ಗುರುವಾರ, ಮೇ 26, 2011

ಬದುಕಿನ ಅಸ್ತವ್ಯಸ್ಥ ಕೋಲಾಜ್



ಪ್ರಕೃತಿಯನ್ನು ನೋಡಿ ಮನುಷ್ಯ ಕಲಿಯಬೇಕೆನೋ.. ಅದು ಕಾಲಕ್ಕೆ ತಕ್ಕ ಹಾಗೇ ಏನೂ ಏನೂ ಯಾವ ಕಾಲಕ್ಕೆ ನಡೆಯಬೇಕೋ.. ಏನೂ ಏನೂ ಬದಲಾವಣೆಯನ್ನು ತನ್ನಲ್ಲಿ ತರಬೇಕು ಅದು ತರುತ್ತದೆ. ಋತು ಚಕ್ರದ ಹಾದಿಯಲ್ಲಿ ತನ್ನ ಪಯಣವನ್ನು ಚಾಚೂ ತಪ್ಪದೇ ತನ್ನ ಕಾಯಕವನ್ನು ಹೊಸತನಕ್ಕೆ ಒಡ್ಡಿಕೊಂಡು ತನ್ನಲ್ಲಿ ತಾನೇ ಸಂಭ್ರಮವನ್ನು ಪಡುತ್ತಾ ಮುಕ್ಕೋಟಿ ಜೀವಿಗಳಿಗೂ ಅದರ ಸವಿಯನ್ನು ಉಣಬಡಿಸುತ್ತದೆ.

ಕಳೆದ ಎರಡು ತಿಂಗಳ ಮದ್ಯಾನದ ಬೀರು ಬಿಸಿಲನ್ನು ಕಂಡ ಬೆಂಗಳೂರು ಮೇಟ್ರೂ ಮಂದಿ ನಿಡುಸುಯ್ದುಬಿಟ್ಟಿದ್ದರೂ.. ಅಬ್ಬಾ ಯಾವಾಗ ಮಳೆಗಾಲವನ್ನು ಕಂಡೆವೋ ಎಂದು ಮುಗಿಲನ್ನು ನೋಡುತ್ತಿದ್ದರೂ.

ಏನೇ ನಮ್ಮ ತಂತ್ರಙ್ಞಾನದ ಕೊಡುಗೆಯಾದ ಎ.ಸಿ, ಕೂಲರ್ ಇದ್ದರೂ ಪ್ರಕೃತಿ ಸಹಜವಾದ ಹಿತವಾದ ತಣ್ಣನೆಯ ಸಿಹಿಗಾಳಿಯ ಮುಂದೆ ಸರಿ ಸಮಕ್ಕೆ ಬರಲಾರವು. ಅಲ್ಲಿರುವ ನೆಮ್ಮದಿ ಇವುಗಳಿಂದ ನಮಗೆ ಸುಖವಿಲ್ಲ ಎಂಬಂತೆ ಉಸ್! ಎಂದು ಪರಿತಪಿಸಿದ್ದೇ ಪರಿತಪಸಿದ್ದು.

ಇದನ್ನು ನೋಡಿ ಪ್ರಕೃತಿ ಮಾತೆಯ ಮನ ಕರಗಿತೋ! ಎಂಬಂತೆ ಕಳೆದ ಮೂರು ವಾರಗಳಿಂದ ಬೆಂಗಳೂರಿನಲ್ಲಿ ಹಗಲೂ ಸುಡು ಬಿಸಿಲು ಇದ್ದರೂ ಸಂಜೆಯಾಗುತ್ತಿದ್ದಂತೆ ಮೊಡ ಕವಿದು ದೋ ಎಂಬಂತೆ ನಿತ್ಯ ಮಳೆ, ಗುಡುಗು ಸಿಡಿಲುಗಳ ನರ್ತನ ಚಿಕ್ಕದಾಗಿ ಜಳ ಪ್ರಳಯವೇನೋ ಎಂಬಂತೆ ಎಲ್ಲಿ ಎಲ್ಲಿ ನೀರು ಹರಿಯಬೇಕು ಆ ಜಾಗ ಬಿಟ್ಟು ರಸ್ತೆಗಳೇ ದೊಡ್ಡ ಚರಂಡಿಗಳಾಗಿ ಮಾರ್ಪಾಡಾಗಿ ಒಂದು ಎರಡು ಮಾನವ ಜೀವಗಳ ಬಲಿ!

ಇದು ನಮ್ಮ ನಗರದಲ್ಲಿ ಮಳೆ ಬಂದರೇ ಸಾಮಾನ್ಯವಾಗಿ ಕಾಣುವ ಕಣ್ಣೀರ ಕಥೆ.. ಕೇಳುವವರು ಯಾರು?

ನಿಸರ್ಗ ಮನುಷ್ಯನಿಗೆ ಯಾವ ಸಮಯಕ್ಕೆ ಯಾವುದನ್ನು ಕೊಡಬೇಕು ಅದನ್ನು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗಳು ತಾವು ಕೇಳದಿದ್ದರೂ ತನ್ನಿಷ್ಟಕ್ಕೆ ತಾನೇ ಯಾವುದೇ ಬೇದಭಾವವಿಲ್ಲದೆ ದಯಪಾಲಿಸುತ್ತದೆ. ಅಷ್ಟರ ಮಟ್ಟಿಗೆ ನಾವುಗಳು ನಿಸರ್ಗ ಮಾತೆಗೆ ಋಣಿಯಾಗಿರಲೇಬೇಕು.

ನಿಸರ್ಗವೇ ಬದಲಾವಣೆಯ ಹರಿಕಾರನಾದ ಮೇಲೆ ನಮ್ಮಂತಹ ಹುಲು ಮಾನವನ ಪಾಡು ಯಾರು ಕೇಳಬೇಕು. ತಾನು ಸಹ ಹೊಸತನಕ್ಕೆ ನಿತ್ಯ ಒಡ್ಡಿಕೊಳ್ಳಬೇಕು. ಆಗಲೇ ಬದುಕಿಗೊಂದು ಅರ್ಥವಂತಿಕೆ ಬರುವುದು. ತಾನು ಎಷ್ಟರ ಮಟ್ಟಿಗೆ ಯಾವಾವುದರಲ್ಲಿ ಹೇಗೆ ಮುಂದುವರಿದಿದ್ದೇನೆ ಮತ್ತು ಬೆಳೆದಿದ್ದೇನೆ ಎಂಬುದರ ಲೆಕ್ಕ ಸಿಗುವುದು.

ಇಲ್ಲವಾದರೇ ನಮ್ಮ ಜೀವಿತದ ಪ್ರತಿಯೊಂದು ನಿಮಿಷವು ಪೂರಾ ಬೋರ್ ಮತ್ತು ನೀರಸವಾದ ನಿರ್ಜೀವಂತಿಕೆಯಾಗುತ್ತದೆ.

ತನ್ನ ಸುತ್ತಲಿನ ತನ್ನಲ್ಲಿನ ತನ್ನ ಕೈಗೆ ಎಟುಕುವಷ್ಟರ ಮಟ್ಟಿಗೆ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಪ್ರತಿಯೊಂದು ಜೀವಿಯು ತನ್ನನ್ನು ಹೊಸ ತುಡಿತಕ್ಕೆ ಅರ್ಪಿಸಿಕೊಂಡು ಜೀವನದ ಸಾರ್ಥಕತೆಯನ್ನು ಕಾಣುತ್ತದೆ. ಕಾಣಲೇಬೇಕು ಅಲ್ಲವಾ?

ಈ ಯುಗದ ಹಾದಿಯ ಕಾಲನ ಚಕ್ರದಲ್ಲಿ ೧೨ ತಿಂಗಳುಗಳು ವಿವಿಧ ರೀತಿಯಲ್ಲಿ ನಮಗೆಲ್ಲಾ ಸಿಗುತ್ತಿರುತ್ತವೆ. ಒಟ್ಟು ವರುಷದ ಒಂದು ಸಾಧನೆಯ ಪಟ ನಾವುಗಳು ವರುಷದ ಪ್ರತಿಯೊಂದು ದಿನವನ್ನು ಹೇಗೆ ಉಪಯೋಗಿಸಿಕೊಂಡು ನಮ್ಮವನ್ನಾಗಿ ಮಾಡಿಕೊಂಡೇವೋ ಎಂಬುವುದರ ಮೇಲೆ ನಿಂತಿರುತ್ತದೆ.

ನಮ್ಮ ಈ ಯಾಂತ್ರಿಕತೆಯ ಬದುಕಿನಲ್ಲಿ ನಾವುಗಳು ನಮ್ಮ ಕಳೆದ ದಿನಗಳನ್ನು ನೋಡಿಕೊಂಡರೇ ಮುಂದೆ ಬರುತ್ತಿರುವ ದಿನಗಳನ್ನು ಹೇಗೆ ಕಳೆಯಬೇಕಾಪ್ಪ ಎಂಬ ಭಯವಂತೂ ಬಂದೇ ಬರುತ್ತದೆ. ಯಾಕೆಂದರೇ ಅದೇ ಬೆಳಗು ಅದೇ ರಾತ್ರಿ.. ಅದೇ ಕೆಲಸ.. ಅದೇ ರಸ್ತೆ.. ಅದೇ ಮಾತು.. ಅದೇ ಗೆಳೆಯರು.. ಅದೇ ನಡಾವಳಿ.. ಅದೇ ಬೇಸರ..

ಎಲ್ಲಾ ಬೇಸರ!

