ಶನಿವಾರ, ಅಕ್ಟೋಬರ್ 10, 2015

ಮನಸ್ಸೇ ಮಾರ್ಗ!

ದೇಹಕ್ಕೆ ಬೇಸರವಾದರೇ ಕೊಂಚ ಸಮಧಾನ ಮಾಡಬಹುದು.

ಅದಕ್ಕೆ ಒಂದು ರೇಸ್ಟ್ ಕೊಡುವ ನಿದ್ದೆ ಅಥವಾ ಕೊಂಚ ಕೊತು ತಣ್ಣನೆಯ ನೀರನ್ನು ಕೊಡಿದರೂ ಆರಾಮ ಅನಿಸುತ್ತದೆ.

ಆದರೇ ಮನಸ್ಸು ಬೇಜರವಾದರೇ ಕೇಳುವುದೇ ಬೇಡ, ಏನೊಂದು ಖುಷಿ ಮುಖದಲ್ಲೂ ಇರುವುದಿಲ್ಲ ಮತ್ತು ದೇಹದಲ್ಲೂ ಇರುವುದಿಲ್ಲ.

ಯಾವುದನ್ನು ಮನಸ್ಸು ಕೊಟ್ಟು ಮಾಡಿದರೇನೇ ಅದಕ್ಕೊಂದು ಅಚ್ಚುಕಟ್ಟು. ಒಂದು ಹುಲ್ಲು ಕಡ್ಡಿಯನ್ನು ಎತ್ತಿಕೊಳ್ಳಲು ಮನಸ್ಸು ಬೇಕು, ಮನಸ್ಸೇ ಇಲ್ಲದಿದ್ದರೇ ಏನೂ ನಡೆಯದು.
ಮನಸ್ಸೆ ದೇಹವೆಂಬ ಮನೆಯ ವಾರಾಸುಧಾರ. ಅವನು ಸರಿಯಿದ್ದರೇ ಎಲ್ಲ ಸರಿ ಇಲ್ಲವೆಂದರೇ ಮಹಾ ಬೋರೂ ಬೋರೂ.

ಮನಸ್ಸಿನ ವ್ಯಾಪಾರ ಅವರ ಅವರು ಅನುಭವಿಸಿದವರಿಗೆ ಗೊತ್ತೂ. ಅದು ಚಿಕ್ಕ ವಯಸ್ಸಿನ ಮಗುವಿನಿಂದ ಹಿಡಿದು, ವಯಸ್ಸಾದ ಮುದುಕರವರಿಗೂ ಒಂದೇ ರೀತಿಯ ತವಕ ಮನಸ್ಸನ್ನು ಖುಷಿಯಲ್ಲಿಡುವುದು ಹೇಗೆ.

ಮನಸ್ಸು ಪ್ರಫುಲ್ಲತೆಯಿಂದ ಇರುವುದು ಬಹಳ ಕ್ಷಣಿಕ, ಅದು ಚಿಕ್ಕ ವಿಷಯವನ್ನು ಗಮನಿಸುತ್ತೆ, ಒಂದೊಂದು ಕ್ಷಣವೂ ತನ್ನ ಸುತ್ತಲಿನಲ್ಲಿ ಜರುವುಗುವ ಪ್ರತಿಯೊಂದು ಘಟನೆಗೂ ಸಾಕ್ಷಿ ಭೂತವಾಗುತ್ತದೆ. ತಾನು ಕಾಣುವ ನೋಡುವ ಪ್ರತಿಯೊಂದನ್ನು ತನಗೆ ತಾನು ಅರ್ಥಯಿಸಿಕೊಂಡು ಪ್ರತಿಕ್ರಿಯಿಸುತ್ತದೆ. ಅದಕ್ಕೆ ಅದು ಅಷ್ಟು ಬೇಗ ಕರಾಬ್ ಆಗಿಬಿಡುವುದು.

ಮನಸ್ಸನ್ನು ಅತೋಟಿಯಲ್ಲಿಟ್ಟುಕೊಂಡರೆ ಮುಗಿಯಿತು, ಏನನ್ನಾದರೂ ಜಯಿಸಬಹುದು. ಆದರೇ ಅದು ಅಷ್ಟು ಸುಲಭದ ಮಾತಲ್ಲ ಎನ್ನುವುದು ಪ್ರತಿಯೊಬ್ಬರೂ ತಮ್ಮ ಅನುಭವದ ಮೊಲಕ ಕಂಡುಕೊಂಡ ಒಂದು ಪ್ರಬಲವಾದ ಸತ್ಯವಾದ ಸತ್ಯ!

ಅದಕ್ಕೆ ಹಿರಿಯರು ಹೇಳಿದ್ದು ಮನಸ್ಸು ಎಂಬುದು ಮರ್ಕಟ! ಅದರ ಅಂಕೆಯನ್ನು ನಾವೇ ಮಾಡಿಕೊಳ್ಳಬೇಕು ಮತ್ತು ನಾವೇ ಸಮಧಾನ ಮಾಡಿಕೊಳ್ಳಬೇಕು.

