಮಟ್ಟವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಯಿಸಿವೆ.

ಹೊಸ ಟೆಕ್ನಲಾಜಿಯಿಂದ ಇಂದಿನ ನಮ್ಮ ಜೀವನ ಎಲ್ಲಿಂದ ಎಲ್ಲಿಗೋ ಬಂದು ನಿಂತಿದೆ.

ಪ್ರತಿಯೊಂದು ಒಂದು ಬಟನ್ ಒತ್ತುವ ಮೊಲಕ ತುಂಬ ಈಜೀ ಮತ್ತು ಆನಂದಮಯವಾಗಿದೆ.

ನಮ್ಮ ಬದುಕನ್ನು ಆದಷ್ಟು ಯಂತ್ರ ಮತ್ತು ಈ ತಾಂತ್ರಿಕರಣ ನುಂಗಿ ಬಿಟ್ಟಿದೆ ಅಂದರೇ ಅತಿಶಯೋಕ್ತಿಯಲ್ಲ.

ಮುಂಜಾನೆ ಎದ್ದೇಳುವುದರಿಂದ ಪ್ರಾರಂಭವಾದ ನಮ್ಮ ಈ ಡಿಜಿಟಲ್ ಬದುಕು, ಪುನಃ ಹಾಸಿಗೆಗೆ ಉಸ್ಸಪ್ಪಾ ಎಂದು ಮೈ ಚೆಲ್ಲುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಯಂತ್ರದ ಜೋತೆಯ ಜೀವನ ಪಯಣವಾಗಿದೆ.

ಇದಕ್ಕೆ ಉದಾಹರಣೆಯೆಂದರೇ ಸ್ಮಾರ್ಟ್ ಮೊಬೈಲ್!

ಇದು ಮನುಷ್ಯನ ಒಂದು ವಿಶಿಷ್ಟವಾದ ಅಂಗವೇ ಸರಿ. ಅದು ನಮ್ಮ ದೇಹದಲ್ಲಿ ಇಲ್ಲ ಎನ್ನುವುದು ಬಿಟ್ಟರೇ! ಅದು ನಮ್ಮ ಬಹು ಮುಖ್ಯ ಅವಿಭಾಜ್ಯ ಅಂಗವಾಗಿದೆ.

ಅದು ಇಲ್ಲದ ಒಂದು ಕ್ಷಣ ಕಲ್ಪನೆಗೂ ನಿಲುಕದಾಗಿದೆ.

ಅದು ಇಲ್ಲದಿದ್ದರೇ ನಮ್ಮ ವರ್ತನೆಯೇ ವಿಚಿತ್ರವಾಗಿರುತ್ತದೆ. ಹಳಿ ತಪ್ಪಿದ ರೈಲ್ ಆಗಿಬಿಡುತ್ತದೆ. ಅಷ್ಟರ ಮಟ್ಟಿಗೆ ಅದು ನಮ್ಮ ಅಂಗೈಯಲ್ಲಿನ ಅರಗಿಳಿಯಾಗಿದೆ. ಅದು ಯಾವಾಗಲೂ ಕೈ ಯಲ್ಲಿರಬೇಕು. ಅದರ ಸುಕೋಮಲವಾದ ಮೈನ್ನು ಟಚ್ ಮಾಡದಿದ್ದರೆ ನಮ್ಮ ಬೆರಳುಗಳು ಏನನ್ನೋ ಕಳೆದುಕೊಂಡಂತಾಗಿ ಕೈಯೇ ಓಡದಂತಾಗಿಬಿಡುತ್ತದೆ.

ಈ ಚಿಕ್ಕ ವಸ್ತು ಇಂದಿನ ಶತಮಾನದ ಒಂದು ಮಹತ್ವವಾದ ಸಂಶೋಧನೆಯೇ ಸರಿ.

ಕೇವಲ ಮಾತನ್ನಾಡಲು ಮಾತ್ರ ಬಳಕೆಯಾಗುತ್ತಿದ್ದ ಈ ವಸ್ತು ಇಂದು ಜೀವನದ ಪ್ರತಿ ರಂಗವನ್ನು ಆಕ್ರಮಿಸಿಕೊಂಡಿದೆ.

ಎಂ ಸರ್ವಿಸ್ ಎಂಬ ಹೊಸ ರಂಗವೇ ಉದ್ಬವವಾಗಿದೆ. ಇದಕ್ಕಾಗಿ ಅಖಂಡ ಇಂಜಿನೀಯರ್ ಗಳು ದುಡಿಯುತ್ತಿದ್ದಾರೆ. ಸಾಕಷ್ಟು ಉದ್ಯೋಗಾವಕಾಶಗಳನ್ನು ಈ ಉದ್ಯಮ ಮಾಡಿಕೊಟ್ಟಿದೆ.

ಇದು ಇಂದು ವೇಗವಾಗಿ ಬೆಳೆಯುತ್ತಿರುವ ಮಹತ್ವವಾದ ಕ್ಷೇತ್ರವಾಗಿದೆ.

ಹಾಗೆಯೇ ಮನುಷ್ಯನ ಹೊಸ ದೌರ್ಬಲ್ಯ ಈ ಮೊಬೈಲ್ ಎಂದರೇ ಸುಳ್ಳಲ್ಲ! ಚಿಕ್ಕ ವಸ್ತುವೊಂದು ಜೊತೆಯಲ್ಲಿದ್ದರೇ ಮುಗಿಯಿತು. ನಿದ್ದೆ ಬೇಡ, ಊಟ ಬೇಡ, ಜನರ ಸಹವಾಸವೇ ಬೇಡ! ಅದಷ್ಟು ಏಕಾಂತವಾಗಿರೋಣ ಅನಿಸುತ್ತದೆ!