ಒಂದೀಷ್ಟು ಹೆಚ್ಚು ಕಡಿಮೆ ಇಲ್ಲದ ನಮ್ಮ ಬದುಕು. ಕೆಲಸವೇ ಬದುಕು. ಅದು ಒಪ್ಪುವ ಮಾತೇ. ಮನುಷ್ಯ ಎಂದರೇ ತಾನು ದುಡಿಯಬೇಕು. ತನ್ನವರನ್ನು ಸಾಕಬೇಕು. ಅದಕ್ಕಾಗಿ ಅದೇ ಅವನ ಬದುಕಾಗಬಾರದು ಅಲ್ಲವಾ? ದುಡಿತದ ಜೊತೆಗೆ ತನ್ನವರ ಜೊತೆ ತಾನು ಸಂಭ್ರಮದಿಂದ ಜೀವಿಸುವುದು ಯಾವಾಗ?

ದಿನದ ಮುಕ್ಕಾಲುಪಾಲು ಸಮಯವನ್ನು ತನ್ನ ಕಾಯಕದಲ್ಲಿ ಕಳೆದು ಬಸವಳಿದು ಯಾವೊಂದು ಮಾತೇ ಇಲ್ಲದೆ ಮೌನಕ್ಕೆ ಶರುಣು ಎನ್ನುವಂತ ಸ್ಥಿತಿ!

ಯೋಚಿಸಿ ನಾವುಗಳು ಎಷ್ಟರ ಮಟ್ಟಿಗೆ ನಿತ್ಯ ಏನಾದರೂ ಹೊಸ ವಿಚಾರ, ಮಾತು,ಪದಗಳು, ನೋಟ, ಗೆಳೆತನ, ಯೋಚನೆ, ದಾರಿ, ಸ್ಥಳ ಇತ್ಯಾದಿಗಳನ್ನು ಏನಾದರೂ ಮಾಡುತ್ತೇವೆಯೇ?

ಸಾಮಾನ್ಯವಾದ ಉತ್ತರ "ಇಲ್ಲ!"

ನಾವುಗಳು ನಮ್ಮ ಸುತ್ತಲಿನ ಪ್ರಪಂಚದಲ್ಲಿ ನಿತ್ಯ ಉಪಯೋಗಿಸುವ ಪದಗಳನ್ನು ಪಟ್ಟಿ ಮಾಡಿದರೇ ಅವೇ ಅವೇ ಬೋರ್ ಹೊಡೆಸುವ ಅತಿ ಚಿಕ್ಕದಾದ ಒಂದು ಪಟ್ಟಿಯನ್ನು ಯಾವಾಗಲೂ ಕಳೆದ ಹಲವು ವರ್ಷಗಳಿಂದ ಬಳಸುತ್ತಾ ಬಳಸುತ್ತಾ ಬಂದಿದ್ದೇವೆ. ಯಾಕೆಂದರೇ ನಮ್ಮ ಕೆಲಸಕ್ಕೆ ನಮ್ಮವರ ಜೊತೆಯಲ್ಲಿ ಹಗುರವಾಗಿ ಯಾವುದೇ ತೊಂದರೆಯಿಲ್ಲದ ನಮ್ಮ ಕಾಯಕವನ್ನು ನಿರ್ವಹಿಸಲು ಅದು ಹೆಚ್ಚಾದಂತೆಯೇ ಸರಿ.

"ಎಷ್ಟೊಂದು ಹೊಸತನದ ಕಿರಣಗಳನ್ನು ನಾವುಗಳು ಈಗಾಗಲೇ ಮಿಸ್ ಮಾಡಿಕೊಂಡಿದ್ದೇವೆ!"

ಇದು ತಿಳಿಯುವುದು ಯಾವಾಗಲಾದರೂ ಯಾವುದಾದರೂ ಹೊಸ, ಹಳೆಯ ಪುಸ್ತಕವನ್ನು ಓದಿದಾಗ, ಮೋವಿಯನ್ನು ನೋಡಿದಾಗ, ಅಪರಿಚಿತ ಸ್ಥಳಕ್ಕೆ ಬೇಟಿ ಕೊಟ್ಟಾಗ.. ಹೀಗೆ ನಮ್ಮ ಮನಸನ್ನು ಪ್ರಫುಲತೆಯಿಂದ ಇಡುವ ಜೀವನದ ಬಹುಮುಖ್ಯ ಅಂಶಗಳನ್ನು ನಾವುಗಳು ಪೂರ್ಣವಾಗಿ ಮರೆತೆ ಬಿಟ್ಟಿದ್ದೇವೆ ಎನ್ನಬಹುದು.

ಯೋಚಿಸಿ ನಮ್ಮ ಹಳ್ಳಿಗಳಲ್ಲಿ ಉಪಯೋಗಿಸುತ್ತಿದ್ದ ವಿವಿಧವಾದ ಕನ್ನಡ ಪದಗಳು ಇಲ್ಲಿನ ನಮ್ಮ ನಗರ ಜೀವನದಲ್ಲಿ ಮರೆತೆ ಬಿಟ್ಟಿದ್ದೇವೆ.

ಯಾವಗಲಾದರೊಮ್ಮೆ ಹಳ್ಳಿಯ ಪ್ರಕೃತಿ ಜೀವಿಯ ಮಾತುಗಳನ್ನು ಕೇಳಿದರೇ ನಾವುಗಳು ಆಶ್ಚರ್ಯಪಡುವುದನ್ನು ಬಿಟ್ಟು ಏನೊಂದು ಮಾಡಲಾರೆವು. ಅಲ್ಲಿ ಉಪಯೋಗಿಸುತ್ತಿದ್ದ ಕನ್ನಡ ಪದಗಳು.. ಹೊಸ ಹೊಸ ಗಾದೆಗಳು, ಒಗಟುಗಳು, ಅಸಾಂಖ್ಯಾತವಾದ ಗಿಡ, ಮರ, ಹೊ, ಹಣ್ಣುಗಳ ಹೆಸರು.. ಪಶು ಪಕ್ಷಿಗಳ ಹೆಸರು.. ಹೊಲ, ಗದ್ದೆಗಳ ಹೆಸರು.. ವ್ಯಕ್ತಿಗಳ ಅಡ್ಡ ಹೆಸರು.. ಯಾವುದೇ ಖರ್ಚು ಇಲ್ಲದೇ ಆಡುತ್ತಿದ್ದ ಎಷ್ಟೋ ಆಟಗಳ ಹೆಸರು.. ಪ್ರತಿಯೊಂದು ಮನೆಯ ಮನೆತನದ ಹೆಸರು.. ಹೀಗೆ ನೂರಾರು ಸೂಕ್ಷ್ಮವಾದ ಶಬ್ಧ ಭಂಡಾರವನ್ನು ಮತ್ತು ಅಪರೂಪವಾದ ವಿಷಯಗಳನ್ನು ನಿಜವಾಗಿಯೋ ನಾವುಗಳು ಕಳೆದುಕೊಂಡುಬಿಟ್ಟಿದ್ದೇವೆ ಎಂದು ಅನಿಸುತ್ತಿದೆ.



ಇದು ಒಂದು ಉದಾಹರಣೆ ಹೀಗೆ ನಾವುಗಳು ನಮಗೆ ಗೊತ್ತಿಲ್ಲದ ರೀತಿಯಲ್ಲಿ ನೂರಾರು ಸುಂದರ ನವನವೀನತೆಗೆ ಸಂಬಂಧಿಸಿದ ಅಂಶಗಳನ್ನು ಗಾಳಿಗೆ ತೂರಿಬಿಟ್ಟಿದ್ದೇವೆ ಅನಿಸುತ್ತದೆ. ನಿಜಾ! ಅವುಗಳ ಜರೂರತು ಇಲ್ಲಿ ಇಂದಿನ ಸಮಯದಲ್ಲಿ ಬೇಕಾಗಿಲ್ಲ. ಅದರೇ ನಮ್ಮಲ್ಲಿ ಇಂದಿನ ಬದುಕು ಯಾಕೆ ಎಷ್ಟೊಂದು ನೀರಾಸ ಜಡತೆ ಇದೆ ಎಂದು ಒಮ್ಮೆಯಾದರೂ ಅನಿಸಿರುವುದಿಲ್ಲವೇ? ನೀವೇ ಹೇಳಬೇಕು.

ನಾವುಗಳು ಅಭಿವೃದ್ಧಿ ಅಭಿವೃದ್ಧಿ ಎನ್ನುತ್ತಾ.. ಹತ್ತು ಹಲವು ಜನಮಿಡಿತದ ಸೂಕ್ಷ್ಮಗಳನ್ನು ಕಡೆಗಾಣಿಸುತ್ತಿದ್ದೇವೋ ಎನಿಸುತ್ತಿದೆ. ಯಾವುದನ್ನು ನಾವುಗಳು ನಮ್ಮ ಮನೆಯಲ್ಲಿ ಕೇಳುತ್ತಿದ್ದೇವೋ ನಾವುಗಳು ಅವುಗಳನ್ನು ಬಳಸುತ್ತಿದ್ದೇವೋ ಅವುಗಳನ್ನು ಮುಂದೆ ನಮ್ಮ ಡಿಜಿಟೆಲ್ ವಸ್ತುಗಳ ಮೊಲಕ ಕೇಳಿ ಹೌದಾ! ಹೀಗೋ ಇತ್ತಾ ಎಂದು ಹುಬ್ಬೇರಿಸುವುದೊಂದೆ ಬಾಕಿ ಇರುವುದು.

ಇಲ್ಲಿನ ನಮ್ಮಗಳ ತುಡಿತ ಪೂರ್ಣವಾಗಿ ನಾವುಗಳು ನಮ್ಮ ಸ್ಥಿತಿಯನ್ನು ಹಣಕಾಸುಗಳಲ್ಲಿ, ನಮ್ಮ ವೃತ್ತಿಪರತೆಯಲ್ಲಿ ಕಾಣುವಂತಾಗುತ್ತಿದೆ. ಆದರೋ ಇದು ನಿಜವಲ್ಲವಾ ಎನ್ನಬಹುದು. ಮನುಷ್ಯ ಸುಖವಾಗಿ ಜೀವಿಸಲೂ ಇದು ಮುಖ್ಯವಲ್ಲವಾ ಎನ್ನಬಹುದು. ಅದು ಸತ್ಯ! ಇದು ಬೇಕು. ಅದರೋ ಇದು ಮತ್ತು ಆ ರೀತಿಯ ಮಾನವ ಸಂಬಂಧಗಳ ಜೊತೆಯಲ್ಲಿ ಇರುವ ಒಂದು ನಲಿವಿನ ಮಾತುಗಳ ತೆಳು ಪರದೆ ಎಲ್ಲರ ಬದುಕಿನಲ್ಲಿ ಇರಲೇಬೇಕು ಎಂಬ ಆಸೆ ಎಲ್ಲಾರದಾಗಬೇಕು.



