ಕರ್ನಾಟಕಕ್ಕೆ ಹೊಸದಾಗಿ ಒಂದು ಸುತ್ತು ಮಳೆಯಾಗಿ ಬರಗಾಲ, ಬರಗಾಲ ಎಂದು ಆಕಾಶವನ್ನು ನೋಡುತ್ತಿದ್ದ ಕನ್ನಡ ಮನಗಳಿಗೆ ಪ್ರಕೃತಿ ಕೊಂಚ ತಂಪನ್ನು ಎರೆದಿದೆ.
ಸಾಮಾನ್ಯ ಜನಗಳ ನಿತ್ಯ ಜೀವನದ ವೆಚ್ಚ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ! ಪ್ರತಿಯೊಂದು ಸಾಮಗ್ರಿಗಳು ಗಗನ ಕುಸುಮದ ರೀತಿಯಲ್ಲಿ ದುಬಾರಿ ಬೆಲೆಗೆ ಏರಿಬಿಟ್ಟಿವೆ. ಆದರೆ ಅದೆ ರೀತಿಯಲ್ಲಿ ಅವನ ಆದಾಯ ಸಿಗುತ್ತಿಲ್ಲ! ಇದೆ ಅತಿ ದೊಡ್ಡ ವಿಪರ್ಯಾಸ.
ಬೆಂಗಳೂರಿಗೆ ಬಂದರೆ. ಎಲ್ಲೆಲ್ಲೂ ವಾಸನೆಯದೆ ಮಾತು!
ಜನಗಳು ಸಹ ಬೇಕಾಬಿಟ್ಟಿಯಾಗಿ ನಿತ್ಯ ಟನ್ ಗಳಟ್ಟಲೆ ಕಸವನ್ನು ಉತ್ವಾದಿಸುವುದಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು.
ಅಲ್ಲಾ ನಗರದ ಇಷ್ಟೊಂದು ವೇಸ್ಟ್ ಎಲ್ಲಿಗೆ ಹಾಕಬೇಕು? ನೀವೆ ಹೇಳಿ?
ಇದು ವರ್ತಮಾನದ ಒಂದು ರೌಂಡ್ ಸಮಾಚಾರ!
ಗೆಳೆಯರ ಲೋಕದಲ್ಲಿ ವಿಶೇಷವಾದ ಘಟನೆಗಳು ಜರುಗುತ್ತಿವೆ. ಅವರುಗಳು ಅಗಾಧವಾದ ಸಾಧನೆಗಳನ್ನು ಮಾಡಲೇಬೇಕು ಎಂಬ ಒತ್ತಡದಲ್ಲಿ ವಿಭಿನ್ನವಾದ ಚಿಕ್ಕ ಚಿಕ್ಕ ಸಾಧನೆಗಳನ್ನು ಅವರುಗಳು ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿ, ಓದುತ್ತಿರುವ ಕಾಲೇಜುಗಳಲ್ಲಿ, ಇರುವ ಊರುಗಳಲ್ಲಿ ಮಾಡುತ್ತಿದ್ದಾರೆ.
ಯಾಕೆಂದರೇ ಈ ಜೀವನ ಅನ್ನುವುದು ನಿಂತ ನೀರಾಗಬಾರದು. ಏನಾದರೂ ಒಂದು ಹೊಸತನಕ್ಕೆ ಸದಾ ನಮ್ಮನ್ನು ನಾವುಗಳು ತೆರೆದುಕೊಳ್ಳಬೇಕು.
ನಮ್ಮಂತಹ ಸಾಮಾನ್ಯ ಜನಗಳಿಗೆ ಈ ರೀತಿಯ ಚಿಕ್ಕ ಚಿಕ್ಕ ಸಾಹಸಗಳೆ ಜೀವನದ ಮೈಲುಗಲ್ಲುಗಳು.
