ಶುಕ್ರವಾರ, ಜುಲೈ 3, 2015

ಸಂಸ್ಕೃತಿ ವಿಚಿತ್ರ ಮತ್ತು ಸತ್ಯ

ಸಂಸ್ಕೃತಿ ಜನರಿಗಾಗಿ ಇರುವುದು ಅನಿಸುತ್ತದೆ. ಅಥವಾ ಜನರೇ ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡಿರುವ ರೀತಿ ನೀತಿಗಳ ಸಂಕಲನದ ಮೊತ್ತವೇ ಸಂಸ್ಕೃತಿ. ಅದು ಕುಟುಂಬ ಸಮಾಜ ಊರು ರಾಜ್ಯ ದೇಶಗಳನ್ನುಳಗೊಂಡ ಸಹ ಜೀವನ ಶೈಲಿಯಾಗಿದೆ.

ನಾವು ಆಚರಿಸುವ ಆಚಾರ ವಿಚಾರ ಒಂದು ಒಂದು ಮೈಲಿಗೂ ವ್ಯತ್ಯಾಸವಾಗಿರುತ್ತದೆ. ನಾವು ಮಾಡುವ ನೋಡುವ ನಮ್ಮ ಜಾಗದ ರೀತಿ ನಿನ್ನೊಂದೂರಲ್ಲಿ ವಿಚಿತ್ರವಾಗಿ ಕಾಣಬಹುದು. ನಮ್ಮಲ್ಲಿ ಮಾಮೊಲಿ ಎನಿಸುವ ಪದ್ಧತಿ ಇನ್ನೊಂದು ಕುಟುಂಬದಲ್ಲಿ ಅಭಾಸವಾಗಿ ಕಾಣಬಹುದು. ಅದು ಅವರಲ್ಲಿ ಪುರಾತನ ಕಾಲದಿಂದ ಮಾಮೊಲಿಯಾಗಿ ಯಾವುಂದೂ ಹೊಸದು ಅನಿಸದೇ ಇರುವುದಾಗಿದೆ.

ಸಂಸ್ಕೃತಿ ಅಧ್ಯಯನ ಒಂದು ಕುತೂಹಲವಾದ ವಿಚಾರವಾಗಿದೆ. ಅದು ಜಗತ್ತಿನಲ್ಲಿ ಲಕ್ಷ ಲಕ್ಷ ಜನರ ಲಕ್ಷ ಲಕ್ಷ ಸಂಸ್ಕೃತಿಗಳು ಮನುಷ್ಯನ ಉಹೆಗೂ ಅವನ ಮೀತಿಗೂ ನಿಲುಕದಾಗಿದೆ.

ತಾನು ಬದುಕುವ ಬದುಕೇ ಮನುಷ್ಯನಿಗೆ ತನ್ನ ಜೀವನ ಅನುಕೂಲಕ್ಕೆ ಅನುಗುಣವಾಗಿ ತನ್ನ ರೀತಿ ನೀತಿ ಪದ್ಧತಿಗಳನ್ನು ತನ್ನ ಏಳ್ಗೆ ಬಾಳ್ಗೆಗಾಗಿ ಅನುಸರಿಸಿಕೊಂಡು ಹೋಗುವನು.



ನಮ್ಮ ಪದ್ಧತಿಗೇ ವಿರುದ್ಧವಾಗಿ ಇನ್ನೊಬ್ಬರದೂ ಇದ್ದರೇ ನಮಗೆ ಅಲ್ಲಿ ಒಂದು ಕ್ಷಣವೂ ಇರಲಾಗುವುದಿಲ್ಲ. ಆಗ ಅನ್ನುವ ಮೊದಲ ಮಾತೇ ಅವರ ಕಲ್ಚರ್ ನಮ್ಮ ಕಲ್ಚರ್ ಬಿನ್ನ ಅಂದು ಸುಮ್ಮನಾಗುತ್ತೇವೆ. ಅವರಂತೆ ನಾವು ನಮ್ಮ ಸಂಸ್ಕಾರವನ್ನು ಬದಲಿಸಿಕೊಳ್ಳಲು ಆಗುವುದಿಲ್ಲ. ನಾವು ಎಷ್ಟೇ ಓದಿ ತಿಳಿದುಕೊಂಡರು ನಮ್ಮ ಹಿರಿಯರಿಂದ ಬಳುವಳಿಯಾಗಿ ನಮಗೆ ಬಂದಿರುವ ನಮ್ಮ ಪದ್ಧತಿಗಳನ್ನು ಬಿಟ್ಟುಕೊಡಲು ಆಗುವುದಿಲ್ಲ.