ಇಂದು ಪ್ರತಿಯೊಬ್ಬ ಯುವಕ ಯುವತಿಯರ ಗುರಿ ತಾನು ಓದಬೇಕು.. ದೊಡ್ಡ ಮೊತ್ತದ ಕೆಲಸವನ್ನು ಗಳಿಸಬೇಕು. ಇದಕ್ಕಾಗಿ ಇರುವ ದಾರಿಯಲ್ಲಿ ಬರುವ ಯಾವುದಾದರನ್ನು ಪೂರಕವಾಗಿ ಏನೇ ತೊಂದರೆಯಾದರೂ ತನ್ನದನ್ನಾಗಿ ಮಾಡಿಕೊಂಡು ಅತಿ ಎತ್ತರಕ್ಕೆ ಏರಬೇಕು. ಇದೇ ದೊಡ್ಡ ಕನಸು.

ಅಲ್ಲಿಯು ಸಹ ಹೆಚ್ಚು ದಿನಗಳನ್ನು ಕಳೆಯಲಾರನು.. ಪುನಃ ಮತ್ತೇ ದೊಡ್ಡ ಮೊತ್ತದ ದೊಡ್ಡ ಜವಾಬ್ದಾರಿಯ ಕೆಲಸವನ್ನು ಗಳಿಸಬೇಕು ಎಂಬ ಮನದ ಹಂಬಲ. ಇದೆ ಹೊಸತನಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುವ ದಾರಿಯೆಂಬ ನೀತಿ. ಇದೆಲ್ಲಾ ಬೆಂಗಳೂರಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಬಹುಮುಖ್ಯ ಕನಸು.

ಆದರೋ ತಮ್ಮ ತಮ್ಮಲ್ಲಿಯೇ ಇದರ ಹೊರತಾಗಿ ಮನದಲ್ಲಿ ಪ್ರೀತಿ, ಪ್ರೇಮ, ಮದುವೆ, ಸ್ನೇಹ ಬಂಧನಗಳು ನಿತ್ಯ ಹೊಸತನದ ಹಾದಿಯಲ್ಲಿ ಬರುತ್ತ ಇರುತ್ತವೆ. ಬರಲೇಬೇಕು. ಜೀವಿಗಳು ಇವುಗಳಿಗೂ ತಮ್ಮ ಸಮಯವನ್ನು ಎತ್ತಿ ಇಟ್ಟು ಅದನ್ನು ನಡೆಸಿಕೊಂಡು ಹೋಗಲೇಬೇಕು.

ಹುಡುಗನಿಗೆ ಹೊಸ ಹುಡುಗಿಯನ್ನು ಗಳಿಸಬೇಕೆಂಬ ಆಸೆ. ಹುಡುಗಿಗೆ ತಾನು ಮೆಚ್ಚಿದ ಹುಡುಗನು ಸಿಗಲಿ ಎಂಬ ಕನಸು. ಹೆತ್ತವರಿಗೆ ತಮ್ಮ ಮಕ್ಕಳಿಗೆ ಸರಿಯಾದ ಸಮಯಕ್ಕೆ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಂಡರೆ ಸಾಕಾಪ್ಪಾ ಎಂಬ ಕನಸು. ಮದುವೆಯಾದ ಜೋಡಿಗಳಿಗೆ ತಮ್ಮ ಮಕ್ಕಳು ಮರಿಯನ್ನು ಹೆತ್ತು ಅವುಗಳನ್ನು ಯಾವ ಯಾವ ಸ್ಕೋಲುಗಳಿಗೆ ಕಳಿಸಬೇಕು ಎಂಬ ಕನಸು. ಹೊಸ ಸಂಬಳ ಬಂತು.. ಹೊಸ ಬೋನಸ್ ಬಂತು.. ಹಳೆ ಬಾಡಿಗೆ ಮನೆಯನ್ನು ಬಿಟ್ಟು .. ಚೆನ್ನಾಗಿರುವ ಹೊಸ ಬಾಡಿಗೆ ಮನೆಯನ್ನು ಯಾಕೆ ತೆಗೆದುಕೊಳ್ಳಬಾರದು ಎಂಬ ಕನಸು.. ಅದೇ ಹಳೆಯ ಮೋಟರ್ ಸೈಕಲ್ ನಲ್ಲಿ ಓಡಾಡಿ ಓಡಾಡಿ ಈಗಲಾದರೂ ಪೂರ್ಣ ಸಂಸಾರ ಒಟ್ಟಿಗೆ ಕುಳಿತು ಓಡಾಡುವಂತಹ ಹೊಸ ಕಾರು ಕೊಳ್ಳುವ ಕನಸು.. ಹೀಗೆ ತರಾವೇರಿ ಕನಸುಗಳು ಈ ಪ್ರಕೃತಿಯ ಋತು ಚಕ್ರದ ಜೊತೆ ನಮ್ಮ ನಿಮ್ಮೆಲ್ಲರಲ್ಲಿ ಚೆಲುವಿನ ಚಿತ್ತಾರವನ್ನು ಸೃಷ್ಟಿಸುತ್ತದೆ.

ಈ ನಮ್ಮ ನಿಮ್ಮೇಲ್ಲಾರ ಚಿಕ್ಕ ಚಿಕ್ಕ ಆಸೆ, ಕನಸುಗಳ ಹಿಡೇರಿಕೆಗಳೆ ನಮ್ಮ ಜೀವನದ ಹೊಸತನಕ್ಕೆ ಹೊಸ ಸಾಧನೆ(ನ)ಗಳು ಎನ್ನೋಣವೇ?

ತಿಳಿಯದು ನೀವೇ ತಿಳಿಸಿ.

ಗುರುವಾರ, ಮೇ 19, 2011

ನಾನು ಒಂದು ಹುಡುಗಿ



ನನಗೆ ಗೊತ್ತಿಲ್ಲ ನಾನು ಯಾವಾಗ ನನಗೂ ಒಬ್ಬ ಗೆಳೆಯ ಬೇಕು, ನಾನು ನನ್ನ ಕನಸನ್ನು ಅವನ ಜೊತೆ ಹಂಚಿಕೊಂಡು ಸುಂದರ ರಂಗಿನ ಚಿತ್ತಾರವನ್ನು ರಚಿಸಬೇಕು, ಅವನ ಜೊತೆ ಮನ ಬಿಚ್ಚಿ ಎಲ್ಲವನ್ನು ಹೇಳಿಕೊಳ್ಳಬೇಕು ಹೀಗೆ ಅಂತ್ಯವಿಲ್ಲದ ಕನಸನ್ನು ನನ್ನಲ್ಲಿ ನಾನೇ ಕಾಣುತ್ತಿದ್ದೆ ಎಂದು.

ನಾನು ಒಂದು ಹುಡುಗಿ ಎಂದು ನನಗೆ ಗೊತ್ತು ಮಾಡಿದ್ದು ಆಂದರೆ ಆ ದಿನ. ಅಲ್ಲಿಯವರಿಗೂ ನಾನು ಹುಡುಗರ ತರಾ ಯಾವುದರಲ್ಲೂ ಕಡಿಮೆಯೇನಿಲ್ಲ. ನನಗೆ ಎನಿಸುತ್ತಿತ್ತು ಅವರುಗಳು ಸುತ್ತುವ ರೀತಿ ನಾನು ಸುತ್ತಬೇಕು. ಅವರುಗಳು ಆಡುವ ಆಟಗಳನ್ನೂ ನಾನು ಆಡಬೇಕು ಯಾವುದರಲ್ಲೂ ನನಗೆ ಸೋಲು ಎಂಬುದು ಇರಲೇ ಬಾರದು... ಎಂಬ ರೀತಿಯಲ್ಲಿ ಒಂದು ರೀತಿಯ ಮಧುರ ಬಾವನೆಯೇ ಇರಲಿಲ್ಲ ಅನಿಸುತ್ತದೆ.

ಯಾಕೆಂದರೆ ನನ್ನ ತಮ್ಮನನ್ನು ನನ್ನ ಎತ್ತವರು ನೋಡಿಕೊಳ್ಳುತ್ತಿದ್ದ ರೀತಿ, ಅವನಿಗೆ ಅವರುಗಳು ಉಪಚರಿಸುತ್ತಿದ್ದದು, ಗಂಡು ಎಂದರೆ ಯಾಕಾಷ್ಟು ಮಮಕಾರವೋ ಒಂದು ತಿಳಿಯುವುದಿಲ್ಲ. ಗಂಡು ಹುಡುಗರು ಎಂದರೇ ಹೆತ್ತ ಮನೆಯಲ್ಲಿಯೇ ಏನೇನೋ ರೀತಿಯಲ್ಲಿ ಕಾಣುತ್ತಾರೆ. ಯಾಕೆಂದು ನನಗೆ ತಿಳಿಯುವ ಮಟ್ಟಿಗೆ ನಾನು ನನ್ನ ಕನಸುಗಳನ್ನು ಕಾಣುವ ದಿನಗಳಿಗೆ ಬಂದಿದ್ದೇ.
ಯಾವಾಗಲೂ ಚಿಕ್ಕಂದಿನಲ್ಲಿ ನನ್ನನ್ನು ನನ್ನ ಎತ್ತವರು ಚೆನ್ನಾಗಿಯೇ ಕಾಣುತ್ತಿದ್ದರು ಅನಿಸುತ್ತದೆ. ಯಾಕೆಂದರೇ ನಾನೇ ಪುಟ್ಟ ಪುಟಾಣಿ ಮಗುವಲ್ಲವಾ?

