ಬುಧವಾರ, ಫೆಬ್ರವರಿ 23, 2011

ಮುಖ್ಯ ಅಮುಖ್ಯ



ನಾವುಗಳು ನಮ್ಮ ನಿತ್ಯ ಜೀವನದ ಜಂಜಾಟದಲ್ಲಿ ಎಲ್ಲಿ ಮುಖ್ಯವಾದದ್ದು, ಯಾವುದು ಪ್ರಾಮುಖ್ಯವಾದದ್ದು, ಯಾರು ಬೇಕಾದವರು ಯಾರು ಬೇಡಾದವರು, ಯಾವುದನ್ನು ಅನುಸರಿಸಬೇಕು, ಯಾವುದನ್ನು ನೀಡಬೇಕು, ಪಡೆಯಬೇಕು. ಹೀಗೆ ಸಾವಿರಾರು ವಿಧದಲ್ಲಿ ಸಾವಿರಾರು ವಿಷಯಗಳನ್ನು ಪ್ರಾಮುಖ್ಯತೆ ಕೊಟ್ಟು ಅನುಭವಿಸುವುದನ್ನು, ಪಡೆಯುವುದನ್ನು, ಪಡೆಯಬೇಕಾದುದನ್ನು, ಗಳಿಸಬೇಕಾದುದನ್ನು ಗಳಿಸಲಾರದ ರೀತಿಯಲ್ಲಿ ನಮ್ಮದಾಗಿ ಮಾಡಿಕೊಳ್ಳಬೇಕಾದದ್ದನ್ನು ಮಾಡಿಕೊಳ್ಳದ ಸಮಯದಲ್ಲಿ, ಅವಶ್ಯಕತೆಯಿರದದ್ದನ್ನು ಅನಾವಶ್ಯಕವಾಗಿ ಮೈ ಮೇಲೆ ಎಳೆದುಕೊಂಡು ಜೀವನದ ಪಾಠ ಇದು ಎಂದು ನಿಟ್ಟುಸಿರನ್ನು ಬಿಟ್ಟಿರುತ್ತೇವೆ.


ನಾವು ಎಷ್ಟೇ ಮುಂದಾಲೋಚನೆ,ಪ್ಲ್ಯಾನ್ ಏನಾದರೂ ಮಾಡಿದರೂ ಆ ಸಮಯಕ್ಕೆ ಆದನ್ನು ಆ ಸಮಯ ಸನ್ನಿವೇಶವೇ ನಮ್ಮನ್ನು ತನ್ನ ಮುಷ್ಠಿಯಲ್ಲಿ ಬಂಧಿಸಿ ನಮಗೆ ಅರಿವಿಲ್ಲದ ರೀತಿಯಲ್ಲಿ ಅದು ತನ್ನ ಜಾದುವನ್ನು ಪ್ರದರ್ಶಿಸಿ ನಮ್ಮ ಕಡೆ ಒಂದು ಅಚ್ಚರಿಯ ನೋಟವನ್ನು ಬೀರಿ ಮರೆಯಾಗಿರುತ್ತದೆ.


ಅಲ್ಲಿ ಉಳಿಯುವುದು ಕೇವಲ ನಮ್ಮ ತಪ್ಪು ಮತ್ತು ಒಪ್ಪುಗಳು ಮಾತ್ರ. ಪಲಿತಾಂಶವನ್ನು ನೋಡಿದರೇ ನಾವೇಷ್ಟು ಜಾಣರು, ಬುದ್ದಿವಂತರುಗಳು ಅನಿಸುತ್ತದೆ. ನಾವುಗಳು ಹೇಗ ಆ ಅವಕಾಶವನ್ನು ಉಪಯೋಗಿಸಿಕೊಂಡಿದ್ದೇವೆ ಎಂಬುದು ತಿಳಿದು, ಮುಂದೆ ಬರುವ ಯಾವುದೇ ಅವಕಾಶ, ಮಾತು, ವ್ಯಕ್ತಿ, ನೋಟ, ಅನುಭವವನ್ನು ಇನ್ನೂ ಉನ್ನತವಾಗಿ ಮೊದಲು ಆದ ಅವಘಡಗಳು, ಅಬಾಸಗಳು ಆಗದಂತೆ ಎಚ್ಚರಿಕೆವಹಿಸೋಣ ಎಂಬ ನಿರ್ಧಾರವನ್ನು ಮನದಲ್ಲಿಯೇ ಕಟ್ಟಿ ಮುಂದಿನ ಹೆಜ್ಜೆ ಇಟ್ಟರು ಅಲ್ಲಿಯು ಸಹ ಪುನ ಕಲ್ಪನೆಗೂ ನಿಲುಕದ ರೀತಿಯಲ್ಲಿ ಮತ್ತೊಂದು ನಿದರ್ಶನ, ಸವಾಲುಗಳು ದುತ್ತನೆ ನಮ್ಮ ಎದುರಿನಲ್ಲಿ ಹಲವು ಬಗೆಗಳಲ್ಲಿ ಆ ಸಮಯಕ್ಕೆ ಬಂದು ನಿಂತಿರುತ್ತದೆ.


ಈ ಬದುಕೇ ಹೀಗೆ ಅಲ್ಲವಾ. ಇಲ್ಲಿ ನಮ್ಮ ಜೀವನದ ಚಕ್ರಕ್ಕೆ ಯಾವುದೇ ಪ್ರೀ ಪ್ಲ್ಯಾನ್ ಎಸ್.ಓ.ಫಿ ಇರುವುದಿಲ್ಲ. ನಾವುಗಳು ಹೀಗೆ ಇರಬೇಕು. ಇದನ್ನು , ಇಲ್ಲಿ, ಹೀಗೆ ಮಾಡಬೇಕು ಎಂದುಕೊಂಡು ಜೀವಿಸಲು ಅಸಾಧ್ಯವಾದದ್ದು.


ಯೋಚಿಸಿ ನಮ್ಮ ಇಂದಿನ ದಿನಮಾನದಲ್ಲಿ ಎಷ್ಟೊಂದು ಕ್ರಾಂತಿಗಳು ಆಗಿವೆ. ಎಷ್ಟೊಂದು ಮಂದಿ ತಮ್ಮ ಅನುಭವಗಳನ್ನು, ನಿದರ್ಶನಗಳನ್ನು ನಮ್ಮ ಮುಂದೆ ಹಲವಾರು ಮಾಧ್ಯಮಗಳ ಮೊಲಕ ನಮಗೆ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಎಷ್ಟೊಂದು ದಿ ಬೇಸ್ಟ ಸಲ್ಯೂಶನ್ಸ್ ಗಳು, ಮೆಚ್ಚುಗೆ ಪಡೆದ ಮಾತು, ಮೋವಿಗಳು, ಪುಸ್ತಕಗಳು, ಉಪದೇಶಗಳು ಇಲ್ಲ. ಆದರೂ ಯಾಕೆ ನಾವುಗಳು ಪುನಃ ಪುನಃ ನಮ್ಮ ಬದುಕಿನ ದಾರಿಯಲ್ಲಿ ಸಾಮಾನ್ಯವಾಗಿ ಗೊತ್ತೂ ಗೊತ್ತಿಲ್ಲದಂತೆ ಅಲ್ಲೇ ಅದೇ ಜಾಗದಲ್ಲಿ ಎಡವುತ್ತೇವೆ?