ಹಳ್ಳಿಯ ರೈತಾಪಿ ಜನಗಳಿಗೆ ಮಳೆಯೇ ಷೇರು, ಸನಸೇಕ್ಸ್. ಆದರ ಮೇಲೆ ಅವರ ವರುಷದ ಗಳಿಕೆ ನಿರ್ಧಾರವಾಗುತ್ತದೆ. ಹಳ್ಳಿಯ ರೈತ ಚೆನ್ನಾಗಿದ್ದರೆ ದಿಲ್ಲಿಯ ದೊರೆ ಸುಖವಾಗಿರಬಹುದು. ಅವನು ನಿಟ್ಟುಸಿರಿಟ್ಟರೆ ದೇಶವೆ ಒಂದು ಕ್ಷಣ ನಡುಗಿಬಿಡುತ್ತದೆ. ನಮ್ಮದು ರೈತಾಪಿ ದೇಶ ಅವರ ಸುಖವೇ ದೇಶದ ಸುಖ. ಅವರನ್ನು ಬಿಟ್ಟು ನಾವುಗಳು ನಮ್ಮ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಪ್ರಚಲಿತ ರಾಜಕೀಯದ ಗೊಂದಲಗಳಲ್ಲಿ ಕೇಂದ್ರ ಸರ್ಕಾರಕ್ಕೆ ಕಲ್ಲಿದ್ದಲಿನ ಕಪ್ಪು ಮೆತ್ತಿಕೊಂಡಿದೆ. ಕಲ್ಲಿದ್ದಲು ಮತ್ತು ಇಂದನ ಖಾತೆಯನ್ನು ಮಾನ್ಯ ಪ್ರಧಾನ ಮಂತ್ರಿಗಳೆ ನೋಡಿಕೊಳ್ಳುತ್ತಿದ್ದಾರೆ. ಅವರು ಇದ್ದರೂ ಈ ರೀತಿಯ ಬೃಹದಾಕಾರವಾದ ಭ್ರಷ್ಟಾಚಾರ ನೆಡೆದಿದೆ ಎಂದರೇ.. ಭಾರತೀಯರಿಗೆ ನಿತ್ಯ ಒಂದಲ್ಲಾ ಒಂದು ಭ್ರಷ್ಟಾಚಾರದ ಸುದ್ಧಿಗಳ ಸುರಿಮಳೆ. ೨ಜಿ ನಂತರದ ಬಹು ದೊಡ್ಡ ಆಕ್ರಮ ಇದಾಗಿದೆ.
ಆದರೇ ಕೇಳುವವರು ಯಾರು? ನಮ್ಮ ಪ್ರಜಾಡಳಿತದಲ್ಲಿ ಕೇವಲ ಐದು ವರುಷಕ್ಕೆ ಒಮ್ಮೆ ಮಾತ್ರ ನೆಚ್ಚಿನ ಸರ್ಕಾರವನ್ನು ಆರಿಸುವ ಅವಕಾಶ. ಬದಲಾಯಿಸುವ ಅವಕಾಶ ಇದೀಯಾ? ಅಲ್ಲಿಯವರೆಗೂ ಅವರು ಏನೇನೋ ನಾಟಕ ಮಾಡಿದರೂ ಮೂಕ ಪ್ರೇಕ್ಷಕನಾಗಿ ನೋಡುವುದೊಂದೆ ಮತದಾರನ ಕಾಯಕ.
ಬದಲಾವಣೆಯ ಒಂದು ಸಣ್ಣ ಗಾಳಿ ಎಲ್ಲಿಯೂ ಕಾಣುತ್ತಿಲ್ಲಾ! ಅಷ್ಟರ ಮಟ್ಟಿಗೆ ನಿರಾಶದಾಯಕ ವಾತವಾರಣ ಇದಾಗಿದೆ.
ಸಾಮಾನ್ಯ ಜನಗಳ ನಿತ್ಯ ಜೀವನದ ವೆಚ್ಚ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ! ಪ್ರತಿಯೊಂದು ಸಾಮಗ್ರಿಗಳು ಗಗನ ಕುಸುಮದ ರೀತಿಯಲ್ಲಿ ದುಬಾರಿ ಬೆಲೆಗೆ ಏರಿಬಿಟ್ಟಿವೆ. ಆದರೆ ಅದೆ ರೀತಿಯಲ್ಲಿ ಅವನ ಆದಾಯ ಸಿಗುತ್ತಿಲ್ಲ! ಇದೆ ಅತಿ ದೊಡ್ಡ ವಿಪರ್ಯಾಸ.