ಆದರೇ ತಮ್ಮನ ಆಗಮನವಾಯಿತೋ ನನ್ನ ಪ್ರೀತಿಯ ಪಾಲನ್ನು ಅವನು ಹಂಚಿಕೊಂಡನೇನೋ ಎನಿಸುತ್ತಿತ್ತು.

ತಿಳಿಯದು ನನ್ನ ಮನಸ್ಸಿನ ನನ್ನ ಆ ಯೋಚನೆಗಳು ನನ್ನಲ್ಲಿ ಆ ರೀತಿಯಲ್ಲಿ ಬರುತ್ತಿತ್ತು. ಯಾರಿಗೆ ಆದರೋ ಅದು ಸಹಜ ಇಲ್ಲೆಯವರೆಗೂ ತಾನೊಬ್ಬಳೆ ನನ್ನ ಎತ್ತವರ ಪ್ರೀತಿಯನ್ನು ಸೂರೆ ಮಾಡುವ ವೇಳೆಯಲ್ಲಿ ಅದರ ಪಾಲನ್ನು ಕೊಡು ಎಂದು ಮತ್ತೊಬ್ಬರು ಬಂದರೆ ಸಹಜವಾಗಿಯೇ ಅವರ ಮೇಲೆ ಸಿಟ್ಟು ಸೇಡವು ಬರುತ್ತದೆ.


ಯಾವುದರಲ್ಲಿ ನಾನು ಕಮ್ಮಿ? ಯಾಕೆ ಅವನೇ ರಾಜ ಎಂಬ ರೀತಿಯಲ್ಲಿ ಪ್ರತಿಯೊಬ್ಬರು ಕಾಣುತ್ತಾರೆ ಎಂಬ ವಾದಗಳು ನನ್ನ ಮನದ ಮೊಲೆಯಲ್ಲಿ ಜಲ್ಲೆಂದು ಎದ್ದು ನಿಲ್ಲುತ್ತಿದ್ದವು.

ಹೌದು! ನೀನೇ ದೊಡ್ಡವಳು ನೀನೇ ಅವನನ್ನು ನೋಡಿಕೊಳ್ಳಬೇಕು. ಅವನು ಏನನ್ನು ಬೇಕು ಎನ್ನುತ್ತಾನೋ ಅದನ್ನು ಯಾವುದೇ ಮೂಲಾಜಿಲ್ಲದೆ ಕೊಡಬೇಕು. ಅವುಗಳು ನನ್ನ ಪ್ರೀತಿಯ ಚಿಕ್ಕ ಚಿಕ್ಕ ವಸ್ತುಗಳಾಗಿದ್ದರೂ ಸಹ. ಇದು ನನಗೆ ನನ್ನ ಸೂಕ್ಷ್ಮ ಭಾವನೆಗಳಿಗೆ ವಿಪರೀತವಾದ ದಕ್ಕೆಯನ್ನು ತಂದಿತು. ನನ್ನನ್ನು ಮೊದಲು ಪ್ರೀತಿಸುತ್ತಿದ್ದವರು, ಇಂದು ಅವರುಗಳು ವರ್ತಿಸುತ್ತಿದ್ದ ರೀತಿ ಹೆಣ್ಣು ಎಂದರೇ ಸಮಾಜದಲ್ಲಿ ಯಾವ ರೀತಿಯಲ್ಲಿ ನೋಡುವರು ಎಂಬುದನ್ನು ನೋಡುವಂತೆ ಅರಿಯುವಂತೆ ಮಾಡಿತು.

ನನಗೆ ನನ್ನದೇಯಾದ ನನ್ನ ಕನಸನ್ನು ಹಂಚಿಕೊಳ್ಳುವ ಹೆಣ್ಣನ್ನು ಹೆಣ್ಣ ರೀತಿಯಲ್ಲಿ ಕಾಣುವ ಹೃದಯವನ್ನು ಹುಡುಕುವಂತೆ ಮಾಡಿತು. ಹಾಗಂತಾ ನನ್ನ ಮನೆಯವರು ದುಷ್ಟರು ಎಂದು ನಾನೆಂದು ಭಾವಿಸಿಲ್ಲ. ಆ ದಿನಗಳಲ್ಲಿ ನನ್ನ ಚಿಕ್ಕ ಮನಸ್ಸಿಗೆ ಅವರ ನಡಾವಳಿ ಆ ರೀತಿಯಲ್ಲಿ ಕಂಡಿತು.

ಗಂಡು ಹುಡುಗ ಎಂದ ತಕ್ಷಣ ನೀನು ಹಾಗೆ ಸಾಧಿಸಬೇಕು, ಹೀಗೆ ಸಾಧಿಸಬೇಕು, ನೀನು ಏನಾದರೂ ಮಾಡಬಹುದು, ನೀನೆ ನಮಗೆ ಆಸರೆ ಇತ್ಯಾದಿಯ ಪಾಸೀಟಿವ್ ಭರವಸೆಯನ್ನು ನಾನು ನನ್ನ ಸುತ್ತ ಮುತ್ತ ನೋಡಿದ್ದೇನೆ.

ಹೆಣ್ಣು ಎಂದರೇ ಅವಳು ಮನೆಯ ಕೆಲಸ ಮಾಡಲು ಸೀಮಿತ, ಓದು ಅರ್ಧ, ಕೆಲಸ ಬೇಕಿಲ್ಲ, ವಯಸ್ಸು ೧೮ ಆದರೆ ಸಾಕು ಬೇಗ ಮದುವೆ ಮಾಡಿ ಗಂಡಿನ ಮನೆಗೆ ಸಾಗು ಹಾಕಿದರೆ ಸಾಕಾಪ್ಪ ಎಂದು ಪರಿತಪಿಸುವ ಅಸಾಂಖ್ಯಾತ ತಂದೆ ತಾಯಂದಿರು. ನನಗಂತೋ ಇಂದಿಗೂ ತಿಳಿಯದು.
ಮಕ್ಕಳಿಗೆ ಹೆಣ್ಣು ಬೇಕು, ಪ್ರೀತಿಗೆ ತಾಯಿಬೇಕು, ಗೆಳೆತನಕ್ಕೆ ಸಂಗಾತಿ ಬೇಕು.. ಆದರೇ ಹೆಣ್ಣು ಮಗು ಜನಿಸಿದ ಸಮಯದಲ್ಲಿ ಅವರುಗಳು ಪರಿತಪಿಸು ಸ್ಥಿತಿ ನೋಡಿದರೇ ಅವರುಗಳು ಸ್ತ್ರೀ ಅಂದರೇ "ಸೆರಗಲ್ಲಿ ಕಟ್ಟಿಕೊಂಡ ಕೆಂಡ!" ಎಂಬ ರೀತಿಯಲ್ಲಿ ನೋಡುತ್ತಾರೆ.


ನನಗೆ ಎನಿಸುತ್ತದೆ... ಅವರುಗಳು ಎಂದಿಗೂ ಇವಳು ಸಹ ಮನೆಯ ನಮ್ಮ ಮನೆ ಮಗಳು ಎಂದು ಎಂದಿಗೂ ನೋಡುವುದಿಲ್ಲವೇನೋ.. (ಎಲ್ಲರೂ ಅಲ್ಲಾ ಕ್ಷಮಿಸಿ)

ಈ ಎಲ್ಲಾ ಮನದ ಗೊಂದಲದ ಸಮಯದಲ್ಲಿ ನನ್ನ ಓದಿನ ಸಮಯದಲ್ಲಿ, ಮನೆಯಲ್ಲಿ ನನ್ನನ್ನು ಮದುವೆ ಮಾಡಿ ಸಾಗು ಹಾಕಬೇಕು ಎಂಬ ತಯಾರಿಯೋ ತಯಾರಿ. ನನ್ನ ಕನಸು ನಾನು ಏನು ಅಪೇಕ್ಷೆಪಡುತ್ತೀನಿ ಎನ್ನುವುದನ್ನು ಏನು ವಿಚಾರ ಮಾಡದೇ ಅವರುಗಳೇ ನಿರ್ಧರಿಸಿಬಿಟ್ಟಿದ್ದರೇನೋ. ಹುಡುಗಿಯರು ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಯೋಗ್ಯರಲ್ಲ ಎಂಬ ಭಾವನೆಯಿರಬೇಕು?



ನನಗೋ ನನ್ನ ಗೆಳೆಯನ ಬಗ್ಗೆ, ನನ್ನ ಪ್ರೀತಿಯ ಬಗ್ಗೆ ಹೇಗೆ ಅವರ ಹತ್ತಿರದಲ್ಲಿ ಹೇಳಬೇಕೋ ತಿಳಿಯದೇ ನಾನು ಇನ್ನೂ ಕೆಲವು ವರ್ಷಗಳ ಕಾಲ ಓದುತ್ತೇನೆ ಎಂದು ಹೇಳಿ ಮನೆಯಲ್ಲಿನ ಎಲ್ಲರಿಂದ ಬೈಸಿಕೊಂಡದ್ದಾಯಿತು.

