ಬುಧವಾರ, ಆಗಸ್ಟ್ 24, 2011

ಓಂ ಶಾಂತಿ! ಓಂ ಶಾಂತಿ!

ನಮ್ಮಗಳಿಗೆ ಒಂದು ರೀತಿಯಲ್ಲಿ ಭಯವನ್ನು, ನಾವುಗಳು ಹೀಗೆ ಇರಬೇಕು, ಹೀಗೆ ಮಾಡಬೇಕು, ಹೀಗೆ ಸರಿ ದಾರಿಯಲ್ಲಿ ನಡೆಯಬೇಕು ಎಂಬುದನ್ನು ಕಲಿಸುವುದು ಯಾರು ಎಂದರೇ ನಮ್ಮ ಹಿರಿಯರು ಎಂದು ಗಂಟಾಘೋಷವಾಗಿ ಹೇಳುತ್ತೇವೆ. ನಾವು ಆ ಹಿರಿಯರುಗಳ ಮಾತನ್ನು ಸುಖ ಸುಮ್ಮನೇ ಕೇಳಿ ಹಾಗೆಯೇ ನಡೆಯಲು ಶುರುಮಾಡುವುವೇ?

ಇಲ್ಲ ಅಲ್ಲವಾ?

ನಾವುಗಳು ಅವರ ಮಾತನ್ನು ಕೇಳಬೇಕೆಂದರೆ ನಮಗೆ ಅವರುಗಳು ಯಾವುದಾದರೂ ಒಂದು ಸಾಕ್ಷಿ ಪ್ರಙ್ಞೆಯನ್ನು ತೋರಿಸಬೇಕು.ಅದೇ ದೇವರುಗಳು. ಅಂದರೇ ಆ ಚಿಕ್ಕ ವಯಸ್ಸಿನಲ್ಲಿ ನಮಗೆ ಯಾವುದನ್ನೋ ಮೀರಿದ ಒಂದು ಸಾಕ್ಷಿ ಇರುತ್ತದೆ ಎಂದರೇ ಅದು ನಮ್ಮ ನಮ್ಮ ಮನೆಗಳಲ್ಲಿ ನಾವುಗಳು ಆರಾಧಿಸುವುದನ್ನು ನೋಡುತ್ತಿರುವ ಆ ಮನೆ ದೇವರು ಮಾತ್ರ.

ಚಿಕ್ಕಂದಿನ ದಿನಗಳಲ್ಲಿಯೇ ನಮ್ಮಗಳಿಗೆ ಅದನ್ನು ರೂಡಿ ಮಾಡಿ ಬಿಟ್ಟಿರುತ್ತಾರೆ. ಅವುಗಳನ್ನು ನೋಡುವ ಮೂಲಕ, ಅವುಗಳನ್ನು ಆಚರಿಸಲು ಕಲಿಯುವುದರ ಮೂಲಕ ಸ್ವಲ್ಪ ಸ್ವಲ್ಪ ನಾವುಗಳನ್ನು ನಮ್ಮ ಚಿಂತನೆ, ಯೋಚನೆ ಮತ್ತು ಬುದ್ಧಿಶಕ್ತಿಯಾನುಸಾರ ಅವುಗಳನ್ನು ನಮ್ಮ ಮನದಲ್ಲಿ ಸ್ಥಾಪಿಸಿಕೊಳ್ಳಲು ಪ್ರಾರಂಭಿಸುತ್ತೇವೆ.

ಕೆಲವು ದಿನಗಳವರೆಗೆ ಅದನ್ನು ಯಥಾಃ ಜಾರಿಯಲ್ಲಿ ಇಟ್ಟುಕೊಳ್ಳಲು ಪ್ರಾರಂಭಿಸುತ್ತೇವೆ. ನಮ್ಮ ಮನೆಗಳಲ್ಲಿ ಏನನ್ನು ಆಚರಿಸುತ್ತಾರೋ ಅದೇ ನಮ್ಮ ಸಂಸ್ಕೃತಿಯೆಂದು ಕಲಿಯುತ್ತೇವೆ. ಅವುಗಳನ್ನೇ ಭಯ ಭಕ್ತಿಯೊಂದಿಗೆ ಅಳವಡಿಸಿಕೊಳ್ಳಲು ಪ್ರಾರಂಭಿಸುತ್ತೇವೆ.



ಬುದ್ಧಿ ಬಲಿಯುವವರೆಗೂ ನಮ್ಮ ಮನೆಯಲ್ಲಿ ಅನುಸರಿಸುತ್ತಿರುವ, ಆಚರಿಸುತ್ತಿರುವ ಆಚರಣೆ, ಪೂಜೆ ಮಾಡುವ ದೇವರುಗಳನ್ನೇ ಪ್ರತಿಯೊಬ್ಬರೂ ಮಾಡುತ್ತಾರೆ ಎಂಬ ಭಾವನೆಯಲ್ಲಿರುತ್ತೇವೆ. ಇದು ಒಂದು ಸಾಮಾನ್ಯವಾದ ರೂಡಿ ಮತ್ತು ಎಲ್ಲಾರೂ ಮಾಡುವವರೇನೋ ಎಂಬ ರೀತಿಯಲ್ಲಿ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡದ ಕಾರಣ ನಿರಾಳವಾಗಿ ಅದು ನಮ್ಮದೇ ನನ್ನದೇ ಒಂದು ಆಚರಣೆ. ಅದನ್ನು ನಾವುಗಳು ಕಡ್ಡಾಯವಾಗಿ ಮಾಡಲೇಬೇಕು. ಯಾಕೆಂದರೇ ನನ್ನ ಮನೆಯಲ್ಲಿ,ನನಗೆ ಗೊತ್ತಿರುವವರೆಲ್ಲಾ, ನನ್ನ ಸಂಬಂಧಿಕರೆಲ್ಲಾ ಮಾಡುತ್ತಿದ್ದಾರೆ. ಅಂದು ಕೊಂಡು ಯಾವುದೇ ಒಂದು ಸಣ್ಣ ಅನುಮಾನವಿಲ್ಲದೇ ನಾವುಗಳು ಬಹುದಿನಗಳವರೆಗೆ ನಡೆಸುತ್ತಾ ಸಾಗುತ್ತೇವೆ.

ಇದೇ ನಮ್ಮ ಧರ್ಮವಾಗುತ್ತದೆ, ಇದೆ ನಮ್ಮ ಜಾತಿಯಾಗುತ್ತದೆ, ಇದೆ ನಮ್ಮ ಸಂಸ್ಕೃತಿಯಾಗುತ್ತದೆ ಅದು ನಮಗೆ ಗೊತ್ತಿರದ ರೀತಿಯಲ್ಲಿ. ಬಾಲ್ಯದಲ್ಲಿ ಯಾವುದನ್ನು ನಾವುಗಳು ಪ್ರಶ್ನೆ ಮಾಡದೆ ಒಪ್ಪಿಕೊಂಡಿರುತ್ತೇವೋ ಅದೇ ನಮಗೆ ಮಾಮೊಲಾದ ಗೊತ್ತಿರುವ ನಿರಾಳ ದಾರಿಯಾಗುತ್ತದೆ. ಅದರ ಬಗ್ಗೆ ಎಂದೂ ನಾವು ಚಿಕ್ಕ ಜಿಙ್ಞಾಸೆಯನ್ನು ಒಂದಷ್ಟು ದಿನಗಳವರೆಗೆ ಇಟ್ಟುಕೊಂಡಿರುವುದಿಲ್ಲ.

ಯಾವಾಗ ನಮ್ಮ ಓದು, ನಮ್ಮ ಸ್ನೇಹ, ಹೊರ ಜಗತ್ತು, ಸುತ್ತ ಮುತ್ತಲಿನ ಪರಿಸರ, ಸಮಾಜ ಹೀಗೆ ಹಲವು ರೀತಿಯ ಜಗತ್ತಿನ ಮರ್ಮಗಳನ್ನು ತನ್ನ ಕಣ್ಣು, ಮನಸ್ಸಿನಿಂದ ವ್ಯಕ್ತಿ ನೋಡಲು ಪ್ರಾರಂಭಿಸುವನೋ.. ಆಗ ನೋಡಿ ಶುರುವಾಗುತ್ತದೆ ತರಾವೇರಿ ಗೊಂದಲಗಳು ಮನದ ಮೂಲೆಯಲ್ಲಿ.

ಯಾಕೇ ಆ ನನ್ನ ಗೆಳೆಯ/ತಿ ನನ್ನ ರೀತಿಯಲ್ಲಿ ಆಚರಣೆಗಳನ್ನು ಮಾಡುವುದಿಲ್ಲ. ಅವನು/ಳು ಆರಾಧಿಸುವ ಹಬ್ಬ, ದೇವರುಗಳು, ಊಟ ಉಪಚಾರಗಳು ಪೂರ್ಣವಾಗಿ ನನಗಿಂತ ವಿಭಿನ್ನವಾಗಿವೆ. ಅವರುಗಳ ನಡಾವಳಿಗಳೇ ವಿಪರೀತವಾಗಿವೆ ಯಾಕೇ? ಹೀಗೆ ಪ್ರಶ್ನೆಗಳ ಸುರಿಮಳೆಯೇ ಮನಸ್ಸಿಗೆ ಬರಲು ಪ್ರಾರಂಭವಾಗುತ್ತವೆ. ಅವುಗಳಿಗೆ ನಮ್ಮ ತಂದೆ-ತಾಯಿ, ಹಿರಿಯರುಗಳಿಂದ, ಸ್ನೇಹಿತರುಗಳಿಂದ, ಸುತ್ತಲಿನ ಪರಿಸರದಿಂದ ಸರಿಯಾಗಿಯೇ ಉತ್ತರಗಳು ಸಮಯ ಮತ್ತು ಸಂದರ್ಭಕ್ಕೆ ತಕ್ಕ ಹಾಗೆಯೇ ಕೇಳುತ್ತೇವೆ ಮತ್ತು ಅವುಗಳ ಮೂಲಕ ವ್ಯಕ್ತಿ ಜಗತ್ತಿನ ವಿರಾಟ ರೂಪವಾದ ಪದ್ಧತಿಗಳನ್ನು ಅರಿಯುತ್ತಾ ಸಾಗುತ್ತನೆ.


