ಮಂಗಳವಾರ, ಸೆಪ್ಟೆಂಬರ್ 25, 2012

ಬಾಯಿ ಚಪಲ


ಮನುಷ್ಯನಿಗೆ ಮಾತ್ರ ಗೊತ್ತಿರುವ ಒಂದೇ ಒಂದು ವಿದ್ಯೆ ಅಂದರೆ ಅದು ಬೇರೆಯವರನ್ನು ಹಾಡಿಕೊಳ್ಳುವುದು.

ಯಾವೊಂದು ಪ್ರಾಣಿಯು ತನ್ನ ಜೊತೆಯವರ ಬಗ್ಗೆ ಕೆಟ್ಟದಾಗಿ ಹಾಡಿಕೊಳ್ಳುವುದಿಲ್ಲ.

ಅಂಥ ಸಂದರ್ಭ ಬಂದರೇ ಎದುಬದುರಾಗಿ ಕಾದಾಡುತ್ತವೆ ಮಾತ್ರ. ಆದರೆ ಈ ಮನುಷ್ಯ ಪ್ರಾಣಿ ಎದುರಿಗೆ ಹೊರಾಡದೆ ಬೆನ್ನಿನ ಹಿಂದೆಯೇ ತನ್ನ ಶತ್ರು ಮಿತ್ರರ ಬಗ್ಗೆ ಮಾತನಾಡುವುದು, ಹೀಯಾಳಿಸುವುದು, ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನಾವು ಕಾಣಬಹುದು.

ಇದಕ್ಕೆ ಕಾರಣ ಮನುಷ್ಯ ಬೇರೆಯವರಿಗಿಂತ ತುಂಬ ಬುದ್ಧಿವಂತನಿರಬಹುದೇನೋ. ಇವನು ಯೋಚಿಸುವಷ್ಟು ಬೇರೆ ಯಾವ ಜೀವಿಯು ಯೋಚಿಸಲಾರದು ಅಲ್ಲವಾ?

ನಮ್ಮ ನಮ್ಮ ಜೊತೆಯಲ್ಲಿಯೇ ಬದುಕುವವರ ಬಗ್ಗೆ ಕಥೆ ಕಟ್ಟಿ ಮಾತನಾಡುವುದು ಎಷ್ಟೊಂದು ಕೆಟ್ಟತನವೆಂದರೇ.. ಹೀಗೆ ಅವರಿವರ ಬಾಯಿ ಮಾತಿಗೆ ಬಲಿಪಶುವಾದ ವ್ಯಕ್ತಿಗಳ ಮನೊಸ್ಥಿತಿ ದೇವರಿಗೆ ಪ್ರೀತಿ.

ಯಾರಾದರೂ ಹೊಸಬರು ನಮ್ಮ ನಮ್ಮ ಅಕ್ಕಪಕ್ಕ ಸೇರಿಕೊಂಡರುಅಂದರೇ ಮುಗಿಯಿತು. ಸುಖಾ ಸುಮ್ಮನೇ ಅವರ ವೈಕ್ತಿಕ ವಿಷಯಗಳನ್ನು, ಅವರ ಗತ ಸ್ಥಳ, ವ್ಯಕ್ತಿ, ಕುಟುಂಬ ಇತ್ಯಾದಿ ಪ್ರತಿಯೊಂದನ್ನು ಒಂದು ಕಿವಿಯಿಂದ ಇನ್ನೊಂದು ಕಿವಿಗೆ ವರ್ಗಾವಣೆ ಮಾಡಿಕೊಂಡು ಎಷ್ಟರ ಮಟ್ಟಿಗೆ ವಿಷಯಗಳನ್ನು ಕಲೆ ಹಾಕಿರುತ್ತಾವೆ ಎಂದರೇ ಯಾವುದೇ ನ್ಯೂಸ್ ಎಜೆನ್ಸಿಗೂ ಸಾಧ್ಯವಾಗುವುದಿಲ್ಲ. ಅಷ್ಟೊಂದು ಮಾಹಿತಿಗಳನ್ನು ಕೇವಲ ಅವರಿವರ ಬಾಯಿಯಿಂದಲೇ ಸಂಪಾಧಿಸಿಬಿಟ್ಟಿರುತ್ತಾರೆ.

ಇದು ಇನ್ನೂ ಯಾವುದಾದರೂ ಹೊಸ ಹುಡುಗಿ ಎಲ್ಲಿಯೇ ಆಗಲಿ ಒಂದು ಚಿಕ್ಕ ಗುಂಪು,ಜಾಗ,ಕೆಲಸ ಮಾಡುವ ಆಫೀಸ್ ಇಂಥ ಕಡೆ ಸೇರಿದರೆಂದರೇ ಮುಗಿದೇ ಹೊಯಿತು. ಪ್ರತಿಯೊಂದನ್ನೂ ಪೊಲೀಸ್ ತನಿಖೆಯ ರೀತಿಯಲ್ಲಿ ಹೌದಾ? ಗೊತ್ತಾ? ಹೀಗಂತೇ! ಕಾಲ ಕೆಟ್ಟು ಹೋಯಿತು. ಅವರೀವರ ಮಾತು ಯಾಕೆ ಬಿಡಿ! ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ.. ಹೀಗೆ ಪ್ರತಿಯೊಬ್ಬರೂ ಆ ಹೊಸ ವ್ಯಕ್ತಿಯ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ.

ಇದು ಯಾಕೆ?

ನನಗೆ ಅನಿಸುತ್ತದೆ ಇದೊಂದು ಸಾಂಕ್ರಮಿಕ ರೋಗದ ರೀತಿಯಲ್ಲಿ ಪ್ರತಿಯೊಬ್ಬರಲ್ಲೂ ಗೊತ್ತೋ ಗೊತ್ತಿಲ್ಲದೋ ಘಟಿಸುತ್ತಿರುತ್ತದೆ. ಆ ಸಮಯಕ್ಕೆ ಒಂದು ಚಿಕ್ಕ ಟೈಂಪಾಸ್ ಅಥವಾ ಬಾಯಿ ಚಪಲದಿಂದ ಏನೋ ಒಂದು ಮಾತು ಬೇಕು. ಅದೇ ಇದಾಗಿರುತ್ತದೆ.

ಒಮ್ಮೊಮ್ಮೆ ಈ ಚಿಕ್ಕ ಚಿಕ್ಕ ಮಾತುಗಳು ತುಂಬಾನೇ ಅತಿರೇಕಕ್ಕೆ ಹೋಗಿಬಿಡುವುದು ಉಂಟು. ಈ ಮಾತುಗಳೇ ವ್ಯಕ್ತಿ ವ್ಯಕ್ತಿಗಳ ಅವಮಾನಕ್ಕೋ ಅಥವಾ ಜೀವಕ್ಕೂ ಅಪಾಯವಾಗುವ ಸಂದರ್ಭಗಳು ಬರುವುದುಂಟು.

ಮುಖ್ಯವಾಗಿ ಈ ಮಸಾಲೆ ಮಾತುಗಳು ಮಾತನಾಡುವುದಕ್ಕೆ ಮತ್ತು ಕೇಳುವುದಕ್ಕೆ ತುಂಬಾನೆ ಖುಷಿಯಾಗುತ್ತಿರುತ್ತದೆ. ಯಾಕೆಂದರೇ ಇದು ನಮ್ಮಗಳಿಗೆ ಸಂಬಂಧಿಸಿದ ಮಾತಾಗಿರುವುದಿಲ್ಲವಲ್ಲಾ? ಅದು ಬೇರೆಯವರದಾಗಿರುತ್ತದೆ. ಒಮ್ಮೊಮ್ಮೆ ನಮ್ಮಗಳಿಗೆ ತುಂಬಾನೆ ಕುತೂಹಲವಿರುತ್ತದೆ. ಆ ಅಪರಿಚಿತ ವ್ಯಕ್ತಿಯ ಬಗ್ಗೆ ಏನಾದರೂ ತಿಳಿದುಕೊಳ್ಳಬೇಕು. ಚಿಕ್ಕ ಚಿಕ್ಕ ವಿಷಯಗಳನ್ನು ಈ ರೀತಿಯ ಲೂಸ್ ಟಾಕ್ ಮೂಲಕ ವಿಷಯ ಸಂಪಾಧನೆಯನ್ನು ಮಾಡಿಕೊಳ್ಳುವುದಕ್ಕೊಸ್ಕರ ಕೇಳುಗರು ಮಾತನಾಡುವವರನ್ನು ಪ್ರೋತ್ಸಾಹಿಸುತ್ತಾರೆ. ಕೇಳುಗರ ಆಸೆಯೆ ಮಾತನಾಡುವವರನ್ನು ಉತ್ತೇಜಿಸುತ್ತದೆ. ಹಾಗೆ ಹೀಗೆ ಎನ್ನುತ್ತಾ ವ್ಯಕ್ತಿಯ ತುಂಬ ಗೌಪ್ಯ ವಿಷಯಗಳ ಬಗ್ಗೆ, ಆ ವ್ಯಕ್ತಿಗೆ ಇಷ್ಟವಿರದ ವಿಷಯಗಳ ಬಗ್ಗೆ ಹಿಂದೆ ಮುಂದೆ ಮಾತನಾಡಿಕೊಳ್ಳುವುದಕ್ಕೆ ಶುರು ಮಾಡಿರುತ್ತೇವೆ.

ಈ ಮಾತುಗಳು ಅತಿ ಹೆಚ್ಚಾಗಿ ಆಗುವುದು ಎಂದರೇ ತುಂಬಾನೇ ಸುಂದರವಾಗಿರುವ ಹುಡುಗಿಯರು ಕಣ್ಣಿಗೆ ಬಿದ್ದರೇ ಮುಗಿಯಿತು ಹುಡುಗಾಟದ ಮಾತುಕತೆ ಗಾಳಿ ಸುದ್ಧಿಯಾಗಿ ಏನೇನೂ ರೀತಿಯಲ್ಲಿ ಎಲ್ಲಾರ ಬಾಯಿಯಲ್ಲಿ ಹರಿದಾಡಿ, ಸಾವಿರ ಸಲ ಹೇಳಿದ ಸುಳ್ಳು ನಿಜವಾಗುವ ರೀತಿಯಲ್ಲಿ ಒಂದು ಕಡೆಯಿಂದ ಆ ಹುಡುಗಿಯ ಬಗ್ಗೆ ಒಂದು ವಿಚಿತ್ರವಾದ ಇಮೇಜ್ ಬಿಲ್ಡ್ ಮಾಡಿಬಿಟ್ಟಿರುತ್ತಾರೆ.

ಅದು ನಿಜವಾ, ಸುಳ್ಳಾ? ಸತ್ಯವಾಗಿ ಮಾತನಾಡುವವ ಯಾರೊಬ್ಬರಿಗೂ ಗೊತ್ತಿರುವುದಿಲ್ಲ. ಎಲ್ಲರೂ ಹುಬ್ಬೇರುವಂತೆ ಕೇಳುತ್ತಾ ಕೇಳುತ್ತಾ ಇದ್ದರೂ ಇರಬಹುದು ಎಂದುಕೊಂಡಿರುತ್ತಾರೆ. ಯಾಕೆಂದರೇ ಆ ಹುಡುಗಿಯನ್ನು ಮುಖಾತಃ ಈ ಕೇಳುಗರು ಎಂದು ಮಾತನಾಡಿಸಿರುವುದಿಲ್ಲ. ಅವಳ/ನ ಪರಿಚಯವು ಇರುವುದಿಲ್ಲ. ಕೇವಲ ದೂರದಿಂದ ನೋಡುತ್ತಾ ನೋಡುತ್ತಲೆ ಈ ಗೆಳೆಯರ ಮಾತುಗಳನ್ನು ಆ ವ್ಯಕ್ತಿಯ ಜೊತೆಗೆ ಪೋಣಿಸಿಕೊಂಡಿರುತ್ತಾರೆ .

ಈ ರೀತಿಯ  ಮಾತುಗಳು ಆ ಹುಡುಗಿಯ ಕಿವಿಗೆ ಏನಾದರೂ ಬಿದ್ದರೇ ದೇವರೇ ಕಾಪಾಡಬೇಕು.


ಅವರ ಪಾಡಿಗೆ ಅವರಿದ್ದರೂ ಈ ರೀತಿಯ ಮಾತುಗಳು ಪ್ರತಿಯೊಬ್ಬರ ಮೇಲು ಕೇಲವು ಸಮಯ ಬಂದೇ ಬಂದಿರುತ್ತವೆ. ಒಬ್ಬೊಬ್ಬರೂ ತುಂಬಾ ಸಿರೀಯಸ್ ಆಗಿ ತೆಗೆದುಕೊಂಡಿರುತ್ತಾರೆ ಮತ್ತೊಬ್ಬರೂ ಕಿವಿಯ ಮೇಲೆ ಹಾಕಿಕೊಳ್ಳದೆ ಸುಮ್ಮನೇ ಇಗ್ನೊರ್ ಮಾಡಿಬಿಡುತ್ತಾರೆ. ಅದರೇ ಪ್ರತಿಯೊಬ್ಬರೂ ಅದೇ ರೀತಿಯಲ್ಲಿ ಇರುತ್ತಾರೆ ಎಂದುಕೊಳ್ಳಬಾರದು.