ನನ್ನ ಗೆಳತಿಯರ ಪ್ರಚೋದನೆಯೇ ಇರಬೇಕು ನನಗೋ ಒಬ್ಬ ಗೆಳೆಯಬೇಕು ಎನಿಸಿದ್ದು. ನನ್ನ ನೆಚ್ಚಿನ ಗೆಳೆಯತಿಯರಾದ ಸೇವಂತಿ,ಮಲ್ಲಿಗೆಯರು ಎಷ್ಟೊಂದು ಜೋಶ್ ನಲ್ಲಿ ಹೀಗಾಗಲೇ ತಮ್ಮ ತಮ್ಮ ಸಂಗಾತಿಯರೊಡನೆ ಓಡಾಡುವುದು, ಸುತ್ತುವುದು, ಕದ್ದು ಮುಚ್ಚಿ ಪಾರ್ಕನಲ್ಲಿ ತನ್ನ ನೆಚ್ಚಿನ ಸಂಗಾತಿಯ ಜೋತೆ ಕನಸನ್ನು ಕಟ್ಟುವುದನ್ನು ನೋಡಿ.. ಅವರ ಗೆಳೆಯರ ಬಗ್ಗೆ ಅವರ ಪ್ರವರ ಕೇಳಿ ಕೇಳಿ..ನಾನು ಯಾಕೇ ಪ್ರಯತ್ನಿಸಬಾರದು ಎಂಬ ಒಂದು ಭರವಸೆಯ ಎಳೆ ಮನದಲ್ಲಿ ಮೋಡಿತು..


ಹೀಗೆ ಇರುವಾಗಲೇ ಆ ನನ್ನ ಮುದ್ದು ಗಮಾರ ನನ್ನ ಕಣ್ಣಿಗೆ ಬಿಳಬೇಕೇ.... ನಾನು ಹೇಗೆ ಅವನನ್ನು ಮಾತನಾಡಿಸಲಿ.. ಹುಡುಗಿಯರೇ ಮುಂದೆ ಬಿದ್ದು ಕೇಳಬಹುದಾ.. ಪರಿಚಯಿಸಿಕೊಳ್ಳಬಹುದಾ.. ಹೀಗೆ ಮನದ ತುಂಬ ಸಾವಿರ ತೊಳಲಾಟಗಳೇ ಸರಿ. ಮನೆಯವರಿಗೆ ತಿಳಿದರೇ ಏನು ಮಾಡುವುದು? ಯಾರಾದರೂ ನೋಡಿದರೇ ಏನು ಮಾಡುವುದು? ಹೀಗೆ ನೂರಾರು ಯೋಚನೆ.. ಬಹು ಕಷ್ಟ ಕಣೇ ಎಂದು ಸೇವಂತಿಯ ಬಳಿ ನನ್ನ ಅಳಲನ್ನು ಹೇಳಿಕೊಂಡು ಮರುಗಿದ್ದಾಗಿತ್ತು.

ಕಣ್ಣು ಅರಿಯದಿದ್ದರೂ ಹೃದಯ ಅರಿಯುವುದು ಎಂಬಂತೆ ಅವನು ಒಂದು ದಿನ ನಾನು ನನ್ನ ಮನೆಗೆ ಹಾಗೆಯೇ ದಾರಿಯಲ್ಲಿ ಸಾಗುವಾಗ ಮಾತನಾಡಿಸಬೇಕೆ..

ರ್ರೀ.. ನೀವು .. ಬಹಳ ದಿನಗಳಿಂದ ನೋಡುತ್ತಿದ್ದೇನೆ.. ಮಾತನಾಡಿಸಬೇಕು ಅಂದು ಕೊಂಡಿದ್ದೇ.. ಹೀಗೆ ಪೀಠಿಕೆಯನ್ನು ಪ್ರಾರಂಭಿಸಿ ಮನೆಯ ಹತ್ತಿರ ಬರುವತ್ತಿಗೆ ಮೆಚ್ಚಿನ ಸ್ನೇಹದ ಸೆಲೆಯನ್ನು ಇಬ್ಬರೂ ಕಂಡುಕೊಂಡುಬಿಟ್ಟಿದ್ದೇವು.

ಹೀಗೆ ಹಾಗೆ ದಿನಗಳು ಕಳೆದಂತೆ ತುಂಬ ತುಂಬ ಹತ್ತಿರವಾದೆವು. ಅವನೇ ಇರಬೇಕು ನನಗೆ ಮೊದಲು ಹೇಳಿದ್ದು.... ನಾನು ನಿನ್ನ ಇಷ್ಟಪಡುತ್ತೇನೆ! ನನಗೆ ಖುಷಿಯಾಯಿತು. ಇಷ್ಟಪಡುವ ಒಂದು ಹೃದಯ ಸಿಕ್ಕಿತಲ್ಲಾ!

ಹುಡುಗಿಯರು ಹುಡುಗರಲ್ಲಿ ಇನ್ನೂ ಏನನ್ನು ಮಹಾ ಇಷ್ಟಪಡುತ್ತಾರೇ? ಅವರುಗಳನ್ನು ನಮ್ಮನ್ನು ನಮ್ಮ ರೀತಿಯಲ್ಲಿ ಇಷ್ಟಪಟ್ಟು ಕೊಂಚ ಕಾಳಜಿಯನ್ನು ವಯಿಸಿದರೇ ನಮಗೆ ಅದೇ ಸ್ವರ್ಗಕ್ಕೆ ಮೂರು ಗೇಣು.

ಅವನ ಭರವಸೆಯ ಮನಸ್ಥಿತಿ.. ಇನ್ನೂ ಮುಂದೆ ದೊಡ್ಡದಾಗಿ ಓದಬೇಕು.. ಸಾಧಿಸಬೇಕು ಎನ್ನುವ ಮನೋಭಾವ. ನೀನು ಮುಂದೆ ಇನ್ನೂ ಓದು ಎಂಬ ಅಸರೆಯ ನುಡಿ ನನ್ನನ್ನು ತುಂಬ ಸಂತೋಷಪಡಿಸಿತು.


ಅವನನ್ನು ಒಂದು ಕ್ಷಣವು ಬಿಡಲೇ ಇರಬಾರದು ಎನ್ನುವಂತಾಗುತ್ತಿತ್ತು. ನಮ್ಮ ಮನೆಯವರ ಕಣ್ಣು ತಪ್ಪಿಸಿ ರಜಾ ದಿನಗಳು, ಕಾಲೇಜಿನ ಬಿಡಿವಿನ ವೇಳೆಯಲ್ಲಿ ಬೇಟಿ ಮಾಡುತ್ತಿದ್ದೇವು. ಅವನ ಮಾತು, ಅವನ ಕನಸು ನನ್ನದೇಯೇನೋ ಎಂಬಂತೆ ಮುದ್ದು ಹುಡುಗಿಯಾಗಿ ಅವನನ್ನೇ ನನ್ನ ಕಣ್ಣು ತುಂಬಿಕೊಂಡು ಹಾಗೆಯೇ ನೋಡುತ್ತಾ ಕೂತು ಬಿಟ್ಟಿರುತ್ತಿದ್ದೇ.. ಹೀಗೆಯೇ ಕಾಲೇಜಿನ ಕ್ಯಾಂಟಿನಲ್ಲಿ ಒಮ್ಮೆ ನಮ್ಮ ಲೆಕ್ಚರ್ ಕೈಗೆ ಸಿಕ್ಕಿಬಿಟ್ಟಿದ್ದೀವಿ. ಅಂದಿನ ಪಜೀತಿಯನ್ನು ನೆನಸಿಕೊಂಡರೇ.. ಅಮ್ಮ! ಈ ಪ್ರೀತಿ ಪ್ರೇಮದ ಆಟಕ್ಕೆ ಎಷ್ಟೊಂದು ಕಷ್ಟದ ದಾರಿಗಳು ದೇವರೇ ಎನಿಸುತ್ತದೆ.


ಹೀಗೆ ನನ್ನ ಅವನ ಗೆಳೆತನ ಇಲ್ಲಿಯವರೆಗೆ ಹೀಗೆ ಸಾಗುತ್ತಿದೆ. ಮನೆಯಲ್ಲಿ ಏನೊಂದು ಅವನ ಬಗ್ಗೆ ಇದುವರೆಗೂ ಹೇಳಿಲ್ಲ. ಅದರೆ ನನಗೂ ಅವನಿಗೂ ಒಂದು ಭರವಸೆಯಿದೆ. ಈ ಮೊದಲ ಪ್ರೇಮವನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕು. ಅದನ್ನು ಹೆಮ್ಮೆಯಿಂದ ಹಿಡಿದು ಸುಂದರ ಜೀವನವನ್ನು ನಾನು ಕಾಣುವ ಕನಸಿನಂತೆ ರಚಿಸಿಕೊಂಡು ನನ್ನ ನೆಚ್ಚಿನ ಮೆಚ್ಚಿನ ಪ್ರೀತಿಯ ಗೆಳೆಯನ ಜೋತೆ ನೂರುಕಾಲ ಸಾಗಿಸಬೇಕು. ಹೀಗೆ ಹತ್ತು ಹಲವು ಹಂಬಲಗಳು ಮನದಲ್ಲಿ ಹೊಯದಾಡುತ್ತಿವೆ.


ಇನ್ನೆರಡು ವರುಷಗಳು ನನ್ನ ಕಾಲೇಜು ಮುಗಿದು ಅವನದು ಮುಗಿದು ಒಂದು ಕೆಲಸವನ್ನು ಹಿಡಿದು ಬಿಟ್ಟರೇ ದೈರ್ಯವಾಗಿ ಮನೆಯಲ್ಲಿ ಇದನ್ನು ಪ್ರಸ್ತಾಪಿಸಿ ಅವರನ್ನು ಒಪ್ಪಿಸಿಕೊಳ್ಳುವ ಮನಸ್ಸು ಇದೆ. ಕಾಲಾಯ ತಸ್ಮಯಾ ನಮಃ..

ನೋಡೊಣ ಮುಂದೆನಾಗುವುದು..ನಿಮ್ಮ ಪ್ರೀತಿಯ ಆರೈಕೆ ಇಲ್ಲಿ ಇರಲಿ !!

