ಭಾನುವಾರ, ಜೂನ್ 19, 2011

ತೀರ್ಥ ರೂಪ ತಂದೆಗೆ...



ಇಂದು ತಂದೆಯ ದಿನ. ಇದು ಪಾಶ್ಚಾತ್ಯರಿಗೆ ಮಾತ್ರವಲ್ಲ. ನಮಗೂ ಸಹ. ನನ್ನ ಡ್ಯಾಡಿ ಯಾವಾಗಲೂ ನನಗೆ ಸ್ಟ್ರಾಂಗೆಸ್ಟ್. ನನ್ನ ಚಿಕ್ಕಂದಿನ ದಿನದಿಂದಲೂ ಇರಬೇಕು. ನಮ್ಮ ಅಪ್ಪಾ ಅಂದರೆ ಅಮ್ಮನಿಗಿಂತ ನನಗೆ ಮೀಗಿಲು. ಅಮ್ಮ ಅಮ್ಮನ ಮಮತೆಯ ಕರೆಗೆ ಮೀಗಿಲಾದದ್ದು ಯಾವುದು ಇಲ್ಲ ಬಿಡಿ ಅದು ಅಮ್ಮ ಮಾತ್ರ ಎಂದು ಹೇಳಬಹುದು.

ಮನೆಗೆ ಬಂದರೇ ಅಮ್ಮನ ಮುದ್ದಿನ ಮಗಳು ಮತ್ತು ನನಗೆ ಅಮ್ಮನ ನಲುಮೆ ಯಾವಾಗಲೂ ತುಂಬ ಖುಷಿಯನ್ನು ಕೂಡುವ ವಿಚಾರ. ಆದರೇ ಹೊರಗಡೆ ನನ್ನ ಗೆಳೆಯರ/ಗೆಳೆತಿಯರ ಜೊತೆಯಲ್ಲಿ ಆಟವನ್ನು ಆಡುವಾಗ. ಯಾರದರೂ ತೊಂದರೆಯನ್ನು ಕೊಟ್ಟಾಗ ನನಗೆ ಮೊದಲು ಬರುವ ದೈರ್ಯ, ಭರವಸೆಯ ಆಸರೆಯ ನೆನಪು ಎಂದರೇ ಅದು ನಮ್ಮ ಅಪ್ಪನದು.

ನಾನು ಯಾವಾಗಲೂ ಒಂದು ಅಚ್ಚರಿಯ ನೋಟವನ್ನು ನನ್ನ ಅಪ್ಪನೆಡೆಗೆ ಇಟ್ಟುಕೊಂಡಿದ್ದೇನೆ. ಇಂದು ನಾನು ನನ್ನ ಕಾಲ ಮೇಲೆ ನಿಂತುಕೊಂಡು ನಾನೇ ನನ್ನ ಪಾಕೇಟ್ ಮನಿಯನ್ನು ಸಂಪಾಧಿಸಿಕೊಳ್ಳುವ ಬಲವನ್ನು ಪಡೆದಿದ್ದರು. ಯಾಕೋ ನನಗೆ ನನ್ನ ಅಪ್ಪನ ಆಸರೆಯನ್ನು ಯಾವಾಗಲೂ ಮೀಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅನಿಸುತ್ತದೆ. ಯಾಕೆಂದರೇ ನನ್ನ ಅಪ್ಪನ ಕಣ್ಣಾಲಿಗಳು ನಾನು ಚಿಕ್ಕವಳಿದ್ದಾಗ ಇದ್ದ ರೀತಿಯಲ್ಲಿ ಇಂದು ಇಲ್ಲ.. ಆದರೋ ನನಗೆ ನನ್ನ ಹೊರ ಪ್ರಪಂಚದಲ್ಲಿ ಪುರುಷ ಸಮಾಜ ಎಂದರೇ ನೆನಪಾಗುವ ಒಂದು ಪದವೆಂದರೇ ಅದು ಅಪ್ಪ ಮಾತ್ರ.

ನನ್ನ ಅಮ್ಮ ನಾನು ಹಟ ಮಾಡುತ್ತಾ ಚಿಕ್ಕ ಚಿಕ್ಕದಕ್ಕು ಸತಾಯಿಸುತ್ತಿದ್ದಾಗ ನನ್ನ ಬಾಲ್ಯದ ದಿನಗಳಲ್ಲಿ ಹೆದರಿಸಲೂ ನನ್ನ ಅಪ್ಪನನ್ನೇ ಬಳಸುತ್ತಿದ್ದಳು. ಆದರೋ ನನಗೆ ಗೊತ್ತು ನನ್ನ ಅಪ್ಪ ನನ್ನನ್ನು ಇದುವರೆಗೂ ಹೀಗೆ ತಮಾಷೆಗೂ ಸಹ ನನ್ನ ಮೇಲೆ ಕೈ ಮಾಡಿಲ್ಲ. ನಾನೇ ಅದೃಷ್ಟವಂತಳು ಎಂದು ಅನಿಸುತ್ತದೆ. ನನಗೆನಿಸುತ್ತದೆ ಅಷ್ಟೊಂದು ನನ್ನನ್ನು ಪ್ರೀತಿಸುತ್ತಿದ್ದರು ಅನಿಸುತ್ತದೆ.

ಇದರಲ್ಲಿ ನನ್ನ ತಮ್ಮಂದಿರ ದೌರ್ಭಾಗ್ಯಕ್ಕೆ ನನಗಂತೋ ಖುಷಿಯ ನೆನಪುಗಳು ಯಾಕೆಂದರೇ ನನ್ನ ಅಪ್ಪ ನಮ್ಮಗಳ ಮಧ್ಯ ಏನಾದರೂ ಜಗಳಗಲು ಆದಾಗ ಯಾವುದೇ ಮೂಲಾಜು ಇಲ್ಲದೇ ನನ್ನ ತಮ್ಮಂದಿರ ಮೇಲೆ ಕೈ ಎತ್ತಿದ್ದಾರೆ. ನನಗೆ ಒಂದಿಷ್ಟು ಮಾತಿಗೂ ಗದರಿಸಿಲ್ಲ. ಅಮ್ಮನ ಬಗ್ಗೆಯು ಸಹ ಅಪ್ಪನಿಗೆ ಅಷ್ಟೇ ಪ್ರೀತಿ.

ಈ ಒಂದು ಗುಣ ನನಗೆ ಅತಿ ಪ್ರೀತಿಯನ್ನು ನನ್ನ ತಂದೆಯ ಮೇಲೆ ಛಾಪಿಸಲು ದಾರಿ ಮಾಡಿಕೊಟ್ಟಿತು.

ನನ್ನ ಹೆಸರಿನ ಜೊತೆಯಲ್ಲಿ ನನ್ನ ತಂದೆಯ ಹೆಸರನ್ನು ಇಟ್ಟುಕೊಳ್ಳಲು ಇರುವ ಅವಕಾಶ. ನೆನಸಿಕೊಂಡರೇ ಅದೇ ಇರಬೇಕು ಎಲ್ಲಾ ಹೆಣ್ಣು ಮಕ್ಕಳಿಗೆ ತಂದೆಯೆಂಬ ಶ್ರೀ ರಕ್ಷೆ ಕಡೆಯತನಕ ಇರುವುದೇನೋ ಎನಿಸುತ್ತದೆ.

ಪ್ರೀತಿಯ ಅಪ್ಪನ ಮಗಳು ಎಂದು ನನ್ನ ಮನೆಯವರೆಲ್ಲಾ ಹಂಗಿಸಿದರೂ ನನ್ನ ಹೆಮ್ಮೆಯನ್ನು ನಾನಂತೋ ಯಾವಾಗಲೂ ಅನುಭವಿಸಲು ಸಂತೋಷವಾಗುತ್ತದೆ. ಚಿಕ್ಕಂದಿನ ದಿನಗಳಲ್ಲಿ ನನಗೆ ಬೇಕೆನಿಸಿದ ವಸ್ತುಗಳು, ತಿನಿಸುಗಳು, ಬಟ್ಟೆಬರೆಗಳ ಮಹಾಪೂರವನ್ನೇ ಹರಿಸಿದ್ದನ್ನು ನೆನಸಿಕೊಂಡರೇ ನನಗೆ ಈಗಲೂ ರೋಮಾಂಚನವಾಗುತ್ತದೆ.