ಹಾಗೆಯೇ ತಾನು ಓದುವ ಶಿಕ್ಷಣದ ಮೂಲಕ ಅವನು ತನ್ನ ವಯಸ್ಸಿಗೆ ಅನುಗುಣವಾಗಿ ತಾನು ಆಚರಿಸುವ ಸಂಸ್ಕೃತಿ, ದೇವರುಗಳು, ಧರ್ಮ, ಆಚರಣೆಗಳು, ಇವುಗಳ ಇತಿಹಾಸ. ಇವುಗಳನ್ನು ಯಾರು ಹುಟ್ಟು ಹಾಕಿದರು? ಯಾಕೆ ಹೀಗೆ ಮಾಡಬೇಕು ಎಂಬುದನ್ನು ತನ್ನ ಅರ್ಥವಂತಿಕೆಗೆ ಅನುಗುಣವಾಗಿ ಅರಿಯಲು ಪ್ರಾರಂಭಿಸುವನು. ನಾವುಗಳು ಮಾತ್ರ ಯಾಕೆ ಹೀಗೆ ಅನುಸರಿಸುತ್ತಿದ್ದೇವೆ. ಮತ್ತು ಇದಕ್ಕೆ ಏನಾದರೂ ಕಾರಣಗಳು ಇರುವುವೇ? ಈ ಆಚರಣೆಗಳನ್ನು ಮಾಡದಿದ್ದರೆ ಏನಾಗುವುದು? ನಮ್ಮ ದೇವರನ್ನು ನಾನು ಆರಾಧಿಸದಿದ್ದರೆ ಏನಾಗುವುದು? ನಾನು ಅದನ್ನು ಪಠಿಸದಿದ್ದರೇ ಏನಾಗುವುದು? ಹೀಗೆ ಒಂದೊಂದಾಗಿ ಪ್ರಶ್ನೆಗಳನ್ನು ತನ್ನ ಮನದಲ್ಲಿ ಮೂಡಿಸಿಕೊಂಡು ಅವುಗಳಿಗೆ ಉತ್ತರವನ್ನು ಪಡೆಯಲು ಪ್ರಾರಂಭಿಸುವನು.

ಮನುಷ್ಯನ ಮನಸ್ಸೆ ಒಂದು ಸುಖಕ್ಕಾಗಿ ಯಾವಾಗಲೂ ಹಾತೊರೆಯುತ್ತಿರುತ್ತದೆ. ತಾನು ಮಾಡುವ ಆಚರಣೆಗಳಿಂದ ತನಗೆ ಅನುಕೂಲವನ್ನು ಪಡೆಯಲು ಹಂಬಲಿಸುವನು. ಅದು ತನಗಾಗಿ ಅಥವಾ ತನ್ನನ್ನು ನೆಚ್ಚಿದವರಿಗಾಗಿ. ಹೀಗೆ ತನ್ನ ಅಭಿವೃದ್ಧಿಯ ದಾರಿಯಲ್ಲಿ ತಾನು ಮಾಡುವ ಯಾವುದೇ ಒಂದು ಕೆಲಸಕ್ಕೂ ಅವನಿಗೆ ಪ್ರತಿಫಲ ಸಿಗಲೇಬೇಕು. ಮುಂದೆ ಆಗುವ ಮಾಡುವ ಏನೇ ಕರ್ಮ ಕಾರ್ಯಕ್ಕೂ ಒಂದು ನಿರ್ಧಿಷ್ಟವಾದ ಫಲಕ್ಕೆ ಕಾಯುತ್ತಾನೆ. ಹೀಗೆ ಭವಿಷ್ಯತ್ ನಲ್ಲಿ ಸಿಗಲಿರುವ ಒಂದು ವಸ್ತುವನ್ನು ಪಡೆಯಲು ತನ್ನ ಸಾಮರ್ಥ್ಯವಲ್ಲದೇ ಬೇರೆನಾದರೂ ಒಂದು ಶಕ್ತಿಯ ನೆರವನ್ನು ಅವನು ಅಪೇಕ್ಷಿಸುತ್ತಾನೆ. ಅದೇ ತಾನು ನಂಬಿರುವ ದೇವರು. ದೇವರು ಅವನು ಪ್ರಶ್ನಾತೀತ. ಅವನಿಗೆ ತನ್ನ ಬಾಲ್ಯದಿಂದಲೂ ಎಲ್ಲರೂ ಅತಿಯಾದ ಗೌರವವನ್ನು ಪೂಜ್ಯಭಾವನೆಯನ್ನು ತನ್ನ ಮನೆಯಿಂದ ಹಿಡಿದು ತನ್ನಂತಿರುವ ಒಂದು ದೊಡ್ಡ ಸಮೊಹವೇ ನಂಬುವ ದೇವರೇ ಆಶದಾಯಕವಾಗಿ ಕಾಣುತ್ತದೆ. ಅದೇ ಅವನಿಗೆ ಹೊಸ ಆಶಾಕಿರಣ. ಎಲ್ಲಾ ರೀತಿಯ ನೆಮ್ಮದಿಯನ್ನು ದಯಪಾಲಿಸುವ ಕಾಮದೇನಾಗಿ ಕಾಣುತ್ತಾನೆ. ಅವನ ಶಕ್ತಿವಂತಿಕೆಯನ್ನು ತನ್ನಲ್ಲಿ ಕಾಣಲು ತವಕಿಸುತ್ತಾನೆ. ಆಗ ಅವನ ಭಕ್ತಿಯ ಪರಕಾಷ್ಠೆಯನ್ನು ನಾವುಗಳು ಕಾಣಬಹುದು. ಅದು ಅವನ ಆರಾಧನೆಯ ಸಮಯವಾಗಿರುತ್ತದೆ.

ಏನಾದರೂ ತಾನು ಅಂದುಕೊಂಡಿದ್ದು ವಿಪಲವಾದರೂ ಅವನಿಗೇನೂ ಬೇಜಾರಾಗುವುದಿಲ್ಲ. ಯಾಕೆಂದರೇ ಇದರ ಜಯ ಅಪಜಯಗಳನ್ನು ಒಂದು ದೊಡ್ಡ ಶಕ್ತಿಗೆ ಸಮರ್ಪಿಸಿರುತ್ತಾನೆ. ತನ್ನ ಸಾಮರ್ಥ್ಯದಲ್ಲಿ ಸ್ವಲ್ಪ ಏನೋ ಊನವಾಗಿದೆ. ದೇವರು ಮುಂದೆ ಎಂದಾದರೂ ನನಗೆ ನೆರವು ನೀಡೇ ನೀಡುತ್ತಾನೆ ಎಂಬ ಒಂದು ಸಮಾಧಾನ ಅವನದಾಗಿರುತ್ತದೆ. ಈ ಒಂದು ಸಮಾಧಾನವನ್ನು ನಾವುಗಳು ಎಂದೂ ಸಾಮಾನ್ಯ ಮನುಷ್ಯರಿಂದ ಪಡೆಯಲಾಗುವುದಿಲ್ಲ.

ಹೀಗೆ ಪ್ರತಿಯೊಬ್ಬರೂ ತಾನು ನಂಬಿರುವ ಧರ್ಮ, ದೇವರುಗಳನ್ನು ತಮ್ಮ ಸರ್ವಸ್ವವಾಗಿ ಇಟ್ಟುಕೊಂಡಿರುತ್ತಾರೆ. ಅದೇ ಒಂದು ಬದುಕನ್ನು ಕಟ್ಟಿ ಕೊಟ್ಟಿರುತ್ತದೆ. ಎಲ್ಲದಕ್ಕೂ ಅದೇ ಪ್ರಥಮತಃ. ಅವರ ಅವರುಗಳಿಗೆ ಅವರವರದೇ ಧರ್ಮ ಅಚ್ಚು ಮೆಚ್ಚು. ಯಾಕೆಂದರೇ ಅದು ಅವರ ಅಚಲ ನಂಬಿಕೆ.

ಈ ನಮ್ಮ ಪ್ರಪಂಚದಲ್ಲಿ ಸಾವಿರಾರು ವಿಭಿನ್ನವಾದ ಧರ್ಮ ಆಚರಣೆಗಳನ್ನು ಕಾಣುತ್ತೇವೆ. ಎಲ್ಲಾ ಧರ್ಮ ಆಚರಣೆಗಳ ಏಕ ಮಾತ್ರ ಸಂದೇಶವೆಂದರೇ "ಮಾನವನ ಪರಸ್ಪರರ ಪ್ರೀತಿ ಮತ್ತು ಸಹ ಬಾಳ್ವೇ".