ಮನುಷ್ಯನಿಗೆ ಸಮಾಜಿಕ ವಿಷಯಗಳಿಗಿಂತ ಈ ರೀತಿಯ ವ್ಯಕ್ತಿಯ ವೈಕ್ತಿಕ ವಿಷಯಗಳೇ ತುಂಬಾನೇ ರಸವತ್ತಾಗಿರುತ್ತವೆ.

ನೀವುಗಳು ಗಮನಿಸಿರಬಹುದು ಕೇಲವೊಂದು ಪತ್ರಿಕೆಗಳು ಪ್ರಸಿದ್ಧ ವ್ಯಕ್ತಿಗಳ ವೈಕ್ತಿಕ ವಿಷಯಗಳನ್ನು, ನಾಲ್ಕು ಗೋಡೆಯ ಮಧ್ಯದಲ್ಲಿನ ವಿಷಯಗಳನ್ನು ಸಾರ್ವಜನಿಕರಿಗೆ ಸುದ್ಧಿ ಮತ್ತು ವರದಿಯಾಗಿ ಮಸಾಲೆ ಭರಿತವಾಗಿ ಊಣಬಡಿಸುತ್ತವೆ. ಇಲ್ಲಿ ಇರುವುದು ಕೇವಲ ಅದೇ ಹುಡುಗಾಟದ ಬೇರೊಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳುವ ಮನಸ್ಸು ಮಾತ್ರ. ಈ ರೀತಿಯಲ್ಲಿ ತಮ್ಮ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಹಪಾಪಿ.

ಇಂಥ ಗೀಳನ್ನು ಚಿಕ್ಕದಾಗಿದ್ದಲೇ ಚಿವುಟಿಯಾಕಬೇಕು. ಸುಮ್ಮನೇ ಬೇರೆಯವನ್ನು ಹಾಡಿಕೊಳ್ಳುವುದು. ಅವರ ಹಿಂದೆ ಮುಂದೆ ಬಾಯಿಗೆ ಬಂದಂತೆ ಗುಸು ಗುಸು ಪಿಸ ಪಿಸ ಎನ್ನದೇ ಇರುವ ಯಥಾಸ್ಥಿತಿಯನ್ನು ಅರ್ಥ ಮಾಡಿಕೊಂಡು ಆ ವ್ಯಕ್ತಿಯ ಒಳ್ಳೆಯತನಗಳನ್ನು ಅರಿಯುವಂತಾಗಿರಬೇಕು. ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿರುತ್ತಾರೆ. ಕೇಲವೊಂದು ಸಮಯದಲ್ಲಿ ಯಾವುದೋ ಕೆಟ್ಟ ಗಳಿಗೆಯಲ್ಲಿ ಕೆಲವೊಂದು ಚಿಕ್ಕ ತಪ್ಪುಗಳು ಜರುಗಿದ್ದರೂ ಅವನ್ನೇ ದೊಡ್ಡದು ಮಾಡಿಕೊಂಡು ಆ ವ್ಯಕ್ತಿಯ ಬಗ್ಗೆ ಸುದ್ಧಿ ಮಾಡಬಾರದು.

ಇಂದು ನಾವು ಬೇರೊಬ್ಬರ ಬಗ್ಗೆ ಮಾತನಾಡುವ ಮಾತು ನಮ್ಮ ಬಗ್ಗೆ ಮತ್ತೊಬ್ಬರ ಮಾತಾಗಬಾರದು ಅಲ್ಲವಾ?

ಗುರುವಾರ, ಸೆಪ್ಟೆಂಬರ್ 20, 2012

ಇದು ಆಗೋ ಮಾತಲ್ಲಾ


ನಮ್ಮಿಂದ ಏನೂ  ಮಾಡಲು ಸಾಧ್ಯವಾಗದ ಅಸಹಾಯಕತೆಯ ಸಮಯದಲ್ಲಿಯೇ ಅನಿಸುತ್ತದೆ. ನಾವುಗಳು ನಮ್ಮ ಸುತ್ತಲಿನವರ ಜೊತೆಯಲ್ಲಿ ಆ ವಿಷಯದ ಬಗ್ಗೆ ತುಂಬಾನೆ ಹೆಚ್ಚು ಮಾತನ್ನಾಡುತ್ತೇವೆ. ಆ ಸಮಯಕ್ಕೆ ನಾವುಗಳು ಏನನ್ನೂ ಮಾಡದವರಾಗಿರುತ್ತೇವೆ. ಅದರ ನಿಜ ರೂಪವೇ ನಮ್ಮಿಂದ ಹೀಗೆ ಪುಂಕಾನು ಪುಂಕವಾಗಿ ಬರುವ ಮಾತುಗಳು.

ಏನಾದರೂ ಆಗಿರಬಹುದು. ನಮ್ಮಿಂದ ಆಗುವಂತಹ ನಮಗೆ ನಿಲುಕುವ ಕಾರ್ಯಗಳ ಬಗ್ಗೆ  ಹೆಚ್ಚಿಗೆ ಬೇರೊಬ್ಬರ ಜೊತೆಯಲ್ಲಿ ಯಾವತ್ತಿಗೂ ಹೇಳಿಕೊಂಡಿರುವುದೇ ಇಲ್ಲ. ಅಂಥ ಒಂದು ಕಾರ್ಯಗಳನ್ನು ಮೂಕವಾಗಿ ಮುಗಿಸಿರುತ್ತೇವೆ. ಯಾಕೆಂದರೇ ಅಲ್ಲಿ ಮಾತಿಗಿಂತ ಮಾಡುವ ಕೆಲಸ ಮುಖ್ಯವಾಗಿರುತ್ತದೆ.

ಆದಕ್ಕೆ ಇರಬೇಕು ನಮ್ಮಿಂದ ಬದಲಾಯಿಸಲಾರದಂತಹ ವ್ಯವಸ್ಥೆಯ ಬಗ್ಗೆ ನಾವುಗಳು ಕೊಡುವ ಲೆಕ್ಚರ್ ಗಳ ಬಗ್ಗೆ ಲೆಕ್ಕಾನೆ ಇರುವುದಿಲ್ಲ.

ಯಾರಾದರೂ ನಾವಾಡುವ ಮಾತುಗಳನ್ನು ಕೇಳಿಸಿಕೊಂಡುಬಿಟ್ಟರೆ ನಿಜವಾಗಿಯೂ ನಂಬಿಬಿಡುತ್ತಾರೆ. ಅದು ಕೇವಲ ಮಾತು ಎಂಬುದನ್ನು ದೇವರಾಣೆಗೂ ಯಾರೂ ನಂಬುವುದಿಲ್ಲ. ಆದರೇ ಅದೇ ಮಾತುಗಳು ಸುಮಾರು ದಿನಗಳಾದ ಮೇಲೆ ಪುನಾರವರ್ತನೆಗೊಂಡರೇ ಕೇಳುಗರು ಮೂಗು ಮುರಿಯುತ್ತಾರೆ!

ಇದಕ್ಕೆ ಪೂರಕವಾಗಿ ಯಾರದರೂ ನಮಗೆ ಸರಿ ಹೊಂದುವ ಮಿತ್ರಮಂಡಳಿ ಸಿಕ್ಕಿಬಿಟ್ಟರೆ ಮುಗಿಯೇ ಹೊಯ್ತು. ನಾವಾಡುವ ಪ್ರತಿ ಮಾತಿಗೆ ಒಂದು ಚೂರು ಪ್ರೋತ್ಸಾಹ ಸಿಕ್ಕಿದರೇ ಕೇಳುವುದೇ ಬೇಡ.

ಹಳ್ಳಿಯಿಂದ ದಿಲ್ಲಿಯವರೆಗೆ ಚಿಕ್ಕ ವಿಷಯದಿಂದ ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಎಲ್ಲ ಗೊತ್ತಿರುವ ಙ್ಞಾನವನ್ನು ಉಪಯೋಗಿಸಿಕೊಂಡು ಜಾಡಿಸಿಬಿಟ್ಟಿರುತ್ತೇವೆ.

ಏಯ್ ನಾನು ಆ ಜಾಗದಲ್ಲಿರಬೇಕಾಗಿತ್ತು. ನಾನು ಹೀಗೆ ಮಾಡುತ್ತಿದ್ದೆ. ಆ ಕೆಲಸ ಹೇಗೆ ಇರಬೇಕಾಗಿತ್ತು ಎಂಬುದನ್ನು ತೋರಿಸುತ್ತಿದ್ದೆ. ಈಗ ಇರುವ ಈ ಜನಗಳು ಬರಿ ವೇಸ್ಟ್ ಏನ್ ಮಾಡುವುದು ಹಲ್ಲು ಇದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲು ಇಲ್ಲ!

ನಮ್ಮ ದೇಶಕ್ಕೆ ಭವಿಷ್ಯವಿಲ್ಲ ಕಣ್ರೀ. ನಮ್ಮ ರಾಜಕೀಯ ಎಂದೆಂದಿಗೂ ಬದಲಾಗುವುದಿಲ್ಲ. ಈ ನನ್ನ ಮಕ್ಕಳು ನಮ್ಮ ದೇಶವನ್ನು ಕೊಳ್ಳೆ ಹೊಡೆಯಲೆಂದೇ ಅಧಿಕಾರ ಹಿಡಿದಿದ್ದಾರೆ... ಯಾವಾ ಅಣ್ಣಾ ಹಜಾರೆ ಬಂದರೂ ಇವರುಗಳು ಮಾಡುತ್ತಿರುವ ಭ್ರಷ್ಟಾಚಾರವನ್ನು ಎಂದಿಗೂ ನಿಲ್ಲಿಸಲು ಸಾಧ್ಯವಿಲ್ಲ.

ನಮ್ಮ ದೇಶದ ಅಧಿಕಾರ ನವ ಯುವಕರ ಕೈಗೆ ಸಿಗಬೇಕು. ಆಗ ನೋಡಿ ಏನೇನ್ ಮಾಡುತ್ತಾರೆ. ಆ ಸಮಯ ಬರಬೇಕು. ಕಟ್ಟ ಕಡೆಯ ಸಾಮಾನ್ಯ ಮನುಷ್ಯನ ಕಣ್ಣೀರನ್ನು ಒರೆಸುವ ಕೈ ಬರಬೇಕು. ಆಗ ಮಾತ್ರ ನಾವು ಮುಂದುವರೆಯಲು ಸಾಧ್ಯ ಇತ್ಯಾದಿ ಇತ್ಯಾದಿ ದೇಶಾಭಿಮಾನದ ಮಾತುಗಳು.

ಇದರಲ್ಲಿ ಒಂದೇರಡು ಸತ್ಯವಾದ ಮಾತುಗಳಾಗಿರಬಹುದು. ಯಾಕೆಂದರೇ ಅವನು ನಿತ್ಯ ನೋಡುವ ಸಮಾಜದಿಂದ ಅದನ್ನು ಹಸಿ ಹಸಿಯಾಗಿ ತೆಗೆದುಕೊಂಡಿರುತ್ತಾನೆ. ಅದನ್ನು ಆ ರೀತಿಯಲ್ಲಿ ತನ್ನ ಬಾಯಿಂದ ಕಾರಿಕೊಳ್ಳದೇ ಬೇರೆ ದಾರಿಯೇ ಇಲ್ಲ. ಯಾಕೆಂದರೇ ಈ ವ್ಯಕ್ತಿ ಅಷ್ಟರ ಮಟ್ಟಿಗೆ ಅಸಹಾಯಕ.

ತನ್ನಿಂದ ವ್ಯವಸ್ಥೆಯನ್ನು ಬದಲಾಯಿಸಲಾಗದು ಎಂಬ ಒಂದು ಚಿಕ್ಕ ನೆರಳು ಅವನ ಜೊತೆಯಲ್ಲಿ ಅಂಟಿಕೊಂಡುಬಿಟ್ಟಿರುತ್ತದೆ. ಆ ಒಂದು ಸತ್ಯವನ್ನು ಜೀರ್ಣಿಸಿಕೊಳ್ಳಲಾರದ ಮಟ್ಟಿಗೆ ಈ ರೀತಿಯ ಆದರ್ಶದ ಮತ್ತು ಧೈರ್ಯದ ಮಾತು ತನ್ನ ಜೊತೆಯವರ ಜೊತೆಯಲ್ಲಿ ಹೇಳಿಕೊಂಡಿರುತ್ತಾನೆ.

ಇವನಿಗಂತೂ ಮುಂಜಾನೆ ಎದ್ದರೇ ಯಾವೊಂದು ಚಿಕ್ಕ ಅಧಿಕಾರವು ಸಿಗಲಾರದು. ಅಷ್ಟರ ಮಟ್ಟಿಗೆ ಆ ಒಂದು ಸತ್ಯ ತನಗೆ ತಾನೆ ಕಾಣುತ್ತಿರುತ್ತದೆ.

ನನಗೆ ಎನಿಸುತ್ತದೆ ಮದ್ಯಮ ವರ್ಗದ ಜನರಲ್ಲಿ ಈ ರೀತಿಯಾಗಿ ಸಮಾಜದ ಬಗ್ಗೆ ಸಮಯ ಸಿಕ್ಕಾಗಲೆಲ್ಲ ತನ್ನ ಕನಸನ್ನು ಬಿತ್ತರಿಸುತ್ತಿರುತ್ತಾನೆ. ಇದೆ ಅವನಿಗೆ ಒಂದು ನೆಮ್ಮದಿ. ಅಷ್ಟರಮಟ್ಟಿಗೆ ಏನಾದರೂ ಮಾಡಲೇಬೇಕು ಎಂಬ ಕಾತುರತೆಯನ್ನು ತನ್ನ ತಲೆಯ ತುಂಬ ತುಂಬಿಕೊಂಡಿರುತ್ತಾನೆ.

