ಮನುಷ್ಯನಿಗೆ ಮಾತ್ರ ಗೊತ್ತಿರುವ ಒಂದೇ ಒಂದು ವಿದ್ಯೆ ಅಂದರೆ ಅದು ಬೇರೆಯವರನ್ನು ಹಾಡಿಕೊಳ್ಳುವುದು.
ಯಾವೊಂದು ಪ್ರಾಣಿಯು ತನ್ನ ಜೊತೆಯವರ ಬಗ್ಗೆ ಕೆಟ್ಟದಾಗಿ ಹಾಡಿಕೊಳ್ಳುವುದಿಲ್ಲ.
ಅಂಥ ಸಂದರ್ಭ ಬಂದರೇ ಎದುಬದುರಾಗಿ ಕಾದಾಡುತ್ತವೆ ಮಾತ್ರ. ಆದರೆ ಈ ಮನುಷ್ಯ ಪ್ರಾಣಿ ಎದುರಿಗೆ ಹೊರಾಡದೆ ಬೆನ್ನಿನ ಹಿಂದೆಯೇ ತನ್ನ ಶತ್ರು ಮಿತ್ರರ ಬಗ್ಗೆ ಮಾತನಾಡುವುದು, ಹೀಯಾಳಿಸುವುದು, ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನಾವು ಕಾಣಬಹುದು.
ಇದಕ್ಕೆ ಕಾರಣ ಮನುಷ್ಯ ಬೇರೆಯವರಿಗಿಂತ ತುಂಬ ಬುದ್ಧಿವಂತನಿರಬಹುದೇನೋ. ಇವನು ಯೋಚಿಸುವಷ್ಟು ಬೇರೆ ಯಾವ ಜೀವಿಯು ಯೋಚಿಸಲಾರದು ಅಲ್ಲವಾ?
ನಮ್ಮ ನಮ್ಮ ಜೊತೆಯಲ್ಲಿಯೇ ಬದುಕುವವರ ಬಗ್ಗೆ ಕಥೆ ಕಟ್ಟಿ ಮಾತನಾಡುವುದು ಎಷ್ಟೊಂದು ಕೆಟ್ಟತನವೆಂದರೇ.. ಹೀಗೆ ಅವರಿವರ ಬಾಯಿ ಮಾತಿಗೆ ಬಲಿಪಶುವಾದ ವ್ಯಕ್ತಿಗಳ ಮನೊಸ್ಥಿತಿ ದೇವರಿಗೆ ಪ್ರೀತಿ.
ಯಾರಾದರೂ ಹೊಸಬರು ನಮ್ಮ ನಮ್ಮ ಅಕ್ಕಪಕ್ಕ ಸೇರಿಕೊಂಡರುಅಂದರೇ ಮುಗಿಯಿತು. ಸುಖಾ ಸುಮ್ಮನೇ ಅವರ ವೈಕ್ತಿಕ ವಿಷಯಗಳನ್ನು, ಅವರ ಗತ ಸ್ಥಳ, ವ್ಯಕ್ತಿ, ಕುಟುಂಬ ಇತ್ಯಾದಿ ಪ್ರತಿಯೊಂದನ್ನು ಒಂದು ಕಿವಿಯಿಂದ ಇನ್ನೊಂದು ಕಿವಿಗೆ ವರ್ಗಾವಣೆ ಮಾಡಿಕೊಂಡು ಎಷ್ಟರ ಮಟ್ಟಿಗೆ ವಿಷಯಗಳನ್ನು ಕಲೆ ಹಾಕಿರುತ್ತಾವೆ ಎಂದರೇ ಯಾವುದೇ ನ್ಯೂಸ್ ಎಜೆನ್ಸಿಗೂ ಸಾಧ್ಯವಾಗುವುದಿಲ್ಲ. ಅಷ್ಟೊಂದು ಮಾಹಿತಿಗಳನ್ನು ಕೇವಲ ಅವರಿವರ ಬಾಯಿಯಿಂದಲೇ ಸಂಪಾಧಿಸಿಬಿಟ್ಟಿರುತ್ತಾರೆ.
