ಶುಕ್ರವಾರ, ಡಿಸೆಂಬರ್ 31, 2010

ಹೊಸ ವರ್ಷಕ್ಕೆ ಹೊಸ ಕನಸಿಗೆ ಚಿಯರ್ಸ್!

ಹೊಸ ವರ್ಷಕ್ಕೆ ಕಾಲು ಇಟ್ಟಾಯಿತು. ಹೊಸ ಹೊಸ ಭಾವನೆಗಳು. ಹೊಸ ಹೊಸ ಆಸೆಯ ಚಿಗುರು ಕನಸು. ಕಳೆದ ದಿನಗಳ ನೋವು ನಲಿವುಗಳ ಪುನರ್ ಮೆಲುಕು ಹಾಕುತ್ತಾ... ಹೊಸ ದಿನಗಳಲ್ಲಿ ಕೂಂಚ ಕೂಂಚ ಹೊಸ ತನದ ಸುಖದ ಕ್ಷಣಗಳ ಬಗ್ಗೆ ಕನಸು ಕಾಣುತ್ತಾ.. ಹಿಡೇರದ ಕನಸುಗಳ ನನಸು ಮಾಡುವ ದಾರಿ ಹುಡುಕುತ್ತಾ.. ಹೊಸ ಹೊಸ ಅವಕಾಶಗಳಿಗಾಗಿ ಕಾಯುತ್ತಾ.. ಹೊಸ ಹೊಸ ಯೋಚನೆಗಳತ್ತಾ.. ಹೊಸ ಹೊಸ ಚಿಂತನೆಗಳನ್ನು ಮೂಡಿಸುತ್ತಾ.. ಹೊಸ ಆಶ ಕಿರಣವನ್ನು ನಿರೀಕ್ಷಿಸುತ್ತಾ ಪುನಃ ನಮ್ಮ ನಿತ್ಯ ಪಯಣವನ್ನು ಮಾಡುತ್ತಾ.. ಜೀವನ ಬಂಡಿಯನ್ನು ಸಾಗಿಸುತ್ತಾ.. ಹೀಗೆ ಸಾಗುವುದು ನಮ್ಮ ನಿಮ್ಮಗಳ ನಾನಾ ರೀತಿಯ ರಂಗಿನ ಚಿಂತನೆಯ ಚಿಗುರುಗಳು.. ಅದಕ್ಕೆ ಅಂತ್ಯವಿಲ್ಲ. ಅದಕ್ಕೆ ಬೆಸರವಿಲ್ಲ. ಅದೇ ಅಲ್ಲವಾ ಹಳೆ ಬೇರು ಹೊಸ ಚಿಗುರು.


ನಮ್ಮ ಐ.ಟಿ ಮತ್ತು ಬೆಂಗಳೂರಿನ ಜನ ವರ್ಷದ ಅಂತ್ಯ ಡಿಸೆಂಬರ್ ತಿಂಗಳು ಬಂತು ಅಂದರೇ ಸಾಕು. ಮೂದಲ ದಿನದಿಂದಲೇ ತಮ್ಮ ಹೊಸ ವರ್ಷದ ಸ್ವಾಗತವನ್ನು ಮಾಡಲು ತರಾವೇರಿ ಯೋಜನೆಯನ್ನು ರಚಿಸುತ್ತಾರೆ. ಅಲ್ಲಿ ಇಲ್ಲಿ ಹೊಸ ವರ್ಷದ ಆಚರಣೆಯನ್ನು ಮಾಡಿದರೇ.. ಅವರುಗಳನ್ನು ಇವರುಗಳನ್ನು ಕರೆಯೋಣ.. ಅಲ್ಲಿ ಹೀಗೆ ಹೀಗೆ ಖುಷಿಪಡೋಣ... ಅಲ್ಲಿ ಇಷ್ಟು ತಿಂಡಿ... ಅಲ್ಲಿ ಇಷ್ಟು ವೈರೇಟಿಯ ಡ್ರಿಂಕ್ಸ್.. ಹೀಗೆ ದೊಡ್ಡದೊಂದು ಪಟ್ಟಿಯನ್ನೇ ತಯಾರಿಸಿ ಅದರ ನೆರವೇರಿಕೆಗೆ ಶತ ಪ್ರಯತ್ನ ಮಾಡುತ್ತಾರೆ. ಹೀಗೆ ಸಾಗುತ್ತದೆ ನಮ್ಮ ಮೆಟ್ರೋ ಜನರ ಹೊಸ ವರ್ಷದ ಭರ್ಜರಿ ಸ್ವಾಗತಾಚರಣೆ.



ಪ್ರತಿಯೊಬ್ಬರಿಗೂ ಏನೋ ಒಂದು ತಲ್ಲಣ.. ಡಿಸೆಂಬರ್ ೩೧ ರ ಮಧ್ಯ ರಾತ್ರಿ .. ಗಡಿಯಾರದ ಮುಳ್ಳು ೧೨ಕ್ಕೆ ಬಂದಾಗ.. ಅಲ್ಲಿ ಏದ್ದೇಳುವ ಉದ್ಗಾರಗಳು.. ಮುಖದಲ್ಲಿ ಮೂಡುವ ಖುಷಿ, ಸಂತೋಷಭರಿತ ಭಾವನೆಗಳನ್ನು ನಾನಾ ರೀತಿಯಲ್ಲಿ ತನ್ನ ಜೊತೆಗಾರರೊಡನೆ ಜೋರಾಗಿ ಕೂಗುವ ಮೊಲಕ.. ಕುಡಿಯುವ ಮೊಲಕ.. ಕಿಕ್ ಬರುವಂತೆ ನ್ಯೂ ಹಿಯರ್ ನ್ನು ಬರಮಾಡಿಕೊಂಡು ಮುಂಜಾನೆಯವರೆಗೂ.. ಮಸ್ತಿ.. ಮಜಾದಲ್ಲಿ ತಲ್ಲಿನನಾಗುತ್ತಾನೆ..ಬೆಂಗಳೂರಿನ ಸಾಮಾನ್ಯ ಪ್ರಜೆ.... ಇರಲೇಬೇಕು ಈ ರೀತಿಯ ಒಂದು ಸಂವತ್ಸರಕ್ಕೆ.. ಮುನ್ನೂರು ಅರವೈತೈದು ದಿನಗಳ ಬಳುವಳಿಗೆ!!



ತಮ್ಮ ಎಲ್ಲೆಯನ್ನು ಮೀರಿ ತಮ್ಮ ನಿಜತನವನ್ನು ಬೆಂಗಳೂರಿನ ಪ್ರತಿ ರಸ್ತೆಯಲ್ಲಿಯು ತೋರಿಸುವರು. ಎಂ.ಜಿ ರೋಡ, ಬ್ರಿಗೇಡ್ ರಸ್ತೆಗಳನ್ನು ಕೇಳುವುದೇ ಬೇಡ. ಕಾಲು ಇಡಲು ಜಾಗವಿರದಂತೆ ಜಮಾಯಿಸಿ ರಸ್ತೆಯಲ್ಲಿ ತಮ್ಮ ನರ್ತನವನ್ನು ತೋರಿಸುತ್ತಿರುತ್ತಾರೆ. ಇವರುಗಳ ಎಲ್ಲೇಯನ್ನು ಇತಿ ಮೀತಿಯಲ್ಲಿ ಇಡಲು ಸಾವಿರಾರು ಸಂಖ್ಯೆಯ ಪೋಲಿಸ್ ಪೊರ್ಸ್. ಈ ಮಂದಿಯ ಪ್ರವಾರವನ್ನು ತಡೆಯಲಾಗದೇ ಎಂ.ಜಿ ರಸ್ತೆಯಲ್ಲಿರುವ ಮುಖ್ಯ ಹೋಟೆಲ್ ಗಳನ್ನು ಜನವರಿ ೧ ರವರೆಗೆ ಮುಚ್ಚಿರುತ್ತೇವೆ ಎಂಬ ಪ್ರಕಟಣೆಗಳು ಪತ್ರಿಕೆಗಳಲ್ಲಿ. ಪೋಲಿಸ್ ಕಮೀಷನರ್ ರವರು ತಮ್ಮ ಹೊಸ ವರ್ಷದ ಆಚರಣೆಯ ಬಗ್ಗೆ ಹೇಳಿದ ಮಾತು ಕೇಳಿ.. "ಇಂದಿನ ರಾತ್ರಿ ಯಾವ ರೀತಿಯ ಅವಘಡಗಳು ನಡೆಯದಿದ್ದರೆ ಅದೇ ನನಗೆ ಮುಖ್ಯವಾದ ಹೊಸ ವರ್ಷಾಚರಣೆ". ಮಹಿಳೆಯರನ್ನು ಮಾತ್ರ ಎಂ.ಜಿ ರಸ್ತೆಗೆ ಕರೆದುಕೊಂಡು ಹೋಗಬೇಡಿ ಎಂಬ ಪ್ರಕಟಣೆ... ಯಾಕೆ ಹೀಗೆ ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕು. ಈ ರೀತಿಯ ಆಚರಣೆಯನ್ನು ನಿಜವಾಗಿಯೋ ಹೊಸ ವರ್ಷಾಚರಣೆ ನಿರೀಕ್ಷಿಸುತ್ತಾ?



ಡಿಸೆಂಬರ್ ೩೧ ರ ರಾತ್ರಿ ರಸ್ತೆಯ ಮೇಲೆ ನಡೆದಾಡುವುದು ಸಹ ಕಷ್ಟ... ನೀವುಗಳು ಸರಿಯಾಗಿ ಹೋದರೂ ಎದುರಿಗೆ ಬರುವ ಮಂದಿಗಳು ಯಾವ ರೀತಿಯಲ್ಲಿ ಬರುವವರು ಎಂಬ ಗ್ಯಾರಂಟಿಯನ್ನು ಕೊಡಲಂತು ಸಾಧ್ಯವಿಲ್ಲ. ಅದಕ್ಕಾಗಿಯೇ ಎಂಬಂತೆ.. ಅದನ್ನು ನೆನಪು ಮಾಡಲೇ ಎಂಬಂತೆ.. ಬಿಟ್ರ್ಯಾಕ್ ರವರ ಡಿಜಿಟಲ್ ಬೋರ್ಡನಲ್ಲಿ " ಮುಂದೆ ಮದ್ಯಪಾನ ತಪಸಾಣೆಯನ್ನು ಮಾಡಲಾಗುವುದು" ಎಂಬುದನ್ನು ರಕ್ತಗೆಂಪು ಅಕ್ಷರದಲ್ಲಿ ತೋರಿಸುತ್ತಾರೆ.



ಇದು ನಮ್ಮ ಬೆಂಗಳೂರು ಮಂದಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುವ ಪರಿ. ಈ ವರ್ಷ ನೀವೇನಾದರೂ ಮಿಸ್ ಮಾಡಿಕೊಂಡಿದ್ದರೇ ಮುಂದಿನ ವರ್ಷದಲ್ಲಿ ಮನೆಯಿಂದ ಹೊರ ಬಂದು ನೋಡಿ ಆನಂದಿಸಿ ನೀವು ಪಾಲ್ಗೂಳ್ಳಿ!



ಒಂದು ವರ್ಷವನ್ನು ಕಳೆಯುವುದು ಎಂಬುದು ಒಬ್ಬ ವ್ಯಕ್ತಿಗೆ ಬಹು ದೊಡ್ಡದಾದ ಸಂಗತಿ. ಕಾಲವನ್ನು ತಡೆಯುವವರು ಯಾರು ಇಲ್ಲ. ಅದು ಏನೊಂದು ಬೇದವನ್ನು ಮಾಡದೇ ಈ ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ಜೀವಿಗೂ ಸಮಾನವಾಗಿ ಸಮಯವನ್ನು ಕೊಡುತ್ತದೆ. ಅದನ್ನು ತನ್ನ ಜಾಣ್ಮೆಯಿಂದ ಬಳಸಿಕೊಂಡವನು ಕಾಲದ ಗೆಳೆಯನಾಗುತ್ತಾನೆ ಮತ್ತು ಅವನೇ ತನ್ನ ಬದುಕು ಎಂಬ ಬಂಡಿಯನ್ನು ಉನ್ನತವಾಗಿ ಮುನ್ನಡಿಸಿ ಸಾಧಕ ಎಂಬ ಪ್ರಭಾವಳಿಯನ್ನು ಧರಿಸುತ್ತಾನೆ ಅಷ್ಟೇ.



ಸಮಯದ ಮಹತ್ವವನ್ನು ಅವಕಾಶಗಳನ್ನು ಕಳೆದುಕೊಂಡಾಗ ಅನುಭವಿಸುತ್ತಾನೆ. ತನ್ನ ಜೊತೆಯವರು ಉಪಯೋಗಿಸಿಕೊಂಡು ತನ್ನ ಪಕ್ಕದಲ್ಲಿಯೇ ವಿಭಿನ್ನವಾಗಿ ಮಾಡಿ ತೋರಿಸಿದಾಗ ಮಾತ್ರ ಅವನ ಅರಿವಿಗೆ ಬರುತ್ತದೆ. ಅಷ್ಟೋತ್ತಿಗಾಗಲೇ ಆ ಸಮಯ ಚರಿತ್ರೆಯಾಗಿರುತ್ತದೆ. ಏನಾನ್ನದರೂ ವಾಪಸ್ಸು ತರಬಹುದು ಕಳೆದ ದಿನಗಳನ್ನು, ಗಳಿಗೆಗಳನ್ನು ಏನು ಮಾಡಿದರೂ ತರಲಾಗುವುದಿಲ್ಲ. ಅದೇ ವಿಪರ್ಯಾಸ! ಕಾಲದ ಜೊತೆ ನಾವುಗಳು ಅರಿತು ಹೆಜ್ಜೆಯನ್ನು ಹಾಕಬೇಕು.



೨೦೧೦ ವರ್ಷ ಹತ್ತು ಹಲವು ವಿಭಿನ್ನ ವಿಷಯಗಳಿಂದ ನೆನಪಿನಲ್ಲಿ ಇಡುವಂತ ಸಂವತ್ಸರವಾಗಿತ್ತು. ಸಾರ್ವಜನಿಕವಾಗಿ ನಮ್ಮ ರಾಜ್ಯ ಮತ್ತು ನಮ್ಮ ದೇಶದಲ್ಲಿ ಹಲವಾರು ರೀತಿಯ ಸಂಘರ್ಷಗಳನ್ನು ರಾಜಕೀಯವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲೂ ಜನತೆ ಕಂಡಿದೆ. ಹೆಮ್ಮೆ ಪಡುವಂತ ವಿಷಯಗಳು ಮತ್ತು ವಿಚಾರಗಳನ್ನು ನಾಯಕರುಗಳು ಸಾಧಕರು ರಾಷ್ಟ್ರಕ್ಕೆ ಕೊಟ್ಟು ನಮ್ಮ ರಾಷ್ಟ್ರ ಪತಾಕೆಯನ್ನು ಜಗತ್ತಿನಲ್ಲಿಯೇ ಎತ್ತಿ ಹಿಡಿಯುವಂತೆ ಮಾಡಿದ್ದಾರೆ. ಹಾಗೆಯೇ ನಮ್ಮ ಭಾರತದ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಿದ ಮಹನ್ ನಾಯಕರುಗಳು ಇದ್ದಾರೆ. ಅವರ ಬಗ್ಗೆ ನಾವುಗಳು ಕೇವಲ ಅಸಹ್ಯವನ್ನು ಪಡಬಹುದು ಅಷ್ಟೇ. ಒಳ್ಳೆಯದು ಮತ್ತು ಕೆಟ್ಟದು ಒಂದೇ ನಾಣ್ಯದ ಎರಡು ಮುಖವಲ್ಲವಾ!



ಸಾಂಸ್ಕೃತಿಕ ಲೋಕವಾದ ಸಾಹಿತ್ಯ.. ಮುಖ್ಯವಾಗಿ ನನಗೆ ಇಷ್ಟವಾದ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೊಸ ಗಾಳಿಯ ಸಿಂಚನವಾಗಿದೇ ಎಂದರೇ ತಪ್ಪಲ್ಲಾ. ಈ ಇಂದಿನ ಇಂಟರ್ ನೇಟ್ ಪ್ರಪಂಚದಲ್ಲಿದ್ದರೂ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿ ಚೆನ್ನಾಗಿಯೇ ಇದೆ ಎಂಬುದನ್ನು ನಿರೂಪಿಸಲೆಂಬಂತೆ ಹಲವಾರು ಮುಖ್ಯ ಹೊಸ ಹೊಸ ಕಥೆ, ಕಾದಂಬರಿ, ಕವನ, ಪ್ರಬಂಧಗಳ ಪುಸ್ತಕಗಳು ಬಿಡುಗಡೆಯಾಗಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದ್ದಾವೆ.