ಇದಕ್ಕೆ ಪೂರಕವಾಗಿ ಅವನು ಓದುವ ಕಥೆಯ ಕಥಾ ವ್ಯಕ್ತಿಗಳು, ನೋಡುವ ಸಿನಿಮಾದ ನಾಯಕನ ನಡಾವಳಿ ಈ ಎಲ್ಲಾ ಕಲ್ಪನೆಯ ಪ್ಯಾಂಟಸಿ ತುಂಬ ಮೆಚ್ಚುಗೆಯಾಗುತ್ತಿರುತ್ತದೆ. ತನ್ನಿಂದ ಮಾಡಲಾರದ ಕೆಲಸಗಳು. ಆ ಧೈರ್ಯ, ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವ ಗಡಸುತನ ಪ್ರತಿಯೊಂದನ್ನು ತಾನೇ ಮಾಡುತ್ತಿದ್ದೇನೆ ಎಂಬ ರೀತಿಯಲ್ಲಿ ಖುಷಿಪಡುತ್ತಾನೆ.

ಈ ರೀತಿಯ ಭಾವನೆಯ ತಳಮಳವನ್ನು ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ತಮ್ಮ ತರುಣಾವಸ್ಥೆಯಲ್ಲಿ ಅನುಭವಿಸಿಯೇ ಇರುತ್ತಾರೆ.

ನನಗೆ ಅನಿಸುತ್ತದೆ ಅಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಒಂದು ರೀತಿಯಲ್ಲಿ ಅ ಸಂಸ್ಕಾರವಾಗಿರುತ್ತದೆ. ಒಳ್ಳೆಯತನ ಎಂಬುವುದು ನಮ್ಮ ಸಂಸ್ಕೃತಿಯಲ್ಲಿಯೇ ನಮಗೆ ಗೊತ್ತಾಗದ ರೀತಿಯಲ್ಲಿ ಎಲ್ಲರಲ್ಲೂ ನಿಂತಿರುತ್ತದೆ. ಅದರ ಪರಿಣಾಮವೇ ತನ್ನ ಬಗ್ಗೆ ಅಲ್ಲದೆ ಬೇರೆಯವರ ಬಗ್ಗೆ, ತನ್ನ ಸುತ್ತಲಿನವರ ಬಗ್ಗೆ, ವ್ಯವಸ್ಥೆಯ ಬಗ್ಗೆ, ತಾನಿರುವ ದೇಶ, ರಾಜಕೀಯ, ಸರ್ಕಾರ ಮತ್ತು ಅಧಿಕಾರದ ಬಗ್ಗೆ ತಾನು ಕಂಡೊಂಡ ಒಳ್ಳೆಯತನವನ್ನು ಆಶಿಸುತ್ತಾನೆ.

ಈ ಸಂವೇದನೆ ಪ್ರತಿಯೊಬ್ಬರಲ್ಲೂ ಉದ್ಬವಿಸಿಸುತ್ತಿರುತ್ತದೆ. ಆಗ ತನಗೆ ಅನಿಸಿದ್ದನ್ನು ಹೇಳಿಕೊಳ್ಳುತ್ತಾ ಹೇಳಿಕೊಳ್ಳುತ್ತಾ ಸಮಾಧಾನಪಟ್ಟುಕೊಳ್ಳುತ್ತಾನೆ. ಅಲ್ಲಿ ಇರುವುದು ಬರೀ ಒಳ್ಳೆಯದು ಮಾತ್ರ. ಯಾವೊಂದು ಲಾಭ, ಲೋಭವಿರುವುದಿಲ್ಲ.

ಇದು ಸ್ತ್ರೀ ಸಾಮಾನ್ಯನ ಹಗಲು ಕನಸು! ಇದೂ ಎಂದಿಗೂ ಜಾರಿಬರಲಾರದಂತಹದ್ದು.


ಎಂದೋ ಓದಿದ ಆದರ್ಶ, ಎಲೋ ನೋಡಿದ ವ್ಯವಸ್ಥೆಯ ಕಲ್ಪನೆಯ ಕೂಸೆ ಇದು. ಇದರ ಹಿಡೇರಿಕೆಗಾಗಿ ನಿತ್ಯ ತನ್ನಲ್ಲಿಯೇ ತಾನು ಕೊರಗುತ್ತಿರುತ್ತಾನೆ.

ಗಮನಿಸಿ ಎಲ್ಲಾ ಮುಗಿದ ಮುದುಕರ ಮಾತುಗಳನ್ನಾ.. ಅವರು ಎಂದಿಗೂ ಇಂದಿನ ಪ್ರಸ್ತುತ ವ್ಯವಸ್ಥೆಯನ್ನು ಹಾಡಿ ಹೊಗಳುವುದಿಲ್ಲ. ಅವರನ್ನು ಕೇಳಿ ಆದರ್ಶ, ಒಳ್ಳೆಯತನ,ಬದಲಾವಣೆ ಎಂದರೇ ಅವರ ಅನುಭವದಲ್ಲಿ ಕಂಡುಕೊಂಡ ಪುರಾಣವನ್ನೇ ಬೆಚ್ಚಿಬೀಳುವಂತೆ ತೆರೆದಿಡುತ್ತಾರೆ. ಹಾಗೆಯೇ ನಮ್ಮಂತಹ ಹಗಲು ಕನಸಿನ ಹೋರಾಟವನ್ನು ಕಂಡು ಬಚ್ಚು ಬಾಯಿಯಲ್ಲಿ ನಕ್ಕುಬಿಡುತ್ತಾರೆ.

ಇದು ಆಗದು ಹೋಗದು ಬಿಡಾಪ್ಪಾ ಅಂದುಬಿಡುತ್ತಾರೆ. ಆದರೇ ನಮ್ಮ ಯುವ ಬಿಸಿ ರಕ್ತ ಕೇಳಬೇಕಲ್ಲಾ.. ಕಲ್ಲನ್ನೇ ಕುಟ್ಟಿ ಪುಡಿ ಮಾಡುವಷ್ಟು ಉತ್ಸಾಹದ ಮೂಟೆ.

ಇಂಥ ಆಸೆಯ ಮಾತುಗಳು ಕಾರ್ಯ ರೂಪಕ್ಕೆ ತರುವ ಪ್ರಯತ್ನವಾಗಬೇಕು. ಕನಸು ಕೇವಲ ಕನಸಾಗಬಾರದು. ನಿತ್ಯ ಮಾತನಾಡುವ ಟಾಪಿಕ್ ಗಳು ಕೇವಲ ಒಂದು ವಾದವಾಗಬಾರದು.

ಬದಲಾವಣೆಗೆ ಹೊಂದಿಕೊಳ್ಳುವ ಮುನ್ಸೂಚನೆ ಇದೇ ಆಗಿರಬಹುದಲ್ಲಾ?

ಮಂಗಳವಾರ, ಸೆಪ್ಟೆಂಬರ್ 11, 2012

ನೀ ನನ್ನ ಉಸಿರು!


ಹೊವಂತೆ ನೀನು ನಗುತಿರಬೇಕು..

ಹೌದು! ನೀನು ನನ್ನ ಜೊತೆಯಿರುವಷ್ಟೂ ದಿನ ನಗು ನಗುತಾ ಸಂತೋಷವಾಗಿರಬೇಕು. ಇದೆ ನನ್ನ ಮಹದಾಸೆ. ನನಗೆ ಗೊತ್ತೂ ನೀನು ಯಾವತ್ತೂ ಮೊಗಿಗೆ ಕವಣೆ ಕಟ್ಟಿಕೊಂಡು ಕೆಲಸ ಕೆಲಸ ಎಂದು ನಿನ್ನ ಮನೆಯವರಿಗಾಗಿ ದುಡಿದು ಅವರನ್ನು ಒಂದು ದಡ ಸೇರಿಸಬೇಕು ಎಂಬುದು ನಿನ್ನ  ಕನಸು. ನಾನು ನೀನು ಸೇರಿದ ಮೇಲೆ ಆ ನಿನ್ನದೆಯಾದ ನಿನ್ನ ಮನೆ ನನ್ನದು ಆಗುತ್ತದೆ. ನನ್ನ ಕಣ್ಣಾಸರೆಯಲ್ಲಿ ನಿಮ್ಮ ಕುಟುಂಬವನ್ನು ಇಬ್ಬರೂ ಒಟ್ಟಿಗೆ ನೋಡಿಕೊಳ್ಳೋಣ.

ಉಸಿರು ಉಸಿರು ಬೇರತ ಪ್ರೇಮಕ್ಕೆ ಎಲ್ಲೆ ಎಲ್ಲಿಯದೂ..?

ನಿನ್ನ ಆ ಸುದೀರ್ಘವಾದ ಪತ್ರವನ್ನು ಮತ್ತೇ ಮತ್ತೇ ಅದನ್ನೇ ಓದಿದೆ. ಎಷ್ಟು ಬಾರಿ ಓದಿದರೂ ಏನೋ ಒಂದನ್ನು ಮೀಸ್ ಮಾಡಿಕೊಳ್ಳುತ್ತಿದ್ದೇನೆ ಅನಿಸಿಬಿಟ್ಟಿತು.

ಅದು ನೀನೇ. ನೀನ್ನ ಹೆಗಲಿಗೆ ಹೆಗಲು ತಾಗಿಸಿಕೊಂಡು ಹೀಗೆ ಕುಳಿತಿರಬೇಕು ಎಂದು ಅನಿಸುತ್ತಿದೆ.

ಅಲ್ಲಾ ಕಣೇ ಇಷ್ಟರ ಮಟ್ಟಿಗೆ ನನ್ನನ್ನು ನೀನು ಅರ್ಥ ಮಾಡಿಕೊಂಡಿರುವೆಯಲ್ಲಾ ನನಗೆ ಆಶ್ಚರ್ಯವಾಗುತ್ತಿದೆ! ನೀ ನನ್ನ ಜೀವನದ ಜೊತೆಗಾತಿಯೆಂದು ಅಂದು ತೀರ್ಮಾನಿಸಿ ನಿನ್ನ ಸ್ನೇಹವನ್ನು ಸಂಪಾದಿಸಿದ್ದು ಜಗತ್ತಿನ ಯಾವ ಸಂಪತ್ತಿಗೂ ಕಮ್ಮಿ ಇಲ್ಲ ಬಿಡು!

ಗೆಳತಿ ಇದೆ ಅನಿಸುತ್ತದೆ ಪ್ರೇಮಾನುರಾಗ! ಇದೆ ಪ್ರೀತಿಯ ತುಡಿತ! ನಾನು ನೀನಾಗಿ, ನೀನು ನಾನಾಗಿ ಭಾವಿಸುವ ಸುಂದರ ಅನುಭವವೇ ಈ ಪ್ರೇಮ!

ನನಗಂತೂ ನಿನ್ನ ಮುಖವೇ ನಿತ್ಯ ಕಣ್ಣ ಮುಂದೆ ಬರುತ್ತಿದೆ. ಅಲ್ಲ ಕಣೇ ಆ ನಿನ್ನ ಮುಗ್ಧವಾದ ಮುಖದಲ್ಲಿ ಏನನ್ನೋ ಹುಡುಕುವ ಆ ನಿನ್ನ ಎರಡು ಕಣ್ಣುಗಳು.. ಆಸೆಯ ಅವಕಾಶವನ್ನೇ ಹರಸುವ ಆ ನಿನ್ನ ತುಟಿಗಳು.. ಇವುಗಳೇ ಅನಿಸುತ್ತದೆ ಈ ಹುಡುಗಿಯನ್ನು ನಂಬಬಹುದು ಎಂಬ ನನ್ನ ನಿರ್ಧಾರವನ್ನು ಅಂದು ಗಟ್ಟಿ ಮಾಡಿದ್ದು.

ಗೊತ್ತಾ ನನಗಂತೂ ನೀ ಸಿಗುವವರೆಗೂ ಅತ್ಯಂತ ಆತ್ಮೀಯರು ಎಂಬ ಗೆಳತಿಯರು ಯಾರೂ ಇರಲಿಲ್ಲ. ಎಲ್ಲಾ ಹಾಯ್, ಬಾಯ್ ಸ್ನೇಹಿತಿಯರೆ...

ಬಡ್ಡಿ ಮಗಂದು ಈ ಬದುಕು ಅಂಥ ಅವಕಾಶವನ್ನೇ ನನಗೆ ಕೊಡಲ್ಲಿಲ್ಲ!

