ಭಾನುವಾರ, ಡಿಸೆಂಬರ್ 18, 2011

ಹೊಸ ವರುಷ ಅಂದರೇ...

ಒಂದು ಸಂವತ್ಸರ ಎಂದರೇನು ಅಂತಾ ಒಂದು ವರ್ಷ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಯನ್ನು ಕೇಳಬೇಕಂತೆ. ಅವನ ಕಠಿಣ ಪ್ರರಿಶ್ರಮದ ವಿದ್ಯಾಭ್ಯಾಸವೇ ವರುಷದ ಕೊನೆಯಲ್ಲಿ ಬರುವ ಪರೀಕ್ಷೆಯ ಪಲಿತಾಂಶವನ್ನು ಪ್ರತಿಪಲಿಸುತ್ತದೆ. ಮುನ್ನೂರು ಅರವತೈದು ದಿನಗಳನ್ನು ವ್ರತದಂತೆ ಕಳೆದವರು ನಮ್ಮ ಸುತ್ತ ಮುತ್ತಲಲ್ಲಿ ಬಹಳಷ್ಟು ಜನಗಳ ಸಿಗಬಹುದು.

ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ದಿನಗಳನ್ನು, ತಿಂಗಳುಗಳನ್ನು ದೂಡುತ್ತಿರುತ್ತರೆ. ದೂಡುವುದೇನೂ ಏನು ಮಾಡದಿದ್ದರೂ ಕಾಲಾಯ ತಸ್ಮಯಾ ನಮಾಃ ಎಂಬ ರೀತಿಯಲ್ಲಿ ಬೆಳಗಾಗುವುದು, ರಾತ್ರಿಯಾಗುವುದು ಗೊತ್ತಾಗದ ರೀತಿಯಲ್ಲಿ ಎಷ್ಟೊಂದು ವೇಗವಾಗಿ ದಿನಗಳು ಕಳೆದು ಪುನಃ ಹೊಸ ವರುಷದ ಹೊಸ್ತಿನಲ್ಲಿ ಬಂದು ನಿಂತಿರುತ್ತೇವೆ.

ವರುಷದ ಕೊನೆಯಲ್ಲಿ ಬಂದು ನಿಂತು ಹಿಂತಿರುಗಿ ನೋಡಿದಾಗ ನಾವುಗಳು ಒಂದು ವರುಷದಲ್ಲಿ ಏನೇನು ಮಾಡಿದೇವು, ಏನೇನು ನೋವು, ಸುಖದ, ಸಂತೋಷದ ಕ್ಷಣಗಳನ್ನು ಅನುಭವಿಸಿದೆವು. ಎಷ್ಟು ಎಷ್ಟು ಗಳಿಸಿದೆವು ಸಂಪತ್ತನ್ನು, ಗೆಳೆತನವನ್ನು, ಙ್ಞಾನವನ್ನು, ಒಳ್ಳೆತನವನ್ನು, ತಿಳುವಳಿಕೆಯನ್ನು, ಸಹಕಾರವನ್ನು ಇತ್ಯಾದಿ ಸಕರಾತ್ಮಕ ವಿಷಯಗಳ ಪಟ್ಟಿಯನ್ನು ಹಾಗೆಯೇ ನಮ್ಮ ಕಣ್ಣ ಮುಂದೆ ತಂದು ನೋಡಬಹುದು.

ಹಾಗೆಯೇ ವೃಥಾ ಕಾಲಹರಣವನ್ನು ಮಾಡಿದ ನೇಗೆಟಿವ್ ಅಂಶಗಳನ್ನು ನಮ್ಮ ನಮ್ಮಲ್ಲಿ ಕಾಣಬಹುದು. ಎಷ್ಟನ್ನು ನಷ್ಟ ಮಾಡಿಕೊಂಡೇವು ಎಂಬುದನ್ನು ಅದೇ ಪುನಃ ಸಂಪತ್ತು, ಗೆಳೆತನ, ಮೋಸ, ಸುಳ್ಳು, ಅವಮಾನ.. ಇತ್ಯಾದಿ. ಆದರೇ ನಮಗೆ ನಾವುಗಳು ಅನುಭವಿಸಿದ ನೋವು, ದುಃಖದ ಕ್ಷಣಗಳ ನೆನಪು ಖಾತ್ರಿಯಾಗಿ ನೆನಪಿನಲ್ಲಿ ಇರುತ್ತೇವೆ. ಅದೇ ನಾವುಗಳು ನಮಗೆ ತಿಳಿಯದೇ ಬೇಕಂತಲೇ ಬೇರೆಯವರಿಗೆ ಮಾಡಿದ ಅದೇ ನೋವು,ದುಃಖ ಅಪಕಾರಗಳು ನೆನಪಿನಲ್ಲಿ ಏನಂದರೂ ಇರುವುದಕ್ಕೆ ಸಾಧ್ಯವಿಲ್ಲ. ಅದುವೆ ಮನಸ್ಸಿನ ಮರ್ಮ. ಅದರ ಹೊಣೆ ಅನುಭವಿಸಿದವರಿಗೆ ಮಾತ್ರ!

ವ್ಯಾಪಾರಸ್ಥರುಗಳಿಗೆ ಪ್ರತಿ ವರ್ಷವು ಒಂದೊಂದು ಮೈಲುಗಲ್ಲೆ ಸರಿ. ಇಂದಿನ ವರುಷಕ್ಕಿಂತ ಮುಂದಿನ ವರುಷದಲ್ಲಿ ಹೆಚ್ಚಿನ ದುಡಿಮೆಯನ್ನು ಮಾಡಲು ವಿವಿಧ ಯೋಜನೆಗಳನ್ನು ಹುಟ್ಟಿ ಹಾಕಿಕೊಂಡಿರುತ್ತಾರೆ. ಹಿಂದಿನ ವರುಷದ ಪಾಠಗಳನ್ನು ಗಮನಿಸುತ್ತಾ ಮುಂದಿನ ವ್ಯಾಪಾರವನ್ನು ಜಾಗರೂಕತೆಯಲ್ಲಿ ಹೆಜ್ಜೆ ಇಡುತ್ತಾರೆ.

