ಶುಕ್ರವಾರ, ಅಕ್ಟೋಬರ್ 21, 2011

ಭೈರಪ್ಪ ಮತ್ತು others

ನಮ್ಮ ದೇಶದಲ್ಲಿ ವಿವಾದಗಳು ಇಲ್ಲದ ಜಾಗ, ವಿಚಾರ, ವ್ಯಕ್ತಿಗಳು ಯಾವುದೂ ಇಲ್ಲ ಅನಿಸುತ್ತಿದೆ. ಪ್ರತಿಯೊಂದಕ್ಕೂ ಒಂದಲ್ಲಾ ಒಂದು ವಿವಾದವೆಂಬ ಅಂಟು ಜಾಡ್ಯ ಅಮರಿಕೊಂಡಿರುತ್ತದೆ. ಪ್ರತಿಯೊಬ್ಬರೂ ಗುಲಗಂಜಿಯಲ್ಲಿ ಬಣ್ಣ ಕಪ್ಪನ್ನು ಹುಡುಕುತ್ತಿರುತ್ತಾರೆ.

ಪ್ರಸ್ತುತವಾಗಿ ವಿವಾದದ ಭುಗಿಲು ಎದ್ದದ್ದು ಙ್ಞಾನಪೀಠ ಪ್ರಶಸ್ತಿಗೆ. ಕನ್ನಡಕ್ಕೆ ಎಂಟನೇಯ ಅಪರೂಪದ ಪ್ರಶಸ್ತಿ ಹದಿನೇಳು ವರುಷಗಳಾದ ಮೇಲೆ ಸಿಕ್ಕಿದ ಸಂದರ್ಭದಲ್ಲಿ ಎಲ್ಲರೂ ಎಲ್ಲವನ್ನು ಮರೆತು ಸಂಭ್ರಮಪಡಬೇಕಾಗಿತ್ತು. ಆದರೇ ಮನುಷ್ಯರು ಅ(ಲ್ಪ) ತೃಪ್ತ? ಎಂಬ ರೀತಿಯಲ್ಲಿ ಯಾರೊ ಒಬ್ಬರೂ ಯಾರ ಮೇಲೆ ಮಾತಿನ ಕೆಸರು ಎರಚಿ ಇಡೀ ಕನ್ನಡ ಸಾಂಸ್ಕೃತಿಕ ವಾತವರಣವನ್ನು ಕಲುಷಿತ ಮಾಡಿಬಿಟ್ಟರು. ಇದು ನಿಜವಾಗಿಯೂ ಬೆಸರದ ಸಂಗತಿ.

ಆ ವ್ಯಕ್ತಿ ಮೊಕ ಪ್ರೇಕ್ಷಕನಾಗಿ ಇದ್ದಾನೆ. ಆದರೆ ಬೆರೆಯವರು ಅಲ್ಲಿ ಇಲ್ಲಿ ಕೆಸರನ್ನು ಎರಚಿಕೊಂಡು ಅವರಿಗೂ ಸಹ ಅಗೌರವವನ್ನು ಮಾಡಿದ್ದಾರೆ. ಪ್ರಶಸ್ತಿ ಯಾರಿಗೆ ಕೊಡಬೇಕು ಎಂಬುದು ಆ ಪ್ರಶಸ್ತಿ ಸಮಿತಿ ನಿರ್ಧರಿಸುವಂತಹದ್ದು. ಅದು ನಮ್ಮ ನಿಮ್ಮಂತಹ ಸಾಮಾನ್ಯರ ಮಾತು ಕತೆಗಳನ್ನು ಕೇಳಲಾರದು ಅಲ್ಲವಾ? ಪ್ರಶಸ್ತಿ ಕೇವಲ ವ್ಯಕ್ತಿಯನ್ನು ಮಾತ್ರ ಪರಿಗಣಿಸಿ ನೀಡಲಾರದಂತಹದ್ದು. ಅದು ಆ ವ್ಯಕ್ತಿಯ ಆ ರಂಗದ ಸಾಧನೆಯ ಮೇಲೆ ಅವಲಂಬಿತವಾಗಿರುತ್ತದೆ. ಅವರ ಅಪಾರವಾದ ಉತ್ತಮ ಕೊಡುಗೆಗೆ ಸಲ್ಲುವಂತಹದ್ದು.