ಯಾಕೆಂದರೇ ಇದರ ಮೊಲಕ ಪ್ರತಿಯೊಂದನ್ನು ದಕ್ಕಿಸಿಕೊಳ್ಳಬಹುದಾಗಿದೆ. ಇಡಿ ವಿಶ್ವವೇ ಅಂಗೈಯಲ್ಲಿದೆ ಎಂದು ಅನಿಸುತ್ತದೆ.

ಪ್ರಪಂಚದ ಯಾವುದೋ ಮೊಲೆಯಲ್ಲಿರುವ ವ್ಯಕ್ತಿಗಳ ನಡುವೆ ಸ್ನೇಹ ಮಾಡಿಕೊಳ್ಳಬಹುದು. ಯಾವುದೋ ದೂರದ ವ್ಯಕ್ತಿಗಳ ನಡುವೆ ಮಾತನಾಡಬಹುದು. ಯಾವುದೋ ಗುತ್ತು ಗುರಿಯಿಲ್ಲದ ಸ್ಥಳದ ಪೂರ್ಣ ವಿಷಯಗಳನ್ನು ಒಂದು ಗುಂಡಿ ಒತ್ತುವ ಮೊಲಕ ನಮ್ಮ ಮಸ್ತಕಕ್ಕೆ ಇಳಿಸಿಕೊಳ್ಳಬಹುದಾಗಿದೆ.

ಮೊಬೈಲ್ ಇಷ್ಟೊಂದು ವೇಗವಾಗಿ ಪ್ರತಿಯೊಬ್ಬರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ ಎಂದು ಯಾರು ಉಹಿಸಿರಲಾರರು.

ನನಗೆ ತಿಳಿದಂತೆ ಭಾರತದಲ್ಲಿ ರಿಲೆಯನ್ಸ್ ಮೊಬೈಲ್ ನೆಟ್ ವರ್ಕ ಈ ಕ್ರಾಂತಿ ಮಾಡಿದ್ದು. ಅವರು ಕೊಟ್ಟ ೫೦೦ ರೂ ಬೆಲೆಯ ಮೊಬೈಲ್! ಶ್ರೀಮಂತ ಮಂದಿ ಮಾತ್ರ ಉಪಯೋಗಿಸುತ್ತಿದ್ದನ್ನು ಕಟ್ಟ ಕಡೆಯ ಜನರುಗಳಿಗೆ ಸಿಗುವಂತೆ ಮಾಡಿದ್ದಂತೂ ಮರೆಯಲಾರದ ಕ್ಷಣ.



ಅಂದಿನಿಂದ ಶುರುವಾದ ಮೊಬೈಲ್ ಯುಗ, ಇಂದು ಯಾರನ್ನು ಕೇಳಿದರೂ ಹಲೋ.. ಎಲ್ಲಿದ್ದೀಯ...? ಈ ಮಾತುಗಳು ಪ್ರತಿಯೊಬ್ಬರೂ ಬಳಸುವ ನಿತ್ಯ ಮಂತ್ರಗಳಾಗಿವೆ.

ಇಂಟರ್ ನೇಟ್, ಸೋಷಿಯಲ್ ಮೀಡಿಯಾಗಳು, ಪೇಸ್ ಬುಕ್, ವಾಟ್ಸಪ್ ಮನುಷ್ಯನು ಯೋಚಿಸಲಾರದಷ್ಟು ದೂರ ಮತ್ತು ವೇಗವಾಗಿ ಪ್ರತಿಯೊಬ್ಬರ ಜೀವನ ಶೈಲಿಯನ್ನೇ ತನ್ನ ಮುಷ್ಠಿಯಲ್ಲಿ ಇಟ್ಟುಕೊಂಡು ಬಿಟ್ಟಿವೆ ಅನಿಸುತ್ತಿದೆ.

ಪ್ರತಿ ಕ್ಷಣ ಪ್ರತಿಯೊಬ್ಬರೂ ಏನನ್ನಾದರೂ ಮೊಬೈಲ್ ನಲ್ಲಿ ನೋಡುತ್ತಿರುತ್ತಾರೆ. ಪ್ರತಿ ನಿಮಿಷವೂ ಏನನ್ನಾದರೂ ಟೈಪಿಸುತ್ತಿರುತ್ತಾರೆ, ಪ್ರತಿ ನಿಮಿಷವು ಸ್ಟೇಟಸ್, ವಾಲು, ಲೈಕ್, ಪೊಟೋ, ಕಾಮೆಂಟ್ ಇತ್ಯಾದಿ ಇತ್ಯಾದಿ ಏನೋ ಒಂದನ್ನು ಮಾಡುವ ಮಟ್ಟಿಗೆ ಮಂದಿಯನ್ನು ಬ್ಯುಸೀ ಮಾಡಿಬಿಟ್ಟಿದೆ.

ಈ ಚಿಕ್ಕ ವಸ್ತುವಿನ ಮೊಲಕವೇ ಸಮಸ್ತಕ್ಕೆ ಅರ್ಪಣೆ,ದರ್ಪಣೆ!

ಈ ಚಿಕ್ಕ ಮೊಬೈಲೇ ಹೊಸ ವರ್ಲ್ಡ್ ಗೆ ಬೆಳಕಿನ ಕಿಂಡಿಯಾಗಿದೆ. ಇದು ಇಲ್ಲದ ಜೀವನವೇ ನಶ್ವರ ಅನಿಸಿಬಿಟ್ಟಿದೆ.