ಇದು ತೀರ ಅತಿ ಸರಳ ಸಂದೇಶವಾಗುತ್ತದೆ. ಹೌದು! ಹಿಂದೆ ನಮ್ಮ ನಮ್ಮ ಒಂದಷ್ಟು ಗುಂಪುಗಳು ತಮ್ಮ ಒಳ್ಳೆಯತನದ ಜೀವನಕ್ಕಾಗಿ ಮಾಡಿಕೊಂಡ ಒಂದು ಪದ್ಧತಿ ಆಚರಣೆಗಳೇ ಇಂದು ನಾವುಗಳು ಕಾಣುತ್ತಿರುವ ಹತ್ತು ಹಲವು ಆಚರಣೆಗಳಾಗಿವೆ.

ಆ ಆ ವರ್ಗಗಳಲ್ಲಿ ಉದಯಿಸಿದ ಮೇದಾವಿ ಮಹನೀಯರುಗಳ ಸಂದೇಶಗಳು, ಉಪದೇಶಗಳೂ, ಅವರ ಜೀವನ ಚಿತ್ರಗಳು, ಸುಧಾರಣೆಗಳೆ.. ನೀತಿ ಸಂಹಿತೆಗಳು, ಕಥೆ, ಪುರಾಣ, ನಂಬಿಕೆಗಳಾಗಿವೆ. ಅವೇ ನಮಗೆಲ್ಲಾರಿಗೂ ಮೌಲ್ಯಯುತವಾದ ಆದರ್ಶಮಯವಾದ ಪವಿತ್ರ ಗ್ರಂಥಗಳಾಗಿವೆ.

ನಾವುಗಳು ಎಲ್ಲಾ ಧರ್ಮಿಯರ ಧರ್ಮ ಗ್ರಂಥಗಳನ್ನು ತೀರ ಅಳವಾಗಿ ನೋಡಿದಾಗ ತಿಳಿಯುವ ಒಂದು ಸಾಮಾನ್ಯವಾದ ನೀತಿಯೇನೆಂದರೆ ಅದು ಮಾನವ ಧರ್ಮದ ಮೇಲು ಗೈ. ಮತ್ತು ಪ್ರತಿಯೊಂದು ಒಂದರೊಳಗೊಂದು ತಮ್ಮ ರೆಂಬೆಯನ್ನು ಚಾಚಿಕೊಂಡಿರುವುವು. ಎಲ್ಲಾ ಒಂದೇ ಎಂಬುದು ಯಾರೊಬ್ಬರೂ ಮರೆಯಲಾರದಂತಹ ಮುಖ್ಯ ಸಂದೇಶ.

ಕೆಲವೊಂದು ಆಚರಣೆಗಳು ಜನಗಳ ತಿದ್ದುಪಡಿ, ಆಚರಣೆಗಳ ವೈಪರಿತ್ಯದಿಂದ ಒಮ್ಮೊಮ್ಮೆ ಇಂದಿನ ಜನಗಳಿಗೆ ಬೆಸರವನ್ನು ತಂದಿರುವುವು. ಅದು ಸಹಜ! ಯಾಕೆಂದರೇ ಇಂದು ನಾವುಗಳು ಯೋಚಿಸಿರುವಂತೆಯೇ ಶತ ಶತಮಾನಗಳ ಹಿಂದಿನಿಂದಲೂ ಸಾವಿರಾರು ಜನರುಗಳು ಯೋಚಿಸಿರುತ್ತಾರೆ. ಕೆಲವೊಂದು ನ್ಯೂನತೆಗಳು ಮತ್ತು ಒಳ್ಳೆಯ ನೀತಿಗಳು ಸೇರಿವೆ. ಆದರೇ ಮೂಲತನ ಮಾತ್ರ ಯಾವಾಗಲೂ ಒಂದೇ, ಅದನ್ನು ಗಮನಿಸಬೇಕು.

ಪ್ರತಿಯೊಬ್ಬನಿಗೂ ತಾನು ಏನೇನೋ ಮಾಡಿದರೂ ತನಗೆ ಒಂದು ಕ್ಷಣ ನೆಮ್ಮದಿಯೆಂಬುದು ಸಿಗುವುದು ತಾನು ತನ್ನ ಮನಸ್ಸನ್ನು ಯಾವುದರಲ್ಲಾದರೂ ಕೇಂದ್ರಿಕರಿಸಿ ಅನುಭವಿಸಿದಾಗ ಮಾತ್ರ. ತನ್ನನ್ನು ತಾನು ಮರೆತು ಸುತ್ತಲಿನ ಈ ಪ್ರಪಂಚವನ್ನು ಒಂದು ಕ್ಷಣ ಶೂನ್ಯವಾಗಿ ಕಂಡಾಗ ಮಾತ್ರ. ಇದು ತಾನು ನಂಬಿರುವ ಧರ್ಮದಲ್ಲಿ ಇರುವಂತಹ ಪ್ರಾರ್ಥನೆ, ಭಜನೆ, ಗೀತೆ, ಗಾಯನ, ಆರಾಧನೆ ಇತ್ಯಾದಿ ಮಾಡುವುದರಿಂದ ಸಿಗುವುದು.

ನೀವುಗಳು ಗಮನಿಸಿರಬಹುದು. ಕೆಲವೊಂದು ಮಂದಿಗಳು ತಾವು ಬೆಳೆದಂತೆ ತಮ್ಮ ಮನೆಗಳಲ್ಲಿ ಅಥವಾ ತಮ್ಮ ಸಮುದಾಯದಲ್ಲಿ ಆಚರಿಸುವ ಈ ಎಲ್ಲಾ ಆಚರಣೆಗಳನ್ನು ಬಿಟ್ಟು ತಾವುಗಳು ಅದನ್ನು ನಂಬುವುದಿಲ್ಲ ಎಂಬ ರೀತಿಯಲ್ಲಿ ಅವರದೇಯಾದ ಒಂದು ಮನೋಧರ್ಮದಲ್ಲಿ ಬದುಕುತ್ತಾರೆ. ಅವರುಗಳು ಸಹ ತಮ್ಮ ಕೆಲಸ ಕಾರ್ಯದಲ್ಲಿ ತುಂಬ ಸುಂದರವಾಗಿ ಸುಖ ಸಂತೋಷವಾಗಿ ಬದುಕುತ್ತಾರೆ. ಇದು ಏನನ್ನು ಸೂಚಿಸುತ್ತದೆ ಅಂದರೇ ಇವುಗಳೆಲ್ಲಾ ನಮ್ಮ ನಮ್ಮಗಳ ಅನುಕೂಲಕ್ಕಾಗಿ ನಮ್ಮ ಹಿರಿಯರುಗಳು ಕಟ್ಟಿ ಕೊಟ್ಟಿರುವ ಒಳ್ಳೆಯತನಗಳು ಮಾತ್ರ. ನಿಮಗೆ ಅನುಕೂಲವಾದರೆ ನೀವುಗಳು ಅನುಸರಿಸಿ. ಅಥವಾ ನೀವೇ ಏನಾದರೂ ಹೊಸ ಮಾರ್ಗವನ್ನು ಕಂಡುಹಿಡಿದರೆ ಅದರಲ್ಲಿಯೇ ಮುಂದುವರಿಯರಿ. ಆದರೆ ನೀವು ಸಾಗುವ ಮಾರ್ಗ ಯಾರೊಬ್ಬರಿಗೂ ತೊಂದರೆಯನ್ನು ಕೊಡಲಾರದು, ನೀವು ನೆಮ್ಮದಿಯಾಗಿ ಬದುಕಬಹುದು, ಅಂದರೇ ಅದೇ ಒಂದು ಉತ್ಕೃಷ್ಟವಾದ ಮಾನವ ಧರ್ಮ. ನೀನು ಬದುಕು ಪರರನ್ನು ಬದುಕಲು ಬಿಡು!

ಹೀಗೆ ಮನುಷ್ಯ ತನ್ನ ಮೀತಿಯನ್ನು ಒಂದು ಚೌಕಟ್ಟಿನಲ್ಲಿ ಇಟ್ಟುಕೊಳ್ಳಲು ಕಂಡುಕೊಂಡ, ತಾನೇ ನಿರ್ಮಿಸಿಕೊಂಡ ಒಂದು ವ್ಯವಸ್ಥಿತ ಮಾನವ ಏಳ್ಗೆಯ ನಡಾವಳಿಗಳೇ ಈ ಎಲ್ಲಾ ಆಚಾರ-ವಿಚಾರಗಳು. ಇದು ಹೀಗೆ ಎನ್ನುವ, ಇವನ್ನು ನೀನು ಚಾಚು ತಪ್ಪದೇ ಆಚರಣೆಯಲ್ಲಿ ಇಟ್ಟುಕೊಳ್ಳಲೇ ಬೇಕೆಂಬ ಕಟ್ಟು ನಿಟ್ಟಿನ ಕಾನೂನುಗಳು ಇವುಗಳಲ್ಲಾ. ಹೀಗೂ ಇರಬಹುದು.. ಹಾಗೂ ಇರಬಹುದು.. ಹೇಗೂ ಇದ್ದರೂ.. ನೀನು ಬದುಕು.. ಪರರನ್ನು ಬದುಕಲು ಬಿಡು..

ಓಂ ಶಾಂತಿ! ಓಂ ಶಾಂತಿ!