ಈಗ ನಿಮಗೆ ಅನಿಸಬಹುದು! "ಹೌದು ತಮ್ಮ ಲೈಫ್ ಅಂದ್ರೆ ಅನ್ ಪ್ರೀಡಿಕ್ಟ್ ಜಸ್ಟ್ ಆಕ್ಸ್ ಪ್ಟ್ ಇಟ್!" ಅಂಥ.

"ಜೀವನ ಅಂದರೇ ಸಾಗರ ಇದ್ದಾಂಗ" ಎಂದು ನಮ್ಮ ಪೂರ್ವಿಕರು ತಮ್ಮ ಹಿಂದಿನ ಜೀವನ ಕಾಲದಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಈ ಹಿರಿಯರುಗಳು ಇದೇ ಮಾತನ್ನು ಅವರ ಹಳೆ ತಲೆಗಳಿಂದ ಅದೇ ರೀತಿ ಅದೇ ಸಮಯದಲ್ಲಿ ತಮ್ಮ ಕಿವಿಗಳಿಗೆ ಹಾಕಿಕೊಂಡಿದ್ದಾರೆ.


ಅಂದರೇ ಇದು ಯಾವಾಗಲೂ ಇದು ಹೀಗೆ ಅಂಥ ಯಾವನು ಸಹ ಕಡ್ಡಿ ತುಂಡು ಮಾಡಿದ ರೀತಿಯಲ್ಲಿ ನಿರೂಪಿಸಿಲ್ಲ. "ಬದುಕು ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿರಾ ಹುಚ್ಚಪ್ಪಾಗಳ್ಳಿರಾ" ಅಂಥ ಪಂಡಿತರುಗಳು ಸಾಮಾನ್ಯ ಜನಕ್ಕೆ ತಿಳಿ ಹೇಳುವ ಮಟ್ಟಕ್ಕೆ ಅದ್ವಾನವಾಗಿದೆ/ಲ್ಲ ಎಂಬಂತಿಲ್ಲ?


ನಾವು ಚಿಕ್ಕ ಚಿಕ್ಕ ವಿಷಯಗಳನ್ನು ಸಾಮಾನ್ಯವಾಗಿ ಗಮನಿಸದೇ ನಮ್ಮ ಸುತ್ತ ಮುತ್ತ ನಡೆಯುವ ಘಟನೆ, ವ್ಯಕ್ತಿಗಳು, ಸ್ನೇಹಿತರುಗಳು, ಹಿರಿಯರು, ಕಿರಿಯರುಗಳು, ಓದು, ಕೆಲಸ, ದಾರಿ ಇತ್ಯಾದಿಗಳನ್ನು ನೋಡಿದರೂ ನೋಡದ ರೀತಿಯಲ್ಲಿ, ಕೇಳಿದರೂ ಕೇಳದ ರೀತಿ, ಮಾತನಾಡಿಸಿದರೂ ಮಾತನಾಡದ ರೀತಿಯಲ್ಲಿ ದೂಡಿ.. ನಮಗೆ ಉತ್ತಮ ಎಂಬುದು ನಮ್ಮ ಜೊತೆಯಲ್ಲಿ ಇಲ್ಲವೇ ಇಲ್ಲ ಎಂಬ ದೋರಣೆಯಲ್ಲಿ ಬೇರೆಲ್ಲೂ ಇದೆ ಎಂಬ ಕನಸಿನಲ್ಲಿ ಅದಕ್ಕಾಗಿ ಜಾತಕ ಪಕ್ಷಿಯಂತೆ ಜೀವನಮಾನವನ್ನೆಲ್ಲಾ ಕಳೆಯುವ ಗಾವಿದರಾಗಿದ್ದೇವೆ.



ಸೂಕ್ಷ್ಮತೆ ಎಂಬುದು ಎಲ್ಲೂ ಇದೆ ಎಂಬಂತೆ ವರ್ತಿಸುತ್ತಿದ್ದೇವೆ. ಯಾವುದನ್ನು, ಯಾವುದಕ್ಕೆ ಮಹತ್ವ ಕೊಡಬೇಕಾಗಿದೆಯೋ ಅದನ್ನು ಕಾಲು ಕಸ ಮಾಡಿಕೊಂಡು ಮುಂದೆ ಮುಂದೆ ಹೋಗುತ್ತಿದ್ದೇವೆ. ನಾವು ಮಾಡಿಕೊಂಡಿರುವ ನಮ್ಮ ಜೀವನದ ಕಾಲ ಮಾನದ ಹತ್ತು ಹಲವು ಉತ್ತಮೋತ್ತಮ ಉನ್ನತಿಗಳನ್ನು ಇನ್ನೂ ಬಂದಿಲ್ಲ ಎಂದು ಕೂರಗುತ್ತಲೇ ಕೂತಿದ್ದೇವೆ.

"ಹಿತ್ತಲು ಗಿಡ ಮದ್ದಲ್ಲ" ಎಂಬ ಗಾದೆಯ ಮಾತನ್ನು ಸುಳ್ಳು ಮಾಡುವಂತೆ ನಮ್ಮ ನೋಟ ದೃಷ್ಟಿ ಎಲ್ಲೂ ಹೊರಟು ನಿಂತಂತಿರುವುದು ವಿಪರ್ಯಾಸ.



ನಮ್ಮ ಸುತ್ತಲಿನ ನಮ್ಮ ಪರಿಸರ ನಮ್ಮ ಜನಮನಗಳಿಂದ ಸಿಗುವ ಸುಖ, ಪ್ರೀತಿ, ವಾತ್ಸಲ್ಯ, ಆಸರೆ, ಅಕ್ಕರೆ, ಸ್ನೇಹ, ಇತ್ಯಾದಿ ಮಾನವ ಸಂಬಂಧಿ ಸಂಬಂಧಗಳನ್ನು ನಮ್ಮ ಅಭಿವೃದ್ಧಿಗೆ ಸಂಕೊಲೆಗಳು ಎಂದು ಷರಾ ಬರೆದುಬಿಟ್ಟು ಯಾವುದೊ ಬಿಸಿಲು ಕುದುರೆಯನ್ನು ಏರಿ, ಇಲ್ಲಿ ಎಲ್ಲಾ ಮರುಭೂಮಿ ಎಂದು ಪರಿತಪಿಸುವಂತಾಗುತ್ತಿದೆ ಈ ನಮ್ಮ ಬದುಕು.



ಏನೊಂದು ಉತ್ಸಹ ಇಲ್ಲ. ಏನೊಂದು ಹೊಸತನವಿಲ್ಲದ ಅದೇ ಯಾಂತ್ರಿಕ ಕಾಲ ಚಕ್ರಕ್ಕೆ ಸಿಲುಕಿದ ಮಾನವ ಎಂಬ ಮನಸ್ಸೇ ಮಾಯವಾದಂತಾಗಿದೆ ಎಂದು ನಿಮಗೆ ಅನಿಸುತ್ತಿಲ್ಲವಾ ಯೋಚಿಸಿ.



ಯಾವುದು ಜೀವನಕ್ಕೆ ಮಹತ್ವವಾದದ್ದು ಎಂಬುದು ಹುಟ್ಟಿದನಿಂದ ಇಂದಿನವರೆಗೂ ಇಷ್ಟು ತಿಳಿದರೂ ಸಹ ನಮಗೆ ಗೊತ್ತು ಮಾಡಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲಾ ಅಂದರೇ ಈ ಬೌದ್ಧಿಕ ವಿಕಲತೆ ಎಲ್ಲಿ ಪ್ರಾರಂಭವಾಯಿತು ಎಂಬುದನ್ನು ಕಂಡುಕೊಂಡು ಹೊಸ ಕಿರಣದ ಪ್ರಭೆಯನ್ನು ನೋಡುವ ಮನದ ಕಣ್ಣು ತೆರೆಯುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಅದಕ್ಕೆ ಎಲ್ಲರೂ ಎಲ್ಲರಿಗಾಗಿ ಎಲ್ಲರಿಂದ ಇಲ್ಲೇ ಹುಡುಕಾಡುವಂತಾಗಲಿ.

