ಗುರುವಾರ, ಮಾರ್ಚ್ 31, 2011

ಯಾರೂ ಶಾಶ್ವತ ಮೂರ್ಖರಲ್ಲ

ಬೇರೆಯವರು ಮೂರ್ಖರು ಎಂದು ಭಾವಿಸುವವರು ಮೂಲತಃ ಅದೇ ಮನಸ್ಥಿತಿಯಲ್ಲಿರುತ್ತಾರೆ. ಯಾರೂ ಶಾಶ್ವತ ಮೂರ್ಖರಲ್ಲ. ಆದರೆ ಮೂರ್ಖತನವೆಂಬುದು ಎಲ್ಲರಲ್ಲೂ ಆಗಾಗ ಇಣಕುತ್ತಿರುತ್ತದೆ. ಇದೊಂದು ದಿನ ಮಾತ್ರ ಅದು ಪರವಾಗಿಲ್ಲ ಅದು ಇಣುಕಲಿ. - ಸುಪ್ರಭತಾ ಕೃಪೆ.





ವಿಶ್ವ ಮೂರ್ಖರ ದಿನವೆಂದು ಪ್ರಪಂಚಾದ್ಯಂತ ಏಫ್ರಿಲ್ ೧ ರಂದು ಆಚರಿಸುತ್ತಾರೆ. ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಸ್ವಲ್ಪವಾದರೂ ಮೂರ್ಖತನವಿರುತ್ತದೆ. ಆಗಲೆ ನಾವುಗಳು ಅವನನ್ನು ನಾರ್ಮಲ್ ಆದ ವ್ಯಕ್ತಿ ಎನ್ನಬಹುದೇನೋ. ಎಷ್ಟೇ ಬುದ್ಧಿವಂತರಾದರೂ ಯಾವುದೇ ಒಂದು ಸಮಯದಲ್ಲಿ ಯಾರಿಂದಲಾದರೂ ಅಥವಾ ಗೊತ್ತಿಲ್ಲದ ರೀತಿಯಲ್ಲಿ ಆ ರೀತಿ ವರ್ತಿಸಿ ಅನಂತರ ಹಾಗೇ ಆಗಿದ್ದಕ್ಕೆ ವ್ಯಥೆಯನ್ನು ಪಟ್ಟಿರುತ್ತೇವೆ.

ವಿಶ್ವ ಮೂರ್ಖರ ದಿನವನ್ನು ಏಫ್ರಿಲ್ ಒಂದನೇ ದಿನವೇ ಯಾಕೆ ಆಯ್ಕೆಯಾಯಿತು ಅಂದರೇ ಅದಕ್ಕೂ ಒಂದು ಇತಿಹಾಸ ಮತ್ತು ಕಥೆಯಿದೆ. ನಮ್ಮ ಈಗಿನ ಹೊಸ ವರ್ಷ ಜನವರಿ ೧ ನ್ನು ಹೊಸ ವರುಷದ ಪ್ರಾರಂಭ ದಿನವೆಂದು ಪರಿಗಣಿಸುವುದಕ್ಕೂ ಮುನ್ನ ಏಪ್ರಿಲ್ ೧ ನೇ ದಿನವನ್ನು ವರ್ಷದ ಪ್ರಾರಂಭ ದಿನವೆಂದು ಹಿಂದಿನ ಜನಗಳು ಆಚರಿಸುತ್ತಿದ್ದರು. ಆದರೆ ಯಾರೋ ಒಬ್ಬರೂ ಇಲ್ಲ ಅದು ಆಗಲ್ಲ ಸರಿಯಾದ ವರ್ಷದ ಪ್ರಾರಂಭ ಜನವರಿ ೧ ಎಂದು ಹೇಳಿದರೂ ಮತ್ತು ಹಾಗೆಯೇ ನಾವುಗಳು ಇನ್ನೂ ಮುಂದೆ ವರ್ಷದ ಮೊದಲ ದಿನ ಜನವರಿ ೧ ಎಂದು ಆಚರಿಸೋಣ ಮತ್ತು ಅದನ್ನು ಅನುಸರಿಸೋಣ ಎಂದು ಪಾಲಿಸಲು ತೊಡಗಿದರು. ಆದರೆ ಮಾನವ ಸಹಜ ದೌರ್ಬಲ್ಯ ಅಂದರೆ ಅವನ ಅಭ್ಯಾಸ ರೂಡಿ. ಯಾವಾಗ ಏಪ್ರಿಲ್ ೧ ಬರುತ್ತದೋ ಅಂದು ಸಾಕಷ್ಟು ಜನಗಳು ಇದೇ ಹೊಸ ವರ್ಷದ ಮೊದಲ ದಿನವೆಂದು ಸಂಭ್ರಮದಿಂದ ಆಚರಿಸಲೂ ತೊಡಗುತ್ತಾರೆ. ಮತ್ತು ಹೀಗೆ ಆಚರಿಸುವ ಮಂದಿಗಳನ್ನು ಉಳಿದ ಮಂದಿ ಮೂರ್ಖರುಗಳು ಇವರು ಎಂದು ಹಾಸ್ಯ ಮಾಡುತ್ತಾ ಸಂಭ್ರಮಿಸುತ್ತಾರೆ. ಮತ್ತು ಏಪ್ರಿಲ್ ಪೂಲ್ಸ್ ಇವರುಗಳು ಎಂದು ಕರೆಯುತ್ತಾರೆ. ಹೀಗೆ ಹಲವು ವರ್ಷಗಳವರೆಗೆ ನಿರಂತರವಾಗಿ ಈ ಸಂಭ್ರಮ ಏಪ್ರಿಲ್ ೧ ರಂದು ಜಾರಿಯಲ್ಲಿರುತ್ತದೆ ಮತ್ತು ನಕ್ಕು ನಗುತ್ತಿರುತ್ತಾರೆ. ಆದ್ದರಿಂದ ವಿಶ್ವಾದ್ಯಂತಹ ಈ ದಿನವನ್ನು "ಏಪ್ರಿಲ್ ಪೂಲ್" ದಿನವೆಂದು ಕರೆದು ಅಂದು ತಮ್ಮ ಮೂರ್ಖತನಕ್ಕೆ ಒಂದು ಪುರಸ್ಕಾರವನ್ನು ಕೊಟ್ಟು ಕೊಂಡು ಹಗುರಾಗುತ್ತಾರೆ?


ಆದರೇ ಮೂರ್ಖರು ತಾವುಗಳು ಆಗುವುದಕ್ಕಿಂತ ನಾವುಗಳು ಬೇರೆಯವರನ್ನು ಮೂರ್ಖರನ್ನಾಗಿ ಮಾಡಲು ತುಂಬ ಉತ್ಸುಕರಾಗಿರುತ್ತೇವೆ. ಯಾಕೆಂದರೇ ಬೇರೆಯವರು ಬಿದ್ದಾಗ ಹೇಗೆ ನಾವುಗಳು ಸೇಫ್ ಎಂದು ಖುಷಿಪಟ್ಟು ನಗುತ್ತೇವೋ ಆ ರೀತಿಯಲ್ಲಿ ಸಮಯ ಸಿಕ್ಕಾಗಲ್ಲೆಲ್ಲಾ ಹತ್ತಿರದವರ ಕಾಲು ಎಳೆದು ಸಂಭ್ರಮಪಡುವ ಚಾಳಿ ನಮ್ಮ ನಮ್ಮಲ್ಲಿ ಹೇರಳವಾಗಿರುತ್ತದೆ.

ಮೂರ್ಖತನ ಎಂಬುದು ಹಲವು ಸಮಯಗಳಲ್ಲಿ ಒಂದು ಹಾಸ್ಯದ ವಸ್ತುವಾಗಿ ನಮ್ಮಗಳಿಗೆ ಸಂತೋಷವನ್ನು ಕೊಡಬಹುದು. ಆದರೇ ನಾವುಗಳು ಬೇರೆಯವರನ್ನು ಮೂರ್ಖರನ್ನಾಗಿ ಮಾಡಿ ಅದರಲ್ಲಿ ಸಂತಸಪಡುವುದಕ್ಕಿಂತಹ ನಮ್ಮ ನಮ್ಮಲ್ಲಿಯೇ ಇರುವ ನಾವುಗಳೇ ಕೆಲವೊಮ್ಮೆ ಮೂರ್ಖರಾದ ಕ್ಷಣಗಳನ್ನು ಮೆಲುಕು ಹಾಕಿಕೊಳ್ಳುತ್ತಾ ನಕ್ಕು ನಲಿಯುವುದು ಆರೋಗ್ಯಕರ.

ಈ ದಿನ ಎಲ್ಲರೂ ನಕ್ಕು ನಕ್ಕು ಹಗುರಾಗುವ ದಿನ. ಹಾಸ್ಯದ ಹೊನಲು ಮೂರ್ಖತನದಲ್ಲಿರುತ್ತದೆಯೇನೋ? ನಾವುಗಳು ನೋಡುವ ಯಾವುದೇ ಸಿನಿಮಾ, ಕಥೆ, ಜೋಕ್ಸ್, ಹಾಡುಗಳಲ್ಲಿ ಅತಿ ಹೆಚ್ಚು ಮನಸ್ಸನ್ನು ಗೆಲ್ಲುವರು ಮೂರ್ಖತೆಯಿಂದ ವರ್ತಿಸುವವರು. ಇಂದಿಗೂ ನಾವುಗಳು ಮೂರ್ಖ -ಬುದ್ಧಿ ಇಲ್ಲದವನಂತೆ ವರ್ತಿಸ ಬೇಡ ಎಂದು ಹೇಳುತ್ತೇವೆ. ಒಮ್ಮೊಮ್ಮೆ ಅಲ್ಲಿಯು ಸಹ ಮಾನವೀಯತೆ, ಮನಸ್ಸನ್ನು ಮುಟ್ಟುವಂತಹ ಸನ್ನಿವೇಶ, ಭಾವನೆಗಳನ್ನು ಆ ವ್ಯಕ್ತಿಗಳಿಂದ ಕಲಿಯುವಂತಹದು ಇರುತ್ತದೆ. ಯಾರೋ ಸಹ ಹುಟ್ಟುತ್ತಲೆ ಮೂರ್ಖರಾಗಿರುವುದಿಲ್ಲ. ಸಮಯ ಸನ್ನಿವೇಶ ಹಾಗೇ ಮಾಡಿರುತ್ತದೆ.

ನಾವುಗಳಂತೋ ಸಮಯ ಸಿಕ್ಕಿದರೇ ಯಾವುದಾದರೂ ಒಂದು ಸುಳ್ಳು ಹೇಳಲು ತವಕಿಸುತ್ತಿರುತ್ತೇವೆ. ಅಲ್ಲಿ ಆ ಸಮಯಕ್ಕೆ ಬಚವಾಗುವುದು ಅನಿವಾರ್ಯವಾಗಿರುತ್ತದೆ. ಹಾಗೆ ಅಲ್ಲಿ ನಮ್ಮ ಸುಳ್ಳನ್ನು ನಂಬಿರುವ ವ್ಯಕ್ತಿ ಆ ವ್ಯಕ್ತಿಯ ದೃಷ್ಟಿಯಲ್ಲಿ ಮೂರ್ಖನೇ ಸರಿ ಯಾಕೆಂದರೇ ಅದನ್ನು ಸತ್ಯ ಎಂದು ನಂಬಿರುತ್ತಾನೆ. ಆರೋಗ್ಯಕರ ಸುಳ್ಳು ಓಕೇ... ಆದರೇ ಅದೇ ಅತಿಯಾಗಿ ಯಾವಾಗಲೂ ಪುನವರ್ತಿತವಾದರೇ ನಷ್ಟ ಸುಳ್ಳು ನಂಬುವವನಿಗಲ್ಲ. ಹೇಳುವ ಮಹಾಶಯನಿಗೆ.