ಸಾಮಾನ್ಯ ಜನಗಳಿಗೆ ಪ್ರತಿಯೊಂದು ವರುಷವು ಒಂದೇ ಅನಿಸಬಹುದು. ಅದು ಆಯಾ ಆ ವ್ಯಕ್ತಿಗೆ ಸಂಬಂಧಿಸಿದ್ದು. ಅವನು ಹೇಗೆ ಅದನ್ನು ಸ್ವೀಕಾರ ಮಾಡುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಒಬ್ಬೊಬ್ಬರದು ಒಂದೊಂದು ಕನಸಿರುತ್ತದೆ. ಅದರ ಸಾಕಾರಕ್ಕೆ ಮುಂದೆ ಬರುವ ಹೊಸ ಮುನ್ನೂರ ಅರವತೈದು ದಿನಗಳೇ ಆಶಾಕಿರಣ. ಆದರೇ ನಾಳೆ ನಾಳೆ ಎಂದು ಹೇಳಿಕೊಂಡು ತನ್ನ ಹೊಣೆಯನ್ನು ಮುಂದೂಡಿಕೊಂಡರೇ ಆ ದೇವರು ಸಹಾಯ ಮಾಡಲಾರ. ಆದರೇ ನಮ್ಮ ಈ ಮನಸ್ಸಿಗೆ ನಾಳೆ ಅಂದರೇ ಅದೇನೋ ತುಂಬ ಆಕರ್ಷಣೇ?

ತಿಂಗಳ ಕೆಲಸ ಮಾಡುವ ಮಂದಿಗೆ ಹೊಸ ವರುಷವೆಂದರೇ ಹುದ್ದೆಯಲ್ಲಿ ಪ್ರಮೋಶನ್, ಸಂಬಳ ಬಡ್ತಿಯ ಕನಸು. ಕಳೆದ ವರುಷದಲ್ಲಿ ಅಂದುಕೊಂಡಂತಹ ಯಾವುದೇ ಕಾರ್ಯಗಳು ಕೈಗೆ ಸಿಗದಿದ್ದವುಗಳನ್ನು ಮುಂದಿನ ವರುಷದಲ್ಲಿ ದಕ್ಕಿಸಿಕೊಳ್ಳಬೇಕು ಎಂಬ ನಿರ್ಧಾರದ ಮನಸ್ಸು!

ರಾಜಕೀಯದಲ್ಲಿ ಇರುವವರಿಗೆ..ಓ ಚುನಾವಣೆಯ ದಿನಗಳು ಹತ್ತಿರ ಬರುತ್ತಿವೆ ಮತ್ತೇ ಜನಗಳ ಮುಂದೆ ಹೋಗಿ ಮತ ಕೇಳಬೇಕಲ್ಲಪ್ಪಾ ಎಂಬ ಭಯ.. ಯಾಕಾದರೂ ಈ ವರುಷಗಳು ಕಳೆದು ಐದು ವರುಷಗಳಾಗುತ್ತಾವೋ ಎಂಬ ಭಯ! ಅವರುಗಳ ಕೈಯಲ್ಲಿ ಏನಾದರೂ ಈ ವರುಷದ ಚಕ್ರ ಇದ್ದಿದ್ದರೆ ಏನೇನು ಅನಾಹುತ ಮಾಡಿಬಿಟ್ಟಿರುವರೇನೋ?

ನಟ, ನಟಿಯರುಗಳಿಗೆ ಹೊಸ ವರುಷ ಅಂದರೇ ಭಯವಂತೂ ಇರಬಹುದು...ಯಾಕೆಂದರೇ ಒಂದು ವರುಷ ದೊಡ್ಡವರಾಗುತ್ತಾರೆ.. ವಯಸ್ಸಾದಷ್ಟು ಬೇಡಿಕೆ ಕಡಿಮೆ ಎಂಬ ಭಾವನೆ ಬಂದರೂ ಬರಬಹುದೇನೋ.. ಅವರ ಮಾರ್ಕೇಟ್ ಎಲ್ಲಿ ಬಿದ್ದು ಹೋಗುತ್ತೋ ಮುಂದಿನ ವರುಷದಲ್ಲಿ ಎಲ್ಲಿಂದ ಹೊಸಬರ ಎಂಟ್ರೀ ಸಿಕ್ಕಿ ನಮ್ಮನ್ನು ಕೇಳದಂತಾಗುತ್ತೋ? ಎಂದು.




ಹೀಗೆ ಪ್ರತಿಯೊಂದು ರಂಗದಲ್ಲಿರುವವರ ಮಂಡಿಯನ್ನು ಹೊಸದಿನಗಳು, ತಿಂಗಳುಗಳು ಮತ್ತು ವರುಷಗಳು ತಿಂದಿರುತ್ತಲೇ ಇರುತ್ತವೆ.

ದಿನಗಳು ಯಾವುದೋ ಮಾಯದಲ್ಲಿ ಉರುಳುತ್ತಲೇ ಇರುತ್ತವೆ. ಅದರೇ ಅವುಗಳನ್ನು ಹೇಗೆ ಗಟ್ಟಿಯಾಗಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮೆಲ್ಲಾರ ಏಳ್ಗೆ ಮತ್ತು ಉನ್ನತಿ ಅವಲಂಬಿಸಿರುತ್ತದೆ.

ಸಮಯ, ದಿನ, ತಿಂಗಳು ಮತ್ತು ವರುಷಗಳು ಮಾತ್ರ ಅನಿಸುತ್ತದೆ ಪ್ರತಿಯೊಬ್ಬರಿಗೂ ಯಾವುದೇ ತಾರತಮ್ಯವಿಲ್ಲದೇ ಸರಿಸಮನಾಗಿ ಕೈಗೆ ಸಿಗುವುದು ಮತ್ತು ಪಡೆಯುವುದು. ಕಾಲ ಮಾತ್ರ ಯಾರನ್ನೂ ಎಂದೂ ಬೇದ ಭಾವದಿಂದ ಕಂಡ ಉದಾಹರಣೆಗಳು ನಮ್ಮ ಮುಂದೆ ಇಲ್ಲ.

ಸಮಯದ ಮಹತ್ವವೆನ್ನುವುದು ಸಾಧಕರಿಗೆ ಮಾತ್ರ ಗೊತ್ತು ಎಂದು ತಿಳಿದವರು ಹೇಳುತ್ತಿರುತ್ತಾರೆ. ಅವರಿಗೆ ಪ್ರತಿ ನಿಮಿಷವು ಫಲವತ್ತಾಗಿರುವಂತಹದ್ದು.

ಕಾಲ ಕೆಟ್ಟು ಹೋಯ್ತು ಅನ್ನುತ್ತೇವೆ. ಆದರೆ ಕಾಲ ಯಾವಾಗಲೂ ಒಂದೇ ಜನಗಳು ಬದಲಾಗಿರುವುದು.

ವರುಷ ವರುಷಕ್ಕೂ ವಿಪರೀತವಾದ ಬದಲಾವಣೆಗಳನ್ನು ಜನ ಜನರ ಮಧ್ಯೆ ಕಾಣಬಹುದಾಗಿದೆ. ಮುಂದುವರಿದ ಈ ದಿನಮಾನಗಳಲ್ಲಿ ಎಲ್ಲದಕ್ಕಿಂತ ಸಮಯಕ್ಕೆ ಬಹು ಮುಖ್ಯ ಬೆಲೆ ಬಂದಿದೆ. ಪ್ರತಿಯೊಬ್ಬರೂ ವೇಗವಾದ ಜೀವನವನ್ನು ನಡೆಸುತ್ತಿದ್ದರೆ. ಬೆರಳ ತುದಿಯಲ್ಲಿ ಜಗತ್ತನ್ನು ಕಾಣುವಂತಾಗಿದೆ.