ಇದು ಇನ್ನೂ ಯಾವುದಾದರೂ ಹೊಸ ಹುಡುಗಿ ಎಲ್ಲಿಯೇ ಆಗಲಿ ಒಂದು ಚಿಕ್ಕ ಗುಂಪು,ಜಾಗ,ಕೆಲಸ ಮಾಡುವ ಆಫೀಸ್ ಇಂಥ ಕಡೆ ಸೇರಿದರೆಂದರೇ ಮುಗಿದೇ ಹೊಯಿತು. ಪ್ರತಿಯೊಂದನ್ನೂ ಪೊಲೀಸ್ ತನಿಖೆಯ ರೀತಿಯಲ್ಲಿ ಹೌದಾ? ಗೊತ್ತಾ? ಹೀಗಂತೇ! ಕಾಲ ಕೆಟ್ಟು ಹೋಯಿತು. ಅವರೀವರ ಮಾತು ಯಾಕೆ ಬಿಡಿ! ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ.. ಹೀಗೆ ಪ್ರತಿಯೊಬ್ಬರೂ ಆ ಹೊಸ ವ್ಯಕ್ತಿಯ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ.
ಇದು ಯಾಕೆ?
ನನಗೆ ಅನಿಸುತ್ತದೆ ಇದೊಂದು ಸಾಂಕ್ರಮಿಕ ರೋಗದ ರೀತಿಯಲ್ಲಿ ಪ್ರತಿಯೊಬ್ಬರಲ್ಲೂ ಗೊತ್ತೋ ಗೊತ್ತಿಲ್ಲದೋ ಘಟಿಸುತ್ತಿರುತ್ತದೆ. ಆ ಸಮಯಕ್ಕೆ ಒಂದು ಚಿಕ್ಕ ಟೈಂಪಾಸ್ ಅಥವಾ ಬಾಯಿ ಚಪಲದಿಂದ ಏನೋ ಒಂದು ಮಾತು ಬೇಕು. ಅದೇ ಇದಾಗಿರುತ್ತದೆ.
ಒಮ್ಮೊಮ್ಮೆ ಈ ಚಿಕ್ಕ ಚಿಕ್ಕ ಮಾತುಗಳು ತುಂಬಾನೇ ಅತಿರೇಕಕ್ಕೆ ಹೋಗಿಬಿಡುವುದು ಉಂಟು. ಈ ಮಾತುಗಳೇ ವ್ಯಕ್ತಿ ವ್ಯಕ್ತಿಗಳ ಅವಮಾನಕ್ಕೋ ಅಥವಾ ಜೀವಕ್ಕೂ ಅಪಾಯವಾಗುವ ಸಂದರ್ಭಗಳು ಬರುವುದುಂಟು.
ಮುಖ್ಯವಾಗಿ ಈ ಮಸಾಲೆ ಮಾತುಗಳು ಮಾತನಾಡುವುದಕ್ಕೆ ಮತ್ತು ಕೇಳುವುದಕ್ಕೆ ತುಂಬಾನೆ ಖುಷಿಯಾಗುತ್ತಿರುತ್ತದೆ. ಯಾಕೆಂದರೇ ಇದು ನಮ್ಮಗಳಿಗೆ ಸಂಬಂಧಿಸಿದ ಮಾತಾಗಿರುವುದಿಲ್ಲವಲ್ಲಾ? ಅದು ಬೇರೆಯವರದಾಗಿರುತ್ತದೆ. ಒಮ್ಮೊಮ್ಮೆ ನಮ್ಮಗಳಿಗೆ ತುಂಬಾನೆ ಕುತೂಹಲವಿರುತ್ತದೆ. ಆ ಅಪರಿಚಿತ ವ್ಯಕ್ತಿಯ ಬಗ್ಗೆ ಏನಾದರೂ ತಿಳಿದುಕೊಳ್ಳಬೇಕು. ಚಿಕ್ಕ ಚಿಕ್ಕ ವಿಷಯಗಳನ್ನು ಈ ರೀತಿಯ ಲೂಸ್ ಟಾಕ್ ಮೂಲಕ ವಿಷಯ ಸಂಪಾಧನೆಯನ್ನು ಮಾಡಿಕೊಳ್ಳುವುದಕ್ಕೊಸ್ಕರ ಕೇಳುಗರು ಮಾತನಾಡುವವರನ್ನು ಪ್ರೋತ್ಸಾಹಿಸುತ್ತಾರೆ. ಕೇಳುಗರ ಆಸೆಯೆ ಮಾತನಾಡುವವರನ್ನು ಉತ್ತೇಜಿಸುತ್ತದೆ. ಹಾಗೆ ಹೀಗೆ ಎನ್ನುತ್ತಾ ವ್ಯಕ್ತಿಯ ತುಂಬ ಗೌಪ್ಯ ವಿಷಯಗಳ ಬಗ್ಗೆ, ಆ ವ್ಯಕ್ತಿಗೆ ಇಷ್ಟವಿರದ ವಿಷಯಗಳ ಬಗ್ಗೆ ಹಿಂದೆ ಮುಂದೆ ಮಾತನಾಡಿಕೊಳ್ಳುವುದಕ್ಕೆ ಶುರು ಮಾಡಿರುತ್ತೇವೆ.