ಸೋಮವಾರ, ಫೆಬ್ರವರಿ 14, 2011

ಕನ್ನಡಮ್ಮನ ಜಾತ್ರೆಯ ರಂಗಿನ ಹೋಕಳಿ

ಕನ್ನಡಮ್ಮ ನ ಜಾತ್ರೆಯ ನೋಟ ಕಣ್ಣಿಗೆ ಹಬ್ಬವೇ ಸರಿ! ಅಲ್ಲಿ ನಡೆದಾಡುವುದೆ ಒಂದು ಆನಂದ. ಪೂರ್ತಿ ಕನ್ನಡಮಯ. ಐ.ಟಿ, ಬಿ.ಟಿ ನಗರ ಇಲ್ಲಿ ಎಲ್ಲಿ ಕನ್ನಡಿಗರು ಎಂಬುದನ್ನು ನೂರಕ್ಕೆ ನೂರು ಸುಳ್ಳು ಮಾಡಿದ ಅಪರೂಪದ ಸಮ್ಮೇಳನ. ಇದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ವಿಚಾರ. ಈ ಸಮ್ಮೇಳನದ ಮೊದಲ ದಿನದಂದು ಮುಖ್ಯ ವೇದಿಕೆಯ ಮುಂಬಾಗದ ಒಂದು ನೋಟ ಟಿ.ಪಿ ಕಣ್ಣಲ್ಲಿ ಕಂಡಂತೆ.
ಮುಖ್ಯ ಸಭಾ ವೇದಿಕೆ






ಎಲ್ಲಾ ಕನ್ನಡಮಯ ಮತ್ತು ಕನ್ನಡಿಗರು





ಹಂಪಿ ಎಕ್ಸಪ್ರೆಸ್ ಕತೃ ಮತ್ತು ದೇಶಕಾಲ ಜನಕ








ಇಕ್ರಲಾ ಒದೀರಲಾ ಕವಿ

ನನ್ನ ಪ್ರೀತಿಯ ಹುಡುಗಿಯ ಗುರು

ಪುಸ್ತಕಗಳ ಜೊತೆ ಕನ್ನಡ ಮನಸುಗಳು

ಮಂಗಳವಾರ, ಫೆಬ್ರವರಿ 8, 2011

ಪ್ರೀತಿಯನ್ನು ಪ್ರೀತಿಪಟ್ಟವರಿಗಾಗಿ ಪ್ರೀತಿಸುತ್ತಾ ಕೊಡಿ




ಪ್ರೀತಿ ಈ ಎರಡು ಅಕ್ಷರಕ್ಕೆ ಇರುವ ಜಾದು ಮತ್ತು ಶಕ್ತಿಯನ್ನು ವರ್ಣಿಸಲು ಅಸಾಧ್ಯ. ಜೀವಿ ಈ ಭೂಮಿಯ ಮೇಲೆ ತಾನು ಪಾದಾರ್ಪಣೆಯನ್ನು ಮಾಡಿದ ದಿನದಿಂದಲೂ ತನ್ನ ಜೀವನ ವ್ಯಾಪಾರವನ್ನು ಸಾಗಿಸಲು ಇರುವ ಒಂದೇ ಒಂದು ಇಂಧನವಾಗಿದೆ.




ಪ್ರೀತಿಯ ಭಾವನೆ ಒಂಟಿತನವನ್ನು ದೂರ ಮಾಡಿ ತನಗೆ ಸಿಗುವ ಮತ್ತೊಬ್ಬ ಜೊತೆಗಾರನೇ ಸರಿ. ಪ್ರೀತಿ ಎಂಬ ಅಮೃತಪಾನವನ್ನು ವ್ಯಕ್ತಿ ತನ್ನ ಜನ್ಮದಾತೆಯಿಂದ ಸಾಕಷ್ಟು ಕುಡಿದಿರುತ್ತಾನೆ. ಇದರೊಂದಿಗೆ ಅದರ ಒಂದು ಮಧುರ ಅನುಭೂತಿಯನ್ನು ಪ್ರತಿಯೊಬ್ಬರು ಸವಿದಿರುತ್ತಾರೆ. ಅದಕ್ಕಾಗಿಯೇ ಪ್ರತಿಯೊಂದು ಜೀವಿಯು ತಾನು ಹೇಗಾದರೂ ಒಂದಲ್ಲ ಒಂದರಲ್ಲಿ ಒಬ್ಬರಲ್ಲಾ ಒಬ್ಬರಲ್ಲಿ ತನ್ನ ಪ್ರೀತಿಯನ್ನು ಪ್ರಕಟಿಸಲು ತವಕಿಸುತ್ತಿರುತ್ತಾನೆ/ಳೆ.






ತಾಯಿಯ ಮೊದಲ ಪ್ರೀತಿಗೆ ಸಮಾನಾದ ಪ್ರೀತಿ ಈ ಜಗತ್ತಿನಲ್ಲಿ ಮತ್ತೊಂದು ಇಲ್ಲ. ಅದೇ ಸರ್ವ ಶ್ರೇಷ್ಠವಾದದ್ದು. ಪ್ರೀತಿಯೆಂದರೇ ತಾಯಿ. ತಾಯಿ ನಡೆದಾಡುವ ದೇವರೇ ಸರಿ. ದೇವರಿಗೆ ಸಮಾನವಾದ ಈ ಪ್ರೀತಿಯನ್ನು ಸವಿದಿರುವ ನಮ್ಮ ಬಾಲ್ಯ ಮತ್ತು ನಮ್ಮ ಜೀವನದ ಗೆಲುವಿನ ಮುಡಿಪು ಇದಾಗಿದೆ. ಇದರ ಋಣವನ್ನು ನಾವು ಜನ್ಮರಾಭ್ಯ ಎಂಥ ಸೇವೆಯನ್ನು ಮಾಡಿದರೂ ತಿರಿಸಲೂ ಸಾಧ್ಯವಿಲ್ಲ.




ತಾಯಿಯ ಪ್ರೀತಿ ಯಾವುದೇ ಪ್ರತಿಫಲಾಪಕ್ಷೆಯಿಲ್ಲದೇ ತನ್ನ ಮಕ್ಕಳೆಡೆಗೆ ಇರುವಂತ ಸುಂದರ ಭಾವನೆ. ಅದರ ಮಧುರ ಪಾನವನ್ನು ಮಾಡಿ ಮಾಡಿ ತಾನು ಯಾವ ಮಟ್ಟಕ್ಕೆ ವ್ಯಕ್ತಿ ಬೆಳೆಯುತ್ತಾನೆ ಎಂದರೇ.. ಅದೇ ಅವನಿಗೆ ಒಂದು ದೈರ್ಯವನ್ನು ಏನಾದರೂ ಸಾಧಿಸುವ ಚಲವನ್ನು ಕೊಡುವುದು. ಮುಂದೆ ತನ್ನ ಪ್ರೀತಿಯ ಸಿಂಚನಕ್ಕೆ ಅದೇ ದಾರಿ ಮಾಡಿಕೊಡುವುದು. ವ್ಯಕ್ತಿ ಒಬ್ಬರನ್ನು ಯಾವ ರೀತಿಯಲ್ಲಿ ಪ್ರೀತಿಸಬೇಕು ಎಂಬುದನ್ನು ಅಲ್ಲಿಯೇ ಅದರ ಅ, ಆ,ಇ,ಈ.. ಕಲಿಯುವುದು.