ಒಮ್ಮೊಮ್ಮೆ ನಮ್ಮಗಳ ಮುಗ್ಧತನವನ್ನೇ ಬಂಡವಾಳ ಮಾಡಿಕೊಂಡು ಹಲವಾರು ಬಾರಿ ಕೆಲವರುಗಳು ನಮ್ಮನ್ನು ಮೂರ್ಖತೆಗೆ ದೂಡುತ್ತಾರೆ. ನಮ್ಮಗಳಿಗೆ ಕೊನೆಯವರೆಗೂ ಅದರ ಮರ್ಮ ಅರಿಯಲಾಗುವುದಿಲ್ಲ. ಕೇವಲ ತಮಾಷೆಗಾಗಿ ಮಾಡುವ ಯಾವುದೇ ಇಂಥ ಘಟನೆಗಳು ಪರವಾಗಿಲ್ಲ. ಒಮ್ಮೊಮ್ಮೆ ಒಬ್ಬೊಬ್ಬರೂ ಅದನ್ನೇ ಜೀವನವನ್ನಾಗಿ ಮಾಡಿಕೊಂಡು ಕೊನೆಯವರೆಗೂ ಎಲ್ಲ ಸಮಯದಲ್ಲೂ ಎಲ್ಲರನ್ನೂ ಯಾಮಾರಿಸಿ ಸಂಭ್ರಮಿಸುತ್ತಾರೆ. ಆದರೇ ಅದು ಆ ವ್ಯಕ್ತಿಯ ಮೂರ್ಖತನವಲ್ಲದೇ ಮತ್ತೇನಾಲ್ಲ.

ನಮ್ಮ ರಾಜಕಾರಣಿಗಳಂತೋ ಮತದಾರನನ್ನು ಯಾವ ಯಾವ ರೀತಿಯ ತಮ್ಮ ಆಸೆಯ ಭರವಸೆಗಳ ಮಹಾಪೂರದಲ್ಲಿ ಮುಳುಗೇಳಿಸಿ ಒಂದು ವ್ಯವಸ್ಥೆಯನ್ನೇ ಮೂರ್ಖರನ್ನಾಗಿ ಮಾಡಿಬಿಡುತ್ತಾರೆ ಎಂದರೇ ಅತಿಶಯೋಕ್ತಿಯಲ್ಲ. ಅದು ಎಷ್ಟು ದಿನಗಳ ಪಯಣ ಎಂಬುದು ಪಾಪ ಆ ಮೂರ್ಖ ನಾಯಕರುಗಳಿಗೆ ತಿಳಿದಿರುವುದಿಲ್ಲ.

ನಮ್ಮ ಸಾಹಿತ್ಯದಲ್ಲಂತೋ ಸಾವಿರಾರು ಕಥೆಗಳು ಮತ್ತು ಪಾತ್ರಗಳನ್ನು ನಮ್ಮ ಲೇಖಕರುಗಳು ಸೃಷ್ಟಿ ಮಾಡಿದ್ದಾರೆ ಮತ್ತು ಅವುರುಗಳು ಎಲ್ಲರ ಮನೆ ಮಾತಾಗಿದೆ. ಹಾಗೆಯೇ ತಮಾಷೆಯ ವಸ್ತುವಾಗಿದ್ದರೂ ಅವರುಗಳು ನೀಡುವ ಜೀವನದ ಒಂದು ಸತ್ಯ ಎಲ್ಲರೂ ಒಪ್ಪುವಂತಾಗಿರುತ್ತದೆ. ಹಾಸ್ಯ ರಸದ ಇಂದಿರುವುದು ಪ್ರತಿಯೊಬ್ಬರೂ ತಮ್ಮನ್ನು ತಾವು ಹಾಸ್ಯದ ದೃಷ್ಟಿಕೊನದಿಂದ ನೋಡಿಕೊಳ್ಳಬೇಕು.

ಈ ದಿನ ಏನೇ ತಪ್ಪು ಮಾಡಿದರೇ ಮಾಫ್! ಎನ್ನುವ ರೀತಿಯಲ್ಲಿ ಕೆಲವರುಗಳು ಶಾಕ್ ವಿಷಯಗಳನ್ನು ತಮಗೆ ಗೊತ್ತಿರುವ ಜೊತೆಗಾರರಿಗೆ ತಿಳಿಸಿ ಖುಷಿಪಟ್ಟು ಅದು ಸುಳ್ಳು ಎಂದು "ಏಪ್ರಿಲ್ ಪೂಲ್" ಆದೇ ಎಂದು ನಕ್ಕು ನಗಿಸುತ್ತಾರೆ.

ಕೆಲವು ಪತ್ರಿಕೆಗಳಂತೋ ವಿಸ್ಮಯಕಾರಿ ವಿಷಯಗಳನ್ನು ಮುದ್ರಿಸಿ ಬಚವಾಗಲು ಇಂದು ಏಪ್ರಿಲ್ ೧ ಗೊತ್ತಲಾ ಎಂದು ಹೇಳಿ ಬಿಡುತ್ತಾರೆ. ಸುಳ್ಳು ಸುದ್ಧಿಗಳನ್ನು ಗಾಸಿಪ್ ಗಳನ್ನು ಟಿ. ವಿ ಮಾಧ್ಯಮಗಳು ಪ್ರಸಾರ ಮಾಡಿ ವಿಕ್ಷಕರುಗಳನ್ನು ರೋಮಾಂಚನಗೊಳಿಸುತ್ತಾರೆ. ಹೌದಾ! ಎಂದು ಹುಬ್ಬೇರಿಸಿದಾಗ ಏಪ್ರಿಲ್ ೧ ಎಂದು ತಿಳಿದು ನಾವುಗಳು ಮೂರ್ಖರಾದೇವು ಎಂದು ನಗುತ್ತಾರೆ.

ನಮ್ಮ ನಮ್ಮಲ್ಲಿಯೇ ಮಾಡುವ ಒಂದೀಷ್ಟು ತಪ್ಪು ಒಪ್ಪುಗಳನ್ನು ನೋಡಿಕೊಂಡು ನಾವುಗಳು ನಲಿಯಬೇಕು. ಬರೀ ಬೇರೆಯವರ ತಪ್ಪುಗಳನ್ನು ಪಟ್ಟಿ ಮಾಡುವುದನ್ನು ಬಿಟ್ಟು ನಾವುಗಳು ಸಹ ಎಲ್ಲರಂತೆ ಯಾವುದರಲ್ಲೂ ವಿಭಿನ್ನರಲ್ಲ ಎಂಬುದನ್ನು ಮನಗಾಣಬೇಕು.

ಬೇರೆಯವರ ಬಗ್ಗೆ ನಾವುಗಳು ಮಾಡುವ ಟೀಕೆ, ಟಿಪ್ಪಣಿಗಳು ವ್ಯಂಗ್ಯವಾಗಿರಬಾರದು ಅದು ನೈಜವಾಗಿ ಅವನ/ಳ ವ್ಯಕ್ತಿತ್ವವನ್ನು ತಿದ್ದಿಕೊಳ್ಳಲು ಸಹಾಯಕಾರಿಯಾಗಿರಬೇಕು. ಅದು ಯಾರ ಮನವನ್ನು ನೋಯಿಸುವ ಮಟ್ಟಕ್ಕೆ ಹೋಗಬಾರದು. ಕೇಳುಗನಿಗೂ ಹೌದು! ಹೇಳುತ್ತಿರುವುದು ಸತ್ಯ ನಾನು ತಿದ್ದಿಕೊಳ್ಳಬೇಕು, ಮಾಡಿದ್ದು ತಪ್ಪು ಎನ್ನುವಂತಿರಬಾರದು. ಯಾಕೆಂದರೇ ಎಲ್ಲರೂ ನಮ್ಮವರಲ್ಲವೇ ಎಂಬ ಕಳ ಕಳಿ ಇರಬೇಕು.


ಎಲ್ಲರೂ ಎಲ್ಲರ ದೃಷ್ಟಿಯಲ್ಲಿ ಕೆಲವೊಂದು ವಿಷಯದಲ್ಲಿ ಪಕ್ಕ ಮೂರ್ಖರಂತೆಯೇ ಗೋಚರಿಸುತ್ತಾರೆ. ಅದಕ್ಕೆ ಹೇಳಿದ್ದು ಮೊದಲೂ ನಾವುಗಳು ನಮ್ಮ ನ್ನು ನಾವುಗಳು ನೋಡಿಕೊಳ್ಳಬೇಕು. ಬೇರೆಯವರು ನಮಗೇ ಛೇಡಿಸಿದಾಗ ಆಗುವ ಅನುಭವ - ನಾವುಗಳು ಬೇರೆಯವರಿಗೆ ಮಾಡಿದಗಲೂ ಆ ವ್ಯಕ್ತಿ ಹಾಗೆಯೇ ನೋವನ್ನು ಅನುಭವಿಸುತ್ತಾನೆ.

ಆದ್ದರಿಂದ ಫನ್ ಅಂದರೆ ಅದು ನಮ್ಮೀಂದ ಮೊದಲೂ ಪ್ರಾರಂಭವಾಗಿ ಸುತ್ತಲೂ ಪಸರಿಸಬೇಕು..

ಇಲ್ಲಿ ಯಾರೋ ಎಂದಿಗೂ ಪರಿಪೂರ್ಣರಲ್ಲ..!

ಶನಿವಾರ, ಮಾರ್ಚ್ 26, 2011

ಅಪ್ಪ-ಅಮ್ಮ ಮತ್ತು ಮಗ(ಳು)




ಮಗು ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ತನ್ನ ತಾಯಿ-ತಂದೆಯರ ಎದೆಯ ಮೇಲೆ ಇಟ್ಟು ನಡೆದಾಗ ಆಗುವ ಆನಂದ ಮುಂದೆ ತನ್ನ ವಯೋಮಾನದ ದಿನಗಳಲ್ಲಿ ಅದೇ ಕಾಲುಗಳು ತಂದೆ - ತಾಯಿಯರ ಕಡೆಗೆ ವಿರುದ್ಧವಾಗಿ ನಿಂತಾಗ ಹೆತ್ತವರಿಗೆ ತುಂಬ ನೋವಾಗುತ್ತದೆ ಅಲ್ಲವ ಯಾಕೆ?

ಇರಬೇಕು ಆಗ ಈ ಮಗ ಪ್ರಬುದ್ಧಮಾನನಾಗಿ ಬೆಳೆದು ರಾಗ- ದ್ವೇಷ - ಙ್ಞಾನ - ಪ್ರೀತಿಯಿಂದ ತುಂಬಿ ಸಹಿಸಲಾಸಾಧ್ಯವಾದ ಭಾರವಾಗಿರಬೇಕು. ಅಥವಾ ಈ ಮುಗ್ಧ ತಂದೆ ತಾಯಂದಿರುಗಳು ತಮ್ಮ ಜೀವ ಮಾನದ ಅರ್ಧ ದಿನಗಳನ್ನು ಕಳೆದು ಆ ಭಾರವನ್ನು ಸಹಿಸಲು ಸಾಧ್ಯವಾಗದಷ್ಟು ವಿವಿಧ ರೀತಿಯ ಆಸೆ, ನಂಬಿಕೆ, ಪ್ರೀತಿ, ಮಹತ್ವಕಾಂಕ್ಷೆ, ಅಸಹಾಯಕತೆ ಮತ್ತು ದೇಹ ದೌರ್ಬಲ್ಯದಿಂದ ತಮ್ಮ ಬೆಳೆದ ಫೊರನ ಕೇವಲ ದೇಹ ಭಾರವಲ್ಲದೆ ಅವನ ಭಾವನೆಗಳನ್ನು ಸಹ ಸಹಿಸದ ಮಟ್ಟಕ್ಕೆ ಬಂದಿರುತ್ತಾರೆ.