ಇದು ಧರ್ಮ, ದೇವರು, ಅನುಸರಿಸುವ ನಡಾವಳಿಗಳು ಪ್ರತಿಯೊಂದು ಒಂದಕ್ಕೊಂದು ತಳಕು ಹಾಕಿಕೊಂಡು ಒಂದು ಭವ್ಯವಾದ ಶ್ರೀಮಂತ ಸಂಪನ್ನ ಸಂಸ್ಕೃತಿಗೆ ಅಡಿಪಾಯವಾಗಿರುತ್ತದೆ. ಪ್ರತಿಯೊಬ್ಬರು ಒಂದೇ ಅನಿಸಿದರೂ ಸಹ ಇದು ಒಂದೇಯಾಗಿ ಇಲ್ಲ! ಅಲ್ಲಿಯೇ ಇರುವುದು ಮನುಷ್ಯನ ಅವನ ಹುಡುಕಾಟದ ಯಾವುದೊ ಒಂದು ಪವಾಡದಂತೆ ಕಾಣಿಸುವುದು.

ಇದೊಂತೂ ಸತ್ಯ! ಭಾರತ ಹೊರದೇಶದ ಜಾಗದಲ್ಲಿ ನಿಂತು ನೋಡಿದರೇ ಅಲ್ಲಿರುವ ಬೇರೆ ಬೇರೆ ಲಕ್ಷ ಲಕ್ಷ ವಿಭಿನ್ನ ಸಂಸ್ಕೃತಿ ಪದ್ಧತಿಗಳೆಲ್ಲಾ ಒಂದೇ ಅನಿಸುತ್ತದೆ. ಹೊರದೇಶದ ಆ ಪದ್ಧತಿ ನಡಾವಳಿಗಳು ನಮಗಂತೂ ಒಂದು ಕ್ಷಣ ಎಲ್ಲಾ ಹೊಸದು ಹೊಸದು ಅನಿಸುತ್ತದೆ. ಆ ಜನಗಳು ನಮ್ಮನ್ನು ಹೊರಗಿನವರಂತೆ ನೋಡುತ್ತಾರೆ! ನಾವುಗಳು ಅವರನ್ನು ಅಪರಿಚಿತರಂತೆ ನೊಡುತ್ತೇವೆ. ಅವರ ವೇಷ, ಭೋಷಣ, ಊಟ, ಪಾಠ ಪ್ರತಿಯೊಂದು ನಮಗೆ ಅಜೀರ್ಣವಾಗಿ ಕಾಣುತ್ತದೆ. ಅವರಿಗು ನಮ್ಮನ್ನ ಕಂಡರೇ ಹೀಗೆ ಅನಿಸುತ್ತದೆ. ಮನುಷ್ಯರೆಲ್ಲಾ ಒಂದೇ ಅನಿಸಿದರೂ ಅದು ಒಂದೇ ಅನಿಸುವುದಿಲ್ಲ!