ಹಾಗಾಗಿ ನಾವುಗಳು ಸುಖ ಸುಮ್ಮನೇ ಗಂಟಲು ಹರಿದುಕೊಂಡು ಕೊಗುವುದು ಯಾವ ಸುಖವನ್ನು ಕೊಡಲಾರದು ಅಲ್ಲವಾ?

ಇಲ್ಲಿ ಕಂಬಾರರು ಮತ್ತು ಭೈರಪ್ಪನವರ ಮಧ್ಯೆ ಯಾರು ಶ್ರೇಷ್ಠರು ಎಂದು ಚರ್ಚೆ ಮಾಡುತ್ತಿರುವುದು ಇಬ್ಬರೂ ಮಹನೀಯರುಗಳನ್ನು ನಾವುಗಳು ತೀರಸ್ಕರಿಸಿ ಅವರ ಕೊಡುಗೆಗಳನ್ನು ಗಾಳಿಗೆ ತೂರಿದಂತೆ. ಅದು ಹಾಗೇ ಆಗಬಾರದು.

ನಾವುಗಳು ಎಷ್ಟರ ಮಟ್ಟಿಗೆ ಇಬ್ಬರ ಕೊಡುಗೆಗಳಾದ ಅವರ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಅಭ್ಯಾಸ ಮಾಡಿದ್ದೇವೆ? ಎಷ್ಟರ ಮಟ್ಟಿಗೆ ಅವುಗಳನ್ನು ಮನನ ಮಾಡಿಕೊಂಡಿದ್ದೇವೆ ಎಂಬುದು ಮುಖ್ಯ. ಆಗ ಮಾತ್ರ ನಿಜವಾದ ನಮ್ಮ ಸಾಂಸ್ಕೃತಿಕ ನಾಯಕರುಗಳಿಗೆ ಗೌರವವನ್ನು ನೀಡಿದಂತೆ.




ನೀವು ಗಮನಿಸಿರಬಹುದು.. ಒಬ್ಬರ ಮೇಲೆ ಒಬ್ಬರೂ ಅಪಾದನೆಯನ್ನು ಮಾಡುತ್ತಾ.. ಪತ್ರಿಕೆಗಳಲ್ಲಿ ಸಭೆ ಸಮಾರಂಭಗಳಲ್ಲಿ ಅವರ ಕೃತಿಗಳನ್ನು ಓದಬೇಡಿ ,ಅದು ಹೀಗೆ ಅದು ಹಾಗೇ ಎಂದು ಹೇಳಿದರೇ ಸಾಮಾನ್ಯ ಓದುಗ ಕೇಳುವುದಂತು ಸುಳ್ಳು. ಅವನಿಗೆ ಯಾವುದು ಇಷ್ಟ ಮತ್ತು ಮೆಚ್ಚುಗೆಯಾಗುತ್ತದೋ ಅದನ್ನೇ ಆರಿಸಿಕೊಂಡು ಓದುತ್ತಾನೆ.

ಆ ಲೇಖಕನಿಂದ ಯಾವಾಗ ಹೊಸ ಪುಸ್ತಕಗಳು ಹೊರ ಬರುತ್ತದೆ ಎಂದು ಕಾದಿದ್ದುಕೊಂಡು ಖರೀದಿಸಿ ಓದಿ ಸುಖಪಡುತ್ತಾನೆ. ಅವನಿಗೆ ಯಾವುದೇ ಪಂಥ, ವಿಮರ್ಶೆ, ಷರಾ ಬೇಕಾಗಿಲ್ಲ. ಅವನಿಗೆ ಆ ಕ್ಷಣಕ್ಕೆ ಬೇಕಾಗಿರುವುದು ಆ ಕ್ಷಣದ ಏನೋ ಒಂದು ಅನುಭೂತಿ ಮತ್ತು ಮನಸ್ಸಂತೋಷ ಅವೆರಡು ಇಲ್ಲದಿದ್ದರೆ ಯಾರೂ ಯಾಕೆ ಯಾರ ಬರಹವನ್ನು ಓದುವಂತಹ ಕೆಲಸಕ್ಕೆ ಕೈ ಹಾಕುತ್ತಾನೆ?