ಸಿನಿಮಾ ಮತ್ತು ಗೆಳೆಯರಲ್ಲಿ ಸಂಭವಿಸುತ್ತಿದ್ದ ಈ ಪ್ರೀತಿ ಪ್ರೇಮ ಪ್ರಕರಣಗಳನ್ನು ಕೇಳಿ ಕೇಳಿ ನನ್ನಲ್ಲಿ ನಾನೇ ನಗುತ್ತಿದ್ದೆ. ಅಲ್ಲಾ ಈ ಎರಡುವರೆ ಅಕ್ಷರಗಳಲ್ಲಿ ಅಂಥಾ ಶಕ್ತಿಯಾದರೂ ಏನಿದೆ? ಯಾಕೆ ಈ ಜಗತ್ತು ಈ ಎರಡುವರೆ ಅಕ್ಷರಗಳ ಸುತ್ತಾನೇ ಗಿರುಕಿ ಹೊಡೆಯುತ್ತಿದೆ ಅನಿಸುತ್ತಿತ್ತು. ಅಲ್ಲಾ ಎಷ್ಟೊಂದು ಪರಿ ಅವರ ಆ ತಳಮಳ? ಅದಕ್ಕಾಗಿಯೇ ನಾವು ಜೀವಿಸಿದ್ದೀವಿ ಎಂಬಂತೆ ಕಾಲೇಜು ಪಾಠಗಳಿಗೆ ಗೋಲಿ ಮಾರ್ ಹೊಡೆದು ತಪಸ್ಸಿನೋಪಾದಿಯಲ್ಲಿ ಕ್ಷಣ ಕ್ಷಣವೂ ನನ್ನ ಗೆಳೆಯರು ಅವರ ಪ್ರೀಯತಮೆಗಾಗಿ ಬಿಟ್ಟ ಕಣ್ಣನ್ನು ಬಿಟ್ಟುಕೊಂಡು ಕಾಯುತ್ತಿದ್ದರು. ಆ ದಿನಗಳನ್ನು ನೆನಸಿಕೊಂಡು ಇಂದು ನನಗೆ ನಾನೇ ಖುಷಿಪಟ್ಟಿದ್ದೇನೆ.

ಹೌದಲ್ಲವಾ?  ನಿನ್ನ ಜೊತೆಯಲ್ಲಿದ್ದಾಗ ನನಗೆ ಈ ಅನುಭವವೇ ಆಗಿರಲಿಲ್ಲ. ಎಂದರೇ ಅರ್ಧ ಸತ್ಯ ಮಾತ್ರ. ನೀನು ನಿತ್ಯ ನನಗೆ ಸಿಗುತ್ತಿದ್ದೆ, ನಿತ್ಯ ಮಾತನಾಡುತ್ತಿದ್ದೆ. ಆ ರೀತಿಯಲ್ಲಿ ಏನೂ ವಿಶೇಷವಾದ ವಿರಹದ ಭಾವನೆ ಎಂದೂ ಉಂಟಾಗಿರಲಿಲ್ಲ.

ನೀನು ಅಲ್ಲಿಗೆ ಹೋದ ಮೂರು ದಿನಗಳು ಅಕ್ಷರಶಃ ನಾ ಹುಚ್ಚನಾಗಿಬಿಟ್ಟಿದ್ದೇ. ಯಾವ ರೀತಿಯಲ್ಲಿ ನಿನ್ನನ್ನು ಸಂಪರ್ಕಿಸಬೇಕು ಎಂದು ಅರಿಯದವನಾಗಿದ್ದೇ. ಎಲ್ಲಾ ದಾರಿಗಳು ಬಂದ್. ನಿನ್ನ ಹೆತ್ತವರನ್ನು ವಿಚಾರಿಸೋಣವೇ ಎಂದರೇ.. ಅವರಿಗೆ ಚಿಕ್ಕದಾದ ಅನುಮಾನವನ್ನುಂಟು ಮಾಡುವುದು ಯಾಕೆ ಎಂಬ ಭಯ.. ಕೊನೆಗೆ ನಾ ಈ ಪೇಸ್ ಬುಕ್ ಮೊರೆಹೋಗಿದ್ದು.

ನನಗೆ ಅನಿಸುತ್ತದೆ. ಇದೀಗ ನೀ ನಿನ್ನ-ನನ್ನ ಮುಂದಿನ ಪ್ರೀತಿಯ ದಾರಿಯ ಬಗ್ಗೆ ತುಂಬ ನಿಚ್ಚಳವಾಗಿ ಯೋಚಿಸಿರುವುದು. ಅದಕ್ಕೇ ಕಣೇ ನಾನು ನಿನ್ನನ್ನು ನಿತ್ಯ ಹೇಳುತ್ತಿದ್ದದ್ದು. ನೀ ತುಂಬ ಸುಂದರಿ ಮತ್ತು ಬುದ್ಧಿವಂತೆ ಎಂದು. ನನಗೆ ಗೊತ್ತೂ ತುಂಬ ಉತ್ತಮವಾದ ಜೀವನದ ನಿರ್ಧಾರಗಳನ್ನು ಸಮರ್ಥವಾಗಿ ನೀ ತೆಗೆದುಕೊಳ್ಳುವುವೆ.

ಇದುವರೆಗೂ ಇಷ್ಟೊಂದು ದಿಟ್ಟವಾಗಿ ಮತ್ತು ನೀ ವಾಪಸ್ಸ್ ಬಂದ ನಂತರ ಮುಂದೆ ಏನೇನೂ ಮಾಡಬೇಕು? ಹೀಗೆ ನೀ ಚಿಂತಿಸಿದ ಪರಿಯನ್ನು ಕಂಡು ಈ ನಿನ್ನ ಅದೇ ಪೋಲಿ  ಫುಲ್ ಖುಶ್!


ನಮ್ಮನ್ನು ನಾವು ಕಾಣುವುದು ನಮ್ಮ ಪ್ರೀತಿಪಾತ್ರರ ಹೃದಯದಲ್ಲಿ ಅನಿಸುವಂತೆ ನಾನು ಈ ರೀತಿ ನಿನ್ನ ಹೃದಯ ಸಾಮ್ರಾಜ್ಯದಲ್ಲಿ ಸ್ಥಾಪಿತವಾಗಿರುವುದು ನನ್ನ ಸೌಭಾಗ್ಯವೇ ಸರಿ! ನೀ ಕೇವಲ ನನ್ನ ಬಗ್ಗೆ ಮಾತ್ರ ಯೋಚಿಸಿರದೇ ನನ್ನ ಅಮ್ಮ ಮತ್ತು ನನ್ನ ಪ್ರೀತಿಯ ತಂಗಿಯ ಬಗ್ಗೆ ಈ ರೀತಿಯೆಲ್ಲಾ ಕಾಳಜಿಯನ್ನು ಹೊಂದಿರುವೆಯೆಲ್ಲಾ ಎಂದು ಮನಸ್ಸಿಗೆ ತುಂಬಾನೆ ಸಮಾಧಾನವಾಯಿತು.

ಈ ನಿನ್ನ ಮನದಾಳದ ನುಡಿಗಳನ್ನೇ ನನ್ನ ಕುಟುಂಬದವರ ಜೊತೆಯಲ್ಲಿ ನಿನ್ನ ನನ್ನ ಮದುವೆಯ ಮಾತುಗತೆಗೆ ಸೇತುವೆಯಾಗಿ ಬಳಸಬೇಕೆಂದುಕೊಂದಿದ್ದೇನೆ.

ಇದು ಎಲ್ಲಾ ಆಕಸ್ಮಿಕ ಅನಿಸುತ್ತದೆ. ನನಗೆ ಇಂದು ನೆನಸಿಕೊಂಡರೇ ಮೂರುವರೆ ವರುಷಗಳನ್ನು ಮೂರು ಕ್ಷಣಗಳೋಪಾದಿಯಲ್ಲಿ ಕರಗಿಬಿಟ್ಟಿದೆ. ಎಂದೂ ಎಂದು ನನಗೆ ಗೊತ್ತಿಲ್ಲಾ! ನಿನ್ನನ್ನು ಅಂದು ನಾನು ತುಂಬಾನೆ ಇಷ್ಟಪಟ್ಟ ದಿನ. ಆ ನಿನ್ನ ಗತ ದಿನಗಳ ಬಗ್ಗೆ ನೀ ನನ್ನೊಂದಿಗೆ ಹಾಕಿಕೊಂಡ   ಆ ಚಿಕ್ಕ ಮೆಲುಕು ನನಗೆ ತುಂಬ ಹಿಡಿಸಿತು. ಹೆಣ್ಣು ಹುಟ್ಟು ಪ್ರೇಮಮಹಿ ಎಂಬುವುದನ್ನಾ ನೀನು ನಿರೂಪಿಸಿದ್ದ ದಿನ.

ನೀನೇ ಹೇಳಿದ್ದು ಅನಿಸುತ್ತದೆ. ನಿನ್ನ ಪಿ.ಯು ಕಾಲೇಜಿನ ದಿನಗಳಲ್ಲಿ ನೀ ಮೊದಲ ಬಾರಿ ಈ ಪ್ರೇಮ ಎಂಬುದಕ್ಕೆ ಸಿಲುಕಿದ್ದು.. ಅದು ನನಗೆ ಅನಿಸಿದ್ದು ಕೇವಲ ನಿನ್ನ ಕ್ರಶ್.. ಇದ್ದರೂ ಇರಬಹುದು..ಅಂತಾ. ನನಗಂತೂ ಆ ನಿನ್ನ ಮಾಜೀ ಪ್ರಿಯಕರನಿಗೆ ಅದು ಕೇವಲ ಕ್ರಶ್ ಮಾತ್ರ. ಇದು ಎಲ್ಲಾ ಹುಡುಗ ಹುಡುಗಿಯರಿಗೂ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ಘಟಿಸುವ ಸಾಮಾನ್ಯ ಘಟನೆ. ಅಲ್ಲವಾ?

ನೀ ಅವನನ್ನು ಎರಡುವರೇ ವರುಷ ಎಷ್ಟೊಂದು ಅಕ್ಕರಯಿಂದ ಪ್ರೀತಿಸುತ್ತಿದ್ದೆ ಎಂಬುದು ನಿನ್ನ ಮಾತುಗಳಿಂದಲೇ ಗೊತ್ತಾಗುತ್ತಿತ್ತು. ನೀ ಯಾವುದನ್ನೂ ತೀರ ಸರಳವಾಗಿ ತೆಗೆದುಕೊಳ್ಳದ ಹುಡುಗಿ ಎಂಬುದು ಅವನನ್ನು ಇಂದಿಗೂ ಗೌರವಿಸುವ ನಿನ್ನ ನುಡಿಗಳಿಂದ ತಿಳಿಯುತ್ತಿತ್ತು. ಅಲ್ಲಾ ಇದನ್ನೆಲ್ಲಾ ಇವಳು ನನ್ನ ಜೊತೆಯಲ್ಲಿ ಏಕೆ ಹೇಳುತ್ತಿದ್ದಾಳೆ ಎಂದು ನನಗೆ ನಿಜವಾಗಿಯೂ ಶಾಕ್ ಆಯ್ತು!

ನೀ ಹೇಳಿದ್ದೆಲ್ಲಾ ಅವನನ್ನು ನೀನು ಎಷ್ಟೊಂದು ಹಚ್ಚಿಕೊಂಡಿದ್ದೇ ಎಂಬುದನ್ನು.. ಕಾಲೇಜು ದಿನಗಳು ಅದು ಹೇಗೂ ಕಳೆದು ಹೋಗಿದ್ದವೂ ಎಂದೂ.. ಅಲ್ಲವಾ ಆ ಪ್ರೀತಿಯ ಜಾದುವೇ ಹಾಗೇ..

ಆ ರೀತಿಯಲ್ಲಿ ಇದ್ದಂತಹ ಅವನ ನಿನ್ನ ಪ್ರೇಮದ ಸೆಲೆ ಮಂಜಿನೋಪಾದಿಯಲ್ಲಿ ಕರಗಿಹೋಗಿದ್ದು ಒಂದು ವಿಧಿಯ ಒಂದು ಆಟವೇ ಸರಿ!  ನೀನೆ ಹೇಳಿದ್ದೇ. ಪ್ರೀತಿಗೆ ಕಣ್ಣಿಲ್ಲಾ ಎಂದು. ಪ್ರೀತಿ ಮಾಡುವ ಯಾರೊಬ್ಬರೂ ಪ್ರೀತಿ ಮಾಡುವುದಕ್ಕೂ ಮುನ್ನಾ ಯಾವ ಜಾತಿ? ಯಾರ ಮನೆಯವಾ? ಎಷ್ಟು ಸಂಪಾಧಿಸುವವ? ಏನೂ ಓದಿದವವ? ಅಪ್ಪ ಅಮ್ಮ ಒಪ್ಪುವವರಾ? ಹೀಗೆ ಪ್ರಶ್ನೆಗಳಿಗೆ ಉತ್ತರಗಳನ್ನು ದೂರಕಿಸಿಕೊಂಡು ಪ್ರೀತಿಸಲು ಶುರು ಮಾಡುವುದಿಲ್ಲ. ಅದು ಕೇವಲ ಒಂದು ಆಕಸ್ಮಿಕವಾದ ಹೃದಯದ ಸೆಳೆತ.

ಇಂದಿಗೂ ಅದರ ಬಗ್ಗೆ ಇರುವ ಈ ಚಿಕ್ಕದಾದ ನೋವೇ ಇಂದು ಈ ರೀತಿಯ ಒಂದು ಮೇಚ್ಯೂರ್ ಆದ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿನಗೆ ಸಾಧ್ಯಮಾಡಿರುವುದು. ಜೀವನದಲ್ಲಿ ಬರುವ ಎಲ್ಲಾ ಸೋಲು, ಗೆಲುವುಗಳು ದೇವರು ನಮಗೆ ಕಲಿಸುವ ಪಾಠಗಳು.