ಜಗತ್ತಿನಲ್ಲಿ ಇರುವ ಸರ್ವಶ್ರೇಷ್ಠವಾದ ಒಂದು ಉತ್ಕೃಷ್ಟವಾದ ಜೀವಿಯ ಭಾವನೆಯಲ್ಲಿ ಪ್ರೀತಿ ಒಂದು. ತನ್ನವರೆಡೆಗೆ ತನ್ನಲ್ಲಿ ಸ್ಫುರಿಸುವ ಒಂದು ಮನದ ಭಾವನೆಯ ಎಳೆಯೇ ಈ ಪ್ರೀತಿ. ತಾನು ಅವರಿಗಾಗಿ ಏನಾದರೂ ಮಾಡಲು ಸರಿ! ಎಂಬ ಮಟ್ಟಕ್ಕೆ ವ್ಯಕ್ತಿಯನ್ನು ತಂದು ನಿಲ್ಲಿಸುವ ಆ ತಂತು ಯಾವುದು? ಅದೇ ಈ ಪ್ರೀತಿ.



ಈ ಪ್ರೀತಿಯೆಂಬ ಒರತೆ ಎಂದು ಖಾಲಿಯಾಗದ ಮತ್ತೇ ಮತ್ತೇ ತುಂಬುವ, ತುಂಬಿ ಹರಿಯುವ ಸ್ಫಟಿಕದಂತ ನೀರು. ಹಳ್ಳದಲ್ಲಿ ಮರಳನ್ನು ಹೆಚ್ಚು ಹೆಚ್ಚು ಆಳ ತೆಗೆದಷ್ಟು ಶುದ್ಧವಾದ ನೀರು ತುಂಬುವುದು. ತಾನು ಕುಡಿದು ತನ್ನ ಸುತ್ತಲಿನವರೆಗೂ ಅದರ ಉಪಯುಕ್ತತೆಯನ್ನು ಮನಸ್ಸಿನ ದಾಹವನ್ನು ತಣಿಸುವ ತಂಪನೆಯ ಪಾನಕವೇ ಇದಾಗಿದೆ.




ಹುಡುಗ/ಹುಡುಗಿಯರು ತಮ್ಮ ತಾರುಣ್ಯಾವಸ್ಥೆಗೆ ಬಂದರೂ ಅಂದರೇ ಸರಿ. ತಮ್ಮಲ್ಲಿ ಇರುವ ತನ್ನ ಪ್ರೀತಿಯನ್ನು, ಅದರ ಸಿಂಚನವನ್ನು ತನಗೆ ಒಪ್ಪಿಗೆಯಾಗುವರೊಂದಿಗೆ ವ್ಯಕ್ತಪಡಿಸಬೇಕು ಎಂದು ತವಕಿಸುತ್ತಿರುತ್ತಾರೆ.




ಆ ವಯಸ್ಸೇ ಹಾಗೇ. ಯೌವನದ ದಿನದಲ್ಲಿ ಏನಾನ್ನದರೂ ಮಾಡುವ ಜೋಶ್. ಅದಕ್ಕೆ ತಮಗೆ ಗೊತ್ತಿಲ್ಲದ ರೀತಿಯಲ್ಲಿ ಲವ್ ಎಂಬ ನಾಲ್ಕು ಅಕ್ಷರಗಳ ಸುಳಿಯಲ್ಲಿ ಸುಖವಾಗಿ ಬೀಳುತ್ತಾರೆ. ತಮ್ಮ ಕಡೆಗೆ ತಮ್ಮ ಭಾವನೆಗೆ ಸ್ಪಂದಿಸುವ ಒಂದು ಹೃದಯಕ್ಕಾಗಿ ಹುಡುಕಾಡುತ್ತಾರೆ. ಅದು ನಾವುಗಳು ಹೇಳುವಂತೆ ಜಸ್ಟ್ ಮೊದಲ ಕ್ರಶ್ ಅಥವಾ ಏನಾದರೂ ಸರಿಯೇ, ಅವರಿಗೆ ಒಂದು ಮಧುರವಾದ ಭಾವನೆಯನ್ನು ವ್ಯಕ್ತಪಡಿಸಲು ಹುಡುಗ -ಹುಡುಗಿಯರಿಗೆ ಜೊತೆಗಾರರು ಒಬ್ಬರು ಬೇಕಾಗಿರುತ್ತಾರೆ.






ಆ ವಯಸ್ಸಿಗೆ ತನ್ನ ತಂದೆ ತಾಯಿಗಳು ಏನೇ ತಮ್ಮ ಮೊದಲ ಪ್ರೀತಿಯ ಸ್ನೇಹಿತರಾದರೂ.. ತಮ್ಮ ಸಮಾನ ವಯಸ್ಸಿನ ಜೊತೆಗಾರರೊಡನೆ ಬೇರೆಯುವಂತೆ ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಲೂ ತಮ್ಮಂತೆಯೇ ಯೋಚಿಸುವ ತಮ್ಮ ವಯಸ್ಸಿನ.. ಸಂಗಾತಿಯ ಅಸರೆ ಬೇಕೆನಿಸುತ್ತದೆ. ಮೊದ ಮೊದಲು ಸ್ನೇಹಕ್ಕಾಗಿ ಗೆಳೆಯ-ಗೆಳತಿಯರನ್ನು ಹುಡುಕಿಕೊಂಡು ಹೈಸ್ಕೋಲ್, ಕಾಲೇಜು ವಿದ್ಯಾಭ್ಯಾಸದ ಜೊತೆಯಲ್ಲಿ ತಮ್ಮ ಕನಸುಗಳಿಗೆ ರೆಕ್ಕೆಯನ್ನು ಕೊಡುವ, ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಮನಸುಗಳ ಕಡೆಗೆ ತಮ್ಮ ಮನಸ್ಸನ್ನು ಹರಿಯ ಬಿಡುತ್ತೇವೆ.




ಆ ವಯಸ್ಸಿನಲ್ಲಿ ಅದು ಶಾಶ್ವತವಾಗಿ ಈ ಒಂದು ಸಂಬಂಧ ಉಳಿಯಬೇಕು ಎಂಬ ಕರಾರು ಅಥವಾ ಒಂದು ಅನಿಸಿಕೆ ಏನೂ ಇರಲಾರದು. ಅದು ಆ ಸಮಯದಲ್ಲಿ ಜೊತೆಯಲ್ಲಿ ಒಬ್ಬರೊಬ್ಬರಿಗೆ ತಮ್ಮ ಭಾವನೆಯ ವಿನಿಮಯಕ್ಕೆ ದಾರಿಯನ್ನು ಕಂಡು ಕೊಂಡಿರುತ್ತಾರೆ.