ಬೆಂಗಳೂರಿಗೆ ಬಂದರೆ. ಎಲ್ಲೆಲ್ಲೂ ವಾಸನೆಯದೆ ಮಾತು!
ಬೆಂಗಳೂರು ಇಂದು ಮತ್ತೊಂದು ಅಪಖ್ಯಾತಿಗೆ ಗುರಿಯಾಗುತ್ತಿದೆ. ಉಧ್ಯಾನ ನಗರಿ, ಶಾಂತಿಯ ಸ್ವಚ್ಛ ನಗರ, ಐಟಿ, ಬಿಟಿಯ ನಗರ ಎಂಬ ಬಿರುದುಗಳೆಲ್ಲಾ ಮಣ್ಣುಪಾಲು ಮಾಡುವ ರೀತಿಯಲ್ಲಿ ಡರ್ಟಿ ಗಾರ್ಬೆಜ್ ಸಿಟಿಯಾಗುತ್ತಿದೆ. ಎಲ್ಲೆಲ್ಲಿ ನೋಡಿದರೂ, ವಾರವಾದರೂ ವಿಲೇವರಿಯಾಗದ ರಾಶಿ, ರಾಶಿ, ಗುಪ್ಪೆಯ ಕಸ, ಕಸ ಮತ್ತು ಕಸ. ಪ್ರತಿಯೊಬ್ಬರೂ ಮೂಗುಮುಚ್ಚಿಕೊಂಡು ರಸ್ತೆಗಳಲ್ಲಿ ನಡೆದಾಡುವಂತಹ ಪರಿಸ್ಥಿತಿ ಬಂದುಬಿಟ್ಟಿದೆ.
ಜನಗಳು ಸಹ ಬೇಕಾಬಿಟ್ಟಿಯಾಗಿ ನಿತ್ಯ ಟನ್ ಗಳಟ್ಟಲೆ ಕಸವನ್ನು ಉತ್ವಾದಿಸುವುದಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು.
ಅಲ್ಲಾ ನಗರದ ಇಷ್ಟೊಂದು ವೇಸ್ಟ್ ಎಲ್ಲಿಗೆ ಹಾಕಬೇಕು? ನೀವೆ ಹೇಳಿ?
ನಿತ್ಯ ದೊರೆಯುವ ಈ ಗಾರ್ಬೇಜ್ ನ್ನು ನಗರದಿಂದ ದೊರಕ್ಕೆ ತೆಗೆದುಕೊಂಡು ಹೋದರೂ ಅದು ಪುನಃ ನಮ್ಮ ರಾಜ್ಯದ ಯಾವುದೋ ಒಂದು ಹಳ್ಳಿಯ ಹೊಲ, ಜಾಗ, ನೀರು ಇರುವ ಜಾಗಕ್ಕೆ ಹಾಕಬೇಕಲ್ಲವಾ? ನಮ್ಮ ನಗರಗಳು ಮಾತ್ರ ಸುಂದರ ಮತ್ತು ಆರೋಗ್ಯಕರವಾಗಿದ್ದರೇ ಸಾಕೇ? ಅಕ್ಕ ಪಕ್ಕದ ಹಳ್ಳಿಯ ಜನಗಳೇನೂ ಪಾಪ ಮಾಡಿದ್ದಾರೆ. ನಗರದ ಮಂದಿ ಉತ್ಪಾದಿಸುವ ಈ ಕಸವನ್ನು ಮತ್ತು ಕಸದ ವಾಸನೆಯನ್ನು ಕುಡಿಯಲು. ಆದ್ದರಿಂದ ಬೆಂಗಳೂರಿನ ಜನಗಳು ಇನ್ನಾದರೂ ಕಸವನ್ನು ಮಾಡುವ ಮೊದಲು ನೂರು ಬಾರಿ ಯೋಚಿಸುವುದು ಇಂದಿನ ತುರ್ತು ಕೆಲಸವಾಗಿದೆ.
ಇದು ವರ್ತಮಾನದ ಒಂದು ರೌಂಡ್ ಸಮಾಚಾರ!