ಇಂದು ನಾನು ಇಷ್ಟಪಟ್ಟ ಬಟ್ಟೆ, ಡ್ರೇಸ್ ಗಳನ್ನು ನಾನೇ ನನ್ನ ಗೆಳೆತಿಯರ ಜೊತೆಯಲ್ಲಿ ಖರೀದಿಸಿ ತಂದಾಗ ನನ್ನನ್ನು ನೋಡಿ ನನ್ನ ತಂದೆಯ ಕಣ್ಣಿನ ಹೊಳಪು ಏನನ್ನು ಹೇಳುತ್ತಿರಬಹುದು ಎಂಬ ಚಿಂತೆಯಲ್ಲಿ ಕೆಲವೊಮ್ಮೆ ನಾನು ಮುಳುಗಿರುತ್ತೇನೆ!

ಅವರ ಅಚ್ಚುಕಟ್ಟು, ಅವರ ಸಮಯ ಪ್ರಙ್ಞೆ, ಅವರ ನಿಷ್ಠುರತೆಗಳೇ ನನಗೆ ಇಂದು ಬಳುವಳಿಯಾಗಿ ಬಂದಿರುವುವೇನೋ ಎಂಬಂತೆ ನಾನು ಇಂದು ಸ್ವಾತಂತ್ರ್ಯವಾಗಿ ಯೋಚಿಸಲು ಮತ್ತು ಕೆಲವೊಂದು ನಿಲುವುಗಳನ್ನು ನನ್ನ ಕೆಲಸಗಳಲ್ಲಿ ತೆಗೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿ.

ನನಗಂತೋ ನನ್ನ ತಂದೆ ನನ್ನ ಮೊದಲ ಬಾಯ್ ಪ್ರೇಂಡ್. ಯಾಕೆಂದರೇ ನಾನು ಪುರುಷ ಪ್ರಪಂಚದ ಬಗ್ಗೆ ಯೋಚಿಸಿದಾಗ. ಒಳ್ಳೆಯತನ ಕೆಟ್ಟತನದ ಬಗ್ಗೆ ಯೋಚಿಸುವಾಗ ನನಗೆ ನನ್ನ ತಂದೆಯ ಗುಣ, ನಡತೆಗಳೇ ಕಣ್ಣ ಮುಂದೆ ಬರುತ್ತವೆ.

ಅವರುಗಳು ನನಗೆ ಕೊಟ್ಟ ಪ್ರೀತಿ, ಅವರ ಸಲಹೆ ಯಾವುದಕ್ಕೂ ಮೀಗಿಲಾಗಿಲ್ಲ. ಚಿಕ್ಕವಳಿದ್ದಾಗ ಅವರ ಬೆನ್ನ ಮೇಲೆ ಚಿಕ್ಕ ಚಿಕ್ಕ ಪಾದಗಳನ್ನು ಇಟ್ಟು ನಡೆದಾಡಿದ್ದೇ ಎಂದುಕೊಂಡರೇ ಇಂದು ಆಶ್ಚರ್ಯವಾಗುತ್ತದೆ. ಎಲ್ಲಿಗಾದರೂ ಕರೆದುಕೊಂಡು ಹೋಗುವಾಗ ಅವರ ಹೆಗಲ ಮೇಲೆ ಕುಳಿತು ಕೊಂಡು ಅತ್ತ ಇತ್ತಾ ನೋಡುತ್ತಾ... ಅವರ ತಲೆ ಕೂದಲುಗಳನ್ನು ಹಾಗೇ ಹೀಗೆ ಬೆರಳಲ್ಲಿ ಸ್ಪರ್ಷಿಸುತ್ತಿದ್ದದ್ದು ನೆನ್ನೆ ಮೊನ್ನೆ ಮಾಡಿದಂತ ಸವಿನೆನಪು.

ಮನೆಯೆಂದರೇ ಮನೆಯ ಮುಖ್ಯಸ್ಥನೆಂದರೇ ಅಪ್ಪನಲ್ಲವೇ.. ಅವರ ಅ ಒಂದು ಧೀಮಂತಿಕೆಯ ಬೆಳಕು! ಎಂದು ಮರೆಯಲಾಗುವುದಿಲ್ಲ. ನಾನು ನನ್ನ ಕೆಲಸಕ್ಕಾಗಿ ಇಷ್ಟೊಂದು ದೊರದಲ್ಲಿ ಇದ್ದರೂ ಇಂದಿಗೋ ಮುಂಜಾನೆಯಲ್ಲಿ ಮೊದಲು ನಾನು ನೆನಸುವ ದೇವರನ್ನು ನೋಡುವುದಕ್ಕಿಂತ ನನ್ನ ತಂದೆಯನ್ನು ನೋಡುವುದೇ ಹೆಚ್ಚು. ದಿನಕ್ಕೆ ಒಮ್ಮೆಯಾದರೂ ಅವರ ಜೊತೆಯಲ್ಲಿ ಮಾತನಾಡಿದರೇನೆ ಏನೋ ಸಮಾಧಾನ.

ನನ್ನ ಗೆಳೆತಿಯರು ಈಗಲೂ ಹಂಗಿಸುತ್ತಿರುತ್ತಾರೆ. ಏನೇ ನೀನು ಮದುವೆಯಾಗಿ ಗಂಡನ ಮನೆಗೆ ಹೋದರೂ ನಿನ್ನ ಅಪ್ಪ ಪ್ರೀತಿಯ ಹುಚ್ಚು ಬಿಡಲಾರೇ ಕಣೇ!

ಹೌದು ಯಾಕೆ ಬಿಡಬೇಕು!

ಮಾತಾ ಪಿತೃಗಳು ಪ್ರತ್ಯಕ್ಷ ದೇವರುಗಳೇ ಸರಿಯಲ್ಲವಾ. ಅವರುಗಳು ಕಂಡ ಕನಸುಗಳೇ ಈ ನಮ್ಮ ಜೀವನವಲ್ಲವಾ? ಅವರ ಜೀವನದ ತೇರನ್ನು ನಾವುಗಳು ಮುಂದುವರಿಸಿಕೊಂಡು ವಯಸ್ಸಾದ ಕಾಲಕ್ಕೆ ಅವರುಗಳಿಗೆ ಪ್ರೀತಿ, ಅಸರೆಯನ್ನು ನೀಡುವುದು ಎಲ್ಲಾ ಮಕ್ಕಳ ಕರ್ತವ್ಯ ಎಂದು ನಮಗೆ ಅನಿಸುವುದಿಲ್ಲವಾ?

ಈ ಒಂದು ವಿಚಾರದಲ್ಲಿ ನಮ್ಮ ಈ ಭಾರತೀಯ ಕುಟುಂಬ ವ್ಯವಸ್ಥೆಗೆ ಜೈ ಜೈ!

ನಾವುಗಳು ನಿತ್ಯ ಪಾದರ್ಸ್ ಮದರ್ಸ್ ಡೇ ಗಳನ್ನು ಮಾಡುತ್ತಲೇ ಇರುತ್ತೇವೆ. ಮಾಡುತ್ತಲೇ ಇರಬೇಕು. ಅವರುಗಳನ್ನು ನಮ್ಮ ಹೆತ್ತವರು ಎಂಬುದನ್ನು ಎಂದೆಂದಿಗೂ ಮರೆಯದೇ ಇರಬೇಕಾದದ್ದು ಇಂದಿನ ಜರೂರತ್ತು. ಮತ್ತು ಇಂದು ನಮ್ಮ ನಗರ ಪ್ರದೇಶಗಳಲ್ಲಿ ನಿರ್ಮಿತವಾಗುತ್ತಿರುವ ವೃದ್ಧಾಶ್ರಮಗಳ ಬೆಳವಣಿಗೆಯನ್ನು ತಗ್ಗಿಸುವ ಪ್ರಯತ್ನವನ್ನು ಈ ದಿನಗಳು ಮಾಡಲಿ.