ಒಮ್ಮೊಮ್ಮೆ ಹಲವಾರು ಉತ್ತಮ ಸ್ನೇಹಿತರುಗಳನ್ನು - ಪ್ರಾಣ ಸ್ನೇಹಿತರುಗಳನ್ನು ಪಡೆಯಬಹುದು. ಅದು ಎಷ್ಟರ ಮಟ್ಟಿಗೆ ಪರಸ್ಪರ ಒಬ್ಬರನ್ನೊಬ್ಬರು ಹೇಗೆ ಅರ್ಥಮಾಡಿಕೊಂಡಿರುತ್ತಾರೆ ಎಂಬುದರ ಮೇಲೆ ನಿಂತಿರುತ್ತದೆ.



ಹಾಗೆಯೇ ಸಾಗುತ್ತಾ ಸಾಗುತ್ತಾ.. ಅವರುಗಳಲ್ಲಿಯೇ ಯಾರ ಮೇಲೆ ಅತಿಯಾದ ಮತ್ತು ತಮಗೆ ಹಿಡಿಸುವಂತಹರು ಯಾವುದೊ ಒಂದು ರೀತಿಯಲ್ಲಿ ತಮ್ಮ ಮನಸ್ಸಿನ ಭಾವನೆಗಳಿಗೆ ಹೊಂದಿಕೆಯಾಗುವ.. ಅವನ/ಅವಳ ಯಾವುದೋ ಒಂದು ಗುಣ ಅಥವಾ ಹಲವು ಗುಣ ನಡೆ ನುಡಿಗಳು ತುಂಬ ಪರಿಣಾಮ ಬೀರಿದರೆ ನಮ್ಮ ಹುಡುಗ/ಹುಡುಗಿಯರು ಒಳ ಒಳಗೆ ಅವನನ್ನು/ಅವಳನ್ನು ತಮ್ಮ ಹೃದಯದಲ್ಲಿ ಇಟ್ಟು ಆರಾಧಿಸಲು ಪ್ರಾರಂಭಿಸುತ್ತಾರೆ.




ಈ ರೀತಿಯ ಒಂದು ಭಾವನೆ ಹೆಚ್ಚು ಹೆಚ್ಚು ಜೊತೆಯಲ್ಲಿ ನಡೆದಾಡುವ ಹೆಚ್ಚು ಹೆಚ್ಚು ಸ್ನೇಹಮಯವಾಗಿ ಬೆರೆತಾಗ.. ಅವನ/ಅವಳ ಪ್ರತಿಯೊಂದು ಮನಸ್ಸಿನ ವಿಚಾರ/ಭಾವನೆ ವ್ಯಕ್ತಿತ್ವಗಳಿಂದ ಆಕರ್ಷಿತರಾಗಿ ಅವನಿಗೆ/ಅವಳಿಗೆ ಮನ ಸೋತು ಹೋಗಿ ಬಿಟ್ಟಿರುತ್ತಾರೆ. ಅಲ್ಲಿ ಕೇವಲ ಸ್ನೇಹ ಎಂದು ಪ್ರಾರಂಭವಾಗಿದ್ದು. ಪ್ರೇಮ ಎಂಬ ಎರಡಕ್ಷರದ ಭಾವನೆಗೆ ಬಂದು ನಿಲ್ಲುತ್ತದೆ. ಹೌದು! ಉತ್ತಮ ಸ್ನೇಹಿತರುಗಳು ಮಾತ್ರ ಉತ್ತಮ "ಪ್ರೇಮಿ" ಗಳಾಗಲು ಸಾಧ್ಯ!



ಇಲ್ಲಿ ಯಾವುದೇ ಅಂತಸ್ತು, ಜಾತಿ, ಜಾತಕ ಹೀಗೆ ಯಾವುದೆ ಕಟ್ಟಳೆಗಳಿಲ್ಲದೆ ಹುಟ್ಟುವ ಒಂದು ಸ್ನೇಹಮಹಿ ಸಂಬಂಧ ಇದಾಗಿರುತ್ತೆ. ಆ ವಯಸ್ಸಿನಲ್ಲಿ ನಮ್ಮ ಹುಡುಗ/ಹುಡುಗಿಯರಿಗೆ ಮುಂದಿನ ಜೀವನದ ಕಲ್ಪನೆಗಳು ಯಾವ ರೀತಿಯಲ್ಲೂ ಇರುವುದಿಲ್ಲ. ಆ ಸಮಯಕ್ಕೆ ಅವರಿಗೆ ತಮ್ಮ ಮನಸ್ಸಿನ ಕನಸುಗಳಿಗೆ ಬಣ್ಣ ಕಟ್ಟುವ ಜೋಡಿ ಬೇಕು ಅಷ್ಟೇ... ಈ ರೀತಿಯ ಅಪ್ರಾಪ್ತವಾದ ಸಂಬಂಧಗಳು ನಮ್ಮ ಹಿರಿಯರಿಗೆ ಹಿಡಿಸುವುದಿಲ್ಲ. ಯಾಕೆಂದರೇ ಅವರುಗಳು ಜೀವನವನ್ನು ನೋಡುವ ದೃಷ್ಟಿ ಕೋನವೇ ಬೇರೆಯ ರೀತಿಯಲ್ಲಿರುತ್ತದೆ. ಅಲ್ಲಿ ಅವರಿಗೆ ಜವಾಬ್ದಾರಿ ಇರುತ್ತದೆ. ದೂರಾಲೋಚನೆ ಇರುತ್ತದೆ. ಸಮಾಜವನ್ನು ಎದುರಿಸ ಬೇಕು ಎಂಬ ಭಯವಿರುತ್ತದೆ ಮತ್ತು ಯೋಚನೆಯಿರುತ್ತದೆ.



ನಮ್ಮ ಈ ಮಕ್ಕಳಿಗೆ ಆ ವಯಸ್ಸಿಗೆ ಅದ್ಯಾವುದು ನೆನಪಿಗೂ ಸಹ ಬರಲಾರದು. ಯಾಕೆಂದರೇ ಅದು ಸ್ಟೋಡೆಂಟ್ ಲೈಫ್ ಅಂದರೇ ಗೋಲ್ಡನ್ ಲೈಫ್ ಎಂಬ ಲೈಫ್ ಲ್ಲಿ ಜೀವಿಸುತ್ತಿರುತ್ತಾರೆ. ತಮ್ಮ ಪ್ರೀತಿಯ ತೊರೆಯನ್ನು ಇನ್ನೂ ಹೆಚ್ಚು ಹೆಚ್ಚು ತುಂಬಿಸಿಕೊಳ್ಳುವ ತವಕದಲ್ಲಿರುತ್ತಾರೆ.




ಪ್ರಕೃತಿ ಸಹಜವಾದ ಭಾವನೆಗಳ ಲಹರಿಗೆ ಯಾವುದೇ ಅಡ್ಡಿ ಇರಲಾರದು. ಅದನ್ನು ಅವರುಗಳು ಈ ರೀತಿಯ ಒಂದು ಸುಂದರ ಲೋಕದಲ್ಲಿ ನಡೆದಾಡಲೂ ಶುರು ಮಾಡುತ್ತಾರೆ.



ಈ ರೀತಿಯ ಭಾವನೆಯ ಉಗಮಕ್ಕೆ ಪ್ರೇರಣೆಯಾದರೂ ಯಾವುದು ಎನ್ನಬಹುದು. ನಮಗೆಲ್ಲಾ ಗೊತ್ತಿದೆ. ಅದು ಎಲ್ಲಾರಿಗೂ ಬರುವಂತದ್ದೇ. ಒಬ್ಬೊಬ್ಬರೂ ವ್ಯಕ್ತ ಪಡಿಸುತ್ತಾರೆ. ಮತ್ತೇ ಕೆಲವರು ವ್ಯಕ್ತಪಡಿಸಲಾರದೇ ತಮ್ಮಲ್ಲಿಯೇ ಇಟ್ಟುಕೊಂಡು ಅವುಗಳಿಗೆ ಎಳ್ಳು ನೀರು ಬಿಟ್ಟುಕೊಂಡಿರುತ್ತಾರೆ.