ಮಂಗಳವಾರ, ಮೇ 10, 2011

ಪ್ರೀತಿಯೆಂಬುದು ಸದ್ದಿಲ್ಲದೆ ಸಂಭವಿಸುವ ಸಂಗತಿ

ಮೊನ್ನೆ ಪುನಃ ರವಿಬೆಳೆಗೆರೆಯವರ "ಹೇಳಿ ಹೋಗು ಕಾರಣ" ಎಂಬ ಪ್ರೇಮ ಗ್ರಂಥವನ್ನು ಓದಿದಾಗ ಕೇಲವು ಸಾಲುಗಳು ಯಾಕೋ ನನ್ನ ಮನಸ್ಸನ್ನು ಸೆಳೆದವು.

ಅವುಗಳು ನಿಮಗೂ ಸಹ ಇಷ್ಟವಾಗಬಹುದು ಎಂಬ ಕಾರಣದಿಂದ ನಾನು ಹಾಗೆ ಹಾಗೆಯೇ ನೋಟ್ ಮಾಡಿಕೊಂಡಿದ್ದನ್ನು ಯಥಾ: ಪ್ರಸ್ತುತಿ ಇಲ್ಲಿ.

ಈ ಸಾಲುಗಳ ವಾರಸುದಾರರು ರವಿಬೆಳೆಗೆರೆ ಮಾತ್ರ.ಇಂಥ ಮುತ್ತಿನ ಮಣಿಗಳ ಕೊಡುಗೆಗೆ ನಾನು ಅವರಿಗೆ ಅಭಾರಿ ಮತ್ತು ವಂದನೆಗಳು.


"ಅವಶ್ಯಕತೆಗಳಿಗೆ ಹುಟ್ಟಿಕೊಳ್ಳುವುದು ಪ್ರೀತಿಯಲ್ಲ. ಅದು ಹೊಂದಾಣಿಕೆ"

"ಪ್ರೀತಿಯೆಂಬುದು ಸದ್ದಿಲ್ಲದೆ ಸಂಭವಿಸುವ ಸಂಗತಿ"

"ಒಂದು ಪ್ರೀತಿ ಉದ್ಬವಾಗಲಿಕ್ಕೆ ನೂರು ಜರೂರತ್ತುಗಳ ಸೃಷ್ಟಿಯಾಗಬೇಕು.ಕನಸುಗಳು ಫಸಲು ಎದ್ದು ನಿಲ್ಲಬೇಕು."

"ಪ್ರೀತಿಯೆಂದರೆ ಅವಳಿಗಾಗಿ ತನ್ನ ಜೀವ ತೇಯ್ದು ಅದರಲ್ಲೇ ಸಂತೋಷಪಡುವುದು."

"ಅವಳಿಗೆ ದೈವಿಕವಾದದ್ದು ಬೇಡ. ಮನುಷ್ಯ ಸಹಜವಾದದ್ದು ಬೇಕು. ಪ್ರೀತಿ, ವಾಂಛೆ, ದೇಹ, ಅದರ ಸುಖ, ಅದರ ಫಲ.. ಹೌದು! ಹೆಂಗಸು ದೈವವನ್ನು ಪೂಜಿಸಬಲ್ಲಳು. ಪ್ರೀತಿಸಲಾರಳು."

"ಎಲ್ಲಾ ಪ್ರೀತಿಯ ತಾಯಿ ಬೇರು ವಾಂಛೆ. ಪ್ರತಿ ಮನುಷ್ಯನು ಪ್ರೀತಿಯ ಮುಖವಾಡ ಹಾಕಿಕೊಂಡೇ ವಾಂಛೆಗಳನ್ನು ಕಟ್ಟಿಟ್ಟುಕೊಳುತ್ತಾನೆ"



"ಆವೇಶಗಳು ಆವೇಶಗಳಲ್ಲ. ಅವು ಆದರ್ಶಗಳನ್ನು ಕೊಂದು ಬಿಡುವ ಬಲಹೀನತೆಗಳು. ವಂಚನೆಯ ಜಾಯಮಾನವೇ ಅಂತಹವುದು. ಆರಂಭದಲ್ಲಿ ಆಗಿರುತ್ತವೆ. ಅದೇ ಎಲ್ಲೆಲ್ಲೂ ಸಲೀಸಾಗಿ ಹೋಗುತ್ತವೆ."

"ಪ್ರತಿ ಹುಡುಗಿಯಲ್ಲೂ ಒಬ್ಬ ಆದರ್ಶ ಅಮ್ಮ ಇರುತ್ತಾಳೆ. ಅಮ್ಮನಿಗೆ ದುಃಖದ ಮಗು ಅಂದ್ರೆ, ಅಳೋ ಮಗು ಅಂದ್ರೆ, ರೋಗದ ಮಗು ಅಂದ್ರೆ, ದುಷ್ಟ ಮಗು ಅಂದ್ರೆ ಜಾಸ್ತಿ ಇಷ್ಟ. ತಕ್ಷಣ ಅಂಥ ಮಗುವಿಗೆ ಹೆಲ್ಪ್ ಮಾಡಕ್ಕೆ ಮುಂದಾಗುತ್ತಾಳೆ."

"ಹೆಂಗಸಿಗೆ ಮಾತ್ರ ಹಾಗೆ ತನ್ನ ಪ್ರೀತಿಯನ್ನು ತಾನೇ ಶಾಶ್ವತವಾಗಿ ರದ್ದು ಮಾಡಲ್ಲಿಕ್ಕೆ ಬರುತ್ತದೆ. ಬಾಯಿಬಿಟ್ಟು ಹೇಳದೇನೇ ಹೆಂಗಸಿಗೆ ಪ್ರೀತಿಯನ್ನು ತೀರಸ್ಕರಿಸೋಕೆ ಬರುತ್ತದೆ."

"ಗೆಳೆತನ ಕೇವಲ ಪರಸ್ಪರ ಪ್ರೀತಿ ಬೇಡುತ್ತೆ. ವಿಶ್ವಾಸ ಬೇಡುತ್ತೆ. ಆದರೆ ಕಂಪ್ಯಾನಿಯನ್ ಷಿಪ್ ಅನ್ನೋದು ಭರವಸೆ ಬೇಡುತ್ತೆ. ಕನಸು ಕೊಡು ಅನುತ್ತೆ."

"ಹುಡುಗೀರ ಮನಸ್ಸು ಯಾವಾಗ ಬೇಕಾದರೂ ಹೊಚ್ಚ ಹೊಸ ಸ್ಲೇಟಿನಂತೆ ಫಳಫಳಿಸುವುದು."

"ಪ್ರೇಮದ ತಾಕತ್ತೇ ಅಂಥದ್ದು. ಅದು ಮನುಷ್ಯನ್ನ ದೇವರನ್ನಾಗಿ ಮಾಡುತ್ತೆ."

"ಜಗತ್ತಿನ ಪ್ರತಿ ಹೆಂಗಸು ಹೀಗೆ ತನ್ನ ಹಾಗೇ ಪಕ್ಕದ ಆಕೃತಿಗಳನ್ನು ಬದಲಾಯಿಸುತ್ತಿರುತ್ತೆ. ತಬ್ಬುವ ಮನುಷ್ಯ ದೂರವಾದಾಗ, ನೋಡುವ ಮನುಷ್ಯನ ಜಾಗದಲ್ಲಿ ನಿಂತುಬಿಡುತ್ತಾನೆ." ಅದಕ್ಕೆ ಸಂಕಟವಾಗುತ್ತದೆ ಅಷ್ಟೇ. ಪ್ರೇಮವೆಂದರೆ, ಮೋಸವೆಂದರೆ, ನಿರಾಸೆಯೆಂದರೆ ಅದೆಲ್ಲದರ ಮೊತ್ತ ಕೇವಲ ಸಂಕಟ."

"ಪ್ರೀತಿಯೆಂಬುದು ಜಗತ್ತನ್ನು ಅದೇಷ್ಟು ಚಿಕ್ಕದು ಮಾಡಿಬಿಡುತ್ತದಲ್ಲಾ?"



ಆಧಾರ ಗ್ರಂಥ: ಹೇಳಿ ಹೋಗು ಕಾರಣ. ಲೇಖಕರು: ರವಿ ಬೆಳೆಗೆರೆ. ಪ್ರಕಾಶನ: ಭಾವನ ಪ್ರಕಾಶ ಬೆಂಗಳೂರು.

ಬುಧವಾರ, ಮೇ 4, 2011

ಸುಂದರ ಸುಷ್ಮ ಪರಿಚಯತೆ

ಹೊಸ ದಿನಗಳಲ್ಲಿ ಯಾವುದೇ ಜಾಗ, ರಾಗ, ಸ್ನೇಹ, ಸಂಬಂಧ, ಮಾತು, ನೆನಪು ಎಲ್ಲವೂ ತುಂಬ ಸುಂದರವಾಗಿರುತ್ತವೆ.

ಯಾಕೆಂದರೇ ಅಲ್ಲಿ ಯಾವೊಂದರ ಬಗ್ಗೆಯು ಪರಿಪೂರ್ಣವಾಗಿ ನಮಗೆ ತಿಳಿದಿರುವುದಿಲ್ಲ. ಮುಂದೆ ಏನೋ ಇನ್ನೂ ಏನೂ ಇದೇಯೋ ಅದನ್ನು ಕಾಣಬೇಕು ಎಂಬ ಆಶ್ಚರ್ಯ ಮನದಲ್ಲಿ ಮೂಡುವ ಕುತೂಹಲ ನಮ್ಮಗಳಿಗೆ ಕೆಲವೊಂದು ದಿನಗಳ ಮಟ್ಟಿಗೆ ತುಂಬ ಅಕ್ಕರೆಯನ್ನು ಪ್ರೀತಿಯನ್ನು ಹೆಚ್ಚಾಗಿ ತೋರಿಸುವಂತೆ ಎಲ್ಲಾ ವಿಷಯಗಳಿಗೆ ನಮ್ಮ ಮನಸ್ಸನ್ನು ಆ ರೀತಿಯಲ್ಲಿ ಏರ್ಪಾಡು ಮಾಡಿರುತ್ತದೆ.