ಆದರೇ ನಾವು ತಿಳುದುಕೊಂಡಿರುವವಂತಹ ಹಿರಿಯರುಗಳು ಚಿಕ್ಕವರಾಗಿ ಒಬ್ಬರ ಮೇಲೆ ಒಬ್ಬರೂ ಹೀಗೆ ಹಿಯಾಳಿಸುವುದು.. ಅದು ಅವರ ಬರಹವೇ ಅಲ್ಲ. ಅದು ಕೇವಲ ಬೂಸಾ.. ಅನೈತಿಕ.. ಅಮಾನವೀಯ.. ಬರಹ ಎಂದು ಗಂಟಲು ಕಿತ್ತುಕೊಂಡರೇ.. ಸಾಮಾನ್ಯ ಓದುಗ ಕೇವಲ ಒಂದು ಕಿರುನಗೆಯನ್ನು ಬೀರಿ ಅವನಿಗೆ ಯಾವುದು ಬೇಕೊ ಅದನ್ನು ಮಾತ್ರ ಸ್ವೀಕರಿಸುತ್ತಾನೆ ಅಲ್ಲವೇ?

ಲೇಖಕನೇನೂ ಯಾವುದೇ ಒಂದು ಅಗಾಧವಾದ ಹಂಬಲವಿಟ್ಟುಕೊಂಡು ಕೃತಿಯನ್ನು ಅಷ್ಟೊಂದು ಹುಡುಕಾಡಿ, ಸಂಶೋದಿಸಿ ರಚಿಸಿ ಯಾವುದೋ ಒಂದೇ ಒಂದು ಸಮೊಹ, ಓದುಗ ವರ್ಗಕ್ಕಾಗಿ ರಚಿಸಲಾರ ಅಲ್ಲವಾ? ಅದು ಹೇಗಾದರೂ ಅವನಿಗೆ ಹಾಗೇ ಮನಸ್ಸು ಬರುತ್ತದೆ? ಅದು ಕೇವಲ ಒಂದು ದಿನದ ಪತ್ರಿಕೆಯಲ್ಲಾ. ಅದು ಕಾಂದಂಬರಿ ಅಲ್ಲಿ ಪಾತ್ರಗಳೇ ಸನ್ನಿವೇಶಕ್ಕೆ ತಕ್ಕಾ ಹಾಗೆ ಮಾತನ್ನಾಡುತ್ತವೆ ಅಲ್ಲವಾ? ನನಗೆ ಅನಿಸುವುದು ಇಷ್ಟು ಮಾತ್ರ.

ಲೇಖಕ ಯಾರಿಗೂ ನನ್ನ ಕೃತಿಗಳನ್ನು ಕಾದಿದ್ದು ಓದಿ ಎಂದು ಯಾವಾಗಲೂ ಎಲ್ಲೂ ಲಾಬಿ ಮಾಡಲಂತೂ ಸಾಧ್ಯವಿಲ್ಲ. ಅದು ಇಂದಿನ ಮುಂದುವರಿದ ಜಮಾನದಲ್ಲಿ ಎಂದು ನಡೆಯಲಾರದು. ಓದುಗ ಎಲ್ಲಾ ವಿಮರ್ಶಕರಿಗಿಂತ ಮೀಗಿಲಾದವನು. ಪ್ರತಿಯೊಬ್ಬ ಲೇಖಕ ಕೃತಿ ರಚಿಸುವುದು ನೆಚ್ಚಿನ ಓದುಗನಿಗಾಗಿ ವಿನಾಃ ವಿಮರ್ಶಕರಿಗಾಗಿ ಎಂದು ಅಲ್ಲಾ ಅಲ್ಲವಾ?