ಬುಧವಾರ, ಆಗಸ್ಟ್ 17, 2011

ಶ್ರಾವಣದ ದಿನಗಳು ಬಂದಿವೆ



ಆಷಾಡ ಕಳೆದಿದೆ ಶ್ರಾವಣದ ದಿನಗಳು ಬಂದಿವೆ. ಕೊರೆಯುವ ಚಳಿಯ ದಿನಗಳು ಇತಿಹಾಸ ಸೇರಿವೆ. ಆಷಾಡ ಎಂದು ಒಂದು ತಿಂಗಳಿಂದ ದೂರವಾದ ತನ್ನ ನೆಚ್ಚಿನ ನಲ್ಲೆಯ ಪುನರಾಗಮನವಾಗಿದೆ. ಸಂಭ್ರಮದ ಹಬ್ಬದ ಆಚರಣೆಗಳು ಪ್ರಾರಂಭವಾಗಿವೆ. ಶುಭ ಶಕುನ, ಶುಭ ದಿನಗಳು, ಶುಭ ಆಚರಣೆ ಮೊದಲುಗೊಂಡಿವೆ.

ಪ್ರಕೃತಿ ತನ್ನ ತನವನ್ನು ಹಚ್ಚ ಹಸಿರಿನಿಂದ ಇಡಿ ಪ್ರಾಣಿ ಸಂಕುಲವನ್ನು ಹರಸಿದೆ. ಬತ್ತಿ ಹೋದ ತೊರೆ, ಹಳ್ಳ ಕೊಳ್ಳಗಳು, ಝರಿಗಳು ಮೈದುಂಬಿ ಹರಿಯಲು ಪ್ರಾರಂಭಿಸಿವೆ. ಒಂದು ರೀತಿಯಲ್ಲಿ ಸಮಷ್ಟಿಯೆ ಧನ್ಯತೆಯ ನಗುವನ್ನು ಬೀರಿದೆ.

ಸಾಕಾಗುವಷ್ಟು ಮಳೆಯನ್ನು ಕೆಲವು ಜಾಗಗಳು ಪಡೆದಿವೆ. ಕೆಲವು ಕಡೆ ಅದರಿಂದ ಅನಾಹುತಗಳು, ಅತಿವೃಷ್ಟಿಯಾಗಿ ಜನರುಗಳು ನಲುಗುತ್ತಿದ್ದಾರೆ. ಪ್ರವಾಹದಿಂದ ತುಂಬಿ ಹರಿಯುತ್ತಿರುವ ನದಿಗಳು ತಮಗೆ ತಾವೇ ಸಾಠಿ ಎಂಬ ರೀತಿಯಲ್ಲಿ ಇಕ್ಕೆಲಗಳಲ್ಲಿರುವ ಮಾನವ ವಾಸ ಸ್ಥಳಗಳನ್ನು ನುಂಗುತ್ತಾ ದುಃಸ್ವಪ್ನವಾಗಿದೆ.

ಇಂದು ಸಹ ಮುಂಜಾನೆಯಿಂದ ನಮ್ಮ ಬೆಂಗಳೂರಿನಲ್ಲಿ ಬಿಡದ ತುಂತುರು ಮಳೆ ಹಲವು ಗಂಟೆಗಳಿಂದ ಚಟಪಟ ಸದ್ದಿನಿಂದ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ಬಿಡದೆ ನಿರಂತರವಾಗಿ ಸೂರ್ಯನ ಕಣ್ಣಾಮುಚ್ಚಾಲೆಯ ಜೊತೆಯಲ್ಲಿ ಪ್ರಕೃತಿ ಗಂಭೀರವಾಗಿ ತನ್ನ ಜಾದುವನ್ನು ಜನಮನಗಳಿಗೆ ತಂಪು ನೀಡುತ್ತಿದೆ.

ಭಾರತದ ೬೫ನೇ ಸ್ವಾತಂತ್ರ್ಯ ಆಚರಣೆಯನ್ನು ಮಾಡಿದ ನಂತರದ ದಿನ ಆಗಸ್ಟ ೧೬, ಅಣ್ಣಾ ಹಜಾರೆಯವರ ಭ್ರಷ್ಟಾಚಾರ ಅಂದೋಲನದ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ದೇಶದ ಉದ್ದಗಲಕ್ಕೂ ಭಾರೀ ಪ್ರಮಾಣದಲ್ಲಿ ಹಳ್ಳಿಯ ಓಣಿ ಓಣಿಗಳಿಂದ ಪ್ರಾರಂಭಿಸಿ ದೊಡ್ಡ ದೊಡ್ಡ ನಗರಗಳ ಸಣ್ಣ ಸಣ್ಣ ಗಲ್ಲಿಗಳಿಂದ ಪ್ರತಿಯೊಬ್ಬ ಪ್ರಜೆಯು ದೇಶದ ಬಗ್ಗೆ ಯೋಚಿಸಲು ಪ್ರಾರಂಭಿಸಿ ತನ್ನ ಕೈಲಾದ ಮಟ್ಟಿಗೆ ಅಣ್ಣಾನವರಿಗೆ ಮೌನ ಬೆಂಬಲವನ್ನು ಘೋಷಿಸುತ್ತಿದ್ದಾರೆ.

ಯುವ ಜನತೆಗೆ ಈಗ ತಮ್ಮ ದೇಶಪ್ರೇಮವನ್ನು ಮೆರೆಯುವ ದಿನಗಳು ತಾನಾಗಿ ಒದಗಿಬಂದಂತಾಗಿದೆ. ಹಿಂದೆ ನಾವುಗಳು ನಮ್ಮ ಪಠ್ಯದಲ್ಲಿ ಓದಿದ ಸ್ವಾತಂತ್ರ್ಯ ಹೊರಾಟ ಮತ್ತು ಸ್ವರೂಪವನ್ನು ಇಂದು ಕಣ್ಣಿಂದ ನೋಡುವ ಅವಕಾಶ ಒದಗಿದಕ್ಕೆ ಸಂಭ್ರಮ ಪಡಬೇಕೋ ಅಥವಾ ವ್ಯಥೆ ಪಡಬೇಕು ತಿಳಿಯದಂತಾಗಿದೆ.

ನಮ್ಮ ದೇಶದ ಭವಿಷ್ಯವನ್ನು ಈ ಹಾಳು ಭ್ರಷ್ಟಾಚಾರ, ಲಂಚತನ, ಲಂಪಟತೆಯ ರಾಕ್ಷಸತನ ಎಷ್ಟೂ ನಲುಗಿಸಿದೆ ಎಂದರೇ ಪ್ರತಿಯೊಬ್ಬ ಭಾರತೀಯನ ಆಕ್ರೋಶ ಇಂದು ಬೀದಿಯಲ್ಲಿ ನೋಡುವಂತಾಗಿದೆ. ಇದಕ್ಕೆ ಕಾರಣಕರ್ತನಾದ ಹೊಸ ಆಶ ಜ್ಯೋತಿ ಅಣ್ಣಾ ಮಾತ್ರ! ಗಾಂಧಿ ಮತ್ತು ಅವರ ದೋರಣೆಯ ಪ್ರತೀಕವಾಗಿ ಅಣ್ಣಾ ನಮ್ಮ ಜನಗಳ ಕಣ್ಣಿನಲ್ಲಿ ಕಾಣಲಾರಂಬಿಸಿದ್ದಾರೆ. ಅವರಿಗೆ ಜಯ ಸಿಗಲೇ ಬೇಕು ಮತ್ತು ಸಿಕ್ಕೆ ಸಿಗುತ್ತದೆ ಎಂಬ ಸಂತಸವಿದೆ.

ಆದರೇ ಈ ವರ್ಷ ನನ್ನ ಸೀಮೆ ಬರಗಾಲವನ್ನು ಎದುರಿಸುವಂತಾಗಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯನ್ನು ಕಂಡು ನನ್ನ ಮನ ಮುಲುಗುತ್ತಿದೆ. ಯಾಕೆಂದರೇ ಅಲ್ಲಿ ಈಗಾಗಲೇ ಬರಗಾಲದ ಛಾಯೆ ದಟ್ಟವಾಗುತ್ತದೆ. ಈ ಸಮಯದಲ್ಲಿ ಬಿಡದ ಮಳೆಯಾಗಬೇಕಾಗಿತ್ತು. ಜಿಟಿ ಮಳೆಯಲ್ಲಿ ರೈತರು ತಮ್ಮ ಮೊದಲ ಬಿತ್ತನೆಯನ್ನು ಪ್ರಾರಂಭ ಮಾಡಬೇಕಾಗಿತ್ತು. ಮುಂಗಾರು ಮಳೆಯ ಆಶಾ ಭಾವನೆಯನ್ನು ಇಟ್ಟುಕೊಂಡು ಮುಂದಿನ ದಿನಗಳನ್ನು ಕಾಣುವ ಮನಗಳಿಗೆ ಕೇವಲ ನಿಲ್ಲದ ಗಾಳಿ ಮಾತ್ರವಾಗಿದೆ. ಅದು ಮೊಡವನ್ನು ತರುತ್ತಿಲ್ಲ. ಮಳೆಯನ್ನು ಸುರಿಸುತ್ತಿಲ್ಲ. ನಮ್ಮ ಬಯಲು ಸೀಮೆಯ ಜನಗಳ ಮೂಲ ಆಸರೆ ಮಳೆ ಮಾತ್ರ. ಅಲ್ಲಿ ಯಾವುದೇ ನದಿ, ಹೊಳೆ, ಕೆರೆ, ಚಾನಲ್ ಗಳೇ ಇಲ್ಲ. ಪ್ರತಿಯೊಂದು ಬೆಳೆಗೂ ಮಳೆ ಮಾತ್ರ. ಆದರೂ ನೀರಾವರಿ ಮಾಡಿಕೊಂಡರೂ ಅದು ಕೇವಲ ತೋಟಕ್ಕೆ ಮಾತ್ರ. ಚಿಕ್ಕ ಚಿಕ್ಕ ಅಡಿಕೆ, ತೆಂಗು, ಬಾಳೆ ತೋಟಗಳಿಗೆ ನೀರು ಊಣಿಸಲೇ ಸಾಕಾಗುತ್ತದೆ. ಪುನಃ ಕಾಲಿಯಾದ ಬೋರ್ ವೆಲ್ ಗಳು ಸಹ ಮಳೆಯನ್ನೇ ಆಶ್ರಯಿಸುವಂತಾಗಿರುತ್ತದೆ.

