ಸೋಮವಾರ, ಏಪ್ರಿಲ್ 26, 2010

ಇದು ಸಹಜ



ಜೀವನದಲ್ಲಿ ಯಾವುದು ನಾವು ಅಂದುಕೊಂಡಂತೆ ಆಗುವುದಿಲ್ಲ. ಎಲ್ಲಾ ನಮಗೆ ತಿಳಿಯದ ರೀತಿಯಲ್ಲಿ ಚಿಕ್ಕ ಕ್ಷಣದಲ್ಲಿ ಕಿರು ಅಚ್ಚರಿಯ ನಡುವೆ ನಡೆದು ಹೋಗುತ್ತವೆ. ನಾವುಗಳು ನಮಗೆ ಎಲ್ಲಾ ಗೊತ್ತಿದೆ ಎಂಬ ದೊರಣೆಯಿಂದ ಖುಷಿಯಲ್ಲಿ ವಿರಮಿಸುವೆವು. ಆದರೆ ಅದು ಯಾವುದೊ ದಿಕ್ಕಿನಲ್ಲಿ ಯಾವುದೊ ಆಸೆಯಿಂದ ಬೇರೊಂದು ದಡವನ್ನು ಸೇರುತ್ತದೆ. ಅದೆಯಲ್ಲವೇ ಕಥೆಯಲ್ಲ ಜೀವನ!


ನಮಗೆ ಅತ್ಮೀಯವರಾದವರೂ ಸಹ ನಮಗೆ ಅವರು ಗೊತ್ತು ಬಿಡು, ಅವರು ನಮಗೆ ತಿಳಿಯದಂತೆ ಏನೊಂದು ಕಾರ್ಯವನ್ನು ಮಾಡುವುದಿಲ್ಲ. ಹಾಗೇ ಮಾಡಬೇಕಾದರೂ ಅವರು ನಮಗೆ ತಿಳಿಸಿಯೇ ಮಾಡುವವರು ಎಂದು ನಮ್ಮಲ್ಲಿಯೇ ಆಶಾ ಸೌಧವನ್ನು ಕಟ್ಟಿಕೊಂಡು ಬಿಟ್ಟಿರುತ್ತೇವೆ.


ನಮ್ಮ ನಮ್ಮ ಮನಸ್ಸಿನಲ್ಲಿ ನಾವುಗಳು ಈ ರೀತಿ ನಮ್ಮ ಹತ್ತಿರದವರ ಬಗ್ಗೆ ಹಲವಾರು ರೀತಿಯಲ್ಲಿ ಸುಳ್ಳಿನ ಭ್ರಮೆಯನ್ನು ಕಟ್ಟಿಕೊಂಡು ಅವರು ನಮ್ಮ ಕಣ್ಣಳತೆಯಲ್ಲಿ ಇದ್ದಾರೆ ಎಂದು ಮೈಮರೆತು ಸುಖಪಡುತ್ತೇವೆ. ಅದರೆ ನಮಗೆ ತಿಳಿಯದ ರೀತಿಯಲ್ಲಿ ಅವರು ಅವರ ಯೋಚನೆಯಲ್ಲಿ ಒಂದು ಶಾಕ್ ಕೊಟ್ಟಾಗ, ಅವರು ಎಷ್ಟರ ಮಟ್ಟಿಗೆ ನಮ್ಮ ಕಣ್ಣಳತೆಯಲ್ಲಿ ಇದ್ದಾರೆ ಎಂಬುದು ತಿಳಿಯುವುದು.


ಇದು ನಮ್ಮ ನಮ್ಮ ಕುಟುಂಬದಲ್ಲಿ ನಮ್ಮವರೆಯಾದ ನಮ್ಮ ಮಕ್ಕಳು, ಅಕ್ಕ - ತಂಗಿಯರು, ಅಣ್ಣ - ತಮ್ಮಂದಿರೂ, ತಂದೆ-ತಾಯಿಯಂದಿರೂ, ಹತ್ತಿರದವರಿಂದೊಡಗೊಡಿ ನಮ್ಮ ಸ್ನೇಹಿತರವರಿಗೆ ನಾವುಗಳು ನಮ್ಮ ನಮ್ಮಲ್ಲಿಯೇ ಕಲ್ಪಿಸಿಕೊಂಡು ಸಂಭ್ರಮಿಸಿಕೊಂಡು, ನೋಡು ಎಲ್ಲಾರೂ ಹೇಗೆ ಎಷ್ಟೋಂದು ನಮಗೆ ಅತ್ಮೀಯರಾಗಿದ್ದರೆ ಎಂದು ಸಡಗರಪಡುತ್ತೇವೆ.


ಆದರೆ ಹೇಗೆ ನಮ್ಮ ಐದು ಬೆರಳುಗಳು ಒಂದೇಯಾಗಿರುವುದಿಲ್ಲವೂ ಹಾಗೆಯೇ ನಮಗೆ ಗೊತ್ತಿರುವ ಎಲ್ಲಾ ಹತ್ತಿರದವರ ಭಾವನೆ, ಚಿಂತನೆ, ಆಸೆ, ನಿರಾಸೆಗಳು ಒಂದೇಯಾಗಿರುವುದಿಲ್ಲ. ಅವುಗಳು ವಿಭಿನ್ನ ರೀತಿಯಲ್ಲಿ ಅವುಗಳದೇಯಾದ ದಾರಿಯಲ್ಲಿ ತಮ್ಮ ತಮ್ಮ ಕನಸುಗಳನ್ನು ಭರವಸೆಗಳನ್ನು ಆಕಾಂಕ್ಷೆಗಳನ್ನು ಹಿಡೇರಿಸಲು ತವಕಿಸುತ್ತಲೇ ಇರುತ್ತವೆ.


ಸಮಯ ಸಿಕ್ಕಾಗ ಯಾರ ಅಪ್ಪಣೆಗೂ ಕಾಯದೆ ಒಂದು ಡಿಚ್ಚಿ ಹೊಡೆದು ಅಚ್ಚರಿಯ ಶಾಕ್ ನ್ನು ತನ್ನ ನಂಬಿದವರಿಗೆ ಕೊಡುತ್ತಾರೆ. ಆಗ ತತ್ ಕ್ಷಣ ನಮ್ಮಗಳ ಪ್ರತಿಕ್ರಿಯೆಯನ್ನು ನಾವು ವರ್ಣಿಸಲೂ ಸಾಧ್ಯವಾಗುವುದಿಲ್ಲ. ಇಲ್ಲ ಕಣೊ ಮೊನ್ನೆ ದಿನದವರೆಗೆ ಅವನು ನನ್ನೊಡನೆ ಮಾತಾನಾಡಿದ, ಆ ರೀತಿ ನಡೆಯಲು ಸಾಧ್ಯವಿಲ್ಲ. ಅವನು/ಅವಳು ಈ ರೀತಿ ಮಾಡಿದ್ದಾನೆ ಎಂದರೇ ನಂಬಲು ತಿಳಿಯುತ್ತಿಲ್ಲಾ. ನನಗೆ ಅನಿಸುತ್ತೇ ಅದು ಹೇಗೋ ಹಾಗಿದೆ ಅಂದು ಮುಲ ಮುಲ ಪುನಃ ಅವನ/ಅವಳ ಮತ್ತು ನಮ್ಮ ಹತ್ತಿರದವರ ಸಂಗಡ ಅದೇ ವಿಷಯವನ್ನು ಪುನಃ ಪುನಃ ಮಾತನ್ನಾಡುತ್ತೇವೆ.


ಇದಕ್ಕೆ ಕಾರಣ ನಾವುಗಳು ನಮ್ಮ ನಮ್ಮ ಮಿತಿಯಲ್ಲಿ ನಮ್ಮವರ ಬಗ್ಗೆ ಆ ರೀತಿಯ ಕುರುಡು ನಂಬಿಕೆಗಳನ್ನು ಇಟ್ಟುಕೊಂಡಿರುತ್ತೇವೆ. ಆ ರೀತಿಯ ಭಾವನೆಗಳಿಗೆ ನೋವು ಆಗುವ ರೀತಿಯಲ್ಲಿ ನಮ್ಮ ಸ್ನೇಹಿತರಿಂದ ಏನಾದರೂ ಸಂಭವಿಸಿದರೆ ನಾವು ನಮ್ಮ ಪ್ರೀತಿ ಮತ್ತು ಅವರ ಬಗ್ಗೆ ಇಟ್ಟು ಕೊಂಡ ಕಾಳಜಿಗಳನ್ನೇ ಸುಳ್ಳು ಮಾಡಿದಾಗ ತುಂಬ ಬೇಜಾರಾಗುತ್ತದೆ.
ಅದೇ ಸಮಯದಲ್ಲಿ ಸುತ್ತಲಿನ ಸಂಬಂಧಗಳ ಬಗ್ಗೆ ಜಿಗುಪ್ಸೆ ಪಡುವಂತಾಗುತ್ತದೆ. ಮತ್ತು ನಾವುಗಳು ಏಕೆ ಆ ವಿಚಾರಗಳನ್ನು ತಿಳಿಯಲು ಶಕ್ತರಾಗಿಲ್ಲ ಎಂದು ಮರುಗುತ್ತೇವೆ. ಅದರೆ ಅಸಲಿ ವಿಚಾರಗಳೇ ಬೇರೆ, ಅವರಿಗೂ ಸಹ ನಿಮ್ಮ ಬಗ್ಗೆ ಕಾಳಜಿ ಮತ್ತು ಗೌರವವಿರುತ್ತದೆ, ಅದನ್ನು ಕಾಪಾಡುವ ಸಲುವಾಗಿಯೇ ಅವರು ನಿಮ್ಮನ್ನು ಅವಾಯ್ಡ್ ಮಾಡಿರುತ್ತಾರೆ ಮತ್ತು ನಿಮ್ಮ ಕಿವಿಗೆ ಕಣ್ಣಿಗೆ ಹಾಕಿರುವುದಿಲ್ಲ.


ಸಂಬಂಧಗಳ ವಿಚಾರವೇ ಅಷ್ಟು ಯಾರೊಬ್ಬರೂ ಯಾರಿಗೂ ಯಾವ ಸಮಯದಲ್ಲಾಗಲಿ ಖುಷಿ ಮತ್ತು ಉತ್ತಮ ವಿಚಾರಗಳನ್ನು ಷೇರ್ ಮಾಡಿಕೊಳ್ಳಲು ತವಕಿಸುತ್ತಾರೆ. ಯಾವಾಗ ಯಾವೊಂದು ವಿಚಾರ ಇದು ಸರಿಯಲ್ಲ ಅಂಥ ತಮ್ಮ ಮನಸ್ಸಿಗೆ ತಿಳಿದಾಗ ನಾವು ತಿಳಿಸುವುದಕ್ಕೆ ಮುಂಚೆ ಹೇಗೋ ಎಲ್ಲಿಂದಲೂ ತಿಳಿದರೆತ ತಮ್ಮವರಿಗೆ ಕ್ಷೇಮ ಎನ್ನು ಭಯ ಅಥವಾ ಆ ರೀತಿಯ ಸ್ವತಂತ್ರವನ್ನು ಅವರೂ ನಿಮ್ಮೊಡನೇ ಅನುಭವಿಸಿರುವುದಿಲ್ಲ.


ಅದ್ದರಿಂದ ಯಾರೊಬ್ಬರ ಬಗ್ಗೆಯಾಗಲಿ ನಾವುಗಳು ನಮ್ಮ ನಮ್ಮಲ್ಲಿಯೇ ಆಶಾ ಸೌಧವನ್ನು ಕಟ್ಟಿಕೊಂಡರೂ ಅದು ನಮ್ಮ ಅಣತಿಯಂತೆ ಅವರು ಜೀವಿಸಬೇಕು ಮತ್ತು ನಡೆಯಬೇಕು ಎಂದು ಕೊಳ್ಳುವುದು ಅಸಹಜ. ಅವರ ಬಗ್ಗೆ ನಮ್ಮ ಕಾಳಜಿಯ ಪ್ರೀತಿಯಿರಬೇಕು ಹಾಗಂತ ಅದೇ ಅವರಿಗೆ ಸಂಕೊಲೆಯಾಗಬಾರದು. ಹಾಗೆಯೇ ನಮ್ಮ ಹತ್ತಿರ ಇರುವವರು ನಮಗೆ ಯಾವಾಗಲೂ ಅದು ಮಾಡ ಬೇಡ ಇದು ಮಾಡ ಬೇಡ ಎಂದು ಬೋಧಿಸುವ ಬುದ್ದಿ ಮಣಿಗಳೇ ಆಗಿರುವುದಿಲ್ಲ. ಅವರುಗಳು ತಾವು ಕಂಡ ಸಮಾಜದಲ್ಲಿ ಜೀವನದ ನೌಕೆಯಲ್ಲಿ ನನ್ನವರು ಎನ್ನುವವರೂ ಸಹ ಸಂತೋಷದಿಂದ ಬಾಳಲಿ ಎಂಬ ಆಸೆ ಮತ್ತು ಆರೈಕೆಯನ್ನು ಹೊಂದಿರುತ್ತಾರೆ.


-ತ್ರಿಪುಟಪ್ರಿಯ

ಭಾನುವಾರ, ಏಪ್ರಿಲ್ 18, 2010

ಯಾರಿಗಾಗಿ ಯಾಕೆ ವಿಕೃತಿಯ ಅಟ್ಟಹಾಸ?



"ಭಯೋತ್ಪಾದನೆ" ಟೆರರಿಸ್ಟ್ ಆಟ್ಯಕ್ ಅಯ್ತಂತೆ! ಅಲ್ಲಿ ಒಂದು ಬಾಂಬು ಬ್ಲಾಸ್ಟ್ ಅಯ್ತಂತೆ. ಇನ್ನೋಂದು ಅಲ್ಲಿಯಂತೇ.. ಹೀಗೆ ಸುದ್ಧಿ ವೇಗವಾಗಿ ನಮ್ಮ ನಮ್ಮ ನಡುವೆ ತಲುಪಿ ನಮ್ಮವರಿಗಾಗಿ ಅವರ ಯೋಗ ಕ್ಷೇಮಕ್ಕಾಗಿ ನಮ್ಮ ಸೆಲ್ ಪೋನ್ ಗಳನ್ನು ಉಪಯೋಗಿಸಲು ಮುಂದಾದಗ ಯಾವುದೇ ರೀತಿಯ ಪ್ರಯೋಜನವಾಗದೇ ನಾವು ತಲುಪಬೇಕಾದ ವ್ಯಕ್ತಿಗಳನ್ನು ತಲುಪದೆ ಇದ್ದಾಗ ನಿರಾಶರಾಗಿ ಕೇವಲ ಭಯ ಮತ್ತು ಮುಂದೇನಾಗವುದು ಎಂಬ ಆತಂಕದಿಂದ ಕಂಪ್ಯೂಟರ್ ಪರದೆಯ ಮೇಲೆ ವಿವಿಧ ಸುದ್ಧಿಗಳ ವೆಬ್ ಸೈಟ್ ಗಳನ್ನು ನೋಡುತ್ತಾ ಸುತ್ತ ಮುತ್ತಲಿನ ಸಹ ಉದ್ಯೋಗಿಗಳ ಮಾತುಗಳನ್ನು, ಅವರು ಪಡೆದ ತಾಜಾ ಸುದ್ಧಿಗಳಿಗಾಗಿ ಕಿವಿಗಳನ್ನು ತೆರೆದುಕೊಂಡು ಏನೂ ಮಾಡಲಾಗದ ಸ್ಥಿತಿಯಲ್ಲಿ ನಾವು ನೀವುಗಳು ಕಾಯುತ್ತಿರುತ್ತೇವೆ.


ಹೀಗೆಯೇ ನಮ್ಮ ಕುಟುಂಬದ ಸದಸ್ಯರು, ಬಂಧು ಬಳಗ, ಸೂಪರ್ ಪಾಸ್ಟ್ ವೇಗದ ಸುದ್ಧಿ, ದೃಶ್ಯ ಪ್ರಸರಣದ ಸುದ್ಧಿ ಚಾನಲ್ ಗಳಲ್ಲಿ ಈ ವಿಷಯದ, ಘಟನೆಯ ಹಸಿ ಹಸಿ ದೃಶ್ಯಗಳನ್ನು ನೋಡಿ ಭಯವಿಹ್ವಲರಾಗಿ ಮನೆಯಿಂದ ಹೊರಗೆ ಹೋಗಿರುವವರ ಕ್ಷೇಮದ ಒಂದು ಮಾತಿಗಾಗಿ ಇವರು ಸಹ ಅವರ ಪೋನ್ ಗೆ ಪ್ರಯತ್ನಿಸುವುದು.


ಗಲ್ಲಿ, ಗಲ್ಲಿಯಲ್ಲಿ ವಿವಿಧ ರೀತಿಯ ಪುಂಕಾನು ಪುಂಕಾವಾಗಿ ಗಾಳಿ ಸುದ್ಧಿಯ ಈ ವಿರಾಟ ಘಟನೆಯ ವಿಶ್ಲೇಷಣೆ ಸಾಗುವುದು. ಭೀತಿಯ ಕಣ್ಣುಗಳಿಂದ ಎಲ್ಲಾರ ಮುಖಗಳನ್ನು ನೋಡುವುದು ಮತ್ತು ತಮ್ಮವರ ಕ್ಷೇಮಕ್ಕಾಗಿ ಮನಸ್ಸಿನಲ್ಲಿಯೇ ಸಣ್ಣದಾಗಿ "ದೇವರಲ್ಲಿ" ಪ್ರಾರ್ಥಿಸುವುದು. ಈ ರೀತಿಯ ಗೊತ್ತಾದ ವೇಳೆಯಲ್ಲಿ ಪ್ರತಿಯೊಬ್ಬರೂ ನಗರ- ಭೀತಿಯನ್ನು ಅನುಭವಿಸುವ ಆ ಘಳಿಗೆಯ ಆ ಸಂದರ್ಭದ ಆ ವಿಷ ಕ್ಷಣವನ್ನು ಕೇವಲ ಪದಗಳ ಸಾಲಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಅನುಭವಿಸಿದವನಿಗೆ ಗೊತ್ತು ಅದರ ನೋವು, ಅದು ಪುನಃ ಪುನಃ ಪುನರಪಿಯಾಗುವುದು ಬೇಡ ಎಂದು ಕೇಳಿಕೊಳ್ಳೋಣ.


ಈ ಎಲ್ಲಾ ಮೇಲಿನ ಘಟನಾವಳಿ ಆ ರೀತಿಯ ಘಟನೆ ನಮ್ಮ ನಗರದಲ್ಲಿ ಘಟಿಸಿದೆ ಎಂಬ ಒಂದು ಸುದ್ಧಿಯ ಹಿಂದೆ ಘಟಿಸುತ್ತದೆ. ಇನ್ನೂ ಪ್ರತ್ಯಕ್ಷ ಆ ಜಾಗದಲ್ಲಿ ಇರುವವರ ಮನಸ್ಥಿತಿ, ದೇಹ ಸ್ಥಿತಿ ಜನರ ನದವಳಿಕೆ ಕಲ್ಪನೆಗೂ ನಿಲಕಲಾರದು.


ಜಸ್ಟ್ ಕಣ್ಣು ಮಿಟಿಕಿಸುವ ಸೆಕೆಂಡುಗಳಲ್ಲಿ ಸುಂದರವಾದ ಸ್ನೇಹಿ ಪರಿಸರವನ್ನು ತನ್ನ ಕರಾಳ ಕದಂಬ ಬಾಹುಗಳಿಂದ ಅಪ್ಪಳಿಸಿ ತನ್ನೊಡಲಿಗೆ ಮಕ್ಕಳು, ಮರಿಗಳು, ಮಹಿಳೆಯರು,ಮುದುಕರು, ಯುವಕರು, ಸುಂದರ ಕಟ್ಟಡಗಳು, ವಾಹನಗಳನ್ನೊಳಗೂಡಿ ಸಮಸ್ತವನ್ನು ಆಕ್ರಮಿಸಿಕೊಂಡು ಒಂದು ವಿಲಕ್ಷಣವಾದ ಕರಿ ಛಾಯೆಯೊಂದಿಗೆ ಅಳಿದು ಉಳಿದವರ ಆಕ್ರಂದನಗಳೊಂದಿಗೆ ತನ್ನ ಅಟ್ಟಹಾಸವನ್ನು ಮೆರೆಯುವ ಈ ರೀತಿಯ ವಿಕೃತಿ ಘಟನೆ ಯಾರಿಗೂ ಯಾವ ಕಾಲಕ್ಕೂ ಬೇಡ!


ಕನಸು ಮನಸ್ಸಿನಲ್ಲೂ ಕಲ್ಪಿಸಲಾರದ ಘಟನೆ ಸಾವಿರಾರು ಜನರನ್ನು ಅನಾಥರನ್ನಾಗಿ, ನಿರ್ಗತಿಕರನ್ನಾಗಿ, ಶಾಶ್ವಾತ ಅಂಗವಿಕಲರನ್ನಾಗಿ ಒಂದೇ ಸೆಕೆಂಡನಲ್ಲಿ ನಿಸ್ಸಾಹಾಯಕ ಸ್ಥಿತಿಗೆ ತಂದು, ರಕ್ತದೋಕಳಿಯನ್ನು ಸಿಂಪಡಿಸಿ ಯಾವುದೇ ಕರುಣೆಯ ಕವಡೆಯನ್ನು ಯಾರಿಗೂ ನೀಡದೇ ತನ್ನ ಸಂತೃಪ್ತಿಯ ನಗೆಯನ್ನು ಒಳ ಒಳಗೆ ನಗುತ್ತದೆ. ಈ ದ್ವಂಸಕಾರಿ ಯೋಜನೆಯ ರೂವಾರಿಗಳಿಗೆ ಸುತ್ತಲಿನವರಿಂದ ಹಿಡಿ ಶಾಪವನ್ನು ಹಾಕಿಸುವುದು ಅದರ ಮತ್ತೋಂದು ಕಾಣಿಕೆ ಮಾತ್ರ ಅದು ತಾನು ರೂಪಿಸಿದ ತನ್ನ ಭಯಂಕರ ಚಿತ್ರಣದ ಮುಂದೆ ಇದು ಮಾತ್ರ ನಗಾಣ್ಯ.


ನಗರ ಜೀವನ ಇಂದಿನ ಈ ರೀತಿಯ ಅನಾಹುತಕಾರಿ ಘಟನೆಗಳು ನಗರವಾಸಿಗಳ ಮನಸ್ಸಿನಲ್ಲಿ ಯಾವ ರೀತಿಯ ಭಯದ ಛಾಯೆಯನ್ನು ಮೊಡಿಸಬಹುದು ಎಂಬುದನ್ನು ಯಾರು ಸಹ ತಿಳಿಯಲಾರರು.


ಆ ಘಟನೆಯ ಕಪ್ಪು ಚುಕ್ಕೆ ಸಾವಿರಾರು ದಿನಗಳವರೆಗೆ ಮುಂದಿನ ನವ ಯುವ ಜನಾಂಗಕ್ಕೆ ಮನಸ್ಸಿನ ಕೊರೆಯುವ ನೋವಿನ ಘಟನೆಯಾಗಿ ನೆಮ್ಮದಿಯಿಂದ ಜೀವಿಸುವುದನ್ನು ಕಾಣದಂತೆ ಮಾಡುತ್ತದೆ.


ಯಾರಿಗಾಗಿ? ಯಾಕೆ? ಈ ರೀತಿಯ ವಿಕೃತಿಯ ಅಟ್ಟಹಾಸ?


ಹಿಂದೆ ಯಾರೊಡನೆ ಹೋರಾಡಿದರೂ ಒಂದು ವ್ಯವಸ್ಥಿತಿತ ರೀತಿಯಿಂದ ಹೋರಾಡಿ ತಮ್ಮ ಬಲ ಪ್ರದರ್ಶಿಸುತ್ತಿದ್ದರು. ಮತ್ತು ಆ ರೀತಿಯ ಹೋರಾಟ ಅಸಕ್ತ ಮಕ್ಕಳು, ಮಹಿಳೆಯರು ಮತ್ತು ಸಾಮಾನ್ಯ ಮನುಷ್ಯರಿಂದ ಬೇರೆಯಾಗಿ ನಡೆಯುತ್ತಿತ್ತು. ಅದು ದೇಹಿ ಅನ್ನು ವವರಿಗೆ ಕ್ಷಮೆಯಾಗಿರುತ್ತಿತ್ತು.


ಇಂದು ಗೊತ್ತಿರದ ಯಾವುದೋ ಒಂದು ಉದ್ದೇಶಕ್ಕಾಗಿ ಗೊತ್ತಿರದ ಜಾಗದಲ್ಲಿ ಜನ ಸಾಮಾನ್ಯರ ಮಾರಣ ಹೋಮವೇ ತಮ್ಮ ವಿಜಯ ಎಂದು ಬೀಗುವ ಈ ವಿಕೃತ ವ್ಯವಸ್ಥೆ ಮತ್ತು ಮನಸ್ಸುಗಳಿಗೆ ಯಾವ ರೀತಿಯ ಕರುಣೆಯ ಭೋಧನೆಯನ್ನು ಮಾಡಿ ಸರಿ ದಾರಿಗೆ ತರಲಿ?


ಕೊನೆಯಿರದ ಈ ರೀತಿಯ ಘಟನೆಗಳಿಗೆ ಮುಕ್ತಿಯ ರೂವಾರಿ ಯಾರಾಗಬೇಕು? ವ್ಯಕ್ತಿಯೇ! ಸಮಾಜವೇ! ಧರ್ಮವೇ! ಯಾರು? ನಾವು ಬದುಕುತ್ತಿರುವ ಬದುಕೆ ಭದ್ರವಾಗಿರದಾದಗ ಜೀವಿಸುವುದಾದರೂ ಎಲ್ಲಿ? ಯಾರನ್ನು ನಂಬಲಿ? ಯಾರನ್ನು ಕೇಳಲಿ....

ಗುರುವಾರ, ಏಪ್ರಿಲ್ 8, 2010

ಸೆಕ್ಸ್ ಮತ್ತು ವೋಟಿಂಗ್

ಈ ಕಳೆದ ವಾರಗಳಲ್ಲಿ ಎರಡು ಮುಖ್ಯ ವಿಚಾರಗಳು ಬಹಳಷ್ಟು ಚರ್ಚೆಗೆ ಒಳಪಟ್ಟಿರುವುವು. ಒಂದು ವಿವಾಹ ಪೂರ್ವ ಲೈಂಗಿಕತೆ ಮತ್ತು ಬೆಂಗಳೂರಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಡಿಮೆ ಮತದಾನ.

ಮೊನ್ನೆ ಸರ್ವೋಚ್ಚ ನ್ಯಾಯಾಲಯ ವಿವಾಹ ಪೂರ್ವ ಲೈಂಗಿಕತೆ ಸಾಧು ಎಂದು ಮಹತ್ವದ ತೀರ್ಪು ನೀಡಿದೆ. ಇದರ ಬಗ್ಗೆ ಧನಾತ್ಮಕ ಮತ್ತು ಋಣಾತ್ಮಕ ಪ್ರತಿಕ್ರಿಯೆಗಳು ವಿಚಾರವಂತರೂಡಗೂಡಿ ಸಾಮಾನ್ಯ ಜನರವರೆಗೆ ಮಾಧ್ಯಮಗಳ ಮೂಲಕ ಪ್ರತಿಬಿಂಬಿತಗೊಂಡಿವೆ. ಇದರ ಬಗ್ಗೆ ನನಗೆ ಏನೂ ಹೇಳಲು ತಿಳಿಯದು. ಇಷ್ಟನ್ನು ಮಾತ್ರ ಹೇಳಬಹುದು. ಈ ತೀರ್ಪನ್ನು ನಾವುಗಳು ಯಾವ ರೀತಿ ತೆಗೆದುಕೊಳ್ಳುವೆವು ಮತ್ತು ಹೇಗೆ ಜೀರ್ಣಿಸಿಕೊಳ್ಳೂವೆವು ಅಂಥ?

ಯಾರು ಯಾವ ರೀತಿಯಲ್ಲಿ ಬೇಕಾದರೂ ಅದರ ಬಗ್ಗೆ ವ್ಯಾಖ್ಯಾನ ಮಾಡಿದರೂ, ಅದು ತನಗೆ ಮಾತ್ರ ಮತ್ತು ಹೆಚ್ಚು ವೈಕ್ತಿಕವಾದಾಗ ಮಾತ್ರ ಯಾವೂಬ್ಬ ವ್ಯಕ್ತಿಯು ಅದು ಸರಿ, ಎಂದು ಹೇಳಲಾರ. ಅದಕ್ಕೆ ಇರಬೇಕು ನಮ್ಮತನವನ್ನು ನಮ್ಮ ಆಚಾರ ವಿಚಾರ, ಸಂಸ್ಕೃತಿಗಳನ್ನು ತಾನು ಎಷ್ಟೇ ಮುಂದುವರಿದಿದ್ದರೂ, ಎಷ್ಟೇ ತಿಳುವಳಿಕೆಯುಳ್ಳವನಾದರೂ, ಆ "ಒಂದು ವಿಷಯಕ್ಕೆ" ಬಂದಾಗ ತಾನು ಯೋಚಿಸುವ ದಾಟಿಯೇ ಬೇರೆಯದಾಗುತ್ತದೆ ಮತ್ತು ತನ್ನ ಸಂಗಾತಿಯಾಗುವವರ ಬಗ್ಗೆ ವ್ಯಕ್ತಿ ತುಂಬ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾನೆ. ಅದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಆ ಪವಿತ್ರವಾದ ತನವನ್ನು ತನ್ನ ಮುಂದಿನ ಬಾಳಿನ ಸಂತೋಷದ ದಿನಗಳಿಗೆ ಅಡಿಪಾಯ ಎಂಬ ರೀತಿಯಲ್ಲಿ ಯೋಚಿಸಿತ್ತೀರುತ್ತಾರೆ. ಅದೊಂತೋ ಈ ನಮ್ಮ ಭಾರತೀಯ ಮಣ್ಣಿನ ಗುಣದಲ್ಲಿ ಕಲ್ಪಿಸಲೂ ಸಾಧ್ಯವಿಲ್ಲ.

ಅದು ಅಷ್ಟೋಂದು ಸುಲಭವಾಗಿ ವಿಚಾರ ವೇದಿಕೆಗಳಲ್ಲಿ ಮತ್ತು ತೀರ್ಪುಗಳಲ್ಲಿ ಅನುಮೊಧಿಸಿದಂತೆ ಅಲ್ಲಾ ಎಂದು ಮಾತ್ರ ಹೇಳಬಹುದು. ನಿಮಗೆ ಏನು ಅನಿಸುತ್ತೇ? ಸ್ವಲ್ಪ ಕಲ್ಪಿಸಿಕೊಳ್ಳಿ.

ಇನ್ನೋ ಎರಡನೇಯ ಬಹು ಚರ್ಚಿತ ವಿಷಯವಾದ ಅತಿ ಕಡಿಮೆ ಮತದಾನ. ಬೆಂಗಳೂರಿನ ನಾಗರೀಕರಲ್ಲಿ ಚುನಾವಣೆಯ ಬಗ್ಗೆ ಇರುವ ನಿರುತ್ಸಾಹ ಇದರ ಬಗ್ಗೆ ಆಡಳಿತ ಪಕ್ಷದಿಂದ ಇಡಿದು ಜನಸಾಮಾನ್ಯರವರೆಗೂ ಬಹು ವಿಧದ ಸಲಹೆ ಮಾತುಗಳು ಅದಕ್ಕೆ ಪರಿಹಾರಗಳು ಯೋಜನೆಗಳು ಕೇಳಿ ಬರುತ್ತಿವೆ.

ಮತದಾನ ಮಾಡದವರೂ ಯಾವುದೇ ಕುಂದುಕೊರತೆಗಳ ಬಗ್ಗೆ ಚಕಾರ ಎತ್ತುವ ಅಧಿಕಾರವನ್ನು ಕಳೆದುಕೊಂಡಿದ್ದಾರೆ ಮತ್ತು ಅವರಿಗೆ ಪ್ರಶ್ನಿಸುವ ಹಕ್ಕು ಇಲ್ಲ. ಮತದಾನ ಮಾಡುವುದನ್ನು ಕಡ್ಡಾಯ ಮಾಡಬೇಕು. ಗುಜರಾತ್ ಮಾದರಿಯಂತೆ ಇಲ್ಲೂ ಒಂದು ಶಾಸನವನ್ನು ಜಾರಿಮಾಡಬೇಕು. ಹೀಗೆ ನಾನ ರೀತಿಯ ಸಲಹೆಯ ಕೂಗುಗಳು ದ್ವನಿಸುತ್ತೀವೆ.

ಅದೊಂದು ಸತ್ಯ ಇಂದಿನ ನಮ್ಮ ರಾಜಕಾರಣಿಗಳ ಬಗ್ಗೆ ನಮ್ಮ ಜನರಿಗೆ ಯಾವುದೇ ರೀತಿಯ ಆಶಾವಾದ ಮತ್ತು ಪಾಸೀಟಿವ್ ಹೊಪ್ಸ್ ಇಲ್ಲವಾಗಿದೆ. ಯಾವೊಬ್ಬ ಸಾಮಾನ್ಯ ಮನುಷ್ಯನಿಗೂ ಪ್ರತಿಯೊಬ್ಬ ರಾಜಕಾರಣಿ ಗೆದ್ದ ಮೇಲೆ ಏನೆಲ್ಲಾ ಮಾಡಬಹುದು ಎಂಬುದು ಅಕ್ಷರಾಶಃ ತಿಳಿದಿರುವ ವಿಚಾರ. ಇದರಿಂದ ಮುಂದೇನಾಗಬಹುದು ಈಗ ಏನು ಮಾಡಬಹುದು, ಈ ರೀತಿಯ ಪ್ರತಿಯೊಂದು ನಡೆಯನ್ನು ತಮ್ಮ ತಮ್ಮಲ್ಲಿಯೇ ಮತದಾರರು ಹಾಸ್ಯಸ್ಪದವಾಗಿ ನಮ್ಮ ಪ್ರತಿನಿಧಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.

ನಮ್ಮ ಜನಪ್ರತಿನಿಧಿಗಳು ಸಹ ತಮ್ಮ ಗಾಂಭಿರ್ಯ ಮತ್ತು ತಮ್ಮ ಶಿಸ್ತುಗಳನ್ನೇಲ್ಲಾ ಗಾಳಿಗೆ ತೂರಿ ನಿಜವಾದ ಮನುಷ್ಯತ್ವವನ್ನೇ ಮರೆತು ಗೆದ್ದಿರುವುದು ಸಂಪಾದಿಸಲಿಕ್ಕೆ ಮಾತ್ರ ಎಂಬ ರೀತಿಯಲ್ಲಿ "ಹೇಗಿದ್ದವನು ಹೇಗಾದ ನೋಡ್ರಾಣ್ಣಾ" ಎಂಬಂತಿದ್ದಾರೆ.

ಚುನಾವಣಾ ಪ್ರಕ್ರಿಯೇ ಪ್ರಾರಂಭವಾದ ದಿನದಿಂದ ಶುರು ಮಾಡಿ ಅದು ಮುಕ್ತಾಯವಾಗುವವರೆಗೂ ಇವರುಗಳು ಮಾಡುವ "ಸಾಮಾಜಿಕ ಕಾಳಜಿ ಎಂಬ" ಡೋಂಗಿ ಆಶ್ವಾಸನೆ, ಪ್ರಚಾರ ಅದಕ್ಕೆ ಅವರುಗಳು ವೆಚ್ಚ ಮಾಡುವ ಕೋಟ್ಯಾನು ಕೋಟಿ ಹಣ, ವಿವಿಧ ಆಸೆ ಆಮೀಷ ಇವುಗಳನ್ನು ಗಮನಿಸಿದರೇ, ಮತದಾರನೆ ಕಸಿವಿಸಿಗೊಂಡು ಚುನಾವಣೆಯೇಂದರೆ ಏನು ಎಂದು ಅದರ ಅರ್ಥವನ್ನು ಪುಸ್ತಕಗಳಲ್ಲಿ ಹುಡುಕುವ ಸ್ಥಿತಿಯಾಗಿದೆ.

ಚುನಾವಣೆಯಲ್ಲಿ ಸ್ವರ್ದಿಸುತ್ತಿರುವ ವ್ಯಕ್ತಿಗಳು ಮತ್ತು ಅವರ ಹಿನ್ನಲೆಯ ಚರಿತ್ರೆಯನ್ನು ಗಮನಿಸಿದರೆ ನಮ್ಮ ಭವ್ಯ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ತಂಭಗಳು ಹೇಗಿವೇ ಎಂದು ಆಶ್ಚರ್ಯ ಮತ್ತು ಭಯವಾಗುತ್ತದೆ. ಈ ಎಲ್ಲಾದರ ಮಧ್ಯೆ ಉತ್ತಮ ವ್ಯಕ್ತಿಯ ಆಯ್ಕೆ ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ತಿಳಿಯಲಾರದ ಸಮಸ್ಯೆಯಾಗಿದೆ.

ಹೀಗೆ ಈ ಎಲ್ಲಾ ಸಂಕೋಲೆಗಳ ಮಧ್ಯೆ ನಾವು ಮೆಚ್ಚಿ ಚುನಾಯಿಸಿದ ನಮ್ಮ ಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಯಾವ ರೀತಿಯಲ್ಲಿ ಸೇವಾ ಸೌಕರ್ಯಗಳನ್ನು ತಮ್ಮ ಪ್ರದೇಶಗಳಿಗೆ ನೀಡುತ್ತಾರೆ ಎಂದರೇ ಮತ್ತೊಂದು ಚುನಾವಣೆಯೇ ಬರಬೇಕು. ಅದಕ್ಕಾಗಿ ಮತದಾರ ಪ್ರಭು ಜಾತಾಕ ಪಕ್ಷಿಯಂತೆ ಕಾಯುತ್ತಿರಬೇಕು.

ನಮ್ಮ ನಾಯಕರುಗಳಿಗೆ ನಿರ್ಧಿಷ್ಟ ಗುರಿಯೆಂಬುದೇ ಇಲ್ಲದೇ ತಾವುಗಳು ಯಾವ ರೀತಿ ನಮ್ಮ ಜನರಿಗೆ ಸಹಕಾರವನ್ನು ನೀಡಬೇಕು ಎಂಬ ಕನಸುಗಳಿಲ್ಲದೆ, ಕೇವಲ ಅಧಿಕಾರಕ್ಕಾಗಿ ಎಂಥದೇ ರೀತಿಯ ಕಾರ್ಯಗಳನ್ನು ಮಾಡಲು ತಯಾರಾಗಿರುವಂತ ದಾರ್ಷ್ಟತೆಯೇ ಎದ್ದು ಕಾಣುತ್ತದೆ.

ಇಂಥದರೆಲ್ಲಾದರ ಮಧ್ಯೆಯು ಕೆಲವೇ ಕೆಲವು ಬೆರಳೆಣಿಕೆಯ ಸಾಧಕ ರಾಜಕೀಯ ಮುತ್ಸದ್ಧಿಗಳು ಇರುವುದು ಭಾರತಾಂಭೇಯ ಪುಣ್ಯ. ಆದರೂ ಅವರುಗಳ ಗುಂಪಿನಲ್ಲಿ ಇವರುಗಳು ಗೋವಿಂದ ಎಂಬಂತೆ ಮರೆಯಾಗದಿರಲಿ ಎಂದು ಆಶಿಸೋಣ. ಚುನಾವಣೆ ಮತ್ತು ಮತದಾನ ಇದರ ಹಿರಿಮೆ ಮತ್ತು ಮಹತ್ವವನ್ನು ಹೆಚ್ಚಿಸುವ ಕೆಲಸವನ್ನು ಸ್ವರ್ದೆಗೆ ನಿಲ್ಲುವ ಪಕ್ಷಗಳು ಮತ್ತು ಪ್ರತಿನಿಧಿಗಳು ಮಾಡಿ, ಜನರಲ್ಲಿ ಕೊಂಚ ಪ್ರಜಾಪ್ರಭುತ್ವದಲ್ಲಿ ಭರವಸೆಯನ್ನು ಮೊಡಿಸಲಿ.
-ತಿಪುಟಪ್ರಿಯ