ಪ್ರಶಸ್ತಿ ಪುರಾಸ್ಕರಗಳು ಸಿಗುವುದು ಒಂದು ಸಿದ್ಧಾಂತ ಮತ್ತು ನೀಲುವುಗಳ ಮೇಲೆ ಅಲ್ಲಿಯು ಸಹ ಯಾವ ಕೃತಿ, ಲೇಖಕ ಅವರ ಮಾನದಂಡದೊಳಗೆ ಬರುವವನೋ ಅವನಿಗೆ ಪ್ರಶಸ್ತಿ ಸಿಗುತ್ತದೆ. ಪ್ರಶಸ್ತಿಗಾಗಿ ಕೃತಿಗಳನ್ನು ರಚಿಸಿ ಕಾಯುವುದು ಅಸಾಧ್ಯ! ಅದು ಎಂದು ಆಗದ ಮಾತು.

ಒಬ್ಬರನ್ನೂ ಹೀಗೆ ಹೀಗೆ ಅಂಥ ಹೇಳಲು ಪತ್ರಿಕೆಗಳ ಸಂಪಾದಕರು ಇಡೀ ಸಂಚಿಕೆಯನ್ನು ಮೀಸಲು ಇಟ್ಟು ಏನೇ ಬರೆದರೂ ಓದುಗ ತನಗೆ ಯಾವುದು ಬೇಕೋ ಅದನ್ನೇ ಆರಿಸಿಕೊಳ್ಳುವುದು ಅಂಥ ಅನ್ನಿಸುತ್ತದೆ.

ಭೈರಪ್ಪರಂತೂ ಈ ಯಾವ ಚರ್ಚೆ, ಖಂಡನೆಗಳನ್ನು ಕಂಡು ಕಾಣದ ರೀತಿಯಲ್ಲಿ, ಯಾವುದೇ ಪ್ರಶಸ್ತಿ ಪುರಾಸ್ಕಾರ ಸಿಕ್ಕಿದರೂ ಸಿಗದಿದ್ದರೂ ಅವರ ನೆಚ್ಚಿನ ಓದುಗನಿಗೆ ಏನೂ ಕೊಡಬೇಕೋ ಅದನ್ನು ಉತ್ತಮವಾಗಿ ಊಣಬಡಿಸುತ್ತಿರುತ್ತಾರೆ ಅಲ್ಲವಾ?

ಬುಧವಾರ, ಅಕ್ಟೋಬರ್ 12, 2011

ನಮ್ಮ ಪ್ರೇಮ ದೇವರಿಗೆ

ಹಾಯ್ ಸ್ಥಾಯಿ,

ಬಹಳ ದಿನಗಳಾಯಿತು ಅನಿಸುತ್ತಿದೆ. ನಿನ್ನ ನನ್ನ ಮಾತುಕತೆಯ ಜೀವನ ಪಯಣ.

ಎಲ್ಲಾ ಕೆಲಸದಲ್ಲಿ ಕಳೆದು ಹೋಗಿ ಬಿಟ್ಟಿರುವಂತಿದೆ. ಹೋಗಲಿ ಒಂದು ಚಿಕ್ಕ ಪೋನ್ ಕರೆ, ಕೊಂಚ ಮೆಸೆಜ್ ನೋ ವೇ.. .ಜೀವನವೇ ಹೀಗೆ ಅನಿಸುತ್ತಿದೆ ಅಲ್ಲವಾ? ನಮಗೆ ಬೇಕಾದವರನ್ನು ಬೇಕಾದ ಸಮಯದಲ್ಲಿ ವಿಚಾರಿಸಿಕೊಳ್ಳುವಷ್ಟು ಸಮಯದ ಅಭಾವ ನಮಗೆಲ್ಲಾರಿಗೂ... ಏನೂ ಮಾಡವುದಕ್ಕೂ ಆಗಲ್ಲ.

ಜೀವನ ಮುಖ್ಯ ಅಂತಾ ನಾನೇ ನೀನಗೆ ಹೇಳಿದ್ದು. ಅನುಭವಿಸಬೇಕು. ಹತ್ತಿರವಿದ್ದು ದೂರ ನಿಲ್ಲುವೇವು ನಮ್ಮ ನಮ್ಮ ಜವಾಬ್ದಾರಿಯೆಂಬ ನಮ್ಮಗಳ ಕೋಟೆಯಲ್ಲಿ ಅಲ್ಲವಾ?