ಈ ಪುಟ್ಟ ಮಗು ಸಹಜ ಹೆಜ್ಜೆಗಳು ಮುಂದೆ ಯಾಕೆ ಸಹಿಸಲಾಸಾಧ್ಯವಾದ ಭಾರವಗುತ್ತವೆ ಎಂಬುದು ಕೇವಲ ಉಪಮೆಯಾಗಿರುವಂತೆಯೇ ನಮಗೆ ನಮ್ಮ ಭಾರತೀಯ ಕುಟುಂಬ ವ್ಯವಸ್ಥೆಯ ಅತಿ ಮಧುರವಾದ ಕಟ್ಟುನಿಟ್ಟಿನ ಬಂಧನವನ್ನೇ ಚಿಂತನೆಗೀಡು ಮಾಡುತ್ತದೆ.

ಈ ಜಗತ್ತಿನ ಯಾವುದೇ ಜೀವ ಸಂಕುಲಗಳಲ್ಲೂ ಈ ರೀತಿಯ ವಿಭಿನ್ನವಾದ ಸಾಮಾಜಿಕ ಸಂಬಂಧದ ನಡಾವಳಿಗಳನ್ನು ನಾವು ಕಾಣಲಾರೆವು.



ಪ್ರತಿ ಮಾನವ ಜೀವಿಯು ತನ್ನ ವಂಶಾಭಿವೃದ್ಧಿಯಲ್ಲಿ ತನ್ನ ಜೀವನ ಸಾರ್ಥಕ್ಯವನ್ನು ಕಂಡುಕೊಳ್ಳುತ್ತದೆ.

ಈ ಮುಂದಿನ ಪೀಳಿಗೆಯು ತನ್ನ ನಂತರದ ಜೀವನದ ತನ್ನ ಪ್ರತಿನಿಧಿಯೇನೂ ಎಂಬಂತೆ ತನ್ನ ರಕ್ತ ಮಾಂಸ, ಭಾವನೆ ಮತ್ತು ತನ್ನ ಸರ್ವಸ್ವವನ್ನೆ ತ್ಯಾಗ ಮಾಡಿ ಪ್ರತಿ ತಂದೆ ತಾಯಿಯಂದಿರುಗಳು ಹೆತ್ತ ದಿನಗಳಿಂದ ಆ ತನ್ನ ವಂಶದ ಕುಡಿ ತನ್ನ ಕಾಲ ಮೇಲೆ ತಾನು ಸ್ವರ್ವ ಸ್ವತಂತ್ರವಾಗಿ ಜೀವಿಸುವವರೆಗೂ ತನಗೆ ಯಾವುದೆ ಹೊರೆಯಲ್ಲ ಎಂಬಂತೆ ಎಷ್ಟೇ ಸಂಖ್ಯೆಯ ಮಕ್ಕಳಿರಲಿ ಸಮಾನವಾದ ಪ್ರೀತಿ - ವಿಶ್ವಾಸ ಆಸೆಯನ್ನು ಇಟ್ಟುಕೊಂಡು ಗಿಡಕ್ಕೆ ಕಾಯಿಗಳು ಎಂದೂ ಭಾರವಾಗಲಾರವು ಎಂಬ ರೀತಿಯಲ್ಲಿ ಪೂರೆಯುತ್ತಾರೆ.

ನನಗೆ ಅನಿಸುತ್ತದೆ ಈ "ಪ್ರೀತಿ" ತನ್ನ ಮಕ್ಕಳಿಗೆ ಮಾತ್ರ ಮೀಸಲಾದ ಅತಿ ಸಾಮಾನ್ಯ ಸರ್ವ ಸಮಾನವಾಗಿ ಪ್ರತಿಯೊಬ್ಬರಲ್ಲೂ ಕಂಡುಬರುವ ಈ ಆರೈಕೆಯ ಮೂಲ ಸೆಲೆ ಎಲ್ಲಿದೆ?

ಆದರೆ! ಈ ರೀತಿಯ ಪ್ರೀತಿಯ ಬೆಲೆಯನ್ನು ಕಡೆಗಣಿಸುವ ದಿನಗಳನ್ನು ಅಲ್ಲಲ್ಲಿ ಕೆಲವರು ಅಥವಾ ನೂರಕ್ಕೆ ತೊಂಬತ್ತೊಂಬತ್ತು ಜನರುಗಳು ತಮ್ಮ ತಂದೆ - ತಾಯಿಗಳ ಮನಸ್ಸಿಗೆ ನೋವಾಗುವ ಹೆಜ್ಜೆಯನ್ನು ಇಡುವ ಕಾಲ ಮುಂದೆ ಯಾಕೆ ಬರುತ್ತದೆ? ಮತ್ತು ಅದು ಎಲ್ಲಿಂದ ಬರುತ್ತದೆ? ಅದು ಆ ದೇವರಿಗೆ ಮಾತ್ರ ಗೊತ್ತೇನೋ!

ತಾನು ಚಿಕ್ಕವನಾಗಿದ್ದಾಗ ಎಲ್ಲ ವಿಷಯಕ್ಕೂ ಅಮ್ಮನೇ ಸಾಕ್ಷಿ ಮತ್ತು ಅವಳೇ ಉತ್ತಮ ಗೈಡ್ ಎಂದು ಪ್ರತಿಯೊಂದು ವಿಷಯದಲ್ಲೂ ಅವಳ ಪಾಲು ಇದೇ ಎಂಬುವಷ್ಟರ ಮಟ್ಟಿಗೆ ಕಳೆದ ದಿನಗಳು ಎಷ್ಟು ಬೇಗ "ನೋ ಷೀ ಇಸ್ ನಾಟ್ ಫಾರ್ ದಿಸ್" ಎಂಬಲ್ಲಿಗೆ ಬಂದುಬಿಟ್ಟಿರುತ್ತದೆ. ಆ ನಮ್ಮ ಅತಿ ಮೆಚ್ಚಿನ "ಮೊದಲ ಸ್ನೇಹಿತೆ" ತೀರ ಹಳತಾಗುತ್ತಾಳೆ. ಎಲ್ಲಿ ಎಲ್ಲವೂ ಅತಿ ಹೇರಳವಾಗಿ ಯಾವುದೇ ಯೋಚನೆಯಿಲ್ಲದೆ ಸೂರೆಗೊಂಡಿರುತ್ತೇವೂ ಅದೇ ಇಂದು ಕವಡೆಕಾಸಿಗೂ ಕಿಮ್ಮತ್ತು ಇಲ್ಲದ ರೀತಿಯಲ್ಲಿ ನಾವುಗಳು ಸವಕಲು ನಾಣ್ಯದ ರೀತಿಯಲ್ಲಿ ಲೆಕ್ಕಕ್ಕಿಲ್ಲದವರನ್ನಾಗಿ ಮಾಡುತ್ತೇವೆ ಯಾಕೇ?

"ಮೈ ಡ್ಯಾಡ್ ಇಸ್ ಸ್ಟ್ರಾಂಗೇಸ್ಟ್" ಎನ್ನುತ್ತಾ ಅಪ್ಪನ ಗಮ್ಮತ್ತನ್ನು ತನ್ನ ಬಾಲ್ಯದಲ್ಲಿ ಸಮಯ ಸಿಕ್ಕಾಗಲೆಲ್ಲಾ ಕನವರಿಸುವವರು ಅದೇಷ್ಟು ಬೇಗ "ಹೀ ಇಸ್ ಒಲ್ಡ್ ಮ್ಯಾನ್!" ಎಂಬಲ್ಲಿಗೆ ತಂದು ನಿಲ್ಲಿಸುವ ಮರ್ಮವಾದರೂ ಯಾವುದು?

ಹೌದು! ನಮ್ಮ ಮಕ್ಕಳೇ ನಮ್ಮ ಮುತ್ತುಗಳು ಅವರೇ ನಮಗೆ ಕೋಟಿ ಸಂಪತ್ತು; ಅವರಿಲ್ಲದೇ ನಾವುಗಳಿಲ್ಲ ಎಂಬ ಮನೋ ನಿರ್ಧಾರ ಕಡೆಗಾಲದಲ್ಲಿ ಎಲ್ಲವನ್ನು ಕಳೆದುಕೊಂಡು ನಿಸ್ಸಾಯಕ ಮನೋಭಾವದಿಂದ ತೀರ ಮುದುಕರಾಗುವ ನಮ್ಮ ನಿಮ್ಮ ಅಪ್ಪ - ಅಮ್ಮಂದಿರುಗಳು ಯಾಕೆ ತೀರ ವಿಭಿನ್ನವಾಗಿ ಯೋಚಿಸಿ ತಮ್ಮ ಜೀವನವನ್ನು ಇನ್ನೂ ಸುಂದರವಾಗಿ ಕಳೆಯಲು ಸಾಧ್ಯವಿಲ್ಲ ಎಂಬಲ್ಲಿಗೆ ಬಂದು ನಿಲ್ಲುತ್ತಾರಲ್ಲಾ ಯಾಕೆ?

ಈ ಪೀಳಿಗೆ ಬರುವ ಮೊದಲು ಇಬ್ಬರೂ ತುಂಬ ಖುಷಿಯಾಗಿ ಸಮರಸದಿಂದ ತಾವಿಬ್ಬರೂ ಜೀವಿಸುವ ದಿನಗಳನ್ನು ಯಾಕೆ ಅಷ್ಟು ವೇಗವಾಗಿ ಎಲ್ಲ ಮುಗಿದು ಹೋಯಿತು ಎಂಬಂತೆ ಜೀವನವನ್ನೇ ಮರೆಯುತ್ತಾರಲ್ಲಾ ಯಾಕೆ!



ಇದೆಲ್ಲಾ ಏನೇ ಯೋಚಿಸಿದರೂ ನಮ್ಮ ನಮ್ಮಲ್ಲಿಯೇ ಅಲಿಖಿತ ಶಾಸನ ನಿಯಮವೆಂಬಂತೆ ನಾವು ನಮ್ಮ ಅಪ್ಪ ಅಮ್ಮರನ್ನು ಆ ರೀತಿಯ ನರಳಾಟದಲ್ಲಿ ನಡೆಸಿಕೊಳ್ಳುತ್ತೇವೆ. ಅದ್ದರಿಂದ ನಮ್ಮ ಹೆತ್ತವರುಗಳು ತಮ್ಮ ಅಗಾಧ ಆಸೆಯೆಂಬ ಕನಸಿನ ಸೌಧವನ್ನು ಮುಂದೇನೂ ಮಾಡಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ತಮ್ಮ ಮುಂದೆಯೆ ಕೆಡವಿಕೊಳ್ಳುತ್ತಾರೆ.

ಆದರೂ ನಮ್ಮ ಈ ಸುಂದರ ಕೌಟಂಬಿಕ ವ್ಯವಸ್ಥೆ ಅಷ್ಟು ದೌರ್ಬಲ್ಯವಾಗಿಲ್ಲ. ಇನ್ನೂ ಕೆಲವರಲ್ಲಿ ಆ ವ್ಯವಸ್ಥೆಯ ಸವಿ, ಸೌಂದರ್ಯದ ಮತ್ತು ಗಟ್ಟಿತನದ ಮಹತ್ವ ತಿಳಿದಿದೆ. ಅದಕ್ಕೆ ಸಮಯಕ್ಕೆ ಸರಿಯಾಗಿ ಮಳೆ ಬೆಳೆಯಾಗಿ ಈ ಪ್ರಕೃತಿ ಇನ್ನೂ ಸುಂದರವಾಗಿ ಅಂತಃಕರಣೆಯಾಗಿ ಪ್ರತಿಯೊಬ್ಬರಿಗೂ ನೆರವಾಗಿರುವುದು.