ಕನ್ನಡದ ಲೇಖಕರುಗಳು ತಮ್ಮ ಪ್ರತಿಭೆಯಿಂದ ಹತ್ತು ಹಲವಾರು ಪುರಸ್ಕಾರಗಳನ್ನು ಗಳಿಸಿರುವುದು ಅವರ ಕೃತಿಯ ಶ್ರೇಷ್ಠತೆಗೆ ಸಾಕ್ಷಿ. ಇಂಥವರನ್ನು ಹೊಂದಿರುವ ಕನ್ನಡಾಂಭೆ ಎಂದಿಗೂ ಬಂಜೆಯಲ್ಲ. ಇಂಥವರ ಸಂತತಿ ಸಾವಿರವಾಗಲಿ. ನಾಡಿನ ಶ್ರೀಮಂತಿಕೆಯನ್ನು ಸಾಂಸ್ಕೃತಿಕ ರಂಗದ ಕಲಾವಿದರ ಸಂಖ್ಯೆಯಿಂದ ಹಿಂದೆ ಅಳೆಯುತ್ತಿದ್ದರಂತೆ. ಅದು ನಿಜ ಅವರುಗಳಿಂದಲೇ ಒಂದೀಷ್ಟು ಒಳ್ಳೆಯತನದ ಸಿಹಿ ಗಾಳಿಯ ಸಿಂಚನವಾಗುತ್ತಿದೆ ಎಂದರೇ ತಪ್ಪಲ್ಲಾ



ವೈಕ್ತಿಕವಾಗಿ ಕಳೆದ ವರ್ಷ ನನಗೆ ಒಂದೀಷ್ಟು ಸಫಲತೆಯನ್ನು ವಿಫಲತೆಯನ್ನು ಕೊಟ್ಟಿದ್ದರೂ... ಸ್ನೇಹ ಲೋಕಕ್ಕೆ ಹೊಸ ಸಂಗಾತಿಗಳನ್ನು ಕೊಟ್ಟು ಅವರ ವಿಭಿನ್ನತೆಯಿಂದ ನನ್ನ ಅರಿವನ್ನು ಮತ್ತು ಖುಷಿ ಕ್ಷಣಗಳನ್ನು ಉತ್ತಮಗೊಳಿಸಿದೇ ಎಂದರೇ ಅತಿಶಯೋಕ್ತಿಯಲ್ಲ. ಒಂದು ಪುಸ್ತಕವನ್ನು ಓದುವುದಕ್ಕಿಂತ ವಿಭಿನ್ನ ಜನರೊಡನೆ ಬೇರೆಯುವುದು ಅವರ ವಿಚಾರವನ್ನು ಅರಿಯುವುದು ಮೇಲು ಎಂಬಂತೆ. ಕಳೆದ ವರ್ಷದಲ್ಲಿ ಹೊಸ ಮುಖಗಳ ಪರಿಚಯ ತೀರ ಆತ್ಮೀಯರನ್ನಾಗಿ ಮಾಡಿತು. ಜೀವನ ಅಂದರೇ ನಿತ್ಯ ನಮ್ಮ ಬದುಕಿನಲ್ಲಿ ಹಲವರನ್ನು ಬೇಟಿ ಮಾಡುತ್ತೇವೆ ಅದರೆ ಅವರಲ್ಲಿ ಕೆಲವು ಗಟ್ಟಿ ಕಾಳುಗಳು ಮಾತ್ರ ನಮ್ಮಲ್ಲಿ ಬೇರು ಬಿಡುತ್ತವೆ. ಅವುಗಳ ಬೆಳವಣಿಗೆಗೆ ಒಂದೀಷ್ಟು ಆತ್ಮೀಯತೆ ಮತ್ತು ಪರಸ್ಪರ ನಂಬಿಕೆಯ ಬೆಳಕು ಬಿದ್ದರೆ ಹೆಮ್ಮರವಾಗಿ ಬೆಳೆದು ನಮಗೂ ಮತ್ತು ಬೇರೆಯವರಿಗೂ ನೆರಳಾಗುತ್ತೆ. ಅದು ವ್ಯಕ್ತಿ, ವಿಚಾರ, ನಂಬಿಕೆ, ಭಾವನೆ, ಆಕಾಂಕ್ಷೆ ಇತ್ಯಾದಿ ಯಾವುದಾದರೂ ಆಗಿರಬಹುದು.



ಹೊಸ ವರ್ಷಕ್ಕೆ ಹೊಸ ಬೆಳಕು ಇರಲಿ.. ಹೊಸ ರೀತಿಯಲ್ಲಿ ಹಳೆ-ಹೊಸ ಆಸೆಗಳು ನನಸಾಗಲಿ... ಹೊಸ ಕನಸು ಹೊಳೆಯಲಿ ಬೆಳೆಯಲಿ.



ಚಿಯರ್ಸ್!

ಮಂಗಳವಾರ, ಡಿಸೆಂಬರ್ 21, 2010

ಈರುಳ್ಳಿ ಕಣ್ಣೀರ ಪುರಾಣ



ಮೊದ ಮೊದಲು ನಮ್ಮ ನಿಮ್ಮ ಹೆಣ್ಣು ಮಕ್ಕಳು ನಿತ್ಯ ತಮ್ಮ ಕಣ್ಣೀರನ್ನು ಅಡಿಗೆ ಮನೆಯಲ್ಲಿ ಮೌನವಾಗಿ ಸುರಿಸುತ್ತಿದ್ದರು. ಆದರೇ ಕಳೆದ ಒಂದು ವಾರದಿಂದ ಪ್ರತಿಯೊಬ್ಬರೂ ಸಾಮಾನ್ಯ ಪ್ರಜೆಯಿಂದ ಸಾಗಿ ಡೆಲ್ಲಿಯ ನಮ್ಮ ಪ್ರಧಾನ ಮಂತ್ರಿಯವರೆಗೂ ತಮ್ಮ ಕಣ್ಣೀರನ್ನು ಹರಿಯಬಿಡುವಂತ ಸ್ಥಿತಿ ಬಂದಿರುವುದು ಯಾಕೆಂದು ಆಶ್ಚರ್ಯವೇ? ಅದೇ ಈರುಳ್ಳಿ ಸರ್ ಈರುಳ್ಳಿ! ಈರುಳ್ಳಿ ಈಗ ಎಲ್ಲೆಲ್ಲೂ ಅದರ ಒಂದು ಮಾತು ಬಿಟ್ಟರೆ ಬೇರೆ ವಿಷಯವೇ ಇಲ್ಲ. ಯಾಕೆಂದರೆ ಆ ಮಟ್ಟಿಗೆ ಅದು ತನ್ನ ಬೆಲೆಯನ್ನು ಹೆಚ್ಚಿಸಿಕೊಂಡು ಎಲ್ಲರ ಕಣ್ಣನ್ನು ಕೆಂಪಗೆ ಮಾಡಿದೆ.


ನಮಗಂತೂ ತರಕಾರಿಗಳು ಮತ್ತು ಅದರ ಮಹತ್ವ ತಿಳಿದುಕೊಳ್ಳುವ ಅವಶ್ಯಕತೆಯೇ ಇಲ್ಲ ಬಿಡಿ. ಹೇಗೋ ನಮ್ಮ ಹೆತ್ತವರು, ದೊಡ್ಡವರು ನಿತ್ಯ ಅವುಗಳನ್ನು ತಂದು ಸಮಯಕ್ಕೆ ಸರಿಯಾಗಿ ತಿಂಡಿ ತಿನಿಸುಗಳನ್ನು ಮಾಡಿ ನಮ್ಮ ಅರೆ ಹೊಟ್ಟೆಯನ್ನು ತುಂಬಿಸುವುದರಿಂದ ಆದರ ಯೋಚನೆಯನ್ನು ಮಾಡುವ ಜರೂರತು ಇಲ್ಲವೇ ಇಲ್ಲ.


ಎಷ್ಟೋ ತರಕಾರಿಯ ಹೆಸರಗಳು ಪುನಃ ನಮ್ಮ ಬಾಲ್ಯದ ಜೀವಶಾಸ್ತ್ರವನ್ನು ಪುನಃ ಪರಮರ್ಶಿಸುವ ಮಟ್ಟಿಗೆ ಕಣ್ಮರೆಯಾಗಿ ಬಿಟ್ಟಿವೆ. ಯಾಕೆಂದರೇ ನಾವುಗಳು ನಮ್ಮದೇಯಾದ ಪ್ರಪಂಚದಲ್ಲಿ ಬ್ಯುಸಿಯಾಗಿಬಿಟ್ಟಿದ್ದೇವಪ್ಪ.


ಅಡಿಗೆಯ ಮನೆಯಲ್ಲಿ ರಾಜ ಮರ್ಯಾದೆಯನ್ನು ನಮ್ಮ ಭಾರತದಲ್ಲಿ ಗಳಿಸಿರುವ ಏಕೈಕ ತರಕಾರಿಯೆಂದರೇ ಅದು ಈರುಳ್ಳಿ. ಅದು ಇಲ್ಲದ ನಮ್ಮ ಆಹಾರ ಪ್ರಪಂಚವೇ ಒಂದು ಶೂನ್ಯ ಮಾತ್ರ!


ಅದರಿಂದ ತಯಾರಿಸುವ ತರಾವೇರಿ ತಿಂಡಿ ತಿನಿಸುಗಳ ಪಟ್ಟಿಯಯೇ ಒಂದು ಕಥೆಯಾದಿತು. ಅವುಗಳ ರುಚಿಯನ್ನು ನಾವುಗಳೆಲ್ಲಾ ಗೊತ್ತಿಲ್ಲದ ರೀತಿಯಲ್ಲಿ ಸವಿದಿದ್ದು ಪುನಃ ಪುನಃ ನೆನಪಿಸಿಕೊಂಡು ತಿನ್ನುತ್ತೇವೆ. ಅವುಗಳಿಗೆ ಅಂಥ ರುಚಿಕಟ್ಟನ್ನು ಕೊಡುವುದು ಈರುಳ್ಳಿ ಮಾತ್ರ. ನಿನ್ನೇ ದಟ್ಸ್ ಕನ್ನಡದಲ್ಲಿ ಈ ಈರುಳ್ಳಿ ಬೆಲೆ ದುಭಾರಿಯಾದ ಸಮಯದಲ್ಲಿ ಇದಕ್ಕೆ ಬದಲಾಗಿ ಕೆಲವು ತರಕಾರಿಗಳನ್ನು ಕೊಟ್ಟು ಓದುಗರಿಗೆ ಚುನಾಯಿಸಲು ಕೊಟ್ಟಿದ್ದರು. ಆದರೇ ನಮಗೆ ತಿಳಿದ ಮಟ್ಟಿಗೆ ಆದರ ರುಚಿಯನ್ನು ಬೇರೊಂದು ತರಕಾರಿ ಕೊಡಲಾರದು. ಯಾಕೆಂದರೇ ಅದು ಯುನಿಕ್ ಮತ್ತು ಬೇರೊಂದು ಕಾಫಿ ಮಾಡಲಾರದ ಗುಣವನ್ನು ಹೊಂದಿರುವಂತದ್ದು.


ಏನೇ ಈ ದುಬಾರಿಯಾದ ಬೆಲೆಯಿದ್ದರೂ ಸಾಮಾನ್ಯ ರೈತ ಇದನ್ನು ಮೈ ಮಣ್ಣು ಮಾಡಿಕೊಂಡು ಬೆಳೆದು ನಮ್ಮ ಹೊಟ್ಟೆ ತುಂಬಿಸಿದರೂ ಅವನಿಗೆ ಈ ಬೆಲೆ ಏರಿಕೆಯ ಲಾಭವಂತು ಎಂದಿಗೂ ದೊರೆಯಲಾರದು. ಅವನಿಗೆ ಯಾವತ್ತಿದ್ದರೂ ಕೇವಲ ಅದರ ಕಷ್ಟ ನಷ್ಟಗಳ ಕಣ್ಣೀರು ಮಾತ್ರ. ಅದರೂ ಹೊಟ್ಟೆಯ ಪಾಡು ಮತ್ತು ಅವನ ನಿತ್ಯ ಕರ್ಮ ಬೆಳೆಯನ್ನು ಬೆಳೆಯಲೇಬೇಕು. ಮತ್ತು ಬೆಳೆಯುತ್ತಲೇ ಇರುತ್ತಾನೆ. ಸರಿಯಾದ ರೇಟು ಬಂತು ಎಂದು ಖುಷಿಯನ್ನುಪಡುವ ವೇಳೆಗೆ ನಮ್ಮ ಈ ವಿಚಿತ್ರ ಪ್ರಕೃತಿಯ ಮಾಯಜಾಲದಲ್ಲಿ ಸರಿಯಾಗಿ ಧೋ ಎಂಬ ಮಳೆಯೊ, ಮೊಡ ಮುಚ್ಚಿದ ವಾತವರಣದಿಂದ ಹಸನು ಮಾಡುವ ಸಮಯಕ್ಕೇ ಸರಿಯಾಗಿ ಈ ರೀತಿಯಲ್ಲಿ ಏನಾದರೂ ಒಂದು ಸ್ಥಿತಿಯಿಂದ ಬೆಳೆದ ಅದಷ್ಟೂ ಈರುಳ್ಳಿಯನ್ನು ತಿಪ್ಪೇಯ ಪಾಲು ಮಾಡಿರುವ ರೈತರು ಸಾವಿರಾರು.


ಎಷ್ಟೋ ಭಾರಿ ಎಲ್ಲಾ ಈರುಳ್ಳಿಯನ್ನು ಮೂಟೆಯಲ್ಲಿ ತುಂಬಿಸಿಕೊಂಡು ನಗರಗಳಿಗೆ ಬಂದು ವ್ಯಾಪಾರ ಮಾಡಿದರೇ ಅವನಿಗೆ ಅವುಗಳನ್ನು ಸಾಗಿಸಿದ ಲಾರಿಯ ಹಣವನ್ನು ಕೊಡಲಾರದಷ್ಟು ಹಣ ಬಂದಿರುವುದಿಲ್ಲ. ಯಾವ ಸುಖಕ್ಕಾಗಿ ಈ ಬೆಳೆಯನ್ನು ಬೆಳೆಯಬೇಕು ಎಂದು ಎಷ್ಟೋ ರೈತರು ತಾವು ಬೆಳೆದ ಈರುಳ್ಳಿಯನ್ನು ಹಾಗೆಯೇ ಹೊಲದಲ್ಲಿ ಬಿಟ್ಟು ಯಾರದರೂ ತೆಗೆದುಕೊಂಡು ಹೋಗಲಿ ಎಂದೊ ಅಥವಾ ಹೊಲಕ್ಕೆ ಗೊಬ್ಬರವಾಗಲಿಯೆಂದು ಕೊಳೆಯಲು ಬಿಟ್ಟಿರುವ ನಿದರ್ಶನಗಳು ಸಾವಿರಾರು..


ಆದರೇ ಇಲ್ಲಿನ ನಮ್ಮ ಮೆಟ್ರೂ ಜನಗಳಿಗೆ ಈ ಕಷ್ಟ ನಷ್ಟಗಳ ಸಾಮಾನ್ಯ ರೈತನ ಚಿತ್ರಣವೇ ಕಣ್ಣಿಗೆ ಬೀಳುವುದಿಲ್ಲ. ಇಲ್ಲಿಯ ಹೈಟೇಕ್ ಎ.ಸಿ ಯಲ್ಲಿನ ಪ್ರಶ್ ವೇಜ್ ಶಾಪ್ ಗಳಲ್ಲಿ ಹೇಳಿದಷ್ಟು ಹಣ ಕೊಟ್ಟು ಕ್ಯೂನಲ್ಲಿ ನಿಂತು ಖರೀದಿಸುತ್ತಾರೆ. ಹಾಗದರೇ ಈ ಎಲ್ಲಾ ದುಬಾರಿಯ ಬೆಲೆ ಯಾರ ಜೇಬನ್ನು ಸೇರುತ್ತದೆ? ಇನ್ನೆಲ್ಲಿಗೇ ಇಲ್ಲಿಯೇ ಇರುವ ಹೈಟೆಕ್ ದಳ್ಳಾಳಿಗಳನ್ನು.


ನನಗೇ ಇದುವರಿಗೂ ಅರ್ಥವಾಗದೇ ಇರುವ ಮರ್ಮವೆಂದರೇ ನಾವುಗಳು ಎಂದಾದರೂ ಅಪರೂಪಕ್ಕೆ ಅಡಿಗೆ ಮಾಡಲು ನಿಂತಾಗ ಈ ಈರುಳ್ಳಿಯನ್ನು ಕೊಯ್ಯುವಾಗ ಬರುವ ಕಣ್ಣೀರು.. ನಿತ್ಯ ತಮ್ಮ ಕಾಯಕವನ್ನು ಮಾಡುವ ನಮ್ಮ ಅಮ್ಮಂದಿರುಗಳಲ್ಲಿ ಯಾಕೇ ಬರುವುದಿಲ್ಲ? ನನಗೆ ಅನಿಸುತ್ತದೆ... ಅದು ಅವರ ಜೊತೆಯಲ್ಲಿ ಅಷ್ಟರ ಮಟ್ಟಿಗೆ ಹೊಂದಿಕೊಂಡಿರಬಹುದು ಅಲ್ಲವಾ..
ಹೋಟೆಲ್ ಗಳಲ್ಲಿ ಈರುಳ್ಳಿಯನ್ನು ಕತ್ತರಿಸುವ ಹುಡುಗರ ಶೈಲಿಯನ್ನು ನೋಡುವುದೇ ಒಂದು ಚಂದ. ಎಷ್ಟೊಂದು ವೇಗವಾಗಿ ಒಂದೇ ಸೈಜಿನಲ್ಲಿ ಕೆಲವೇ ಸಮಯದಲ್ಲಿ ರಾಶಿಯ ಗೂಡನ್ನೇ ನಿರ್ಮಿಸಿ ಬಿಟ್ಟಿರುತ್ತಾರೆ. ಅದಕ್ಕೆ ಇರಬೇಕು ಅನುಭವ ಎಂಬುದು ಯಾರಪ್ಪನ ಸ್ವತ್ತಲ್ಲಾ.


ನಮ್ಮ ಭಾರತದಲ್ಲಿ ವರ್ಷದಲ್ಲಿ ಸರಾಸರಿ ೪೦ ಲಕ್ಷ ಟನ್ ಈರುಳ್ಳಿಯನ್ನು ತಿನ್ನುವರು ಎಂದರೇ ಯೋಚಿಸಿ ಅದರ ಪ್ರಾಮುಖ್ಯತೆಯನ್ನು. ದೆಹಲಿ ಒಂದರಲ್ಲಿಯೇ ಮೂರುಸಾವಿರ ಟನ್ ನಿತ್ಯ ಕೊಚ್ಚಿ ಹಾಕುತ್ತಾರೆ ಎಂದರೇ ಭಾರತದ ಬೇರೆ ಬೇರೆ ಭಾಗಗಳಲ್ಲಿ ಕೇಳುವುದೇ ಬೇಡವಲ್ಲ.


ಪ್ರಪಂಚದಲ್ಲಿಯೇ ಹೆಚ್ಚು ಈರುಳ್ಳಿಯನ್ನು ಉತ್ಪದಿಸುವ ದೇಶವೆಂದರೇ ಚೀನಾ ಅನಂತರದ ಸ್ಥಾನ ಭಾರತಕ್ಕೇ.ಭಾರತದ ಶೇಕಡ ೩೦ ರಷ್ಟು ಈರುಳ್ಳಿ ಉತ್ವದನೆ ಮಹಾರಾಷ್ಟ್ರ ಒಂದರಲ್ಲಿಯೇ ಆಗುತ್ತಿದೆ. ಭಾರತದಲ್ಲಿ ಹೆಚ್ಚಾಗಿ ಈರುಳ್ಳಿಯನ್ನು ಬೆಳೆಯುವ ಮಹಾರಾಷ್ಟ್ರದಲ್ಲಿನ ಸ್ಥಳಗಳೆಂದರೇ ಪುಣೆ, ಅಹಮದನಗರ, ಸತರಾ, ಸೊಲ್ಲಾಪುರ ಇತ್ಯಾದಿ .