ಯಾಕೋ ಕಳೆದ ಹಲವು ದಿನಗಳಿಂದ ನಿನ್ನ ನೆನಪು ತುಂಬ ಬರುತ್ತಿದೆ.. ನನಗೆ ಗೊತ್ತು ಅಲ್ಲಿ ನಿನಗೂ ಇದೆ ರೀತಿಯ ಹಂಬಲದ ಕೂಸು ಮನದಲ್ಲಿ ಮೂಡುತ್ತಿದೆ ಅಂತಾ.. ಇರಲಿ ಅದರೂ ಇಂದಿನ ದಿನಗಳಲ್ಲಿ ನಮ್ಮ ಮನದ ಭಾವನೆಗಳನ್ನು ಪತ್ರಿಸುವಂತಹ ಜರೂರತು ಯಾರಿಗೂ ಬರುತ್ತಿಲ್ಲ. ಅದು ಸುಮ್ಮನೇ ಟೈಮ್ ವೇಸ್ಟ್ ಅನಿಸುತ್ತದೆ. ಬರವಣಿಗೆ, ಪೇಪರ್, ಪೇನ್ನು ಇತಿಹಾಸ ಸೇರಿಬಿಟ್ಟಿದೆ ಅನಿಸುತ್ತಿದೆ. ಎಲ್ಲಾ ಡೀಜಿಟಲ್ ಯುಗ ಮತ್ತು ಮಾಯೇ!

ಯೋಚಿಸು ನೀನು ಪತ್ರ ಬರೆದದ್ದು ಯಾವಾಗ ಎಂದು? ಅದು ಪರೀಕ್ಷೆಯ ಅಂಕಗಳಿಗಾಗಿ ನಿನ್ನ ಹತ್ತನೇ ತರಗತಿಯಲ್ಲಿ ಅನಿಸುತ್ತದೆ. ಅದು ಪ್ರಾರಂಭವಾಗುವುದು... ತೀರ್ಥರೂಪ ಸಮನಾದ... ಪ್ರಿಯ ಸ್ನೇಹಿತ/ತೆ ಹೀಗೆ..

ಪರಿಚಯವಾಗುವುದಕ್ಕೆ ಮೊದಲು ನೀನ್ನನ್ನು ಹೇಗೆ ಮಾತನಾಡಿಸಲಿ ಎಂದು ಯೋಚಿಸುತ್ತಿದ್ದಾಗ.. ಹಾಗೆಯೇ ಟೀಪಿಕಲ್ ಸಿನಿಮಾ ಪ್ರೇಮಿಗಳ ರೀತಿಯಲ್ಲಿ ನಿನಗೆ ಒಂದು ಪ್ರೇಮ ಪತ್ರ ಬರೆದು ಅದನ್ನು ನಿನಗೆ ಅದೇ ನಿನ್ನ ಗೆಳತಿ ಸೇವಂತಿಯ ಮೊಲಕನೂ ಅಥವಾ ನಿನ್ನ ಮನೆಯ ವಿಳಾಸಕ್ಕೆ ತಲುಪಿಸಬೇಕೆಂಬ ಕನಸು ಕಂಡಿದ್ದೇ. ಆದರೆ ಅದು ಯಾವುದೂ ಬೇಕಾಗದೇ ನಿನ್ನ ನನ್ನ ಪರಿಚಯವಾಯ್ತು. ಹಾಗೆ ಹಾಗೆ ಸಾಗಿ ಇಂದಿನ ನನ್ನ ಪ್ರೇಯಸಿ ಕಮ್ ದಂ(ಪತಿ) ಮಟ್ಟಕ್ಕೆ ಬಂದು ನಿಂತಿತು.