ಯುವ ಪೀಳಿಗೆಗಳಲ್ಲಿ ತಂದೆ ತಾಯಿಯರ ಬಗ್ಗೆ ಇರುವ ಪ್ರೀತಿಯ ಜೇನು ನೂರ್ಮಡಿಯಾಗಲೆಂದು ನಾನು ಹಾರೈಸುವೇ...

ನನ್ನ ಸ್ವೀಟ್ ತೀರ್ಥ ರೂಪ ತಂದೆಗೆ ನಿಮ್ಮ ಪ್ರೀತಿಯ ಮಗಳು ಮಾಡುವ ಪ್ರಣಾಮಗಳು.

ಶನಿವಾರ, ಜೂನ್ 18, 2011

ನೆನಪುಗಳ ಮೇಲಿನ ನಿಲ್ಲದ ಪಯಣ

ನಮ್ಮ ಬಾಲ್ಯದ ದಿನಗಳನ್ನು ನೆನಸಿಕೊಂಡರೆ ಇಂದು ರೋಮಾಂಚನವಾಗುತ್ತದೆ. ಅಲ್ಲಿ ಹಲವು ಇಲ್ಲದಿದ್ದರು ಮಹಾನ್ ಸುಂದರ ಕ್ಷಣಗಳಾಗಿದ್ದವು ಎಂದು ಇಂದು ಅನಿಸುತ್ತಿದೆ. ಅದೇ ಬದುಕು ಅಲ್ಲವಾ ಕಳೆದು ಹೋದ ದಿನಗಳನ್ನು ಇಂದು ಯೋಚಿಸುತ್ತಾ.. ಚಿಂತಿಸುತ್ತಾ.. ಅಂದು ಹಾಗೆ ಇದ್ದೆವು ಇಂದು ಹೀಗೆ ಇರುವೆವು ಎಂದುಕೊಳ್ಳುತ್ತಾ..ಪುನಃ ಪುನಃ ಅದರ ಮೆಲುಕನ್ನು ನಮ್ಮ ಕೊನೆಯ ದಿನಗಳವರೆಗೂ ಯಾವಾಗಲೂ ವಾಸ್ತವಕಕ್ಕೆ ಎಳೆದುಕೊಳ್ಳುತ್ತಿರುತ್ತಲೇ ಇರುತ್ತೇವೆ.

ಅಂದಿನ ನಮ್ಮ ಬಾಲ್ಯದ ದಿನಗಳನ್ನು ನಮ್ಮ ಇಂದಿನ ಜಂಜಾಟದ ಜವಾಬ್ದಾರಿಯ ದಿನಗಳಿಗೆ ಹೋಲಿಕೆ ಮಾಡಿಕೊಂಡು ಹಳೆಯ ದಿನಗಳೇ ಚೆನ್ನಾಗಿದ್ದವು ಕಣಪ್ಪಾ ಎಂದುಕೊಳ್ಳುತ್ತೇವೆ.

ಅಂದು ಹೀಗೆ ನಾವುಗಳು ನಮಗೆ ಈಗ ಸಿಗುತ್ತಿರುವ ಸ್ವಾತಂತ್ರ್ಯ ಇದ್ದಿರಲಿಲ್ಲ. ನಾವಿನ್ನೂ ಚಿಕ್ಕವರು ಎಂದುಕೊಂಡು.. ಯಾವ ಮನದ ಆಸೆಯನ್ನಾದರೂ ಹಿಡೇರಿಸಿಕೊಳ್ಳಬೇಕಾದರೂ ನಮ್ಮ ಹೆತ್ತವರ ಕಡೆ ಮುಖ ಮಾಡಬೇಕಾದ ದಿನಗಳು ಅವುಗಳು. ನಾವೇನನ್ನು ಸ್ವಾತಂತ್ರ್ಯವಾಗಿ ನಿರ್ಧರಿಸಲಾರದಂತಹ ದಿನಗಳವು. ಒಂದು ಸಿಕ್ಕರೇ ಇನ್ನೊಂದು ಸಿಗಲಾರದಂತಹ ಬರಗಾಲದ ದಿನಗಳವು ಅದರೋ.. ಆ ಕಷ್ಟ ಕಾರ್ಪಣ್ಯ ದಿನಗಳು ಇಂದು ಈ ಸ್ಥಿತಿಯಲ್ಲೂ ಸಹ ಹೆಚ್ಚು ಸಹನೀಯವಾಗುತ್ತವೆ ಯಾಕೆ?

ಇಂದು ನಾವುಗಳೇ ನಮ್ಮ ಕಾಲಮೇಲೆ ನಾವುಗಳೂ ನಿಂತಿದ್ದೇವೆ ಎಂಬ ಬೀಗು. ಏನಾನ್ನಾದರೂ ಯಾವ ಸಮಯದಲ್ಲಾದರೂ ಗಳಿಸಿಕೊಳ್ಳುವ ಶಕ್ತಿಯನ್ನು ಸಂಪಾದಿಸಿದ್ದೇವೆ. ಯಾವುದಕ್ಕೂ ಕೂರತೆ ಎಂಬುದು ಎಳ್ಳಷ್ಟು ಇಲ್ಲ. ಆದರೋ ಯಾಕೆ ಎಲ್ಲಾರೂ ಕಳೆದ ಆ ದಿನಗಳೇ ದಿ ಬೇಸ್ಟ್ ಎಂದುಕೊಳ್ಳುವುದು.

ಅಂದು ನಮ್ಮ ದಿನಗಳನ್ನು ಹಾಗೆಯೇ ಹೊಸ ಆಸೆಯಲ್ಲಿ ಹೊಸ ಭರವಸೆಯಲ್ಲಿ ಕಳೆದು ಬಂದಿರುವೆವು. ಆಗ ಯಾವುದಕ್ಕೆ ನಾವುಗಳು ಹಂಬಲಿಸಿದ್ದೇವೋ ಅವುಗಳನ್ನು ಮುಂದೆ ನಾನಂತೊ ಒಂದು ದಿನ ಗಳಿಸಲೇ ಬೇಕು. ಹೀಗೆ ಹೀಗೆ ಬಾಳಬೇಕು ಎಂಬ ಕನಸನ್ನು ಕಂಡ ಫಲವೇ ಇಂದಿನ ಬದುಕಾಗಿರಬೇಕಲ್ಲವಾ?

ಅಂದಿನ ಆ ತುಡಿತ ನಮ್ಮ ಇಂದಿನ ಈ ಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸಿರಬಹುದಲ್ಲಾ.. ಅಂದಿನ ಆ ಅಪಮಾನ, ನೋವು, ಕಷ್ಟ, ಆರ್ಥಿಕತೆ, ಸ್ಥಿತಿಯೇ ಇಂದಿನ ಮೆಟ್ಟಿಲಾಗಿರಬೇಕಲ್ಲವಾ? ಆದರೋ ಯಾಕೆ ನಾವುಗಳು ಅಂದಿನ ಆ ನಿಕೃಷ್ಟ ದಿನಗಳನ್ನೇ ಹೆಚ್ಚು ಆಪ್ಯಾಯಮಾನವಾಗಿ ಕಾಣುತ್ತೇವೆ.

ಅಂದು ಕಷ್ಟ ಒಂದು ಇತ್ತು. ಅಂದು ದುಡ್ಡು ಮಾತ್ರ ಇರಲಿಲ್ಲ. ಅಂದು ಈ ಆಸ್ತಿ ಇರಲಿಲ್ಲ. ಆದರೆ ಈಗ ನೋಡಿ! ಎಂಬ ಈ ಒಂದು ಮಾತು ಈಗ ನಮ್ಮ ನಿಮ್ಮೇಲ್ಲಾರಲ್ಲಿ ಬರಲು ಕಾರಣವಾವುದಾದರೂ ಏನು ಸಾರ್?