ಈ ತರಕಾರಿ ಬಹು ದಿನಗಳವರೆಗೆ ಇಟ್ಟುಕೊಳ್ಳುವುದು ಬಹು ಕಷ್ಟ. ಇಟ್ಟಲ್ಲಿಯೇ ಕೊಳೆತು ಹೋಗುವುದು ಇದರ ಸಾಮಾನ್ಯ ಗುಣ. ಗುಂಪಿನಲ್ಲಿ ಒಂದು ಕೊಳೆತರು ಅದು ತನ್ನ ಸ್ನೇಹಿತರುಗಳನ್ನು ತನ್ನ ದಾರಿಯನ್ನೇ ಹಿಡಿಯುವಂತೆ ಪ್ರೇರಪಿಸುವುದು. ಇದೇ ಇದರ ಬೆಲೆಯ ಏರಿಕೆ ಇಳಿಕೆಗೆ ಕಾರಣ. ಸುಗ್ಗಿಯ ಕಾಲದಲ್ಲಿ ಇವುಗಳ ಬೆಲೆ ಕೇವಲ ಐವತ್ತು ಪೈಸೆಗೆ ಇಳಿದಿರುವುದುಂಟು ಎಂದರೇ ಯೋಚಿಸಿ.. ಇಂದಿನ ಈ ಬಂಗಾರದ ಬೆಲೆಯ ಕಾರಣ. ಅದರೂ ನಮ್ಮ ಸರ್ಕಾರಗಳನ್ನು ನಡುಗಿಸುವ ಮಟ್ಟಿಗೆ ಇದು ತನ್ನ ಜಾದೂವನ್ನು ಮಾಡಿದೇ ಎಂದರೆ ಅತಿಶಯೋಕ್ತಿಯಲ್ಲಾ.


ವೈದಕೀಯವಾಗಿ ಪ್ರಮಾಣಿತವಾಗಿರುವ ಈ ಮುಖ್ಯ ತರಕಾರಿ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಅದನ್ನು ಹಸಿಯಾಗಿ, ಬೆಯಸಿ ಹೇಗಾದರೂ ಸೇವಿಸಬಹುದು. ಹಸಿಯಾಗಿ ತಿಂದಾಗ ಬಾಯಲ್ಲಿ ಅದರ ವಾಸನೆಯು ಅಪಾರ.. ಅದರೇ ತಿನ್ನಲೇ ಬೇಕಲ್ಲ. ಏನೋ ಗೊತ್ತಿಲ್ಲ. ಈರುಳ್ಳಿ ಒಂದು ಇದ್ದರೇ ಎನಾದರೂ ಅಡಿಗೆಯನ್ನು ಕ್ಷಣ ಮಾತ್ರದಲ್ಲಿ ಮಾಡಬಹುದು. ಅದು ಇಲ್ಲದ ಅಡಿಗೆಯೇ ಇಲ್ಲ ಎಂಬುದು ನನ್ನ ಭಾವನೇ.. ನೀವು ಏನೂ ಹೇಳುತ್ತೀರಾ?

ಇತಿಃ ಈರುಳ್ಳಿ ಪುರಾಣ ಸಮಾಪ್ತಿ!
-

ಗುರುವಾರ, ಡಿಸೆಂಬರ್ 16, 2010

ಆದರ್ಶ ಹೇಳುವುದಕ್ಕಾ?

ನಾವೊಂದು ಎಣಿಸಿದರೇ ದೈವವೊಂದು ಬಗೆಯುವುದು ಎಂಬುದು ಒಂದು ನಾಣ್ಣುಡಿ.


ನಾವುಗಳು ನಮ್ಮ ಜೊತೆಯಿರುವವರ ಬಗ್ಗೆ, ನಮ್ಮ ಸ್ನೇಹಿತರ ಬಗ್ಗೆ, ನಮ್ಮ ಮನೆಯ ತಂದೆ ತಾಯಿಗಳ ಬಗ್ಗೆ, ಮನೆಯ ಹಿರಿಯರ ಬಗ್ಗೆ, ನಮ್ಮ ಬಾಲ್ಯದ ಗುರುಗಳು ಬಗ್ಗೆ, ನಮ್ಮ ಸಂಬಂಧಿಕರುಗಳ ಬಗ್ಗೆ, ಕೊನೆಗೆ ನಮ್ಮ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿಯ,ಮಂತ್ರಿಗಳು ಬಗ್ಗೆ, ಮನ ಮೆಚ್ಚಿದ ಸಿನಿಮಾ ನಟ ನಟಿಯ ಬಗ್ಗೆ ಒಂದು ರೀತಿಯಾದ ಯಾರು ಪ್ರಶ್ನೆ ಮಾಡದ ರೀತಿಯ ಗೌರವವದ ಸೌಧವನ್ನು ಕಟ್ಟಿಕೊಂಡು ಅಲ್ಲಿಯೇ ಅವರನ್ನು ಇಟ್ಟು ಹೆಮ್ಮೆ ಪಡುತ್ತಿರುತ್ತೇವೆ.


ಅವರುಗಳು ಏನನ್ನಾದರನ್ನು ಸಾಧಿಸಿದರೇ ನಮ್ಮಗಳಿಗೆ ನಾವೇ ಆ ಸ್ಥಾನವನ್ನು ಪಡೆದಷ್ಟು ಸಂತೋಷವನ್ನುಪಡುತ್ತೇವೆ. ಅವರ ಒಂದು ಒಂದು ಹೆಜ್ಜೆಯನ್ನು ಎಚ್ಚರದಿಂದ ಗಮನಿಸುತ್ತಾ ಅವರುಗಳೂ ಯಾವತ್ತಿದ್ದರೂ ನಮ್ಮವರೇ ಎಂಬ ಭಾವನೆಯ ಜನನಕ್ಕೆ ಕಾರಣ ಸಮಾಜದಲ್ಲಿ ಅವರುಗಳು ಗಳಿಸಿದ ಸ್ಥಾನ ಮತ್ತು ನೆರೆಹೊರೆಯರುವರು ಅವರನ್ನು ನಡೆಸಿಕೊಳ್ಳುವ ರೀತಿ, ಅವರ ಮಾತು, ಪ್ರೀತಿ, ನಡವಳಿಕೆ, ನಮ್ಮ ಗಳ ಬಗ್ಗೆ ಅವರಿಗೆ ಇರುವ ಕಾಳಜಿ ಇತ್ಯಾದಿ ವಿಷಯಗಳಿಂದ ಆ ಆಯ ವಯಸ್ಸಿನಲ್ಲಿ ಲೆಕ್ಕವಿಲ್ಲದಷ್ಟು ಪ್ರೀತಿ ಪಾತ್ರರು ನಮ್ಮ ಮನಸ್ಸಿನಲ್ಲಿ ಕೂರುತ್ತಾರೆ. ಮತ್ತು ನಮ್ಮ ಹೃದಯವನ್ನು ಆಕ್ರಮಿಸಿಕೊಳ್ಳುತ್ತಾರೆ. ಅದೇಯಲ್ಲವಾ ಜೀವನದ ಜೀವಿಗಳ ಮರ್ಮದ ನಿತ್ಯ ಸಂತೆ.


ನಾವುಗಳು ಈಗ ಏನಾದರೂ ಹೀಗೆ ಇದ್ದೇವೆ ಎಂದರೇ ಈ ಮೇಲೆ ಹೇಳಿದ ನಮ್ಮ ಹತ್ತಿರದವರ ನಮ್ಮ ಮನ ಗೆದ್ದವರ ಅಚ್ಚಿನ ಪ್ರತಿಯೇ ಸರಿ. ಅವರ ಒಂದೊಂದು ಗುಣ, ವ್ಯಕ್ತಿತ್ವ, ನುಡಿ ನಮ್ಮ ಗುಣಾವಗುಣಗಳನ್ನು ನಿರ್ಧರಿಸಿರುತ್ತದೆ. ಅದನ್ನು ಬಿಟ್ಟು ಬೇರೆಯಾಗಲೂ ಸಾಧ್ಯವಿಲ್ಲ. ಬಾಲ್ಯದಂತೂ ನಮ್ಮ ತಂದೆ ತಾಯಿಯರ ಪಡಿಯಚ್ಚುಗುಳಾಗಿರುತ್ತೇವೆ. ಅದಕ್ಕೆ ಹಿರಿಯ ಅಜ್ಜ ಅಜ್ಜಿಗಳು "ಹೇ ನಿನ್ನ ಮಗಳು ಎಲ್ಲಾ ನಿನ್ನಂತೇ ಕಣೇ!" ಎಂದು ಛೇಡಿಸುತ್ತಿರುತ್ತಾರೆ.



ಆ ಸಮಯದಲ್ಲಿ ಅದು ಸರಿಯಾದುದ್ದೇ ಯಾಕೆಂದರೆ ನಾವುಗಳು ಈ ಹೊರಗಿನ ಜಗತ್ತಿನ ಕಡೆಗೆ ನಮ್ಮ ಗಮನವಿರುವುದಿಲ್ಲ. ಏನಾದರೂ ಮನೆ ಮನೆಯಲ್ಲಿರುವವರ ಜೊತೆಯೆ ನಮ್ಮ ಪ್ರಪಂಚವಾಗಿರುತ್ತದೆ. ಯಾರಾದರೂ ಏನಾದರೂ ಮಾಡಿದರೇ ಗಮನವಿಟ್ಟು ಅವರಂತೆಯೇ ಅನುಸರಿಸಲೂ ತೊಡಗುತ್ತೇವೆ. ಕೆಟ್ಟದ್ದು ಯಾವುದು, ಒಳ್ಳೆಯದ್ದು ಯಾವುದು ಎಂಬುದನ್ನು ತಿಳಿಯುವ ವಯಸ್ಸು ಅದು ಆಗಿರುವುದಿಲ್ಲ. ಅಷ್ಟೊಂದು ಮುಗ್ಧ ಮರಿಗಳು. ಅದ್ದರಿಂದ ಹಿರಿಯರುಗಳು ನಮ್ಮ ಮೇಲೆ ಒಂದು ಕಣ್ಣು ಇಟ್ಟಿರುತ್ತಾರೆ. ಅದು ಅವಶ್ಯ.


ಹೀಗೆ ನಮ್ಮ ಅನುಕರಣೆಯ ಜಾಡು ಕೊಂಚ ಕೊಂಚ ವಿಸ್ತರಿಸುತ್ತಾ ಸಂಬಂಧಿಕರುಗಳನ್ನು, ಸ್ನೇಹಿತರನ್ನು ಪಡೆಯುತ್ತಾ... ನಮ್ಮನ್ನು ಗಮನಿಸುವವರನ್ನು, ನಮ್ಮ ಭಾವನೆಗಳಿಗೆ ಸ್ಪಂಧಿಸುವವರನ್ನು ನಮ್ಮ ಹಾಗೆಯೇ ಯೋಚಿಸುವವರನ್ನು, ನಮಗೆ ಪಾಸೀಟಿವ್ ಅನಿಸಿದವರನ್ನು ನಮ್ಮ ಮನಸ್ಸಿನಲ್ಲಿ ಸ್ಥಾಪಿಸಿಕೊಳ್ಳುತ್ತಾ ಹೋಗುತ್ತೇವೆ. ಆ ಸ್ಥಾಪನೆಯ ಸಂಖ್ಯೆ ಸಾಕಷ್ಟು ಇರುತ್ತದೆ..
ಇಲ್ಲಿ ಗಮನಿಸಬೇಕು. ಯಾರೇ ಆಗಲಿ ತನಗೆ ಅನಿಸಿದಂತೆ ಆ ವ್ಯಕ್ತಿಗಳೆಲ್ಲ ಅವನ/ಅವಳ ಮಟ್ಟಿಗೆ ತುಂಬ ಒಳ್ಳೆಯವರು ಮತ್ತು ಪ್ರಶ್ನಾತೀತರು. ಯಾಕೆಂದರೇ ಅವನ ನೆಚ್ಚೆಗೆ ಮತ್ತು ಅವನು ಏನನ್ನು ಅಂದುಕೊಂಡು ಪಯಣಿಸುತ್ತಾನೋ ಅದಕ್ಕೇ ಸ್ಪಂದಿಸುವವರಾಗಿರುತ್ತಾರೆ. ಇಲ್ಲಿ ಗಮನಿಸಬೇಕಾದ್ದು. ಈ ವ್ಯಕ್ತಿ ಹೇಗೆ ಎಂಬುದು. ಅವನಿಗೆ ಬೇಡವಾದದ್ದು ಬೇರೊಬ್ಬರಿಗೆ ಬೇಕಾಗಿರಬಹುದು. ಇಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುವ ಸವಾಲೇ ಇಲ್ಲ.


ತಾನು ಅವರಂತೆಯೇ ಆಗಬೇಕು ಎಂಥಲೊ ಅವರನ್ನು ಅನುಸರಿಸುತ್ತಿರುತ್ತಾನೆ. ಅವರನ್ನು ತನ್ನ ಆದರ್ಶದ ಮನೆಯಲ್ಲಿ ಇರಿಸಿಕೊಂಡಿರುತ್ತಾನೆ. ಹೀಗೆ ಇರುವವರುಗಳ ಪಟ್ಟಿ ತಾನು ಅವರೊಡನೆ ನಿತ್ಯ ಸಂಪರ್ಕದಲ್ಲಿ ಇರಲೇ ಬೇಕಾದ ಅವಶ್ಯಕತೆ ಇಲ್ಲ. ಅವರನ್ನು ಎಲ್ಲಾದರೂ ಬೇಟಿ ಮಾಡಿರಬಹುದು. ತನಗೆ ಇಷ್ಟವಾದ ಚಿತ್ರದಲ್ಲಿ ನಟಿಸಿರುವ ನಟ/ನಟಿಯಿರಬಹುದು. ತಾನು ಓದಿದದ ಉತ್ತಮ ಪುಸ್ತಕದ ಲೇಖಕನಾಗಿರಬಹುದು, ತನ್ನ ಜೊತೆಗಾರ/ಗಾರ್ತಿಯಿರಬಹುದು.... ಇವರುಗಳ ವ್ಯಕ್ತಿತ್ವದ ಕೆಲವು ಅಂಶಗಳು ಇವನನ್ನು ಇವನ ಬದುಕಿಗೆ ಒಂದು ದಿಕ್ಕು ತೋರಿಸರಬಹುದು ಅಥಾವ ಅವನನ್ನು ಆ ಕ್ಷಣಕ್ಕೇ ಆನಂದಮಯವಾಗಿ ಇಟ್ಟಿರಬಹುದು. ಅವರುಗಳನ್ನು ಒಂದು ಕ್ಷಣ ನೆನಪಿಸಿಕೊಂಡರೇ ಇವನಿ/ಳಿಗೆ ಏನೋ ಒಂದು ಶಕ್ತಿಯನ್ನು ಪಡೆದಂತಾಗುತ್ತದೆ. ಅವರುಗಳು ಏನಾದರೂ ಸಾಧಿಸಿದರಂತೋ ಕೇಳುವುದೇ ಬೇಡ ತಾನೇ ಮುಂದಾಗಿ ಸುತ್ತಲಿನವರಿಗೆ ಸಿಹಿಯನ್ನು ಹಂಚುವ ಮಟ್ಟಿಗೆ ಆತ್ಮೀಯತೆ. ಇವರುಗಳಲ್ಲಿ ಬಹಳಷ್ಟು ಮಂದಿಯನ್ನು ಮುಖತಃ ಬೇಟಿ ಮಾಡಿ ಮಾತನ್ನಾಡಿರುವುದಿಲ್ಲ. ಆದರೂ ಅವನು/ಅವಳು ಗೊತ್ತು ಗುರು! ಎಂಬ ಧೃಡತೆ.


ಆದರೇ ಆ ಆದರ್ಶಪುರುಷರುಗಳಿಗೆ ಇಂಥ ಸಾಮಾನ್ಯ ಭಕ್ತರುಗಳು ಸಾವಿರಾರು. ಆದರೂ ಅವರುಗಳು ಸಹ ನಮ್ಮ ನಿಮ್ಮಂತೆಯೇ ಬೆಳೆದು. ಅವರುಗಳು ನಮ್ಮ ನಿಮ್ಮಂತೆ ಬಾಲ್ಯದಿಂದ, ಯೌವನದ ದಿನಗಳಲ್ಲಿ ನಾವುಗಳು ಹೇಗೆ ಇವರುಗಳನ್ನು ಆದರ್ಶರುಗಳು ಎಂದು ಇಟ್ಟುಕೊಂಡು ನೋಡುತ್ತಿರುತ್ತೇವೋ ಹಾಗೆಯೇ ಅವರುಗಳು ಮತ್ತೇ ಅವರ ಯಾರೋ ಹಿರಿಯರನ್ನು ಆರಾಧಿಸಿರುತ್ತಾರೆ.


ಕಾಲದ ಮಹಿಮೆಯೊ ಅಥಾವ ಯಾವುದೊ ವಿಧಿಯಾಟವೊ ಒಂದು ಕ್ಷಣ ಮೈಮರೆತು ತಮ್ಮ ಆದರ್ಶದ ಜೀವನವನ್ನು ಬೀದಿಗೆ ತಂದು ಕೊಂಡಾಗ, ನೈತಿಕತೆಯನ್ನು ಬಿಟ್ಟಾಗ, ಭ್ರಷ್ಟತೆಯನ್ನು ಅಂಟಿಸಿಕೊಂಡಾಗ.... ಇವನನ್ನು ಪಾಲೋ ಮಾಡುವ ನಮ್ಮ ನಿಮ್ಮಂತ ಜನ ಸಾಮಾನ್ಯನ ಪರಿಸ್ಥಿತಿ ಯಾರಿಗೆ ಹೇಳಬೇಕು. ನಿನ್ನೇಯವರೆಗೂ ಅವನ/ಅವಳ ಬಗ್ಗೆ ನಾವುಗಳು ಎಲ್ಲರ ಮುಂದೆ/ಸ್ವತಃ ತನ್ನ ಅಂತರಂಗದಲ್ಲಿ ಉನ್ನತವಾದ ಜಾಗವನ್ನು ಕೊಟ್ಟು ಪೂಜಿಸಿಕೊಂಡು ಹೆಮ್ಮೆಯನ್ನು ಪಟ್ಟಿರುತ್ತೇವೆ.


ಆದರೇ! ಇದು ಅವರುಗಳಿಗೆ ತಿಳಿಯಬೇಕಲ್ಲಾ ಸ್ವಾಮಿ. ಅವರುಗಳು ಸಹ ಉಪ್ಪು ಹುಳಿ ತಿನ್ನುವ (ಅ)ಸಾಮಾನ್ಯರುಗಳು ಎಂದು ನಾವುಗಳು ಎಂದಿಗೂ ಕಲ್ಪಿಸಿಕೊಂಡಿರುವುದಿಲ್ಲ. ಹೀಗೆ ಒಂದೇ ಭಾರಿಗೆ ನಮ್ಮ ಹೆಮ್ಮೆಯ ಗುಳ್ಳೆಗೆ ಸೂಜಿ ಚುಚ್ಚುವಂತೆ ಮಾಡಿದರೇ... ನಿಂತ ಧರೆಯೇ ಮುಳುಗಿದ ಅನುಭವ.