ಎಷ್ಟೊಂದು ವಿಚಿತ್ರ ಅನಿಸಿದರೂ ಅದು ಸತ್ಯ! ಮನುಷ್ಯ ಕೇವಲ ಒಂದು ಪ್ರಾಣಿಯಲ್ಲ ಮತ್ತು ಮನುಷ್ಯನಲ್ಲ! ಅವನ ವ್ಯಕ್ತಿತ್ವ ಅವನ ಗುರುತು ಅವನ ಸಂಸ್ಕೃತಿಯನ್ನು ಹೊತ್ತಿಕೊಂಡು ಒಬ್ಬ ಸಂಸ್ಕೃತಿಯ ಒಡೆಯನಾಗಿ ಕಾಣುತ್ತಾನೆ. ಅವನು ಮಾತಾನಾಡುವ ಭಾಷೆಯಿಂದ ಹಿಡಿದು ಅವನ ವ್ಯಕ್ತಿತ್ವದವರೆಗೂ ಅವನು ವಾಸಿಸುವ ಜಾಗ, ರಾಜ್ಯ, ದೇಶವನ್ನು ಪ್ರತಿಬಿಂಬಿಸುತ್ತದೆ.

ಒಬ್ಬ ವ್ಯಕ್ತಿಯನ್ನು ನೋಡಿದ ಕ್ಷಣ ಇವನು ಇಲ್ಲಿಯವನೇ ಎಂದು ಗುರುತಿಸುವುದು ಅದರಿಂದಲೇ! ಆಚಾರ ವಿಚಾರದ ಅಚ್ಚು ಅಷ್ಟರ ಮಟ್ಟಿಗೆ ವ್ಯಕ್ತಿಯ ಮೇಲೆ ಮುದ್ರೆಯನ್ನು ಹೊತ್ತಿರುತ್ತದೆ. ಅವನ ಭಾವನೆ, ಭರವಸೆಗಳ ಆಳ ಅವನು ವಾಸಿಸುವ ಮಣ್ಣಿನ ವಾಸನೆಯಲ್ಲಿರುತ್ತದೆ.

ಅವನಿಗೆ ಒಳ್ಳೆಯದಾಗಿರುವುದು ಪರಕಿಯರಾಗಿರುವ ನಮಗೆ ಕೆಟ್ಟದಾಗಿ ಕಾಣುತ್ತದೆ. ನಮಗೆ ಓ ಎಷ್ಟೊಂದು ಚೆನ್ನಾಗಿದೆ ಅನಿಸುವುದು ಅವರಿಗೆ ತುಂಬ ಅಸಹ್ಯವಾಗಿ ಕಾಣಬಹುದು. ಈ ರೀತಿಯ ಚಿಂತನೆಗೆ ಮೊಲ ನಾವು ಬೆಳೆದು ಬಂದಿರುವ ಜಾಗ ಹಾಗೂ ನಮ್ಮನ್ನು ಹೆತ್ತು ಹೊತ್ತು ಸುತ್ತುವರಿದಿರುವ ನಮ್ಮ ಸಂಸ್ಕೃತಿ.

ಸಂಸ್ಕೃತಿ ಎಷ್ಟೊಂದು ಬಲಿಷ್ಟವಾದದ್ದು ಎಂದರೇ ಅದೇ ಮನುಷ್ಯ ಅಂದರೇ ಹೀಗೆ ಎಂದು ಗೊತ್ತು ಮಾಡಿಕೊಡುವುದರಲ್ಲಿ ಇದರ ಘನತೆ ನಮ್ಮ ನಿಲುಕಿಗೆ ಸಿಲುಕದಂತಹದ್ದು. ಆದರೂ ಅದು ನಮ್ಮ ಜೊತೆಯಲ್ಲಿ ಗೊತ್ತಿಲ್ಲದ ರೀತಿಯಲ್ಲಿ ಜೊತೆಯಲ್ಲಿಯೇ ಸಾಗುತ್ತದೆ.

ಅದು ನಾವು ಮಾಡುವ ಕೆಲಸ, ಉಡುವ ಉಡುಪು, ತಿನ್ನುವ ಆಹಾರ, ಕುಡಿಯುವ ಪಾನಿಯಗಳು, ಮಾತನಾಡುವ ಶೈಲಿ ಭಾಷೇ ಹೀಗೆ ಪ್ರತಿಯೊಂದರ ಮೇಲೂ ತನ್ನ ಪ್ರಭಾವವನ್ನು ಅಚ್ಚಾಗಿ ಇಟ್ಟಿರುತ್ತದೆ.