ಇಂಟರ್ ನೇಟ್ ಇಲ್ಲದ ಮನೆಯೇ ಇಲ್ಲ. ಇಂಟರ್ ನೇಟ್ ಇಲ್ಲದ ಮೊಬೈಲ್ ಮೊಬೈಲ್ ಅಲ್ಲ! ಪೇಸ್ ಬುಕ್ ಇಲ್ಲದ ಮುಖವೇ ಮುಖವಲ್ಲ! ಅನ್ನುವ ಮಟ್ಟಿಗೆ ನಮ್ಮ ಮಂದಿ ಈ ಜಂಗಮವಾಣಿಯ ದಾಸಾನು ದಾಸರಾಗಿದ್ದಾರೆ.

ಇಲ್ಲಿಯೇ ಜಗಳ, ಇಲ್ಲಿಯೇ ಆನಂದ , ಇಲ್ಲಿಯೇ ಸಂತೋಷ, ಇಲ್ಲಿಯೇ ದುಃಖ! ಇದರೋಳಗೆ ಎಲ್ಲರೂ ಎಲ್ಲರೊಂದಾಗಿ ಬಿಟ್ಟಿದ್ದಾರೆ.

ಪ್ರತಿಯೊಂದಕ್ಕೂ ಒಂದು ಲೈಕ್ ಇದೆ, ಪ್ರತಿ ಮಾತಿಗೂ ಒಂದು ಕಾಮೆಂಟ್ ಇದೆ. ಪ್ರತಿ ಭಾವನೆಗೂ ಒಂದು ವಾಲ್ ಇದೆ.. ಇದೆ ಭರವಸೆ! ಇದೆ ಬದುಕು! ಇದೆ ನೆಟ್ ವರ್ಕ್ ಗುರು.. ಎನ್ನುವಂತಾಗಿದೆ.

ಟೋಟಲಿ ಇದು ಒಂದು ರೀತಿಯ ರೋಗ ಅನಿಸಿಬಿಡುತ್ತದೆ.

ಈ ಯಾವುದೂ ಗೊತ್ತಿರದ ವ್ಯಕ್ತಿ ಅನಕ್ಷರಸ್ಥನೆನಿಸಿಕೊಳ್ಳುತ್ತಾನೆ.

ಇಷ್ಟು ತಿಳುವಳಿಕೆ ಇಲ್ಲವಾ?

ಏ ಮಗಾ ನಿನಗೆ ರಿಕ್ವೇಸ್ಟ್ ಬರಲಿಲ್ಲವಾ?

ನೀ ಸೆಲ್ಫೀ ತೆಗೆದುಕೊಳ್ಳಲಿಲ್ಲವಾ?

ಯಾಕೋ ಇವನು ಗಾಂಧಿ.. ಎಂದು ಆಡಿಕೊಳ್ಳುತ್ತಾರೆ.

ಎಕ್ಸ್ ಪೋಸರ್ ಆಗಬೇಕು! ವಿಷಯ ತಿಳಕೊಳ್ಳಬೇಕು. ನೋಡು ಇಂದು ಯಾರು ಓದುತ್ತಾರೆ. ಪೇಸ್ ಬುಕ್ ನಲ್ಲಿ ಎಲ್ಲಾ ರೈಟರ್ಸ್, ನಟರು , ನಟಿಯರು, ಉದ್ಯಮಿಗಳು ಪ್ರತಿಯೊಬ್ಬರೂ ಸಿಗುತ್ತಾರೆ.. ನಾವು ಜಸ್ಟ್ ಪಾಲೋ ಮಾಡಬೇಕು ಅಷ್ಟೇ.. ಯಾವುದಾದರೂ ಒಂದು ಗ್ರೂಪ್ ಸೇರಿಕೊಳ್ಳಬೇಕು..

ಇದೆ ಬದುಕು..

ಇಲ್ಲಿಯೇ ಕತೆ, ಕವಿತೆ, ಚಿತ್ರ ಪ್ರತಿಯೊಂದು ಸಿಗುತ್ತದೆ. ಎಷ್ಟು ನೋಡುತ್ತಿಯೋ ಅಷ್ಟೊಂದು. ನಿನ್ನ ಹಳೆಯ ಹೊಸ ಸ್ನೇಹಗಳು ಸಿಗುತ್ತದೆ.

ಅವರುಗಳ ಸ್ಟೇಟ್ ಸ್, ಅ(ಇ)ವರು ಏನು ಮಾಡುತ್ತಾರೆ. ಅ(ಇ)ವರ ವಿಶೇಷ ದಿನಗಳೇನು? ಅದನ್ನು ಅದು ಹೇಗೆ ಸೆಲಬ್ರೇಟ್ ಮಾಡಿದರು ಎಂಬುದನ್ನು ಅವರು ಅಪ್ ಲೋಡ್ ಮಾಡುವ ಪೊಟೋಗಳ ಮೊಲಕ ತಿಳಿದುಕೊಳ್ಳಬಹುದು.

ನಮಗೆ ಗೊತ್ತಿರುವವರು/ಇಲ್ಲದವರು ದೂರ ಇದ್ದರೂ ಹತ್ತಿರವಿದ್ದಂತೆ, ಈ ಟೆಕ್ನಾಲಜಿ ಮೊಲಕ ಪೀಲ್ ಮಾಡಿಕೊಳ್ಳಬಹುದು.