ಅದ್ದರಿಂದ ನಾವುಗಳು ಇದರಿಂದ ಭ್ರಮ ನಿರಸನವುಂಟುಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಇರಲಿ ನಿಮ್ಮ ಮನದ ಅಂತರಂಗದಲ್ಲಿ ಈ ರೀತಿಯ ಕಲ್ಪನೆಯ ನಿಮ್ಮ ಆದರ್ಶ ಜನಗಳ ಪಟ್ಟಿ. ಅವರುಗಳ ಬಗ್ಗೆ ಅತಿಯಾದ ಕಕ್ಕುಲಾತಿಯನ್ನು ಇಟ್ಟುಕೊಳ್ಳುವುದು ತಪ್ಪು. ಅವರ ಸಾಧನೆಗಳನ್ನು, ಅದಕ್ಕೆ ಅವನು ಉಪಯೋಗಿಸಿದ ದಾರಿಯನ್ನು ಸಾಮಾನ್ಯರಂತೆ ತೆಗೆದುಕೊಳ್ಳಬೇಕು. ಅವರು ಸಹ ಕೇವಲ ನಮ್ಮ ನಿಮ್ಮಂತೆಯೇ ಸರಿ. ಅವರಿಗೂ ನಮಗೆ ಇದ್ದಂತೆಯೇ ದೌರ್ಬಲ್ಯಗಳು ಇರುವುದು ಸಹಜ. ದೌರ್ಬಲ್ಯಗಳನ್ನು ಗೆದ್ದವನಿದ್ದರೇ ಅವನು ದೇವರೇ ಸರಿ. ಇಲ್ಲಿ ಯಾರು ದೇವರುಗಳಲ್ಲಾ.


ಹಾಗೆಯೇ ಸಾರ್ವಜನಿಕವಾಗಿ ಇರುವ ಐಕಾನ್ ಗಳು ಎಂದು ಯಾರನ್ನು ನಾವುಗಳು ಆರಾಧಿಸುತ್ತೇವೋ ಆ ಮಂದಿ ಒಂದು ಕ್ಷಣ ಯೋಚಿಸಿ ತಮ್ಮ ತಮ್ಮತನವನ್ನು ತೋರಬೇಕು. ಕೇವಲ ಪರದೆಯ ಮೇಲೆ ಆದರ್ಶದ ರೂವಾರಿಯಾಗಿದ್ದು ತನ್ನ ವೈಕ್ತಿಕ ಜೀವನದಲ್ಲಿ ಕೇವಲವಾಗಿರಬಾರದು. ಇದು ಪ್ರತಿಯೊಬ್ಬ ಪ್ರಸಿದ್ಧರಿಗೂ ಅನ್ವಯವಾಗುತ್ತದೆ.


ಸಮಾಜ ಗಮನಿಸುವ ವ್ಯಕ್ತಿಗಳು ಯುವ ಜನಾಂಗಕ್ಕೆ ಆದರ್ಶಪ್ರಾಯರು. ನಾವುಗಳು ನಮ್ಮ ಮನೆಯಲ್ಲಿಯೇ ನಮ್ಮ ಬೆರಳನ್ನು ಯಾವಾಗಲೂ ತೋರಿಸುವುದು ಇವರ ಕಡೆಯೇ. ಇದನ್ನು ಅವರುಗಳು ಅರಿಯುವಂತೆ ಮಾಡುವವರು ಯಾರು? ಮತ್ತೇ ಅದೇ ಉನ್ನತ ವಿಚಾರದ ಜೀವನ ಪಯಣದಲ್ಲಿ ಬರುವ ಶಾಲೆ, ಮನೆ, ನೆರೆಹೊರೆ ಮತ್ತು ಸಮಾಜ.


ನಾವುಗಳು ಏನಾದರೂ ಆಗಿರಲಿ ಎಲ್ಲದ್ದಕ್ಕಿಂತ ಮಾನವೀಯತೆಯ ಕಳಕಳಿಯೇ ಮತ್ತು ಚೂರು ನೈತಿಕತೆ ಮುಖ್ಯ. ಇಲ್ಲಿ ಯಾರು ಶಾಶ್ವತವಲ್ಲ. ಇರುವಷ್ಟು ದಿನಗಳಲ್ಲಿ ಎಲ್ಲರಿಗೂ ಪ್ರೀತಿಯನ್ನು ಹಂಚುವ ಧೈಯ ಎಲ್ಲಾರ ಗುರಿಯಾಗಬೇಕು. ತಮ್ಮ ಸಣ್ಣತನದ ಆಸೆಗೆ ತಾವುಗಳು ಗಳಿಸಿರುವ ಸ್ಥಾನ,ಮಾನ,ಗೌರವಗಳನ್ನು ನಗಣ್ಯ ಮಾಡಬಾರದು ಅಲ್ಲವಾ. ಭಾರತ ಎಂದರೇ ಈ ಅಮೂಲ್ಯವಾದ ಶ್ರೇಷ್ಟತೆಗೆ ದ್ಯೂತಕ!

ಶನಿವಾರ, ಡಿಸೆಂಬರ್ 11, 2010

ನೆಚ್ಚಿನ ಸಂಪಾದಕನ ಬಗ್ಗೆ



ನಮಗೆ ಇಷ್ಟಪಟ್ಟದ್ದನ್ನು ಹುಡುಕಿ ಕೊಂಡು ಪಡೆಯುತ್ತೆವೆ. ಅದು ಸಿಗುವವರೆಗೂ ಮನಸ್ಸಿಗೆ ನೆಮ್ಮದಿ ದೊರೆಯದು. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ನನ್ನ ಮನವನ್ನು ಗೆದ್ದಿದ್ದು ವಿಶ್ವೇಶ್ವರ ಭಟ್ ರವರ ಸಾರಥ್ಯದಲ್ಲಿ ಬರುತ್ತಿದ್ದ ವಿ.ಕ ದಿನ ಪತ್ರಿಕೆ. ಅವರುಗಳ ಬರಹಗಳಿಗಾಗಿ ಮಾತ್ರ ನಾನು ಅವರ ಪತ್ರಿಕೆಯನ್ನು ಖರೀದಿಸುತ್ತಿದ್ದೇನೋ ಏನೋ ಗೊತ್ತಿಲ್ಲ. ಆದರೆ ಕಳೆದ ಎರಡು ದಿನಗಳಿಂದ ಅವರಿಲ್ಲದೇ ಬರುತ್ತಿರುವ ಪತ್ರಿಕೆ ಮತ್ತೂ ಒಂದು ಪತ್ರಿಕೆ ಮಾತ್ರ ಅನಿಸುತ್ತಿದೆ. ಅದು ಯಾಕೋ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅನಿಸುತ್ತಿದೆ.

ಪತ್ರಿಕಾ ರಂಗದಲ್ಲಿ ಕೆಲವೇ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಕ್ರಾಂತಿಯನ್ನು ಮಾಡಿರುವವರು ಅಂದರೆ ಅದು ವಿಶ್ವೇಶ್ವರ ಭಟ್. ಕನ್ನಡ ಪತ್ರಿಕಾ ರಂಗದಲ್ಲಿ ಅತ್ಯಂತ ವೇಗವಾಗಿ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಮತ್ತು ತಮ್ಮ ವಿಭಿನ್ನ ಅಭಿರುಚಿಯಿಂದ ಓದುಗರಿಗೆ ಅತಿ ರಸವತ್ತಾದ ರಸಗವಳವನ್ನು ದಿನಂಪ್ರತಿ ಮುಂಜಾನೆಯ ಕಾದಿದ್ದ ಮನಸ್ಸುಗಳಿಗೆ ಚೂಟಿಯನ್ನು ಕೊಡುತ್ತಿದ್ದರು.



ಮುಖಪುಟದಿಂದ ಕೊನೆಯ ಪುಟದವರೆಗೂ ಅವರ ಛಾಪನ್ನು ಕಾಣಿಸುತ್ತಿದ್ದರೂ. ಮುಖಪುಟದಲ್ಲಿ ಬರುತ್ತಿದ್ದ ಅಗ್ರ ಸುದ್ದಿಯ ತಲೆ ಬರಹದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ್ದರೂ ಅಂದರೆ ಅತಿಶಯೋಕ್ತಿಯಲ್ಲ. ಅವರು ಕೊಡುತ್ತಿದ್ದ ಪಂಚಿಂಗ ಹೆಡ್ ಲೈನ್ ಒಂದು ಕ್ಷಣ ಎಂಥವರನ್ನು ಸೆಳೆಯುತ್ತಿತ್ತು. ಇದರಿಂದ ಬೇರೆಯ ಪತ್ರಿಕೆಗಳು ಸಹ ಆ ರೀತಿಯ ಪದಗಳ ಪ್ರಯೋಗಕ್ಕೆ ಅಡಿ ಇಟ್ಟರು ಸಹ. ಈ ರೀತಿಯಲ್ಲಿ ಹೊಸ ಹೊಸ ಪ್ರಯೋಗಗಳಿಗೆ ವೇದಿಕೆಯನ್ನಾಗಿ ಮಾಡಿ ಅದರ ಸಂತಸವನ್ನು ಮತ್ತು ಓದುವ ಸುಖವನ್ನು ವಿ.ಕ ಓದುಗರಿಗೆ ಒದಗಿಸಿ ಓದುಗರನ್ನು ಬೇರೆ ಎಲ್ಲಾ ಪತ್ರಿಕೆಯ ಓದುಗರಿಗಿಂತ ಒಂದು ಹೆಜ್ಜೆ ಮುಂದೆ ಇರುವಂತೆ ನೋಡಿಕೊಂಡರು.



ಇದಕ್ಕೆ ಕಾರಣರಾಗಿದ್ದ ಒಂದು ವಿಷಯ ಅಂದರೇ ಅವರುಗಳು ಕಲೆ ಹಾಕಿದ ತರುಣ ಡೈನಾಮಿಕ್ ಬರಹಗಾರರ ತಂಡ. ಅವರುಗಳ ಅಂಕಣ ಬರಹಗಳು ಯಾವುದೇ ಅಂತರಾಷ್ಟ್ರೀಯ ಸುದ್ಧಿ ಪತ್ರಿಕೆಗಳಿಗಿಂತ ಕಡಿಮೆಯಿಲ್ಲದಂತೆ ಮಾಡಿತ್ತು. ಎಲ್ಲಾರಿಂದ "ಬರೆಯುವ ಸಂಪಾದಕ" ಎಂಬ ಬಿರುದನ್ನು ಗಳಿಸಿಕೊಂಡ ತರುಣ ಸಂಪಾದಕರಾದ ವಿಶ್ವೇಶ್ವರ ಭಟ್ ಬಹುಬೇಗ ವಿ.ಕ ಹೊರ ಹೋಗಿದ್ದು ಮಾತ್ರ ಕನ್ನಡ ಪತ್ರಕರ್ತ ರಂಗಕ್ಕೆ ದೊಡ್ಡ ಶಾಕ್.



ಸ್ವತಃ ಅವರೇ ಬರೆಯುತ್ತಿದ್ದ ಪ್ರಸಿದ್ಧ ಅಂಕಣಗಳಾದ ಭಾನುವಾರ ಬರುತ್ತಿದ್ದ "ಜನಮನ" ಅಲ್ಲಿ ವಾರದಲ್ಲಿ ಘಟಿಸಿದ ಘಟನೆ, ಪ್ರಸಿದ್ಧ ಸಾಮಾನ್ಯ ಜನರ ಅಪರೂಪದವಾದ ನೋಟ, ಬುಕ್ ಟಾಕ್, ಸಲಹೆ, ಕಡ ತಂದ ಎಸ್. ಎಂ. ಎಸ್ ಜೋಕಗಳಿಂದ ವಾರಾಂತ್ಯದಲ್ಲಿ ನಮ್ಮನ್ನು ಕಾಯುವಂತೆ ಮಾಡುತ್ತಿದ್ದರು. ದಿನಪ್ರಂತಿ ಪ್ರಕಟವಾಗುತ್ತಿದ್ದ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ರೀತಿಯಲ್ಲಿ ಬರುತ್ತಿದ "ವಕ್ರತುಂಡೋಕ್ತಿ" ಗಳು ಒಂದು ಕ್ಷಣ ಹೌದಲ್ಲವಾ! ಎಂಬಂತೆ ಮನಸ್ಸಿಗೆ ಸಂತಸ ನೀಡುತ್ತಿದ್ದವು. ಪ್ರತಿ ಗುರುವಾರ ಅವರು ಬರೆಯುತ್ತಿದ್ದ "ನೂರೆಂಟು ಮಾತು" ಅಂಕಣದಲ್ಲಿ ವಿಷದವಾಗಿ ವಿಭಿನ್ನವಾದ ಅಪರೂಪದ ವಿಷಯಗಳನ್ನು ನಮಗೆ ತಿಳಿಸುವುದಕ್ಕೆ ಬಳಸಿಕೊಂಡಿದ್ದರು. ಇದು ಎಷ್ಟರ ಮಟ್ಟಿಗೆ ಸುಪ್ರಸಿದ್ಧಿಯಾಗಿದೆ ಅಂದರೆ ಅವುಗಳ ಸಂಕಲನಗಳನ್ನೊಳಗೂಂಡ ಪುಸ್ತಕಗಳ ಭಾರಿ ಮಾರಟವೇ ಸಾಕ್ಷಿ. ಶನಿವಾರ ಅವರು ಬರೆಯುತ್ತಿದ್ದ ತಮ್ಮದೇ ರಂಗಕ್ಕೆ ಸಂಬಂಧಿಸಿದ ಅಪರೂಪದ ವಿವರಗಳನ್ನು ಓದುಗರ ಕುತೂಹಲ ತಣಿಸಲು ಕೊಡುತ್ತಿದ್ದಾರೇನೋ ಎಂಬಂತೆ ಪ್ರಕಟಿಸುತ್ತಿದ್ದರು. ಇದರಿಂದ ಮಾಧ್ಯಮ ಲೋಕಕ್ಕೆ ಕಾಲು ಇಡಲು ನಿಂತಿರುವ ನಮ ತರುಣ/ತರುಣಿಯರಿಗೆ ಅದು ದಾರಿ ದೀಪವೇ ಸರಿ. ಇದರಿಂದ ನಾವುಗಳು ಒಂದು ಪತ್ರಿಕೆಯ ಬೆಳವಣಿಗೆಯಲ್ಲಿ ಯಾರು ಯಾರೂ ಹೇಗೆ ಯಾವ ರೀತಿಯಲ್ಲಿ ತಮ್ಮ ಪಾತ್ರವನ್ನು ನೀಡುತ್ತಾರೆ ಎಂಬುದನ್ನು ಅರಿಯಲು ಮತ್ತು ಹಲವಾರು ಮಹಾನ್ ಘಟಾನುಗಟಿ ಪತ್ರಿಕೆಯ ದಿಗ್ಗಜರ ಅಪರೂಪದ ಅವರ ಜೀವನ ಚಿತ್ರಗಳನ್ನು ಹೇಳಲು "ಸುದ್ದಿಮನೆ ಕತೆ" ಅಂಕಣ ಒಂದು ವೇದಿಕೆಯಾಗಿತ್ತು ಎಂಬುದು ಒಂದು ಹೆಮ್ಮೆಯ ವಿಷಯ. ಪ್ರತಿ ಶನಿವಾರ ತಪ್ಪಿಸದೇ ಪತ್ರಿಕೆಯನ್ನು ಕಾಯುವಂತೆ ಮಾಡುತ್ತಿದ್ದ ಈ ಒಂದು ಅಂಕಣ ಇನ್ನೂ ಮುಂದೆ ಇಲ್ಲ ಎಂದರೆ ಅದು ಎಷ್ಟೊಂದು ಬೇಸರದ ಸಂಗತಿ!




ಹೊಸತನದ ಹರಿಕಾರರಂತೆ ಇದ್ದು ಕನ್ನಡ ಪತ್ರಿಕೆಯ ಲೋಕಕ್ಕೆ ಇಗೂ ಓದುಗರನ್ನು ಸೆಳೆಯಬಹುದು ಎಂಬ ರೀತಿಯಲ್ಲಿ ವಿ.ಕ ಖ್ಯಾತಿಯನ್ನು ತಂದುಕೊಟ್ಟವರು ಇವರು ಎಂದರೇ ತಪ್ಪಾಗದು. ಅವರನ್ನು ಪುನಃ ನಾವುಗಳು ಇದೇ ಕ್ಷೇತ್ರದಲ್ಲಿ ಪುನಃ ಹೊಸ ಅವತಾರದಲ್ಲಿ ಶಕ್ತಿಯುಕ್ತವಾಗಿ ಕಾಣಲು ಈ ಸಹೃದಯ ಮನ ಬಯಸುತ್ತದೆ.




ನಾವು ಇಷ್ಟಪಟ್ಟು ಓದುವ ಹಲವಾರು ಕನ್ನಡ ಲೇಖಕರುಗಳನ್ನು ಪ್ರತ್ಯಕ್ಷ ಕಣ್ಣಿಂದ ಕಂಡು ಮಾತನ್ನಾಡಿಸದಿದ್ದರೂ ಅದು ಯಾಕೋ ಅವರ ನನ್ನ ಸಂಪರ್ಕ ಸಕತ್ತಾಗಿದೇ ಎಂಬ ಭಾವನೆ ನಮ್ಮ ನೆಚ್ಚಿನವರ ಬಗ್ಗೆ ಇರುತ್ತದೆ. ಯಾಕೆ? ಹೌದು! ಅವರು ಬರೆಯುವ ಕಥೆ, ಕಾದಂಬರಿ, ಹಾಡುವ ಹಾಡು, ರಚಿಸುವ ಕವಿತೆ ನಮಗಾಗಿಯೇ ಬರೆದಿದ್ದಾರೆ ಏನೋ ಎಂಬಂತೆ ಕಾದಿದ್ದು ಓದಿ ಆ ಕತೃಗೆ ಇಲ್ಲಿಂದಲೇ ಒಂದು ನಮಸ್ಕಾರವನ್ನು ಹೇಳುತ್ತೆವೆ. ಅವರನ್ನು ಮುಖತಃ ಬೇಟಿ ಮಾಡಿದರೆ ನಾವುಗಳು ಅವರ ಬಗ್ಗೆ ಇಟ್ಟುಕೊಂಡ ನೂರಾರು ಭಾವನೆಗಳನ್ನು ಸುಲುಭವಾಗಿ ತಲುಪಿಸಲು ಸಾಧ್ಯವಾಗದೇ ಏನೋ ಕಸಿವಿಸಿಯಾಗುತ್ತದೆ. ಯಾಕೆ? ನಮ್ಮ ಮತ್ತು ಅವರ ಪೂರ್ಣ ಸಂಪರ್ಕ ಅವರ ಕೃತಿಗಳ ಮೂಲಕ ಅಲ್ಲವೇ ಸಂವಹನ ಮಾಧ್ಯಮ. ಅವರ ಕೃತಿಗಳಿಂದಲೇ ಅವನು ಅವನ ಸಹೃದಯರೊಡನೆ ಮಾತನ್ನಾಡುತ್ತಾನೆ. ತಾನು ಏನು ಹೇಳಬೇಕೊ ಅದನ್ನು ಅವನು ತನ್ನ ನೆಚ್ಚಿನ ಓದುಗನಿಗೆ ತಲುಪಿಸುತ್ತಾನೆ. ಯಾಕೆಂದರೆ ಅಲ್ಲಿಯೇ ಕತೃ ಮೂದಲು ನಮಗೆ ಪರಿಚಿತನಾಗಿದ್ದು. ಅವರ ಬಗ್ಗೆ ನಮ್ಮಲ್ಲಿರುವ ಕಲ್ಪನೆ ಅವರ ಪುಸ್ತಕ, ಕಥೆ, ಕವಿತೆ, ಹಾಡು ಇವುಗಳಲ್ಲಿಯೇ ವಿಸ್ತೃತಗೊಂಡಿರುತ್ತದೆ.