ಸಾಮಾನ್ಯ ಜನಕ್ಕೆ ಕೇವಲ ಮಾತಿನ ಸಂಸ್ಕೃತಿಯಾಗಿದ್ದರೇ ಸಮಾಜಿಕ ಚಿಂತಕರಿಗೆ ಅದು ನೀಡುವ ವಿಶಾಲವಾದ ತಿಳುವಳಿಕೆ ಅದನ್ನು ಅಧ್ಯಯನ ಮಾಡಿದವರಿಗೇ ತಿಳಿಯುವುದು.

ಗೊತ್ತಾ ಆಂದ್ರದಲ್ಲಿ ತೆಲಂಗಾಣ ಪ್ರಾಂತ್ಯದಲ್ಲಿ ವಾಸಿಸುವ ಮಂದಿಗೆ ಮನೆಗೆ ಮೊದಲು ಆಗಮಿಸಿದಾಗ ನೀರಿಗೆ ಬದಲಾಗಿ ಕುಡಿಯಲು ಮಧ್ಯವನ್ನು ಕೊಡುವುದು ಅವರ ಆಚಾರ. ಅದು ನಮ್ಮ ಕರ್ನಾಟಕದಲ್ಲಿ ಹೇಗೆ ಕಾಣಬಹುದು ಊಹಿಸಿ? ಒಂದೊಂದು ಜಾತಿ ಜಾಗದಲ್ಲೂ ವಿಭಿನ್ನ ವಿಭಿನ್ನವಾದ ಈ ರೀತಿಯ ಚಿಕ್ಕ ಚಿಕ್ಕ ವಿಚಾರಗಳೇ ನಮ್ಮ ನೆಲದ ವಾಸನೆಯನ್ನು ಉಹಿಸಲು ಅಸಧ್ಯಾವದಷ್ಟು ಶ್ರಿಮಂತಗೊಳಿಸಿರುವುದು.

ಭಾರತವಂತೋ ಒಂದೊಂದು ಮೈಲಿಗೂ ಒಂದೊಂದು ಪದ್ಧತಿಯನ್ನು ಕಾಣಬಹುದು! ಅದು ವಿಶಾಲ ಪುಟ್ಟ ಸಂಸ್ಕೃತಿಗಳ ಭವ್ಯ ಮಂಡಲವಾಗಿದೆ. ಯಾವೊಂದು ದೇಶದಲ್ಲೂ ಈ ರೀತಿಯ ಅಧ್ಯಯನ ಯೋಗ್ಯವಾದ ರಿಚ್ ಆದ ಕಲ್ಚರ್ ಕಾಣಲಾರೇವು. ವ್ಯಕ್ತಿಯ ಹುಟ್ಟಿನಿಂದ ಅವನ ಯೌವನ, ಮುಪ್ಪು ಅಂತಿಮ ಕಾಲದವರೆಗೂ ಅವನ ಪ್ರತಿಯೊಂದು ನಡೆಗೂ  ಒಂದೊಂದು ಬಣ್ಣ ಬಣ್ಣವಾದ ಪದ್ಧತಿ ಉಂಟು ಅದು ಜಗತ್ತಿನ ಯಾವೊಂದು ದೇಶದಲ್ಲೂ ಕಾಣಲು ಸಾಧ್ಯವಿಲ್ಲ.

ಅದಕ್ಕೆ ನಾವು ಹುಟ್ಟಿರುವ ನಮ್ಮ ಭಾರತಾಂಭೆಯ ಮಡಿಲಿಗೆ ಋಣಿಯಾಗಿರದಿದ್ದರೇ ಕೃತ‘ಘ್ನರಾದಂತೆ!

ಏನಂತೀರಾ?