ಗೆಳೆಯರ ಲೋಕದಲ್ಲಿ ವಿಶೇಷವಾದ ಘಟನೆಗಳು ಜರುಗುತ್ತಿವೆ. ಅವರುಗಳು ಅಗಾಧವಾದ ಸಾಧನೆಗಳನ್ನು ಮಾಡಲೇಬೇಕು ಎಂಬ ಒತ್ತಡದಲ್ಲಿ ವಿಭಿನ್ನವಾದ ಚಿಕ್ಕ ಚಿಕ್ಕ ಸಾಧನೆಗಳನ್ನು ಅವರುಗಳು ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿ, ಓದುತ್ತಿರುವ ಕಾಲೇಜುಗಳಲ್ಲಿ, ಇರುವ ಊರುಗಳಲ್ಲಿ ಮಾಡುತ್ತಿದ್ದಾರೆ.
ಯಾಕೆಂದರೇ ಈ ಜೀವನ ಅನ್ನುವುದು ನಿಂತ ನೀರಾಗಬಾರದು. ಏನಾದರೂ ಒಂದು ಹೊಸತನಕ್ಕೆ ಸದಾ ನಮ್ಮನ್ನು ನಾವುಗಳು ತೆರೆದುಕೊಳ್ಳಬೇಕು.
ಹಾಗೆಯೇ ಸುಮಾರು ಸ್ನೇಹಿತರು ಹೊಸ ಹೊಸ ಕೆಲಸಗಳನ್ನು ಹುಡುಕಿಕೊಂಡು ಬೇರೆ ಬೇರೆ ಹೊಸ ಕಂಪನಿಗಳಿಗೆ ಹೋಗಿದ್ದಾರೆ. ಅಲ್ಲಿ ಪುನಃ ಹೊಸ ಕೆಲಸ, ಹೊಸ ಜನ, ಹೊಸ ವಾತವರಣವನ್ನು ಕಂಡು ಅಚ್ಚರಿಪಟ್ಟಿದ್ದಾರೆ. ಇನ್ನೊಂದಷ್ಟು ಮಂದಿ ಹೊರದೇಶಗಳಿಗೆ ತಮ್ಮ ಸಂಸ್ಥೆಗಳಿಂದ, ಓದುತ್ತಿರುವ ಕಾಲೇಜುಗಳಿಂದ ಹೋಗಿ ಹೊಸ ಅನುಭವವನ್ನು ಪಡೆದುಕೊಂಡು ಬಂದಿದ್ದಾರೆ. ಮತ್ತೊಂದಷ್ಟು ಸ್ನೇಹಿತರು ಹೊಸ ಕೆಲಸ, ಹೊಸ ಓದನ್ನು ಹುಡುಕುತ್ತಿದ್ದಾರೆ.
ನಾವುಗಳು ನಮ್ಮ ಸವೆದ ಹೆಜ್ಜೆಗಳನ್ನು ಗಮನಿಸಿದರೇ ನಾವುಗಳು ಈಗ ಇಲ್ಲಿದ್ದೇವಲ್ಲಾ ಎಂಬ ಹೆಮ್ಮೆಯನ್ನು ಮನದಲ್ಲಿ ಮೊಡಿಸಿರುತ್ತದೆ.
ಅಂತೂ ಈ ಸವಿ ಸವಿ ಬಾಳಿನಲ್ಲಿ ನಿತ್ಯ ಸ್ನೇಹಮಯವಾದ ವಾತಾವರಣವೇ ಬದುಕಿಗೊಂದು ಭರವಸೆಯನ್ನು ಕೊಡುತ್ತದೆ.
ನಮ್ಮ ಗೆಲುವಿಗೆ ನಮ್ಮ ಜೊತೆಯವರ ಚಪ್ಪಾಳೆಯೇ ಸ್ಫೂರ್ತಿ! ಅಷ್ಟರ ಮಟ್ಟಿಗೆ ನಾವೆಲ್ಲಾ ಧನ್ಯರು.
ನಮ್ಮ ಗೆಲುವಿಗೆ ನಮ್ಮ ಜೊತೆಯವರ ಚಪ್ಪಾಳೆಯೇ ಸ್ಫೂರ್ತಿ! ಅಷ್ಟರ ಮಟ್ಟಿಗೆ ನಾವೆಲ್ಲಾ ಧನ್ಯರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