ಎಷ್ಟೋ ಬಾರಿ ನೆಚ್ಚಿನ ರವಿಬೆಳೆಗೆರೆಯ ಕಾರ್ಯಕ್ರಮಗಳಿಗೆ ಹೋಗಿದ್ದೇನೆ ಅದರೆ ಅವರನ್ನು ಮುಖತಃ ಮಾತನ್ನಾಡಿಸಲು ಏನೋ ಸಂಕೋಚ. ಆದರೇ ಅವರ ಒಂದೇ ಒಂದು ವಾರದ ಅಂಕಣ ಬರಹವನ್ನು ಮಿಸ್ ಮಾಡಿಕೊಂಡು ಇರಲಾರೆ. ಕಾದಿದ್ದು ಅವರನ್ನು ಕಾಣಬೇಕು ಎಂದು ಅವರ ಪತ್ರಿಕೆ, ಪುಸ್ತಕಗಳಿಗಾಗಿ ಕಾಯುತ್ತಿರುತ್ತೇನೆ. ಇದು ಹೀಗೆ ಇರಬೇಕು ಅಲ್ಲವಾ. ನಾವುಗಳು ಅವರ ಅಮೊಲ್ಯವಾದ ಕ್ಷಣಗಳನ್ನು ಏಕೆ ಕೊಲ್ಲಬೇಕು ಸುಖ ಸುಮ್ಮನೇ ಬೇಟಿ ಮಾಡುತ್ತಾ?




ಅದಕ್ಕೆ ಇರಬೇಕು ನಮ್ಮ ಎಲ್ಲಾ ನೆಚ್ಚಿನ ಕಲಾವಿದರು ಯಾವುದೇ ಸಮಾರಂಭ ಅಥವಾ ಸಂದರ್ಭದಲ್ಲಿ "ನಾವು ಹೇಳುವುದನ್ನು ನಮ್ಮ ಕೃತಿಗಳು ಮಾತನ್ನಾಡುತ್ತವೆ" ಎನ್ನುತ್ತಾರೆ.




ಸಹೃದಯರು ತನ್ನ ನೆಚ್ಚಿನ ಲೇಖಕನನ್ನು ಅಥವಾ ಕಲಾಕಾರರನ್ನು ಎಷ್ಟರ ಮಟ್ಟಿಗೆ ಆರಾಧಿಸುತ್ತಾರೆ ಎಂದರೆ ಅವನು ಹೇಳಿದಂತೆ ಇರಲು ಪ್ರಯತ್ನಿಸುತ್ತಾರೆ. ಮತ್ತು ಅವನನ್ನೇ ತನ್ನ ರೋಲ್ ಮಾಡಲ್ ಎಂದು ಭಾವಿಸಿರುತ್ತಾರೆ. ಅವನನ್ನು ತನ್ನ ನೆಚ್ಚಿನ ಬೆಚ್ಚನೆಯ ಸ್ಥಾನದಲಿ ಸ್ಥಾಪಿಸಿಕೊಂಡಿರುತ್ತಾರೆ. ಅದ್ದರಿಂದ ಸಾರ್ವಜನಿಕವಾಗಿ ಅವರುಗಳನ್ನು ಪ್ರತಿಯೊಬ್ಬರೂ ಗಮನಿಸುತ್ತಿರುತ್ತಾರೆ. ತಮ್ಮ ಕೃತಿಗಳಲ್ಲಿ ಬರುವ ಬೋಧನೆಯ ಮಾತುಗಳು, ಆದರ್ಶ ಪಾತ್ರಗಳು ತನ್ನ ಲೇಖನದೇ ಅಥವಾ ತನ್ನ ಕಲಾವಿದನದೇ ಎನ್ನುವ ಮಟ್ಟಿಗೆ ನಂಬಿ ಬಿಟ್ಟಿರುತ್ತಾರೆ. ಆದ್ದರಿಂದ ಅವರುಗಳು ಇಡುವ ಪ್ರತಿಯೊಂದು ಹೆಜ್ಜೆ ಅತಿ ಮುಖ್ಯವಾಗಿರುತ್ತದೆ. ಇಲ್ಲವಾದರೆ ಹೇಳವುದು ಆಚಾರ ಮಾಡವುದು ಅನಾಚಾರವಾದಂತಾಗುತ್ತದೆ. ಉತ್ತಮ ನಡಾವಳಿಯನ್ನು ಪ್ರಸಿದ್ಧಿ ವ್ಯಕ್ತಿಗಳಿಂದ ಜನತೆ ಯಾವಾಗಲೂ ಅಪೇಕ್ಷಿಸುತ್ತದೆ.




ಸಾಹಿತಿಗಳು, ಕವಿಗಳು, ಕಲಾವಿದರು ಎಂದರೇ ಪ್ರತ್ಯೇಕವಾದ ಸ್ಥಾನವನ್ನು ಜನಗಳು ತಮ್ಮ ತಮ್ಮ ಮನದಲ್ಲಿ ಇಟ್ಟು ಕೊಂಡಿರುತ್ತಾರೆ ಅದಕ್ಕೆ ಧಕ್ಕೆಯಾಗದಂತೆ ಕಾಪಾಡಿಕೊಂಡಿರುವುದು ಅವರ ಗುರುತರ ಜವಾಬ್ದಾರಿ ಅಲ್ಲವಾ?

ಗುರುವಾರ, ಡಿಸೆಂಬರ್ 9, 2010

ಹಳ್ಳಿ ಹಳ್ಳಿಯೆಂದು ಮೂಗು ಮುರಿಯಬೇಡಮ್ಮ



ಎಷ್ಟೊಂದು ರೂಟಿನ್ ಜೀವನವಾಗಿದೆ ನಮ್ಮ ಬದುಕು. ಯಂತ್ರಕ್ಕೆ ಕೀಲಿ ಕೊಟ್ಟ ಬೊಂಬೆಯಂತೆ ಟೈಮ್ ಟೂ ಟೈಮ್ ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾ, ನಮ್ಮ ಸುತ್ತಲಿನವರ ಗೊಡವೆಯೇ ಬೇಡವೋ ಬೇಡಾ ಎಂಬಂತೆ ತಾನಯಿತು ತನ್ನ ಪಾಡಾಯಿತು ಎಂಬಂತೆ ದಿನದ ಇಪ್ಪತ್ತುನಾಲ್ಕು ಗಂಟೆಗಳನ್ನು ಹೀಗೆಯೇ ಇಡೀ ವರ್ಷದ ಮುನ್ನುರೈವತ್ತು ದಿನಗಳನ್ನು ಕಳೆದು ಬಿಟ್ಟಿರುತ್ತೇವೆ ಯಾಕೆ?


ಜೀವನವನ್ನು ದೂಡಬೇಕಲ್ಲಾ ಎಂಬಂತೆ ಮನದ ತುಂಬ ವಿಪರೀತವಾದ ವಿವಿಧ ಆಸೆ, ಆಕಾಂಕ್ಷೆಗಳನ್ನು ಇಟ್ಟುಕೊಂಡು ಮತ್ತು ಅವುಗಳನ್ನು ತಮ್ಮ ಅಡಿಯಾಳಾಗಿಸಬೇಕು ಎಂಬ ದಾವಂತದಲ್ಲಿ ಕುದುರೆಯ ಕಣ್ಣಿಗೆ ಕಟ್ಟಿದ ಕಪಾಟದಂತೆ ಅತ್ತ ಇತ್ತ ನೋಡದಂತೆ, ಸ್ಪಂದಿಸಿದಂತೆ, ಮನೆಯಿಂದ ಹೊರಗಡೆ, ತಾನು ಹೋಗುವ ಜಾಗ, ಕೆಲಸ ಮಾಡುವ ಸ್ಥಳ, ನಡೆದಾಡುವ ರಸ್ತೆ. ಅದೇ ಅಪರಿಚಿತ ಮುಖಗಳ ಮುಂದೆ ಅದೇ ರೀಪಿಟಾದ ಸಂಭಾಷಣೆ, ಕುಶಲೊಪರಿಯನ್ನು ಯಾವುದೇ ಹೆಗ್ಗು ಮತ್ತು ಯಾವುದೇ ಭಾವನೆಯಿಲ್ಲದೆ ನಟಿಸುತ್ತಾ, ಮಾಡುತ್ತಾ ನಮ್ಮ ದಿನಗಳನ್ನು ಸಂತೋಷವಾಗಿದ್ದೇವೆ ಎಂಬಂತೆ ಕಳೆದು ಬಿಟ್ಟಿರುತ್ತೇವೆ.


ಇದೇ ನಗರ ಜೀವನಕ್ಕೆ ಮತ್ತು ನಾವು ಹುಟ್ಟಿ ಬಂದ ಹಳ್ಳಿಗಾಡಿನ ಬದುಕಿಗೆ ಇರುವ ವ್ಯತ್ಯಾಸ. ಹಳ್ಳಿಯಲ್ಲಿ ದಿನದ ಪ್ರಾರಂಭ ಬಯಲಿನಲ್ಲಿ, ಎದುರಿನ ಮನೆಯವರ ಗದ್ದಲ, ಸದ್ದು, ಅವರು ಇವರುಗಳ ಜಗಳ, ಪ್ರೀತಿ ಮಾತು, ಕಕ್ಕುಲಾತಿ, ಪ್ರಾಣಿ-ಪಕ್ಷಿಗಳ ಸಂಚಲನೆಯೆಂಬ ಪ್ರಾರ್ಥನೆಯಿಂದ ಆರಂಭವಾಗಿ ತಾನು ಸಹ ಅದರಲ್ಲಿ ಭಾಗವಹಿಸಬೇಕು ಎಂಬಂತೆ ಮಾಡುತ್ತಾವೆ. ಮತ್ತು ತನ್ನ ಮನದಲ್ಲಿ ತನ್ನ ಬಗ್ಗೆಯೆಲ್ಲದೇ ಊರಿನಲ್ಲಿರುವ ಎಲ್ಲರ ಬದುಕು, ವಿಚಾರ, ಕುಟುಂಬದ ಬಗ್ಗೆ ಚಿಂತಿಸಿ ತನ್ನ ಸಹಾಯ - ಸಹಕಾರವನ್ನು ನೀಡುತ್ತಿರುತ್ತೇವೆ.

ಮುಕ್ಕಾಲುಪಾಲು ಬೇರೆಯವರ ವಿಷಯಗಳನ್ನು ಮಾತನ್ನಾಡುತ್ತಿರುತ್ತಾ ಅದನ್ನು ಹೀಗೆ ಮಾಡಿದ್ದರೆ ಅವನು ಹೀಗಾಗುತ್ತಿದ್ದಾ ಎಂಬಂತೆ ಯಾವುದೇ ಕೀಳರಿಮೆಯಿಲ್ಲದ ರೀತಿಯಲ್ಲಿ ನಮ್ಮ ಸಲಹೆಗಳನ್ನು ಮನೆ ಮಂದಿಯೆಲ್ಲಾ ಕುಳಿತು ಚರ್ಚಿಸುತ್ತಿರುತ್ತೇವೆ ಅದೇ ಅವರ ಬದುಕು!


ಈ ರೀತಿಯ ವಿಚಾರ ಸ್ಪಂದನ ನಗರದ ಜನತೆಯ ಮನಸ್ಸಿನಲ್ಲಿ ಬರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ತಾನಾಯಿತು ತನ್ನ ಸುಖವಾಯಿತು ಎಂಬಂತೆ ಯಾವುದೊ ಒಂದು ಗುರಿ ಹುಡುಕುವ ನಾವಿಗನಂತೆ ಅತ್ತಿತ್ತಾ ನೋಡದಂತೆ ಜೀವನವನ್ನು ಪ್ರಗತಿಯ ಪಥದಲ್ಲಿ ಸಾಗಿಸುತ್ತಾ ಸಾವಿರಾರು ಆತ್ಮೀಯ ಭಾವಸ್ಪಂದನಗಳ ಲೋಕವನ್ನು ಕಳೆದು ಕೊಳ್ಳುತ್ತಿದ್ದಾನೆ ಅಂತ ಅನಿಸುವುದಿಲ್ಲವಾ?


ನಗರದ ಮಂದಿ ತಮ್ಮ ಮನಸ್ಸನ್ನು ಸಂತೋಷಪಡಿಸಿಕೊಳ್ಳಬೇಕು ಎಂದರೇ, ಅದೇ ಪ್ಲ್ಯಾನ್ ಪ್ರಕಾರ, ಟೈಮ್ ಟೇಬಲ್ ನಲ್ಲಿ ಇಂಥಲ್ಲಿಗೆ ಹೋಗಿ ಇಷ್ಟು ಹೊತ್ತು ಇದ್ದು ಇಷ್ಟು ಹೊತ್ತಿಗೆ ವಾಪಾಸ್ಸಗಬೇಕು. ಇಷ್ಟು ಸಮಯ ನಲಿದಾಡಬೇಕು. ಇಷ್ಟು ಸಮಯ ನಗಬೇಕು, ಇದೇ ಸಮಯಕ್ಕೆ ತಿನ್ನಬೇಕು, ಇದೇ ಸಮಯಕ್ಕೆ ಮಲಗಬೇಕು... ಎಂದು ತಮಗೆ ತಾವೇ ಗಡಿಯ ಮೀತಿಯನ್ನು ನಿರ್ಮಿಸಿಕೊಂಡು ಅದರಲ್ಲಿಯೇ ಖುಷಿಪಡಬೇಕಾದ ಪಾಡಾಗಿದೆ. ಹೀಗೆ ನಮ್ಮ ಇಡೀ ಜೀವನ ಪ್ರೀ ಪ್ಲ್ಯಾನ್ಡ್ ಚಟುವಟಿಕೆಯಾಗಿದೆ. ಅಷ್ಟೊಂದು ಲೆಕ್ಕಾಚಾರವಾದ ರೀತಿಯಲ್ಲಿ ಎಲ್ಲಾ ಕರಾರುವಕ್ಕಾಗಿ ಜೀವಿಸುವುದೇ ಸಕ್ಸ್ ಸ್ ಫುಲ್ ವ್ಯಕ್ತಿತ್ವವಾಗಿದೆ.


ತಾನೇ ಅಳವಡಿಸಿಕೊಂಡ ತನ್ನ ಆಸೆಗಳನ್ನು ತನ್ನ ಸ್ಥಾನಗಳನ್ನು ಗಳಿಸುವುದು ಮತ್ತು ತಾನು ಅಂದುಕೊಂಡದ್ದನ್ನು ಸಾಧಿಸುವುದೇ ಸಕ್ಸ್ ಸಾ?


ಹಾಗೆಯೇ ನಮ್ಮ ಹಳ್ಳಿಗಾಡಿನ ಜನವನ್ನು ನಾವುಗಳು ಅನಾಗರಿಕರು. ಎಷ್ಟೊಂದು ಅವರು ಇನ್ನೂ ಮುಂದುವರಿಯಬೇಕು ಎಂಬಂತೆ ಅವರನ್ನು ಪ್ರತ್ಯೇಕವಾದ ಸ್ಥಾನದಲ್ಲಿರಿಸಿ ಯಾವುದೊ ಲೋಕದಿಂದ ಬಂದಿರುವವರು ಎಂಬಂತೆ ನಗರದ ಮಂದಿ ನಿಸರ್ಗ ಜೀವಿಗಳನ್ನು ನೋಡುತ್ತಿದ್ದಾರೆ. ಆದರೇ ತಾವುಗಳು ಯಾವ ಮಟ್ಟದ ಜೀವನ ಪ್ರಗತಿಯಲ್ಲಿ ಇದ್ದೇವೆ ಎಂಬುದನ್ನು ಮೊದಲು ಅರಿಯಬೇಕು.


ನಮ್ಮಲ್ಲಿ ಎಲ್ಲಾ ಇದೆ. ಏನೂ ಬೇಕಾದರೂ ಯಾವ ಸಮಯದಲ್ಲಿ ಎಲ್ಲಾರಿಗೂ ಯಾವುದೇ ವಯಸ್ಸಿನ ಅಂತರವಿಲ್ಲದೇ ನಮ್ಮ ನಮ್ಮ ಮನೆಯವರಿಂದ ನಮಗೆ ದೂರೆಯುತ್ತದೆ. ಈ ರೀತಿಯ ಅನುಕೂಲವೇ ನಮ್ಮ ಮನಸ್ಸಿಗೆ ಏಕತನತೆಯನ್ನು ಕೊಟ್ಟಿದೆ ಎಂದು ನಮಗೆ ಹಲವು ಸಮಯದಲ್ಲಿ ಅನಿಸದಿರದು. ಕಷ್ಟಗಳು ಮತ್ತು ತನ್ನ ಆಸೆಗಳನ್ನು ಹಿಡೇರಿಸಿಕೊಳ್ಳಲು ಅವಕಾಶಗಳಿಲ್ಲದೇ ಮರುಗಿ ಹಲವು ದಿನಗಳ ನಂತರ ಆ ಸುವರ್ಣ ಅವಕಾಶ ಒದಗಿ ಬಂದಾಗ ಸಿಗುವ ಆನಂದವನ್ನು ಅಕ್ಷರಗಳಲ್ಲಿ ಹಿಡಿದಿಡಲು ನಮ್ಮಿಂದ ಸಾಧ್ಯವಿಲ್ಲ.