ಆದರೋ ಇಂದಿನ ಈ ತಾಂತ್ರಿಕ ಯುಗದಲ್ಲಿ ನಮಗೆ ನಮ್ಮ ಕಣ್ಣೆದುರೇ ಇದನ್ನು ಪ್ರೋತ್ಸಾಹಿಸುವಂತಹ ಘಟನೆಗಳು ಹಲವಾರು ಮಾದ್ಯಮಗಳಲ್ಲಿ ನಮ್ಮ ಮನೆ ಮತ್ತು ಮನದಂಗಳಗಳಿಗೆ ದಾಳಿಯಿಡುತ್ತಿವೆ. ಆದ್ದರಿಂದ ಯುವಕರು ತಾವುಗಳು ತಮ್ಮ ತಮ್ಮಲ್ಲಿಯೇ ಹಾಗೇ ಹೀಗೆ ಆಗಬೇಕು ಎಂಬ ಕನಸುಗಳು.. ಅದಕ್ಕೆ ಹತ್ತು ಹಲವಾರು ದಾರಿಗಳು... ಕಾಣಿಸುತ್ತಿವೆ.. ಪಡೆಯುತ್ತಾರೆ.. ಗೆಲ್ಲುತ್ತಾರೆ ಒಮ್ಮೊಮ್ಮೆ ಸೋಲುತ್ತಾರೆ..




ಆದರೇ ನಾವುಗಳು ಏಕೆ ಒಂದು ಹುಡುಗ ಹುಡುಗಿ ಜೊತೆಯಾಗಿ ಮಾತನಾಡಿದರೆ ಅದು ಇದೆ ಎಂಬ ರೀತಿಯಲ್ಲಿ ನೋಡೂತ್ತೆವೋ ತಿಳಿಯದು. ಈ ರೀತಿಯ ನೋಟವೇ ಅವರುಗಳನ್ನು ಒಮ್ಮೊಮ್ಮೆ ತಾವುಗಳು ನಡೆಯುತ್ತಿರುವ ದಾರಿಯೇ ಹೇಗೋ ಏನೋ ಎಂಬಂತೆ ಗಲಿಬಿಲಿಯಲ್ಲಿ ನಿಲ್ಲುವಂತಾಗುತ್ತದೆ. ಅದಕ್ಕೆ ಹಿರಿಯರಾದವರೊ ಸೊಕ್ತ ರೀತಿಯಲ್ಲಿ ತಮ್ಮ ಮಟ್ಟಿಗೆ ತಕ್ಕ ಸಮಯದಲ್ಲಿ ಮಾರ್ಗದರ್ಶನಗಳನ್ನು ನೀಡಿದರೇ ಇದರಿಂದ ಆಗುವ ಅನಾಹುತಗಳನ್ನು ತಡೆಯಬಹುದು ಏನೋ ಅಲ್ಲವಾ.



ಮತ್ತೇ ಒಂದು ಸಿದ್ಧಾಂತವೇ ನಿರ್ಮಾಣವಾಗಿದೆ. ನೀನು ಯಾರನ್ನಾದರೋ ಪ್ರೀತಿಸಿದೆಯೆಂದರೇ ಅವರನ್ನು ಪಡೆಯಲೂ ನೀನು ಸಾಕಷ್ಟು ಜೀವನದಲ್ಲಿ ಕಷ್ಟಪಡಬೇಕಾಗುತ್ತದೆ... ಲವ್ ಅಂದರೇ ನೋವು. ಹೀಗೆ ಹತ್ತು ಹಲವು ರೀತಿಯ ಪರಿಸ್ಥಿಗಳು ನಮ್ಮ ಎದುರಲ್ಲಿ ಇಂದು ನಿಂತಿವೆ. ಯಾಕೇ? ಒಂದು ಸಾಮಾನ್ಯ ಮಧುರ ಭಾವನೆಗಳನ್ನು ತಾನು ಇಷ್ಟಪಟ್ಟವರಿಗೆ ವ್ಯಕ್ತಪಡಿಸಲೂ ಸಾಧ್ಯವಿಲ್ಲವೆ. ಲವ್ ಅಂದರೇ ನಿಜವಾಗಿಯೂ ಕ್ರೈಮಾ?




ಯೋಚಿಸಿ ಎಷ್ಟೊಂದು ಪ್ರೇಮಿಗಳು ತಮ್ಮ ಪ್ರೀತಿಯನ್ನು ದಕ್ಕಿಸಿಕೊಳ್ಳಲಾರದೇ ಮತ್ತು ಸುತ್ತಲಿನ ತಮ್ಮ ಹಿರಿಯರು, ಸಮಾಜದೊಡನೆ ಹೋರಾಡಲು ಅಸಕ್ತರಾಗಿ ಸ್ವರ್ಗದಲ್ಲಾದರೂ ಒಂದಾಗೋಣ ಎಂದು ತಮ್ಮ ಪ್ರಾಣಗಳನ್ನು ನಿತ್ಯ ಕಳೆದುಕೊಳ್ಳುತ್ತಿದ್ದಾರೆ. ಯಾಕೇ? ಇದಕ್ಕೆ ನಮ್ಮ ಮುಂದೆ ನಮ್ಮ ಹಿಂದಿನ ಪುರಾಣ ಕಾಲದಿಂದ ಪ್ರಾರಂಭಿಸಿ ಇತ್ತೀಚೆಗಿನ ನಮ್ಮ ಸುತ್ತಲಿನ ಹತ್ತಿರದ ಘಟನೆಗಳೆ ಸಾಕ್ಷಿಯಾಗಿವೆ.


ನಾವುಗಳು ನಿತ್ಯ ಓದುವ ಕಾದಂಬರಿ, ನೋಡುವ ಸಿನಿಮಾ, ಕೇಳುವ ಹಾಡುಗಳಲ್ಲಿ ಯಾಕೇ ಈ ಒಂದನ್ನು ಇಷ್ಟೊಂದು ರೀತಿಯಲ್ಲಿ ಚಿತ್ರಿಸುತ್ತಾರೆ. ಇಂದು ಪ್ರೀತಿ -ಪ್ರೇಮ ಇಲ್ಲದ ಯಾವುದೇ ಒಂದು ಕಾರ್ಯಕ್ರಮಗಳೇ ಇಲ್ಲವೆನೋ. ಮುಂದಿನ ನಮ್ಮ ಈ ಜೀವ ಲೋಕದ ಬೆಳವಣಿಗೆಗೆ ಕಾರಣೀಭೂತವಾದ ಇಂಥ ಅಮೊಲ್ಯವಾದ ಒಂದು ಸ್ಪಂದನಕ್ಕೆ ಯಾಕೀಷ್ಟು ಕಟ್ಟಪ್ಪಣೆಗಳು. ಅದು ಎಲ್ಲ ತಿಳಿದಂತಹ ನಿತ್ಯ ಹತ್ತು ಹಲವು ಇದಕ್ಕೆ ಸಂಬಂಧಿಸಿದ ಚಿತ್ರಣಗಳನ್ನು ನೋಡಿದರೂ ಪುನಃ "ಹೇ ನನ್ನ ಮಗಳು/ಮಗ ಮಾತ್ರ ಆ ರೀತಿಯಲ್ಲಿ ಮಾಡಬಾರದು" ಎಂಬ ದೋರಣೆ ಯಾಕೇ? ಅದೇ ಕರುಣಾಜನಕವಾದ ಪ್ರೇಮ ಕಥೆಗಳನ್ನು ಇಷ್ಟಪಟ್ಟು ಬೆಸ್ಟ್ ಸೆಲ್ ರ್, ಬೆಸ್ಟ್ ಮೋವಿ, ಬೆಸ್ಟ್ ಹಾಡು ಎಂದು ಓದುತ್ತಾ, ನೋಡುತ್ತಾ, ಕೇಳುತ್ತಾ ಸಂಭ್ರಮಿಸುತ್ತೇವೆ. ಅದೇ ನಮ್ಮ ಪಕ್ಕದಲ್ಲಿ ನಮ್ಮವರೊಡೊಣೆ ಘಟಿಸಿದರೆ ಹಾವು ಕಂಡಂತೆ ಹುಬ್ಬೇರಿಸುತ್ತೆವೆ ಯಾಕೆ?




ಆದರೋ ಈ ಎಲ್ಲಾ ವಿಚಾರಗಳೊಂದಿಗೆ ವ್ಯಾಲೆಂಟೈನ್ -ಪ್ರೇಮಿಗಳ ದಿನದ ಶುಭಾಶಯಗಳು! ಪ್ರೀತಿಯನ್ನು ಪ್ರೀತಿಪಟ್ಟವರಿಗಾಗಿ ಪ್ರೀತಿಸುತ್ತಾ ಕೊಡಿ.

ಶುಕ್ರವಾರ, ಫೆಬ್ರವರಿ 4, 2011

ಎಲ್ಲಿ ಜಾರಿತೋ ಆ ನಮ್ಮ ಬಾಲ್ಯ..



ಎಲ್ಲಿ ಜಾರಿತೋ ಆ ಬಾಲ್ಯದ ನಮ್ಮ ನಿಮ್ಮೆಲ್ಲಾರ ಕ್ರಿಯೇಟಿವಿಟಿ? ಕ್ಷಣ ಕ್ಷಣವೂ ಹೊಸ ಹೊಸ ಬದುಕಿಗೆ ಹಂಬಲಿಸುತ್ತಿದ್ದ ಮನಸ್ಸು ಮತ್ತು ದೇಹ. ದಿನ ದಿನವೂ ಚಡಪಡಿಸುತ್ತಿದ್ದ ಹೊಸ ಆವಿಷ್ಕಾರಕ್ಕೆ ಸಜ್ಜಾಗುತ್ತಿದ್ದ ಮನೋಲಹರಿ.


ದೇಹ ಬೆಳೆದಂತೆ ನಾವು ತಿಳಿದಂತೆ ನಮ್ಮ ಬುದ್ಧಿಯು ಬೆಳೆಯುತ್ತದೆ. ಇದು ವೈಙ್ಞಾನಿಕವಾಗಿಯೋ ಅನುಭವಜನ್ಯವಾಗಿಯೊ ಸತ್ಯವಾದದ್ದು.


ಹಾಗೆಯೇ ನಾವುಗಳು ನಮ್ಮ ಅರಿವಿನ ಹಿರಿಮೆಯನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ನಮ್ಮ ಅಗಾಧ ಮನೋಸಹಜ ಮುಗ್ಧತೆಯ ಕ್ರಿಯಶೀಲತೆಯನ್ನು ಅಮುಕಲಾರಂಭಿಸುತ್ತೇವೆ.


ಬಾಲ್ಯದ ಆ ಸ್ವಚ್ಛಂದ ಮನಸ್ಸು ಕಲಿಯುವ ಶಾಲಾರಂಭದಿಂದ ತನ್ನ ವಿದ್ಯಾಭ್ಯಾಸ ಮತ್ತು ತನ್ನ ಸುತ್ತಲಿನವರಿಂದ ಇದು ಹೀಗೆ, ನೀನು ಹೀಗೆ ಬೆಳೆಯಬೇಕು. ನೀನು ಹೀಗೆ ಕಲಿಯಬೇಕು. ಮಕ್ಕಳ ಬುದ್ಧಿ ಬಿಟ್ಟು ಬಿಡು. ನೀನು ಬೆಳೆಯುತ್ತಿದ್ದೀಯ, ವಯಸ್ಸು ಹೆಚ್ಚಾಗುತ್ತಿದೆ. ಎಂಬ (ಅ)ಸಾಮಾನ್ಯ ಮಾತುಗಳನ್ನು ತನ್ನ ಹೆತ್ತವರಿಂದ ಹಿಡಿದು ತಾನು ಹೊಂದಿರುವ ಎಲ್ಲಾ ರೀತಿಯ ಸಂಪರ್ಕದ ಜನರಿಂದ ದಿನಂಪ್ರತಿ ಕೇಳಿ ಕೇಳಿ ತಾನು ತನ್ನಂತಯೇ ಯೋಚಿಸುವುದನ್ನೇ ಬಿಟ್ಟು ಎಲ್ಲಾ ಸೀಲಬಸ್ ಪ್ರೇಮ್ ನಲ್ಲಿಯೇ ಬಾಳಲಾರಂಭಿಸುತ್ತೇವೆ.


ತನ್ನ ಒಂದು ವರ್ಷದಲ್ಲಿರುವಂತಹ ಡೇರ್, ಬ್ರೇವ್ ಛಲಗಳನ್ನೆಲ್ಲಾ ತಾನು ಯಾವುದೊ ಒಂದು ಬುದ್ಧಿವಂತ ಬದುಕನ್ನು ಕಲಿಯಲಾರಂಭಿಸಿರುವೆನು ಎಂಬ ಯೋಚನೆಯ ಹೋಮ್ ವರ್ಕನಲ್ಲಿ ಕಳೆದು ಕೊಳ್ಳಲಾರಂಭಿಸುತ್ತೇವೆ.


ಈ ಭೂಮಿಯ ಮೇಲೆ ಹುಟ್ಟಿದ ಯಾವುದೇ ಮಗು ತನ್ನದೇಯಾದ ರೀತಿಯಲ್ಲಿ ವಿಭಿನ್ನವಾಗಿ, ವೈವಿಧ್ಯಮಯವಾಗಿ ಗುಣ ವಿಶಿಷ್ಟಗಳನ್ನು ಕಳೆದುಕೊಳ್ಳುತ್ತದೆ. ತನ್ನ ಹತ್ತಿರದವರ ಸುತ್ತಲಿನವರ ಜೇರಾಕ್ಸ್ ಪ್ರಾಡಕ್ಟ್ ರೀತಿಯಲ್ಲಿ ಅನುಕರಣೆ ಎಂಬ ವ್ಯಾದಿಯಂತೆ ಕಾಯಾ ವಾಚಾ ಪಾಲಿಸಲಾರಂಭಿಸಿ ತಾನು ಏನು? ಎಂಬುದನ್ನು ತಿಳುವಳಿಕೆಯೆಂಬ ಯೋಜನೆಯಲ್ಲಿ ತಾನು ಕ್ರಮಿಸಿದ ಎಷ್ಟೋ ದೂರದ ಮೇಲೆ ಯೋಚಿಸಲಾರಂಭಿಸುತ್ತಾನೆ.