ಹೀಗೆ ನಮ್ಮ ಯುವಕರನ್ನು, ವಯಸ್ಸಾದವರನ್ನು, ಹಣ್ಣು ಮುದುಕರನ್ನು ಪ್ರತಿಯೊಬ್ಬರನ್ನೂ ಒಂದಲ್ಲಾ ಒಂದು ರೀತಿಯಲ್ಲಿ ಈ ಮೊಬೈಲ್ ಸೋಷಿಯಲ್ ಮೀಡಿಯಗಳು ಆಕ್ರಮಿಸಿಕೊಂಡಿವೆ. ಪ್ರತಿಯೊಬ್ಬರನ್ನು ಕ್ರಿಯಶೀಲರನ್ನಾಗಿಟ್ಟಿವೆ.

ಯಾಕೆಂದರೇ ಅವರುಗಳ ಸ್ಟೇಟ್ ಸ್ ನಲ್ಲಿ ಏನದರೂ ಹೊಸದು ನಿತ್ಯ ಇರುತ್ತದೆ!!

ಇದರಿಂದ ಬದುಕು ಕಟ್ಟಿಕೊಂಡಿರುವವರು ಇದ್ದಾರೆ. ಇಲ್ಲಿಯೆ ಕ್ರಾಂತಿಯನ್ನು ಮಾಡಿರುವವರು ಇದ್ದಾರೆ. ಇದರಿಂದಲೇ ಹೊಸ ಹೊಸ ಪ್ರತಿಭೆಗಳು ಹೊಸ ರೀತಿಯಲ್ಲಿ ಕಣ್ಣು ಬಿಟ್ಟುಕೊಂಡಿವೆ. ಒಳ್ಳೆಯದು ಗಿಟ್ಟಿದೆ.. ಕೆಟ್ಟದ್ದು ಆಗಿದೆ.

ಯಾವುದಕ್ಕೋ ಒಂದು ಅಕೌಂಟ್ ಎಲ್ಲಾದರೂ ಮೊದಲು ಒಪನ್ ಮಾಡು.  ಪಾಸ್ ಪೋರ್ಟ್ ಮತ್ತು ರೇಷನ್ ಕಾರ್ಡು ಇಲ್ಲದಿದ್ದರೂ ಪರವಾಗಿಲ್ಲ!

ಹುಟ್ಟಿದ ಮಕ್ಕಳೇ ಅಷ್ಟು ಸುಲಭವಾಗಿ ಮೊಬೈಲ್ - ಟ್ಯಾಬ್ ಬ್ರೌಜ್ ಮಾಡುತ್ತಾರೆ ಎಂದರೇ..ಕೇಳುವುದೇನು?

ಮೊಬೈಲ್ ಕೈ ಗೆ ಬಂದರೇ ಅಳುವ ಕಂದಮ್ಮನ ಮುಖ ಅರಳುತ್ತದೆ.  ಮೊಬೈಲ್ ವಿಡಿಯೋ ನೋಡಿದರೇ ಮುದ್ದು ಮಗು ಸುಮ್ಮನೇ ಬಾಯಿ ತೆರೆದು ಊಟ ಮಾಡುತ್ತದೆ. ಇದರಲ್ಲಿನ ಮ್ಯುಜಿಕ್ ಎಳೆ ಮಗುವಿನ ಲಾಲಿ ಜೋಗುಳ...

ಇದರ ಅಪಾರ ಮಹಿಮೆಗೆ ಶರಣು ಶರಣು!

ಶನಿವಾರ, ಫೆಬ್ರವರಿ 13, 2016

ಒಳ್ಳೆದು ತೆಗೆದುಕೋ

ಒಳ್ಳೆಯ ಆಚಾರಗಳು, ವಿಚಾರಗಳು ಮತ್ತು ಗುಣಗಳನ್ನು ಎಲ್ಲೆ ಇರಲಿ ಗುರುತಿಸಿ ಹಿಂದೆ ಮುಂದೆ ನೋಡದೆ ತೆಗೆದುಕೊಳ್ಳಬೇಕು.

ಇಲ್ಲಿ ದೂರದ ಅಮೆರಿಕಾದ ಒಂದು ನಗರದ ಜನರ ನಡೆ ನುಡಿಗಳು ಮತ್ತು ವ್ಯವಸ್ಥೆ ಆ ದೇಶದ ಪ್ರತಿಬಿಂಬವಾಗಿರಬಹುದು ಎಂದುಕೊಳ್ಳಬಹುದು(?).

ಒಳ್ಳೆಯದನ್ನು ಕಂಡು ಮನಸ್ಸು ಖುಷಿಯಾಗುತ್ತದೆ. ನಮ್ಮ ದೇಶದಲ್ಲೂ ಹೀಗೆ ಇದ್ದರೇ ಎಷ್ಟು ಚೆನ್ನಾಗಿರುತ್ತದೆ ಎಂದು ಅನಿಸಿದ ಕ್ಷಣಗಳನ್ನು ಮಾತ್ರ ಇಲ್ಲಿ ನೋಟ್ ಮಾಡಿದ್ದೇನೆ.

ಹಾಗಂತ, ಎಲ್ಲರೂ ಈಗಾಗಲೆ ಮಾರು ಹೋದ ರೀತಿಯಲ್ಲಿ ನಾನು ಈ ದೇಶಕ್ಕೆ ಮನಸ್ಸು ಕೊಟ್ಟೆ ಎಂದು ಅನ್ಯಥಾ ಭಾವಿಸಬಾರದು.