ಮಳೆಗಾಲದಲ್ಲಿ ಸ್ವಲ್ಪ ಏರುಪೇರಾದರೂ ನೀರಾವರಿಯನ್ನು ಮಾಡುತ್ತಿರುವ ರೈತಾಪಿ ಜನಗಳ ಚಿಂತೆಯನ್ನು ನೋಡುವುದು ಬೇಡಾ!

ಸ್ವಾತಂತ್ರ್ಯ ದಿನಾಚಾರಣೆಯನ್ನು ಮೊದಲ ಭಾರಿಗೆ ಜಿಲ್ಲಾ ಉಸ್ತಾವರಿ ಸಚಿವೆಯಿಂದ ಆಚರಿಸಲ್ಪಟ್ಟಿತು. ಸಚಿವೆಯು ಸಹ ಜೆಲ್ಲೆಯ ಇಂದಿನ ಮಳೆಗಾಲದ ಸ್ಥಿತಿಯನ್ನು ಕಣ್ಣಲ್ಲಿಟ್ಟುಕೊಂಡು ಜೆಲ್ಲೆಯ ಬರಗಾಲಕ್ಕೆ ಏನೇನೂ ಅನುಕೂಲವನ್ನು ಸರ್ಕಾರದಿಂದ ಮಾಡಿಕೊಡಲು ಸಾಧ್ಯವಿದೆಯೋ ಅದನ್ನು ಮಾಡಲು ನಾನು ಪ್ರಯತ್ನಿಸುವೆ ಎಂದಿದ್ದಾರೆ.

ಆದರೇ ಅವರು ಕೊಡುವ ಅನುದಾನ ಪ್ರಕೃತಿ ನೀಡುವ ಸಮೃದ್ಧ ಮಳೆಗೆ ಸರಿಸಾಟಿಯಿಲ್ಲ ಅಲ್ಲವಾ?

ಕಾಲಾಯ ತಸ್ಮಯಾ ನಮಃ!

ಕಾಲಕ್ಕೆ ತಕ್ಕಂತೆ ನಾವುಗಳು ಬದುಕಬೇಕು. ಹಿಂದೆ ಇದ್ದ ಸುಂದರ ದಿನಗಳು ಮುಂದೆ ಬರುತ್ತವೆ ಮತ್ತು ಕಾಣುತ್ತೇವೆ ಎಂಬ ನಂಬಿಕೆಯೇ ಇಲ್ಲದಂತಾಗುತ್ತಿದೆ. ಇಂದು ಪ್ರಕೃತಿಯ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಸಾಕ್ಷಿಯಾಗಿ ಮಳೆ ಬೇಳೆಯಾಗುತ್ತಿದೆ.

ಮನುಷ್ಯ ಅರಿತು ನಡೆಯುವ ಕಾಲ ಇದಾಗಿದೆ. ಹಿಂದೆ ಕಂಡಿದ್ದ ಹಳ್ಳಿಯಲ್ಲಿನ ಕಸಪಿಸ ಕೆಸರು. ಎಲ್ಲಿ ಜಾರಿಬಿದ್ದೇವೋ ಏನೋ ಎಂಬ ಜಾಗರುಕತೆಯಿಂದ ಕಾಲನ್ನು ಅದುಮಿ ನಡೆಯುತ್ತಿದ್ದದು. ಮಳೆಯಿಂದ ತೊಯ್ದು ತೊಪ್ಪೆಯಾಗುವುದನ್ನು ತಪ್ಪಿಸಲು ತಲೆ ಮೇಲೆ ಗೋಣಿ ಚಿಲದ ಕೊಪ್ಪೆಯನ್ನು ಇಟ್ಟುಕೊಂಡು ಓಡಾಡುತ್ತಿದ್ದದು. ಆದರೂ ಅಪೂರ್ಣವಾಗಿ ನೆನದು, ಬಿಸಿಯ ಕಾವನ್ನು ಕೊಟ್ಟು ಕೊಳ್ಳಲು ಒಲೆಯ ಮುಂದೆ ಕೂರಲು ಪೈಪೋಟಿ ನಡೆಸುತ್ತಿದ್ದದು.. ಎಲ್ಲಾ ಒಂದು ಸವಿ ನೆನಪು ಮಾತ್ರ. ಕಾಲ ಎಷ್ಟೊಂದು ಬದಲಾಗಿದೆ.

ಹೊಸ ಕ್ರಾಂತಿಯೇ ನಡೆದಿದೆ ಅಂತ ಅನಿಸುತ್ತಿಲ್ಲವಾ?



ಬುಧವಾರ, ಆಗಸ್ಟ್ 3, 2011

ಸ್ನೇಹಲೋಕ

ನೀ ಇವನ/ಇವಳ ಜೊತೆ ಆಟ ಆಡು. ನಾಳೆಯಿಂದ ನೀನು ಇವನ ಜೊತೆಯಲ್ಲಿ ಶಾಲೆಗೆ ಹೋಗು. ಇವನ/ಇವಳ ಜೊತೆಗೆ ಶಾಲೆಯಲ್ಲಿ ಕುಳಿತುಕೋ. ಹೀಗೆ ನಮಗೆ ನಮ್ಮ ಹೆತ್ತವರು ಪರರ ಜೊತೆಯಲ್ಲಿ ನಾವುಗಳು ಹೇಗೆ ನಮ್ಮ ಪರಿಚಯವನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿರುತ್ತಾರೆ.

ಅವರಿಗೆ ಏನೋ ಒಂದು ರೀತಿಯಲ್ಲಿ ನಮ್ಮ ಮಗ/ಮಗಳು ಮನೆಯಿಂದ ಹೊರಗಡೆಯಲ್ಲಿ ಇದ್ದಾಗ ಯಾರಾದರೂ ಪರಿಚಯದವರು ಜೊತೆಯಲ್ಲಿ ಇರಲಿ ಎಂಬ ಆಸೆ. ಮನೆಯಲ್ಲಿ ಅವರ ಕಣ್ಣಳತೆಯಲ್ಲಿ ಇರುತ್ತೇವೆ ಎಂಬ ಏನೋ ನೆಮ್ಮದಿ. ಆದರೆ ಮನೆಯಿಂದ ಹೊರಗಡೆ ಇದ್ದಾಗಲೂ ಇದೆ ರೀತಿಯಲ್ಲಿ ತಾವುಗಳು ನಮ್ಮ ಜೊತೆಯಲ್ಲಿ ಇರದೇ ಇದ್ದಾಗ ಯಾರದರೂ ಮತ್ತೊಬ್ಬರು ಪರಸ್ಪರ ಕಾಳಜಿಯನ್ನು ತೋರುವವರನ್ನು ಮಕ್ಕಳು ತಮ್ಮ ಜೊತೆಯಲ್ಲಿ ಇಟ್ಟುಕೊಳ್ಳಲಿ ಎಂಬ ಹಂಬಲ.

ಇದೇ ಬೆಳೆಯುತ್ತಾ ಬೆಳೆಯುತ್ತಾ ನಮಗೆ ಬುದ್ಧಿ ಬರುವ ವೇಳೆಗೆ ಎಷ್ಟೊಂದು ಅಗಾಧವಾಗಿ ನಾವುಗಳು ಪ್ರತಿ ಕ್ಷಣ, ಪ್ರತಿ ಸ್ಥಳದಲ್ಲೂ ನಾವುಗಳು ನಮ್ಮನ್ನು ಗುರುತಿಸುವವರನ್ನು, ನಮ್ಮ ಬಗ್ಗೆ ಕಾಳಜಿಯನ್ನುಂಟು ಮಾಡುವವರನ್ನು, ನಮ್ಮ ಬಗ್ಗೆ ಒಂದು ರೀತಿಯ ಪ್ರೀತಿಯನ್ನು ವ್ಯಕ್ತಪಡಿಸುವವರನ್ನು ಅಥಾವ ಒಂದೇ ಒಂದು ಹಲೋ ಎಂದು ಹೇಳುವವರನ್ನು ಪರಿಚಯಿಸಿಕೊಂಡಿರುತ್ತೇವೆ.