ಆದರೂ ನನಗೆ ಅನಿಸುತ್ತದೆ ಆ ಸೌಂದರ್ಯದ ಮಹತ್ವವನ್ನೇ ಮರೆಸುವ ಮಟ್ಟಿಗೆ ವೇಗವಾಗಿ ಅಸಂಖ್ಯಾ "ವೃದ್ಧಾಶ್ರಮಗಳು" ಹುಟ್ಟಿಕೊಳ್ಳುತ್ತಿರುವುದು ಯಾವುದರ ಪ್ರತೀಕ? ಕೆಲ ನಿಮಿಷ ನಿಂತು ಪ್ರತಿಯೊಬ್ಬರೂ ಆ ಕಡೆಗೆ ಗಮನ ಹರಿಸಿ ಯೋಚಿಸುವುದು ಉತ್ತಮವಲ್ಲವಾ?

ದಯವಿಟ್ಟು ಯೋಚಿಸಿ.!

ಮಂಗಳವಾರ, ಮಾರ್ಚ್ 22, 2011

ಸ್ನೇಹದ ಕಡಲಲ್ಲಿ.. ನೆನಪಿನ ದೋಣಿಯಲ್ಲಿ..

ಬಹು ದಿನಗಳ ಮೇಲೆ! ವರ್ಷಗಳೇ ಕಳೆದವು ಅನಿಸುತ್ತದೆ. ಮತ್ತೇ ಆ ದಿನಗಳ ಪುನರ್ ಮಿಲನದ ಸುಸಮಯ ಮೊನ್ನೆ ಹೊದಗಿತ್ತು. ಕಾಲೇಜು ದಿನಗಳ ಅದೇ ಒಂದು ಹರಟೆ ಹರಟೆ ಕಾಡು ಹರಟೆಯನ್ನು ಪುನಃ ಮಾಡಿದೆವು ಅನಿಸುತ್ತಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದ ಪಯಣದಲ್ಲಿ ತಮ್ಮ ಕಾಲೇಜು ದಿನಗಳನ್ನು ಮುಗಿಸಿಕೊಂಡು ತಮ್ಮ ತಮ್ಮ ದಾರಿಯನ್ನು ಕಂಡುಕೊಂಡ ನಂತರ ಒಟ್ಟಿಗೆ ಸೇರಿರುವ ಸಮಯ ಇದಾಗಿತ್ತು ಅನಿಸುತ್ತಿದೆ!

ಅದು ನಮ್ಮ ಸ್ನೇಹಿತನ ಮದುವೆಯಲ್ಲಿ ಪುನಃ ನಮ್ಮ ಎಲ್ಲಾ ಹಳೆಯ ಗೆಳೆಯರ ಬೇಟಿ.

ಅದು ಎಷ್ಟರ ಮಟ್ಟಿಗೆ ಪರಸ್ಪರ ಅಪರೂಪದವರಾಗಿದ್ದೇವೆ ಅಂದರೇ ನಾವುಗಳೆಲ್ಲ ಇರುವುದು ಬೆಂಗಳೂರಿನಲ್ಲಿಯೇ ಅದರೇ ಒಬ್ಬರೂಬ್ಬರ ಮುಖತಃ ಬೇಟಿಯೇ ಇಲ್ಲ. ಎಲ್ಲರೂ ತಮ್ಮ ತಮ್ಮ ಬದುಕಿನ ಕಾಯಕದಲ್ಲಿ ನಿರತರಾಗಿದ್ದಾರೆ. ಹಾಗೆಯೇ ಒಬ್ಬರಿದ್ದ ಜೀವನ ಜೋಡಿಯಾಗಿದೆ ಮತ್ತು ಹೊಸ ಜೀವದ ಆಗಮನವಾಗಿದೆ. ಸಂಸಾರ ಅಂದರೇ ಹೀಗೆ ಇರಬೇಕು ಸ್ವಾಮಿ ಎಂಬ ರೀತಿಯಲ್ಲಿ "ಯಾವುದಕ್ಕೂ ಸಮಯ ಇಲ್ಲ ಕಣೋ ತಿಪ್ಪಾ!" ಎಂಬ ಉತ್ತರ.

ತಮ್ಮ ಮನೆಯಾಯಿತು ತಾವುಗಳು ಕೆಲಸ ಮಾಡುವ ಕಂಪನಿಯಾಯಿತು.. ಅಲ್ಲಿಯ ಕೆಲಸ ವಾರಾಂತ್ಯದಲ್ಲಿ ಮನೆಯ ಮುಖ್ಯ ಕೆಲಸಗಳನ್ನು ಮುಗಿಸಿದರೇ ಸಾಕಾಪ್ಪ ಎಂಬ ಹಂಬಲ.. ಹೀಗೆ ತಮ್ಮ ತಮ್ಮಲ್ಲಿಯೇ ಬೇರೆ ಯಾವುದಕ್ಕೂ ಜಾಗವೇ ಇಲ್ಲದಂತಹ ಭಾವನೆ.

ಭಾನುವಾರದ ರಜೆಯಾದ್ದರಿಂದ ಅಂದುಕೊಂಡ ಕೆಲವರುಗಳು ಸ್ನೇಹಿತನ ಮದುವೆಗೆ ಬಂದಿದ್ದರು. ಅದರೂ ನಿರೀಕ್ಷೆ ಮಾಡಿದಷ್ಟು ಮಂದಿ ಬಂದಿರಲಿಲ್ಲ. ಯಾಕೆಂದರೇ ಮದುವೆ ಜರುಗಿದ್ದು ಬೆಂಗಳೂರಿನಿಂದ ೨೬೦ ಕಿ.ಮಿ ದೂರದಲ್ಲಿ. ಬೆಂಗಳೂರಿನಿಂದ ಹಲವಾರು ಬಸ್ಸುಗಳನ್ನು ಬದಲಾಯಿಸಿ ಅಷ್ಟೂ ದೂರ ಪ್ರಯಾಣ ಮಾಡಿ ಅದು ತಮ್ಮ ಸಂಸಾರವನ್ನು ಬಿಟ್ಟು ಬರುವಂತಹ ಹಂಬಲವಿರುವುದು ಕಷ್ಟವೇ ಸರಿ! ಸಿಗುವ ಎರಡು ರಜಾ ದಿನಗಳನ್ನು ಈ ಸುಡು ಬಿಸಿಲಿನಲ್ಲಿ ಪ್ರಯಾಣ ಮಾಡುತ್ತಾ ಕೂಲ್ಲುವುದು ಇನ್ನೂ ಕಷ್ಟ!


ಅವರುಗಳಿಗೂ ಎಲ್ಲಾ ಹಳೆಯ ಗೆಳೆಯರನ್ನು ಇಂಥ ಸಮಯದಲ್ಲಿ ಮಾತ್ರ ಬೇಟಿ ಮಾಡಬಹುದು ಎಂಬುದು ಗೊತ್ತು. ಅದರೇ ಏನೂ ಮಾಡಲು ಸಾಧ್ಯವಿಲ್ಲ. ಅವರುಗಳಿಗೆ ಅವರದೇಯಾದ ತೊಂದರೆಗಳು ಮತ್ತು ಸಕಾರಣಗಳು.

ಜೀವನದಲ್ಲಿ ಒಮ್ಮೆ ಮಾತ್ರ ಘಟಿಸುವ ನಮ್ಮ ಸ್ನೇಹಿತರ ಮದುವೆ ಎಂಬ ಒಂದು ಮುಖ್ಯ ಘಟನೆಗೆ ಎಲ್ಲಾ ಸ್ನೇಹಿತರುಗಳು ಹಾಜರಿರಬೇಕು ಎಂಬುದು ನನ್ನ ಆಸೆ. ನಾವುಗಳು ಇಂಥ ನಮ್ಮ ಜೀವನದ ಹಾದಿಯಲ್ಲಿ ಎಲ್ಲರ ಎಲ್ಲಾ ಸಂಭ್ರಮಗಳಲ್ಲೂ ಪಾಲ್ಗೂಳ್ಳಲೂ ಸಾಧ್ಯವಿಲ್ಲ.




ಅದೇ ಕಕ್ಕುಲಾತಿಯ ಕಾಲು ಎಳೆಯುವ, ಅವನ ಬಗ್ಗೆ, ಅವನ ಮಾತು ಶೈಲಿಯ ಬಗ್ಗೆ, ಅವನ ಗುಣಗಳ ಬಗ್ಗೆ, ಅವನು ಮಾಡಿದ ಅವಂತಾರಗಳ ಬಗ್ಗೆ, ಅವನು ಮಾಡಿದ ತಮಾಷೆಯ ಬಗ್ಗೆ, ಅವನು ಪ್ರೀತಿಸಿದ ಹಳೆಯ ಪ್ರೇಯಸಿಯ ಬಗ್ಗೆ, ಅವನು ಕಂಡ ಅವಮಾನದ ಬಗ್ಗೆ, ಅವನು ಅನುಭವಿಸಿದ ಅಂದಿನ ಸಂತೋಷದ ದಿನಗಳ ಬಗ್ಗೆ ಇತ್ಯಾದಿ ಇತ್ಯಾದಿ ಬಹುಮುಖ್ಯ ನೆನಪಿನಲ್ಲಿ ಇನ್ನೂ ಮನೆ ಮಾಡಿಕೊಂಡ ಕೆಲವೇ ಕೆಲವು ಉತ್ತಮ ಚಿತ್ರಣಗಳ ಜಾತ್ರೆಯನ್ನು ಕಣ್ಣ ಮುಂದೆ ತಂದುಕೊಂಡು ಅಂದಿನ ದಿನಗಳನ್ನು ಮೆಲಕು ಹಾಕಿಕೊಂಡೆವು. ರೀಯಲಿ! ಅಂದಿನ ಆ ದಿನಗಳು ಸಿರಿವಂತ ದಿನಗಳೇ ಸರಿ ಎಂಬುದು ಮೊನ್ನೆ ಸೇರಿದ ನನ್ನ ಎಲ್ಲಾ ಗೆಳೆಯರ ಮನಸ್ಸಿನಿಂದ ಬಂದಂತಹ ಹೃದಯತುಂಬಿದ ಮಾತಾಗಿತ್ತು.

ಇಂದು ನಮ್ಮಲ್ಲಿ ಎಲ್ಲಾ ಇದೆ. ನಾವುಗಳು ನಮ್ಮ ಹೆತ್ತವರ ಮುಂದೆ ಅವರುಗಳು ಕೊಡುವ ಪಾಕೇಟ್ ಮನಿಗೆ ಕಾಯುವ ಕಾರಣವಿಲ್ಲ. ಓಡಾಡಲೂ ಬೈಕ್, ಕಾರುಗಳು ಇವೆ, ಸುತ್ತಾಡಲೂ ಸಂಗಾತಿ ಇದ್ದಾಳೆ, ಎಲ್ಲಾದರೂ ಹೋಗುವಷ್ಟು ಖರ್ಚು ಮಾಡುವಷ್ಟು ಹಣ ನಮ್ಮ ಕೈಯಲ್ಲಿಯೇ ಇದೆ. ಅದರೂ ಯಾಕೋ ನಮ್ಮ ಬೆಂಗಳೂರಿನಲ್ಲಿ ನಾವುಗಳು ಒಂಟಿ ಮತ್ತು ಸಂತೋಷ ಹೀನರುಗಳು ಅನಿಸುತ್ತಿದೆ ಎಂಬ ಭಾವನೆ ಎಲ್ಲರದಾಗಿತ್ತು.