ಮೊದಲನೆಯದಾಗಿ ಆ ನೆಲದ ಏರ್ ಪೊರ್ಟ್ ನಲ್ಲಿ ಇಳಿದ ತಕ್ಷಣ ಅನಿಸುವುದು ಅಬ್ಬಾ ಎಷ್ಟೊಂದು ಸುಂದರ ಮತ್ತು ಸುವಿಶಾಲವಾಗಿದೆ. ಎಷ್ಟು ಸೈಲೆನ್ಸ್ ಮತ್ತು ನೀಟ್. ವಾತವರಣ ಎಂದು ಪೀಲ್ ಆಗುತ್ತಾ ನಮ್ಮ ಹುಬ್ಬು ಏರುವಂತೆ ಮಾಡುತ್ತದೆ. ಯಾಕೆಂದರೇ ನಾವು ಈಗಾಗಲೇ ಇಲ್ಲಿಗೆ ಹೋಗಿ ಬಂದವರಿಂದ ಕೇಳಿ ತಿಳಿದುಕೊಂಡಿರುವುದರಿಂದೇನೋ?

ಎಲ್ಲಿಯೇ ಯಾರಾದರೂ ಎದುರಿಗೆ ಸಿಗುವಾಗ ಈ ಜನ ಮಾಡುವ ವಿಶ್! ಅದು ಯಾರೇ ಆಗಿರಲಿ ಒಂದು ನಗೆಯ ವಿಶ್, ಪ್ರತಿಯೊಬ್ಬರೂ ಮತ್ತೊಬ್ಬರಿಗೆ ಗೊತ್ತಿರುವವರೇನೋ ಎಂಬಂತೆ ಮಾಡುವ ಹಾಯ್!  ಕಂಡು ತುಂಬ ಖುಷಿಯಾಗುತ್ತದೆ.

ಇಲ್ಲಿಯ ವೈಕಲ್ ಗಳ ಚಲನೆ ಪೂರ್ತಿ ಉಲ್ಟಾ! ಇದು ಎಂಥವರನ್ನು ಕಸಿವಿಸಿ ಮಾಡುತ್ತದೆ. ಅದು ಯಾಕೆ ಈ ಜನ ರಸ್ತೆಯ ಬಲಬದಿಯಲ್ಲಿ ವಾಹನಗಳನ್ನು ಚಲಿಸುತ್ತಾರೆ? ಎಂದು ಕೇಳಿದ್ದಕ್ಕೆ ಯಾರೋ ಹೇಳಿದರು: ಬ್ರಿಟಿಷ್ ರ ರೂಲ್ಸ ಗೆ ವಿರುದ್ಧವಾಗಿ  ಇವರು ಈ ರೀತಿಯಾಗಿ  ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬ್ರಿಟನ್ ನಲ್ಲಿ ಎಡ ಅದಕ್ಕಾಗಿ ಇಲ್ಲಿ ಬಲವಂತೆ! ಎಷ್ಟು ನಿಜ ಸುಳ್ಳೋ ನನಗೆ ಗೊತ್ತಿಲ್ಲಾ! link

ಕಾರು ಕಾರು ಎಲ್ಲಿ ನೋಡಿದರೂ ಕಾರು. ಇಲ್ಲಿ ಕಾರು ಇಲ್ಲದವನು ಡಿಸೇಬಲ್ ಪರ್ಸ್ ನ್ ಇದ್ದಂತೆ. ಕಾರು ಇಲ್ಲ ಎಂದರೇ ತನ್ನ ಒಂದು ಕಾಲು ಇಲ್ಲದಂತೆ. ಇಲ್ಲಿಯ ವಾತವಾರಣಕ್ಕೆ ಕಾರು ಬೇಕೇ ಬೇಕು. ಕಾರು ಕೊಳ್ಳುವುದು ಸುಲಭ ಬಿಡಿ ಇಲ್ಲಿ!

ಸಿಟಿ ಲಿಮಿಟ್ ನಲ್ಲಿ ಓಡಾಡುವ ಜನ ಬಿಟ್ಟರೆ, ಬೇರೆ ಮೈನ್ ರೋಡ್ ನಲ್ಲಿ ಒಂದು ನರ ಪಿಳ್ಳೆಯು ನಡೆದಾಡುವುದಿಲ್ಲ. ಬರೀ ಕಾರುಗಳು ರೊಯ್ ರೊಯ್ ಎಂದು ವೇಗವಾಗಿ ಚಲಿಸುವ ಶಬ್ಧ ಮಾತ್ರ ಕೇಳಬೇಕು.

ಕೇವಲ ಓಡಾಡುವರು ಆರೋಗ್ಯಕ್ಕಾಗಿ ವಾಕ್ ಮಾಡುತ್ತಿರುವರು ಎಂದು ನಿರ್ಧರಿಸಬಹುದು.

ಕಾರು ಚಾಲನೆ ಮಾಡುವುದು ತುಂಬ ಇಜೀ, ಯಾಕೆಂದರೇ ನಮ್ಮ ಬೆಂಗಳೂರು ನಗರದಂತೆ ವಾಹನಗಳ ದಟ್ಟಣೆ ಇಲ್ಲಿ ಇಲ್ಲ. ಇದ್ದರೂ ಪ್ರತಿಯೊಬ್ಬರೂ ಲೇನ್ ರೂಲ್ಸ್ ಪಾಲೋ ಮಾಡುತ್ತಾರೆ.  ಇಲ್ಲಿ ರೂಲ್ಸ್ ಕಟ್ಟು ನಿಟ್ಟು. ಸಿಗ್ನಲ್ ಜಂಪ್, ಯರ್ರಾ ಬಿರ್ರಿ ಓವರ್ ಟೇಕ್ ಇಲ್ಲ!