ಈ ಮಾತುಗಳು ಅತಿ ಹೆಚ್ಚಾಗಿ ಆಗುವುದು ಎಂದರೇ ತುಂಬಾನೇ ಸುಂದರವಾಗಿರುವ ಹುಡುಗಿಯರು ಕಣ್ಣಿಗೆ ಬಿದ್ದರೇ ಮುಗಿಯಿತು ಹುಡುಗಾಟದ ಮಾತುಕತೆ ಗಾಳಿ ಸುದ್ಧಿಯಾಗಿ ಏನೇನೂ ರೀತಿಯಲ್ಲಿ ಎಲ್ಲಾರ ಬಾಯಿಯಲ್ಲಿ ಹರಿದಾಡಿ, ಸಾವಿರ ಸಲ ಹೇಳಿದ ಸುಳ್ಳು ನಿಜವಾಗುವ ರೀತಿಯಲ್ಲಿ ಒಂದು ಕಡೆಯಿಂದ ಆ ಹುಡುಗಿಯ ಬಗ್ಗೆ ಒಂದು ವಿಚಿತ್ರವಾದ ಇಮೇಜ್ ಬಿಲ್ಡ್ ಮಾಡಿಬಿಟ್ಟಿರುತ್ತಾರೆ.
ಅದು ನಿಜವಾ, ಸುಳ್ಳಾ? ಸತ್ಯವಾಗಿ ಮಾತನಾಡುವವ ಯಾರೊಬ್ಬರಿಗೂ ಗೊತ್ತಿರುವುದಿಲ್ಲ. ಎಲ್ಲರೂ ಹುಬ್ಬೇರುವಂತೆ ಕೇಳುತ್ತಾ ಕೇಳುತ್ತಾ ಇದ್ದರೂ ಇರಬಹುದು ಎಂದುಕೊಂಡಿರುತ್ತಾರೆ. ಯಾಕೆಂದರೇ ಆ ಹುಡುಗಿಯನ್ನು ಮುಖಾತಃ ಈ ಕೇಳುಗರು ಎಂದು ಮಾತನಾಡಿಸಿರುವುದಿಲ್ಲ. ಅವಳ/ನ ಪರಿಚಯವು ಇರುವುದಿಲ್ಲ. ಕೇವಲ ದೂರದಿಂದ ನೋಡುತ್ತಾ ನೋಡುತ್ತಲೆ ಈ ಗೆಳೆಯರ ಮಾತುಗಳನ್ನು ಆ ವ್ಯಕ್ತಿಯ ಜೊತೆಗೆ ಪೋಣಿಸಿಕೊಂಡಿರುತ್ತಾರೆ .
ಈ ರೀತಿಯ ಮಾತುಗಳು ಆ ಹುಡುಗಿಯ ಕಿವಿಗೆ ಏನಾದರೂ ಬಿದ್ದರೇ ದೇವರೇ ಕಾಪಾಡಬೇಕು.