ನಾಲ್ಕು ವರ್ಷಗಳಲ್ಲಿ ನಾವುಗಳು ಅನುಭವಿಸಿದ ಕಾಲೇಜು ದಿನಗಳು ಎಂದು ಮತ್ತೇ ಸಿಗದಂತಹವುಗಳು ಎಂಬುದು ಎಲ್ಲರ ಅಭಿಮತ. ಅಲ್ಲಿ ಇದ್ದ ನಮ್ಮ ಕಷ್ಟ ನಷ್ಟಗಳ ಜೋತೆಯಲ್ಲಿಯೇ ನಾವುಗಳು ತುಂಬ ಸಂತೋಷವಾಗಿದ್ದೇವು. ಯಾಕೆ ಇಂದು ಎಲ್ಲಾ ಇದ್ದು ನಾವುಗಳು ಈಗ ಈ ರೀತಿಯಲ್ಲಿ ಮಾತನಾಡುತ್ತಾ ಪರಸ್ಪರ ನೋವು ನಲಿವುಗಳನ್ನು ವಿನಿಮಯ ಮಾಡಿಕೊಳ್ಳಲು, ಚರ್ಚಿಸಲು ಸಮಯವೇ ಸಿಗುತ್ತಿಲ್ಲ.

ನಮ್ಮನ್ನೇ ನಾವುಗಳು ಜೋಕು ಮಾಡಿಕೊಂಡು, ನಮ್ಮ ನಮ್ಮಲ್ಲಿಯೇ ತಮಾಷೆ ಮಾಡಿಕೊಂಡು, ಅವನ ಅವಳ ಬಗ್ಗೆ ಮಾತನ್ನಾಡಿಕೊಂಡು, ಅವರಿರವರನ್ನು ಹೊಗಳಿಕೊಂಡಿರುವ ಮಾತುಗಳನ್ನು ಮನದುಂಬಿ ಮಾತನಾಡಿ ವರ್ಷಗಳೇ ಆಗಿ ಹೋದವಲ್ಲಾ! ಎಷ್ಟು ಬೇಗ ನಾವುಗಳು ಗಂಭೀರ ಸ್ವಭಾವದವರುಗಳು ಆಗಿ ಬಿಟ್ಟಿವೀ! ಕೆಲಸ, ಹಣ, ಮನೆಯ ಜವಾಬ್ದಾರಿ.. ಹೀಗೆ ಈ ವಿಷಯಗಳೇ ಇಂದು ನಮ್ಮ ಬದುಕನ್ನು ಅವರಿಸಿ ಬಿಟ್ಟಿವೆ ಎಂಬ ನಿಟ್ಟುಸಿರು ನಮ್ಮದಾಗಿತ್ತು.

ಇರುವುದನ್ನು ಬಿಟ್ಟು ಇಲ್ಲದೆಡೆಗೆ ಸಾಗುವುದೇ ಜೀವನವಲ್ಲವೇ!

ಅಂದು ಸೇರಿದ ಎಲ್ಲರ ಮಾತಿನ ದಾಟಿಯೇ ಬೇರೆ. ಅಲ್ಲಿ ಪ್ರತಿಯೊಬ್ಬರೂ ಮುಂದೆ ಎಲ್ಲಿ ಯಾವಾಗ ಸೈಟ್ ಕೊಂಡುಕೊಳ್ಳಬೇಕು, ಯಾವಾಗ ಯಾವ ರೀತಿಯಲಿ ಮನೆಯನ್ನು ಕಟ್ಟಿಸಬೇಕು ಇತ್ಯಾದಿ. ಹೊಸ ಬದುಕಿನ ಕಡೆಗೆ ಹೊಸ ನೋಟ ಅವರದಾಗಿತ್ತು.

ಅದೇ ಕೆಲವಾರು ವರ್ಷಗಳ ಕೆಳಗೆ ಒಂದೇ ಒಂದು ಯೋಚನೆಯೆಂದರೇ ಹೇಗೆ ಮಜಾ ಮಾಡಬೇಕು, ಹೇಗೆ ಉತ್ತಮ ಸ್ಕೋರ್ ಮಾಡಬೇಕು, ಹೇಗೆ ಒಳ್ಳೆ ಕಂಪನಿಗೆ ಎಂಟ್ರೀ ಕೊಡಬೇಕು ಎಂಬುದಾಗಿತ್ತು. ಇಂದು ಎಲ್ಲಾರೂ ಹೆಚ್ಚು ಜವಾಬ್ದಾರಿಯ ಮನುಷ್ಯರಾಗಿದ್ದಾರೆ! ಏನಾಶ್ಚರ್ಯವಲ್ಲವಾ!

ಮದುವೆಯಾಗಿರುವರು ಮತ್ತು ಮಕ್ಕಳನ್ನು ಪಡೆದೆವರಂತು ನಮ್ಮ ಜೀವನದ ಒಂದು ಘಟ್ಟವನ್ನು ತಲುಪಿಬಿಟ್ಟಿದ್ದೇವಪ್ಪಾ! ಎಂಬ ರೀತಿಯಲ್ಲಿ ಇನ್ನೂ ಮದುವೆಯನ್ನು ಮಾಡಿಕೊಳ್ಳಲೂ ತವಕಿಸುತ್ತಿರುವ ಗೆಳೆಯರನ್ನು ಕಂಡು "ಎಂದು ನೀ ಊಟ ಹಾಕಿಸುತ್ತಿಯಪ್ಪ?" ಎಂಬ ಪ್ರಶ್ನೆ.

ನನಗೆ ಎನಿಸುತ್ತದೆ. ಸ್ನೇಹ ಲೋಕದಲ್ಲಿ ಇರುವಷ್ಟು ಬಿಂದಾಸ್ ಮಾತುಕತೆಯನ್ನು ಬೇರೆ ಎಲ್ಲೂ ಊಹಿಸಲೂ ಸಾಧ್ಯವಿಲ್ಲ. ಅಲ್ಲಿ ಅವನು ಎಂಥ ಹುದ್ದೆಯಲ್ಲಿಯೇ ಇರಲಿ, ಎಷ್ಟೇ ಸಂಪಾದಿಸುತ್ತಿರಲಿ, ಎಂಥ ಮನೆಯಲ್ಲಿಯೇ ವಾಸ ಮಾಡುತ್ತಿರಲಿ, ಹೇಗೆ ಇರಲಿ ಅವರುಗಳು ಪರಸ್ಪರ ಹಿಂದೆ ಕಾಲೇಜು ದಿನಗಳಲ್ಲಿ ಮೊದಲ ಸಲ ಬೇಟಿಯಾಗಿ ಸ್ನೇಹದ ಅಂಕುರವೆರ್ಪಟ್ಟಾಗ ಇದ್ದ ರೀತಿಯಲ್ಲಿಯೇ ನೋಡುತ್ತಾರೆ. "ಹೋಗಲೇ! ಬಾರಲೇ!" ಹೀಗೆ ಏಕವಚನದಲ್ಲಿ ನನಗೆ ಅನಿಸಿದಂತೆ ಗೆಳೆಯ/ಗೆಳತಿಯರನ್ನು ಯಾವುದೇ ವಯೋಮಾನದಲ್ಲೂ ಸಮಾನವಾಗಿ ನಡೆಸಿಕೊಳ್ಳುವರು ಸ್ನೇಹಿತರುಗಳು ಮಾತ್ರ. ಅಲ್ಲಿ ಅವರಿಗೆ ಅವನೂ ಏನಾಗಿದ್ದರೂ ಇನ್ನೂ ಕಾಲೇಜು ದಿನಗಳ ಗೆಳೆಯ/ಗೆಳತಿಯರಂತೆಯೇ ಕಾಣುತ್ತಾರೆ. ವಯಸ್ಸಿಗೆ, ಅಂತಸ್ತಿಗೆ ಯಾವುದಕ್ಕೂ ಅಲ್ಲಿ ಯಾವ ಸ್ಥಾನವೆಂಬುದು ಇಲ್ಲ.

ಅದಕ್ಕೆ ನಾನು ಹೇಳುತ್ತೇನೆ ಸ್ನೇಹ ಜಿಂದಾಬಾದ್!

ಪ್ರೀತಿ ಶಾಶ್ವತವಾಗಿರುವುದು ಸ್ನೇಹದಲ್ಲಿ ಅಲ್ಲಿ ಯಾರಿಂದಲೂ ಯಾವುದೇ ನಿರೀಕ್ಷೆಯು ಹುಟ್ಟುವುದಿಲ್ಲ. ಕೇವಲ ಅಕ್ಕರೆಯ ಪ್ರೀತಿ, ಅಸರೆ ಮತ್ತು ಅಚ್ಚರಿಯ ನೋಟ ಅಷ್ಟೇ!!

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ ಯಾವಾಗಲೂ ಪಯಣಿಸುವವನೇ ಪುಣ್ಯವಂತಹ!

ಮಂಗಳವಾರ, ಮಾರ್ಚ್ 15, 2011

ಒಂದು ಸುಂದರ ಅನುಬಂಧ





ಮನುಷ್ಯ ತನ್ನ ತನ್ನಲ್ಲಿಯೇ ಒಂದು ವ್ಯವಸ್ಥಿತವಾದ ಅನುಬಂಧಗಳನ್ನು ಸೃಷ್ಟಿ ಮಾಡಿಕೊಂಡು ತಾನು ಗಟ್ಟಿಯಾಗಿ ಬದುಕಲು ತವಕಿಸುತ್ತಾನೆ. ತನ್ನ ಮತ್ತು ತನ್ನ ಜೊತೆಯವರೊಡನೆ ನಲಿ ನಲಿಯುತ ಬಾಳಲು ಇಚ್ಛೆಪಡುತ್ತಾನೆ. ಒಂಟಿ ಸಲಗದ ರೀತಿಯಲ್ಲಿ ಎಂದೂ ಸಹ ಬಾಳಲು ಸಾಧ್ಯವಿಲ್ಲ. ಯಾಕೆಂದರೇ ನಾವುಗಳು ನಮ್ಮ ಚಿಕ್ಕಂದಿನ ದಿನಗಳಲ್ಲಿ ಓದಿ ತಿಳಿದಂತೆ, ಸಮಾಜ ಶಾಸ್ತ್ರದಲ್ಲಿ ಹೇಳಿರುವಂತೆ ಮನುಷ್ಯ ಸಂಘ ಜೀವಿ.

ತಾನು ಈ ಭೂಮಿಯ ಮೇಲೆ ಹುಟ್ಟಿದಂದಿನ ದಿನದಿಂದ ಯಾವ ರೀತಿಯಲ್ಲಾದರೂ ತನ್ನ ಅಸ್ತಿತ್ವವನ್ನು ಇಲ್ಲಿ ಒತ್ತಲು ತವಕಿಸುತ್ತಾನೆ. ತನ್ನ ನಂತರದ ತನ್ನತನವನ್ನು ನಿರಂತರವಾಗಿ ಮುಂದುವರಿಯಬೇಕು ಎಂಬ ಹಂಬಲ ಹೆಚ್ಚು. ಇದು ಕೇವಲ ಮನುಷ್ಯ ಜನಾಂಗಕ್ಕೆ ಮಾತ್ರ ಸೀಮಿತವಾದ ಪ್ರಕ್ರಿಯೆಯಲ್ಲ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯು ಸಹ ತನ್ನ ನಂತರದ ತನ್ನ ನೆಚ್ಚಿನ ವಾರಸ್ದಾರನನ್ನು ಪ್ರತಿಷ್ಠಾಪಿಸಲು ತವಕಿಸುತ್ತದೆ. ಅದೇ ನಿಸರ್ಗ ನಿಯಮವಲ್ಲವೇ.