ಮಾನವನ ಮಾನವರ ನಡುವಿನ ಜೀವಂತ ಜೀವ ಸೆಲೆ ಬತ್ತಿಹೋದಂತಾಗಿದೆ. ಅಲ್ಲಿ ಇರುವುದೇಲ್ಲಾ ಕೇವಲ ಹಳೆಯ ಕಲೆ ಮಾತ್ರ. ಇದು ಹೀಗೆ ಬಿಟ್ಟರೆ ಮನುಷ್ಯ ಮತ್ತು ನಾವು ಉಪಯೋಗಿಸುತ್ತಿರುವ ಈ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಇರುವಂತಹ ವ್ಯತ್ಯಾಸ ಏನೂ ಇಲ್ಲಾ ಎನ್ನುವಂತಾಗುತ್ತದೆ.

ಗಮನಿಸಿ ಇಂದು ಪ್ರತಿಯೊಬ್ಬ ಮನುಷ್ಯ ತನ್ನ ಅತಿ ಮುಖ್ಯ ಓಡನಾಡಿಯಾಗಿ ಕೈಯಲ್ಲಿ ಸೇಲ್, ಕಿವಿಯಲ್ಲಿ ಈಯರ್ ಫೋನ್, ಬಾಯಲ್ಲಿ ಮೈಕ್ರೋ ಫೋನ್ ಕಣ್ಣಲ್ಲಿ ಟಚ್ ಸ್ಕ್ರೀನ್ ಜೊತೆಯಲ್ಲಿ ಸವಿಯಾಗಿ ಕಳೆಯುತ್ತಾನೆ.

ಇಂದು ನಿಧಾನ ಎಂಬುದೇ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಪ್ರತಿಯೊಂದು ಪಾಸ್ಟ್, ಜಗತ್ತೇ ವೇಗದ ಜೊತೆಗೆ ಪೂರ್ಣವಾಗಿ ಸಮಾಗಮವಾಗಿಬಿಟ್ಟಿದೆ... ದೇವರೇ!

ಇದು ಎಷ್ಟರ ಮಟ್ಟಿಗೆ ಮಾರ್ಪಾಡಾಗಿ ಮುಂದುವರಿಯುತ್ತಿದೆ ಅಂದರೇ ಇಂದು ಇದ್ದುದ್ದೂ ಮುಂದೆ ಇಲ್ಲದಾಗುತ್ತಿದೆ. ಕಾಲದ ಜೊತೆಯಲ್ಲಿ ಇದರ ನಡೆ ಉಹಿಸಲು ಅಸಾಧ್ಯವಾದ ರೀತಿಯಲ್ಲಿ ದಾಪುಗಾಲು ಇಡುತ್ತಿದೆ.

ಇದಕ್ಕೆ ಕಡಿವಾಣ ನಮ್ಮ ನಿಮ್ಮಗಳ ಕೈಯಲ್ಲಿ ಮಾತ್ರ ಇದೆ.

ಬುಧವಾರ, ಡಿಸೆಂಬರ್ 14, 2011

ಕಷ್ಟಗಳನ್ನು ಹೀರಿಕೊಂಡು ಬದುಕುವ ಚೈತನ್ಯ

ಪೇಸ್ ಬುಕ್ ನಲ್ಲಿ ನಾನು ಒಂದು ಸುಂದರವಾದ ಸಂದೇಶವನ್ನು ಓದಿದೆ "ಯಶಸ್ಸು ತಲೆಗೆ ಏರಬಾರದು, ಸೋಲನ್ನು ಹೃದಯಕ್ಕೆ ತೆಗೆದುಕೊಳ್ಳಬಾರದು".

ಹೌದು ನಮಗೆ ಗೊತ್ತಿಲ್ಲದೆ ಏನಾದರೊಂದು ನೋವು, ಅವಮಾನ, ಸೋಲು, ದುಃಖ, ಪ್ರೀತಿಪಟ್ಟದ್ದನ್ನು/ಪಟ್ಟವರನ್ನು ಕಳೆದುಕೊಳ್ಳುವುದು ನಮ್ಮ ಮನಸ್ಸನ್ನು ತುಂಬ ಚಿಕ್ಕದಾಗಿ ಮಾಡಿ ಬರಿಸಲಾರದ ನೋವನ್ನುಂಟು ಮಾಡುತ್ತದೆ. ಇದು ಸರ್ವೇಸಾಮಾನ್ಯವಾದ ಸಂಗತಿಯಾಗಿದೆ.

ಮನುಷ್ಯನಿಗೆ ಮಾತ್ರ ಈ ರೀತಿಯ ಭಾವನೆಗಳಾಗುತ್ತವೆ ಅನಿಸುತ್ತದೆ. ಪ್ರಾಣಿಗಳಿಗೂ ಸಹ ಈ ರೀತಿಯ ಅನುಭವವುಂಟಾಗುತ್ತಿರುತ್ತದೆ, ಆದರೇ ಅವುಗಳು ಎಲ್ಲಿ ವ್ಯಕ್ತಪಡಿಸಬೇಕು. ಕಣ್ಣಿನಲ್ಲಿ ಒಂದು ಹನಿ ನೀರು ಒರಸಬಹುದೇನೋ ಅದು ಪ್ರಾಣಿಗಳ ಪ್ರಪಂಚ. ಆದರೆ ನಿಜವಾಗಿಯೋ ಅವುಗಳಿಗೂ ಈ ನೋವಿನ ಅನುಭವ ಆಗೇ ಆಗಿರುತ್ತದೆ.

ನಮಗೆ ಬಾಲ್ಯದಿಂದ ಒಂದು ಕಲ್ಪನೆಯಿರುತ್ತದೆ. ಯಾವೊಂದು ಕಷ್ಟದ ಬದುಕು ಬೇಡದ ಮನಸ್ಸು. ಕಷ್ಟ ಅಂದರೇ ಮಾರು ದೂರ ಓಡಿ ಹೋಗುವ ಮನಸ್ಸು. ಸುಖ ಎಂದರೇ ಕೇಳುವುದೇ ಬೇಡ ಮನತುಂಬ ಸಂಭ್ರಮವೇ ಸಂಭ್ರಮ ಅದೇ ಬದುಕು.