ಈ ರೀತಿಯ ಪುಳಕಗೊಳ್ಳುವ ಕ್ಷಣಗಳು ಹೇರಳವಾಗಿ ಹಳ್ಳಿಗಾಡಿನ ಬಡ ಜನಗಳಿಗೆ ಸಾಕಷ್ಟು ಇರುವುದರಿಂದ ಅವರು ನಮ್ಮ ಜೀವನದ ಶೈಲಿಗಿಂತ ಎಷ್ಟೋ ಪಾಲು ಶ್ರೀಮಂತರಾಗಿದ್ದಾರೆ. ಈ ರೀತಿಯ ಆ ಮೂಹರ್ತಮಯವಾದ ರೋಮಂಚನದ ಗಳಿಗೆಯ ಅನುಭವ ನಮ್ಮ ಈ ಉಳ್ಳವರ ಹೈಟೆಕ್ ಲೈಫ್ ನ ಮಂದಿಗೆ ಎಂದಿಗೂ ಸಿಗಲಾರದು.


ಈ ರೀತಿಯ ಅನುಭವವೇ ಮನುಷ್ಯನ ಮನೋಲ್ಲಾಸ ಮತ್ತು ಹೊಸತನದ ತುಡಿತಕ್ಕೆ ಅವಕಾಶವಾಗುವುದೇನೊ. ಅದಕ್ಕೆ ಇರಬೇಕು ಗಟ್ಟಿ ಮನೊಸ್ಥೈರ್ಯ, ಪ್ರೀತಿಯ ಹೃದಯ, ಮರುಗುವ ಕರುಣೆಯ ಮನಸ್ಸನ್ನು ಹಳ್ಳಿಯ ಜನ ನಗರದ ಜನಗಳಿಗಿಂತ ಹೆಚ್ಚಾಗಿ ಹೊಂದಿದ್ದಾರೆ.


ಅದಕ್ಕೆ ಇರಬೇಕು ನಮಗೆ ಇಂದಿಗೂ ಟಿ. ಎನ್. ಸೀತರಾಮರವರ ದಾರವಾಹಿಯಲ್ಲಿ ತೋರಿಸುವ ಆ ಒಂದು ಬಡ ಮದ್ಯಮ ಕುಟುಂಬದ ಕಷ್ಟದ ಸರಮಾಲೆಯ ಚಿತ್ರಣ, ಹಳ್ಳಿಯ ಬದುಕು ಅತ್ಯಂತ ಹತ್ತಿರವಾಗುವುದು. ಇದನ್ನು ನೋಡಿದರೇ ಎಲ್ಲಾ ಇದ್ದು ನಾವುಗಳು ಎಲ್ಲವನ್ನು ಪ್ರತಿ ಕ್ಷಣದಲ್ಲಿ ಅಪಾರವಾಗಿ ಮಿಸ್ ಮಾಡಿಕೊಳ್ಳೂತ್ತಿದ್ದೇವೆಂದು ಅನಿಸುವುದಿಲ್ಲವಾ?

ಬುಧವಾರ, ಡಿಸೆಂಬರ್ 1, 2010

ಅಶರೀರ ಮೆಸೇಜ್

Mobiles are iritating!Daily Charging!Recharging!Annoying beeps always disurbing!But still I love my mobile becoz it connect "U & Me"..




ಇಂದು ಪ್ರತಿಯೊಬ್ಬರು ತಮ್ಮ ಹೃದಯಕ್ಕೆ ತೀರ ಹತ್ತಿರವಾಗಿ ಇಟ್ಟುಕೊಂಡಿರುವ ಏಕೈಕ ವಸ್ತು ಎಂದರೇ ಅದು ಮೊಬೈಲ್. ಹೌದು! ನಮ್ಮ ಹುಡುಗರು/ಹುಡುಗಿಯರು ತಮ್ಮ ಪ್ರೀತಿ ಪಾತ್ರರನ್ನು ಮರೆತರೂ ಮರೆತರು ಆದರೆ ಮೊಬೈಲ್ ನ್ನು ಒಂದು ಕ್ಷಣವು ಬಿಟ್ಟು ಇರಲಾರದು. ಅದು ಎಷ್ಟರ ಮಟ್ಟಿಗೆ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ಅದು ಬೇಕೆ ಬೇಕು. ನೀವು ಯಾರನ್ನಾದರೂ ಸಂಪರ್ಕದಲ್ಲಿ ಇಟ್ಟುಕೊಳ್ಳಬೇಕೆಂದರೇ ಆ ವ್ಯಕ್ತಿ ಈ ಒಂದು ಕೇವಲವಾದ ಮೊಬೈಲ್ ನ್ನು ನಂಬರ್ ನ್ನು ಒಂದಿರುಬೇಕು.

ಇದೊಂದು ೨೧ ನೇ ಶತಮಾನದ ಬಹುಮುಖ್ಯ ತಂತ್ರಙ್ಞಾನ ಕ್ರಾಂತಿಯೇ ಸರಿ. ಮನಸ್ಸು ಮನಸ್ಸುಗಳನ್ನು ಕಲ್ಪನೆಗೂ ನೀಲುಕದ ರೀತಿಯಲ್ಲಿ ನೇಟ್ ವರ್ಕ್ ಎಂಬ ಮಾಯಜಾಲದಲ್ಲಿ ಬಿಡಿಸಲಾರದ ಕೊಂಡಿಯನ್ನಾಗಿ ಮಾಡಿ ಬಿಟ್ಟಿದೆ.

ಭಾರತದಲ್ಲಿ ೧೯೮೫ ರಲ್ಲಿ ಮೂದಲ ಬಾರಿಗೆ ಟೆಲಿಪೂನ್ ನ್ನು ನಾನ್ ಕರ್ಷಿಯಲ್ ಸೇವೆಯಾಗಿ ದೆಹಲಿಯಲ್ಲಿ ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ ಮೊಬೈಲ್ ಸಾಮಾನ್ಯ ಜನರ ಗಗನ ಕುಸುಮವಾಗಿತ್ತು. ಶ್ರೀಮಂತರು ವ್ಯಾಪಾರಸ್ಥರು ಮಾತ್ರ ಉಪಯೋಗಿಸುವ ದುಬಾರಿ ವಸ್ತುವಾಗಿತ್ತು. ಅದರೇ ಯಾವಾಗ ರಿಲಯನ್ಸ್ ಭಾರತದಲ್ಲಿ ಕ್ರಾಂತಿಯನ್ನುಂಟು ಮಾಡಿತೊ ಎಲ್ಲಾರ ಕೈಯಲ್ಲೂ, ಕಿವಿಯಲ್ಲೂ, ಜೇಬಿನಲ್ಲಿ ಮೊಬೈಲ್ ಸಾರ್ ಮೊಬೈಲ್ ಆಗಿ ಹೋಗಿಬಿಟ್ಟಿತು.

ಇಂದು ಇದು ಯಾವ ಸ್ಥಿತಿಗೆ ಬಂದಿದೆಯೆಂದರೆ ವ್ಯಕ್ತಿ ಮೊದಲ ಸೆಲ್ ಪೋನ್ ಕಾಲ್ ನಿಂದ ಮುಂಜಾನೆಯನ್ನು ಪ್ರಾರಂಭಿಸಿ.. ಕೊನೆಯ ಪೋನ್ ಕಾಲ್ ಅಥಾವ ಕೊನೆಯ ಎಸ್. ಎಂ. ಎಸ್ ನ್ನು ಕಳಿಸುವ ಮೊಲಕ ಅಥವಾ ಓದುವ ಮೊಲಕ ಹಾಸಿಗೆಗೆ ಹೋಗಿ ಮುಂಜಾನೆ ಪುನಃ ಮೊದಲ ಕಾಲ್ ಗಾಗಿ ಕಾತರಿಸುತ್ತಾ ನಿದ್ದೆಗೆ ಜಾರುತ್ತಾನೆ.

ಒಂದು ಕ್ಷಣ ಅದು ಇಲ್ಲದಿದ್ದರೆ ಅವನ ಕಳವಳ, ಕಸಿವಿಸಿಯನ್ನು ನಮ್ಮ ಕಣ್ಣಿಂದ ನೋಡಲಾಗುವುದಿಲ್ಲ. ಅದು ಶಬ್ಧ ಮಾಡದ ಜಾಗ ಇಲ್ಲವೇ ಇಲ್ಲ ಎಂದು ಹೇಳಬಹುದು. ಅದಕ್ಕಾಗಿಯೇ ಬಹುಮುಖ್ಯವಾದ ಜಾಗಗಳಲ್ಲಿ ಅದರ ತರಂಗಾಂತರಗಳಿಂದ ವಿವಿಧ ರೀತಿಯಲ್ಲಿ ಅಪಾಯವುಂಟಾಗುವುದನ್ನು ತಡೆಯುವ ಸಲುವಾಗಿ ಮೊಬೈಲ್ ನ್ನು ಉಪಯೋಗಿಸ ಬೇಡಿ ಎಂದು ಕಟ್ಟಾಪ್ಪಣೆ ಮಾಡುವ ಮಟ್ಟಿಗೆ ಮತ್ತು ಕಾನೂನು ತರುವ ಮಟ್ಟಿಗೆ ಫಲಕಗಳನ್ನು ನೇತು ಹಾಕುವವರೆಗೆ ಇದರ ಆರ್ಭಟವಾಗಿದೆ.

ಇಂದು ಮಗು ಹುಟ್ಟಿದ ತಕ್ಷಣ ಅದರ ಕೈಗೆ ಆಟಿಕೆಯ ಸಾಮಾನುವಾಗಿ ನಾವುಗಳು ಏನಾದರೂ ಕೊಡಬಹುದಾದ ವಸ್ತು ಅಂದರೆ ಅದು ಮೊಬೈಲ್. ಅದರ ವಿವಿಧ ರೀತಿಯ ರಿಂಗಿಂಗ್ ಟೋನ್ ಕೇಳಿದರೆ ಅಳುವ ಮಗು ತನ್ನ ಅಳುವನ್ನು ನಿಲ್ಲಿಸುತ್ತದೆ. ಎಂದರೇ ನೀವುಗಳೇ ಉಹಿಸಬಹುದು.


ತಾಂತ್ರಿಕವಾಗಿ ಅಪಾರವಾದ ಕ್ರಾಂತಿಯ ಪರಿಣಾಮವಾಗಿ ಎಲ್ಲಾ ಸೇವೆಗಳು ಮೊಬೈಲ್ ನಲ್ಲಿ ಲಭ್ಯವಿದೆ. ಬ್ಯಾಂಕಿಂಗ್, ಶಾಪೀಂಗ್, ವಾರ್ತೆ, ಜಾತಕ, ಹಾಡು, ಜೋಕ್ ಇತ್ಯಾದಿ ಏನನ್ನು ನಾವುಗಳು ಮುಖಾ ಮುಖಿ ಸೇವೆಗಳನ್ನು ಪಡೆಯುತ್ತಿದ್ದೇವೊ ಆ ಎಲ್ಲಾ ಕೆಲಸಗಳನ್ನು ಕುಂತಲ್ಲಿಯೇ ಒಂದು ಎಸ್. ಎಂ. ಎಸ್ ಅಥವಾ ಒಂದು ಕಾಲ್ ನ ಸಹಾಯದಿಂದ ಪೂರೈಸಿಕೊಳ್ಳಬಹುದಾಗಿದೆ. ಇದು ಒಂದು ಉಪಯುಕ್ತ ಮತ್ತು ವೇಗವಾದ ಸೇವೆಯಾಗಿದೆ. ಅದಕ್ಕೆ ಇದನ್ನು ಕಂಡುಹಿಡಿದ ವ್ಯಕ್ತಿಗಳಿಗೆ ನಮೊ ನಮಾಃ


ಮೊಬೈಲ್ ಗೆ ಸಂಬಂಧಿಸಿದಂತೆ ವಿವಿಧ ಗಾದೆಗಳು ಹುಟ್ಟಿಕೊಂಡಿವೆ ಅದಕ್ಕೆ ಒಂದು ಸ್ಯಾಂಪಲ್ ಅಂದರೆ "ಕಾಲ್ ಬೆಳ್ಳಿ ಎಸ್. ಎಂ. ಎಸ್ ಬಂಗಾರ" ಹೌದು! ಎಸ್. ಎಂ. ಎಸ್ ಎಷ್ಟೊಂದು ಉಪಯೋಗಿಯೆಂದರೆ ಮೀಟಿಂಗನಲ್ಲಿರುವ ಸಮಯದಲ್ಲಿ, ಗುಂಪಿನಲ್ಲಿ ಕುಳಿತುಕೊಂಡ ವೇಳೆ, ಮನೆಯಲ್ಲಿ ಟಪ್ ಟಪ್ ಅಂತಹ ಟೈಪ್ ಮಾಡಿ ಬೇಕಾದವರಿಗೆ ಬೇಕಾದ ರೀತಿಯಲ್ಲಿ ಮಾತೇ ಇಲ್ಲದೇ ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ಮಾತನ್ನಾಡಬಹುದು.

ಕೆಲವೊಂದು ಪ್ರೇಮ ಅಂಕುರಗಳು ಈ ಒಂದೇ ಒಂದು ಎಸ್. ಎಂ. ಎಸ್ ನಿಂದ ಬೆಳೆದಿವೆ. ಕೆಲವೊಂದು ಪ್ರೇಮಗಳು ಈ ಒಂದೇ ಒಂದು ಎಸ್. ಎಂ. ಎಸ್ ಮೊಲಕ ಮುರಿದು ಬಿದ್ದಿವೇ. ಮದುವೆಗಳು ಮುರಿದು ಬಿದ್ದಿರುವುದಕ್ಕೆ ಸಾಕ್ಷಿಯೆಂದರೆ ಒಂದು ಎಸ್. ಎಂ. ಎಸ್ , ಆತ್ಮಹತ್ಯೆಗೂ ಮೊದಲು ಕಳಿಸಿದ ಮೆಸೇಜ್ ಹೀಗೆ ಎಲ್ಲಾದಕ್ಕೂ ಇದೇ ಮಂತ್ರ.

ಯಾರಿಗಾದರೂ ಕ್ಷಮೆಯನ್ನು ಕೇಳಬೇಕೆ ಮೆಸೇಜ್ ಗಿಂತ ಮುಖ್ಯವಾದ ಮಾಧ್ಯಮ ಇಲ್ಲವೇ ಇಲ್ಲ. ನೀವುಗಳು ನೋಡಬೇಕು ಇದರಲ್ಲಿ ಪಳಗಿದ ವ್ಯಕ್ತಿಗಳು ಅವರುಗಳು ಎಸ್. ಎಂ. ಎಸ್ ಗಾಗಿಯೇ ಇರುವುದು ಎಂಬ ರೀತಿಯ ಇಂಗ್ಲಿಷ ವಿಭಿನ್ನ ಬರವಣಿಗೆಯನ್ನು ಕಲಿತಿರುತ್ತಾರೆ. ಅಲ್ಲಿ ಶಾರ್ಟ್ ಅಂಡ್ ಸ್ವೀಟ್ ಆಗಿ ಕ್ವಿಕ್ ಆಗಿ ವಿಷಯವನ್ನು ತಲುಪಿಸಬೇಕಾಗಿರುತ್ತದೆ. ಈ ರೀತಿಯ ಒಂದು ಭಾಷೆಯ ಪದಗಳು ಇತ್ತೀಚೆಗೆ ಆಕ್ಸ್ ಪರ್ಡ ನಿಗಂಟಿನಲ್ಲೂ ಸೇರ್ಪಡೆಗೊಂಡಿದೆ ಎಂದರೇ ಉಹಿಸಿ ಇದರ ವಿಸ್ತಾರವನ್ನು.

ಇಂದು ಮೊಬೈಲ್ ನಂಬರನ್ನು ಪಡೆಯುವುದು ಏನೂ ದೊಡ್ಡ ವಿಚಾರವಲ್ಲಾ. ಇರುವುದು ಹ್ಯಾಂಡ್ ಸೆಟ್ ನ ಆಯ್ಕೆಯಲ್ಲಿ. ತಮ್ಮ ಆರ್ಥಿಕತೆಗೆ ಅನುಸಾರವಾಗಿ, ತಮ್ಮ ಲೆವಲ್ ಗೆ ತಕ್ಕುದಾದ ಮೊಬೈಲ್ ನ್ನು ಇಟ್ಟುಕೊಳ್ಳುವುದು ಗೌರವದ ಸಂಕೇತ. ಐಫೋನ್, ಟಚ್ ಸ್ಕ್ರೀನ್, ೪ ಮೆಗಾ ಪಿಕ್ಸಲ್ ಕ್ಯಾಮರ, ಎಕ್ಸಪ್ರೇಸ್ ಮ್ಯೊಸಿಕ್ ಸೀರಿಸ್. ವಿವಿಧ ಪ್ರಸಿದ್ಧವಾದ ಬ್ರ್ಯಾಂಡ್ ಸೆಲ್ ಗಳ ಆಯ್ಕೆ ಪ್ರತಿಷ್ಟೇಯ ವಿಷಯ.

ತರುಣರು/ತರುಣಿಯರು ತಮ್ಮ ಮೊದಲ ಉದ್ಯೋಗದ ಸಂಬಳದಿಂದ ಮೊದಲು ಖರೀದಿಸುವುದು ಒಂದು ಮೊಬೈಲ್ ನ್ನು. ಮೊಬೈಲ್ ಇಂದು ಕೊಂಡಿದ್ದು ನಾಳೆ ಹಳೆಯದು. ಅದಕ್ಕೆ ಗಾದೆಯೇ ಹುಟ್ಟಿಕೊಂಡಿದೆ. "ಹುಡುಗ ಹುಡುಕುವ ಹೆಣ್ಣು ಮೊಬೈಲ್ ಎರಡು ಒಂದೇ ಸ್ವಲ್ಪ ಕಾದರೇ ಹೊಸ ಒಳ್ಳೆಯದೇ ಸಿಗುವುದು." ಋತುಮಾನಕ್ಕೆ ಸಮಾನವಾಗಿ ಸೇಟ್ ಚೇಂಜ್ ಮಾಡುತ್ತಾರೆ.

ಆದರೋ ಇಂದಿನ ನಮ್ಮ ಈ ವ್ಯವಸ್ಥೆಗೆ ಮತ್ತು ಈ ವೇಗದ ಬದುಕಿಗೆ ಇದರ ಅವಶ್ಯಕತೆ ಬೇಕೆ ಬೇಕು. ಇಲ್ಲದಿದ್ದರೂ ನಡೆಯುತ್ತದೆ ಎನ್ನಬಹುದು. ಆದರೆ ಒಮ್ಮೆ ಉಪಯೋಗಿಸಿದರೇ ಅದರ ಮಹತ್ವದಿಂದ ಅದನ್ನೇ ಅವಲಂಬಿಸುವಂತಾಗುತ್ತದೆ. ಮತ್ತು ಇದು ವ್ಯಕ್ತಿಯನ್ನು ಗುರುತಿಸಲೂ. ಅವನನ್ನು ಸಂಪರ್ಕಿಸಲೂ ವಿಷಯಗಳ ಕೊಡು ಕೊಳ್ಳಿವಿಕೆಯ ವ್ಯವಹಾರಕ್ಕೆ ಬೇಕೆ ಬೇಕಾದ ಅನಿವಾರ್ಯವಾದ ಒಂದು ಸಾಧನವಾಗಿದೆ.