ಯಾವುದೇ ಒಂದು ಗೊತ್ತು ಪರಿಚಯವಿಲ್ಲದ ಜಾಗದಲ್ಲಿ ಪ್ರತಿಯಾಗಿ ಯಾರಾದರೂ ಒಬ್ಬರ ಒಂದೇ ಒಂದು ಮುಗಳ್ನಗು ನಮ್ಮ ಎಷ್ಟೋ ಮನದಲ್ಲಿನ ಗೊಂದಲ, ಭಯ, ಸಂಶಯಗಳನ್ನು ದೂರ ಮಾಡಿರುತ್ತದೆ.

ಇದು ಇಲ್ಲವೆಂದರೇ ಮನುಷ್ಯನಾಗಿದ್ದೇ ದಂಡ ಎನ್ನುವಂತಾಗುತ್ತದೆ. ಮನುಷ್ಯ ಸಂಘ ಜೀವಿ ಎಂಬುದು ನಾವುಗಳು ಬುದ್ಧಿ ಬಂದ ಮೇಲೆ ತಿಳಿದಿರುವ ಸಾಮಾನ್ಯ ವಿಷಯ. ಒಂಟಿಯಾಗಿ ಏನನ್ನು ಮಾಡಲು ಸಾಧ್ಯವಿಲ್ಲ. ಮಾಡಬಹುದು ಆದರೇ ಪರಸ್ಪರರ ಜೊತೆಯಲ್ಲಿ ತೊಡಗುವ ಕೆಲಸ ಕಾರ್ಯಗಳ, ಚಿಂತನೆಯ ವಿನಿಮಯದ ಸ್ವಾರಸ್ಯ ಒಂಟಿ ಸುಂಟರಗಾಳಿಯಲ್ಲಿ ಕಾಣುವುದಕ್ಕೆ ಆಗುವುದಿಲ್ಲ.

ನಮಗೆ ಯಾವುದೇ ದುಡಿತವಿಲ್ಲದೇ ಬರುವ ಮತ್ತು ನಮ್ಮನ್ನು ಸುತ್ತುವರಿಯುವ ಸಂಬಂಧವೆಂದರೇ ನಮ್ಮ ರಕ್ತ ಸಂಬಂಧ/ಸಂಬಂಧಿಗಳು. ಅದು ನಾವುಗಳು ಇಷ್ಟಪಟ್ಟರು, ಪಡದೇ ಇದ್ದರೂ ನಮ್ಮ ಜೊತೆಯಲ್ಲಿ ನಮ್ಮ ಕುಟುಂಬದಿಂದ ಬರುತ್ತದೆ. ಅದಕ್ಕೆ ನಾವುಗಳು ನಮ್ಮ ಮನಸ್ಸಿದ್ದರೂ ಮನಸ್ಸಿಲ್ಲದಿದ್ದರೂ ಅವರ ಜೊತೆಯಲ್ಲಿ ಸಾಗಬೇಕು.



ಅದಕ್ಕೆ ಇರಬೇಕು. ನೀವೆ ಯೋಚಿಸಿ ನಾವುಗಳು ನಮ್ಮ ಮನಸ್ಸನ್ನು ಬಿಚ್ಚಿ ನಮ್ಮ ಸ್ನೇಹಿತರರ ಜೊತೆಯಲ್ಲಿ ಮಾತನ್ನಾಡಿದಷ್ಟು ನಮ್ಮ ಸಂಬಂಧಿಕರ ಜೊತೆಯಲ್ಲಿ ವ್ಯಕ್ತಪಡಿಸಲು ಆಗುವುದಿಲ್ಲ. ಅಲ್ಲಿ ನಾವುಗಳು ತೋರಿಸುವುದು ನಮ್ಮ ಸಾಮರ್ಥ್ಯ ಮತ್ತು ನಮ್ಮ ಹಿರಿಮೆಯನ್ನು.

ಅದೇ ನಮ್ಮ ಗೆಳೆಯರ ಹತ್ತಿರ ನಮ್ಮ ಹೆಮ್ಮೆ, ಪಾಸೀಟಿವ್ ಅಂಶಗಳಿಗಿಂತ ನಮ್ಮ ದೌರ್ಬಲ್ಯಗಳನ್ನು, ನಮ್ಮ ವೈಪಲ್ಯಗಳನ್ನು, ಕಷ್ಟಗಳನ್ನು ಯಾವುದೇ ಹೆಗ್ಗಿಲ್ಲದೇ ತೋಡಿಕೊಳ್ಳುತ್ತೇವೆ. ಅದಕ್ಕೆ ರ್ರೀ ಸ್ನೇಹಿತರ ಜೊತೆಯಲ್ಲಿ ಇದ್ದ ಕ್ಷಣಗಳೇ ನಮ್ಮ ಜೀವನದ ಅತ್ಯಂತಹ ಸಂತೋಷದ ಮತ್ತು ನಿರಾಳವಾದ ಸುಂದರ ಸ್ವಪ್ನಗಳು. ಅಲ್ಲಿ ನಮ್ಮನ್ನು ನಾವುಗಳು ತೆರೆದ ಮನದಿಂದ ಬಿಚ್ಚಿಕೊಳ್ಳುತ್ತೇವೆ. ನಮ್ಮ ದುಃಖಗಳಿಗೆ ನಮ್ಮ ಗೆಳೆಯರ ಅಸರೆಯಿರುತ್ತದೆ. ನಮ್ಮ ಕಷ್ಟಗಳಿಗೆ ಒಂದೇರಡು ಸಾಂತ್ವನದ ನುಡಿಗಳಿರುತ್ತವೆ. ನಮ್ಮ ಗೆಲುವಿನ ವಿಚಾರಕ್ಕೆ ಒಂದು ಪ್ರೋತ್ಸಾಹದ ಉತ್ತೇಜನವಿರುತ್ತದೆ. ನಮ್ಮ ಅಭಿರುಚಿಗೆ ಅವರುಗಳ ತಾಳ ಮೇಳಗಳಿರುತ್ತೇವೆ. ಯಾವುದನ್ನು ಇದು ಸರಿಯಿಲ್ಲ ಎಂದು, ಏನೋ ನೀನು ಹೀಗೆ ಹೇಳಿದೇ ಎಂದು ಕೊಂಕಾಗಿ ನೋಡುವುದಿಲ್ಲ. ಅದೇ ಅಲ್ಲವಾ ಸ್ನೇಹಲೋಕ! ಒಂದು ವೇಳೆ ಏನಾದರೂ ಆ ರೀತಿಯ ಟೀಕೆ ಟಿಪ್ಪಣಿಗಳು ಬಂದರೂ ಅದು ನಮ್ಮನ್ನು ತಿದ್ದುವ ರೀತಿಯಾಗಿರುತ್ತೇವೆ ವಿನಾಃ ನಮ್ಮನ್ನು ಹಂಗಿಸುವುದಂತೆ ಅಲ್ಲ.




ನನಗೆ ಅನಿಸುತ್ತದೆ. ನಮ್ಮ ಜೀವನದಲ್ಲಿ ಒಂದೇ ಒಂದು ಸಂಬಂಧ ಯಾವಾಗಲೂ ನಿತ್ಯ ನೂತನವಾಗಿರುವುದು ಅಂದರೇ ಅದು ಗೆಳೆತನ. ಇಲ್ಲಿ ಯಾವುದೇ ವಯೋಮಾನವಿಲ್ಲ, ಲಿಂಗ ಬೇದವಿಲ್ಲ, ಅಂತಸ್ತು ಇಲ್ಲ.. ಯಾವೊಂದು ಅಪೇಕ್ಷೆ ಇಲ್ಲದೇ ಸುಲಭವಾಗಿ ಘಟಿಸುವ ಒಂದು ತಣ್ಣನೆಯ ನಿಷ್ಕಲ್ಮಶವಾದ ಝರಿ.

ಅದು ಎಲ್ಲಿಯಾದರೂ ಎಷ್ಟೊತ್ತಾದರೂ ಆಗಿರಬಹುದು. ಅ ಕ್ಷಣಕ್ಕೆ ಅವರುಗಳೇ ನಮ್ಮ ಆತ್ಮೀಯರು. ನಾವುಗಳೂ ಓಡಾಡುವ ನಿತ್ಯ ಓಣಿಯಿಂದ ನಾವುಗಳು ಪ್ರವಾಸ ಮಾಡಿದ ಯಾವುದೇ ಹೊಸ ಹೊಸ ಜಾಗ, ಊರು, ಸ್ಥಳ, ದೇಶ ಏನಾದರೂ ಆಗಿರಲಿ ಅಲ್ಲಿಯೇ ಖಂಡಿತವಾಗಿ ನಾವುಗಳು ನಮ್ಮ ಅಗತ್ಯತಗೆ ತಕ್ಕಂತೆ ಕನಿಷ್ಟ ಒಬ್ಬರೂ ಇಬ್ಬರನ್ನಾದರೂ ಅತ್ಯಂತ ಪರಿಚಯದವರು ಎಂಬುವಷ್ಟರ ಮಟ್ಟಿಗೆ ನಮ್ಮ ಹೃದಯದಲ್ಲಿ ಇಟ್ಟುಕೊಂಡಿರುತ್ತೇವೆ. ಒಮ್ಮೆ ಹೀಗೆ ಪ್ರತಿಷ್ಠಾಪಿಸಿಕೊಂಡ ವ್ಯಕ್ತಿಗಳು ಎಂದು ಮರೆಯದವರಾಗಿರುತ್ತಾರೆ.