ನಮ್ಮ ಬದುಕು ಕೇವಲ ಹೀಗೇನಾ! ಯಾವ ಘಟ್ಟದಲ್ಲಾದರೂ ಇರಲಿ.. ಯಾವುದಾದರೂ ಸ್ಥಿತಿಯಲ್ಲಿರಲಿ.. ಎಂದಿಗೂ ನಮ್ಮಗಳಿಗೆ ಇದೇ ಬದುಕು ಚೆನ್ನಾಗಿದೆ, ಸಂತೋಷವಾಗಿದ್ದೇವೆ.. ಎಂದು ನಾವುಗಳು ನಿರ್ಧರಿಸಲು ಸಾಧ್ಯವಿಲ್ಲವೇ ಇಲ್ಲವೆನಿಸುತ್ತದೆ. ಇಂದು ಇರುವ ದಿನಗಳನ್ನು ನೆಮ್ಮದಿಯಾಗಿ ಕಳೆಯಲು ಹಳೆಯ ದಿನಗಳನ್ನು ನೆನಪಿಕೊಳ್ಳುವುದು ಒಂದು ಮಾನವ ಸಹಜ ಅಭ್ಯಾಸವೇನೋ ಎನಿಸುತ್ತದೆ.

ನಾನು ಇರುವ ಜಾಗ,ಸ್ಥಿತಿ,ಸಂಬಂಧ,ನೆರೆಹೊರೆ,ಸ್ನೇಹ.. ಹೀಗೆ ಪ್ರತಿಯೊಂದನ್ನು ಹಳೆಯದರ ಜೊತೆಯಲ್ಲಿ ಗುಣಕಾರ, ಭಾಗಕಾರ ಮಾಡಿಯೇ ನಾವುಗಳು ಬದುಕುವಂತಾಗುತ್ತದೆ ಯಾಕೆ?

ಹಾಗೆಯೇ ಯಾವುದೇ ಯಶಸ್ವಿ ವ್ಯಕ್ತಿಯಾಗಲಿ. ಯಾವುದೇ ದೊಡ್ಡ, ಸಾಮಾನ್ಯ ಮನುಷ್ಯನಾಗಿರಲಿ. ಅವನ ಗತಕಾಲದ ದಿನಗಳನ್ನು ಅವನು ಇಂದಿನ ತನ್ನ ಬದುಕಿನೊಂದಿಗೆ ಗುರುತಿಸಿಕೊಳ್ಳುವುದು ಮತ್ತು ಅವುಗಳ ಪುನರ ಸಂಮಿಲನ ಮಾಡಿಕೊಳ್ಳುವುದು ಆಗಾಗ್ಗೆ ನಡೆಯುತ್ತಿರುವ ಅನುಸಂಧಾನವೇ ಸರಿ.

ನನಗೆ ಅನಿಸುತ್ತದೆ. ಇಂದಿನ ಮುಂದಿನ ನಮ್ಮ ಬಾಳ ಯಶಸ್ವಿ ನಿರ್ವಹಣೆಗೆ ಅಂದು ನಡೆದಾಡಿದ ಬದುಕಿನ ದಾರಿಗಳು ದಾರಿದೀಪವಾಗುತ್ತಿರಬೇಕು. ಅವುಗಳಲ್ಲಿ ನಾವುಗಳು ಕಲಿತ ಒಂದು ಪಾಠ, ಅವುಗಳಿಂದ ನಾವುಗಳು ಗಳಿಸಿದ ಒಂದು ನೀತಿ, ಅವುಗಳಿಂದ ನಾವುಗಳು ಪಡೆದ ಮಾನವ ಸಂಬಂಧಗಳು ನಮ್ಮನ್ನು ನಾವುಗಳು ಹೆಚ್ಚು ಹತ್ತಿರದಿಂದ ನೋಡಿಕೊಳ್ಳಲು ಸಹಕಾರಿಯಾಗುತ್ತವೆ ಅನಿಸುತ್ತದೆ. ಅದ್ದರಿಂದಲೇ ಆ ದಿನಗಳು ಹೆಚ್ಚು ಹೆಚ್ಚು ಹತ್ತಿರವಾಗಿ ಕಾಣುವುದು. ಮತ್ತು ಅವುಗಳು ನಮ್ಮವೇ ದಿನಗಳಲ್ಲವೇ ಅದ್ದರಿಂದ ಅವುಗಳು ನಮಗೆ ಮಾತ್ರ ಸೀಮಿತವಾದದ್ದವು. ನಾವುಗಳಲ್ಲದೇ ಅವುಗಳನ್ನು ಯಾರು ಪುನಃ ಕೇಳಬೇಕು.

ಇತಿಹಾಸ ಅಂದರೇ ಅದೇ ಅಲ್ಲವಾ.. ಚರಿತ್ರೆ ಎಂಬುದು ಪ್ರತಿಯೊಂದಕ್ಕೂ ಇರಲೇ ಬೇಕು. ಚರಿತ್ರೆ ಇಲ್ಲದಿದ್ದರೆ ವರ್ತಮಾನಕ್ಕೆ ಎಲ್ಲಿಯ ಬೆಲೆ? ವರ್ತಮಾನದ ವರ್ಚಸ್ಸು ಇತಿಹಾಸದಲ್ಲಿರುತ್ತದೆ. ಅದೇ ಇಂದಿನ ನಮ್ಮ ಬೆಳಗು. ಆ ಬೆಳಗು ಯಾವಾಗಲೂ ಜೀವ ಜ್ಯೋತಿಯೇ ಸರಿ!

ನಮ್ಮ ನಮ್ಮ ಚಿಕ್ಕ ಚಿಕ್ಕ ಒಂದೊಂದು ಕಳೆದ ಕ್ಷಣಗಳ ಹಳೆಯ ಮೋಟೆಯ ನೆನಪುಗಳ ಮೇಲಿನ ನಿಲ್ಲದ ಪಯಣ ಎಂದಿಗೂ ನಿಲ್ಲದೇ ನಿರಂತರ ಸಾಗುವ ಹಸಿರು ಉದ್ಯಾನ ಎಕ್ಸ್ ಪ್ರೇಸ್ ಊಗಿಬಂಡಿಯೇ ಸರಿ.

ಭಾನುವಾರ, ಜೂನ್ 5, 2011

ಸ್ವಾತಂತ್ರ್ಯ ಪೂರ್ವದಲ್ಲಿನ ಹೋರಾಟಗಾರರನ್ನು ನೆನಪಿಸಿದ ಘಟನೆ

ನಾವುಗಳೂ ಸಾವಿರಾರು ಮಾತುಗಳನ್ನು ಕಳೆದ ೬೦ ವರ್ಷಗಳಿಂದ ಅಲ್ಲಿ ಇಲ್ಲಿ ಸಿಕ್ಕಿದ ಕಡೆಯೆಲ್ಲಾ ಮಾತನ್ನಾಡುತ್ತಲೇ ಇದ್ದೇವೆ. ಅದೇ ನಮ್ಮ ರಾಜಕೀಯ ನಾಯಕರುಗಳು, ರಾಜಕೀಯ ವ್ಯವಸ್ಥೆ, ಸರ್ಕಾರ, ಸರ್ಕಾರದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಇತ್ಯಾದಿ ಇತ್ಯಾದಿಗಳ ಬಗ್ಗೆ ಸಿಕ್ಕಿದವರ ಜೊತೆಯಲ್ಲೆಲ್ಲಾ ನಮ್ಮ ಮನಸ್ಸಿನಲ್ಲಿನ ಒಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಇದ್ದೇವೆ.