ನಮ್ಮ ಹೆತ್ತವರು ಸಹ ಅದೇ ರೀತಿಯಲ್ಲಿ ತಮ್ಮ ಮಕ್ಕಳನ್ನು ಬೆಳಸಿ ಪೋಷಿಸುತ್ತಾರೆ. ತಾವು ಅನುಭವಿಸಿದ ಯಾವುದೇ ಕಷ್ಟ ಕಾರ್ಪಣ್ಯಗಳು ತನ್ನ ಮಗ/ಮಗಳು ಎಂದು ಅನುಭವಿಸುವುದು ಬೇಡ ಎಂದು. ಆದಷ್ಟು ಹೆಚ್ಚು ಸುಖವಾಗಿ ಬೆಳಸುವ ಆಕಾಂಕ್ಷೆ. ಅದು ಹೆತ್ತವರ ಕರುಳಿನ ಪ್ರೀತಿಯ ಕನವರಿಕೆ.

ಹಸಿವಿನ ಅನುಭವವಾದರೇ ತಾನೇ ಅನ್ನದ ರುಚಿ ಗೊತ್ತಾಗುವುದು.ಕಷ್ಟಪಟ್ಟರೇ ತಾನೇ ಸುಖದ ಮಹತ್ವ ಗೊತ್ತಾಗುವುದು.

ಆದರ ಅನುಭವವಕ್ಕೆ ಅಸ್ಪದ ಕೊಡದ ರೀತಿಯಲ್ಲಿ ನಮ್ಮ ಹೆತ್ತವರು ನಮ್ಮನ್ನು ಸಾಕುತ್ತಾರೆ. ಬರೀ ಸುಖದ ಕತೆಗಳನ್ನು ಹೇಳುತ್ತಾರೆ. ನೀನು ಹಾಗೇ ಓದಿದರೇ ಹೀಗೆ ಇರಬಹುದು.. ಅವನಂತೆ ನೀವು ಹಣ ಸಂಪಾದಿಸಬಹುದು.. ಅವನಂತೆ ಮಜಾ ಉಡಾಯಿಸಬಹುದು.... ಇದೆ ನಿತ್ಯ ಕತೆ.

ಕಷ್ಟಪಟ್ಟು ಜೀವನದಲ್ಲಿ ನರಳುವವರ ಮತ್ತು ಅದನ್ನು ದಾಟಿ ಉನ್ನತವಾದ ಸಾಧನೆಯನ್ನು ಮಾಡಿರುವವರ ಕಥೆಗಳನ್ನು ಕಿವಿಗೂ ಸಹ ಹಾಕಲು ಮನಸ್ಸು ಮಾಡುವುದಿಲ್ಲ.

ಒಂದು ಸುಂದರ ಆಶಾ ಗೋಪುರದಲ್ಲಿ ಇಂದಿನ ಪೀಳಿಗೆಯನ್ನು ಇಟ್ಟುಬಿಡುತ್ತಾರೆ ಅನಿಸುತ್ತದೆ. ಯಾವುದಕ್ಕೂ ಕೂರತೆಯಿಲ್ಲದ ಜೀವನ. ವಿದ್ಯಾರ್ಥಿ ಜೀವನ ಎಂದರೇ ಅಕ್ಷರಶಃ ಚಿನ್ನದ ಜೀವನವಾಗಿ ಪರಿವರ್ತಿಸಿರುತ್ತಾರೆ. ಮಗುವಿಗೆ ಕಷ್ಟ ಎಂದರೇ ಅದರ ಹೋಂ ವರ್ಕ್, ಪರೀಕ್ಷೆ, ನೋಟ್ಸ್ ಬರೆಯುವುದು, ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವುದು.. ಇತ್ಯಾದಿ ಮಾತ್ರ. ಇದನ್ನು ಬಿಟ್ಟು ಬೇರೆ ಬದುಕು ಇಲ್ಲವೆಂಬಂತೆ ಮಾಡಿಬಿಡುತ್ತೇವೆನೋ ಅಲ್ಲವಾ?

ನಾವುಗಳು ಆ ವಯಸ್ಸಿನಲ್ಲಿ ಯಾವುದನ್ನು ಮನಸ್ಸಿಗೆ ಹಚ್ಚಿಕೊಳ್ಳದಂತಹ ಬದುಕು. ಏನಕ್ಕೂ ಕೊರತೆಯಿಲ್ಲದಂತಹದು.. ಇದೇ ನಮ್ಮ ಜೀವನ ಅನಿಸುತ್ತದೆ. ಆದರೇ ಇನ್ನೂಂದು ಮಗ್ಗುಲಿನ ನಮ್ಮ ಜೊತೆಯಲ್ಲಿಯೇ ಇರುವ ನಿಕೃಷ್ಟವಾದ ಪ್ರಪಂಚವನ್ನು ಕಾಣದವಾಗಿರುತ್ತೇವೆ.




ನಮ್ಮ ಎಲ್ಲಾ ಶಿಕ್ಷಣದ ಬದುಕನ್ನು ಪೂರ್ತಿ ಮಾಡಿ ದುಡಿಮೆಯ ರಂಗಕ್ಕೆ ಬಂದಾಗ ನೋಡಿ, ಒಂದು ಅರ್ಧ ನಿಜವಾದ ಜೀವನವನ್ನು ಮನುಷ್ಯ ನೋಡಲು ಶುರುಮಾಡುತ್ತಾನೆ. ಅಲ್ಲಿಯು ಸಹ ಅವನಿಗೆ ಅವನ ಹಿಂದಿನ ಹೆತ್ತವರು ಕೊಟ್ಟಂತಹ ಸೇಫ್ ಜೋನ್ ಪರಿಧಿಗೆ ಹೋಗಲು ಯಾವಾಗಲೂ ತವಕಿಸುತ್ತಾನೆ. ಅದೇ ಮನುಷ್ಯನ ಮನಸ್ಸು ಮತ್ತು ಹೃದಯ ಅಲ್ಲವಾ.. ತಾನು ಕಲಿತ ಮತ್ತು ಅನುಭವಿಸಿದ ೨೦ ವರ್ಷದ ಸುಖದ ಯಾವುದೇ ಅಪಮಾನ, ನೋವು, ಸೋಲುಗಳ ಕನಸು ಸಹ ಇಲ್ಲದ ಜೀವನ ಗಾಥೆಯೇ ಪುನಃ ಪುನಃ ನೆನಪಾಗುತ್ತಿರುತ್ತದೆ.

ಒಂದು ಚಿಕ್ಕ ಸೋಲು ನಮ್ಮನ್ನು ದಿಗ್ಬ್ರಮೆಗೆ ದೂಡುತ್ತದೆ. ಯಾರೊಬ್ಬರ ಒಂದು ಮಾತು ನಮ್ಮನ್ನು ನಿಷ್ಠುರನ್ನಾಗಿ ಮಾಡುತ್ತದೆ. ನಮ್ಮ ಅಹಂಗೆ ಪೆಟ್ಟು ಕೊಡುತ್ತದೆ. ಆಗಲೇ ಏನೇನೂ ಯೋಚನೆಗಳು ಮನದ ಮೊಲೆಯಿಂದ ಪ್ರದರ್ಶನಗೊಳ್ಳುತ್ತವೆ.