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಕೆಲಸ ಮಾಡಲು ಹೊಟ್ಟೆ ಪಾಡಿಗೆ ಎಂದು ಬಂದಂತಹ ಜಾಗಗಳಲ್ಲಿ ನಮ್ಮ ಅಸರೆಗೆ ಬರುವವರು ಎಂದರೇ ಸ್ನೇಹಿತರುಗಳು ಮಾತ್ರ. ಯಾರು ಗೊತ್ತಿರದ ಜಾಗದಲ್ಲಿ ಅಲ್ಲಿರುವವರೇ ನಮ್ಮ ಸ್ನೇಹಿತರುಗಳು! ಇದೇ ಒಂದು ನಿಜವಾದ ಮಾತು.

ನಮ್ಮ ಇಂದಿನ ಈ ವೇಗದ ಜೀವನದಲ್ಲಿ ಅಸಂಖ್ಯಾತ ಸ್ನೇಹಿತರನ್ನು ನಾವುಗಳು ಪಡೆಯಬಹುದು.

ಹಾಗೆಯೇ ನಾವುಗಳು ಅವರ ಜೊತೆಯಲ್ಲಿ ಎಷ್ಟರ ಮಟ್ಟಿಗೆ ಪರಸ್ಪರರನ್ನು ಬೇಟಿ ಮಾಡಿರುತ್ತೇವೆ? ಮಾತನ್ನಾಡುವುದು, ಕುಶಲವನ್ನು ವಿಚಾರಿಸಿಕೊಳ್ಳುತ್ತೇವೆ?

ಅಂದು ಅವರ ಜೊತೆಯಲ್ಲಿ ಹಾಗೆ ಇದ್ದೇವು. ಅದರೆ ಇಂದಿನ ಪರಿಸ್ಥಿತಿಯೇ ಬೇರೆ ಇಂದು ಮತ್ಯಾರೋ ನಮಗೆ ತೀರ ಹತ್ತಿರದವರಾಗಿರುತ್ತಾರೆ. ಇವರುಗಳು ಹೊಸ ಗೆಳೆಯರು ಮತ್ತು ಗೊತ್ತಿರುವವರು. ಹಾಗೆಯೇ ಇವರ ಜೊತೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುವಂತಾಗಿರುತ್ತದೆ. ಹಾಗಂತಹ ಅವರನ್ನು ನಾವುಗಳು ಏನೂ ಹಳೆಯ ಸ್ನೇಹಿತರನ್ನು ಪೂರ್ಣವಾಗಿ ಮರೆತಿರುವುದಿಲ್ಲ. ಅದೇ ಸಮಯ, ಸ್ಥಳ, ಅವಕಾಶದ ಅಭಾವದಿಂದ ಸ್ವಲ್ಪಮಟ್ಟಿಗೆ ಸ್ನೇಹ ಹಳತಾಗಿರುತ್ತದೆ ಅಷ್ಟೇ.

ಯೋಚಿಸಿ ಈ ರೀತಿಯ ವಿಪರ್ಯಾಸ ಗೊತ್ತೋ ಗೊತ್ತಿಲ್ಲದೇ ಎಲ್ಲರ ಜೀವನದಲ್ಲೂ ಸಾಮಾನ್ಯವಾಗಿ ಚಲನೆಯಲ್ಲಿರುತ್ತದೆ. ನಾವುಗಳು ಏನೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ಕಾರಣಗಳು ನೂರಾರು. ಹಾಗಂತಹ ನಾವುಗಳು ನಮ್ಮ ಹಳೆಯ ಸ್ನೇಹಿತರುಗಳನ್ನು ಪೂರ್ಣವಾಗಿ ಕಡೆಗಣಿಸಿರುತ್ತೇವೆ ಎಂದೇನಲ್ಲಾ. ಸಮಯ ಸಿಗಬೇಕು ಮತ್ತು ಜರೂರತು ಬರಬೇಕು.

ಇದಕ್ಕೆ ಸಾಕ್ಷಿ ನಮ್ಮ ಇಂದಿನ ತಂತ್ರಙ್ಞಾನದ ಕೊಡುಗೆಗಳಾದ ಸೇಲ್ ಪೋನ್, ಪೇಸ್ ಬುಕ್, ಆರ್ಕುಟ್ ನೋಡಿ ಎಷ್ಟೊಂದು ಸ್ನೇಹಿತರ ಕಾಂಟ್ಯಕ್ಟ್ಸ್ ಇವೆ ನಮ್ಮಲ್ಲಿ. ನಾವುಗಳು ವರ್ಷದಲ್ಲಿ ಎಷ್ಟು ಮಂದಿಯನ್ನು ನಿರಂತರವಾಗಿ ಟಚ್ ನಲ್ಲಿ ಇಟ್ಟುಕೊಂಡಿದ್ದೇವೆ. ಎಣಿಸಿದರೇ ನಮಗೆ ನಾವೇ ಆಶ್ಚರ್ಯಪಡುವಂತಾಗುತ್ತದೆ. ಯಾಕೆ ಹೀಗೆ?

ನಾವುಗಳು ನಮ್ಮ ಸ್ನೇಹದ ಹೊಸ ಹೊಸ ದಿಕ್ಕಿನಲ್ಲಿ ಹೊಸ ಹೊಸ ಗೆಳೆಯರನ್ನು/ಗೆಳತಿಯರನ್ನು ಅಂದಿನ ದಿನ ಮಾನಗಳಿಗೆ ಅನುಗುಣವಾಗಿ ಬೆಳೆಸುತ್ತಾ ಸಾಗುತ್ತೇವೆ. ಇಂದಿನ ಕ್ಷಣಕ್ಕೆ ಇವರ ಜೊತೆಯಲ್ಲಿಯೇ ಹೆಚ್ಚು ಹೆಚ್ಚು ವಿಚಾರ ವಿನಿಮಯ, ಪರಸ್ಪರ ಮಾತುಕತೆ, ಬೌದ್ಧಿಕ ಬೆಳವಣಿಗೆ... ಇದೇ ನಿಜವಾದ ಸತ್ಯ.

ನಾವುಗಳು ಬಾಲ್ಯದಲ್ಲಿ ನನ್ನ ಬೇಸ್ಟ್ ಪ್ರೇಂಡ್ ಎಂದು ಹೇಳಿಕೊಂಡಿದ್ದವನು/ಳು ಎಲ್ಲೂ ಇದ್ದಾರೆ. ಅವರುಗಳ ಅಡ್ರಸ್ಸೇ ಇಲ್ಲದವರಾಗಿರುವೆವು. ಏನೂ ಮಾಡಲೂ ಆಗುವುದಿಲ್ಲ. ಯುಗ ಯುಗಗಳು ಸಾಗುತ್ತಿವೆ.

ಅದರೂ ಈ ಒಂದು ಸುಂದರವಾದ ಸಂಬಂಧದ ಬಗ್ಗೆ ಇರುವಷ್ಟು ಮಾತುಗಳು, ಅಭಿಪ್ರಾಯಗಳು ಹಿಂದಿನ ಪುರಾಣ ಪುಣ್ಯಕತೆಗಳಿಂದ ಇತ್ತೀಚಿಗಿನ ಸಿನಿಮಾ ಕತೆಗಳವರೆಗೂ, ಎಷ್ಟೊಂದೂ ವಿಚಾರಗಳು ಬೆಳೆದು ಬಂದಿವೆ ಅಂದರೇ ಅದರ ಮಹತ್ವವನ್ನು ನಾವುಗಳು ಅರಿಯಬೇಕು.

ಅದಕ್ಕೆ ಹಿರಿಯರು ಹೇಳುತ್ತಾರೆ.. ಬೆಳೆದ ಮಕ್ಕಳನ್ನು ಸ್ನೇಹಿತರ ರೀತಿಯಲ್ಲಿ ನೋಡು. ನಿನ್ನ ಸಂಗಾತಿಯನ್ನು ಸ್ನೇಹಿತರ ಹಾಗೆಯೇ ನೋಡಿ ಆಗ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಈ ಎಲ್ಲಾ ಮಾತುಗಳು ಮತ್ತೊಮ್ಮೆ ಸ್ನೇಹವೆಂದರೇ ಏನೂ ಮತ್ತು ಯಾಕೆ ನಾವುಗಳು ಜಗತ್ತಿನ ಅತಿ ಶ್ರೇಷ್ಠವಾದ ಸಂಬಂಧವೆಂದು ಪರಿಗಣಿಸಿದ್ದಾರೆ ಎಂಬುದು ತಿಳಿಯುತ್ತದೆ.

ಇಂದಿನ ದಿನಗಳಲ್ಲಿ ನಮ್ಮ ಮೋಬೈಲ್ ಗಳಿಗೆ ನಮ್ಮ ಗೆಳೆಯರಿಂದ ಬರುವ ಎಸ್. ಎಂ. ಎಸ್ ಗಳು ಸಹ ಹತ್ತು ಹಲವು ರೀತಿಯಲ್ಲಿ ಸ್ನೇಹದ ಬಗ್ಗೆ ವ್ಯಾಖ್ಯಾನಿಸುತ್ತಿರುತ್ತವೆ ಮತ್ತು ನಾವುಗಳೇ ನಮ್ಮಲ್ಲಿ ರೋಮಾಂಚನವನ್ನುಗೊಳ್ಳುವಂತೆ ಮಾಡುತ್ತವೆ. ರೀಯಲಿ ಪ್ರೇಂಡ್ಸ್ ಶಿಪ್ ಇಸ್ ಗ್ರೇಟ್!