ವಯಸ್ಸು ಮನಸ್ಸು ಸಂಬಂಧ ಇದ್ದಿರಲೇಬೇಕು. ಚಿಕ್ಕವಯಸ್ಸಿನ ಮನಸ್ಸು ಹೇಗೆ ಇರುತ್ತೇ ಏನ್ ಕಥೆ? ಅದೇ ಬುದ್ಧಿ ಬೇಳೆದಂತೆ, ವಯಸ್ಸಾದಂತೆ ಮನಸ್ಸಿಗೆ ಯಾವ್ಯಾವುದೋ ಭಾರ ಬಿಳುತ್ತೇ ಮನಸ್ಸು ಸಹ ಸುಸ್ತಾಗುತ್ತೇ. ಮನಸ್ಸು ಸುಸ್ತಾಗುತ್ತೇ.. ದೇಹವು ಸುಸ್ತಾಗುತ್ತೆ.. ಇದು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.

ಅದಕ್ಕೆ ಇರಬೇಕು ಮನಸ್ಸಿನ ಬಗ್ಗೆ ಅಧ್ಯಯನ ಶಾಸ್ತ್ರವೇ ಬಂದಿದೆ. ಅದನ್ನು ವಿಶೇಷವಾಗಿ ಸ್ಟಡೀ ಮಾಡಬೇಕೆಂದು, ಹತ್ತು ಹಲವಾರು ಥೇಯರಿ, ಪುಸ್ತಕಗಳು, ಪದವಿಗಳು ಹುಟ್ಟಿಕೊಂಡಿವೆ.

ಅದೊಂದು ಮನಸ್ಸಲಾಜಿ! ಮನಸ್ಸಿನ ಮರ್ಮ ಯಾರೊಬ್ಬರೂ ಅರ್ಥ ಮಾಡಿಕೊಳ್ಳಲಾರರು. ಆದರೇ ಮನಸ್ಸಿನ ಕನ್ನಡಿ ಮುಖವಾಗಿರುವುದರಿಂದ ವ್ಯಕ್ತಿ ಹೇಗೆ? ಯಾವ ಮೋಡಲ್ಲಿ ಇದ್ದಾನೆ ಎಂಬುದು ಕ್ಷಣ ಮಾತ್ರದಲ್ಲಿ ಗೊತ್ತು ಮಾಡಿಕೊಳ್ಳಬಹುದು.

ಆದರೇ ಕಳ್ಳ ಮನಸ್ಸಿನವರು ಹತ್ತು ಹಲವು ರೀತಿಯಲ್ಲಿ ನಟಿಸಿ ನಮ್ಮನ್ನು ಯಾಮಾರಿಸಬಹುದು, ನಾವು ಕಂಡ ಮುಖದಂತೆ ಮನಸ್ಸಿಲ್ಲದಿರಬಹುದು ಕೊಂಚ ಹುಶಾರ್!

ಮನಸ್ಸು ಕೇಡಿಸಿಕೊಂಡವರು ವಿಲ ವಿಲ ಒದ್ದಾಡುವವರು. ಎಲ್ಲರ ಮನಸ್ಸು ಒಂದೇ ಆಗಿರಲಾರದು. ಒಳ್ಳೆ ಮನಸ್ಸು ಕೆಟ್ಟ ಮನಸ್ಸು ಎಂಬ ಎರಡೇ ವಿಧವಾಗಿಲ್ಲ. ಅದನ್ನು ಅರಿಯುವು ಮನಸ್ಸು ಎಲ್ಲಾರಿಗೂ ಇರುವುದಿಲ್ಲ.

ಹತ್ತಿರವಿರುವವರ ಬಗ್ಗೆ ಹಾಗೆಯೇ ನನಗೆ ಗೊತ್ತೂ ಅವನ ಮನಸ್ಸು ಎಂದು ನಗುವುದು, ಎಂದು ನಿಜವಾಗಿರುವುದಿಲ್ಲ. ನಾವು ನೋಡುವ ಮುಖವಾಡವೇ ಮನಸ್ಸಾಗಿರುವುದಿಲ್ಲ.

ಒಳ ಮನಸ್ಸಿನ ಲೆಕ್ಕಚಾರ ಯಾರೊಬ್ಬರ ತಿಳಿವಿಗೂ ಬರುವುದಿಲ್ಲ. ಮನಸ್ಸೇ ಹಾಗೆಯೇ ನಮ್ಮ ಜೊತೆಯಲ್ಲಿ ಬಾಳುವವರ ಮನಸ್ಸು ಕೊನೆಯವರೆಗೂ ನಮ್ಮ ನಿಲುಕಿಗೂ ಸಿಗದಾಗಿರುತ್ತದೆ. ಮಾತನ್ನಾಡಿದಷ್ಟು ಅದು ಸುಲಭವಲ್ಲ.