ಕೇವಲ ಒಂದು ಜಾತಿಯ ವಿಷಯಕ್ಕಾಗಿ ಅವನು ಕೊನೆಗೆ ಅವರ ಅಪ್ಪ ಅಮ್ಮನ ದಾರಿ ಹಿಡಿದಿದ್ದೂ ನನಗಂತೂ ತುಂಬಾನೆ ಬೇಸರವಾಯಿತು. ಅಂದು ನಾನು ಈ ಮಾತಿಗೆ ನಿನ್ನ ಜೊತೆಯಲ್ಲಿ ಏನೊಂದು ಪ್ರತಿಕ್ರಿಯಿಸಿರಲಿಲ್ಲ. ಗೊತ್ತೂ ನಿನಗೆ ಎಷ್ಟರ ಮಟ್ಟಿಗೆ ನೋವಾಗಿತ್ತೂ ಎಂದು. ನೀನ್ನ ಪ್ರೀತಿಯ ಕಲ್ಪನೆ ಸತ್ಯವಾಗಿ ಹಾಲಿನ ರೂಪದಷ್ಟೇ ನಿಷ್ಕಲ್ಮಶ!

ಆದರೇ ಯಾರೂ ಕೇಳಬೇಕು?

ನಮ್ಮಲ್ಲಿ ಇಂದು ಪ್ರೀತಿ ಮಾಡುವ ಪ್ರತಿಯೊಬ್ಬರಿಗೂ ಇರುವ ಭಯವೆಂದರೇ ಅದು ಒಂದೇ! ಹೆತ್ತವರೂ ಎಂದಿಗೂ ತಮ್ಮ ಸಂತೋಷದ ಬೆಂಬಲವನ್ನು ಪ್ರೀತಿಗೆ ಕೊಡುವುದಿಲ್ಲ. ಅವರಿಗೆ ಅವರದೆಯಾದ ಜಾತಿ, ಅಂತಸ್ತು ಇತ್ಯಾದಿಯಾದ ಕ್ಷುಲ್ಲಕ ಕಾರಣಗಳು. ಇದರಿಂದ ಎಷ್ಟೊಂದು ಪ್ರೀತಿಸುವ ಜೀವಗಳು ಯಾವ ಯಾವ ರೀತಿಯಲ್ಲಿ ನೋಂದು ಬೆಂದು ತಮ್ಮನ್ನೇ ತಾವು ಅಂತ್ಯ ಮಾಡಿಕೊಳ್ಳುತ್ತಿದ್ದಾವೆ. ಇನ್ನಾದರೂ ನಮ್ಮ ಹಿರಿಯರಿಗೆ ಬುದ್ಧಿ ಮಾತ್ರ ಈ ವಿಷಯದಲ್ಲಿ ಬರುವುದಿಲ್ಲ!

ನನಗೆ ಆ ನಿನ್ನ ಕಥೆಯನ್ನು ಕೇಳಿ ತುಂಬಾನೇ ಹೆಮ್ಮೆ ಏನಿಸಿತು. ಅದು ಏನೂ ತಪ್ಪಾದ ಹೆಜ್ಜೆ ಎಂದು ನನಗಂತೂ ಇಂದಿಗೂ ಅನಿಸಿಲ್ಲ!

ಅಲ್ಲಾ ಪ್ರೀತಿ ಮಾಡುವುದು ಅಷ್ಟೊಂದು ಕಠಿಣವಾದ ನಡೆಯೇ? ಎಂದಿಗೂ ಇಲ್ಲ.

ನನಗೆ ಅನಿಸುತ್ತದೆ ಈ ಘಟನೆ ನಿನ್ನ ಜೀವನದ ದಿಕ್ಕನ್ನೇ ಬದಲಿಸಿದೆ ಎಂಬುದು. ಇದೂ ಸರಾಗವಾಗಿ ನಡೆದು ಹೋಗಿಬಿಟ್ಟಿದ್ದರೇ.. ಜೀವನ ಇಷ್ಟೊಂದು ಸುಲಭವೆಂದು ನಿನಗನಿಸುತ್ತಿತ್ತೇನೋ.. ಆದರೂ ಇಷ್ಟೆಲ್ಲಾ ನೋವನ್ನೆ ನಿನ್ನ ಛಲವಾಗಿ ತೆಗೆದುಕೊಂಡು ನಿನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿ ಇಂದು ವಿದೇಶದಲ್ಲಿ ನೀ ಇರುವುದೇ ಸಾಕ್ಷಿ! ಇನ್ನೇನೂ ಬೇಕು?

ಬಾಯ್ ಪ್ರೇಂಡ್ ಹತ್ತಿರ ಯಾವುದನ್ನೂ ಹೈಡ್ ಮಾಡಿರಬಾರದಂತೆ! ಅದಕ್ಕೆ ಸಾಕ್ಷಿ ಎನ್ನುವಂತೆ ಈ ನಿನ್ನ ಗತ ಪ್ರೇಮವನ್ನು ನನ್ನ ಜೊತೆಯಲ್ಲಿ ಹಂಚಿಕೊಂಡಿದ್ದು ನಿನ್ನನ್ನು ನಾನು ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವಂತೆ ಮಾಡಿತು. ನಿನಗೆ ಪ್ರೀತಿಯೆಂದರೇ ಏನು? ಅದರ ಮಹತ್ವವೆಂದರೇ ಏನು? ಸಂಬಂಧಗಳ ಬಗ್ಗೆ ನಿನ್ನಲ್ಲಿರುವ ಆದರ್ಶಗಳೇನು? ಹೀಗೆ ನೀನಗೆ ನನಗಿಂತ ತುಂಬ ಅರಿವು ಇರುವ ಹುಡುಗಿ ಎಂದು ನನಗೆ ಅನಿಸಿಬಿಟ್ಟಿತೂ.. ಅದೇ ಕಾರಣಕ್ಕೆ ಅನಿಸುತ್ತದೆ.. ಈ ನಿನ್ನ ಪ್ರೇಮ ಕಥೆಯೇ ಈ ನಮ್ಮ ಪ್ರೇಮಕ್ಕೆ ಮುನ್ನುಡಿಯಾಗಿದ್ದು.

ಪ್ರೀತಿ ಮಾಡುವುದು ಏನೂ ಕಷ್ಟವಲ್ಲಾ. ಅದನ್ನು ದಕ್ಕಿಸಿಕೊಂಡು ಮದುವೆಯೆಂಬ ಬಂಧನದಲ್ಲಿ ಸಿಲುಕಿಸುವುದು ಇದೆಯೆಲ್ಲಾ ಅದು ನಿಜವಾದ ಪ್ರೇಮಿಗಳಿಗೆ ನಿಜವಾದ ಪಬ್ಲಿಕ್ ಎಕ್ಸಾಮ್! ಅದರಲ್ಲಿ ಪಾಸ್ ಆಗಿ ಜಗತ್ತಿಗೆ ತೋರಿಸಬೇಕು. ಹೇಗೆಲ್ಲಾ ಚೆನ್ನಾಗಿ ಬಾಳಬಹುದು ಎಂಬುದನ್ನೂ ತೋರಿಸಿದರೇ ಹೆತ್ತವರಿಗೆ ಯಾವ ಭಯವಿರುತ್ತೇ? ನೀನೇ ಹೇಳು.

ನಿನಗೆ ಅನ್ನಿಸಿಬಿಟ್ಟಿರಬೇಕು.. ಯಾಕೋ ಈಗ  ಇವನೂ ಫುಲ್ ವೇದಾಂತಿಯಾಗಿಬಿಟ್ಟಿದ್ದಾನೆ!

ಇಲ್ಲಮ್ಮಾ ಇದು ನನ್ನ ಮನದಾಳದ ಮಾತುಗಳು. ಯಾಕೋ ಈ ನಿನ್ನ ಪ್ರೀತಿಯ ಸಾಲುಗಳನ್ನು ನೋಡುತ್ತಾ ನೋಡುತ್ತಾ ಇದು ಎಲ್ಲಾ ಇಂದು ನೆನಪಾಯಿತು.

ಎಲ್ಲಾ ಹೋಗಲಿ.. ಇನ್ನೇನೂ ಮುಂದಿನ ತಿಂಗಳು ವಾಪಸ್ಸು ನೀ ಬರುತ್ತಿದ್ದಿಯಲ್ಲಾ.. ನನಗೆ ಅಲ್ಲಿಂದ ಏನೂ ಉಡುಗೊರೆಯನ್ನು ತರುವೇ?  ಅದಂತೂ ನನ್ನ ಕನಸು ಮನಸಿನಲ್ಲೂ ಯೋಚಿಸಿರಬಾರದು ಅಂಥ ಉಡುಗೊರೆಯನ್ನು ನೀ ತರಬೇಕು...!

ನನಗೆ ನೀನಗಿಂತ ಬೆಲೆಬಾಳುವಂತಹ ವಸ್ತು ಯಾವುದು ಇಲ್ಲ ಕಣೇ! ನೀ ಕ್ಷೇಮವಾಗಿ ವಾಪಸ್ ಬಂದರೆ ಅದೇ ನನಗೆ ಮಿಲಿಯನ್ ಡಾಲರ್!!


ಮಂಗಳವಾರ, ಸೆಪ್ಟೆಂಬರ್ 4, 2012

ಹೃದಯದ ಮಾತು!


ಕಣ್ಣಾಲಿಗಳು ತುಂಬಿ ಬಿಟ್ಟಿತು ಕಣೋ. ಪೇಸ್ ಬುಕ್ ನಲ್ಲಿನ ಆ ನಿನ್ನ ಮೇಸೆಜ್ "ಡಾರ್ಲಿಂಗ್ ನಿನ್ನನ್ನು ನಾನು ತುಂಬಾನೆ ಮೀಸ್ ಮಾಡಿಕೊಳ್ಳುತ್ತಿದ್ದೇನೆ. ಯಾವಾಗ ನಿನ್ನ ನಾನು ನೋಡುತ್ತೀನೋ." ಇಲ್ಲಿವರೆಗೂ ನೀ ಒಂದು ಮೇಸೆಜ್ ನ್ನು ಪೇಸ್ ಬುಕ್ ನಲ್ಲಿ ಹಾಕಿರುವುದನ್ನು ನೋಡಿದ್ದಿಲ್ಲ! ನೀ ಯಾವಾಗಲೂ ಹೇಳುತ್ತಿದ್ದೇ " ಐ ಹೇಟ್ ಪೇಸ್ ಬುಕ್"

ಇಲ್ಲಂತೂ ಮೊದಲ ಮೂರು ದಿನ ನನ್ನ ಕ್ಷಣ ಕ್ಷಣವು ನನ್ನ ಮನೆಯವರ ನೆನಪು ಕಾಡಿತು. ನನ್ನ ಅಕ್ಕ,ತಮ್ಮ, ಅಮ್ಮ ನ ನೆನಪು ತುಂಬನೇ ಬಾಧಿಸಿತು.

ಇದೆ ಮೊದಲ ಸಲ ನಾನು ನನ್ನ ಮನೆಯಿಂದ ಹೊರಗಡೆ ಬಂದು ಬೇರೆಯಾಗಿ ಇರುವುದು. ಹುಟ್ಟಿದಂದಿನಿಂದ ೨೧ ವರುಷಗಳು ನನ್ನವರನ್ನು ನಾನು ಒಂದು ದಿನವೋ ಬಿಟ್ಟಿಲ್ಲ ಕಣೋ! ಹಾಸಿಗೆಯ ಮೇಲೆ ಅಮ್ಮನ ತೋಳಿನಲ್ಲಿ ನನ್ನ ತೆಲೆಯಿಟ್ಟು ಮಲಗುವುದನ್ನೂ ಈವಾಗ ಮೀಸ್ ಮಾಡಿಕೊಳ್ಳುತ್ತಿದ್ದೇನೆ.

ಗೊತ್ತಾ ನನ್ನ ಅಮ್ಮ ಒಂದು ದಿನವೋ ನನ್ನ ಮುಖವನ್ನು ಕಾಣದಿದ್ದರೇ ಸಾಕು ದಿಗಿಲುಗೊಳ್ಳೂತ್ತಾರೆ. ಅದು ಹೇಗೆ ಅವರು ಸೈರಿಸಿಕೊಂಡಿದ್ದಾರೋ ಆ ದೇವರೇ ಬಲ್ಲ!

ಅಲ್ಲಾ ಕಣೋ ನೀನು ಹೇಗೆ ಇಷ್ಟರ ಮಟ್ಟಿಗೆ ನಿನ್ನ ಮನಸ್ಸನ್ನು ಚಿಕ್ಕದಾಗಿ ಮಾಡಿಕೊಂಡುಬಿಟ್ಟೆ. ಅಮ್ಮನ ವಿಷಯ ಬಿಡು ಅವರು ತುಂಬ ಹಳಬರು ಸ್ವಲ್ಪಕ್ಕೂ ಧಾವಂತಪಟ್ಟುಕೊಳ್ಳುತ್ತಾರೆ. ನೀನಗೆ ಗೊತ್ತೂ ಇದು ಕೇವಲ ನಾಲ್ಕು ತಿಂಗಳ ನನ್ನ ನಿನ್ನ ಅತಿ ದೂರ.ಕೆಲಸ ಮುಗಿಸಿದ ಬಳಿಕ ವಾಪಾಸ್ಸು ಬರಲೇಬೇಕು. ಮತ್ತೆ ಅದೇ ನನ್ನ ನಿನ್ನ ಬೇಟಿ,ಸನಿಹ, ನನ್ನ ನಿನ್ನ ಮಾತು ಮಾತು, ಅಕ್ಕರೆಯ ಪುನರ್ ಮಿಲನ!