ವಿಶಾಲವಾದ ರೋಡ್ ಗಳು! ಎಮರ್ಜ್ ನ್ಸಿ ವಾಹನಗಳಿಗಾಗಿಯೇ ಪ್ರತ್ಯೆಕ ಲೇನ್ ವ್ಯವಸ್ಥೆ ಇದೆ. ಎಮರ್ಜನ್ಸಿ ವಾಹನಗಳು ಪಾಸ್ ಆಗುವಾಗ ಎರಡು ಬದಿಯ ವಾಹನಗಳು ರಸ್ತೆಯ ಬಲಬದಿಗೆ ಬಂದು ನಿಲ್ಲಿಸಬೇಕು. ವ್ಯಕ್ತಿ, ಜೀವಗಳಿಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದು ಇದರಿಂದ ಗೊತ್ತಾಗುತ್ತದೆ.

ನಮ್ಮ ನಗರಗಳಲ್ಲಿ ಯಾವ ರೀತಿ ಬೆಲೆ ಎಂಬುದು ಅಡ್ಡಾ  ದಿಡ್ಡಿ ಓಡಿಸುವವರನ್ನು ನೋಡಿದರೆ ಗೊತ್ತಾಗುತ್ತದೆ. ಇಲ್ಲಿಯ ಜನ ಸ್ವಲ್ಪ ಕಾನೂನಿಗೆ ಎದುರುವರೇನೋ?

ಭಾರತದಿಂದ ಬಂದಿರುವ ನಮ್ಮ ಜನ ಎದುರುವುದಂತೂ ನಾನು ನೋಡಿದ್ದೇನೆ!

ರಸ್ತೆಯಲ್ಲಿ ದೂಳು ಇಲ್ಲ, ವಾಯು ಮಾಲಿನ್ಯ ಇಲ್ಲ, ಹೆಚ್ಚು ಹಾರ್ನ್ ಶಬ್ಧ ಇಲ್ಲ. ಹಾರ್ನ್ ಮಾಡಿದರೂ ಎಂದರೇ ನೀನು ಏನೋ ತಪ್ಪು ಮಾಡಿದ್ದೀಯ ಅಂಥ ಅರ್ಥ. ಹಾರ್ನ್ ಎಂದರೇ ವಾರ್ನ್ ಇದ್ದಾಗೆ ಇಲ್ಲಿ.

ಆದರೇ ನಮ್ಮಲ್ಲಿ ಹಾರ್ನ್ ಇಲ್ಲದಿದ್ದರೇ ಒಂದು ಹೆಜ್ಜೆ ಮುಂದೆ ಹೋಗಲು ಸಾಧ್ಯವಿಲ್ಲ.

ನಮ್ಮಲ್ಲಿಯ ಆ ಕಸ ಗಲೀಜು ಯಾವುದರ ವಾಸನೆಯು ಸಹ ಅನುಭವವಾಗುವುದಿಲ್ಲ. ಅಷ್ಟರ ಮಟ್ಟಿಗೆ ಜನಗಳು ಎಲ್ಲಿ ಕಸ ಹಾಕಬೇಕು ಅಲ್ಲಿ ಮಾತ್ರ ಹಾಕುತ್ತಾರೆ.

ನಾಯಿಗಳು ವಾಕ್ ಕರೆದುಕೊಂಡು ಹೋಗುವಾಗ ಕವರ್ ಹಿಡಿದುಕೊಂಡು ಹೋಗುವ ಇಲ್ಲಿಯ ಜನಗಳನ್ನು ನೋಡಿ ವಿಸ್ಮಿತನಾಗಿದ್ದೇನೆ.

ನಮ್ಮಲ್ಲಿ ಅದನ್ನು ಮಾಡಿಸಿವುದಕ್ಕಾಗಿಯೇ ನಾಯಿಗಳನ್ನು ರಸ್ತೆಗಳಿಗೆ ಕರೆದುಕೊಂಡು ಹೋಗುವವರಿದ್ದಾರೆ. ಇಷ್ಟರ ಮಟ್ಟಿಗೆ ನೈರ್ಮಲ್ಯದ ಬಗ್ಗೆ ಕಾಳಜಿ ಇದೆ ಈ (ನಮ್ಮ) ಜನಕ್ಕೆ.

ಹೈವೆ ರಸ್ತೆಗಳ ಬದಿಯನ್ನು ಸ್ವಚ್ಛಗೊಳಿಸಲು ಜೈಲು ಖೈದಿಗಳನ್ನು ಬಳಸಿಕೊಳ್ಳುವುದನ್ನು ಒಮ್ಮೊಮ್ಮೆ ನೋಡಬಹುದು.

ಇಲ್ಲಿಯ ಸರ್ಕಾರಿ ಆಪೀಸ್ ಗಳು ನಮ್ಮಲ್ಲಿಯ ಪ್ರವಿಟ್ ಆಪೀಸ್ ರೀತಿಯಲ್ಲಿವೆ. ಗೌರ್ಮೆಂಟ್ ವಾಸನೆಯೇ ಕಾಣಿಸುವುದಿಲ್ಲ. ಎಲ್ಲಾ ಕೆಲಸಗಳು ಎಷ್ಟು ಸುಲಭವಾಗಿ ಅಲಿಯೇ ಮುಗಿದು ಹೋಗಿಬಿಡುತ್ತದೆ.

ನಮ್ಮ ಸರ್ಕಾರಿ ಕಛೇರಿಗಳು ಮತ್ತು ಅಲ್ಲಿಯ ಕೆಲಸ ಆ ದೇವರಿಗೆ ಪ್ರೀತಿ!