ಅದೇ ರೀತಿಯಲ್ಲಿ ಅನಾನುಕೂಲಗಳು ಇದ್ದಾವೇ... ಉಪಯೋಗವಿರುವ ಕಡೆ ಅಪಾಯಗಳು ಇರಲೇ ಬೇಕು ಅಲ್ಲವಾ? ಅದೇ ಪ್ರಕೃತಿಯ ಜೀವನ ಮರ್ಮ ಮತ್ತು ಧರ್ಮ. ಅದರೇ ನಾವು ಎಷ್ಟು ಮೀತಿಯಾಗಿ ಅದನ್ನು ಬಳಸಿದರೇ ಅಷ್ಟು ಉತ್ತಮ. ಯಾಕೆಂದರೇ ಅದು ಕೇವಲ ನಿರ್ಜೀವವಾದ ಒಂದು ಸಾಧನ. ಮನುಷ್ಯ ಮನುಷ್ಯರ ನಡುವಿನ ಜೀವ ತಂತುವಾದ ಸ್ನೇಹ ಸೇತುವೆಯೇ ಹಿರಿದಾದು. ಅದ್ದರಿಂದ ಅದೇ ಯಾವಾಗಲೂ ಮೇಲುಗೈ ಸಾಧಿಸಬೇಕು. ಹಾಗೇ ಮಾಡುವ ಚಮತ್ಕಾರ ನಮ್ಮ ನಿಮ್ಮಗಳ ಕೈಯಲ್ಲಿಯೆ ಇದೆ.
***********************
Kisi ladki ki Yad aye - yad karo Zyada aye - SMS karo Or Jyada - PHONE karo Orb Zyda - Mil lo Or Zyda - pyar karoUse b Zyda - Shadi karo Phir kabi yaada nahi aayegi.
********************

ನಾನು ಹೇಳಲೂ ಹೋರಟಿದ್ದು. ಎಸ್. ಎಂ. ಎಸ್ ಬಗ್ಗೆ. ಇಂದು ಎಸ್. ಎಂ. ಎಸ್ ಗಳಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಹೊಸ ವಿಚಾರಗಳು, ಜೋಕ್ ಗಳು, ಸಂದೇಶಗಳು, ವಿಷಯಗಳು ಚಿಕ್ಕವಾಗಿ ಚೊಕ್ಕವಾಗಿ ನಮ್ಮನ್ನು ಚಿಂತನೆಗಿಡು ಮಾಡುತ್ತವೆ. ಮತ್ತು ಈ ಮೆಸೇಜ್ ಗಳಿಂದ ಒಂದಿಷ್ಟು ಅರಿವು ಮತ್ತು ವ್ಯಕ್ತಿಗಳ ಬದುಕಿಗೆ ಹೊಸ ಕಿರಣವನ್ನು ನೀಡುವಂತಾಗುತ್ತದೆ. ಅವುಗಳು ಒಬ್ಬರಿಂದೊಬ್ಬರಿಗೆ ಪಾರವರ್ಡಾಗಿ ಬಂದಿದ್ದರೂ ಅವುಗಳ ಮಹತ್ವದ ಬೆಳಕು ತೀರ ಮಸುಕಾಗಿರುವುದಿಲ್ಲ. ನನ್ನನೊಂತೂ ಚಿಂತನೆಗೆ ದೊಡುತ್ತವೆ. ಒಂದೊಂದು ಎಸ್. ಎಂ . ಎಸ್ ನಮ್ಮ ಜೀವನದ ಉತ್ತಮ ಕ್ಷಣಗಳ ಪುನರ್ ಮೆಲುಕಿಗೆ ಸಾಧನವಾಗುತ್ತವೆ. ಅವುಗಳನ್ನು ನಮ್ಮ ಹತ್ತಿರದವರೊಡನೆ ಹಂಚಿಕೊಳ್ಳೋಣ ಎಂಬಂತೆ ಪ್ರೇರಪಿಸುತ್ತವೆ. ಇದರಿಂದ ನಾವುಗಳು ಎಷ್ಟೋ ಮಂದಿಯನ್ನು ನಮ್ಮನ್ನು ನೆನಪಿಸಿಕೊಳ್ಳುವಂತೆ ಮಾಡುತ್ತೇವೆ.
*********************
ENSTIEN::
"If someone feels that they had never made a mistake in their life, then it means they had never tried a new
thing in their life.....:)
*******************

ನಮ್ಮ ಪೋನ್ ನಲ್ಲಿ ಎಷ್ಟೊಂದು ಮಂದಿಯ ನಂಬರ್ ಗಳು ಇರುತ್ತವೆ. ಆದರೆ ನಾವುಗಳು ಅವರನ್ನು ಎಷ್ಟು ಬಾರಿ ಮಾತನ್ನಾಡಿಸಿರುತ್ತೇವೆ? ಅದರೆ ಮೌನವಾಗಿ ಒಬ್ಬರನ್ನು ಸ್ಪರ್ಷಿಸಿ ನಮ್ಮನ್ನು ನೆನೆಯುವಂತೆ ಮಾಡಲು ಈ ಎಸ್. ಎಂ. ಎಸ್ ಗಳು ಸಹಕಾರಿ ಅಲ್ಲವಾ.
***************************************
1 day v all b sitting n thinking hard abt life....
How it changed from simple college life to strict professional life
+
How pocket money changed to huge monthly pay cheques, But gives less happiness
+
How a single plate of samosa changed 2 a full pizza,But hunger is less.
+
How 2 save every single rupee 2 recharge cell phone changed 2 postpaid connection, But less people 2 talk 2..
Life moves so fast, so stay in touch.. 2 all my frnds Luv U all..
Hope V wil b der 4 each till d end...

******************************

ಹಾಗೆಯೇ ಸುಖ ಸುಮ್ಮನೇ ಕೆಲಸಕ್ಕೆ ಬಾರದ ಎಸ್. ಎಂ. ಎಸ್ ಗಳನ್ನು ಸುಮ್ಮನೆ ಎಲ್ಲಾರಿಗೂ ಪಾರವರ್ಡ್ ಮಾಡುವುದು ಸಹ ಒಳ್ಳೆಯವರ ಲಕ್ಷಣವಲ್ಲ. ನೆನಪಿನಲ್ಲಿ ಉಳಿಯುವಂತಹ, ವ್ಯಕ್ತಿಗೆ ಉಪಯುಕ್ತವಾಗುವಂತಹ ಮೆಸೇಜ್ ಗಳನ್ನು ಕಳಿಸುವ ಮೊಲಕ ನಿಮ್ಮ ಅಭಿರುಚಿಯನ್ನು ಬೇರೆಯವರಿಗೆ ತಿಳಿಸಬಹುದು ಅಲ್ಲವಾ.

**************************
Two difficult things to say in life:
1. Hello 4 d 1st time to unknown person!
2. Good bye 4 d last time to whom v really loved most!

**************************
Moral of the movie ROBO:
A Girl cannot only spoil manbut even machines...!!

**************************
Heart beat is excited more wen eyes start looking at sum1 silentlybut life seems 2 b more excited wen sum1 start reading those eyes silently.
*************************
Som of the best moments in life:
-To laugh until it hurts ur stomach.
-To wake up and realize its possible to sleep a couple of hours more.
-To write last paper of your last exam.
-Calls at night that last for hours.
-To see an old friend again & feel that things haven't changes.
-To hear a song that makes you remember a special person.
-To have sombody who tell you that i STILL TRUST YOU.
May ur life be full of such moments.

***************************

ಬುಧವಾರ, ನವೆಂಬರ್ 24, 2010

ಗುಲ್ ಮೋಹರ್ ಮರದ ನೆರಳಲ್ಲಿ ನೀನು

ಹೇ ಪ್ರಿಯ ಲತೆ,

ನನಗೆ ನೀ ಇಷ್ಟೊಂದು ವೇದನೆಯನ್ನು ಕೊಡುತ್ತೀಯ ಎಂದು ನಾನು ನನ್ನ ಕನಸು ಮನಸ್ಸಿನಲ್ಲೂ ನೆನಸಿರಲಿಲ್ಲ. ಕೇವಲ ನಿನ್ನ ಒಂದು ಮಾತಿಗಾಗಿ, ಕೇವಲ ನಿನ್ನ ಒಂದು ಎಸ್.ಎಂ.ಎಸ್ ಗಾಗಿ, ಕೇವಲ ನಿನ್ನ ಒಂದು ಮಿಸ್ ಕಾಲಿಗೆ ಕಾದ ಕ್ಷಣಗಳನ್ನು ನೆನಸಿಕೊಂಡರೆ ನನ್ನಲ್ಲಿ ನಾನೇ ಇಲ್ಲ ಎನಿಸುತ್ತದೆ. ಆಗೊಂತೂ ನಿನ್ನ ಬಗ್ಗೆ ತುಂಬ ಸ್ವಾರ್ಥಿ ಅನಿಸುತ್ತದೆ. ನಿನಗೆ ನನ್ನ ಬಗ್ಗೆ ಕಾಳಜಿ ಮತ್ತು ಅಷ್ಟೇ ಪ್ರೀತಿ ಇದೆ ಎಂಬುದು ಗೊತ್ತು ಆದರೂ ಯಾಕೆ ನೀನು ನನ್ನನ್ನು ಇಷ್ಟೊಂದು ಸತಾಯಿಸುವೆ ಎಂಬುದು ತಿಳಿಯದಾಗಿದೆ.


ಕಾಲೇಜಿಗೆ ಯಾಕಾದರೂ ರಜೆಯನ್ನು ಕೊಡುವರೂ ತಿಳಿಯದಾಗಿದೆ. ಹೌದಲ್ಲವಾ! ಅದು ನನ್ನ ಮತ್ತು ನಿನ್ನ ಕೈಯಲ್ಲಿ ಇಲ್ಲಾ. ಆ ನನ್ನ ನಿನ್ನ ಗಂಭಿರ ಮುಖದ ಪ್ರಿನ್ಸಿ ಕೈಯಲ್ಲಿ ಮಾತ್ರ ಇದೆ. ಅದಕ್ಕೇನೂ ಗೊತ್ತು ನನ್ನ ನಿನ್ನಂತ ಈ ಅಸಂಖ್ಯಾತ ಜೊಡಿ ಜೀವಗಳ ವಿರಹ ವೇದನೆಯ ಶಾಪ ಮುದಿ ಗೂಬೆಗೆ ತಾಕುವುದು ಎಂಬುದು.


ಈ ಒಂದು ತಿಂಗಳು ಒಂದು ಯುಗವನ್ನೇ ಕಳೆದಂತಾಗಿದೆ.


ನೀ ಇರುವ ಆ ಕುಗ್ರಾಮದಲ್ಲಿ ನನ್ನ ನಿನ್ನ ಬೆಸೆಯುವ ಜಂಗಮವಾಣಿಯ ತರಂಗಗಳು ಲಭ್ಯವಿಲ್ಲವಲ್ಲಾ! ಯಾವಾಗ ಪ್ರಯತ್ನಿಸಿದರೂ ವ್ಯಾಪ್ತಿ ಪ್ರದೇಶದಿಂದ ಹೊರಗೆ ಎಂಬ ಆ ತಾಟಕಿಯ ದ್ವನಿ. ಅಲ್ಲಿ ನಿನ್ನ ದ್ವನಿಗಾಗಿ ಕಾತುರತೆಯಿಂದ ಕಾದ ಕ್ಷಣಗಳಲ್ಲಿ ಅವಳ ಯಾಂತ್ರಿಕ ಮಾತು. ಆಗ ನನ್ನ ನಿನ್ನ ಬೆಸೆಯುವ ಒಂದು ಸಂಪರ್ಕವು ಉಪಯೋಗಕ್ಕೆ ಇಲ್ಲ ಎಂಬುದು ಮನಸ್ಸಿಗೆ ಬಂದಾಗ.. ಆಗಲೇ ಬೆಯುತ್ತಿರುವ ಮನವನ್ನು ಕುದಿಯುವ ಎಣ್ಣೆಯಲ್ಲಿ ಹಾಕಿದಂತ ನಿರಾಶೆ. ನಾನಾಗ ಬೆಂಕಿ ಬೆಂಕಿ..


ಯಾರೋ ಹಿರಿಯರು ಹೇಳಿದ್ದಾರೆ.. ದೂರ ಇದ್ದಷ್ಟೂ ಪ್ರೀತಿ ಹೆಚ್ಚಾಗುತ್ತದೆ ಅಂಥ.. ನನಗೂಂತು ತಿಳಿಯದು ದೂರ ಇದ್ದಷ್ಟು ನಾನು ನಾನಾಗಿಲ್ಲ. ನಿನ್ನದೇ ದ್ಯಾನ.. ನಿನ್ನದೇ ಆ ಮುಗ್ಧ ಮುಖ..


ನನ್ನ ಮನೆಯಲ್ಲಿ ಎಲ್ಲಾರಿಗೂ ಏನೋ ಒಂದು ಅನುಮಾನ. ಯಾಕೇ ಇವನು ಹೀಗೆ ರಜಾವನ್ನು ಮಜಾ ಮಾಡುವುದ ಬಿಟ್ಟು ಕೇವಲ ನಾಲ್ಕು ಗೋಡೆಯಲ್ಲಿ ಕಾಲ ಕಳೆಯುತ್ತಿರುವನಲ್ಲಾ ಎಂದು.


ನಿನ್ನ ಬಗ್ಗೆ ಇರುವ ಈಗಿನ ಒಂದೇ ಆಸೆ.. ನಿನ್ನ ನೋಡ ಬೇಕು ಮತ್ತು ನಿನ್ನ ಆ ಮುಂಗರುಳನ್ನು ಒಮ್ಮೆ ಅಂದು ನಾನು ಹಾಗೇ ಸುಮ್ಮನೇ ಸ್ಪರ್ಷಿಸಿದ ರೀತಿಯಲ್ಲಿ ಮೆಲ್ಲಗೆ ಹಿಂದಕ್ಕೆ ತೀಡಬೇಕು ಎಂದು. ನಿನ್ನ ಆ ಎರಡು ಎಳೆ ಕೇಶ ಮುಂದಕ್ಕೆ ಬಂದಾಗ ನೀನು ಸಾಕ್ಷತ್ ಅಪ್ಸರೆಯೇ ಸರಿ. ಆ ಸಮಯದಲ್ಲಿ ನಿನ್ನ ಕೈ ಗೊತ್ತಿಲ್ಲದ ರೀತಿಯಲ್ಲಿ ಹೋಗಿ ಅವುಗಳನ್ನು ನಿನ್ನ ಕಿವಿಯ ಹಿಂದಕ್ಕೆ ಸೇರಿಸುವಾಗ ಮನೋಲ್ಲಾಸವಾಗುತ್ತದೆ. ಹೇ ದೇವ ಎಂಥ ಸಮಯದಲ್ಲಿ ಈ ಸೌಂದರ್ಯದ ಪುತ್ಥಳಿಯನ್ನು ಸೃಷ್ಟಿಸಿದೇ ಎಂದು ನನಲ್ಲಿ ನಾನೇ ಕೇಳಿಕೊಳ್ಳೂತ್ತೇನೆ.


ನಿನ್ನನ್ನು ನಾನು ಯಾಕೇ ಇಷ್ಟಪಡುತ್ತೇನೆ ಎಂದು ಕೇಳಿಕೊಂಡರೆ ಸಾವಿರ ಕಾರಣಗಳನ್ನು ತೋರಿಸಬಹುದು. ನನ್ನ ಗೆಳೆಯರುಗಳು ಕೇಳುತ್ತಾರೆ... ಏ! ಬಿಡೋ ಅವಳ ಹಿಂದೆ ಯಾಕೇ ಬಿದ್ದಿಯಾ! ಅವಳಿಗಿಂಥ ಚೆನ್ನಾಗಿರುವವರು ಕಾಲೇಜು ತುಂಬ ಇದ್ದಾರೆ ಎನ್ನುತ್ತಾರೆ. ಆದರೆ ಅವರುಗಳಿಗೇನೂ ಗೊತ್ತು ಪ್ರೀತಿ ಹಾಗೆಲ್ಲಾ ಹೇಳಿ ಕೇಳಿ ವ್ಯವಹಾರಿಕವಾಗಿ ಹುಟ್ಟುವುದಿಲ್ಲ ಎಂಬುದು.


ನೀನೇ ಒಮ್ಮೆ ಹೇಳಿದ್ದೇ. ನನಗೆ ಹಲವರು ಹೀಗಾಗಲೇ ನನ್ನ ಪ್ರೇಮ ಭಿಕ್ಷೆಯನ್ನು ಕೇಳಿದ್ದರೂ.. ಮತ್ತು ಅವರೆಲ್ಲಾ ಯಾಕೆ ನನ್ನನ್ನು ಅಷ್ಟೊಂದು ಇಷ್ಟಪಡುತ್ತಾರೆ ಎಂಬುದನ್ನು. ನನಗೂ ತಿಳಿಯದು. ಅಷ್ಟೆಲ್ಲಾ ಮಂದಿಯ ಮಧ್ಯದಿಂದ ನನ್ನನ್ನೇ ಮಾತ್ರ ಹೇಗೆ ಪ್ರೀತಿಸಿದೆ. ಆ ಮೊದಲ ದಿನ..ಆ ಮೊದಲ ನೋಟ.. ಆ ಮೊದಲ ಮಾತು.. ಹೇಗೆ ಕ್ಷಣ ಮಾತ್ರದಲ್ಲಿಯೇ ಘಟಿಸಿತು ಅಲ್ಲವಾ? ಅದಕ್ಕೆ ಕಾಲಾಯ ತಸ್ಮಯಾ ನಮಃ!


ಆದಕ್ಕೆ ಹೇಳಬೇಕು. ಪ್ರೀತಿಯಾಗಲೀ.. ಒಳ್ಳೆಯದಾಗಲೀ..ಕೆಟ್ಟದಾಗಲೀ.. ಯಾರೂಬ್ಬರ ಅರಿವಿಗೂ ಬಾರದ ರೀತಿಯಲ್ಲಿ ತನ್ನ ಜಾದುವನ್ನು ಎಲ್ಲಿ ಎಲ್ಲಿ ಇಡಬೇಕು ಅಲ್ಲಿ ಕರಾರುವಕ್ಕಾಗಿ ಸ್ಥಾಪಿಸುತ್ತದೆ.