ಐಯಮ್ ರೀಯಲೀ ಡಿಸ್ಟರ್ಬ್ಡ್!

ಟೋಟಲಿ ಡಿಪ್ರೇಸ್ಡ್!

ಪುಲ್ ಪರ್ಸ್ ನಲ್ ಪ್ರಾಬ್ಲಮ್!

ಹೀಗೆ ನಮ್ಮ ಬಾಯಿಂದ ನಿತ್ಯ ಬರಲು ಶುರುವಾಗುತ್ತವೆ... ಇದಕ್ಕೆಲ್ಲಾ ಕಾರಣ ಗೊತ್ತಿರುವ ವಿಚಾರವೇ..

ಮನುಷ್ಯ ಯಾವಾಗಲೂ ಯಶಸ್ಸಿನಲ್ಲಿಯೇ ತೇಲುತ್ತಿರುವಾಗ ನೋವಿನ,ಸೋಲಿನ ಜಳವನ್ನು ಹೇಗೆ ತಡೆದುಕೊಳ್ಳಬೇಕು ಎಂಬುದೇ ಗೊತ್ತಾಗದಂತಾಗಿರುತ್ತದೆ. ಅದರೇ ಅದೇ ನಿಜವಾದ ಜೀವನ ಅಲ್ಲಿ ನಮ್ಮ ಜೊತೆ ನಮ್ಮ ಹೆತ್ತವರುಗಳು ಇರುವುದಿಲ್ಲ.. ಆ ಸುಖವದ ಮನೆಯ ಬೆಚ್ಚನೆಯ ಅಸರೆಯಿರುವುದಿಲ್ಲ.

ಹೊರಗಡೆಯ ಈ ಕೆಟ್ಟ ಪ್ರಪಂಚದಲ್ಲಿ ನಾವುಗಳು ಸಹ ಸತ್ಯಸಂಧರಾಗಿ ಬದುಕಬಹುದೇ ಎಂಬ ಒಂದು ದೊಡ್ಡ ಪ್ರಶ್ನೇ ದುತ್ತನೆ ನಿಂತುಬಿಡುತ್ತದೆ. ಇದು ಯಾಕೆ ನನಗೆ ಮಾತ್ರ ಎಂಬ ನಿರಾಸೆಯ ಕೂಗು ಮನದಲ್ಲಿ ಮೂಡುತ್ತದೆ.

ಆದರೇ ಇದು ಪ್ರತಿಯೊಬ್ಬರಿಗೂ ಬರುವಂತಹ ಸಾಮಾನ್ಯ ಅಡ್ಡಿ ಅಡಚಣೆಗಳು. ಕೇಲವರು ತುಂಬ ಸಲಿಸಾಗಿ ಅವುಗಳನ್ನು ದಾಟುತ್ತಾರೆ. ಗೊತ್ತಿಲ್ಲದವರು ಅದರಲ್ಲಿಯೇ ನರಳುತ್ತಾ ತಮ್ಮ ಅದೃಷ್ಟ, ಅಸರೆಗಾಗಿ ಒಂದು ದಿಕ್ಕಿಗೆ ದೃಷ್ಟಿ ಹರಿಸುತ್ತಾರೆ.

ನೋಡಿ ನಮ್ಮ ಈ ನಗರದಲ್ಲಿ ಯಾವುದೇ ಪತ್ರಿಕೆಯ ಎರಡನೇಯ ಮತ್ತು ಮೂರನೇಯ ಪುಟವನ್ನು ತಿರುವಿದರೇ.. ಎಷ್ಟೋ ಯುವ ಜೀವಗಳು ನಿತ್ಯ ಆತ್ಮಹತ್ಯೆಗೆ ತುತ್ತಾದ.. ನಿತ್ಯ ಅಸ್ವಭಾವಿಕವಾದ ಅವಘಡಗಳು. ಈ ಮುಂದುವರಿದ ಎಲ್ಲಾ ರೀತಿಯ ಸೌಕರ್ಯವಿರುವ ಹೈಟೆಕ್ ಪಟ್ಟಣದ ಈ ನಿತ್ಯ ಸ್ಮಶಾನ ವಾರ್ತೆಗಳು ಯಾಕೆ.. ?

ನನಗೆ ಅನಿಸುತ್ತದೆ ನಾವುಗಳು ಕಲಿಯುವ ಬಾಲ್ಯದ ದಿನಗಳ ಶಿಕ್ಷಣ ವ್ಯವಸ್ಥೆಯಲ್ಲಿ ಇವುಗಳ ಬಗ್ಗೆ ನಿಜವಾದ ಜೀವನದ ಪಾಠಗಳನ್ನು ತಿಳಿಪಡಿಸುವ ಅವಶ್ಯಕತೆ ಇಂದು ಹೆಚ್ಚಾಗಿದೆ ಅನಿಸುತ್ತದೆ. ಪ್ರತಿಯೊಬ್ಬರನ್ನು ವ್ಯಕ್ತಿತ್ವವನ್ನು ದಿಟ್ಟವಾಗಿ ದೃಢವಾಗಿ ಬೆಳಸುವಂತಹ ಪಾಠ ಬೇಕಾಗಿದೆ. ಪ್ರತಿಯೊಂದು ಚಿಕ್ಕ ಚಿಕ್ಕ ನೋವು, ಅವಮಾನಗಳನ್ನು ಸೈರಿಸಿ ಮನುಷ್ಯನ ಮನಸ್ಸನ್ನು ಗಟ್ಟಿ ಮಾಡುವ ನೀತಿ ಪಾಠಗಳು ನಮಗೆ ಬೇಕಾಗಿದೆ ಅನಿಸುತ್ತದೆ.

"ಸೋಲು ಗೆಲುವಿಗೆ ಸೋಪಾನ" ಎಂಬ ಗಾದೆಯ ಮಾತನ್ನು ಪ್ರತಿಯೊಬ್ಬರು ನಂಬುವಂತಹ ಸಮಾಜವನ್ನು ಕಟ್ಟುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ. ಬರೀ ಹಣವೊಂದನ್ನೇ ಸಂಪಾದಿಸುವುದೇ ಜೀವನವಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿಯಬೇಕಾಗಿದೆ.

ಮನುಷ್ಯ ಭಾವನಾತ್ಮಕ ಜೀವಿ.. ಅದಕ್ಕೆ ಹಣ, ವಸ್ತುಗಳ ಸೌಕರ್ಯಕ್ಕಿಂತಹ ವ್ಯಕ್ತಿ ವ್ಯಕ್ತಿ ಸಂಬಂಧಗಳ ಸಹ ಬಾಳ್ವೆ ಮತ್ತು ಅಸರೆಯ ಸುಂದರ ಕೈ ಬೇಕು.. ಆಗ ಆ ಮನಗಳ ಬಾಳ್ವೆ, ಬದುಕು ಕಷ್ಟಗಳನ್ನು ಹೀರಿಕೊಂಡು ಬದುಕುವ ಚೈತನ್ಯ ಪ್ರತಿಯೊಬ್ಬರದಾಗುತ್ತದೆ..