ಆದರೇ ಅದು ಆ ಸಮಯಕ್ಕೆ ಮಾತ್ರ ಸೀಮಿತವಾದ ಒಂದು ಕ್ಷಣದ ಒಂದು ಸಿಟ್ಟಿನ ರೂಪಿನಲ್ಲಿ ಬಾಯಿಂದ ಬಂದು ಪುನಃ ನಾವುಗಳೇ ಈ ಒಂದು ವ್ಯವಸ್ಥೆಗೆ ಹೊಂದಿಕೊಂಡು ಬಿಟ್ಟಿದ್ದೇವೇನೋ ಎಂಬಂತೆ ಏನು ಆಗದ ರೀತಿಯಲ್ಲಿ ನಮ್ಮ ನಮ್ಮ ಜೀವನದ ಜಂಜಾಟದಲ್ಲಿ ಕಳೆದು ಹೋಗಿಬಿಟ್ಟಿರುತ್ತೇವೆ.

ಅದು ಸತ್ಯ ನಮಗೆ ನಮ್ಮದೇಯಾದ ಹತ್ತು ಹಲವು ಕೆಲಸಗಳು ಇರುತ್ತೇವೆ. ನಾವುಗಳು ನಮ್ಮ ದೇಶ, ನಮ್ಮ ವ್ಯವಸ್ಥೆಯ ಬಗ್ಗೆ ಚಿಂತಿಸುವುದಕ್ಕಿಂತ ನಾನು ನನ್ನ ಸ್ಥಿತಿಯ ಬಗ್ಗೆ ಚಿಂತಿಸುವುದೇ ಅಧಿಕ.

ಯಾವುದಾದರೊಂದು ಸಾಮಾಜಿಕ ಅನಿಷ್ಟವನ್ನು ನಾವು ಕಂಡಾಗ ನಮಗೆ ಆ ಕ್ಷಣಕ್ಕೆ ಬೇಸರವಾಗುತ್ತದೆ ಮತ್ತು ನಮ್ಮ ವ್ಯವಸ್ಥೆಯ ಬಗ್ಗೆ ನಮ್ಮ ಮನ ಕುದಿಯುತ್ತದೆ. ಮತ್ತು ಆದರ ವಿರುದ್ಧ ಯಾವ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕು ಎಂಬುದು ಗೊತ್ತಾಗುವುದಿಲ್ಲ.

ಚಿಕ್ಕದಾದ ಹೋರಾಟವನ್ನು ನಮ್ಮ ಮಟ್ಟಕ್ಕೆ ನಾವುಗಳು ಮಾಡಿರುತ್ತೇವೆ. ಯಾವುದೇ ಒಂದು ನೇರವಾದ ಮನಸ್ಸು, ಅದು ಸರಿಯಿಲ್ಲ ಎಂದು ಅನಿಸಿದರೇ ಸುಮ್ಮನೇ ಕೂರುವಂತೆ ಆಗುವುದಿಲ್ಲ. ಅದೇ ಅಲ್ಲವಾ ನಮ್ಮ ಸಂಸ್ಕೃತಿಯ ಜೀವಂತ ನೈತಿಕತೆಯ ಸ್ಪರ್ಷ!

ನಮ್ಮನ್ನು ಸ್ವಾತಂತ್ರ್ಯ ದಿನದಿಂದಲೂ ಕಾಡುತ್ತಿರುವ ಬಹು ದೊಡ್ಡ ಸಾಮಾಜಿಕ ಪೀಡುಗೆಂದರೇ ಭ್ರಷ್ಟಾಚಾರ - ಲಂಚ - ರುಷುವಾತ್. ಇದೊಂದು ಎಂದಿಗೂ ನಿಲ್ಲದ ನಿತ್ಯ ಜಾರಿಯಲ್ಲಿರುವ ಒಂದು ಅಘೋಷಿತ ಪದ್ದತಿಯಾಗಿದೆ. ಯಾವುದೇ ಒಂದು ಕೆಲಸ ಕಾರ್ಯಗಳನ್ನು ಸರ್ಕಾರದಿಂದ ಪಡೆಯಬೇಕೆಂದರೇ ಸಾಮಾನ್ಯ ಜನಗಳು ಸಮ್ ಥಿಂಗ್ ಕೊಡಲೇಬೇಕು.

ಯಾವುದೇ ಯೋಜನೆಗಳು ಜಾರಿಯಾಗಬೇಕೆಂದರೇ, ತಲುಪುವಂತಾಗಬೇಕೆಂದರೇ ದೊಡ್ಡ ಮಟ್ಟದಲ್ಲಿ ಆ ಯೋಜನೆಯು ಸಾಗುವ ಎಲ್ಲಾ ಅಧಿಕಾರಿ ವರ್ಗಗಳು ಸಾವಾಕಾಶವಾಗಿ ಮೇಯುತ್ತಾರೆ. ಕೊನೆಗೆ ಅದು ಜನ ಸಾಮಾನ್ಯರಿಗೆ ತಲುಪುವುದೇ ಇಲ್ಲವೇನೋ ಎಂಬ ಮಟ್ಟದಲ್ಲಿ ಭ್ರಷ್ಟಾಚಾರದ ಪರಿ ನಡೆದೆ ಬಿಟ್ಟಿರುತ್ತದೆ.

ಲಂಚ - ಹಣ ನಡೆಯುತ್ತಿರುವ ಜಾಗವೇ ಇಲ್ಲವೇನೋ ಅದು "ಸಾವಿಲ್ಲದ ಮನೆಯ ಸಾಸುವೆಯನ್ನು ತರುವಂತೆ" ಬುದ್ಧ ಹೇಳಿದ ಕಥೆಯಾಗುತ್ತದೆ!

ಇದು ನಮ್ಮ ನಮ್ಮಲ್ಲಿ ಮೈ ಪರಚಿಕೊಳ್ಳುವ ಸ್ಥಿತಿ. ಇದು ನಮ್ಮ ನಿಮ್ಮಂತಹ ಸಾಮಾನ್ಯ ಪ್ರಜೆಯು ಪಡುವ ಯಾತನೆ. ಏನೊಂದು ಮಾಡದ ಸ್ಥಿತಿ. ಯಾಕೋ ಏನೋ ನಮ್ಮ ವ್ಯವಸ್ಥೆಗೆ ಶಾಶ್ವಾತ ಅಂಗವಿಕಲತೆಯೇ ತಟ್ಟಿ ಬಿಟ್ಟಿದೆಯೇನೋ! ಇದಕ್ಕೆ ಚಿಕಿತ್ಸೆ ನೀಡುವ ಒಬ್ಬೇ ಒಬ್ಬ ನಾಯಕನು ಯಾರು ಎಲ್ಲಿ ಇದ್ದಾನೆ? ಎಂದು ದಾರಿಯನ್ನು ನೋಡಿ ನೋಡಿ ಸಾಕಾಗಿತ್ತು.

ಹಿಂದೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಾರಿ ತೋರಿಸುವ ನೂರಾರು ನಾಯಕರುಗಳು ಹುಲುಸಾಗಿ ಇದ್ದರು. ಅವರು ಹೇಳಿದರೆಂದರೇ ಒಂದು ವರ್ಗವೇ ಯಾವುದೇ ವಯೋಮಾನದವರಾದರೋ ಅವರ ಒಂದು ಕರೆಗಾಗಿಯೇ ಅವರ ಜೋತೆಯಲ್ಲಿ ಹೋರಾಡಲು ಸಿದ್ಧರಾಗುತ್ತಿದ್ದರು. ಇದೇ ಅಲ್ಲವಾ ಅಂಗ್ಲರಲ್ಲಿ ನಡುಕವನ್ನು ಹುಟ್ಟುವಂತೆ ಮಾಡಿದ್ದು. ನಿಜವಾಗಿಯೋ ಸಿಂಹಸ್ವಪ್ನರಾಗಿದ್ದ ಯುವ ನೇತರಾರು ಒಬ್ಬರಾ? ಇಬ್ಬರಾ? .. ಅದೆಲ್ಲಾ ಇತಿಹಾಸ ಬಿಡಿ.