ಓದುವ ಪ್ರೀತಿ! ಇಲ್ಲಿಯ ಜನ ಕೈಯಲ್ಲಿ ಏನಾದರೂ ತಿನ್ನುವ / ಕುಡಿಯುವ ವಸ್ತುವನ್ನು ಇಟ್ಟುಕೊಳ್ಳುತ್ತಾರೆ, ಇಲ್ಲವೇ ಪುಸ್ತಕವನ್ನು ಹಿಡಿದುಕೊಳ್ಳುತ್ತಾರೆ. ಇಲ್ಲಿಯ ಮಕ್ಕಳಿಗೆ ತಮ್ಮ ಬಾಲ್ಯದಿಂದಲೇ ಓದುವ ಗೀಳನ್ನು ಇಲ್ಲಿಯ ಶಾಲೆಗಳು ಕಲಿಸುತ್ತವೆ.

ಇಲ್ಲಿಯ ಲೈಬ್ರರಿ ಒಂದೊಂದು ವಿಲೇಜ್ ಗೂ ಒಂದೊಂದು. ಅಲ್ಲಿಯ ವ್ಯವಸ್ಥೆ ನಮ್ಮ ಯಾವ ಮೆಟ್ರೋ ನಗರದ ದೊಡ್ಡ ಲೈಬ್ರರಿಗೂ ಕಡಿಮೆ ಇಲ್ಲ ಅನಿಸಿತು.

ಇಲ್ಲಿಯ ಮಕ್ಕಳು ಸ್ಕೋಲ್ ಗೆ ಕುಣಿ ಕುಣಿಯುತ್ತಾ ಹೋಗುತ್ತಾರೆ. ಯಾವ ಬಾರಿ ಪುಸ್ತಕಗಳ ಭಾರವಿಲ್ಲ. ಪೀಜ್ ನ ಬಾರ ಹೆತ್ತವರಿಗೆ ಇಲ್ಲ. ಎಲ್ಲಾ ರಾಜ್ಯಗಳಲ್ಲೂ ಏಕ ರೂಪ ಸಿಲಬಸ್! ಪ್ರವಿಟ್ ಕಾನ್ವೇಂಟ್ ಗಳ ಹಾವಳಿ ಇಲ್ಲವೇ ಇಲ್ಲ!

ಸ್ಕೋಲ್ ಬಸ್ ಗಳು ರಸ್ತೆಯಲ್ಲಿ ಮಕ್ಕಳನ್ನು ತುಂಬಿಕೊಳ್ಳುವಾಗ/ ಇಳಿಸಿಕೊಳ್ಳುವಾಗ ಎರಡು ಬದಿಯಲ್ಲಿ ಬರುವ ವಾಹನಗಳ ನಿಲುವಿಕೆ - ಮಕ್ಕಳ ಬಗ್ಗೆ ಇಲ್ಲಿಯವರ ಕಾಳಜಿ ನನಗೆ ಸೊಜಿಗವನ್ನುಂಟು ಮಾಡಿತು.

ಯಾವುದೇ ಪಾರ್ಕಿಂಗ್ ಲಾಟ್ ನಲ್ಲೂ ಅಂಗವಿಕಲರಿಗಾಗಿಯೇ ಒಂದಷ್ಟು ಪಾರ್ಕಿಂಗ್ ಲಾಟ್ ಮೀಸಲಿಟ್ಟಿರುವುದು ಮನಸೂರೆ ಮಾಡಿತು.

ನೀರು ಬಳಕೆ ಮತ್ತು ಸೀವೆಜ್ ಗೂ ಪೀ ಕಟ್ಟಿಸಿಕೊಳ್ಳುತ್ತಾರೆ. ಇದು ನೀರಿನ ಮಹತ್ವವನ್ನು ಸಾರುತ್ತದೆ. ನೀರು, ಕರೆಂಟು, ಗ್ಯಾಸ್ ಅದು ಹೇಗೆ ಎಲ್ಲಿಂದ ಬರುತ್ತದೆ ಎಂಬುದನ್ನು ನನಗಂತೂ ನಾನೀರುವ ಮನೆಯಲ್ಲಿ ಗುರುತಿಸಲಾರದೆ ಹೋದೆ. ಅಷ್ಟೊಂದು ವ್ಯವಸ್ಥಿತವಾಗಿ ಸಾಗಿಸುತ್ತಾರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ.

ಇನ್ಸೂರೇನ್ಸ್ ಬೇಕೆ ಬೇಕು. ಅದು ಇಲ್ಲ ಎಂದರೇ ನೀ ಬದುಕುವುದೇ ಕಷ್ಟ! ನೀ ಯಾವುದಾದರೂ ಚಿಕಿತ್ಸೆಗೆ ಆಸ್ಪತ್ರೆಗೆ ಹೋದರೇ ಕಾಯಿಲೆ ಕೇಳುವುದಕ್ಕಿಂತ ಮೊದಲು ಕೇಳುವುದು ಇನ್ಸೂರೇನ್ಸ್. ಇಲ್ಲಿಯ ಚಿಕಿತ್ಸೆ ತುಂಬ ದುಬಾರಿ. ಅದಕ್ಕಾಗಿ ವೈದ್ಯಕೀಯ ವಿಮೆ ಅವಶ್ಯ. ಅದರಲ್ಲಿಯೇ ಪ್ರತಿಯೊಂದನ್ನು ನೋಡಿಕೊಳ್ಳುತ್ತಾರೆ.