ಅಲ್ಲವಾ?

ಗುರುವಾರ, ಡಿಸೆಂಬರ್ 8, 2011

ಕೇಳುವವರು ಯಾರೂ..

ಮಾಗಿಯ ಕಾಲ ಅಂದರೇ ಇದೇ ಅನ್ನುವ ರೀತಿಯಲ್ಲಿ ಬೆಂಗಳೂರಿನ ಕೊರೆಯುವ ಚಳಿ ಮೈ ಮನಸ್ಸನ್ನೇಲ್ಲಾ ಬೆಚ್ಚಗೆ ಇಟ್ಟುಕೊಳ್ಳುವಂತೆ ಪ್ರೇರಪಿಸುತ್ತಿದೆ.

ಮುಂಜಾನೆ ಎದ್ದೇಳುವ ಸಮಯವನ್ನು ಏರುಪೇರು ಮಾಡುತ್ತಿದೆ. ಎದ್ದೇಳಲು ಮನಸ್ಸೇ ಬರುವುದಿಲ್ಲ. ಬೆಚ್ಚಗೆ ಮುಖ ತುಂಬ ಹೊದ್ದುಕೊಂಡು ಮಲಗೋಣ ಅನಿಸುತ್ತದೆ.

ಆದರೂ ಕೆಲಸ ಕಾರ್ಯ ಅಂತ ಎದ್ದೇಳಲೇ ಬೇಕು ನಮ್ಮ ಬದುಕು ಜಟಕಾ ಬಂಡಿಯನ್ನು ನೆಡಸಲೇ ಬೇಕು. ಇದು ಹೊಟ್ಟೆಪಾಡು ಏನು ಮಾಡಬೇಕು ಅಲ್ಲವಾ?

ವರ್ಷವೀಡಿ ಕರ್ನಾಟಕದಲ್ಲಿ ಎಲ್ಲೂ ಮಳೆಯಾಗದಿದ್ದರೂ ನಮ್ಮ ಬೆಂಗಳೂರಿನಲ್ಲಿ ಮಾತ್ರ ನಿತ್ಯ ಮಳೆಯಾಗಿ ಜನರ ಮನ ಮತ್ತು ಭೂಮಿಯನ್ನು ತಂಪು ಮಾಡಿರುತ್ತದೆ.. ಅದರ ಮುಂದುವರಿಕೆಯೇನೋ ಎಂಬ ರೀತಿಯಲ್ಲಿ ಡಿಸೆಂಬರ್ ಚಳಿಯು ಜನರನ್ನು ಎಚ್ಚರಿಸುತ್ತದೆ.

ಈ ಬದಲಾದ ಏರುಪೇರಾದ ಹವಮಾನದಿಂದ ನೆಗಡಿ, ತಲೆನೋವು, ಶೀತ ಮುಂತಾದ ಚಿಕ್ಕ ಪುಟ್ಟ ಕಾಯಿಲೆಗಳನ್ನು ಸಾಮಾನ್ಯವಾಗಿ ಎರಡು ದಿನಗಳಾದರೂ ಅನುಭವಿಸಬೇಕಾಗುತ್ತದೆ ನಗರದ ಮಂದಿ.

ಇಂಥ ಚಿಕ್ಕ ಕಾಯಿಲೆಗಳು ನಮ್ಮ ದೇಹದ ಪುನರ್ ನವೀಕರಣಕ್ಕೆ ಬೇಕೇನೋ.. ಯಾಕೆಂದರೇ ವರ್ಷವೀಡಿ ದುಡಿ ದುಡಿ ಎಂಬ ನಿತ್ಯ ಕಾಯಕದಲ್ಲಿ ನಿರತನಾದ ಮನುಷ್ಯನಿಗೆ ಒಂದಷ್ಟು ದಿನ ರೇಸ್ಟ್ ಮತ್ತು ರೀ ಎನರ್ಜಿಗೆ ಏರಲು ಸಹಾಯಕವಾಗುತ್ತದೆ.

ಇನ್ನೂ ಏನೂ ಕೇವಲ ೨೩ ದಿನಗಳು ಬಾಕಿ ಇವೆ ೨೦೧೧ ವರ್ಷಕ್ಕೆ ಗುಡ್ ಬಾಯ್ ಹೇಳಲು..

ನಿಜವಾಗಿಯೂ ಆಶ್ಚರ್ಯವಾಗುತ್ತದೆ.. ದಿನಗಳು ಎಷ್ಟೊಂದು ವೇಗವಾಗಿ ಇತಿಹಾಸವನ್ನು ಸೇರುತ್ತವೆ ಎಂದು. ಮನ್ನೆ ಮನ್ನೆ ಹೊಸ ವರ್ಷವನ್ನು ಆಚರಿಸಿದೆವು ಅನಿಸುತ್ತಿದೆ... ಆದರೇ ಕಾಲವನ್ನು ತಡೆಯುವವರು ಯಾರು ಇಲ್ಲ ಅಲ್ಲವಾ? ನಾವುಗಳು ನಮ್ಮ ನಮ್ಮ ಪಾಡಿಗೆ ಕಾಲಕ್ಕೆ ಹೊಂದಿಕೊಂಡು ಮುಂದುವರೆಯಬೇಕು. ಅದೇ ಬದುಕು.




ಈಗಾಗಲೇ ನಮ್ಮ ಬೆಂಗಳೂರು ಮೆಟ್ರೋ ಹೈಟೆಕ್ ಮಂದಿ ಹೊಸ ವರ್ಷದ ಡ್ಯಾಷಿಂಗ್ ಸೇಲಬ್ರೇಷನ್ ಗೆ ಅಲ್ಲಿ ಇಲ್ಲಿ ಹೋಟೆಲ್, ರೇಸಾರ್ಟ್, ತಿಂಡಿ, ತೀರ್ಥ, ಸ್ನೇಹಿತರುಗಳು ಮಸ್ತಿ ಮುಂತಾದ ಯೋಜನೆಗಳನ್ನು ಹಾಕುತ್ತಿದ್ದಾರೆ. ೩೧ರ ರಾತ್ರಿಯನ್ನು ಅತ್ಯಂತ ಅದ್ಧೂರಿಯಿಂದ ೨೦೧೨ ವರ್ಷವನ್ನು ಸ್ವಾಗತ ಮಾಡಲು ಕಾತುರರಾಗಿದ್ದಾರೆ.

ನಾಳೆಯಿಂದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಗಂಗಾವತಿಯಲ್ಲಿ ಶುರುವಾಗುತ್ತಿದೆ. ಅದರೇ ಇಲ್ಲಿ ಅದರ ಅಬ್ಬರವೇನೂ ಕಾಣಿಸುತ್ತಿಲ್ಲ. ಗಂಗಾವತಿಯಲ್ಲಿ ಇರಬಹುದೇನೋ..? ಸಾಹಿತ್ಯ ಅಭಿಮಾನಿಗಳಲ್ಲಿ ಇರಬಹುದೇನೋ.. ಅದರೇ ಇಲ್ಲಿಯ ಐ.ಟಿ ಬಿ.ಟಿ ಮಂದಿಗೆ ಅದರ ನೆನಪು ಸಹ ಇಲ್ಲ. ಅದು ಒಂದು ಕೇವಲ ಸುದ್ಧಿಯ ವರದಿಯಾಗಿ ಪತ್ರಿಕೆ ಮತ್ತು ಟಿ.ವಿ ನ್ಯೂಸ್ ನಲ್ಲಿ ನೋಡುತ್ತಾರೇನೋ..

ಎಷ್ಟೊಂದು ವಿಪರ್ಯಾಸ ಅಲ್ಲವಾ? ಸ್ಥಳಕ್ಕೆ ತಕ್ಕಂತೆ ಬದುಕು.. ಜಾಗ ಜಾಗಗಳಿಗೂ ಹೊಂದಿಕೊಂಡ ಭಾವನೇ, ಸಂಸ್ಕೃತಿ.. ಇದರಲ್ಲಿಯೇ ವೈವಿಧ್ಯತೆಯನ್ನು ಕಾಣಬಹುದು.

ನಾಡು ನುಡಿಯ ಪ್ರೇಮ ಆ ರಾಜ್ಯದ ಜನತೆಗೆ ಮಾತ್ರ ಸೀಮಿತವೇನೋ ಗೊತ್ತಾಗುತ್ತಿಲ್ಲ. ಕನ್ನಡ ಜನಗಳು ನಮ್ಮ ಕನ್ನಡತನವನ್ನು ಎಂದು ಮರೆಯಬಾರದು.. ಎಲ್ಲಿ ಎಲ್ಲಿ ಅದನ್ನು ಎತ್ತಿ ಹಿಡಿಯಲು ಸಾಧ್ಯವೋ ಅಲ್ಲಿ ಎಲ್ಲಾ ಅದರ ಕನ್ನಡ ಬಾವುಟವನ್ನು ಹಾರಿಸಬೇಕು ಕನ್ನಡ ಮನವನ್ನು ಹರಿಸಬೇಕು..

ಈ ವರ್ಷವಂತೋ ಕನ್ನಡ ಸಾಂಸ್ಕೃತಿಕ ಲೋಕ ಸಂಭ್ರಮ ಪಡಲು ಡಬಲ್ ಧಮಾಕ! ಯಾಕೆಂದರೇ ೮ನೇ ಙ್ಞಾನಪೀಠ ಪ್ರಶಸ್ತಿ, ಮೊದಲ ಸರಸ್ವತಿ ಸಮ್ಮಾನ ಪ್ರಶಸ್ತಿಯನ್ನು ಪಡೆದುಕೊಂಡು ಭಾರತದಲ್ಲಿಯೇ ಕನ್ನಡದ ಹಿರಿಮೆಯನ್ನು ಮತ್ತೋಮ್ಮೆ ಸಾಭಿತುಮಾಡಿದ್ದೇವೆ.

ಇದರ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಯುವಪೀಳಿಗೆಗೆ ತಲುಪಿಸುವ ಕೆಲಸವನ್ನು ಸರ್ಕಾರ ಮತ್ತು ಸಂಸ್ಥೆಗಳು ಮಾಡಬೇಕು. ಯುವಕರಿಗೆ ಕನ್ನಡದ ಸಾಹಿತ್ಯ ಪರಿಚಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಯೋಜಿತ ರೀತಿಯ ಮಾಡಿದರೇ ನಮ್ಮ ಕನ್ನಡ ಕಂದಮ್ಮಗಳ ಬಾಯಿಯಲ್ಲಿ ಹ್ಯಾರಿಪಾಟರ್,ಜಾಕ್ಸನ್,ರಾಕ್.. ಮುಂತಾದ ಇಂಗ್ಲೀಷ್ ಮಾತುಗಳನ್ನು ಸ್ವಲ್ಪಮಟ್ಟಿಗಾದರೂ ನಿಲ್ಲಿಸಬಹುದೇನೋ...

ಕನ್ನಡವೆಂದರೇ ಹಿಂದಿನ ಪೀಳಿಗೆಗೆ ಮಾತ್ರ ಎಂಬ ಧೋರಣೆಯನ್ನು ಸಾಕಷ್ಟು ಕಡಿಮೆ ಮಾಡಬಹುದು ಏನಂತೀರಿ?

ನನಗೆ ಅನಿಸುತ್ತದೆ ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಒಂದು ಮಾತಿಗೆ ನಿಯತ್ತನ್ನುತೋರಿಸುತ್ತಾರೇನೋ ಎಂಬ ರೀತಿಯಲ್ಲಿ ನಮ್ಮ ನಗರದ ಯಾವುದೇ ರಸ್ತೆಗಳಿಗೆ ಇಳಿದರೂ ಯಾವುದಾದರೂ ಒಂದು ರಿಪೇರಿ ನಡೆಯುತ್ತಿರುತ್ತದೆ. ಮೆಟ್ರೋ ಬಂದ ಮೇಲಂತೂ ಕೇಳುವುದೇ ಬೇಡ ಎಲ್ಲಿ ನೋಡಿದರೂ ದೂಳ್! ದೂಳ್! ಅದು ಯಾವುದೋ ಒಂದು ಸಮೀಕ್ಷೆ ಹೇಳುತ್ತಿದೆ ಬೆಂಗಳೂರು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಮಾಲಿನ್ಯತೆಗೆ ಒಗ್ಗಿಕೊಂಡಿರುವ ಸಿಟಿಯಂತೇ.. ಶಿವನೇ ಕಾಪಾಡಬೇಕು..

ಉದ್ಯಾನ ನಗರಿ ಎಂಬ ಹಣೆಪಟ್ಟಿ ಸ್ವಲ್ಪದಿನಗಲ್ಲಿಯೇ ಸ್ಯಾಂಕಿ ಟ್ಯಾಂಕ್ ಹೂಳು ಮಣ್ಣಿನಲ್ಲಿ ಸೇರಿ ಹೋಗಬಹುದೇನೋ.. ಹಸಿರು ಇದ್ದರೇ ಉಸಿರು!