ಅಂತೋ ಇಂತೋ ನಿನ್ನೇಯ ಬಾಬಾ ರಾಮದೇವರವರ ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣವನ್ನು ವಾಪಸ್ಸು ತರುವಂತೆ ಸರ್ಕಾರವನ್ನು ಒತ್ತಾಯಿಸಿ ನಡೆಸಿದ ಉಪವಾಸ ಸತ್ಯಾಗ್ರಹ.. ಅಲ್ಲಿ ಸೇರಿದ್ದ ಅಸಾಂಖ್ಯಾತ ಭಾರತೀಯರ ಉತ್ಸಾಹ.. ಬಾಬಾರವರ ದೇಶಪ್ರೇಮದ ಮಾತುಗಳು.. ಸರ್ಕಾರದ ನಡಾವಳಿ.. ಹಾಗೆಯೇ ಮಧ್ಯ ರಾತ್ರಿ ನಮ್ಮ ಭಾರತೀಯ ಪೋಲಿಸರುಗಳು ಬಾಬಾ ಮತ್ತು ನಿರಶನಕ್ಕೆ ಬಂದಿದ್ದ ಸಾವಿರಾರು ಮಹಿಳೆಯರು, ವೃದ್ಧರು, ಯುವಕರು, ಮಕ್ಕಳು, ಮರಿಗಳ ಮೇಲೆ ನಡೆಸಿದ ದಾಳಿಯನ್ನು ನೋಡಿದಾಗ ನಿಜವಾಗಿಯೋ ಇದು ನಮ್ಮ ಸ್ವಾತಂತ್ರ್ಯವನ್ನು ಹೊಂದಿರುವ ಪ್ರಜಾಪ್ರಭುತ್ವವನ್ನು ಹೊಂದಿರುವ ಭವ್ಯ ಗಣರಾಜ್ಯ ಭಾರತವಾ ಅಥವಾ ನಾವುಗಳು ಇನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಇರುವುವೇನೋ ಎಂದು ಅನುಮಾನ ಉಂಟಾಯಿತು.

ನಮ್ಮದೇ ಸರ್ಕಾರದ ನಮ್ಮವರೆಯಾದ ನಮ್ಮ ಪೋಲಿಸ್ ಅಧಿಕಾರಿಗಳು ನಿದ್ದೆಯಲ್ಲಿದ್ದ ನಮ್ಮದೇ ಜನಗಳನ್ನು ಒತ್ತಾಯ ಪೂರಕವಾಗಿ ಓಡಿಸಿದ್ದು. ಸ್ವಾತಂತ್ರ್ಯ ಪೂರ್ವ ಭಾರತದ ಬ್ರಿಟಿಷ್ ಸರ್ಕಾರದ ಅಧಿಕಾರಿಗಳ ವರ್ತನೆಯನ್ನು ನೆನಪಿಸಿತು. ನಿಜವಾಗಿಯೋ ಮನಸ್ಸೆಲ್ಲಾ ಕಸಿವಿಸಿಯಾಯಿತು. ಇಲ್ಲಿಯ ನಮ್ಮ ವ್ಯವಸ್ಥೆಯ ಬಗ್ಗೆ ಯಾವುದೇ ಭರವಸೆಯೇ ಇಲ್ಲವೇನೋ ಎಂಬಂತಾಯಿತು.

ಒಂದು ವ್ಯವಸ್ಥೆಯನ್ನು ಬದಲಾಯಿಸಲು ಎಷ್ಟು ಕಷ್ಟ ಎಂಬುದು ನಿನ್ನೇ ನಿರೂಪಿತವಾಯಿತು. ನಮ್ಮ ದೇಶಕ್ಕಾಗಿ ತಮ್ಮ ಜೀವವನ್ನೇ ಪಣವಿಟ್ಟು ೨೦೦ ವರ್ಷಗಳ ಕಾಲ ಬ್ರಿಟಿಷ್ ರನ್ನು ನಮ್ಮ ದೇಶದಿಂದ ಹೊರ ದಬ್ಬಲು ಎಷ್ಟು ಕಷ್ಟಪಟ್ಟಿರಬಹುದು ಎಂಬುದು ನಿನ್ನೇಯ ಘಟನೆ ಮನದಟ್ಟು ಮಾಡಿತು. ನಮ್ಮದೇ ಜನಗಳು ಶಾಂತವಾಗಿ ಹೋರಾಡುತ್ತಿದ್ದ ತಮ್ಮದೇ ಜನಗಳ ಮೇಲೆ ದೌರ್ಜನ್ಯವನ್ನು ಮಾಡಿದ್ದಂತೋ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯೇ ಸರಿ.



ನಾವುಗಳು ನಮ್ಮ ಸ್ಥಿತಿಯನ್ನು ಯಾವ ರೀತಿಯಲ್ಲಿ ಬದಲಾಯಿಸಬೇಕು ಎಂಬುದು ತುಂಬ ಕಷ್ಟವಾದ ವಿಷಯವೇ ಸರಿ. ಬದಲಾವಣೆಯನ್ನು ಯಾವ ಮಟ್ಟದಲ್ಲಿ ಎಲ್ಲಿ ತರಬೇಕು ಎಂಬುದು ದೇಶದ ಬಗ್ಗೆ ಕಾಳಜಿ ಇರುವವರು ಇನ್ನೂ ಜಾಗರುಕತೆಯಿಂದ ಯೋಚಿಸಿ ಹೆಜ್ಜೆಯನ್ನು ಇಡುವ ಕಾಲವಾಗಿದೆ ಇಂದಿನ ನಮ್ಮ ಈ ಪರಿಸ್ಥಿತಿ.

ಏನಾದರೂ ಚಳುವಳಿಯನ್ನು ಮಾಡಲು ಮುಂದೆ ಬರುವ ದೇಶ ಪ್ರೇಮಿಗಳಿಗೆ, ದೇಶದ ವ್ಯವಸ್ಥೆಯನ್ನು ಕಂಡು ಆಕ್ರೋಶಗೊಂಡು ತಮ್ಮ ಮಾತನ್ನು ಆಡದ ಸ್ಥಿತಿ ನಿರ್ಮಿತವಾಗುತ್ತಿದೆಯೇನೋ ಎನಿಸುತ್ತದೆ. ಒಂದು ಮಾತನ್ನಾಡಿದರೂ ಕಷ್ಟ. ಒಬ್ಬರ ಜೊತೆಯಲ್ಲಿ ನಿಂತರು ಕಷ್ಟ ಅನ್ನುವಂತಾಗುತ್ತದೆ. ಎಲ್ಲದಕ್ಕೂ ರಾಜಕೀಯ ದುರ್ಗಂಧವನ್ನು, ಧರ್ಮದ ಅಂಟನ್ನು, ಜಾತಿಯ ಕಲೆಯನ್ನು ಮೆತ್ತುವ ಕಾರ್ಯಗಳನ್ನು ಪ್ರಭಾವಿ ವ್ಯಕ್ತಿಗಳು ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ.

ತಮ್ಮ ಅಧಿಕಾರವನ್ನು ಯಾವ ರೀತಿಯಲ್ಲಿ ತಮಗೆ ಅನುಕೂಲಕರವಾಗಿ ಬಳಸಿಕೊಂಡು ಯಾವ ರೀತಿಯಲ್ಲಿ ಸಾಮಾನ್ಯರ ಹೋರಾಟವನ್ನು ಅದ್ದು ಬಸ್ತಿನಲ್ಲಿ ಇಡಬೇಕು ಆ ರೀತಿಯಲ್ಲಿ ಇಡುತ್ತಾರೆ.

ಮತ ನೀಡುವ ಪ್ರಭುವೇ ತನ್ನ ಶಕ್ತಿಯನ್ನು ಯೋಚಿಸುವಂತಾಗಿದೆ. ಇದು ಎಲ್ಲಿಯವರೆಗೆ? ಎಷ್ಟು ದಿನ?