ಅದಕ್ಕೆ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಅಷ್ಟೊಂದು ಗಟ್ಟಿಯಾದ ನಡವಾಳಿಗಳು, ಪದ್ಧತಿಗಳು ಇವೆ. ಗಂಡು ಹೆಣ್ಣು ಸಂಗಾತಿಯಾಗಿ ತನ್ನ ಮುಂದಿನ ತನ್ನದೇ ತದ್ರೂಪದ, ತಮ್ಮಿಬ್ಬರ ಗುಣಗಳ ಮೇಳವನ್ನು ತನ್ನ ಮಕ್ಕಳಲ್ಲಿ ನೋಡಲು ಕಾತುರರಾಗುತ್ತಾರೆ. ಈ ಪ್ರಪಂಚದಲ್ಲಿ ಯಾವುದು ಶಾಶ್ವತವಾದುದಲ್ಲಾ. ಆದರೆ ಪ್ರತಿಯೊಬ್ಬರೂ ತನ್ನ ನಂತರ ತಾವುಗಳು ಶಾಶ್ವತವಾಗಿಯೇ ಇರುವೆವು ಎಂಬ ರೀತಿಯಲ್ಲಿ ತಮ್ಮ ಮಕ್ಕಳು ಮರಿಯನ್ನು ಕಾಣುತ್ತಾ ಅವರುಗಳನ್ನು ಬೆಳೆಸುತ್ತಾ. ತಮ್ಮಗಳ ಜೀವನದ ಅಂತ್ಯವಿಲ್ಲವೇನೂ ಎಂಬ ರೀತಿಯಲ್ಲಿ ಅವರುಗಳಿಗಾಗಿ ತಮ್ಮ ಜೀವನವನ್ನೇ ಮೂಡಿಪಾಗಿ ಇಟ್ಟು ತಮ್ಮ ಕಿರಿಯರ ಸುಖ, ಸಂತೋಷದಲ್ಲಿ, ಏಳ್ಗೆಯಲ್ಲಿ ತಮ್ಮಗಳ ಆನಂದವನ್ನು ಕಾಣುತ್ತಾರೆ.

ಇದಕ್ಕೆ ಇರಬೇಕು ವಯೋಸಹಜ ನಡವಳಿಗಳು ಮನುಷ್ಯನಲ್ಲಿ ಯಾವ ಯಾವ ಕಾಲಕ್ಕೆ ಏನು ಏನೂ ಆಗಬೇಕೋ, ಅದು ಒಂದು ಚಕ್ರದ ರೀತಿಯಲ್ಲಿ ನಿರಂತರವಾಗಿ ನಡೆಯುತ್ತದೆ. ನಿಸರ್ಗವೂ ಸಹ ತನ್ನ ಚಮತ್ಕಾರವನ್ನು ಅದಕ್ಕೆ ಪೂರಕವಾಗಿ ತೋರಿಸುತ್ತಲೇ ಇರುತ್ತದೆ.

ಸರಿಯಾದ ವಯಸ್ಸಿಗೆ ಶಿಕ್ಷಣ, ಮದುವೆ, ಸಂಸಾರ, ವೃದ್ಧಾಪ್ಯ ಇತ್ಯಾದಿ ವಿವಿಧ ರೀತಿಯ ಜೀವನದ ಹಂತಗಳನ್ನು ಪ್ರತಿಯೊಬ್ಬ ಮನುಷ್ಯನು ದಾಟಲೇ ಬೇಕು. ಆಗಲೇ ನಾವುಗಳು ಆ ವ್ಯಕ್ತಿಯನ್ನು ಪರಿಪೂರ್ಣನೆಂದು ಕರೆಯಬಹುದು. ವಿವಿಧ ಘಟ್ಟಗಳ ಈ ಜೀವನದ ನಿರ್ವಹಣೆ ನಿಜವಾಗಿಯೂ ಅತಿ ಆಶ್ಚರ್ಯಕರ ರೀತಿಯಲ್ಲಿ ತಮ್ಮ ತಮ್ಮಲ್ಲಿಯೇ ಘಟಿಸುತ್ತಿರುತ್ತದೆ. ಅಲ್ಲಿ ಕಷ್ಟವಿದೆ, ಸುಖವಿದೆ, ನೋವಿದೆ, ನಲಿವಿದೆ, ಅವಮಾನಗಳಿವೆ, ಪರಸ್ಪರರ ಪ್ರೀತಿಯ ದಟ್ಟತೆಯಿದೆ.

ಹೀಗೆ ತಾನು ತನ್ನ ಒಂದು ಜೀವಮಾನದ ಈ ಒಂದು ಪರಿಯನ್ನು ತಪ್ಪದೇ ಅನುಭವಿಸಲೇ ಬೇಕು. ತನ್ನ ವಯಸ್ಸು ಬೆಳೆದಂತೆ, ತನ್ನ ಅನುಭವ ಬೆಳೆದಂತೆ ವಿವಿಧ ರೀತಿಯ ಜವಾಬ್ದಾರಿಗಳನ್ನು ತಾನು ಹೊರಲೇ ಬೇಕು. ತಾನು ಬದುಕಬೇಕು ತನ್ನನ್ನು ಅವಲಂಬಿಸಿರುವ ತನ್ನ ಜೊತೆಗಾರರನ್ನು ಸಾಕಲೇಬೇಕು. ಅದೇ ಅವನ/ಳ ಕಾಯಕ. ಎಷ್ಟೊಂದು ರೀತಿಯ ಕಾರ್ಯಗಳು ಪ್ರತಿಯೊಬ್ಬರೂ ಮಾಡುತ್ತಾರೆ ಅದು ಅವರುಗಳ ಗಮನಕ್ಕೆ ಬರದ ರೀತಿಯಲ್ಲಿ. ಅದೇ ನಮ್ಮ ಜೀವನವಲ್ಲವೇ?

ಪ್ರತಿಯೊಂದು ಗಂಡು ಹೆಣ್ಣನ್ನು ಅಸರೆಯಾಗಿ ಪಡೆಯುತ್ತಾನೆ. ಹೆಣ್ಣು ಗಂಡಿನ ಅಸರೆಯನ್ನು ಪಡೆಯುತ್ತಾಳೆ. ಇದು ಎಷ್ಟೊಂದು ಸುಂದರ ಕಲ್ಪನೆಯಲ್ಲವ. ತನ್ನ ಜೀವಿತಾವದಿಯವರೆಗೆ ತನ್ನವಳೆ/ನೆಯಾದ ಒಬ್ಬ ಸಂಗಾತಿಯನ್ನು ಆರಿಸಿಕೊಳ್ಳಲೇ ಬೇಕಾಗುತ್ತದೆ. ಅದರ ಅವಶ್ಯಕತೆ ಏನೇ ಇರಲಿ. ಈ ಒಂದು ವ್ಯವಸ್ಥೆಯಿಂದ ಒಬ್ಬರಿಗೂಬ್ಬರೂ ಸಹಕರಿಸಿ ಬಾಳುವ ಒಂದು ಸಂಬಂಧ ಪ್ರತಿಯೊಂದು ಜೀವಿಯಲ್ಲಿ ಸಾಮಾನ್ಯವಾಗಿ ಘಟಿಸುವ ನಡಾವಳಿ. ತನ್ನ ತನ್ನ ಯೋಚನೆ, ಆಲೋಚನೆಯನ್ನು, ನೋವು, ನಲಿವುಗಳನ್ನು ತಾನೇ ಇಟ್ಟುಕೊಂಡರೇ ಯಾವ ರೀತಿಯ ಪರಿಣಾಮವಾಗುವುದು ಎಂಬುದನ್ನು ಯೋಚಿಸಲೂ ಸಾಧ್ಯವಿಲ್ಲ. ಅದ್ದರಿಂದಲೇ ಯಾರಿಗೇ ಆಗಲಿ ತನಗಾಗಿ ತನ್ನ ಇಷ್ಟ ಕಷ್ಟವನ್ನು ಸಹಿಸುವ ಒಬ್ಬ ಜೊತೆಗಾರ/ತಿ ಬೇಕೆ ಬೇಕು.

ನನಗೆ ಅನಿಸುತ್ತದೆ ಪ್ರತಿಯೂಬ್ಬರಿಗೂ ಜೀವನದಲ್ಲಿ ಅತಿ ಹೆಚ್ಚು ಸಂತೋಷವಾಗುವುದು ಆ ಒಂದು ದಿನ ಮತ್ತು ಆ ಒಂದು ಮೊಹರ್ತ. ತನ್ನನ್ನು ವರಿಸಿ ತನ್ನವಳು/ನಾಗಿ ಜೀವನ ಪರ್ಯಾಂತ ನಾನು ನಿನಗೆ ಅಸರೆ - ನೀನು ನನಗೆ ಆಸರೆ ಎಂದು ಸಪ್ತಪದಿ ತುಳಿಯುವ ಗಳಿಗೆ. ಅಂದು ಆ ಜೋಡಿ ಜೀವಮಾನದ ಅತಿ ಹೆಚ್ಚು ಸಂತೋಷ ಮತ್ತು ಆನಂದವನ್ನು ಅನುಭವಿಸುವ ದಿನವಾಗಿರುತ್ತದೆ ಅಂದು.

ಹಾಗೆಯೇ ತನ್ನ ಹೆತ್ತವರಿಂದ ಸ್ವಲ್ಪ ಸ್ವಲ್ಪ ಅವಲಂಬನೆಯನ್ನು ಬಿಡುತ್ತಾ ಬಿಡುತ್ತಾ ತಾವೆ ತನ್ನ ಜೋಡಿಯೊಂದಿಗೆ ಕಲ್ಪನೆಯ ಬದುಕಿನ ಆರಮನೆಯನ್ನು ಕಟ್ಟಿಕೊಳ್ಳುತ್ತಾ, ತಮ್ಮಿಬ್ಬರ ಬೆಳವಣಿಗೆಯನ್ನು ಕಾಣುತ್ತಾ ತಮ್ಮ ಬಾಳಿನ ಏಳ್ಗೆಯನ್ನು ಕಾಣುವ ಒಂದು ಸುಂದರ ಭಾಂದವ್ಯ ಇದಾಗಿದೆ.

ಹೀಗೆ ಸಾಗುತ್ತಾ ಸಾಗುತ್ತಾ ತಾವುಗಳು ತಮ್ಮ ಸಂತತಿಯನ್ನು ಮುಂದುವರಿಸಲೇ ಎಂಬಂತೆ ತಮಗಾಗಿ ಮಕ್ಕಳನ್ನು ಪಡೆಯಲು ತಯಾರಾಗುವವರು. ಪ್ರತಿಯೊಂದು ಜೀವಿ ಯೋಚಿಸುವ ದಾಟಿಯಲ್ಲಿಯೇ ಮನುಷ್ಯನು ತನ್ನ ನಂತರದ ತನ್ನ ಕುಟುಂಬದ ಮುಂದುವರಿಕೆಗೆ ಎಂಬಂತೆ ತನ್ನಂತಿರುವ ತನಗೆ ಬೇಕಾದ ವ್ಯಕ್ತಿಯೊಬ್ಬನ ಹುಟ್ಟು ಇದಾಗಿದೆ. ಯಾವುದೇ ದಂಪತಿಗಳಿಗೆ ಅತಿ ಹೆಚ್ಚು ಸಂತೋಷ ಕೊಡುವ ಸಮಯ ಎಂದರೇ ತಮಗೆ ಮೊದಲ ಮಗು ಹುಟ್ಟಿದ ಗಳಿಗೆ. ತಮ್ಮದೇ ರೂಪ, ಬಣ್ಣ, ಗುಣ, ಚಹರೆಯನ್ನು ಹೊಂದಿರುವ ಮತ್ತೊಂದು ಜೀವದ ಸೃಷ್ಟಿ ನಿಜವಾಗಿಯೂ ಅಚ್ಚರಿಯನ್ನುಂಟು ಮಾಡುವ ಗಳಿಗೆ ಅಲ್ಲವಾ? ಅಲ್ಲಿಯೇ ಆ ಕ್ಷಣವೇ ತಮ್ಮ ಜೀವನ ಸಾರ್ಥಕವಾಯಿತು ಎಂದು ಬೀಗುವ ಗಳಿಗೆ ಅದಾಗಿದೆ. ಅಲ್ಲಿ ಹುಟ್ಟುವ ಮಮತೆ ಆ ಸಮಯದಲ್ಲಿಯೇ ಜೀವನ ಚಕ್ರದಲ್ಲಿಯ ಒಂದು ಹಂತವನ್ನೇ ಹಿಂತಿರುಗಿಸಿ ಒಮ್ಮೆ ನೋಡುವಂತಾಗುತ್ತದೆ.