ಆದರೂ ಅದು ಯಾಕೇ ಇಷ್ಟು ಬೇಜಾರಾಗಿದ್ದೀಯೋ? ಪ್ಲೀಜ್ ಆ ರೀತಿಯಲ್ಲಿ ಎಲ್ಲಾ ಮಾತನಾಡಬೇಡ. ನನಗೆ ಗೊತ್ತು ನಿನಗೆ ಎಷ್ಟರ ಮಟ್ಟಿಗೆ ನೋವಾಗಿರುತ್ತದೆ ಎಂದು. ಅಂದು ಈ ಅಫರ್ ಬಂದಿದೆ ಎಂದಾಗ ನೀನೇ ಹೇಳಿದ್ದೇ "ಚೆನ್ನಾಗಿದೆ ಕಣೇ, ಈ ಅವಕಾಶ ಉಪಯೋಗಿಸಿಕೊ ನೀನು ಹೋಗುತ್ತಿರುವುದು ಸ್ವರ್ಗದ ಸೀಮೆಯಂತಿರುವ ಹಾಲೆಂಡ್. ಜೀವನದಲ್ಲಿ ಒಂದು ಬದಲಾವಣೆ ಬೇಕು. ನೀನಗೂ ಹೊರದೇಶ ಸುತ್ತಬೇಕು ಎಂಬ ಆಸೆ ತಾನೇ ನಾಲ್ಕು ತಿಂಗಳು ಮಸ್ತಿಯಾಗಿ ಎಂಜಾಯ್ ಮಾಡಿ ಬಾ".

ಅದರೇ ನೀನು ಇಷ್ಟರ ಮಟ್ಟಿಗೆ ಅಳ್ಳೆದೆಯವನು ಎಂದು ಇಂದೇ ನನಗೆ ಗೊತ್ತಾಗಿದ್ದು.

ನನಗೂ ಮೊದಲ ಎರಡು ದಿನ ನಿಜವಾಗಿಯೋ ಯಾಕಾದರೂ ಈ ಲೋಕಕ್ಕೆ ಬಂದೇನೋ ಎನಿಸಿತು. ಯಾರನ್ನೂ ಮಾತನಾಡಿಸುವ ಸ್ಥಿತಿಯಲ್ಲಿ ಇರಲಿಲ್ಲ. ಯಾರ ಜೊತೆಯಲ್ಲೂ ಪೋನ್, ಮೇಸೆಜ್, ಚಾಟ್ ಎನೊಂದು ಸಿಗಲಿಲ್ಲ.

ಇಂದು ಮೊರನೆಯ ದಿನ ಹೀಗೆಯೆ ಈ  ನಿನ್ನ ಮೇಸೆಜ್ ನೋಡಿದಾಗ ನನಗಂತೂ ನಿನ್ನನ್ನು ತುಂಬನೇ ಮೀಸ್ ಮಾಡಿಕೊಳ್ಳುತ್ತಿದ್ದೇನೆ ಅನಿಸಿತ್ತಿದೆ.

ಇನ್ನೂ ನಾಲ್ಕು ತಿಂಗಳು ಹೇಗೆ ನೀ ಇಲ್ಲದ ಈ ದಿನಗಳನ್ನೂ ದೂಡುವುದೋ ಇಲ್ಲಿ ಅನಿಸುತ್ತಿದೆ.

ಕೇವಲ ಎರಡು ಗಂಟೆಗೂ ಮುನ್ನಾ ಅಮ್ಮ, ಅಪ್ಪ, ಅಕ್ಕ ಮತ್ತು ಮುದ್ದು ತಮ್ಮನೊಡನೆ ಮಾತನಾಡಿದೆ. ಅಮ್ಮನೋ ದೋ ಎಂದು ಅತ್ತೇ ಬಿಟ್ಟಳು ಕಣೋ. ಯಾಕೋ ಇಲ್ಲಿಗೆ ಬಂದು ತಪ್ಪು ಮಾಡಿದೆ ಅನಿಸುತ್ತಿದೆ. ಅವರ ಜೊತೆಯಲ್ಲಿರುವ ಕ್ಷಣಗಳು ನಾವು ಯಾವ ಸ್ವರ್ಗದ ಸೀಮೆಗೆ ಹೋದರೂ ಸಿಗಲಾರದು ಕಣೋ. ನಮ್ಮ ಪ್ರೀತಿ ಪಾತ್ರರ ಜೊತೆಯಲ್ಲಿ ಕಳೆಯುವ ಪ್ರತಿಕ್ಷಣವು ಸರ್ಗಮಯ ಸಮಯ! ಏನೂ ಮಾಡುವುದು ನಾನು ಪುನಃ ನಾಲ್ಕು ತಿಂಗಳು ಕಾಯಲೇ ಬೇಕು.

ಈ ಜಾಗ ಎಷ್ಟು ಸಂಪತ್ತು ಭರಿತವಾಗಿದೆ ಗೊತ್ತಾ? ಎಷ್ಟೊಂದು ನೀಟಾಗಿ ಪ್ರತಿಯೊಂದು ಜಾಗವನ್ನು ಅವುಗಳ ಸೌಂದರ್ಯಕ್ಕೆ ಮುಕ್ಕಾಗದ ರೀತಿಯಲ್ಲಿ ಕಾಪಿಟ್ಟುಕೊಂಡಿದ್ದಾರೆ ಕಣೋ! ನೀ ನನ್ನ ಜೊತೆಯಲ್ಲಿ ಇದ್ದರೇ ನಿಜವಾಗಿಯೂ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದಾಗಿತ್ತು.

ನಿನ್ನ ಪರಿಚಯವಾದ ಮೂರು ವರುಷಗಳ ನಂತರ ಇದೆ ಮೊದಲ ಸಲ ಅನಿಸುತ್ತದೆ ಅತ್ಯಂತ ದೀರ್ಘವಾದ ದೂರದ ಜೀವನ. ನೀನೋ ನನ್ನ ಬಿಟ್ಟಿಲಾರದವನಂತೆ ನಾನು ಬದಲಾಯಿಸಿದ ಮೂರೂ ಕಂಪನಿಗಳಿಗೂ ನನ್ನ ಹಿಂದೆಯೇ ಬಂದ್ಯಾಲಾ? ಅದೇ ಕಣೋ ನನ್ನನ್ನು ನೀನ್ನನ್ನು ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವಂತೆ ಮಾಡಿದ್ದು. ನನ್ನ ಕಂಡರೇ ನೀನಗೆ ಅದು ಎಷ್ಟು ಇಷ್ಟಾ? ಎಷ್ಟು ಕೇರಿಂಗ ನೇಚರ್? ನೀ ನನಗೆ ನಿತ್ಯ ನನ್ನ ಮಾರ್ಗದರ್ಶಕ ಮತ್ತು ವಿಮರ್ಶಕ!

ನನಗಂತೂ ಇಷ್ಟರ ಮಟ್ಟಿಗೆ ನಾನು ನನ್ನ ಜೀವನವನ್ನು ಸಾಗಿಸುವುವೆನೂ ಎಂಬ ಕನಸು ಸಹ ಇರಲಿಲ್ಲ. ಎಲ್ಲಿಯಾ ಆ ಚಿಕ್ಕ ಹಳ್ಳಿಯ ಈ ಹುಡುಗಿ? ಇಂದು ಹೊರದೇಶದ ಬೇರೆ ದೇಶದ ಕಂಪನಿಯ ಬೇರೆ ದೇಶದ ಜನಗಳ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಅಂದರೇ ಇದೊಂದು ಸಂಪೂರ್ಣ ಕನಸು ಅನಿಸುತ್ತಿದೆ. ಅದಕ್ಕೆ ಕಾರಣ ನೀ ಅಂದರೇ ಅತಿಶಯೋಕ್ತಿಯಲ್ಲ.

ನೆನಪಿದೆಯಾ? ನಾನು ನಿಮ್ಮ ಕಂಪನಿಯ ಸಂದರ್ಶನಕ್ಕೆ ಬಂದಿದ್ದು. ಅದರಲ್ಲಿ ಆಯ್ಕೆಯಾದ ನಂತರ ನಿನ್ನ ಟೀಂ ಗೆ ನಾ ಬಂದಿದ್ದು. ನೀನೆ ನನ್ನ ಸೀನಿಯರ್ ಆಗಿದ್ದು. ನೀ ನನ್ನ ಪತಿಯೊಂದು ತಪ್ಪು ಮತ್ತು ಕಲಿಕೆಗಳನ್ನು ಎಷ್ಟೊಂದು ತಾಳ್ಮೆಯಿಂದ ತಿದ್ದಿ ಮುನ್ನುಗ್ಗುವಂತೆ ಮಾಡಿದ್ದೂ!


ಅಂದೇ ನಾನು ನಿರ್ಧರಿಸಿದ್ದೇ! ಆ ದೇವರೇ ಈ ಕಪ್ಪು ತುಂಟನನ್ನು ನನ್ನ ಜೋಡಿಗಾಗಿ ಕಳಿಸಿದ್ದಾನೆ ಎಂದು. ಗೊತ್ತಾ? ಮೊದಲ ದಿನದ ಆಫೀಸ್ ಸಡಗರದ ಮಾತುಗಳ ತುಂಬ ನಿನ್ನದೇ ಹೆಸರು. ಅಮ್ಮನಿಗೆ ಮೊದಲ ದಿನವೇ ನಿನ್ನ ಬಗ್ಗೆ ಹೇಳಿದ್ದೇ!

ನಮ್ಮಿಬ್ಬರ ನಡುವೆ ಅದು ಹೇಗೆ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಯಿತೋ? ನನಗಂತೋ ಇಂದಿಗೂ ಅದರ ನೆನಪು ಎಷ್ಟು ಪ್ರಯತ್ನಿಸಿದರೂ ತಿಳಿಯದಾಗಿದೆ. ಆ ಒಂದು ಹೊರತೆ, ಅದು ಹೇಗೆ? ಯಾವ ಸಮಯದಲ್ಲಿ ಉಕ್ಕಿತೋ? ಗೊತ್ತಾಗುತ್ತಿಲ್ಲ.

ನೀನೋ ನಿನ್ನಲ್ಲಿಯೇ ನನ್ನನ್ನೂ ಪ್ರೀತಿಸತೊಡಗಿದೆ. ನಾನು ನಿನ್ನನ್ನೂ ನನ್ನ ಉಸಿರಾಗಿಸಿಕೊಂಡೆ. ನಾನು ನಿನ್ನ ಪ್ರೀತಿಸುವುದು ನಿನಗೆ ಗೊತ್ತಾಗಿತ್ತು. ನೀ ನನ್ನ ಪ್ರೀತಿಸುವುದು ನನಗಂತೂ ಮೊದಲ ದಿನವೇ ಗೊತ್ತಾಗಿತ್ತು. ಆದರೂ ನಾನು ನಿನಗೆ ನಿಜವಾಗಿಯೋ ಸರಿ ಹೊಂದುವನೇನೋ? ನೀನೇ ಹೇಳಬೇಕು..

ಅಂದು ನೀ ನನ್ನನ್ನು ಕಳಿಸಲು ಏರ್ ಪೋರ್ಟ್ ಬಳಿ ಬಂದಾಗ ಅಮ್ಮ ನಿನ್ನ ಕಡೆನೇ ತುಂಬ ತುಂಬ ನೋಡುತ್ತಿದ್ದರು ಕಣೋ. ಅಮ್ಮನ ಬಳಿ ನಾನೇನೂ ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಇದುವರೆಗೂ ಹೇಳಿಲ್ಲ! ಆದರೇ ಕಣ್ಣರಿಯದಿದ್ದರೂ ಕರಳು ಅರಿಯುತ್ತದಂತೆ ಅಲ್ಲವಾ? ಅಮ್ಮನಿಗೆ ನನ್ನ ಪ್ರತಿ ಹೆಜ್ಜೆ ಗೊತ್ತಾಗೇ ಗೊತ್ತಾಗಿರುತ್ತದೆ. ಅವಳಿಗೂ ನನ್ನ ಚಿಕ್ಕ ಸುಳಿವು ಸಿಕ್ಕಿದ್ದರೂ ಸಿಕ್ಕಿರಬಹುದು. ಅದಕ್ಕೆ ಇರಬೇಕು ಅಂದು ನಿನ್ನನ್ನು ತುಂಬ ಮಮತೆಯಿಂದ ಗಮನಿಸುತ್ತಿದ್ದೀರಬೇಕು.

ನೀನೋ ಅಂದು ಏನೋ ಆಕಾಶವೇ ಕೆಳಗೆ ಬಿದ್ದಿರುವಂತೆ ಮುಖ ಮಾಡಿಕೊಂಡಿದ್ದೇ. ನನಗೋ ಏನೂ ಹೇಳಬೇಕೆಂಬುದೇ ತಿಳಿಯದ ಕಸಿವಿಸಿ.