ಮನಸ್ಸು ಎಲ್ಲಿದೇ ಎಂದು ಯಾರು ಹೇಳಲಾರರು. ಅದು ಎಲ್ಲಿದೆ ಎಂದು ವೈಧ್ಯಕೀಯ ಡಾಕ್ಟರ್ ಗಳು ಹೇಳಲಾರರು ಎಂದರೇ ಮನಸ್ಸಿನ ಅಳತೆ ಎಷ್ಟು ಕಷ್ಟ! ಅದಕ್ಕೆ ಮನಸ್ಸಿನ ವ್ಯಾಪಾರ ಅವರವರ ಇಚ್ಛೆಗೆ ಬಿಟ್ಟಿದ್ದು.

ಮನುಷ್ಯನ / ಜೀವಿಯ ಪ್ರತಿಯೊಂದು ಕ್ರೀಯೆಯು ಮನಸ್ಸಿನ ಕೀಲಿ ಕೈಯಿಂದ ನಿದರ್ಶಿತವಾಗಿರುತ್ತದೆ. ಅದಕ್ಕೆ ಹಿರಿಯರು ಹೇಳಿದ್ದು ಮನಸ್ಸಿದ್ದರೆ ಮಾರ್ಗ ಎಂದು. ಮನಸ್ಸು ಮಾಡಿದರೇ ಮನುಷ್ಯನಿಗೆ ಪ್ರತಿಯೊಂದು ಗೆಲುವೇ!

ಮನಸ್ಸು ವೈಪರಿತ್ಯದಿಂದ ನಡೆಯುವ ಅವಘಡಗಳನ್ನು ಪುನಃ ಮನಸ್ಸೆ ಸೈರಿಸಿಕೊಳ್ಳಬೇಕು. ಮನಸ್ಸಿನ ಸಮಧಾನವನ್ನು ಅದೇ ಮನಸ್ಸೇ ಮಾಡಿಕೊಳ್ಳಬೇಕು. ಮನಸ್ಸೆಂಬ ಮನಸ್ಸಿಗೆ ಸಾಠಿ ಮನಸ್ಸು ಮಾತ್ರ.


ಮನಸ್ಸು ಅಜಾಳಾಗಿ ಮಾಡಿಕೊಳ್ಳಲು ಬಹಳ ಸುಲಭ, ಅದೇ ಮನಸ್ಸ್ ನ್ನು ಏಕಾಗ್ರತೆಯಲ್ಲಿ ಇರಿಸಿಕೊಳ್ಳಲು ಸಾಧನೆ ಮಾಡಬೇಕು. ಹೆಚ್ಚು ಪ್ರಾಕಟಿಸ್ ಮಾಡಿರಬೇಕು.

ಅದಕ್ಕಾಗಿ ಸಾಧಕರು ಮನಸ್ಸಿನ ಮೇಲೆಯೆ ಮಂಟಪ ಕಟ್ಟಿಕೊಂಡು, ಮನಸ್ಸಿನ ಮೊಲಕ ಮಹದಾದ್ದನ್ನು ಸಾಧಿಸಿಕೊಂಡಿರುತ್ತಾರೆ.

ಮನಸ್ಸು ಮನಸ್ಸುಗಳ ಮೊಲಕ ಮಾತಾನಾಡಬಹುದು ಎಂಬುದನ್ನು ಸಾಧಕರ ಚರಿತ್ರೆಗಳನ್ನು ಓದಿದಾಗ ನೋಡಬಹುದು. ಮನಸ್ಸಿನಿಂದಲೇ ಎಂಥೆಂಥ ಸಾಧನೆಗಳನ್ನು ಮಾಡಿರುವರು ಎಂದರೇ ಅಚ್ಚರಿಯಾಗುತ್ತದೆ. ಅಂಥ ಮನಸ್ಸಿನ ನಿಯಂತ್ರಣ ಸಾಮಾನ್ಯನಿಗೆ ನಿಲುಕುವುದೇ ಎಂಬುದು ನಮ್ಮ ನಿಮ್ಮ ಮನಸ್ಸಿನ ಮೇಲೆ ನಿಂತಿದೆ.


ಅದರ ಜೋಪಾನ ಮನಸ್ಸಿರುವ ಮನಸ್ಸಿನಂತ ಮನಸ್ಸಿನ ಮನುಷ್ಯನ ಜವಬ್ಧಾರಿ! ಮನಸ್ಸು ಮನುಷ್ಯರಿಗೆ ಮಾತ್ರ ಇದೆ ಎಂದು ಹೆಮ್ಮೆಪಡಬೇಡಿ. ಪ್ರತಿಯೊಂದು ಜೀವಿಗೂ ಇದೆ.

ಮನಸ್ಸೇ ಮಾರ್ಗ!