ಗೊತ್ತಿರದ ವಿಷಯಗಳ ಬಗ್ಗೆ ಮಾನವ ಕುಲಕ್ಕೆ ಯಾವಾಗಲೂ ಕುತೂಹಲ. ಗೊತ್ತಿರದ ವಿಷಯಗಳನ್ನು ಅರಿಯಲು ಅವನು ಯಾವಾಗಲೂ ಪ್ರಯತ್ನಿಸುತ್ತಲೇ ಇರುತ್ತಾನೆ. "ಕಲಿಯುವವರೆಗೂ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೊತಿ ವಿದ್ಯೆ" ಎಂಬಂತೆ. ಹೊಸದು ಯಾವುದಾದರೂ ಅದರ ಬಗ್ಗೆ ಹೆಚ್ಚು ಕಾಳಜಿಯನ್ನು ನಾವುಗಳು ವಹಿಸಹುದನ್ನು ಕಾಣಬಹುದು.

ಯಾವುದಾದರೂ ಹೊಸ ವಸ್ತುಗಳನ್ನು ಮನೆಗಳಿಗೆ ತಂದರೇ ಏನೂ ಅಕ್ಕರೆ ಸ್ವಾಮಿ! ನಿತ್ಯ ಅದನ್ನು ಒಂದು ಸುತ್ತು ಸ್ಪರ್ಷಿಸುವುದು. ಅದನ್ನು ಪುನಃ ಪುನಃ ನೋಡುವುದು. ಅದನ್ನು ಬೇರೆಯವರಿಗೆ ತೋರಿಸುವುದು. ಅದಕ್ಕೆ ಯಾರಿಂದಲಾದರೂ ದಕ್ಕೆ ಬಂದರೇ ಜರ್ರನೇ ಸಿಟ್ಟನ್ನು ತಂದುಕೊಂಡು ಜಮಾಯಿಸುವುದು. ನಾಜುಕಾಗಿ ಅದನ್ನು ಉಪಯೋಗಿಸುವುದು. ಈ ಒಂದು ಅಭ್ಯಾಸವನ್ನು ನಮ್ಮ ನಮ್ಮ ಚಿಕ್ಕ ಬಾಲ್ಯದ ದಿನಗಳಿಂದ ಕಲಿತು ಅದನ್ನು ಎಂದಿಗೂ ನಮ್ಮ ಮುಂದಿನ ದಿನಗಳಲ್ಲಿ ಮುದುಕರಾದರೂ ಮರೆಯಲಾರೆವು.

ಈ ಒಂದು ಮನಸ್ಸಿನ ನಡಾವಳಿಯನ್ನು ನಾವುಗಳು ಪ್ರತಿಯೊಂದು ಸಣ್ಣ ದೊಡ್ಡ ವಿಷಯ, ವಿಚಾರ, ವ್ಯಕ್ತಿಗಳು, ಸ್ನೇಹಿತರು, ವಸ್ತು ಎಲ್ಲದರಲ್ಲೂ ದಾರಾಳವಾಗಿ ಉಪಯೋಗಿಸುತ್ತೇವೆ. "ಹೊಸದರಲ್ಲಿ ಯಾರೋ ಎತ್ತಿ ಎತ್ತಿ ಹೊಗೆದರು" ಎಂಬಂತೆ ಅಲ್ಲಿ ಕಾಣುವ ಜೋಶ್ ಕೆಲವು ದಿನಗಳಾದ ಮೇಲೆ ಮರೆಯಾಗಿರುತ್ತದೆ. ಯಾಕೆ?

ಹೊಸ ಜಾಗಗಳಿಗೆ ಹೋದಾಗ ಏನು ನಮ್ಮ ಮನಸ್ಸೇ ಪೂರ್ತಿ ಅಲ್ಲಿಯದಾಗಿರುತ್ತದೆ. ಇಲ್ಲಿಯೇ ಇದ್ದು ಬಿಡಬೇಕು ಎಂಬ ನಿರ್ಧಾರವನ್ನೇ ಒಂದು ದಿನ ರಾತ್ರಿಗೆ ತಂದುಕೊಂಡುಬಿಟ್ಟಿರುತ್ತೇವೆ. ಇದೇ ನಮಗೆ ಸರಿಯಾದ ಸುಖದ ತಾಣ ಎಂಬ ಮನದಾಸೆಯಾಗಿರುತ್ತದೆ. ಅದೇ ಒಂದೇರಡು ದಿನಗಳಾದ ಮೇಲೆ ಎಷ್ಟೊತ್ತಿಗೆ ಇಲ್ಲಿಂದ ಪಾರಾದೇವೋ ಎಂಬಷ್ಟರ ಮಟ್ಟಿಗೆ ನಮಗೆ ಬೋರ್ ಅನಿಸಿಬಿಟ್ಟಿರುತ್ತದೆ.

ನಾವುಗಳು ನಮ್ಮ ನಿತ್ಯ ಜೀವನದಲ್ಲಿ ಹಲವಾರು ವ್ಯಕ್ತಿಗಳನ್ನು ಅಪರಿಚಿತರಿಂದ ಪರಿಚಿತರಾಗಿ ಮಾಡಿಕೊಂಡು ಬಿಟ್ಟಿರುತ್ತೇವೆ. ಆ ವ್ಯಕ್ತಿಯ ಯಾವುದೋ ಒಂದು ಗುಣ ವಿಶೇಷ, ಪ್ರೀತಿ, ಅಕ್ಕರೆ, ಕಾರುಣ್ಯ, ಅವರ ಒಟ್ಟು ಒಂದು ವ್ಯಕ್ತಿತ್ವ ನಮ್ಮ ಮನಸ್ಸನ್ನು ಗೆದ್ದು ನಾವುಗಳು ಅವರನ್ನು ನಮ್ಮ ಗೆಳೆಯರನ್ನಾಗಿ ಸ್ವಿಕರಿಸಿ ಅವರೊಡನೆ ನಮ್ಮ ಕಷ್ಟ ಸುಖ, ನಮ್ಮ ಅಭಿಪ್ರಾಯಗಳನ್ನು ಪರಸ್ಪರ ವಿನಿಮಯಮಾಡಿಕೊಳ್ಳುತ್ತೇವೆ.

ಕೆಲವು ದಿನಗಳವರೆಗೆ ಎಷ್ಟೊಂದು ಕಾತುರತೆಯಿರುತ್ತದೆ ಎಂದರೇ ಅವರನ್ನು ಪುನಃ ನೋಡಬೇಕು ಮಾತನ್ನಾಡಿಸಬೇಕು.. ಪುನಃ ಬೇಟಿ ಮಾಡಬೇಕು ಎಂಬ ಆಸೆಯಿರುತ್ತದೆ. ಇದಂತೋ ಹುಡುಗ -ಹುಡುಗಿಯಾರದರೇ ಕೇಳುವುದೇ ಬೇಡ! ಸಾವಿರ ಕಾರಣಗಳು ನಮ್ಮ ಮುಂದೆ ಬಂದು ನಿಂತು ಅಲ್ಲಿ ಹೊಸದರಲ್ಲಿ ನಮ್ಮ ಪ್ರೀತಿಯ ವಸ್ತುಗಳನ್ನು ಹೇಗೆ ಜಾಗರುಕತೆಯಿಂದ ಪುನಃ ಪುನಃ ನೋಡಿಕೊಳ್ಳುತ್ತೇವೋ ಹಾಗೆಯೇ ತುಂಬ ನಾಜುಕಾಗಿ, ಯಾರಿಗೂ ನೋವಾಗದ ರೀತಿಯಲ್ಲಿ ಗೌರವದಿಂದ ನಮ್ಮ ಮನದಾಳದ ನೋವು, ನಲಿವುಗಳನ್ನು ತಿಳಿಯಪಡಿಸುತ್ತಿರುತ್ತೇವೆ.



ಹೀಗೆ ದಿನಕಳೆದಂತೆ ನಮ್ಮ ಅವರ ಗೆಳೆತನದ ಬೇರು ತುಂಬ ಆಳಕ್ಕೆ ಇಳಿದು ಪ್ರತಿ ವ್ಯಕ್ತಿಯ ವೈಕ್ತಿಕ ಗುಪ್ತ ಗುಪ್ತ ವಿಷಯಗಳ ಕಡೆಗೆ ನಮಗೆ ಗೊತ್ತಿರದ ರೀತಿಯಲ್ಲಿ ನಮ್ಮ ಕಣ್ಣನ್ನು ಹರಿಸಿ ಇನ್ನೂ ಹೆಚ್ಚು ಹೆಚ್ಚು ಗೊತ್ತು ಮಾಡಿಕೊಳ್ಳಲು ಪ್ರಾರಂಭಿಸಿ.. ನಾವುಗಳು ಅವರ ಬಗ್ಗೆ ಅವರುಗಳು ನಮ್ಮ ಬಗ್ಗೆ ಸುಲಭವಾಗಿ ಹೀಗೆ ಹೀಗೆ ಎಂದು ಷರಾ ಬರೆಯುವ ಮಟ್ಟಕ್ಕೆ ಬಂದು ನಿಂತಿರುತ್ತದೆ.

ಹಾಗೆಯೇ ಈ ಒಂದು ಹೊಸತನದ ಹಾದಿ ತುಂಬ ದೂರ ಸಾಗಿ ಹಳತಾಗುವ ಆ ಸಮಯಕ್ಕೆ ನಮ್ಮ ಬಳಸುವ ಮಾತಿನ ದಾಟಿಯೇ ಬದಲಾಗಿರುತ್ತದೆ. ಅವರುಗಳನ್ನು ಉಪಚರಿಸುವ ರೀತಿಯೇ ವ್ಯತ್ಯಾಸವಾಗಿರುತ್ತದೆ.