ಇಲ್ಲಿನ ಜನಗಳಿಗೆ ಗೊತ್ತಿಲ್ಲಾ.. ನಿತ್ಯ ಎಷ್ಟು ಎಷ್ಟು ರೋಗಗಳಿಗೆ ಬಲಿಯಾಗುತ್ತಿದ್ದಾರೂ ದೇವರೇ ಬಲ್ಲ.

ನಮಗೆ ಗೊತ್ತಿಲ್ಲದ ರೀತಿಯಲ್ಲಿ ಯಾರೋ ಯಾರೂ ತಮಗೆ ಅನೂಕೂಲವಾಗಲಿಯಂತೋ ಅಥಾವ ಜನಕ್ಕೆ ಅನುಕೂಲವಾಗಲಿ ಎಂದೋ ನಿತ್ಯ ಏನಾದರೂ ಕೆಲಸ ಕಾರ್ಯಗಳು ಸಾಗುತ್ತಲೇ ಇರುತ್ತವೆ. ಆದರೇ ಏನೂ ಮಾಡಿದರೂ ಇಲ್ಲಿನ ರಸ್ತೆಗಳಲ್ಲಿರುವ ಗುಂಡಿಗಳ ಸಂಖ್ಯೆ ಮಾತ್ರ ನಿತ್ಯ ಜ್ವರ ಏರಿದ ರೀತಿಯಲ್ಲಿ ಏರುತ್ತಿವೆ.. ಇಲ್ಲಿನ ರಸ್ತೆಗಳಲ್ಲಿ ಓಡಾಡುವುದೇ ಒಂದು ಅಪಾಯಕಾರಿಯಾಗುವ ದಿನಗಳು ದೂರವಲ್ಲ.

ಯಾವುದೇ ಸ್ಥಳವನ್ನು ಸೇರಬೇಕೆಂದರೂ ೨-೩ ಗಂಟೆ ಮುಂಚೆಯೇ ಮನೆಯನ್ನು ಬಿಡಬೇಕು. ಬಿಟ್ಟರು ಸರಿಯಾದ ಸಮಯಕ್ಕೆ ಸೇರುವೆವು ಎಂಬ ಬಗ್ಗೆ ನಂಬಿಕೆ ಇಲ್ಲ ಸ್ವಾಮಿ.. ಇದು ಬೆಂಗಳೂರು ಸಿಲಿಕಾನ್ ಸಿಟಿಯ ನಿತ್ಯ ಮಹಿಮೆ.. ಕೇಳುವವರು ಯಾರೂ..

"ಯಾವುದೇ ಒಂದು ನಗರ, ರಾಜ್ಯ, ದೇಶದ ಅಭಿವೃದ್ಧಿಯನ್ನು ಆ ಜಾಗಗಳ ರಸ್ತೆಗಳಲ್ಲಿ ಕಾಣಿ" ಎಂದರೇ ನಮ್ಮ ನಗರ, ರಾಜ್ಯ.... ಯೋಚಿಸಲು ಸಾಧ್ಯವಿಲ್ಲ ಬಿಡಿ..

ಇದರ ತಂತು ತಪ್ಪಿ ಹೋಗುತ್ತಿರುವುದು ಎಲ್ಲಿ ಎಂದರೇ ಮತ್ತೆ ಅದೇ ಬಗೆಹರಿಯದ ಕೊಂಡಿ ಕೊಂಡಿ ತಪ್ಪಿನ ಸರಮಾಲೆ.. ಜನ,ಅಧಿಕಾರಿಗಳು,ನಾಯಕಮಣಿಗಳ ಜವಾಬ್ದಾರಿ ಇಲ್ಲದ ಯೋಜನೆ, ಯೋಚನೆಗಳು.. ನಿತ್ಯ ಏನಾದರೂ ಒಂದು ಕಾಮಗಾರಿ ಸಾಗುತ್ತಿರಬೇಕು.. ನಿತ್ಯ ಸರ್ಕಾರದಿಂದ ಹಣ ಹರಿಯುತ್ತಿರಬೇಕು.. ಅದರ ಬಳಕೆ ಹೇಗೋ ಹೇಗೆ ಬಳಸುವುದು.. ಅಲ್ಲಿನ ಕ್ವಾಲೀಟಿ, ಮೌಲ್ಯತೆಗೆ ಗೋಲಿ ಮಾರೋ.. ಎಂಬ ಮನಸ್ಸು ಇದಕ್ಕೆ ಕೊನೆ ಎಂಬುದು ಯಾವಾಗ ನಿಮಗೆ ಏನಾದರೂ ತಿಳಿದಿದೆಯೇ?

ಯಾರು ಯಾರಿಗೆ ಸಂಬಂಧವಿಲ್ಲದ ರೀತಿಯ ಬದುಕು ಇದಾಗುತ್ತಿದೆಯೇ ಅನ್ನಿಸುತ್ತಿದೆ. ಕೇವಲ ಸಮಯಕ್ಕೆ ತಕ್ಕ ಹಾಗೆ ಬದುಕುವುದು. ಇರುವಷ್ಟು ದಿನ ಆಗೂ ಇಗೂ ಏನಾದರೂ ತಂತ್ರ ಮಾಡುವುದು.. ಹಣ ಮಾತ್ರ ಪ್ರಾಮುಖ್ಯವಾಗುವುದು.. ವ್ಯಕ್ತಿ ಮತ್ತು ವಸ್ತು ನಗಣ್ಯವಾಗುತ್ತಿರುವುದು.. ತಾವು ಮಾತ್ರ ಬದುಕಬೇಕು ಎಂಬ ತಾತ್ಕಾಲಿಕ ಯೋಚನೆಯಿಂದ ಈ ವ್ಯವಸ್ಥೆ ಒಂದು ರೀತಿಯಲ್ಲಿ ಹಳ್ಳ ಹಿಡಿಯುತ್ತಿದೆ ಅನಿಸುತ್ತಿದೆ.

ಪುನಃ ಅದೇ ನೈತಿಕತೆಯ ಪ್ರಶ್ನೇ ಬೃಹದಾಕಾರವಾಗಿ ನಮ್ಮ ಮುಂದೆ ದುತ್ತನೇ ಎದುರಾಗುತ್ತದೆ... ನಾವು ಆರಿಸಿ ಕಳಿಸಿದ ಪ್ರಜಾಪ್ರಭುತ್ವ ಸ್ತಂಭದ ನಾಯಕರುಗಳು ಅನಿಸಿಕೊಂಡ ನಾಯಕ ಮಣಿಗಳ ದುರಾಸೆ ಅವರ ನೀಚತನವನ್ನು ಕಂಡಾಗ ಭಾರತಾಂಭೆಯ ಭರವಸೆಯನ್ನು ಯಾರೂ ಯಾರೋ ಏನೂ ಏನೋ ಮಾಡುತ್ತಿದ್ದಾರೆ ಅನಿಸುತ್ತಿದೆ....

ಯೋಚಿಸುವಂತಾಗುತ್ತದೆ!!