ಇಲ್ಲಿಯ ಊಟ ನೋಟ ಎಲ್ಲಾ ದೇವರಿಗೆ ಪ್ರೀತಿ ಕಣೋ.. ಇನ್ನೂ ನೂರ ಇಪ್ಪತ್ತು  ದಿನಗಳು ಅಂದರೇ ನನಗೆ ಭಯವಾಗುತ್ತಿದೆ!

ಈ ವೀಕೆಂಡ್ ಅದು ಯಾವುದೋ ಪಾಲ್ಸ್ ಅಂತೆ ಅಲ್ಲಿಗೆ ಇಲ್ಲಿನ ನನ್ನ ಸ್ನೇಹಿತರ ಜೊತೆಯಲ್ಲಿ ಹೋಗುತ್ತಿದ್ದೇನೆ. ನೀ ಇಲ್ಲದ ಭಾವವೇ ನನ್ನ ಎಲ್ಲಾ ಸಡಗರಗಳನ್ನು ಒಂದು ಕ್ಷಣ ಮಂಕಾಗಿಸುತ್ತದೆ.

ನೀ ಆ ನಿನ್ನ ಪಟಾಲಂ ಜೊತೆಯಲ್ಲಿ ಸೇರಿಬಿಡಬೇಡ.. ನನಗೆ ಗೊತ್ತೂ ಅವರ ವೀಕೆಂಡ್ ಮಸ್ತಿ.. ಯಾವುದನ್ನೂ ಅತಿಯಾಗಿ ಮಾಡಬೇಡ.. ನಾನು ಇಲ್ಲದ ಮೊದಲ ಅನುಭವವನ್ನು ಅದು ಹೇಗೆ ಅನುಭವಿಸುವೆಯೋ ಹುಚ್ಚಪ್ಪ?

ನಾನಂತೋ ನಿನ್ನ ಜೊತೆಯಲ್ಲಿ ಕಳೆದ ಮೂರುವರೆ ವರುಷಗಳ ಪ್ರತಿಯೊಂದು ಸವಿ ಕ್ಷಣಗಳ ಮೆಲುಕು ಹಾಕಬೇಕೆಂದು ಕೊಂಡಿದ್ದೇನೆ. ಅದೇ ಸ್ವಲ್ಪ ನನಗೆ ನೀ ನನ್ನ ಜೊತೆಯಲ್ಲಿಯೇ ಇಲ್ಲಿಯೇ ಹತ್ತಿರದಲ್ಲಿ ಇರುವೆ ಎಂಬ ಭಾವವನ್ನು ಕೊಡುತ್ತದೆ.

ಅಲ್ಲಾ ಕಣೋ ಈ ಪ್ರೇಮಿಗಳಿಗೆ ಈ ರೀತಿಯಲ್ಲಿ ಆ ದೇವರು ಪರೀಕ್ಷೆಯನ್ನು ಯಾಕಾದರೂ ಕೊಡುತ್ತಾನೋ ಎಂದು ನನಗೆ ಅನಿಸುತ್ತದೆ. ಈ ಮೊಲಕ ಅವನೂ ನಮ್ಮ ನಮ್ಮ ನಿಜವಾದ ಪ್ರೀತಿಯ ತೂಕವನ್ನು ಮಾಡುತ್ತಾನೇನೋ ಅಲ್ಲವಾ?

ಸಮಯ ಸಿಕ್ಕಿದರೇ ಇಲ್ಲಿಂದಲೇ ಅಮ್ಮನೊಡನೆ ನಿನ್ನ ಬಗ್ಗೆ ಹೇಳಿಬಿಡಬೇಕು ಅನಿಸಿದೆ. ಅವರಿಗೋ ಯಾವಾಗ ಇವಳೂ ವಾಪಸ್ಸ್ ಬಂದು ಮದುವೆಯ ಖೆಡ್ಡಕ್ಕೆ ಬೀಳುವವಳೋ ಅನಿಸಿರಬೇಕು.

ನೀ ನೋಡಿರಲಿಲ್ಲ, ಇಲ್ಲಿಗೆ ನಾ ಬಂದಿರುವುದು ಅಪ್ಪನಿಗೆ ಸುತಾರಾಂ ಇಷ್ಟವಿಲ್ಲ.

ಅವರೇಳಿದ್ದು ಒಂದೇ ಮಾತು "ಹುಡುಗಿಯರಿಗೆಲ್ಲಾ ಯಾಕೆ ಈ ಕೆಲಸ, ವಿದೇಶ ಸುತ್ತಾಟ?"

ಏನ್ ಮಾಡುವುದೂ? ಅವರಂತೂ ನಾ ವಾಪಸ್ಸಾಗುವುದನ್ನೇ ಕಾಯುತ್ತಿರುತ್ತಾರೆ... ಗೊತ್ತಿಲ್ಲಾ ಮುಂದಿನ ವರುಷದ ಹೊತ್ತಿಗೆ ನಾ ನಿನ್ನ ಮನೆಗೆ ಬಂದಿರುತ್ತೇನೆ.

ಆ ಕನಸೇ ಎಷ್ಟೊಂದು ಸುಖ ಕೊಡುತ್ತಿದೆ. ಆಫೀಸ್ ಕೆಲಸವಿಲ್ಲದೆ ಕೇವಲ ಮನೆಯಲ್ಲಿಯೇ ಇರುವುದು. ನಿನ್ನ ಬೇಕು ಬೇಡಗಳನ್ನು ನೋಡಿಕೊಳ್ಳುವುದು. ನಿನ್ನ ಅಮ್ಮನನ್ನು ನನ್ನ ಅಮ್ಮನಂತೆ ಕಾಣುವುದು. ಆ ನಿನ್ನ ಮುದ್ದಿನ ಪುಟ್ಟ ತಂಗಿಯನ್ನು ನನ್ನ ಮುದ್ದಿನ ಮಗಳಾಗಿ ಆರೈಕೆ ಮಾಡುವುದು. ನೀ ಮುಂಜಾನೆ ಆಫೀಸ್ ಗೆ ಹೋಗುವುದು.. ಸಂಜೆ ನೀ ಬರುವ ವೇಳೆಗೆ ಎಲ್ಲಾ ರುಚಿಯಾದ ಅಡಿಗೆಗಳನ್ನು ಮಾಡಿಕೊಂಡು ಸಿನಿಮಾದಲ್ಲಿ ತೋರಿಸುವ ಟೀಪಿಕಲ್ ಅರ್ಧಾಂಗಿಯಾಗಿ ನಿನ್ನ ದಾರಿಯನ್ನೇ ಕಾಯುತ್ತಿರುವುದು!!

ಇಷ್ಟೆ ಕಣೋ ನನ್ನ ಮಹದಾಸೆ. ಯಾರಿಗೇ ಬೇಕು ಈ ಕೆಲಸ. ಅವರಿಗೆ ಇವರಿಗೆ ಸಮಾಧಾನ ಮಾಡುವುದು.. ಆ ಮೀಟಿಂಗ್, ಆ ಕಾಲ್ಸ್? ನಿನ್ನಂತವನಿಗೆ ಸರಿ ಇವುಗಳೆಲ್ಲಾ.

ಹೇ! ಏನಿದು ಈ ಹುಚ್ಚಿಯ ಕನಸು ಎನ್ನಬೇಡ, ನನ್ನ ಹೃದಯದ ಮಾತುಗಳಿವು!

ಸೋಮವಾರ, ಸೆಪ್ಟೆಂಬರ್ 3, 2012

ಗುರು ಬಲ!


ಅಕ್ಷರ ಕಲಿಸಿದಾತ ಗುರುವು! ಅವನಿಂದ ನಾವುಗಳೂ ಅರಿವು ಎಂಬುದರ ಬಾಗಿಲನ್ನು ತಟ್ಟುವುದು. ವಿದ್ಯೆಯನ್ನು ಕಲಿಸುವವನೇ ಗುರು. ಗುರುವೇ ಅಧಿಪತಿ. ಅವನಿಲ್ಲದೇ ಏನೊಂದು ಬೆಳೆಯದು. ಅವನೇ ನಮಗೆಲ್ಲಾರಿಗೂ ಮಾರ್ಗದರ್ಶಕ!

ಇಂದು ನಮ್ಮಲ್ಲಿರುವ ಲಕ್ಷೋಪಲಕ್ಷ ಶಿಕ್ಷಣ ಸಂಸ್ಥೆಗಳು ಅಲ್ಲಿರುವ ಶಿಕ್ಷಕರು, ಪ್ರೋಪೆಸರ್ ಳೆಲ್ಲಾ ಗುರುವಿನ ಸ್ಥಾನವನ್ನು ಅಲಂಕರಿಸಿ ಶಿಷ್ಯರ ಏಳ್ಗೆಯೊಂದೆ ತಮ್ಮ ಕಾಯಕವನ್ನಾಗಿ ಮಾಡಿಕೊಂಡು ನಮ್ಮ ಯುವ ಪೀಳಿಗೆಯನ್ನು ಸರಿಯಾದ ಅಕ್ಷರಸ್ಥರನ್ನಾಗಿ ಮಾಡುತ್ತಿದ್ದಾರೆ. ಅವರೆಲ್ಲರಿಗೂ ನಮ್ಮ ನಾಗರೀಕ ಸಮಾಜ ಎಂದೆಂದೂ ಚಿರಋಣಿಯಾಗಿರಬೇಕಾಗಿದೆ.

ನಮ್ಮ ಬದುಕಿನ ಈ ದಾರಿಯಲ್ಲಿ ನಮ್ಮ ನಮ್ಮ ಜೀವನದಲ್ಲಿ ಒಂದೊಂದು ಚಿಕ್ಕ ಪ್ರಶ್ನೆ ಮತ್ತು ಜಟಿಲವಾದ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವಂತೆ ಮಾಡುವಲ್ಲಿ ನಮ್ಮೊಂದಿಗೆ ಹಲವಾರು ಗುರುಗಳ ಸ್ಥಾನದಲ್ಲಿ ನಿಂತು  ನಿತ್ಯ ಅಸರೆಯಾಗಿರುತ್ತಾರೆ.

ಅವರುಗಳು ನಮ್ಮ ಹೆತ್ತವರಾಗಿರಬಹುದು,ಸಂಬಂಧಿಕರು,ಸ್ನೇಹಿತರು, ನೆರೆಹೊರೆಯವರು, ಸಹ ಉದ್ಯೋಗಿಗಳು, ಓದುವ ಅಮೊಲ್ಯ ಪುಸ್ತಕಗಳು, ಪತ್ರಿಕೆಗಳು, ಇಂಟರ್ ನೇಟ್ ಇವರೆಲ್ಲಾ ಸಮಯಕ್ಕೆ ಸರಿಯಾಗಿ ನಮ್ಮನ್ನು ತಿದ್ದಿತೀಡಿ ನಮ್ಮ ಕಷ್ಟಗಳನ್ನು ಅವರ ಅನುಭವವೆಂಬ ಮೊಸೆಯಿಂದ ಬಗೆಹರಿಸಿರುತ್ತಾರೆ.

ಹೀಗೆ ಏನಾದರೂ ಒಂದು ಗೊತ್ತಿಲ್ಲದ ವಿಷಯ ಸಂಗತಿಗಳ ಅರಿವನ್ನುಂಟು ಮಾಡುವುದರಲ್ಲಿ ಈ ರೀತಿಯ ಎಲ್ಲರ ಸಹಾಯ ಹಸ್ತ ದೊಡ್ಡದಾಗಿರುತ್ತದೆ. ಅಂಥವರೆಲ್ಲಾ ನಮ್ಮೆಲ್ಲರಿಗೆ ಎಂದಿಗೂ ಗುರುಗಳೇ ಸರಿ. ನಮಗೆ ತಿಳಿಯದನ್ನು ತಿಳಿಸುವವರೆಲ್ಲಾ ನಮಗೆ ಗುರುಗಳೇ!

ಗುರುಗಳೆಂದರೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ತನ್ನ  ಶಿಷ್ಯನ ಉದ್ಧಾರ ಮಾತ್ರವಾಗಿರುತ್ತದೆ.

ನಮಗೆ ಗುರುಗಳು ಎಂದರೇ ಅವರು ನಮಗಿಂತಹ ದೊಡ್ಡವರಾಗಿರಬೇಕು ಎಂಬ ಕಲ್ಪನೆಯಿರುತ್ತದೆ. ಹಾಗೇನೂ ಇಲ್ಲಾ ಒಮ್ಮೊಮ್ಮೆ ನಮಗಿಂತ ಕಿರಿಯರಿಂದ ಜೀವನದ ಅತಿ ದೊಡ್ಡ ಪಾಠವನ್ನೇ ಕಲಿತುಕೊಂಡಿರುತ್ತೇವೆ. ಅಲ್ಲಿ ದೊಡ್ಡವರು, ಚಿಕ್ಕವರು ಹೀಗೆ ಯಾವುದೇ ವಯಸ್ಸಿನ ಬೇದ ಭಾವವಿಲ್ಲ. ಅಲ್ಲಿ ಅವರು ಎಷ್ಟು ಙ್ಞಾನವನ್ನು ತಿಳಿದುಕೊಂಡಿರುತ್ತಾರೆ ಮತ್ತು ನಾವು ಅವರಿಂದ ಕಲಿಯುವ ಪಾಠವೇ ಪ್ರಾಮುಖ್ಯವಾಗಿರುತ್ತದೆ.