ಹಾಗೆ ನಾವುಗಳು ಹೊಸ ಹೊಸ ಗೆಳೆಯರನ್ನು ಮಾಡಿಕೊಳ್ಳುತ್ತೇವೆ. ಅವರ ಯಾವುದೋ ಒಂದು ಗುಣ, ಅಭಿರುಚಿ, ಮಾತು ನಮಗೆ ತೀರ ನಮ್ಮವರನ್ನಾಗಿ ಮಾಡಿರುತ್ತದೆ. ಆ ಕ್ಷಣಕ್ಕೆ ಯಾಕೋ ಇವರು ನಂಬಿಕೆಯ ವ್ಯಕ್ತಿ ಎಂಬ ಭಾವನೆ ಮನದಲ್ಲಿ ಮೂಡಿರುತ್ತದೆ. ಅವರುಗಳಿಗೂ ಅದೇ ರೀತಿಯಲ್ಲಿ ಒಂದು ಸ್ನೇಹದ ಮೈತ್ರಿ ಉಂಟಾದಾಗ ಸ್ನೇಹ ಗಾಢವಾಗುತ್ತದೆ. ಇಲ್ಲಿ ಯಾವುದೇ ಒಂದು ಉದ್ದೇಶ, ಅವಶ್ಯಕತೆಯಿಂದ ಗೆಳೆತನ ಗಟ್ಟಿಯಾಗಿರುವುದಿಲ್ಲ. ಕೇವಲ ಒಂದು ಅಂತಃಕರಣದಿಂದ ಇಬ್ಬರೂ ಯಾವುದೇ ಒಂದು ಕಂಡಿಷನ್ ಇಲ್ಲದೇ ಪರಸ್ಪರ ಸ್ನೇಹ ಹಸ್ತವನ್ನು ಚಾಚಿರುತ್ತಾರೆ.

ಅವರ ಜೊತೆಯಲ್ಲಿ ಇದ್ದ ಕ್ಷಣಗಳು ಏನೋ ನನಗೆ ತುಂಬ ಖುಷಿಯನ್ನು ಕೊಡುತ್ತದೆ. ಅವರ ಜೊತೆಯಲ್ಲಿ ಮಾತನ್ನಾಡಿದರೇ ಏನೋ ನನಗೆ ಮನಸ್ಸಿಗೆ ಹಗುರವಾದಂತೆ ಅನಿಸುತ್ತದೆ. ಅವರ ಅನುಭವಗಳು ನನ್ನ ವೃತ್ತಿಗೆ ಅನುಕೂಲವಾಗುತ್ತವೆ. ಅವರ ಬುದ್ಧಿವಂತಿಕೆ, ಜಾಣತನ ನಾನು ಕಲಿಯಬಹುದು. ನಾನು ಎಡವಿದರೆ ಅವರು ಎಚ್ಚರಿಸುತ್ತಾರೆ. ನನ್ನ ಗೊಂದಲಗಳಿಗೆ ಅವರುಗಳ ಮಾತುಗಳು ಸಾಂತ್ವನ ನೀಡುತ್ತವೆ. ಇತ್ಯಾದಿ ಇತ್ಯಾದಿ ಒಂದು ಯಾವುದೇ ನಿರ್ಧಿಷ್ಟವಿಲ್ಲದ ಒಂದು ಸಾಮಾನ್ಯ ಸಂಗತಿ ತೀರ ಹತ್ತಿರದವರನ್ನಾಗಿ ಮಾಡಿಬಿಟ್ಟಿರುತ್ತದೆ.




ನಿಮಗೆ ಗೊತ್ತೇ ನಮಗೆ ನಾವು ತಿಳಿಯದೇ ಒಂದೊಂದು ವಿಷಯಗಳನ್ನು ಯಾರೂಬ್ಬರ ಮುಂದೆ ಬಾಯಿ ಬಿಟ್ಟಿಲ್ಲದ್ದು, ನಮ್ಮ ಗೆಳೆಯರ ಮುಂದೆ ಅದೇ ಮೊದಲನೆಯದಾಗಿ ಹೇಳಿಕೊಂಡುಬಿಟ್ಟಿರುತ್ತೇವೆ. ಯಾಕೆಂದರೇ ಆ ಒಂದು ಕಂಪ್ಯಾನಿಯನ್ ಹಾಗೆ ಮಾಡಿಬಿಟ್ಟಿರುತ್ತದೆ. ಅಷ್ಟೊಂದು ನಂಬಿಕೆಯನ್ನು ನಾವು ನಮ್ಮವರು/ನಮ್ಮವಳು ಎಂದು ಅಂದುಕೊಂಡ ವ್ಯಕ್ತಿ ಮಾಡಿಬಿಟ್ಟಿರುತ್ತಾರೆ. ಅದಕ್ಕೆ ಹಿರಿಯರು ಹೇಳಿರುವವರು ಸಜ್ಜನರ ಸಂಗ ಹೆಜ್ಜೇನು ಸವಿದಂತೆ. ಸವಿ ಸವಿಯಾದ ಅನುಭವಗಳ ಖಜಾನೆಯನ್ನು ಹಂಚುವಂತ ಅಪರೂಪದ ಸ್ನೇಹಿತರುಗಳನ್ನು ಪಡೆಯುವ ಸೌಭಾಗ್ಯ ಕೆಲವರದಾಗಿರುತ್ತದೆ.

ನಾವುಗಳು ಎಷೊಂದು ವಿಷಯಗಳನ್ನು ನಮ್ಮ ಸ್ನೇಹಿತರುಗಳಿಂದ ಕಲಿತುಕೊಂಡಿರುತ್ತೇವೆ. ಅವರುಗಳೇ ಒಮ್ಮೊಮ್ಮೆ ನಮ್ಮನ್ನು ತಿದ್ದುವ ಒಳ್ಳೆಯ ಮೇಸ್ಟರ್ ಗಳಾಗಿರುತ್ತಾರೆ. ಸ್ನೇಹದಲ್ಲಿ ಕೆಲವೊಮ್ಮೆ ಸಿಟ್ಟು ಸೇಡವುಗಳು ಬರುವುದು ಸಾಮಾನ್ಯ. ಕೆಲವೊಂದು ದಿನಗಳ ಮಟ್ಟಿಗೆ ಒಬ್ಬರೊನ್ನೊಬ್ಬರು ಮಾತನ್ನಾಡಿಸದ ಮಟ್ಟಿಗೆ ಟೂ ಬಿಟ್ಟಿರುತ್ತಾರೆ. ಇದು ಕೆವಲ ಯಾವುದೇ ಒಂದು ಪರ್ಪಸ್ ಗಾಗಿ ಅಲ್ಲ. ಕೆಲವೊಂದು ವಿಚಾರಗಳ ವೈರುಧ್ಯಗಳಿಂದ ಮಾತ್ರ. ಅತಿ ಹೆಚ್ಚು ಇಷ್ಟಪಟ್ಟ ಸ್ನೇಹಿತರಾಗಿರುವುದರಿಂದಲೇ ಆ ಮಟ್ಟಿಗೆ ಸಿಟ್ಟಾಗುವುದು. ಇಲ್ಲ ಅಂದರೇ ಅದು ಸ್ನೇಹವೇ ಅಲ್ಲ. ಯಾಕೆಂದರೇ ನಿನ್ನ ಬಗ್ಗೆ ಕಾಳಜಿಯಿಲ್ಲದ ವ್ಯಕ್ತಿ ಯಾಕೇ ನಿನ್ನ ಜೊತೆಯಲ್ಲಿ ಕಾದಾಡುವನು? ಅವನ ಪಾಡಿಗೆ ಅವನಿರುವನು ಅಲ್ಲವಾ? ಇದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕು.

ನಿಜವಾದ ಸ್ನೇಹಿತ ಒಮ್ಮೊಮ್ಮೆ ತಂದೆಯ ರೀತಿಯಾಗಿ ದಂಡಿಸುವನಾಗಿರುತ್ತಾನೆ, ತಾಯಿಯ ರೀತಿಯಲ್ಲಿ ಪ್ರೀತಿಯನ್ನು ಹರಿಸುವವನಾಗಿರುತ್ತಾನೆ, ತಂಗಿಯ/ತಮ್ಮನ ರೀತಿಯಲ್ಲಿ ಮಮತೆಯನ್ನು, ತುಂಟತನವನ್ನುಂಟು ಮಾಡುವವನಾಗಿರುತ್ತಾನೆ.

ನಮ್ಮ ಜೊತೆಯಲ್ಲಿ ಇರುವವರ ಜೊತೆಯಲ್ಲಿ ನಾವುಗಳು ನಮ್ಮ ಸಂತೋಷವನ್ನು, ದುಃಖವನ್ನು, ನೋವನ್ನು, ಅನುಭವವಗಳನ್ನು ಪರಸ್ಪರರು ಹಂಚಿಕೊಳ್ಳುತ್ತಾ, ನಮ್ಮ ನಮ್ಮ ಉನ್ನತಿಯನ್ನು ಕಾಣವುದು ನಿತ್ಯ ಜಾರಿಯಲ್ಲಿರಬೇಕು. ಆಗಲೇ ಸ್ನೇಹತ್ವಕ್ಕೆ ಮಹತ್ವ ಬರುವುದು.