ನನಗೆ ಎನಿಸುತ್ತಿದೆ ಬದಲಾವಣೆಯ ಹರಿಕಾರರ ಆಗಮನದ ಹೊಸ ಕಿರಣ ಹೆಚ್ಚು ಉಜ್ವಲವಾಗಿ ಇಂದು ಕಾಣಿಸುತ್ತಿದೆ. ಅವರುಗಳಿಗೆ ಸರಿಯಾದ ವೇದಿಕೆ ಬೇಕಾಗಿದೆ. ಅದು ಇಂದು ಹೆಚ್ಚು ಹೆಚ್ಚು ರೀತಿಯಲ್ಲಿ ಸಿಗುತ್ತಿದೆ. ಯಾಕೆಂದರೇ ಈ ರೀತಿಯಲ್ಲಿ ಅಣ್ಣ ಹಜಾರೆ, ಬಾಬಾ ರವರಿಗೆ ಸಾಮಾನ್ಯ ಜನಗಳಿಂದ ಸಿಗುತ್ತಿರುವ ಬೆಂಬಲವೇ ಸಾಕ್ಷಿ. ಸಾಮಾನ್ಯ ಭಾರತೀಯನ ಮನಸ್ಸು ಯಾವುದಕ್ಕಾಗಿ ಇಂದು ಕಾಯುತ್ತಿದೆ ಮತ್ತು ಏನನ್ನು ಬಯುಸುತ್ತಿದೆ ಎಂಬುದು.

ಇದು ಹೀಗೆ ಮುಂದುವರಿಯಲಿ ಮತ್ತು ಗಾಂಧಿ ಕಂಡ ರಾಮ ರಾಜ್ಯದ ಕನಸು ಕೆಲವೇ ದಿನಗಳಲ್ಲಿ ನನಸಾಗಲಿ ಎಂದು ಆಶೀಸುವುದು ಸಾಮಾನ್ಯ ಭಾರತೀಯನ ಮನಸ್ಸು!

ಗುರುವಾರ, ಜೂನ್ 2, 2011

ನಾನು ಆದರ್ಶ ಪುರುಷನಾಗದ ಹೊರತು, ಆದರ್ಶ ಸ್ತ್ರೀ ಎಲ್ಲಿಂದ ಬರುತ್ತಾಳೆ?





ಸ್ತ್ರೀ!

ಆಕೆಗೊಂದು ದೇಹವಿದೆ: ಅದಕ್ಕೆ ವ್ಯಾಯಾಮ ಬೇಕು.
ಆಕೆಗೊಂದು ಮಿದುಳಿದೆ: ಅದಕ್ಕೆ ಙ್ಞಾನ ಬೇಕು.
ಆಕೆಗೊಂದು ಹೃದಯವಿದೆ: ಅದಕ್ಕೆ ಅನುಭೊತಿ ಬೇಕು.



ಇದು ರವಿಬೆಳೆಗೆರೆಯವರ ಅನುವಾದಿತ ವಿಲಕ್ಷಣ ಸಾಹಿತಿ, ದೊಡ್ಡ ಚಿಂತಕ "ಚಲಂ" ರವರ ಆತ್ಮ ಚರಿತ್ರೆಯ ನೋಟ್ಸ್. ಯಾಕೋ ಇವುಗಳನ್ನು ನೋಟ್ ಮಾಡಿಕೊಳ್ಳಬೇಕು ಅನಿಸಿತು. ಎರಡನೇಯ ಭಾರಿ ಓದುವಂತೆ ಮಾಡಿದ ಮೋಡಿ ಪುಸ್ತಕ. ಹಾಗೆಯೇ ಕೆಲವೊಂದು ಪುಸ್ತಕಗಳು ಪುನಃ ಪುನಃ ಮನಸ್ಸಿಗೆ ಹತ್ತಿರವಾಗುತ್ತವೆ.

ರವಿಬೆಳೆಗೆಯವರು ತಮ್ಮ ಮುನ್ನುಡಿಯಲ್ಲಿಯೇ ಹೇಳಿಬಿಟ್ಟಿದ್ದಾರೆ. ಈ ವ್ಯಕ್ತಿಯನ್ನು ಅನುಕರಣೆ ಮಾಡುತ್ತೇವೆ ಎಂದು ಎಂದಿಗೂ ಹೋಗಬೇಡಿ. ಸುಮ್ಮನೇ ಓದಬೇಕಷ್ಟೇ. ಹಾಗೆ ಅನುಕರಣೆಯನ್ನು ಮಾಡಲು ನಮ್ಮ ನಿಮ್ಮಂಥ ಸಾಮಾನ್ಯ ಮನುಷ್ಯನಿಗೆ ಎಂದಿಗೂ ಸಾಧ್ಯವಿಲ್ಲ ಬಿಡಿ! ಇಗೋ ಬದುಕಿದ್ದಾರಾ ಅಂಥ ನಮ್ಮ ಮನಸ್ಸಿನಲ್ಲಿ ಕೇವಲ ಆಶ್ಚರ್ಯವನ್ನುಂಟು ಮಾಡುತ್ತಾರೆ ಸಾಹಿತಿ ಚಲಂ.

ಅನುವಾದ ಎನ್ನುವಂತೆಯೇ ಇಲ್ಲ. ಮೊಲ ಕೃತಿಯೇನೋ ಅನ್ನುವ ರೀತಿಯಲ್ಲಿ ರವಿಯವರ ಬರವಣಿಗೆ ಮನಸ್ಸಿಗೆ ಹಿತವಾಗಿದೆ.

ಹಾಗೆಯೇ ನನಗೆ ಯಾಕೋ ಈ ಪುಸ್ತಕವನ್ನು ಓದಿದಾಗ ಒಂದು ಕಡೆ ಈ ಸಾಲುಗಳನ್ನು ಎತ್ತಿಟ್ಟುಕೊಳ್ಳೋಣ ಎನಿಸಿತು. ಅದರ ಯಥಾವತ್ ಪುನಃ ಪುನಃ ನೆನಪಿಸಿಕೊಳ್ಳಲು.

"ಈ ಉದಾತ್ತ ಪುರುಷರಿದ್ದಾರಲ್ಲ ಚಲಂ? ಎಷ್ಟೇ ಉತ್ತಮರಾದರೊ ಹೆಣ್ಣು ಹಣದ ಗೀಳು ಅವರನ್ನು ಬಿಡದು". - ಪುಟ ೩೦

"ಅಸಲಿಗೆ ಆನಂದ ಎಂದರೇ ಏನು? ಏನೂ ಇಲ್ಲದೆ ಹೋಗುವುದೇ ಆನಂದವಲ್ಲ ತಿಳಿ. ಸಂತೋಷ ಬಂತು ಅಂದುಕೊಂಡರೆ, ಅದು ಆನಂದದೊಳಗಿನ ರೂಪವೇ. ಚಿಕ್ಕ ಮಕ್ಕಳು ತುಂಬ ಖುಷಿಯಾಗಿ ದಿನ ಕಳೆಯುತ್ತಾರೆ, ಅದರಲ್ಲೂ ಬಡವರ ಮಕ್ಕಳು, ಎಲೆ, ಕಲ್ಲು, ಮಣ್ಣು, ಬಳೆಯ ಚೂರು - ಹೀಗೆ ಏನು ಸಿಕ್ಕರು ಆದರೊಂದಿಗೆ ಆಡುತ್ತಾ ಕಾಲ ಕಳೆಯುತ್ತಾರೆ. ಈಡನ್ ಗಾರ್ಡನ್ ನಲ್ಲಿ ಆಯಡಮ್ ಮತ್ತು ಈವ್ ಹಾಗೆಯೇ ಕಾಲ ಕಳೆದಿರಬೇಕು. ಫಾರ್ ಬಿಡನ್ ಆಫಲ್ ತಿನ್ನುವ ತನಕ" -ಪುಟ ೩೫

"ಏನೋ ನಿರ್ಣಹಿಸಿಕೊಂಡು ಏನೋ ಮಾಡುತ್ತೇವೆ ಅಂದುಕೊಳ್ಳುತ್ತೇವೆ. ಆದರೆ ನಿರ್ಣಯಿಸಿವವವರು ನಾವಲ್ಲ" - ಪುಟ ೪೧