ಶಾಲಾ ದಿನಗಳಲ್ಲಿ ನಾವುಗಳು ನಮ್ಮ ತರಗತಿಗಳಲ್ಲಿ ನಮಗೆ ಪಾಠವನ್ನು ಕಲಿಸುತ್ತಿದ್ದ ನಮ್ಮ ಗುರುಗಳ ಮಹತ್ವವನ್ನು ಅರಿಯದವಾರಗಿರುತ್ತೇವೆ. ಅವರನ್ನು ನಾವು ಏನೋ ಕಂಡು ಭಯಬೀಳುವಂತೆ ಅವರನ್ನು ನೋಡಿದರೇ ಮಾರು ದೂರದಿಂದಲೇ ಎಸ್ಕೇಪ್ ಆಗಿಬಿಡುತ್ತಿದ್ದೇವು. ಅವರ ಕಣ್ಣಿಗೆ ಬೀಳಲು ಎದುರುತ್ತಿದ್ದೇವು. ಅದು ಕಷ್ಟಪಟ್ಟು ತರಗತಿಗಳಲ್ಲಿ ಬೇರೆ ದಾರಿ ಇಲ್ಲದೇ ಗಟ್ಟಿ ಎದೆ ಮಾಡಿಕೊಂಡು ಕುಳಿತುಕೊಳ್ಳುತ್ತಿದ್ದೇವು. ಅವರುಗಳ ಪ್ರೀತಿಯ ಏಟುಗಳು, ಬೈಗುಳಗಳು ನಾವುಗಳು ಇಂದೂ ಸಹ ಮರೆಯಲು ಸಾಧ್ಯವೇ ಇಲ್ಲಾ.

ಅದೇ ರೀತಿಯಲ್ಲಿ ಯಾಕೋ ನಮ್ಮನ್ನು ಅತಿ ಮಧುರವಾಗಿ ಮಾತನಾಡಿಸುತ್ತಿದ್ದಾ ಒಬ್ಬರೂ ಇಬ್ಬರೂ ಮೇಡಂ ಗಳನ್ನು ನಮ್ಮ ನೆನಪಿನಿಂದ ಮರೆಯದವರಾಗಿರುತ್ತೇವೆ.

ಮೊಗಿನ ಮೇಲೆಯೇ ಸಿಟ್ಟನ್ನು ಇಟ್ಟುಕೊಂಡು ಕಪ್ಪನೇ ರೂಲರ್ ಹಿಡಿದುಕೊಂಡು ಬಂದು ಯಾವುದೋ ಪಾಠವನ್ನು ಬರೆದುಕೊಂಡು ಬಂದಿರದ ಕಾರಣಕ್ಕೆ ಕೆಂಪನೆ ಬಾಸುಂಡೆ ಬರುವಂತೆ ಭಾರಿಸಿದ್ದ ಆ ಹೆಡ್ ಮೇಸ್ಟರ್ ಮುಖವನ್ನು ನೆನಸಿಕೊಂಡರೆ ಈಗಲೂ ಬೆವರುತ್ತೇವೆ.

ಒಬ್ಬೊಬ್ಬರದೂ ಒಂದೊಂದು ಸ್ಟೈಲ್ ಆದ ಭೋಧನೆ ಇರುತ್ತದೆ.

ಗುರುಗಳೆಂದರೇ ಅವರು ಸಹ ನಮ್ಮಂತೆಯೇ ಮನುಷ್ಯರಲ್ಲವೇ ಎಂದು ನೆನಸಿಕೊಂಡರೇ ನಗು ಬರುತ್ತದೆ.

ಆದರೇ ಆ ಬಾಲ್ಯದ ದಿನಗಳಲ್ಲಿ ಅವರುಗಳು ನಮಗೆ ಯಾವುದೋ ಲೋಕದಿಂದ ನಮ್ಮನ್ನು ಶಿಕ್ಷಿಸಲೆಂದೇ ಆ ದೇವರು ಕಳಿಸಿದ ಶಾಲೆಯ ಪೊಲೀಸ್ ರು ಎಂಬಂತೆ ಭಯಬೀಳುತ್ತಿದ್ದೇವು. ಯಾಕೆಂದರೇ ನಮಗೆ ನಮ್ಮ ತುಂಟಾಟ ಆಟೋಪಾಠಗಳಿಗಿಂತ ಪಾಠಗಳೆಂದರೇ ಕಹಿ ಗುಳಿಗೆಯೇ ಸರಿ! ಅದನ್ನು ನುಂಗುವುದಕ್ಕೆ ನಮಗೆ ಸಾಧ್ಯವೇ ಆಗುತ್ತಿರಲಿಲ್ಲ.

ದಂಡಿಸುವವರೂ ಬದುಕಲು ಕಲಿಸುತ್ತಾರೆ ಎಂಬಂತೆ ಅಂದಿನ ಆ ಕಹಿ ಏಟುಗಳು ಇಂದು ನೆನಸಿಕೊಂಡರೇ ತುಂಬ ಸಿಹಿಯಾಗಿ ಈಗ ಮೀಸ್ ಮಾಡಿಕೊಂಡಂತಾಗಿದೆ.

ವಿದ್ಯಾರ್ಥಿ ಜೀವನ ಎಂದರೇ ಬಂಗಾರದ ಜೀವನ ಎಂದು ಇಂದು ಗೊತ್ತಾಗಿದೆ. ಆ ದಿನಗಳು ಮತ್ತೆ ನಮ್ಮ ಜೀವನದಲ್ಲಿ ಮರಳಿ ಬರಲಾರದಂತಹ ಚಿನ್ನದ ಸಿಹಿ ದಿನಗಳು ಅಷ್ಟೇ.


ನಮ್ಮಗಳಿಗೆ ಪಾಠ ಹೇಳಿಕೊಟ್ಟ ಎಲ್ಲಾ ಶಿಕ್ಷಕರು ಇಂದಿನ ಸಮಯಕ್ಕೆ ನಿವೃತ್ತಿಯನ್ನು ಹೊಂದಿರಬಹುದು. ಅವರುಗಳು ಇಂದು ಎಲ್ಲಿ ಇರಬಹುದೋ ಗೊತ್ತಿಲ್ಲ! ಶಾಲೆಯನ್ನು ಬಿಟ್ಟು ಬಂದ ಮೇಲೆ ಅತ್ತ ಕಡೆ ಪುನಃ ಹೋಗಿಲ್ಲ! ಆದರೇ ನಮ್ಮನ್ನು ನಿತ್ಯ ಕಾಡುವವ ಗುರುಗಳು ಅವರೇ ಅವರುಗಳು ಕಲಿಸಿದ ಒಂದೊಂದು ಪಾಠವೂ ಇಂದು ಅಲ್ಲಾಲ್ಲಿ ನೆನಪಾಗುತ್ತಿರುತ್ತದೆ.


ಎಲ್ಲಾ ಹಳೆಯ ಶಿಕ್ಷಕರುಗಳಿಗೂ ವರುಷ ವರುಷ ಹೊಸ ಹೊಸ ಹುಡುಗರ ದರ್ಶನವಾಗುತ್ತಿರುತ್ತದೆ. ಅವರಲ್ಲಿಯೇ ಅವರುಗಳು ದೇಶದ ಭವಿಷ್ಯವನ್ನು ಕಾಣುತ್ತಿರುತ್ತಾರೆ! ಶಿಕ್ಷಕ ವೃತ್ತಿ ಜಗತ್ತಿನಲ್ಲಿಯೇ ಅತಿ ಶ್ರೇಷ್ಠವಾದ ವೃತ್ತಿ! ಅದಕ್ಕೆ ಎಂದೂ ಯಾರು ಯಾವ ಬೆಲೆಯನ್ನು ಕಟ್ಟಲಾರರು.

ನಮ್ಮ ದೇಶದ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನದ ಪ್ರತಿಯೊಬ್ಬರಿಗೂ ತುಂಬಾ ಗೌರವವಿದೆ.

ಅಂದು ನಮ್ಮ ಹೆತ್ತವರು ನಮ್ಮ ಶಿಕ್ಷಕರು ನಮಗೆ ಶಿಕ್ಷಿಸಿದರೇ ತಲೆನೇ ಕೆಡಿಸಿಕೊಳ್ಳುತ್ತಿರಲಿಲ್ಲ. ನಾವೇನಾದರೂ ಮನೆಯಲ್ಲಿ ಗುರುಗಳ ಮೇಲೆ ಕಂಪ್ಲೇಂಟ್ ಕೊಟ್ಟರೆ ನಾಳೆ ಶಾಲೆಗೆ ಬಂದು ವಿಚಾರಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ನಾಳೆ ಶಾಲೆಗೆ ಬಂದು ಎಲ್ಲಾ ಶಿಕ್ಷಕರ ಮುಂದೆ ಇವರು ಹೇಳುತ್ತಿದ್ದಾ ಡೈಲಾಗ್ ಕೇಳಿ ಯಾಕಾದರೂ ನಾವುಗಳು ಕಂಪ್ಲೇಂಟ್ ಮಾಡಿದೆವೆಂದು ಅನಿಸುತ್ತಿತ್ತು. ಅಷ್ಟರ ಮಟ್ಟಿಗೆ ನಮ್ಮ ಸಮಾಜ ಶಾಲಾ ಶಿಕ್ಷಕರೆಂದರೇ ಅಕ್ಷರಸಹ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಸಾಗಿಸುವ ಜವಾಬ್ದಾರಿಯುತ ನಾವಿಕರು ಎನ್ನುವಷ್ಟರ ಮಟ್ಟಿಗೆ ಅವರನ್ನು ಗೌರವಿಸುತ್ತಿದ್ದರು.

ಅವರುಗಳು ಏನೇ ದಂಡಿಸಿದರೂ ಅವರು ನಮ್ಮ ಎದುರಿಗೆ ಹೇಳುತ್ತಿದ್ದದೂ "ಇನ್ನೂ ಹೆಚ್ಚು ದಂಡಿಸಬೇಕು". ಸಾಣೆ ಹಿಡಿದಷ್ಟು ವಜ್ರ ಹೊಳಪು ಬರುತ್ತದೆ ಎಂದು ಗುರುಗಳಿಗೆ ಪ್ರೋತ್ಸಾಹಿಸುತ್ತಿದ್ದರು.

ಹಳ್ಳಿಗಳಲ್ಲಿ ಶಿಕ್ಷಕರೆಂದರೇ ಆ ಊರಿನ ಒಂದು ಆದರ್ಶ ಎಂಬಂತೆ ಅವರನ್ನು ನೋಡುತ್ತಿದ್ದರು. ಪ್ರತಿಯೊಬ್ಬರೂ ಅವರನ್ನು ನಮಗಿಂತ ಹೆಚ್ಚು ಅರಿವಿರುವ ವ್ಯಕ್ತಿಗಳು ಎಂಬಂತೆ ಕಾಣುತ್ತಿದ್ದರು. ಯಾವುದೇ ಸಮಸ್ಯೆಗೆ ಅವರಿಂದ ಪರಿಹಾರ ಸಿಗುವುದು ಎಂದುಕೊಂಡಿರುವರು.

ನಾವುಗಳು ಇಂದು ಯಾವುದಾದರೂ ಒಳ್ಳೆಯ ಸ್ಥಾನ ಮಾನದಲ್ಲಿದ್ದೇವೆ ಎಂದರೇ ಅದು ನಮ್ಮ ಗುರುಗಳ ಒಂದು ದೊಡ್ಡ ತರಬೇತಿಯ ಪ್ರತಿಫಲ.

ಆದ್ದರಿಂದ ನಮ್ಮ ಸಮಾಜ ಏನಾದರೂ ಹೊಸ ಭರವಸೆಯನ್ನು ಸಮಾಜದಲ್ಲಿ ಎಂದೆಂದೂ ಕಾಣಬೇಕೆಂದರೇ ಅದಕ್ಕೆ ಬೆಂಬಲವಾಗಿ ನಮ್ಮ ನಾಡಿನ ಅತಿ ದೊಡ್ಡ ಶಿಕ್ಷಕ ಸಮೊಹವೇ ಕಾರಣ.

ನಮ್ಮನ್ನು ಒಬ್ಬ ಚಿಂತನಶೀಲ,ಉತ್ತಮ ನಾಗರೀಕನಾಗಿ ಬಾಳುವಂತೆ ಮಾಡಿರುವುದರಲ್ಲಿ ಪ್ರತಿ ಶಿಕ್ಷಕರ ಕಾಣಿಕೆ ಅತಿ ದೊಡ್ಡದು.

ಪ್ರತಿಯೊಬ್ಬರೂ ತಾವುಗಳು ಬಾಲ್ಯದಲ್ಲಿ ಕಲಿತ ಶಾಲೆಯ ಶಿಕ್ಷಕರನ್ನು ಇಂದು ತುಂಬಾನೆ ಮೀಸ್ ಮಾಡಿಕೊಳ್ಳುತ್ತಿದ್ದಾರೆ ಎಂದರೇ ಅದು ಅತಿಶಯೋಕ್ತಿಯಲ್ಲ!

ನೀವುಗಳು ಏನಾಂತೀರಾ?

 ಹೇಳಿ "ಶಿಕ್ಷಕರ ಶುಭಾಶಯಗಳನ್ನು"