ಎಷ್ಟೂ ವಿಚಿತ್ರ ಅಲ್ಲವಾ? ನಾನು ಯಾರೋ ನೀನು ಯಾರೋ ಎಂಬ ರೀತಿಯಲ್ಲಿ ನಮಗೆ ಪ್ರತಿಯೊಬ್ಬರೂ ಹೊಸದಾಗಿ ಪರಿಚಯವಾಗುತ್ತಾರೆ. ಅನಂತರ ಅವರನ್ನು ಬಿಡಲಾರದ ಮಟ್ಟಿಗೆ ನಾವುಗಳು ನಮ್ಮ ನಮ್ಮ ಸಂಬಂಧಗಳನ್ನು ಸೃಷ್ಟಿ ಮಾಡಿಕೊಂಡು ಅದು ನಮ್ಮ ಜೀವಕ್ಕೆ ಮತ್ತು ಜೀವನಕ್ಕೆ ಅತಿ ಅನಿವಾರ್ಯ ಎಂಬ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತೇವೆ. ಜರೂರತುಗಳು ಹತ್ತು ಹಲವು ಇರಬಹುದು, ಅದರೇ ಜೀವನದ ಜೀವಂತಿಕೆಗೆ ಈ ಎಲ್ಲಾ ಸೆಳತಗಳು ಬೇಕೆ ಬೇಕು ಅನಿಸುತ್ತದೆ.




ಯಾರನ್ನೊ ಇಷ್ಟಪಡುತ್ತೀವಿ.. ಯಾರನ್ನೊ ತುಂಬ ಹತ್ತಿರದವರನ್ನಾಗಿ ಮಾಡಿಕೊಳ್ಳುತ್ತೇವೆ.. ಯಾರೊಂದಿಗೊ ನಮ್ಮ ಎಲ್ಲಾ ಮನದಾಳದ ನೋವು ಸಂತೋಷಗಳನ್ನು ತೋಡಿಕೊಳ್ಳುತ್ತೇವೆ.. ಅವರಿಂದ ಒಂದು ನಾಲ್ಕು ಹನಿ ನಗುವನ್ನು ಮಾತನ್ನು ಅಪೇಕ್ಷಿಸಿ ನಮ್ಮನ್ನು ನಾವುಗಳು ಖುಷಿಯಾಗಿ ಇಟ್ಟುಕೊಳ್ಳಲು ಬಯಸುತ್ತೇವೆ.

ಕೇವಲ ಒಂದು ವಾರ ನಿನ್ನ ಜೊತೆಯಲ್ಲಿ ಮುಖಾತಃ ಮಾತನ್ನಾಡದಿದ್ದಕ್ಕೆ ಈ ರೀತಿಯ ಮನದ ತುಮುಲಗಳು, ಯೋಚನೆಗಳು ನನ್ನನ್ನು ಬಾಧಿಸುತ್ತಿವೆ. ಇದೇ ಅಲ್ಲವಾ ಪ್ರೇಮ ಎಂಬುದು.. ಯಾವನಿಗ್ಗೆ ಗೊತ್ತೂ ಎಂದು "ಪರಮಾತ್ಮ" ಮೋವಿ ಸ್ಟೈಲ್ ನಲ್ಲಿ ಹೇಳುವಂತಾಗುತ್ತದೆ.

ಹೇ ರೀಯಲ್ಲಿ ಐ ಮೀಸ್ ಯೂ "ಪರಮಾತ್ಮ" ಸಿನಿಮಾ ನೋಡುವಾಗ!

ಸಿನಿಮಾ ನೋಡಿದ ಅನಂತರ ಅನಿಸಿತು ನಿನ್ನ ಜೊತೆಯಲ್ಲಿ ಅದನ್ನು ನೋಡಬೇಕಾಗಿತ್ತು ಅಂತಾ.

ಗೊತ್ತಾ ಅದರ ಒಂದು ಹಾಡಿನಲ್ಲಿ ಹೇಳುತ್ತಾರೆ "ಅನುಮಾನವಿಲ್ಲದ ಅನುರಾಗವಿಲ್ಲಾ" ನಿಜನಾ?

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹೇಗೆ ಅತಿ ಉತ್ತಮವಾಗಿ ತಮ್ಮ ಪ್ರೀತಿ ಪಾತ್ರರನ್ನು ಪ್ರೀತಿಸುವುದು ಎಂಬುದನ್ನು ಕಲಿಯುವುದಕ್ಕಾಗಿಯೇ ಈ ರೀತಿಯ ಸಿನಿಮಾಗಳನ್ನು ನೋಡುತ್ತಾರೆ ಅಂತೇ.. ಇದ್ದರೂ ಇರಬಹುದು!!