"ಒಬ್ಬೊಬ್ಬರು ಒಂದೊಂದು ಗಟ್ಟಿಯಾದ ಇನ್ ಕ್ಲಿನೇಷನೊಂದಿಗೆ ಹುಟ್ಟುತ್ತಾರೆ. ಅದು ಧರ್ಮವೇನಾ ಅಂತ ನಿರ್ಧರಿಸಿಕೊಳ್ಳಲು ಎಷ್ಟೋ ರೀತಿಯಾಗಿ ಪ್ರಯತ್ನಿಸುತ್ತಾರೆ. ಆದರೆ ಒಂದೊಂದು ಕಾಂಕ್ಷೆ ಏನು ಮಾಡಿದರೂ ಬೆನ್ನು ಬಿಡುವುದಿಲ್ಲ. ಇದು ಎಷ್ಟು ಜನ್ಮಗಳಿಂದ ತಂದುಕೊಂಡದ್ದೋ ಅನ್ನಿಸಿಬಿಡುತ್ತದೆ. ಕೊನೆಗೆ ಆ ಮನುಷ್ಯನೊಂದಿಗೇ ಅದು ಭಸ್ಮವಾಗಬೇಕೆನೋ? ಅಥವಾ ಆಗಲೂ ಉಳಿದು ಹೋಗುತ್ತದಾ?" - ಪುಟ ೪೭

"ಮನುಷ್ಯನ ದುಃಖ ಆತನ ಪ್ರೇಮದ ತೀವ್ರತೆಯ ಮೇಲೆ ಆಧಾರ ಪಟ್ಟಿರುತ್ತದೆ" - ಪುಟ ೮೦

"ನಾನು ಅನ್ನೋದು ಹೋಗದ ಹೊರತು ಙ್ಞಾನೋದಯವಿಲ್ಲ ಅಂತಾರೆ ಭಗವಾನ್" ಅಂದೆ "ನಾನು" ಅನ್ನುವುದು ಎಲ್ಲಿ ಮಾಯವಾಯಿತು? ಚಲಂ ಮನಸ್ಸಿನಲ್ಲಿನ ಸ್ತ್ರಿಯಲ್ಲಿ, ಮಕ್ಕಳಲ್ಲಿ ಅದು ಉಳಿದೇ ಇದೆ. -ಪುಟ ೯೬

ಮನುಷ್ಯನಲ್ಲಿ "ನಾನು" ಅನ್ನೋದು ಮೊದಲನೆಯದು ಅಂತಾರೆ ಭಗವಾನ್. ಅದರಿಂದಲೇ ಉಳಿದೆಲ್ಲ ಆಲೋಚನೆಗಳು ಹುಟ್ಟಿಕೊಂಡವು. "ನಾನು" ಅನ್ನುವುದರಿಂದಲೇ ಅಙ್ಞಾನ, ಪಾತಕ, ದುರ್ಮಾರ್ಗ, ಮಮತೆಗಳು ಎಲ್ಲ ಹುಟ್ಟಿಕೊಳ್ಳುತ್ತವೆ ಅನ್ನುತ್ತಾರೆ. -ಪುಟ ೧೧೨

"ಎಂಥ ಸುಖೀ ಸಂಸಾರದಲ್ಲಿ ಕೊಡ ಒಬ್ಬ ಹೆಣ್ಣು ತನಗೇ ಅರ್ಥವಾಗದ ಯಾತನೆಗಳಲ್ಲಿ ಸಿಕ್ಕುಗಳಲ್ಲಿ ಸಿಕ್ಕಿಕೊಂಡಿರುತ್ತಾಳೆ" - ಪುಟ ೧೪೫

"ನಾನು ಆದರ್ಶ ಪುರುಷನಾಗದ ಹೊರತು, ಆದರ್ಶ ಸ್ತ್ರೀ ಎಲ್ಲಿಂದ ಬರುತ್ತಾಳೆ?" - ಪುಟ ೧೫೦

"ಮನುಷ್ಯನಲ್ಲಿ ಸ್ನೇಹ, ದಯೆ, ಏಕೋಭಾವ - ಇವೆಲ್ಲವೂ ಸಂಸ್ಕಾರವೇ" - ಪುಟ ೧೬೬

"ಏನು ಮಾಡಬೇಕು ಮತ್ತು ಏನಾಗುತ್ತಾರೆ ಅನ್ನುವುದು ಸಂಸ್ಕಾರ. ಏನು ಮಾಡಬೇಕು ಅಂತ ಹೇಳಿ ಕೊಡುವುದು ಓದು" - ಪುಟ ೧೬೭

"ಬದುಕೆಂದರೆ ಗೊತ್ತಿಲ್ಲದ ಗುರಿಯಿಲ್ಲದ ಹಾದಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕುತ್ತಾ ಹೋಗುವ ನಿರಂತರ ಪಯಣವಾ? ಹಾಗೆ ಸಾಗುತ್ತಾ ಸಾಗುತ್ತಾ ಸಿಕ್ಕಿದ್ದನ್ನೇ ನಮಗೆ ಬೇಕಾದದ್ದು ಅಂದುಕೊಂಡು ಬಿಡುತ್ತೇವಾ? ಪ್ರೀತಿಯಲ್ಲೂ ಅಷ್ಟೇನಾ? ನಾವು ಪ್ರೀತಿಸಿದವರು ಸಿಕ್ಕದೇ ಹೋದಾಗ, ಸಿಕ್ಕವರನ್ನೇ ಪ್ರೀತಿಸುವುದು ರಾಜಿಯಾ? ಅಸಹಾಯಕತೆಯಾ? ಅನಿವಾರ್ಯ ಕರ್ಮವಾ? ವಿಧಿಯಾ? ಅಥವಾ ಬದುಕಿನ ವಿಲಕ್ಷಣ ವರ್ತನೆಗಳಲ್ಲಿ ಅದೂ ಒಂದಾ?" - ಪುಟ ೧೮೭

ಅನುಭವಿಸುವುದು ಅಂದರೆ ಅದು ಔನ್ನತ್ಯವಿಲ್ಲದ್ದು, ಮನುಷ್ಯನಲ್ಲಿ ಅಳವಿಲ್ಲದ್ದು. ಎಂಥ ಅದ್ಭುತ ಅನುಭವಗಳು ಮೇಲ್ಮೇಲಿನಿಂದ ಬಂದರೂ ಅವನಿಗೆ ಅವು ಏನನ್ನೂ ಕೊಡಲಾರವು. ಮೆಂಟಲ್ ಸರ್ಪೇಸ್ ನಿಂದ ಜಾರಿ ಹೋಗುತ್ತವೆ. "ಅಯ್ಯೋ ನತದೃಷ್ಟಾ" ಅಂತ ನಕ್ಕು ಹೊರಟು ಹೋಗುತ್ತವೆ. ಸ್ತ್ರೀ ವಿಷಯದಲ್ಲಂತೂ ಇದು ಮತ್ತು ಸತ್ಯ. ಅವಳು ಬೇಕು, ಅನುಭವಿಸಬೇಕು ಅಂದುಕೊಂಡರೆ, ಆ ಕಾಂಕ್ಷೆಯಿಂದಾಗಿಯೇ ಅರ್ಧ ಸಂತೋಷ, ಹಿರಿಮೆ ಸತ್ತು ಹೋಗುತ್ತದೆ. ಅದ್ದರಿಂದ "ಅನುಭವಿಸು" ಎಂಬುದರಲ್ಲಿ ಅರ್ಥವಿಲ್ಲ. - ಪುಟ ೧೦೪


ಆಧಾರ ಗ್ರಂಥ: ಚಲಂ ರವಿಬೆಳೆಗೆರೆ. ಭಾವನ ಪ್ರಕಾಶನ, ಬೆಂಗಳೂರು.