ಅವರ ಪಾಡಿಗೆ ಅವರಿದ್ದರೂ ಈ ರೀತಿಯ ಮಾತುಗಳು ಪ್ರತಿಯೊಬ್ಬರ ಮೇಲು ಕೇಲವು ಸಮಯ ಬಂದೇ ಬಂದಿರುತ್ತವೆ. ಒಬ್ಬೊಬ್ಬರೂ ತುಂಬಾ ಸಿರೀಯಸ್ ಆಗಿ ತೆಗೆದುಕೊಂಡಿರುತ್ತಾರೆ ಮತ್ತೊಬ್ಬರೂ ಕಿವಿಯ ಮೇಲೆ ಹಾಕಿಕೊಳ್ಳದೆ ಸುಮ್ಮನೇ ಇಗ್ನೊರ್ ಮಾಡಿಬಿಡುತ್ತಾರೆ. ಅದರೇ ಪ್ರತಿಯೊಬ್ಬರೂ ಅದೇ ರೀತಿಯಲ್ಲಿ ಇರುತ್ತಾರೆ ಎಂದುಕೊಳ್ಳಬಾರದು.
ಮನುಷ್ಯನಿಗೆ ಸಮಾಜಿಕ ವಿಷಯಗಳಿಗಿಂತ ಈ ರೀತಿಯ ವ್ಯಕ್ತಿಯ ವೈಕ್ತಿಕ ವಿಷಯಗಳೇ ತುಂಬಾನೇ ರಸವತ್ತಾಗಿರುತ್ತವೆ.
ನೀವುಗಳು ಗಮನಿಸಿರಬಹುದು ಕೇಲವೊಂದು ಪತ್ರಿಕೆಗಳು ಪ್ರಸಿದ್ಧ ವ್ಯಕ್ತಿಗಳ ವೈಕ್ತಿಕ ವಿಷಯಗಳನ್ನು, ನಾಲ್ಕು ಗೋಡೆಯ ಮಧ್ಯದಲ್ಲಿನ ವಿಷಯಗಳನ್ನು ಸಾರ್ವಜನಿಕರಿಗೆ ಸುದ್ಧಿ ಮತ್ತು ವರದಿಯಾಗಿ ಮಸಾಲೆ ಭರಿತವಾಗಿ ಊಣಬಡಿಸುತ್ತವೆ. ಇಲ್ಲಿ ಇರುವುದು ಕೇವಲ ಅದೇ ಹುಡುಗಾಟದ ಬೇರೊಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳುವ ಮನಸ್ಸು ಮಾತ್ರ. ಈ ರೀತಿಯಲ್ಲಿ ತಮ್ಮ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಹಪಾಪಿ.
ಇಂಥ ಗೀಳನ್ನು ಚಿಕ್ಕದಾಗಿದ್ದಲೇ ಚಿವುಟಿಯಾಕಬೇಕು. ಸುಮ್ಮನೇ ಬೇರೆಯವನ್ನು ಹಾಡಿಕೊಳ್ಳುವುದು. ಅವರ ಹಿಂದೆ ಮುಂದೆ ಬಾಯಿಗೆ ಬಂದಂತೆ ಗುಸು ಗುಸು ಪಿಸ ಪಿಸ ಎನ್ನದೇ ಇರುವ ಯಥಾಸ್ಥಿತಿಯನ್ನು ಅರ್ಥ ಮಾಡಿಕೊಂಡು ಆ ವ್ಯಕ್ತಿಯ ಒಳ್ಳೆಯತನಗಳನ್ನು ಅರಿಯುವಂತಾಗಿರಬೇಕು. ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿರುತ್ತಾರೆ. ಕೇಲವೊಂದು ಸಮಯದಲ್ಲಿ ಯಾವುದೋ ಕೆಟ್ಟ ಗಳಿಗೆಯಲ್ಲಿ ಕೆಲವೊಂದು ಚಿಕ್ಕ ತಪ್ಪುಗಳು ಜರುಗಿದ್ದರೂ ಅವನ್ನೇ ದೊಡ್ಡದು ಮಾಡಿಕೊಂಡು ಆ ವ್ಯಕ್ತಿಯ ಬಗ್ಗೆ ಸುದ್ಧಿ ಮಾಡಬಾರದು.
ಇಂದು ನಾವು ಬೇರೊಬ್ಬರ ಬಗ್ಗೆ ಮಾತನಾಡುವ ಮಾತು ನಮ್ಮ ಬಗ್ಗೆ ಮತ್ತೊಬ್ಬರ ಮಾತಾಗಬಾರದು ಅಲ್ಲವಾ?