ನಾನು ಅಂದುಕೊಂಡಿದ್ದೇ ನಿನ್ನ ಹಾಗೆಯೇ ತೀರ ಸರಳತೆಯ ಹಳ್ಳಿಗಾಡಿನ.. ಸ್ಪಲ್ಪ ಮಾಡ್ರನ್ ಇದ್ದು.. ಸ್ಪಲ್ಪ ಓದಿದ್ದೂ.. ಪ್ರೀತಿಸುವವರನ್ನು ತಾನು ಪ್ರೀತಿಸುವಂತಿರುವ ಆ ನನ್ನ ಕನಸಿನ ರಾಣಿ ಯಾರಿರಬಹುದು ಎಂದು.
ನನಗೆ ಅನಿಸುತ್ತದೆ. ಅದೇಗೆ ಒಂದು ದಿನ ತಂದೆ ತಾಯಿಗಳು ಒಪ್ಪಿ ನಮ್ಮ ಒಪ್ಪಿಗೆಯನ್ನು ಒಂದೇ ಕ್ಷಣದಲ್ಲಿ ಕೇಳಿ ಎರಡು ಮನೆಯವರು ಓ.ಕೆ ಎಂದಾಕ್ಷಣದಿಂದ ಒತ್ತಾಯವಾಗಿ ಪರಸ್ಪರ ಪ್ರೀತಿಸಲೇಬೇಕು ಎಂದು ಪ್ರಾರಂಭಿಸುವ ಮದುವೆಯೆಂಬ ಕಟ್ಟಳೆ ಎಷ್ಟೊಂದು ಅಭಾಸ ಅಲ್ಲವಾ!


ಅದಕ್ಕೇ ಇರಬೇಕು ನಾನು ನನ್ನ ಯೌವನದ ದಿನಗಳಿಂದ ಅಂಥ ಮನೋಲತೆಗಾಗಿ ಶೋಧಿಸುತ್ತಿದ್ದಾಗ ನೀ ನನ್ನ ಹೃದಯ ಸಿಂಹಾಸನದ ಹತ್ತಿರವೇ ಹಾದು ಹೋದಾಗ.. ಇವಳೇ ಇರಬೇಕು. ಮಗಾ! ಬಿಡಬೇಡಾ ಟ್ರೈ ಮಾಡು ಅನಿಸಿದ್ದು. ಅದುವರೆಗೂ ಯಾರೂ ನಿನ್ನಷ್ಟು ನನ್ನನ್ನು ಇಂಪ್ರೇಸ್ ಮಾಡಿರಲಿಲ್ಲ.


ಹಾಗೆಯೇ ಸುಮ್ಮನೇ ನೋಡಿದರೇ ಹೇ ಇವಳು ಏನು ತಮಾಷೆಯಾ ಜಾಲಿ ಹುಡುಗಿ ಅಲ್ಲವಾ ಅನಿಸುತ್ತದೆ. ಅಂದು ಮೊದಲ ದಿನ ನಮ್ಮ ಕಾಲೇಜಿನ ಆ ಗುಲ್ ಮೋಹರ್ ಮರದ ನೆರಳಲ್ಲಿ ನೀನು ಆ ನಿನ್ನ ಗೆಳತಿಯರಾದ ಸೇವಂತಿ ಮತ್ತು ಸುಮತಿ ಜೊತೆ ನಿಂತಿದ್ದಾಗ ಇದು ಯಾರಪ್ಪ ಸೆಂಟರ್ ಆಪ್ ಆಟ್ರ್ಯಾಕ್ಷನ್ ಅನಿಸಿತ್ತು. ಮತ್ತು ಆ ನಿನ್ನ ತಿಳಿ ನೇರಳೆಯ ನೆರಗೆಯ ಲಂಗದಲ್ಲಿ ತುಂಬ ಸುಂದರವಾಗಿ ನಮ್ಮ ಸಂಸ್ಕೃತಿಯ ಹುಡುಗಿಯ ರೀತಿಯಲ್ಲಿ ತೀರ ಸರಳವಾಗಿ ಕಾಣಿಸಿದ್ದೇ. ನಿನಗೆ ಆ ಡ್ರೆಸ್ಸಿಂಗ್ ಸೆನ್ಸ್ ಯಾರಿಂದ ಬಂದಿದೆಯೋ ತಿಳಿಯದು. ಬಹುಶಃ ನಿಮ್ಮ ಅಮ್ಮನಿಂದ.. ಅಥವಾ ನಿಮ್ಮ ಅಕ್ಕನಿಂದ ಇರಬಹುದು... ಯಾಕೆಂದರೆ ನನಗೆ ತಿಳಿದಂತೆ ಹುಡುಗಿಯರು.. ಆದಷ್ಟು ತನ್ನ ಹತ್ತಿರದವರ ರೀತಿಯಲ್ಲಿ ಇರಬೇಕು ಎಂದು ಆಸೆ ಪಡುತ್ತಾರೆ.


ಅಂದು ನಾನು ನೀನು ಇಬ್ಬರೂ ತಮ್ಮ ತಮ್ಮ ಭಾವನೆಯನ್ನು ಹೇಳಿಕೊಂಡ ನಂತರ. ನೀನು ನಿನ್ನ ಓದಿನ ಬಗ್ಗೆ. ನಿನ್ನ ಮುಂದಿನ ಜೀವನದ ಬಗ್ಗೆ. ನನ್ನ ಬಗ್ಗೆ ನಾನು ಏನು ಮಾಡಬೇಕು. ಯಾವ ಓದನ್ನು ಮುಂದೆ ಓದಬೇಕು. ಅಲ್ಲಿಯವರೆಗೂ ಹೇಗೆ ನಾವುಗಳು ನಮ್ಮ ಪ್ರೇಮದ ದಿನಗಳನ್ನು ಕಳೆಯಬೇಕು ಇತ್ಯಾದಿ ಇತ್ಯಾದಿ... ವಿವರಗಳನ್ನು ಅದು ಹೇಗೆ ಆ ಕ್ಷಣದಲ್ಲಿ ನಿರ್ಧಿಷ್ಟವಾಗಿ ಯೋಚಿಸಿದೇ.. ಅಂದೇ ಗೊತ್ತಾಗಿದ್ದು. ಹುಡುಗಿ ತುಂಬ ಬುದ್ಧಿವಂತೆ! ಆ ವಯಸ್ಸಿನ ಹುಡುಗಿಯರು ಸುಮ್ಮನೇ ಚೆಲ್ಲು ಚೆಲ್ಲಾಗಿ ವರ್ತಿಸುತ್ತಾರೆ.


ಬದುಕಿನ ಬಗ್ಗೆ ಯಾವುದೇ ನಿರ್ಧಿಷ್ಟವಾದ ಗುರಿಯಿಲ್ಲದೇ ಲವ್, ಪಾರ್ಕ, ಬಾಯ್ ಪ್ರೇಂಡ್ಸ್ ಎಂದು ಸುಖಾ ಸುಮ್ಮನೇ ಸಮಯವನ್ನು ಕಾಲಹರಣ ಮಾಡುವುದೇ ಸುಖಿ ಜೀವನ ಎನ್ನುವ ಸ್ನೇಹಿತರ ಮಧ್ಯೆ ನೀನು ವಿಭಿನ್ನ ಅನಿಸಿತು. ಆಗ ನನಗೆ ಸ್ಪಲ್ಪ ಧೈರ್ಯವು ಬಂದಿತು.


ಯಾಕೆಂದರೇ ಲವ್ ಎಂದರೇ ಹಾಗೆ ಹೀಗೆ ಎಂದು ಅಲ್ಲಿ ಇಲ್ಲಿ ಓದಿದ್ದು, ಎಸ್. ಎಂ. ಎಸ್ ಗಳಲ್ಲಿ ಹುಡುಗನ ಜೀವನದಲ್ಲಿ ಹುಡುಗಿ ಬಂದರೇ ಅವನ ಜೀವನ ಅಂದೇ ಮುಕ್ತಾಯ.. ಇತ್ಯಾದಿ ಇತ್ಯಾದಿ ಲವ್ ಡಿಸ್ ಪಾಯಿಂಟ್ ಗಳನ್ನೇ ಗಮನಿಸುತ್ತಿದ್ದವನಿಗೆ ಆ ನಿನ್ನ ಭವಿಷ್ಯದ ಬಗೆಗಿನ ದೃಷ್ಟಿ ಕೋನ ಒಳ್ಳೆಯವಳನ್ನೇ ಆರಿಸಿದ್ದಿಯ ಗುರು ಬಿಡು ಅನಿಸಿತ್ತು.


ಅಲ್ಲವಾ! ಇಷ್ಟೊಂದು ವಿವರವಾದ ಮನದ ಭಾವನೆಗಳನ್ನು ಪತ್ರದ ಮುಖೇನವಲ್ಲದೇ ಇನ್ಯಾವುದರಲ್ಲೂ ಹರಿಯ ಬಿಡಲೂ ಸಾಧ್ಯವಿಲ್ಲ.


ನೋಡು ಈ ನಮ್ಮ ಯಾಂತ್ರಿಕ ವಸ್ತುಗಳಾದ ಪ್ರೀತಿಯ ಮೊಬೈಲ್ ಗಳು ಒಮ್ಮೂಮ್ಮೆ ಉಪಯೋಗಕ್ಕೆ ಬಾರದವಾಗುತ್ತವೆ. ಪುನಃ ನಮ್ಮ ಹಿರಿಯರು ತಮ್ಮ ಪ್ರೇಮ ಸಂದೇಶವನ್ನು ತಲುಪಿಸಲು ಉಪಯೋಗಿಸುತ್ತಿದ್ದ ಈ ಪತ್ರಗಳೇ ಗಟ್ಟಿ. ಇನ್ನೂ ಮೂರು ದಿನಗಳು ಕಳೆದರೇ ನೀನು ನನ್ನ ಸೇರಬಹುದು. ಆ ಕ್ಷಣಕ್ಕಾಗಿ ಕಾಯುತ್ತಿರುವೇ. ಈ ನನ್ನ ಮನ ತಲ್ಲಣದ ಪತ್ರ ಕಂಡು ಗಾಬರಿಯೇನೂ ಬೇಡ. ಯಾಕೆಂದರೇ ಕಳೆದ ಎರಡೂ ವಾರದಿಂದ ಪ್ರತಿ ರಾತ್ರಿ ಬೆಳಂದಿಗಳ ಹುಣ್ಣಿಮೆ ಚಂದ್ರಾನೋಪಾದಿಯಲ್ಲಿ ಬೆಳದಿಂಗಳ ಬಾಲೆಯಾಗಿ ನನ್ನ ಮನದ ವಿವಿಧ ನರ್ತನಕ್ಕೆ ಸಾಥ್ ಕೊಡುತ್ತಿದ್ದಿಯ. ಈ ರೀತಿಯ ಅವಕಾಶ ಮತ್ಯಾರಿಗೇ ಸಿಗುತ್ತದೆ ಅಲ್ಲವಾ! ಗೊತ್ತಿಲ್ಲ ನಿನಗೂ ಇದೇ ರೀತಿಯ ಫೀಲಿಂಗ್ ಇರುವುದಾ! ಬಂದಾಗ ಅದೇ ಮಾತನ್ನಾಡೋಣ.


ನಿನಗಾಗಿ ಕಾಯುತ್ತಿರುವ ನಿನ್ನ ಪ್ರೀತಿಯ ಚಿರಂತನ್!!

ಭಾನುವಾರ, ನವೆಂಬರ್ 21, 2010

ನೆನಪುಗಳ ಮಾತು ಮಧುರ..



ನೆನಪುಗಳು ಹಾಗೆಯೇ. ಯಾವ ರೀತಿಯಲ್ಲಿ ಮನದಲ್ಲಿ ಮೀಟುತ್ತವೆಯೋ ಹೇಳಲು ಬರುವುದಿಲ್ಲ. ಅವುಗಳ ಉಗಮಕ್ಕೆ ಕಾರಣೀಭೂತವಾದ ಯಾವುದಾದರೂ ಒಂದು ಮಾತು, ಘಟನೆ, ಓದಿನ ಸಾಲು,ವ್ಯಕ್ತಿಯ ಚಿತ್ರ, ಕವನದ ಸಾಲು, ನೋಡಿದ ಚಲಚಿತ್ರದ ತುಣುಕು ಯಾವುದಾದರೂ ಇರಬಹುದು. ತಾವು ಕಳೆದ ಸುಖಿಸಿದ ಸುಖಿ ದಿನಗಳನ್ನು ಅಥಾವ ದುಃಖಿ ದಿನಗಳನ್ನು ಆ ಸಂದರ್ಭದ ಸ್ಥಾಯಿಗೆ ನಮ್ಮನ್ನು ಕರೆದುಕೊಂಡು ಹೋಗಿಬಿಡುತ್ತವೆ. ಅವುಗಳಿಗೆ ಅಂಥ ತಾಕತ್ತು ಇರುತ್ತದೆ.

ಆಗಲೇ ಇರಬೇಕು ನಾವು ಓದುವ ಕಥೆ, ನೋಡುವ ಚಿತ್ರ, ಕೇಳುವ ಹಾಡು, ಮಾತನ್ನಾಡುವ ಮಾತು ನಮ್ಮ ಮನ ಮುಟ್ಟುವುದು ಮತ್ತು ಅದು ತುಂಬ ಇಷ್ಟವಾಗುವುದು. ಅದು ನಮ್ಮ ನೆನಪನ್ನು ಕೆಣಕಬೇಕು ಮತ್ತು ಆ ನೆನಪಿನ ಮೆರವಣಿಗೆಯನ್ನು ಕಾಣುವಂತೆ ಮಾಡು ಜಾದುತನವನ್ನು ಹೊಂದಿರಬೇಕು. ಆಗ ಮಾತ್ರ ಅದೊಂದು ಗಟ್ಟಿ ವಸ್ತುವಾಗಿರುತ್ತದೆ.

ನಾವು ನಮ್ಮ ಬಿಡುವಿನ ವೇಳೆ ನಮ್ಮ ಮನಸ್ಸಿನ ಬೋರ್ ಹೋಗಿಸಬೇಕು ಎಂದರೇ ಯಾವುದಾದರೂ ಸೃಜಶೀಲವಾದ ಹೊಸತನದ ಘಳಿಗೆಗಾಗಿ ಕಾತರಿಸುತ್ತೇವೆ. ಅಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವ ನಮ್ಮ ಸಂತೋಷ ಅಥವಾ ನಮ್ಮ ದುಃಖಗಳನ್ನು, ಕಳೆದು ಹೋದ ಕ್ಷಣಗಳ ಪುನರ್ ಮೆಲುಕು ಹಾಕಿಕೊಳ್ಳುವ ಕ್ಷಣಕ್ಕಾಗಿ ಕಾತರಿಸುತ್ತೇವೆ. ಅವುಗಳನ್ನು ಇಂದಿನ ಈ ಕಲಾ ಪರಿಕರಗಳಾದ ಯಾವುದಾದರೂ ಒಂದು ಮಾಧ್ಯಮದ ಮೂಲಕ ಪುನಃ ನಮ್ಮ ಇತಿಹಾಸದಲ್ಲಿ ಕಂಡ ಕ್ಷಣಗಳ ನೆನಪನ್ನು ಹೊಂದಿಸಿಕೊಂಡು ಇಂದು ನಲಿಯುತ್ತಾ ಇರುತ್ತೇವೆ.

ಇಂದು ಕಂಡ ಈ ಕ್ಷಣಗಳ ಸಂತಸವನ್ನು ಮನದ ಒಂದು ಮೂಲೆಯಲ್ಲಿ ಹಾಗೆಯೇ ಅಚ್ಚು ಮಾಡಿ ಇಟ್ಟು ಇದನ್ನು ಪುನಃ ಎಂದಾದರೂ ಒಂದು ದಿನ ಮತ್ತೊಂದು ಬಗೆಯಲ್ಲಿ ಮೆಲಕು ಹಾಕಿಕೊಳ್ಳುತ್ತಾ ಪುನಃ ಸಂತೋಷಿಸುತ್ತೇವೆ. ಈ ನಮ್ಮ ಮಾನವ ಜನ್ಮಕ್ಕೆ ಮಾತ್ರ ಇಂಥ ಒಂದು ರೀತಿಯ ಬಹು ಅಮೊಲ್ಯ ವರದಾನವನ್ನು ಆ ಭಗವಂತ ಕರುಣಿಸಿದ್ದಾನೆ ಎಂದರೇ ತಪ್ಪಾಗುವುದಿಲ್ಲ. ಇದೊಂದೇ ಮನುಷ್ಯನನ್ನು ಉಳಿದ ಎಲ್ಲಾ ಪ್ರಾಣಿಗಳ ಜಗತ್ತಿನಿಂದ ಬೇರೆ ಮಾಡಿ ಇಟ್ಟಿರುವುದು.

ಮನುಷ್ಯ ತಾನು ಬೆಳೆಯುತ್ತಾ ಬೆಳೆಯುತ್ತಾ ತನ್ನ ಜೀವನದ ಹಲವಾರು ಅಮೋಲ್ಯವಾದ ಕ್ಷಣಗಳ ಹನಿಗಳನ್ನು ತನ್ನ ಅನುಭವ ಎಂಬ ಮೂಸೆಯಲ್ಲಿ ಶೇಕರಿಸಿಕೊಂಡು ಜೀವನದ ಪ್ರಯಾಣವನ್ನು ಬೆಳೆಸುತ್ತಾನೆ. ಅಲ್ಲಿ ಅವನಿಗೆ ಸಿಗುವ ಯಾವುದೇ ಕ್ಷಣಗಳಾಗಿರಬಹುದು. ನೋವು, ನಲಿವು, ಸ್ನೇಹ, ಬಂದುತ್ವ, ಕಷ್ಟ, ಸಂತಸ, ಸಿಟ್ಟು, ಸೇಡವು, ಕರುಣೆ, ಕಲಿಯುವಿಕೆ ಇತ್ಯಾದಿ. ಹೀಗೆ ನಾನಾ ರೀತಿಯ ವಿವಿಧ ಬಗೆಯ ಜೀವನ ಪಾಠಗಳ ಸರಮಾಲೆಯ ನೆನಪಿನ ಗೊಂಚಲನ್ನೇ ತನ್ನಲ್ಲಿಟ್ಟುಕೊಂಡಿರುತ್ತಾನೆ. ಅದಕ್ಕೆ ಹೇಳುತ್ತಾರೆ.. ನೆನಪುಗಳ ಮಾತು ಮಧುರ...

ತಾನು ಕಂಡುಂಡ ಆ ಕ್ಷಣಗಳ ಖಜಾನೆಯನ್ನು ಅವನು ