ಬುಧವಾರ, ಜನವರಿ 27, 2010

ಓ ಮನಸೇ!!




"ಮನಸ್ಸು ಇಲ್ಲದೆ, ಅನುಭವ ಇಲ್ಲ. ಪರಿಶುದ್ಧವಾದ ಮನಸ್ಸಿಗೆ ಮಾತ್ರ ಅತ್ಯಂತ ಸೂಕ್ಷ್ಮವಾದ ಆತ್ಮಾನಂದದ ಅನುಭವ ಸಾಧ್ಯ." - ರಮಣ ಮಹರ್ಷಿಗಳು

"ಮನಸ್ಸು ಮರ್ಕಟ" ಎಂದು ಹಿರಿಯರು ಹೇಳಿದರು. ಅವರಿಗೆ ಗೊತ್ತಾಗಿದೆ ನಮ್ಮ ಮನಸ್ಸಿನ ಚಿತ್ರ-ವಿಚಿತ್ರವಾದ ಗುಣಗಳು. ಮನಸ್ಸು ಎಂದ ತಕ್ಷಣ ನೆನಪಿಗೆ ಬರುವುದು ಯೋಚನೆ, ಯೋಚನೆ ಎಂದ ತಕ್ಷಣ ನೆನಪಿಗೆ ಬರುವುದು ಕೆಟ್ಟ ಯೋಚನೆಗಳು - ಒಳ್ಳೆಯ ಯೋಚನೆಗಳು.

ಮನಸ್ಸು ಇದ್ದುದಕ್ಕೆ ಬೆಲೆ ಬರುವುದು ಯೋಚಿಸುವುದರಿಂದ ಮನಸ್ಸು ಎಂಬುದಕ್ಕೆ ನಿರ್ದಿಷ್ಟವಾದ ಇದು ಹೀಗೆ ಎಂದು ಯಾರೂ ಬೌತಿಕವಾಗಿ ಗುರುತಿಸುವುದಕ್ಕೆ ಆಗುವುದಿಲ್ಲ.

ನಮ್ಮ ಬಾಲ್ಯದಲ್ಲಂತೂ ಗೊತ್ತಿಲ್ಲದೆ ವಿವಿಧ ರೀತಿಯ ಕಲ್ಪನೆಯ ರಂಗಾವಳಿಯನ್ನು ಮನದಲ್ಲಿ ಮೊಡಿಸುತ್ತಿರುತ್ತೇವೆ ಅದು ಆಗ ನಮ್ಮ ಜೊತೆಗಾರನಾಗಿ ನಮ್ಮ ಮನಸೊ ಇಚ್ಛೆ ಖುಷಿಯ ವಿಷಯಗಳನ್ನು ಗುಣಕಾರ - ಭಾಗಕಾರ ಮಾಡುತ್ತಿರುತ್ತೇವೆ.

"ಮನುಷ್ಯ - ಮನಸ್ಸು" ಈ ಎರಡನ್ನು ಬೇರೆ ಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ವ್ಯಕ್ತಿ ಇದ್ದನೆಂದರೆ ಒಂದು ಮನಸ್ಸು ಇರಲೇಬೇಕು ಆಗಲೇ ಆ ವ್ಯಕ್ತಿಗೆ ಬೆಲೆ.

ಮನಸ್ಸಿಲ್ಲದವನಿಗೆ ಬೆಲೆಯಿಲ್ಲ ಎಂಬುದು ಈ ಮಾತು. ನಮ್ಮ ಹಿರಿಯವರಿಂದ ಬಾಲ್ಯದ ದಿನಗಳಿಂದ ಕೇಳಿಸಿಕೊಳ್ಳುತ್ತಿರುವ ಮಾತುಗಳೆಂದರೆ ಅದು ಮನಸ್ಸಿಗೆ ಮಾತ್ರವಾಗಿ "ಮನಸ್ಸು ಕೊಟ್ಟು ಕಲಿ, ಮನಸ್ಸು ಕೊಟ್ಟು ಕೇಳು, ಮನಸ್ಸು ಕೊಟ್ಟು ಕೆಲಸ ಮಾಡು" ಇತ್ಯಾದಿ.

ಈ ಎಲ್ಲಾ ಮಾತುಗಳು ಮನಸ್ಸಿನ ಮಹತ್ವವನ್ನು ಪ್ರತಿಯೊಬ್ಬರಿಗೂ ಗೊತ್ತಿಲ್ಲದ ರೀತಿಯಲ್ಲಿ ತಿಳಿಸುತ್ತಿದೆ.

ಹಾಗೆಯೇ, ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈ ನಾಣ್ಣುಡಿ ಜಗಜ್ಜಾಹಿರು ಮಾಡಿದೆ - "ಮನಸ್ಸಿದ್ದರೆ ಮಾರ್ಗ"

ಈ ಗಾದೆ ಮನಸ್ಸಿನ ಪವರ್ ಎಷ್ಟು ಎಂಬುದನ್ನು ಸರಳವಾಗಿ ನಿರೂಪಿಸಿದೆ.

ಈ ಪ್ರಪಂಚದ ಯಾವ ವಿಚಾರ, ತಂತ್ರಜ್ಞಾನ, ಚಲನೆ, ರಾಗ, ದ್ವೇಷ, ಬಾಳ್ವೆ, ಬದುಕು ಪ್ರತಿಯೊಂದು ನಿರ್ದಿಷ್ಟವಾಗಿ ಚರ್ಚಿತವಾಗಿರುವುದು "ಮನಸ್ಸು" ಎಂಬ ಮೂಸೆಯಲ್ಲಿಯೇ.ಅದನ್ನು ಹೇಗೆ ಉಪಯೋಗಿಸಬೇಕು ಎಂಬುದರ ಮೇಲೆ ಅವಲಂಬಿತವಾಗಿದೆ. ಉಪಯೋಗಿಸಿಕೊಂಡವನೇ ಸಾಧಕ!

ಈ ಮನಸ್ಸು ವಯಸ್ಸಿಗೆ ಸಂಬಂಧಿಸಿದಂತೆ ಪ್ರತಿಯೊಂದು ಅನುಭವಗಳ ಗಣಿಯಲ್ಲಿ ಗಟ್ಟಿಯಾಗುತ್ತಾ ತನ್ನ ಅಂತಃ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುತ್ತದೆ.

ಅದಕ್ಕೆ ಇರಬೇಕು ನಮ್ಮ ಕವಿವರ್ಯರೊಬ್ಬರು ವಯಸ್ಸು ಮತ್ತು ಮನಸ್ಸನ್ನು ಹೀಗೆ ಕಟ್ಟಿ ಹಾಡಿದ್ದಾರೆ. "ಹದಿನಾರಾರ ವಯಸ್ಸು ಹುಚ್ಚು ಕೋಡಿ ಮನಸ್ಸು. . . "

ಯೌವನಭರಿತವಾದ, ಮದ್ಯ ವಯಸ್ಕ, ವೃದ್ಧಾಪ್ಯ ವಯಸ್ಸು ಹೀಗೆ ವಿವಿಧ ರೀತಿಯ ಕಾಲ ಘಟ್ಟಗಳ ವ್ಯಕ್ತಿಯ ಮನಸ್ಸು ಒಂದೇ ಆಗಿರಲೂ ಸಾಧ್ಯವಿಲ್ಲ.

ಮನಸ್ಸನ್ನು ನಮ್ಮ ದೇಹಕ್ಕೆ ಸರಳಿಕರಿಸಬಹುದೇನೋ, ಯಾಕೆಂದರೆ ಮನಸ್ಸು ಎಂದು ಅದು ಸೆಂಟ್ರಲ್ ಪ್ರೋಸಸ್ ಇದ್ದಂತೆ. ಅದರ ನಡಾವಳಿಯ ಆಜ್ಞಪಾಲಕ ನಮ್ಮ ಈ ದೇಹವೆ ಸರಿ!

ಆದರೂ ಯಾಕೆ ಈ ಮನಸ್ಸನ್ನಾ, ಕೆಡುಕ ಮನಸ್ಸು, ಒಳ್ಳೆಯ ಮನಸ್ಸು ಎಂದು ಗುರುತಿಸುತ್ತಾರೆ?

ಯಾವ ಮನಸ್ಸು ಮತ್ತೊಬ್ಬರಿಗೆ ತೊಂದರೆಯನ್ನು ಕೊಡುವುದರ ಬಗ್ಗೆ ಯೋಚಿಸಿ, ಇನ್ನೊಬ್ಬರ ಶಾಂತಿಯನ್ನು ಮನಸ್ಸನ್ನು ಹಾಳು ಮಾಡುತ್ತದೋ ಅದು ಕೆಟ್ಟ ಮನಸ್ಸು ಮತ್ತು ಆ ಮನಸ್ಸು ಸಹ ಕೆಟ್ಟು ಹೋಗಿರುತ್ತದೆ ಅದ್ದರಿಂದ ಅದನ್ನು ಕೆಟ್ಟ ಮನಸ್ಸೆಂದು ಗುರುತಿಸಬಹುದು. ಹಾಗೆಯೇ ಅಂಥ ವ್ಯಕ್ತಿ ಸುತ್ತಲಿನವರಿಗೆ ಮತ್ತು ಸಮಾಜಕ್ಕೆ ಅಪಾಯಕಾರಿ.

ಯೋಚನೆಗಳು ಕಲ್ಪನೆಗಳು ಇಲ್ಲದ ಮನಸ್ಸು ಮನಸ್ಸಲ್ಲಾ. ಕೆಟ್ಟ , ಒಳ್ಳೆಯ ಯೋಚನೆಗಳು ಮನಸ್ಸಿನಲ್ಲಿ ಬರುವುದು ಸಹಜ ಯಾಕೆಂದರೆ ನಾವುಗಳು ಉಪ್ಪು - ಹುಳಿ ತಿಂದು ಬೆಳೆಸಿದ ಪ್ರೀತಿಯ ದೇಹವನ್ನು ಹೊಂದಿದ್ದೇವೆ ಅಲ್ಲವಾ? ಹಾಗೆಯೇ ನಾವು ಬದುಕುತ್ತಿರುವ ಸುತ್ತಲಿನ ಪರಿಸರದ ಪರಿಣಾಮವಾಗಿ ವಿವಿಧ ರೀತಿಯ ಯೋಚನೆ, ಆಸೆಗಳು ಮನಸ್ಸಿನಲ್ಲಿ ಮೊಡುವುದು ಸಹಜ. ಹಾಗೆಯೇ ಅದಕ್ಕಾಗಿ ನಾವುಗಳು ವೈರಾಗ್ಯವನ್ನು ಧರಿಸಿದ ಸಾಧುಗಳಾಗಲು ಸಾಧ್ಯವಿಲ್ಲ.

ಯಾವ ವಿಚಾರಾಗಳು ನಮಗೆ ನಮ್ಮ ಅರಿವಿಗೆ ಅಸಹನೀಯವಾದದ್ದು - ಕೆಟ್ಟದ್ದು ಅನಿಸುತ್ತದೋ ಅವುಗಳನ್ನು ಆಗಲೇ ಕೊಲ್ಲುವುದು ಬುದ್ಧಿವಂತಿಕೆಯ ಲಕ್ಷಣ. ಆ ರೀತಿಯ ಅರಿವು ಯಾವುದೇ ರೀತಿಯ ಸಾಮಾನ್ಯ ಸಜ್ಜನನಿಗೂ ತಿಳಿಯುವ ಅರಿವಿನ ಪಾಠ, ಸಮಯಕ್ಕೆ ಸರಿಯಾಗಿ ಊಪಯೋಗಿಸಿ ಮನಸ್ಸಿನ ಪವರ್ ನ್ನು ಸರಿಯಾದ ರೀತಿಯಲ್ಲಿ ಬಳಸಿ ಅಸಾಧ್ಯವಾದುದನ್ನು ಸಾಧಿಸಲು ಮನಸ್ಸು ಮಾಡಬೇಕು.

ಆದಕ್ಕೆ, ಇರಬೇಕು ನಮ್ಮ ಈ ಸನಾತನ ಪರಂಪಯಿಂದ ಇಂದಿನವರೆಗೂ ನಮ್ಮ ವಿವಿಧ ಸಾದು ಸಜ್ಜನರು ಇನ್ನೂ ಈ "ಮನಸ್ಸಿ"ನ ವ್ಯಾಪಾರವನ್ನು ಅರಿಯಲು ತಮ್ಮ ಜೀವನವನ್ನೇ ಪೂರ್ಣವಾಗಿ ಮೂಡಿಪಾಗಿಟ್ಟು ಅದರ ಬಗ್ಗೆ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾ ತಮ್ಮ ವಿಚಾರಧಾರೆಯ ಮೂಲಕ ಸಾಮಾನ್ಯ ಜನರಿಗೆ ಅದರ ಸಾರವನ್ನು ದಯಾಪಲಿಸುತ್ತಿರುವುದು. ಮತ್ತು ಇದರ ಬಗ್ಗೆ ನಾವುಗಳು ನಮ್ಮ ಹಿರಿಯರಿಂದ ದಿನಂಪ್ರತಿ ತಿಳಿಯಲು ಮತ್ತು ಮನನ ಮಾಡಲು ಅವಕಾಶವಿರುವ ನಾವುಗಳು ಧನ್ಯರಲ್ಲವೇ?

-ತ್ರಿಪುಟಪ್ರಿಯ

ಮಂಗಳವಾರ, ಜನವರಿ 12, 2010

ಮಕ್ಕಳಿಗೆ ಸಂಗಾತಿ ಬೇಕಾಗಿದೆ!

ನಮ್ಮ ಮಾತಾ ಪಿತೃಗಳು ತಮ್ಮ ಮಕ್ಕಳನ್ನು ಕಡೆಯವರಿಗೂ ಏನೂ ತಿಳಿಯದ ಮಕ್ಕಳು ಇನ್ನೂ ಅವರು ತಾವು ಹೇಳಿದಂತೆ ಕೇಳಬೇಕು, ಏನಾದರೂ ತಪ್ಪು ಮಾಡಬಹುದು, ಇನ್ನೂ ಬುದ್ಧಿ ಬರಬೇಕು ಎಂಬಂತೆ ತಮ್ಮ ಮಕ್ಕಳು ೬೦-೭೦ ವರ್ಷ ವಯಸ್ಸಾದರೂ ಈ ರೀತಿಯಲ್ಲಿ ಯೋಚಿಸದೇ ಇರಲಾರರು. ಈ ರೀತಿಯ ಭಾವನೆ ತಮ್ಮ ಮಕ್ಕಳು ಹುಟ್ಟಿದ ಸಂದರ್ಭದಲ್ಲಿ ಸ್ಥಾಪಿತವಾಗಿ ಅದು ಅಳಿಸಲಾರದ ಒಂದು ಜವಾಬ್ದಾರಿಯೇನೋ ಎಂಬಂತೆ ಯಾವಾಗಲೂ ತಮ್ಮ ಮಕ್ಕಳ ಬಗ್ಗೆ ಎಲ್ಲಾ ಸಮಯದಲ್ಲಿ ಕೇರಿಂಗ್ ಮಾಡುತ್ತಾ ವರ್ತಿಸುತ್ತಾರೆ.

ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯು ತಾನು ಚಿಕ್ಕದಾಗಿದ್ದಾಗ ತನ್ನ ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ತನ್ನ ಜೀವಿತದ ಪ್ರಾರಂಭದ ದಿನಗಳನ್ನು ತನ್ನ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಂಡು ತಾನು ಸಹ ಸ್ವಂತವಾಗಿ ಯೋಚಿಸುವಂತಾಗಿದ್ದೇನೆ ಮತ್ತು ತನ್ನ ಕಾಲ ಮೇಲೆ ತಾನು ನಿಲ್ಲಬಹುದಾಗಿದೆ ಎಂಬುದನ್ನು ನಿರೂಪಿಸಲು ಕಾತುರನಾಗಿರುತ್ತದೆ.

ಹಾಗೆಯೇ ಯೌವನಕ್ಕೆ ಕಾಲು ಇಟ್ಟ ಸಮಯದಲ್ಲಿ ಎಲ್ಲಾ ಜೀವಿಗಳಲ್ಲೂ ಆಗುವ ಜೈವಿಕ ಮಾರ್ಪಾಡು ಮತ್ತು ಬೆಳವಣಿಗೆಯೋಪಾದಿಯಲ್ಲಿ ಮನುಷ್ಯನು ಸಹ ತನ್ನ ಸಂಗಾತಿಗಳೆಡೆಗೆ ಆಕರ್ಷಿತನಾಗಿ ತನ್ನ ಜೀವನಕ್ಕೆ ಅಸರೆಯಾಗಿ ಮತ್ತು ತನ್ನ ಮುಂದಿನ ಭವ್ಯ ಬದುಕನ್ನು ಹೇಗೆ ಲೀಡ್ ಮಾಡಬೇಕು ಎಂಬುದನ್ನು ನಿರ್ಧರಿಸಲೂ ಎಂಬಂತೆ ಪ್ರತಿ ಹೆಣ್ಣು - ಗಂಡು ಪರಸ್ಪರ ತಮ್ಮ ಜೀವನ ಸಂಗಾತಿಗಳನ್ನು ಪ್ರೀತಿಯೆಂಬ ಮಾಯೆಯಲ್ಲಿ ಮತ್ತು ಸೆಳೆತದಲ್ಲಿ ತಮಗೆ ಯೋಗ್ಯರಾದ ಮತ್ತು ತಮ್ಮ ಮನಸ್ಸೊಪ್ಪುವ ಗೆಳೆಯ - ಗೆಳತಿಯರನ್ನು ಅತಿ ಮುಖ್ಯ ಮತ್ತು ಅವನು/ಅವಳಿಲ್ಲದೇ ಬದುಕುಲಾರೇನು ಎಂಬಂತಾದ ರೀತಿಯಲ್ಲಿ ತಮ್ಮ ಪ್ರೇಮವನ್ನು ಪರಸ್ಪರ ಪ್ರಕಟಿಸಿ ಮುಂದೆ ಅದಷ್ಟು ದಿನಗಳನ್ನು ಒಟ್ಟಿಗೆ ಕಳೆಯುತ್ತಾ ತಮ್ಮ ಜನಾಂಗದ ಮುಂದುವರಿಕೆಯೇನೋ ಎಂಬಂತೆ ಗಟ್ಟಿ ಜೀವನಕ್ಕೆ ಅಡಿಪಾಯ ಇಡಲು ಉತ್ಸುಕರಾಗಿರುತ್ತಾರೆ.

ಮಾನವನನ್ನು ಬಿಟ್ಟು ಬೇರೆ ಎಲ್ಲಾ ಜೀವ ಸಂಕುಲದಲ್ಲಿ ಜೋತೆಗಾರಿಕೆಯ ಅದ್ಯತೆ ಕೇವಲ ಸಂತಾನಭಿವೃದ್ಧಿ ಮತ್ತು ಪರಸ್ಪರ ರಕ್ಷಣೆ ಮತ್ತು ಅಸರೆಯೇ ಮುಖ್ಯವಾಗಿರುತ್ತದೆ.

ಹಾಗೆಯೇ ಈ ಜೋತೆಗಾರಿಕೆ ಅಥವಾ ಪರಸ್ಪರ ಒಂದಾಗಿ ಬಾಳುವ ಪಡಿಪಾಟು ತಮ್ಮ ಸ್ವಂತ ಆಯ್ಕೇಯಾಗಿರುತ್ತದೆ ಮತ್ತು ಇದಕ್ಕಾಗಿ ಅವುಗಳು ತಮ್ಮ ಹಿರಿಯರ ಸಂಬಂಧಿಕರ, ಅಪ್ತರ ಒಪ್ಪಿಗೆ ಪಡೆಯುವ ಜರೂರು ಇರುವುದಿಲ್ಲ ಅದು ಪ್ರಾಣಿಗಳ ಲೋಕ ಅಲ್ಲವಾ?

ಆದರೆ ಮಾನವ ಪ್ರೇಮ - ಮದುವೆ, ಕೇವಲ ಸಂತಾನಭಿವೃದ್ಧಿಯೊಂದೇ ಮುಖ್ಯವಾಗಿರುವುದಿಲ್ಲ. ಇಲ್ಲಿ ಹತ್ತು ಹಲವಾರು ಹತ್ತು ಮತ್ತಷ್ಟು ನೀರಿಕ್ಷೆಗಳು ಪ್ರತಿ ಹೆಣ್ಣು - ಗಂಡುಗಳ ಮಧ್ಯೆ ಉದ್ಬವಾಗುತ್ತವೆ. ಮತ್ತು ಆ ಎಲ್ಲಾ ನಿರೀಕ್ಷೆಗಳು ಪೂರ್ಣವಾಗುವ ಮಟ್ಟದವಾಗಿದ್ದರೆ ಮಾತ್ರ ಅಲ್ಲಿ ಪ್ರೇಮ ವಿವಾಹ, ತಮ್ಮ ಮಕ್ಕಳು ಒಪ್ಪಿದ ಆರಿಸಿದ ಲವ್ ಕಮ್ ಆರೇಂಜ್ಡ್ ಮದುವೆಯೆಂಬ ಬಂಧನದಲ್ಲಿ ಗಟ್ಟಿ ಸಂಬಂಧಗಳಾಗುತ್ತವೆ.

ಇಲ್ಲವಾದರೆ! ಪ್ರತಿಯೋಬ್ಬ ತಂದೆ - ತಾಯಂದಿರಿಂದ ತಮ್ಮ ಕುಟುಂಬದವರಿಂದ ವಿರೋಧವೆರ್ಪಟ್ಟು ಲವರ್ಸ್ ಗಳು ಕಣ್ಣೀರಿನಲ್ಲಿ ತಾವು ಕಟ್ಟಿದ ಪ್ರೇಮ ಸೌಧವನ್ನು ನಿಷ್ಕಾರುಣವಾಗಿ ಕೆಡವಿ ತೋಳೆಯಬೇಕಾಗುತ್ತದೆ.

ತಮ್ಮ ಹೆತ್ತವರು ಈ ಒಂದು ವಿಚಾರದಲ್ಲಿ ತಮ್ಮ ಮಕ್ಕಳನ್ನು ಎಂದು ನಂಬುವುದಿಲ್ಲ. ಮತ್ತು ತಮ್ಮ ಮಕ್ಕಳು ಪ್ರೀತಿಗೆ ಎಲ್ಲೊ ಕೆಲವರು ಒಪ್ಪಿಗೆ ಕೊಟ್ಟು ತಾವು ಖುಷಿಪಡುತ್ತಾರೆ.

ಮುಖ್ಯವಾಗಿ ಬರುವ ಒಂದು ದೊಡ್ಡ ಅಡಚಣೆಯೆಂದರೇ ಜಾತಿ ಸಮಸ್ಯೆ ಇದನ್ನು ತಾವುಗಳು ಎಂದು ಬಿಲ್ ಕುಲ್ ಆಧಾರಿಸುವುದಿಲ್ಲ. ಆದರೆ ಪ್ರೀತಿಯೆಂಬುದು ಕುರುಡು ಅಲ್ಲವಾ ಗಂಡು - ಹೆಣ್ಣು ತಾವುಗಳು ಏನೋ ಎಂತದೋ ಸಮಯದಲ್ಲಿ ಪರಸ್ಪರ ಇಷ್ಟಪಟ್ಟು ತಮ್ಮ ಸಂಗಾತಿ ನೀನೇ ನೀನು ಎಂದು ಮುಂದುವರಿದು ಮದುವೆಯ ಸಮಯದಲ್ಲಿ ಕಲ್ಪಿಸಲಾರದ ರೀತಿಯಲ್ಲಿ ತಮ್ಮ ಪ್ರೇಮ ತಾಜ್ ಮಹಲ್ ನಲ್ಲಿ ಬಿರುಕು ಕಾಣಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಮ್ಮ ಭಾರತದಲ್ಲಿ ಯಾರೊಬ್ಬರೂ ಸಿದ್ಧ ಮನಸ್ಸಿನಿಂದ ಮನಸ್ಸಪೂರ್ವಾಕವಾಗಿ ಅಂತರ ಜಾತಿ ವಿವಾಹಕ್ಕೆ ಒಪ್ಪಲಾರರು.

ಅಂತಸ್ತು, ಆಸ್ತಿ, ವಿದ್ಯೆ, ಹಣ, ಸಂಬಂಧ, ಉದ್ಯೋಗ ಹೀಗೆ ನೂರಾರು ಮಜಲುಗಳ ಪಾಸೀಟಿವ್ ಅಂಶಗಳನ್ನು ಪ್ರತಿಯೊಬ್ಬರೂ ತಮ್ಮ ಲೇವಲ್ ಗಳಲ್ಲಿ ನಿರ್ಧರಿಸುತ್ತಾರೆ.

ಹಾಗೆಯೇ ಮೇಲೆ ಹೇಳಿದಂತೆ ಈ ಒಂದು ವಿಚಾರದಲ್ಲಿ ತಮ್ಮ ಹೆತ್ತವರು ಅರಿಯದ - ತಿಳಿಯದ ವಯಸ್ಸಿನ ಆಕರ್ಷಣೆ ಈ ಲವ್ ಎಂದು ಷಾರಾ ಎಳೆದು ಲವ್ ಮಾಡುವುದೇ ದೊಡ್ಡ ತಪ್ಪು ಎಂದು ನೋಡುತ್ತಾರೆ. ಇದರಲ್ಲೂ ಗಮನಿಸಬೇಕಾದಂತ ಒಂದಷ್ಟು ಗಟ್ಟಿ ಸಂಬಂಧಗಳು ಉನ್ನತ ಮೌಲ್ಯಗಳನ್ನು ಹೊಂದಿದ ಗಟ್ಟಿ ಜೋಡಿಗಳು ಇರುತ್ತಾವೆ ಎಂಬುದನ್ನು ಪ್ರತಿಯೊಬ್ಬರು ತಿಳಿಯಬೇಕು.

ಇದಕ್ಕಾಗಿ ತಮ್ಮ ವಿಧದ ಮತ್ತು ತಾವು ಯೋಚಿಸಿದ ಒಪ್ಪಿದ ಗಂಡು - ಹೆಣ್ಣುಗಳನ್ನು ಜೋತೆ ಮಾಡಿ ತಾವುಗಳು ಏನೋ ಒಂದು ಗಟ್ಟಿಯಾದ ಸಂಬಂಧವನ್ನು ಕೊಡಿಸಿದೆವು ಎಂದು ಅರೇಂಜ್ಡ್ ಮದುವೆ ಮಾಡಿ ಖುಷಿಪಡುವ ಹೆತ್ತವರು ಅವುಗಳು ಸಹ ಮಧ್ಯದಲ್ಲಿ ಪೇಲ್ ಆಗುತ್ತಿರುವಾಗ ಏನು ಹೇಳುವರು?

ಮದುವೆ ಎಂಬುದು ತಮ್ಮ ಮನಸ್ಸು ಇಷ್ಟಪಟ್ಟು ಪರಸ್ಪರ ಹೊಂದಾಣಿಕೆ, ಪರಸ್ಪರ ಗೌರವದಿಂದ ಎರಡು ಜೀವಗಳು ಅಕ್ಕರೆಯಿಂದ ಸಂತೋಷದಿಂದ ಜೀವಿಸುವ ಬದುಕು ಅಂಥ ಅನಿಸುವುದಿಲ್ಲವೇ?

-ತ್ರಿಪುಟಪ್ರಿಯ

ಶನಿವಾರ, ಜನವರಿ 2, 2010

ಸಿಹಿಗಾಳಿ ಸಿಹಿಗಾಳಿ ಸಹಿ ಮಾಡಲಿ

ಮತ್ತೆ ನಮ್ಮ ಭರವಸೆಗಳಿಗೆ ದಿನದ ಉತ್ತಮ ಗಳಿಗೆಗಳಿಗೆ ಆಶಾಕಿರಣದ ನೋಟಕ್ಕಾಗಿ ಪುನಃ ಹೊಸ ವರ್ಷದ ಹೂಸ್ತೀನಲ್ಲಿ ನಿಂತಿದ್ದೇವೆ. ಕಳೆದ ದಿನಗಳ ಸುಖ - ಸಂತೋಷ, ಸೋಲು - ಗೆಲುವು, ನೋವು - ನಲಿವುಗಳ ಮಿಶ್ರ ಭಾವದ ಬದುಕಿನ ಇತಿಹಾಸಕ್ಕೆ ಇತಿಶ್ರೀ ಇಟ್ಟು ಮುಂದಿನ ಭವಿಷ್ಯತ್ ದಿನಗಳ ಕಡೆಗೆ ಆಸೆಯಗಣ್ಣು ಬೀರುವ ತವಕದಲ್ಲಿ ಎಲ್ಲಾ ಮನಗಳು ತುಡಿತದಲ್ಲಿವೆ.

ದಿನಗಳು ಯಾರಿಗೂ ಕಾಯುವುದಿಲ್ಲ ಮತ್ತು ಯಾರನ್ನು ಕೇಳಿ ಹಗಲು ರಾತ್ರಿಯ ಪಯಣವನ್ನು ಮಾಡುವುದಿಲ್ಲ. ಎಲ್ಲಾರಿಗೂ ಸಮಾನವಾಗಿ ದಿನದ ಇಪ್ಪತ್ತನಾಲ್ಕು ಗಂಟೆಗಳನ್ನು ಮುನ್ನೂರ ಅರವತೈದು ದಿನಗಳನ್ನು ಬೇದ ಭಾವವಿಲ್ಲದೆ ದಯಪಾಲಿಸುತ್ತ ತನ್ನ ದಾರಿಯನ್ನು ತಾನು ಹಿಡಿದಿರುತ್ತದೆ. ಅದರಲ್ಲಿ ನಾವುಗಳು ಎಷ್ಟರ ಮಟ್ಟಿಗೆ ನಮ್ಮ ಗಟ್ಟಿ ದಿನಗಳನ್ನಾಗಿ ಮಾಡಿಕೊಂಡು ಪ್ರತಿ ಗಂಟೆಯನ್ನು ನಮ್ಮ ಮರೆಯಲಾರದ ದಿನಗಳನ್ನಾಗಿ ಮಾಡಿಕೊಂಡು ಇತಿಹಾಸದ ಕೊಂಡಿಗೆ ನಮ್ಮದು ಒಂದು ಇರಲಿ ಎಂಬಂತೆ ಮುಖ್ಯ ಗಟ್ಟಿ ಕೊಂಡಿ ಜೊಡಿಸುವ ಕೌಶಲ್ಯ ತಮ್ಮ ತಮಗೆ ಬಿಟ್ಟಿದ್ದು ಅದಕ್ಕೆ ವರ್ಷ ದಿನ ಕಾಲಮಾನ ಹೊಣೆಯಲ್ಲ.

ಹೊಸ ವರ್ಷದ ಪಾದಕ್ಕೆ ಅಡಿ ಇಡುವ ಸಮಯದಲ್ಲಿ ಕಳೆದ ದಿನಗಳ ಪುನರ್ ವಿಮರ್ಶೆ ಅಗತ್ಯ ಅದು ಮುಂದಿನ ಬರುವ ದಿನಗಳನ್ನು ಯಾವ ರೀತಿ ಕಳೆಯಬೇಕು, ಯಾವುದರಲ್ಲಿ, ಎಲ್ಲಿ ನಾವೂ ಎಡೆವಿದೆವು, ಎಲ್ಲಿ ಜಯ ಬೇರಿ ಬಾರಿಸಿದೆವು ಮತ್ತು ಯಾವುದರಲ್ಲಿ ಎಲ್ಲಾರನ್ನು ಕೊಡಿ ಹಿತವಾದ ದಿನಗಳನ್ನು ಸಮಯವನ್ನು ಸಂತೋಷವಾಗಿ ಕಳೆದೆವು ಕೊಡಿದೆವು ಎಂಬ ಕಿರು ನೋಟ ಚಿಕ್ಕ ಚಿಕ್ಕ ತಪ್ಪು ಒಪ್ಪುಗಳ ಸರಿಪಡಿಸುವಿಕೆಗೆ ದಾರಿ ದೀಪವಾಗುವುದು.

ಹೊಸ ದಿನಗಳು ಬರುವಂತೆ ನಮ್ಮ ನಮ್ಮ ವಯಸ್ಸನ್ನು ಹೆಚ್ಚು ಹೆಚ್ಚು ಮಾಡಿ ನಾವು ಹೆಚ್ಚು ಹೆಚ್ಚು ದೊಡ್ಡವರನ್ನಾಗಿ ಮಾಡುತ್ತದೆ. ದೊಡ್ಡವರಾಗುವುದು ನಮ್ಮ ವಯಸ್ಸಿನಲ್ಲಾಗದೇ ನಮ್ಮ ತಿಳುವಳಿಕೆ ನಮ್ಮ ಬುದ್ಧಿ ಬೆಳವಣಿಗೆಯಲ್ಲೂ ಕಾಣಬೇಕು, ಅದರ ಹೊಳಪು ಮತ್ತು ಝಲಕ್ ನ ಬೆಳಕು ನಮ್ಮ ಸುತ್ತಲಿನವರಿಗೂ ಉಪಯೋಗವಾಗಬೇಕು.

ಒಂದು ಸಂವತ್ಸರ ಯಾವುದೇ ವ್ಯಕ್ತಿಯ ಮಹಾತ್ವವಾದ ಕಾಲ ಘಟ್ಟ. ಅದು ಎಂದು ಮರೆಯಲಾರದ ಮೆಲುಕು ಹಾಕುವ ಕಾಲಮಾನ. ಪ್ರತಿಯೊಬ್ಬ ವ್ಯಕ್ತಿಯ ತನ್ನ ಕ್ಷೇತ್ರದಲ್ಲಿ ತಾನು ಎಷ್ಟರ ಮಟ್ಟಿಗೆ ಸಾಧಿಸಿದೇ ಎಂಬುದನ್ನು ಒಂದು ವರ್ಷದ ಬೆಳವಣಿಗೆಯಿಂದ ಅಳೆಯಲಾಗುವುದು.

ನಮ್ಮ ಇಂದಿನ ದಿನ ಮಾನಗಳಲ್ಲಿ ನಮ್ಮ ದೈನಂದಿನ ಬದುಕು ಕೇವಲ ನಮ್ಮ ಸಂಸಾರ ನಮ್ಮ ಮನೆಯನ್ನು ಮಾತ್ರ ಅವಲಂಬಿತವಾಗದೇ ಅದು ಸಮಸ್ತ ಪರಿಸರ , ಊರು, ಜನ, ಸಮಾಜ, ರಾಜಕೀಯ, ಆರ್ಥಿಕತೆ, ದೇಶ ಮತ್ತು ಸಂಸ್ಕೃತಿಯನ್ನು ಅವಲಂಬಿಸಿ ಏಕನ್ಮೊಖ ಅಭಿವೃದ್ಧಿಯನ್ನು ತೋರಿಸುತ್ತದೆ. ನಮ್ಮ ದಿನಮಾನದಲ್ಲಿ ನಡೆಯುವ ಮತ್ತು ಘಟಿಸುವ ಯಾವುದೇ ರಾಜಕೀಯ ಮತ್ತು ಸಾಮಾಜಿಕ ಸಂಘರ್ಷ ಮತ್ತು ಅದರ ಸಂವೇದನೆ ನೇರವಾಗಿ ವ್ಯಕ್ತಿ ಮತ್ತು ಅವನ ಕುಟುಂಬದಲ್ಲಿನ ಸಂವೇದನೆಯನ್ನು ಪ್ರಚೋದಿಸುವ ಗುಣವನ್ನು ಹೊಂದಿದೆ. ಇದಕ್ಕೆ ಕಾರಣ ಇಂದು ನಮ್ಮ ಜೀವನದಲ್ಲಿ ಬದಲಾವಣೆಯ ಹರಿಕಾರನಂತೆ ಬಂದು ನಿಂತು ಅಗಾಧವಾಗಿ ಬೆಳೆದಿರುವ ಉನ್ನತ ತಂತ್ರಙ್ಞಾನ, ಮಾಹಿತಿ, ಮಾದ್ಯಮಗಳ ಬೆಳವಣಿಗೆ ಪ್ರತಿಯೊಂದು ಜಾಗದ ಸುದ್ಧಿ ಮತ್ತು ಘಟನೆಗಳು ಕೇವಲ ಕೇಲವೇ ಸೆಕೆಂಡುಗಳಲ್ಲಿ ನಮ್ಮ ಮನೆಯ ಹಾಲಿಗೆ ಪ್ರತ್ಯಕ್ಷವಾಗುವಂತ ವೇಗದ ಸಂವಹನೆ. ಇದಕ್ಕೆ ತಕ್ಕಂತೆ ನಮ್ಮ ಇಂದಿನ ಜೀವನದಲ್ಲಿ ವೈಕ್ತಿಕವೆಂಬ ಮತ್ತು ನಮ್ಮದಲ್ಲಾದ ವಿಚಾರಗಳು ಯಾವುದು ಇಲ್ಲಾ ಎಂಬಂತೆ ಇಡೀ ಜಗತ್ತೆ ಒಂದು ಚಿಕ್ಕ ಊರಾಗಿದೆ.

ಇಲ್ಲಿಯೇ ಕುಳಿತುಕೊಂಡು ನೋಯಾರ್ಕನಲ್ಲಿ ನಡೆಯುವ ಒಬಾಮನ ಅಧ್ಯಕ್ಷ ಪೀಠದ ಅಲಂಕಾರದ ವರದಿಯನ್ನು ನೇರವಾಗಿ ಸವಿದು ಒಬಾಮಾ ನಮ್ಮವನೆನೋ ಎಂಬಂತೆ ನಾವುಗಳು ಅದರ ಬಗ್ಗೆ ಮತ್ತು ಅವನ ಬಗ್ಗೆ ಚರ್ಚಿಸಲೂ ಸಾಧ್ಯವಾಗಿದೆ.
ಮತ್ತು ನಮ್ಮನಾಳುವ ನಮ್ಮ ಯಾವ ಜನ ಪ್ರತಿನಿದಿಗಳನ್ನು ಅವರ ಆಟೋಪಾಠಗಳನ್ನು ದಿನ ನಿತ್ಯ ರಾಜಕೀಯ ವರದಿಯ ರೊಪದಲ್ಲಿ ನೋಡಿ ಮನಸನ್ನು ಸಣ್ಣದು ಮಾಡಿಕೊಂಡು ನಾವು ಆರಿಸಿರುವ ನಮ್ಮ ಓಟಿನ ಜಾದು ಕಂಡು ನಾವೇ ಪಶ್ಚಾತ್ತಾಪಡುತ್ತೇವೆ. ಇದು ನಮ್ಮ ರಾಜ್ಯದ ೨೦೦೯ ನಲ್ಲಿ ನಡೆದ ತಾಜಾ ರಾಜಕೀಯ ತಾರಚಿತ್ರದ ಬಗ್ಗೆ ಎಂದು ಬೇರೆ ಹೇಳಬೇಕಿಲ್ಲ ಅಲ್ಲವಾ?

ಹಾಗೆಯೇ ನಮ್ಮ ಎಲ್ಲಾ ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಹೀಗೆ ಯಾವುದರಲ್ಲೂ ನಮ್ಮ ನಮ್ಮ ಸುತ್ತಲಿನವರೂ ಜಗತ್ತಿನ ಯಾವುದ್ಯಾವುದೋ ಊರುಗಳಲ್ಲಿ ಪಾಲ್ಗೂಂಡು ತಮ್ಮತನವನ್ನು ಮೇರೆದಿರುವುದನ್ನು ನಮ್ಮ ಟಿ.ವಿ ಗಳಲ್ಲಿ ವರ್ಣಮಯವಾಗಿ ನೋಡಿ ನಮ್ಮ ಮನಸ್ಸು ರಂಗಾಗಿರುತ್ತಿರುವುದು ನಮ್ಮವರು ಯಾವ ರೀತಿಯಲ್ಲಿ ವೇಗವಾಗಿ ಜಾಗತೀಕರಣದ ವೇಗಕ್ಕೆ ಹೆಜ್ಜೆಯನ್ನು ದಾಪುಗಲಿನಲ್ಲಿ ಹಾಕುತ್ತಿದ್ದೇವೆ ಎಂಬುದು ತಿಳಿಯುತ್ತೇವೆ.

ಹೀಗೆ ಪ್ರತಿ ದಿನವೂ ನಮಗೆ ಹತ್ತು ಹಲವು ನಮ್ಮ ಮತ್ತು ಪರರ ವಿಚಾರಗಳ ಮನನ ಮತ್ತು ನಮ್ಮತನದ ಏನಾದರೊಂದು ಕೊಡುಗೆಯನ್ನು ನಾವುಗಳು ಅದಕ್ಕೆ ನೀಡಬೇಕು ಎಂಬ ಹಂಬಲವನ್ನು ನೀಡುವಲ್ಲಿ ಮಹತ್ತರವಾದ ಪ್ರೇರಣೆಯನ್ನು ನಮ್ಮ ಮಾದ್ಯಮಗಳು ಮತ್ತು ನಮ್ಮ ನೇತಾರಾರು, ನಟರು, ಕಲಾವಿದರು, ವಿಙ್ಞಾನಿಗಳು ಮಾಡುತ್ತಲೇ ಬಂದಿದ್ದಾರೆ.

ಈ ರೀತಿ ಎಲ್ಲಾ ಸಾಮಾನ್ಯರಿಗೆ ಅಸಮಾನ್ಯವಾಗಿ ಪ್ರತಿ ಸಂವತ್ಸರ ಹೊಸ ವರುಷ ಹೊಸ ಇತಿಹಾಸ ಬರೆಯಲು ಹೊಸ ದಾರಿಯನ್ನು ಮಾಡಿ ಕೊಡುತ್ತಲೇ ಇರುತ್ತಾದೆ. ೨೦೦೯ ಸಂಮಿಶ್ರವಾದ ನೋವು ನಲಿವು ಮತ್ತು ಕೇಲವು ಸಂತೋಷದ ಕೊಡುಗೆಗಳನ್ನು ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿ ಕೊಟ್ಟಿದೆ. ಬರುವ ದಿನಗಳು ಹೆಚ್ಚು ಹೆಚ್ಚು ಸಮೃದ್ಧಿ ಮತ್ತು ಸಂತೋಷದ ಗಳಿಗೆಗಳನ್ನು ತರಲಿ ಎಂದು ಬೇಡುವವ.

-ತ್ರಿಪುಟಪ್ರಿಯ