ತುಂಬ ಅಕ್ಕರೆಯೋ, ಪ್ರೀತಿಯೋ ಯಾವುದಾದರೂ ಒಂದು ಕಾರಣದಿಂದ.. ಅವರು ನಮ್ಮವರೇ ಎಂಬ ಮಟ್ಟಕ್ಕೆ ಬಂದಿದ್ದರೇ ಒಂದು ರೀತಿಯಲ್ಲಿ ಒಳ್ಳೆಯದು. ಅವರುಗಳು ಇವರುಗಳು ಹೇಳುವ, ಕೊಡುವ ಒಂದು ಆರೋಗ್ಯಕರ ಸಲಹೆ ಸಾಂತ್ವನವಿದ್ದರೇ ಅದು ಒಂದು ಉತ್ತಮ ಸಂಬಂಧದ ಬೆಳವಣಿಗೆಗೆ ನಾಂದಿ.

ಅದೇ ಒಂದು ಸ್ವಲ್ಪ ಉಲ್ಟಾ ಹೊಡೆದರೆ ಪ್ರತಿ ವ್ಯಕ್ತಿಯ ಬಗ್ಗೆ ಇವನು/ಳು ಅವನು/ಳು ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದಂತೆ ನಮ್ಮ ನಮ್ಮಲ್ಲಿಯೇ ನಿರಾಧರಣೆ ಬೆಳೆಸಿಕೊಳ್ಳುವುದು. ಆ ವ್ಯಕ್ತಿಯ ದೌರ್ಬಲ್ಯವನ್ನೇ ನಮ್ಮ ಮೊಗಿನ ನೇರದಲ್ಲಿ ಹೀಗೆ ಹೀಗೆ ಎಂದು ನಿರ್ಧರಿಸಿ ಆ ವ್ಯಕ್ತಿಯ ಬಗ್ಗೆ ಮೊಟ್ಟ ಮೊದಲು ಇದ್ದ ಮತ್ತು ಇಟ್ಟುಕೊಂಡಿದ್ದ ಗೌರವವನ್ನೇ, ಹೊಸತನದ ಹಾದಿಯನ್ನೇ ಮರೆಯುವ ಮಟ್ಟಿಗೆ ಕೇವಲವಾಗಿ ಕಾಣುವುದು. ದಿನ ಕಳೆದಂತೆ ಯಾಕೋ ಈ ವ್ಯಕ್ತಿ ಬೋರ್ ಸಾರ್! ಮತ್ತೇ ಹೊಸಬರ ಕಡೆ ಕಣ್ಣಾಯಿಸುವುದು.. ಮತ್ತೇ ಅದೇ ಮೊದಲಿನಿಂದ ಆ ದಿನಚರಿಯನ್ನು ಪ್ರಾರಂಭಿಸುವುದು.. ಹೀಗೆ ಈ ಮನೋಭಾವ ಯಾಕಾದರೂ ನಮ್ಮಲ್ಲಿ ಬರುತ್ತದೆ?

ಯಾವುದೇ ವ್ಯಕ್ತಿಯ ಬಗ್ಗೆ ಕೂಂಚ ಗೊತ್ತಿದ್ದರೇ ಎಷ್ಟೊಂದು ಅಚ್ಚರಿಗಳನ್ನು ನಾವುಗಳು ನಿತ್ಯ ಅನುಭವಿಸುತ್ತಿರುತ್ತೇವೆ.

ಅದೇ ನಮಗೆ ತೀರ ಹತ್ತಿರವಿರುವವರು ಎಂಬ ಒಂದು ಸಲಿಗೆಯಿಂದ ಇರಲಿ ನಮ್ಮ ವಿಚಾರಗಳನ್ನು ನಮ್ಮ ಇಷ್ಟ ಕಷ್ಟಗಳನ್ನು ಹೇಳಿಕೊಂಡರೇ ಅವುಗಳೊಂದಿಗೆ ಹೀಗೆಯೇ ನಾವುಗಳು ಆಟವಾಡುವುದು? ಅವುಗಳನ್ನೇ ಪ್ರಾಮುಖ್ಯ ಮಾಡಿಕೊಂಡು ಬೇಸರಪಡುವುದು ಎಷ್ಟು ಸರಿ?

ಇದನ್ನು ನಮಗೆ ತೀರ ಹತ್ತಿರದಲ್ಲಿರುವ ನಮ್ಮ ಸಂಬಧಿಗಳು, ಸ್ನೇಹಿತರು, ನಮ್ಮ ಹಿರಿಯರುಗಳ ಬಗ್ಗೆಯೇ ನಮಗೆ ಹಿಂದೆ ಇದ್ದ ದೋರಣೆಯಲ್ಲಿ ಇಂದು ನಿಜವಾಗಿಯೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು.
ಒಂದು ಕ್ಷಣ ಯೋಚಿಸಿ ನೋಡಿ!

ನಾವುಗಳು ಬೆಳೆದಂತೆ ನಮ್ಮ ಮನದ ಮೊಲೆಯಲ್ಲಿ ನಾವುಗಳು ಯಾರನ್ನು ನಮ್ಮ ಆದರ್ಶ ಎಂಬಷ್ಟರ ಮಟ್ಟಿಗೆ ಆರಾಧಿಸಿರುತ್ತೇವೋ ಅವರುಗಳೇ ಇಂದು ನಮ್ಮ ಖಳನಾಯಕರುಗಳಾಗಿರುತ್ತಾರೆ.

ಇದೇ ಬದುಕು ಇರಬೇಕಲ್ಲವಾ?

ಯಾಕೆಂದರೇ ನಾವುಗಳೆಲ್ಲಾ ಕೇವಲ ಮನುಷ್ಯರಲ್ಲವಾ? ಎಲ್ಲವನ್ನೂ ಮೀರಿ ನಾವುಗಳು ಬೆಳೆಯಲು ಸಾಧ್ಯವಿಲ್ಲ. ನಾವುಗಳು ನಮ್ಮ ರೀತಿಯಲ್ಲಿ ಇರುವುದು. ಬೇರೆಯವರಿಗೆ ಅದೇ ಸರಿಯಾಗಿ ಕಾಣದಿರಬಹುದು. ಅವರುಗಳು ಇರುವ ರೀತಿ ನಮಗೆ ಆ ಕ್ಷಣಕ್ಕೆ ಸರಿಯಾಗಿ ಕಾಣದಿರಬಹುದು. ಇಷ್ಟು ಮಾತ್ರಕ್ಕೆ ಅವರೆಲ್ಲಾ ಹಾಗೇ ಇವರುಗಳೆಲ್ಲಾ ಹೀಗೆ ಎಂದು ಹಣೆಪಟ್ಟಿ ಕಟ್ಟುವುದು ಯಾಕೇ?

"ಜೇನು ಹಳತಾದಷ್ಟು ಹೆಚ್ಚು ಬೆಲೆ ಮತ್ತು ರುಚಿ" ಎಂಬ ರೀತಿಯಲ್ಲಿ ನಮ್ಮ ಸಂಬಂಧಗಳು ಸಹ ಹಚ್ಚ ಹಸಿರಾಗಿ ಯಾಕೇ ಇರುವುದಿಲ್ಲ. ಅದು ನಮ್ಮಗಳ ಕಾಳಜಿಯನ್ನು ಹೊಂದಿರುವಂತಾಗಿರಬೇಕು. ನಾವುಗಳು ಯಾವ ಕಾರಣಕ್ಕೆ ನಮ್ಮ ಗೆಳೆಯರನ್ನಾಗಿಯೋ, ಗುರುವನ್ನಾಗಿಯೋ, ನಮ್ಮ ಹತ್ತಿರದವರನ್ನಾಗಿಯೋ ಮಾಡಿಕೊಂಡಿರುತ್ತೇವೋ ಅದೇ ಮೊದಲ ದಿನದ ನಿರೀಕ್ಷೆ ಮತ್ತು ಅಚ್ಚರಿಯನ್ನು ಕಡೆತನದವರೆಗೂ ಎಲ್ಲರ ಬಗ್ಗೆ ಇಟ್ಟುಕೊಂಡಿರಬೇಕು. ಆ ಒಂದು ಅಂತರ ಮನುಷ್ಯ ಮನುಷ್ಯರ ನಡುವೆ ಇರಬೇಕಾಗುತ್ತದೇಯೇನೋ?

ಹೆಚ್ಚು ಹೆಚ್ಚು ನಮಗೆ ಅವನ/ಅವಳ ಬಗ್ಗೆ ನನಗೆ ಗೊತ್ತಿದೆ. ಅವನು/ಅವಳು ಹೀಗೆ ಎಂಬ ರೀತಿಯಲ್ಲಿ ಬೇರೆಯವರ ಬಗ್ಗೆ ಬೇರೆಯವರ ಹತ್ತಿರ ಮಾತನ್ನಾಡಬಾರದು. ಮನುಷ್ಯನಿಗೆ ಯಾವಾಗ ಬೇಜಾರಾಗುವುದು ಎಂದರೇ ನಮ್ಮಗಳ ಬಗ್ಗೆ ಬೇರೆಯವರ ಹತ್ತಿರ ಕೇವಲವಾಗಿ ಮಾತನ್ನಾಡಿದಾಗ ಅಲ್ಲವಾ? ಆ ರೀತಿಯ ಮಾತೆಂಬ ಗಾಜಿನ ಗೊಂಬೆಯನ್ನು ಸುಖ ಸುಮ್ಮನೇ ನಮ್ಮ ಟೈಮ್ ಪಾಸ್ ಗಾಗಿ ಕೆಡುವುದು ಸಲ್ಲದು.

ಯಾವುದೇ ನಿರೀಕ್ಷೆಯೇ ಇಲ್ಲದ ಒಂದು ನವಿರಾದ ಸುಂದರ ಸುಷ್ಮ ಪರಿಚಯತೆಯನ್ನು ನಮ್ಮ ನಮ್ಮಲ್ಲಿಯೇ ನಿತ್ಯ ನಿರಂತರವಾಗಿ ಜಾರಿಯಲ್ಲಿಟ್ಟುಕೊಳ್ಳೋಣವಾ?