ಅನುಕರಣೆ ಮಾನವ ಸಹಜ ಬುದ್ಧಿವಂತಿಕೆಯ ಮಜಲು. ಒಪ್ಪೋಣ ಆದರೇ ಅದೇ ಅಂಧಾನುಕರಣೆಯಾಗಿ ಆ ನಮ್ಮ ಮಗು ಸಹಜ ಮನಸ್ಸಿನ ದಬ್ಬಾಳಿಕೆಯಾಗಬಾರದು.


ತಾನು ಚಿಂತಿಸುತ್ತಿದ್ದ ಹೊಸ ಹೊಸ ವಿಚಾರಗಳು ಅವುಗಳ ಹಿಡೇರಿಕೆಗಾಗಿ ಪ್ರಯತ್ನಿಸುತ್ತಿದ್ದ ಆ ನಿರ್ಭಯ ಪ್ರಯತ್ನ ಯಾಕೇ ನಾವು ದೊಡ್ಡವರಾದ ಮೇಲೆ ನಮ್ಮ ನಿಮ್ಮಲ್ಲಿ ಇಲ್ಲವಾಗುತ್ತವೆ.


ಯಾವುದೇ ಹೊಸ ವಿಚಾರವನ್ನು ಮಾಡಲು ಅನುವುಮಾಡುವ ಮನಸ್ಸು ನಮ್ಮಲ್ಲಿ ಮೂಡಿದರೂ ದುತ್ತನೆ ಇನ್ನೊಂದು ನಮ್ಮದೆಯಾದ ಮನಸ್ಸು ಬೇಡ ಎಂದು ಕಾಲು ಎಳೆಯುತ್ತದೆ?


ಆದ್ದರಿಂದ ಈಗಾಗಲೇ ನಾವುಗಳು ಗಮನಿಸಿರುವಂತೆ ನಮ್ಮ ಆಸೆ, ಹೊಸತನಗಳಿಗೆ ಕಾಲು ಎಳೆಯುವ ಆ ಮನಸ್ಸು "ತುಂಬಾ ಬುದ್ಧಿವಂತ ಮನಸ್ಸು" ನಿಜ ತಾನೇ?


ನಮ್ಮ ಶಿಕ್ಷಣ ವ್ಯವಸ್ಥೆಯ ಭರದಲ್ಲಿ ನಮ್ಮ ಎಲ್ಲಾ ಮಕ್ಕಳ ವೈಚಾರಿಕ ಮತ್ತು ವಿಭಿನ್ನ ರೀತಿಯ ಹೊಸ ಜೀವಂತಿಕೆಯನ್ನು ಪರೀಕ್ಷೆ - ಅಂಕಗಳು - ಪದವಿಗಳು ಎಂಬ ವಿವಿಧ ಸಮಾಜದ "ಬುದ್ಧಿವಂತಿಕೆಯ" ಪ್ರಯಾಣಗಳ ಮೂಲಕ ಮಗುವಿನಂತ ಮುಗ್ಧ ಆವಿಷ್ಕಾರದ ಸೆಲೆಯನ್ನು ಕಮರಿಸುತ್ತಿದ್ದೇವೆ ಎಂದು ನಿಮಗೆ ಅನಿಸುವುದಿಲ್ಲವೇ?


ಈ ರೀತಿಯ ವಿವಿಧ ರೀತಿಯಲ್ಲಿ ತನ್ನ ೮ ರಿಂದ ೨೫ ವರ್ಷದ ವಯೋಮಾನದಲ್ಲಿ ನಾವುಗಳು ಕೇವಲ ಈ ರೀತಿಯ ದಮನಕಾರಿ ಭಾವನೆಗಳಿಂದ ಮಗು ತಾನು ಏನು? ಎಂದು ಯೋಚಿಸಲೂ ಸಮಯ ನೀಡದೆ ನಮ್ಮದೇ ಆದ ಬುದ್ಧಿವಂತ ಅಚ್ಚುಗಳಲ್ಲಿ ಬೇಯಿಸಿ ನಿಜವಾದ ರೀಯಲ್ ಲೈಫ್ ಗೆ ದೂಡುತ್ತೇವೆ.


ಆಗ ಆ ವ್ಯಕ್ತಿ ತಾನು ಮುಂದೇನು ಮಾಡಬೇಕು ಎಂದು ಗಲಿಬಿಲಿಗೊಳ್ಳುವ ಭರದಲ್ಲಿ ಅದು ತಾನು ಬೆಂದ ಶಿಷ್ಟ ಶಿಕ್ಷಣದ ಥೇಯರಿಗಳನ್ನು ಙ್ಞಾಪಿಸಿಕೊಳ್ಳುತ್ತಾ ಹಳಬರು ಮಾಡುತ್ತಿದ್ದ ಕೆಲಸ, ಯೋಜನೆಗಳನ್ನೇ ಮುಂದುವರಿಕೆ ಮಾಡುವ ಯಂತ್ರಗಳಂತೆ ಆಗುತ್ತೇವೆ. ಯಾವುದೇ ತನ್ನ ಹೊಸ ಯೋಜನೆಗಳನ್ನು ಜಾರಿ ಮಾಡಲು ಕ್ಷಣಕಾಲ ಯೋಚಿಸಲಾರಂಭಿಸುತ್ತದೆ ಮತ್ತು ಆ ರೀತಿಯ ಕಿರಿಕ್ ಐಡಿಯಗಳನ್ನು ಬಿಟ್ಟು ಸೇಫ್ ಜೋನ್ ಕಡೆಗೆ ಮುಖ ಮಾಡುತ್ತದೆ.


ತನ್ನ ಬಾಲ್ಯದಲ್ಲಿ ತನಗೆ ತಿಳಿಯದಂತೆ ಇದ್ದ ಆ ಪ್ರಚಂಡ ಜೀವಂತಿಕೆ ಎಲ್ಲಿ ಹೋಯಿತು? ಎಂದು ತಿಳಿಯುವಷ್ಟರಲ್ಲಿ ಜೀವನದ ನಿಜವಾದ ಸವಾಲುಗಳು ಬಂದು ಎಕ್ಕಾ ಮಕ್ಕಾ ಅಪ್ಪಳಿಸುವಾಗ ತಾನು ತನ್ನ ಮುಂದಿನ ಮಕ್ಕಳಿಗೆ ಇದೇ ರೀತಿ ತಾನು ಅನುಭವಿಸಿದ ತನ್ನದೇಯಾದ ಥೇಯರಿ ಎಂಬ ಕುಲುಮೆಗಳನ್ನು ಆ ಮಕ್ಕಳಿಗೆ ಸಿದ್ಧ ಮಾಡುವಲ್ಲಿ ತನ್ನ ಅರ್ಧ ಜೀವನವನ್ನು ಅಣಿಮಾದಲು ಮುಂದಾಗುತ್ತನೆ.


ಆದರೇ, ಈ ರೀತಿಯ ಜೀವನದಲ್ಲಿ ಯಾವುದೇ ಆಡಚಣೆಗಳು, ಆಶಾಭಂಗಗಳಿದ್ದರೂ ಹಲವು ಮಹನೀಯರು ತಮ್ಮದೇಯಾದ ಹೊಸ ಹೊಸ ಮೌಲ್ಯಯುತವಾದ "ಕೊಡುಗೆ"ಗಳನ್ನು ಜಗತ್ತಿಗೆ ನೀಡಿದ್ದಾರೆ. ಅದೇಯಲ್ಲವೇ "ಜೀವನದ ಮರ್ಮ".