ತಾನು ತನ್ನ ಹೆತ್ತವರಿಗೆ ಸಿಕ್ಕಿದ ಕ್ಷಣ ಹೇಗಿತ್ತು ಎಂದು? ತಾನು ಹೀಗೆ ಆಡಿರಬಹುದಾ? ಹೀಗೆ ಮಲಗಿರಬಹುದಾ? ಹೀಗೆ ಅತ್ತಿರಬಹುದಾ?.. ತನ್ನ ಹೆತ್ತವರು ನನ್ನನ್ನು ಕಂಡಾಗ ಹೀಗೆ ಆನಂದಿಸಿರಬಹುದಾ.. ಹೀಗೆ ಹತ್ತು ಹಲವು ನೆನಪುಗಳ ಸರಮಾಲೆಯನ್ನೇ ಅವನು/ಳು ಕಾಣಬಹುದಾಗಿದೆ. ತಮ್ಮ ತಮ್ಮಲ್ಲಿ ಹುಟ್ಟುವ ಆ ಒಂದು ಮಮತೆಯ ದೇವರು ಎಂದಿಗೂ ಮೀಗಿಲೂ. ತನ್ನ ಕೂಸಿಗಾಗಿ ಏನೂ ಮಾಡಲು ಸಿದ್ಧವಾಗುವಂತಹ ದೈರ್ಯ ಆ ಕ್ಷಣಕ್ಕೆ ಪ್ರತಿಯೊಬ್ಬ ಮಾತ ಪಿತೃಗಳಿಗೆ ಬರುತ್ತದೆ.

ಮಗು ಹುಟ್ಟಿದನಂತರ ಅದರ ಜೋತೆಯಲ್ಲಿ ಅವರುಗಳು ಕಳೆಯುವ ಎಲ್ಲ ಕ್ಷಣಗಳು ಒಂದಷ್ಟು ದಿನಗಳವರೆಗೆ ಎಲ್ಲಿಂದಲೂ ಯಾವರೀತಿಯಲ್ಲೂ ಯಾರಿಂದಲೂ ಕೊಡಲಾಗದಂತಹ ಮಹತ್ವದ ಶ್ರೀಮಂತವಾದ ಚಿನ್ನದ ಗಳಿಗೆಗಳು. ಅಲ್ಲಿ ತಂದೆ ತಾಯಿ ಇಬ್ಬರೂ ತಮ್ಮ ಬಾಲ್ಯದ ದಿನಗಳನ್ನು ತನ್ನ ಮುಂದಿರುವ ಕಂದನ ಕಣ್ಣಿನಲ್ಲಿ ಪುನರ್ ಮಿಲನ ಮಾಡಿಕೊಳ್ಳುತ್ತಾರೆ.

ತಾವು ಅನುಭವಿಸಿದ ಯಾವುದೇ ಒಂದು ಚಿಕ್ಕ ಕಷ್ಟ, ನೋವು ತನ್ನ ಮಗು ಅನುಭವಿಸಬಾರದು ಮತ್ತು ಅದಕ್ಕಾಗಿ ಏನಾದರೂ ಮಾಡಲು ತಮ್ಮ ಜೀವನವನ್ನೇ ಪಣವಿಡಲೂ ತಯಾರಿರುತ್ತಾರೆ. ಅದೇ ಅಲ್ಲವಾ ನಿಜವಾದ ನಿಷ್ಕಲ್ಮಶವಾದ ಪ್ರೀತಿ!

ಈ ಒಂದು ಜೀವನದ ನಿರಂತರವಾದ ಪಯಣದಲ್ಲಿ ತನ್ನ ಕುಟುಂಬ ಮತ್ತು ತನ್ನ ಜೊತೆಯಲ್ಲಿರುವವರ ಒಂದು ಕಾಳಜಿಯನ್ನು ಹೇಳಲು ಪದಗಳೇ ಸಾಲದು. ಅಲ್ಲಿ ತಂದೆ ತಾಯಿ, ಅಜ್ಜ -ಅಜ್ಜಿ ಅದು ಎರಡು ಕುಟುಂಬಗಳ ಮಹನ್ ಸಂತಸವನ್ನು ವರ್ಣಿಸಲೂ ಅಸಾಧ್ಯ. ಈ ಒಂದು ಜೀವನ ತಂತುವನ್ನು ಯಾರು ಮಾಡಿದರೋ ಅವನಿಗೆ ನಾವುಗಳು ನಿತ್ಯ ಕೃತಙ್ಞರಾಗಿರಬೇಕು. ಇದೇ ಅಲ್ಲವ ಸಂಬಂಧಗಳ ಬೇರನ್ನು ಗಟ್ಟಿ ಮಾಡುವ ಸಂದರ್ಭಗಳು.

ಹೆತ್ತವರಿಗೆ ತಮ್ಮ ಮಕ್ಕಳು ಎಷ್ಟೇ ದೊಡ್ಡವರಾದರೂ ಅವರುಗಳು ಯಾವಾಗಲೂ ಏನೂ ಅರಿಯದ ಮುದ್ದು ಕಂದಮ್ಮಗಳೇ ಸರಿ. ಈ ಕಲ್ಪನೆಯನ್ನು ಯಾರು ಮಾಡಲೂ ಸಾಧ್ಯ? ಅಲ್ಲಿ ನಾವುಗಳು ಮಾಡುವ ಸಾವಿರ ತಪ್ಪುಗಳಿಗೆ ಕ್ಷಮೆಯಿರುತ್ತದೆ. ಸಾವಿರ ನೋವುಗಳಿಗೆ ಹಿಡಿಯಾದ ಸಾಂತ್ವನವಿರುತ್ತದೆ. ನಮ್ಮ ಒಂದು ಗೆಲುವಿಗೆ ಸಹಸ್ರ ಸಹಸ್ರ ಆನಂದ ಬಾಷ್ಪವಿರುತ್ತದೆ. ಅದರ ಅಳಿವು ಉಳಿವು ನಮ್ಮ ನಮ್ಮಗಳ ಕೈಯಲ್ಲಿ ಮಾತ್ರ ಇರುತ್ತದೆ. ಅದರ ಮುಂದುವರಿಕೆಯ ಸೋಪಾನವನ್ನು ನಾವುಗಳು ನಮ್ಮ ನಮ್ಮಲ್ಲಿಯೇ ಮಾಡಬೇಕು. ಮಾಡುತ್ತಿರೋಣ!!!

ಗುರುವಾರ, ಮಾರ್ಚ್ 10, 2011

ಎಲ್ಲಾದರೂ ಇರೂ ಎಂತಾದರೂ ಇರೂ ಎಂದೆಂದಿಗೂ ನೀ ಕನ್ನಡಿಗನಾಗಿರು.



ವಾತವರಣವು ಪೂರ್ತಿ ಬದಲಾಗಿದೆ. ಸುಳಿ ಚಳಿಯಿಂದ ಎದುಸಿರು ಬಿಡುವಂತ ಮಟ ಮಟ ಮಧ್ಯಾನದ ಕೆಟ್ಟ ಬಿಸಿಲಿನ ಜಳ. ಒಂದು ಸುತ್ತು ಬೆಂಗಳೂರಿನ ಜನಗಳು ನಿಡುಸುಯ್ದಿದ್ದಾರೆ. ಇನ್ನೂ ಈಗ ಮಾರ್ಚ ತಿಂಗಳು ಈಗಲೇ ಇಷ್ಟೊಂದು ಜಳ ಇನ್ನೂ ಏಪ್ರಿಲ್ ತಿಂಗಳಲ್ಲಿ ಹೇಗೋ ಏನೋ ಎಂದು ಪ್ರಲಾಪಿಸಲಾರಂಭಿಸಿದ್ದಾರೆ. ಐಸ್ ಕ್ರೀಮ್, ತಂಪು ಪಾನಿಯಗಳಿಗೆ, ತಾಜಾ ಹಣ್ಣುಗಳಿಗೆ ಕಾಲದ ಮಹಿಮೆ ಎಂಬ ರೀತಿಯಲ್ಲಿ ಇಲ್ಲದ ಬೇಡಿಕೆಗಳು.

ಪ್ರಕೃತಿಯು ಸಹಜವಾಗಿ ತನ್ನ ಹಳೆತನವನ್ನು ಮರೆಯಲು ಪ್ರಾರಂಭಿಸಿದೆಯೇನೋ ಎಂಬಂತೆ ತನ್ನ ಒಣಗಿದ ಹಳೆಯ ಎಲೆಗಳನ್ನೇಲ್ಲಾ ಒಂದು ಸುತ್ತು ಉದುರಿಸಿ ಹೊಸ ಋತು ಆಗಮನಕ್ಕೆ ತನ್ನನ್ನು ತಾನು ಚಿಗುರೆಲೆಗಳನ್ನು ತಾರಲು ತಯಾರಿ ನಡೆಸಿದೆಯೇನೋ ಎಂಬಂತೆ ಚಿಕ್ಕ ಚಿಕ್ಕ ಹಸಿರು ಎಲೆಗಳನ್ನು ಎಲ್ಲಾ ಗಿಡ ಮರಗಳು ತಮ್ಮಲ್ಲಿ ಮೊಡಿಸಿಕೊಳ್ಳುತ್ತಿವೆ.

ಚೈತ್ರ ಮಾಸದ ಆಗಮನಕ್ಕೆ ಯಾವ ರೀತಿಯಲ್ಲಿ ಪ್ರಕೃತಿ ತನ್ನ ನಿತ್ಯ ಕಾಯಕದ ಮೊಲಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೋ ಆ ರೀತಿಯಲ್ಲಿ ತನ್ನ ಚಿತ್ತಾರದಲ್ಲಿ ತಲ್ಲಿನವಾಗಿದೆ.

ಯಾವುದು ನಿಂತರೂ ಕಾಲ ಮಾತ್ರ ನಿಲ್ಲುವುದಿಲ್ಲ ಎಂಬಂತೆ. ಯಾವಾ ಯಾವ ಕಾಲಕ್ಕೆ ಏನೂ ಏನೂ ಆಗಬೇಕೋ ಅದು ನಿತ್ಯ ಘಟಿಸುತ್ತಿರುತ್ತದೆ. ಯಾಕೆಂದರೇ ಕಾಲ ನಮ್ಮ ನಿಮ್ಮಂತೆ ಮೈ ಮರೆಯುವ ಸಾದ ಸೀದಾ ಮನುಷ್ಯ ಅಲ್ಲ ಅಲ್ಲವಾ?

ಹಾಗೆಯೇ ನಮ್ಮ ಕನ್ನಡ ನಾಡಿಗೆ ಡಬಲ್ ದಮಾಕ ಎಂಬ ರೀತಿಯಲ್ಲಿ ಕನ್ನಡ ಮನಸ್ಸುಗಳಿಗೆ ಪುನಃ ಮತ್ತೊಂದು ದೊಡ್ಡ ಕನ್ನಡ ಮನ-ಜನಗಳ ಸಮ್ಮೇಳನದ ಭರಾಟೆ ಮತ್ತು ಸಂಭ್ರಮ. ಗಡಿನಾಡು ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ. ಅಖಿಲ ಭಾರತ ೭೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ದೂರಿಯನ್ನು ಬೆಂಗಳೂರಿನಲ್ಲಿ ಕಂಡ ಕನ್ನಡ ಮಂದಿ ಮತ್ತೊಮ್ಮೆ ಗಡಿ ನಾಡಲ್ಲಿ ಕನ್ನಡ ಸಂಸ್ಕೃತಿಯ ಪ್ರದರ್ಶನಕ್ಕೆ ಭಾರಿ ಭಾರಿ ತಯಾರಿಯನ್ನು ಮಾಡಿಕೊಂಡಿದ್ದಾರೆ.