ಸಿನಿಮಾ ಮುಗಿಯವರೆಗೂ ಆ ಪಾತ್ರಗಳೇ ನಾವುಗಳು ಆಗಿರುತ್ತೇವೆ. ಸಿನಿಮಾ ಮುಗಿದ ಅನಂತರ ಬದುಕಿನ ಕಠೋರ ಸತ್ಯಗಳ ಅನಾವರಣ ನಮ್ಮ ಮುಂದೆ ಇರುತ್ತದೆ. ಆ ಕೆಲವೊಂದು ಸಮಯದಲ್ಲಾದರೂ ನಾವುಗಳು ಸಂತಸಗೊಳ್ಳುವಂತೆ ಮಾಡುತ್ತಾರಲ್ಲಾ ಅದಕ್ಕೆ ಎಷ್ಟೂ ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ.

ಬೇಗ ಬಂದು ನನ್ನ ಸೇರು ಚಿನ್ನ.. ಯಾಕೋ ಜೀವನದ ಬದುಕು ಬಂಡಿಯನ್ನು ಎರಡು ಗಾಲಿಗಳಿಲ್ಲದೇ ನಡೆಸುವುದು ಅಸಾಧ್ಯ ಅನಿಸುತ್ತಿದೆ.

ನಾವಂದುಕೊಂಡ ಅಂದಿನ ಎಲ್ಲಾ ಕನಸುಗಳ ನನಸು ಕಾಣುವ ದಿನಗಳೂ ಇವು ಆಗಿವೆ ಎಂದು ಈಗ ಅನಿಸುತ್ತಿದೆ. ಹೀಗೆ ಆಗಬೇಕು ಎಂಬ ನಿರ್ಧರ ಮೊದಲೇ ಇರುತ್ತದೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲಾ.. ಅದರೇ ನಮ್ಮಗಳ ಪ್ರಯತ್ನ ಆ ದಿಸೆಯಲ್ಲಿ ಇರುವುದರಿಂದ ಯಾವ ಭಯವಂತೂ ಇಲ್ಲ.

ಬದುಕು ಹಸನಾಗಲು ನಿರಂತರ ಪರಿಶ್ರಮ ಮತ್ತು ಒಂದು ಸುಂದರ ಹಸಿ ನೋಟ ಇದ್ದಾರೆ ಸಾಕು ಅಂತ ನಿನಗೂ ಸಹ ಇಂದು ಅನಿಸಿರಬೇಕು. ಎಲ್ಲರೂ ಹೀಗೆ ನಿತ್ಯ ದುಡಿಯುತ್ತಿರುವುದು ಜೀವನ ಸುಂದರವಾಗಿ ಯಾವುದಕ್ಕೂ ಕೂರತೆಯಿರದ ರೀತಿಯಲ್ಲಿ ಸಂಸಾರವೆಂಬ ದೋಣಿಯನ್ನು ಸಾಗಿಸಲು. ಎಲ್ಲಾರೂ ಅವರವರ ದಡವನ್ನು ಸೇರೆ ಸೇರುತ್ತಾರೆ. ಅದಕ್ಕೆ ಒಂದು ದೃಡ ನಂಬಿಕೆಯಿರಬೇಕಾಗುತ್ತದೆ ಅಷ್ಟೇ.

ಆ ದಿನಗಳಲ್ಲಿ ನಾವುಗಳು ಕಂಡ ಕನಸುಗಳು.. ಜೊತೆಯಲ್ಲಿ ಹಂಚಿಕೊಂಡ ಸವಿನೆನಪುಗಳ ಸರಮಾಲೆ.. ಹರೆಯದ ಹೊಳೆಯಲ್ಲಿ ಮುಂದಿನ ಬದುಕಿನ ಬಗ್ಗೆ ಯಾವ ಒಂದು ಭಯವೇ ಇರಲಿಲ್ಲ ಬಿಡು. ಅದು ಪ್ರೀತಿ ಪ್ರೇಮದ ವಯಸ್ಸು. ಆದರೂ ಇವತ್ತಿಗೂ ನನಗೆ ನೀನು ಅಂದಿನ ಏನೂ ಹರಿಯದಂತೆ ಮೋಡಿ ಮಾಡಿದ ಪಸ್ಟ್ ಪಿ.ಯೂ.ಸಿ ಬಿ ಸೇಕ್ಷನ್ ಸ್ಥಾಯಿ ಮಾತ್ರ.