ಇಲ್ಲಿಯ ಆಸ್ಪತ್ರೆಗಳು,  ಆಸ್ಪತ್ರೆಗಳಂತೆ ಎಂದು ನನಗೆ ಕಾಣಲಿಲ್ಲ! ಯಾವ ಹೈಟೆಕ್ ಗೂ ಕಡಿಮೆಯಿಲ್ಲ. ನಮ್ಮಲ್ಲಿಯ ಸಾಮಾನ್ಯ ಆಸ್ಪತ್ರೆಯ ಪೇನಾಯಿಲ್ ವಾಸನೆ ನನಗಂತೂ ಬರಲಿಲ್ಲ!

ಪಕ್ಕಾ ಪ್ಲ್ಯಾನ್ ರೀತಿಯಲ್ಲಿ ಕಟ್ಟಿರುವ ಸಿಟಿ. ರೇಸಿಡೆನ್ಸಿ ಏರಿಯಾದಲ್ಲಿ ಬರೀ ವಾಸಿಸುವ ಮನೆಗಳು. ಅಲ್ಲಿ ಮನೆಗಳನ್ನು ಬಿಟ್ಟು ಮತ್ತೇನೂ ಗುರುತಿಸಲಾರಿರಿ. ಒಂದು ಕಡೆ ಶಾಪಿಂಗ್ ಮಾಲ್ ಗಳು. ಒಂದು ಕಡೆ ವೈಕಲ್ ಮಾರಾಟ ಮಳಿಗೆಗಳು. ಒಂದು ಕಡೆ ಹೊಟೆಲ್ ಗಳು ಹೀಗೆ ಪ್ರತಿಯೊಂದು ವ್ಯವಸ್ಥಿತ.

ನಮ್ಮಲ್ಲಿರುವಂತೆ ಯಾವುದು ಅಡ್ಡಾ ದಿಡ್ಡಿಯಾಗಿ ನಿತ್ಯ ಗುಂಡಿ
ಅಗಿಯುವ ಕಾಯಕ ಇಲ್ಲಿ ಕಾಣುವುದಿಲ್ಲ.

ಜನಗಳು ಕಡಿಮೆ, ಜಾಗ ಜಾಸ್ತಿ ಇಲ್ಲಿ.

 ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ವಾಸಿಸುವ ಒಂದೇರಡು ಮನೆಗಳು ಮಾತ್ರ ಇರುವ ಹಳ್ಳಿಯ ರೂಪಾದಿಯಲ್ಲಿ ಒಂದಿಷ್ಟು ಮನೆಗಳು, ಮನೆಯ ಮುಂದೆ ವಿಶಾಲವಾದ ಲಾನ್, ಅಕ್ಕ ಪಕ್ಕ ಪೂರ್ತಿ ಬಟಾ ಬಯಲು. ಇದು ಇಲ್ಲಿಯ ಹಳ್ಳಿಯ ಚಿತ್ರಣ.

ವಿಶಾಲವಾದ ಜಮೀನು ಕಣ್ಣು ಕಾಣುವವರಿಗೆ.. ಕಾಣುವುದೆಲ್ಲ ಒಬ್ಬನದೇ ಅನಿಸುತ್ತದೆ. ನಮ್ಮ ರೀತಿ ಪೀಸ್ ಪೀಸ್ ಜಮೀನು ಕಣ್ಣೀಗೆ ಬೀಳುವುದಿಲ್ಲ.

ಇಲ್ಲಿಯ ಟ್ರಾಪಿಕ್ ಪೊಲೀಸ್ ಗಳು ಸುಖ ಸುಮ್ಮನೆ ಯಾರನ್ನು ತಡೆದು ನಿಲ್ಲಿಸುವುದಿಲ್ಲ.ಅವರು ನಿಮ್ಮನ್ನು ತಡೆದರು ಎಂದರೇ, ನೀ ಏನೋ ತಪ್ಪು ಮಾಡಿದ್ದೀಯಾ ಎಂದು ಅರ್ಥ.

ಇಲ್ಲಿಯ ಜನ ಪ್ರತಿಯೊಂದಕ್ಕೂ ಮಿಷಿನ್ ಮೇಲೆ ಹೆಚ್ಚು ಅವಲಂಬಿತ.

ಒಬ್ಬೇ ಒಬ್ಬ ಒಂದು ಲಾರಿಯನ್ನು ತೆಗೆದುಕೊಂಡು ಬಂದು ಪ್ರತಿಯೊಂದು ಕಸದ ಬ್ಯಾರಲ್ ಗಳನ್ನು (ಏರಿಯಾದ ಎಲ್ಲ ಕಸವನ್ನು ) ತಾನು ಕೆಳಗೆ ಇಳಿಯದೆ ಸುರಿದುಕೊಂಡು ಹೋಗುವುದು ಗ್ರೇಟ್!

ಕಸ ಗುಡಿಸುವುದು, ಬಟ್ಟೆ ತೊಳೆಯುವುದು, ಅಡಿಗೆ ಮಾಡುವುದು ಪ್ರತಿಯೊಂದು ಮಿಷಿನ್!

ಮನುಷ್ಯ ಪರಿಶ್ರಮಕ್ಕಿಂತ ಹೆಚ್ಚು ಯಂತ್ರಗಳು ದುಡಿಯುತ್ತವೆ.

ಯಾವುದೇ ಸ್ಥಳಗಳಿಗೆ ಹೋದರೂ ನಮ್ಮ ಭಾರತೀಯರು ಕಾಣಸಿಗುತ್ತಾರೆ. ನಮ್ಮ ಜನ  ಅಷ್ಟರ ಮಟ್ಟಿಗೆ ಇಲ್ಲಿ ಗಟ್ಟಿಯಾಗಿ ನೆಲೆ ಉರುತ್ತಿದ್ದಾರೆ.