ಯಾವುದೇ ಒಂದು ವಿಚಾರ, ಸಮ್ಮೇಳನ, ಮಾತು, ಸಂಭ್ರಮಕ್ಕೆ ಪರ ಮತ್ತು ವಿರೋಧಭಾಸಗಳು ಸಾಮಾನ್ಯ. ಅವುಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಹಲವಾರು ರೀತಿಯಲ್ಲಿ ಹಲವಾರು ಮಂದಿಗಳಿಂದ ಕೇಳಿ ಬರುತ್ತವೆ. ಯಾರು ಸಮ್ಮೆಳನವನ್ನು ಉದ್ಗಾಟಿಸಬೇಕು, ಯಾರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇರಬೇಕು, ಯಾವ ಅತಿಥಿಗಳನ್ನು ಕರೆಯಿಸಬೇಕು ಇತ್ಯಾದಿ, ಇತ್ಯಾದಿ. ಇದು ಎಂದು ನಿಲ್ಲದ ತುಂತುರು ಜಟಿ ಮಳೆಯೇ ಸರಿ.

ಸುಮಾರು ೨೫ ವರ್ಷಗಳಾನಂತರ ಈ ರೀತಿಯ 2ನೇಯ ವಿಶ್ವ ಕನ್ನಡ ಸಮ್ಮೇಳನವನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ಪ್ರಪಂಚದ ವಿವಿಧ ಭಾಗದಲ್ಲಿ ಚದುರಿ ಹೋಗಿರುವ ಎಲ್ಲಾ ಸಮಸ್ತ ಕನ್ನಡ ಹೃದಯಗಳ ಸಂಮಿಲನಕ್ಕೆ ಒಂದು ಸೂಕ್ತ ವೇದಿಕೆಯನ್ನು ನಿರ್ಮಿಸಿದ್ದಾರೆ. ವಿಶ್ವ ಕನ್ನಡ ಸಮ್ಮೇಳನ ಎಂಬ ಹೆಸರಿನಲ್ಲಿ ಮೂರು ದಿನಗಳ ಕಾಲ ಸಾವಿರಾರು ಕನ್ನಡ ಪ್ರೇಮಿಗಳನ್ನು ಒಂದು ಕಡೆ ದೊಡ್ಡ ಪ್ರಮಾಣದಲ್ಲಿ ಸೇರಿಸಿಸುತ್ತಿದ್ದಾರೆ.ಶ್ರೀಮಂತವಾಗಿರುವ ಕನ್ನಡದ ಹತ್ತು ಹಲವು ವಿಚಾರಗಳು, ಗೋಷ್ಠಿಗಳು, ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೊಲಕ ಕನ್ನಡ ನಾಡು ನುಡಿಯ ಏಳ್ಗೆಯ ಬಗ್ಗೆ ಚಿಂತನೆಯನ್ನು ನಡೆಸುವ ಅವಕಾಶ ಮಾಡಿರುವುದು ತುಂಬ ಉತ್ತಮ ವಿಚಾರ.

ಆದರೇ ಸಮ್ಮೇಳನಗಳು, ಕಾರ್ಯಕ್ರಮಗಳು ಅಲ್ಲಿ ದರ್ಪಣಗೊಳ್ಳುವ ವಿಚಾರಗಳು ಎಷ್ಟರ ಮಟ್ಟಿಗೆ ಸಾಮಾನ್ಯ ಕನ್ನಡ ಹೃದಯಗಳಿಗೆ ಕನ್ನಡದ ಬಗ್ಗೆ ಮಮತೆಯನ್ನು ಸ್ಪುರಿಸಲು ಸಹಕಾರಿಯಾಗುವುದು ಎಂಬುದು ಮೀಲಿಯನ್ ಡಾಲರ್ ಪ್ರಶ್ನೇ. ಕೋಟಿ ಕೋಟಿ ರೂಪಾಯಿಗಳನ್ನು ಈ ರೀತಿಯ ಸಂಭ್ರಮದ ಕಾರ್ಯಕ್ರಮಗಳಿಗೆ ಸರ್ಕಾರ ವೆಚ್ಚ ಮಾಡುತ್ತದೆ. ಅದರ ಸದೋಪಯೋಗ ಯಾವ ರೀತಿಯಲ್ಲಿ ಆಗುತ್ತದೆ ಎಂಬುದು ನಾವುಗಳು ಚಿಂತಿಸುವ ವಿಚಾರ. ಕನ್ನಡ ಎಂದರೇ ಅದು ಕೇವಲ ನಮ್ಮ ಮಕ್ಕಳನ್ನು ಹತ್ತನೇಯ ತರಗತಿಯವರೆಗೂ ಕಡ್ಡಾಯವಾಗಿ ಓದಿಸುವ ಒಂದು ಮಾಧ್ಯಮ ವ್ಯವಸ್ಥೆಯಾಗಬಾರದು. ಅದು ನಮ್ಮ ನರ ನಾಡಿಗಳಲ್ಲಿ ಯಾವಗಲೂ ಹರಿಯುವ ನಿತ್ಯ ತುಂಗೆಯಾಗಬೇಕು. ಕನ್ನಡದ ಬಗ್ಗೆ ನಮ್ಮ ಇಂದಿನ ತರುಣ ಜನಾಂಗದ ಭಾವನೆ ಯಾವ ರೀತಿಯಲ್ಲಿ ಇದೆ ಎಂಬುದನ್ನು ನಾವುಗಳು ಬಲ್ಲೆವು. ಆದ್ದರಿಂದ ಹಿರಿಯರು, ವಿದ್ವಾಂಸರು, ಚಿಂತಕರು, ಉದ್ಯಮಿಗಳು ಗಮನಿಸಿ ಅದರ ಬೆಳವಣಿಗೆಗೆ ಯಾವ ರೀತಿಯಲ್ಲಿ ಯೋಜನೆಯನ್ನು ತಯಾರಿ ಮಾಡಬೇಕು ಎಂಬುದರ ಬಗ್ಗೆ ದೃಷ್ಟಿ ಬೀರಬೇಕು.

ಕೇವಲ ಕನ್ನಡದ ನೆಲದಲ್ಲಿ ಹುಟ್ಟಿದ ಕನ್ನಡದ ಮಕ್ಕಳಿಗೆ ಮಾತ್ರ ಕನ್ನಡ ಎಂಬಂತಾಗಬಾರದು. ಅದು ಪ್ರೀತಿಯ ಭಾಷೆಯಾಗಬೇಕು. ಮತ್ತು ಅದು ಕೇವಲ ಒಂದು ಭಾಷೆಯಾಗದೆ ಸಮಸ್ತ ಕನ್ನಡ ಸಂಸ್ಕೃತಿಯ ಪ್ರತೀಕವಾಗಬೇಕು. ಎಲ್ಲರೂ ಕನ್ನಡ ಕಲಿಯಲೇ ಬೇಕು ಎಂಬ ಜರೂರತು ನಿರ್ಮಾಣವಾಗಬೇಕು. ಅದು ಕೇವಲ ಅಡಿಗೆ ಮನೆಯ ಮಾತಾಗಬಾರದು. ಮುಖ್ಯ ಜಾಗಗಳಲ್ಲಿ ಕನ್ನಡ ಮಾತನಾಡುವುದೇ ಕೀಳು ಎಂತಾಗಬಾರದು. ಎದೆಯುಬ್ಬಿಸಿ ಕನ್ನಡ ಡಿಂಡಿಮವ ಮಳಗಿಸುವಂತಾಗಬೇಕು.

ಕನ್ನಡಿಗರು ಇಂದು ವಿಶ್ವ ಮಟ್ಟದಲ್ಲಿ ತಮ್ಮ ನಿರಂತರ ಸಾಧನೆಯಿಂದ ತಾನು ಹುಟ್ಟಿದ ತಾಯನಾಡ ಕೀರ್ತಿ ಪತಾಕೆಯನ್ನು ಅತಿ ಎತ್ತರದಲ್ಲಿ ವಿವಿಧ ರಂಗದಲ್ಲಿ ಪ್ರಪಂಚದ ಎಲ್ಲಾ ಜಾಗಗಳಲ್ಲಿ ನೆಟ್ಟಿದ್ದಾರೆ. ಅದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಆ ಎಲ್ಲಾ ಕನ್ನಡಿಗರ ಕೊಡುಗೆಗಳನ್ನು ಗುರುತಿಸಲು ನೆರವಾಗುವಲ್ಲಿ ಇಂಥ ಸಮ್ಮೇಳನಗಳು ಮುಖ್ಯವಾಗುತ್ತವೆ. ಇಂದು ಕರ್ನಾಟಕ ಎಂದರೇ ಅದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾದ ರಾಜ್ಯವಲ್ಲ. ವಿಶ್ವದ ಭೂಪಟದಲ್ಲಿ ಅದಕ್ಕೂ ಒಂದು ಮುಖ್ಯವಾದ ಸ್ಥಾನವನ್ನು ಕೊಟ್ಟಿದ್ದಾರೆ ಎಂದರೇ ಇಲ್ಲಿನ ಬಹುಮುಖ್ಯ ಕನ್ನಡ ಮಹನೀಯರುಗಳ ಸಾಧನೆ ಮತ್ತು ಅವರುಗಳ ಉತ್ತಮ ತನದಿಂದಾಗಿ.

ಮರಿದುಂಬಿಯಾಗಿಯಾದರೂ ಪುನಃ ಪುನಃ ಈ ಬನವಾಸಿ ದೇಶದಲ್ಲಿ ಜನಿಸಲೂ ಇಚ್ಛಿಸುತ್ತೇನೆ ಎಂಬಂತೆ ನಮ್ಮ ನಾಡು ಎಂಥವರಿಗಾದರೂ ಸ್ವರ್ಗ ಸೀಮೆಯೇ ಸರಿ. ಒಮ್ಮೆ ಇಲ್ಲಿ ನೀವು ಜೀವಿಸಲು ಬಂದಿರೇಂದರೇ ಪುನಃ ಇಲ್ಲಿಯೇ ಇರಲೂ ಇಷ್ಟಪಡುವಂತ ವಾತವರಣ ಮತ್ತು ಕನ್ನಡ ಜನಗಳ ಸ್ನೇಹ ಹಸ್ತ ಅಗಾಧ. ಅದಕ್ಕೆ ಎಂಥವರಿಗೂ ಕನ್ನಡ, ನೆಲ, ಜಲ, ಗಾಳಿ ಕಂಡರೇ ಒಂದು ರೀತಿಯ ಅಕ್ಕರೆ.

ವಿಶ್ವ ಕಪ್ ಕ್ರಿಕೆಟ್ ಜ್ವರದಲ್ಲಿ ಮುಳುಗುವ ಮನಸುಗಳು ಅತ್ತ ನಮ್ಮ ಕನ್ನಡಮ್ಮ ನ ತೇರು ಎಳೆಯುವ ಜಾತ್ರೆಯಲ್ಲಿ ಪಾಲ್ಗೂಳ್ಳುವ ಮನಸ್ಸು ಮಾಡಲಿ. ಅಲ್ಲಿ ಅಪರೂಪದ ವಿಶ್ವದಾದ್ಯಂತ ಹರಡಿರುವ ನಮ್ಮ ಕನ್ನಡಿಗರನ್ನು ನೋಡಲು ಅವರೊಡನೇ ಬೇರೆಯಲು ಮಾತನಾಡಿಸಲಾದರೂ ಹೋಗೋಣವೇ!

ಎಲ್ಲಾದರೂ ಇರೂ ಎಂತಾದರೂ ಇರೂ ಎಂದೆಂದಿಗೂ ನೀ ಕನ್ನಡಿಗನಾಗಿರು.