ಯಾರ್ಯಾರನ್ನೂ ಎದುರು ಹಾಕಿ ಕೊಂಡು ಈ ಮಟ್ಟಕ್ಕೆ ಬಂದು ನಿಂತಿರುವುದಕ್ಕೆ ನನಗಂತೂ ತುಂಬ ಖುಷಿ ಅನಿಸುತ್ತದೆ. ನಿನ್ನ ಮನೆಯವರೂ ನನ್ನ ಮನೆಯವರೂ ನಮ್ಮಿಬ್ಬರನ್ನು ಇಂದು ಒಪ್ಪಿಕೊಂಡಿರುವುದಕ್ಕೆ ನಿನ್ನ ನೆರವಿನ ಪಾಲು ಅಪಾರ!

ನೀನೂ ಗಮನಿಸಿರಬೇಕು ಇತ್ತೀಚಿನ ನಮ್ಮ ಕನ್ನಡ ನಟನ ದಾಂಪತ್ಯದ ಕಲಹ ಮತ್ತು ಅನಂತರ ದಂಪತಿಗಳು ಮಾಧ್ಯಮಗಳ ಮೊಲಕ ಹೇಳಿಕೆ ಕೊಟ್ಟಿದ್ದು.. ಇದು ಎಲ್ಲಾರ ಮನೆಯ ದೋಸೆಯನ್ನು ನೆನಪು ಮಾಡಿಕೊಟ್ಟಂತಾಯಿತು. ಅದರೂ ನನಗೆ ಅನಿಸುತ್ತದೆ.. ಯಾಕೇ ಪ್ರೀತಿಪಟ್ಟು ಮದುವೆಯಾದವರೂ ತಮ್ಮ ಸಂಗಾತಿಗಳನ್ನು ಅಷ್ಟರ ಮಟ್ಟಿಗೆ ದ್ವೇಷಿಸುವಂತಹ ಮನಸ್ಸು ಅದು ಹೇಗಾದರೂ ಮತ್ತು ಎಲ್ಲಿಂದ ಬರುತ್ತದೆ ಅಂತಾ.. ನೀನೂ ಮಾತ್ರ "ಯಾವನಿಗ್ಗೆಗೊತ್ತು" ಅಂತಾ ಮಾತ್ರ ಹೇಳಬೇಡ ಡೀಯರ್!!

ಜೀವನ ಒಂದು ದಿನದ ಮ್ಯಾಚ್ ಅಲ್ಲಾ ಅಲ್ಲವಾ! ಅದು ನಿರಂತರವಾಗಿ ಜಾರಿ ಇರಬೇಕಾದ ಸವಿಸವಿ ಸಂಬಂಧದ ಕೊಂಡಿ. ನಿತ್ಯ ಹೊಸತನವನ್ನು ನಮ್ಮಿಬ್ಬರ ಮದ್ಯದಲ್ಲಿ ಇಟ್ಟುಕೊಂಡಿರುವುದಕ್ಕೆ ಏನೋ ನನಗೆ ಇಂದಿಗೂ ಸಹ ನೀನು ನನಗೆ ಪರಿಚಯವಾದ ಆ ದಿನಗಳ ನನ್ನ ಹುಡುಗಿಯ ಬಗ್ಗೆ ಇದ್ದಂತಾಹ ಕುತೂಹಲವೇ ಇನ್ನೂ ನಿನ್ನ ಮೇಲೆ ಇದೆ.

ಅದಕ್ಕೆ ನಮ್ಮ ಪ್ರೇಮ ದೇವರಿಗೆ ಸಾವಿರ ಸಾವಿರ ಥ್ಯಾಂಕ್ಸ್!

ಹೇ ಬೇಗ ನನ್ನ ಬಂದು ಸೇರು.. ಈ ಪತ್ರ ನಿನ್ನ ಸೇರುವುದುಕ್ಕೂ ಮುನ್ನಾ... ಆದರೇ!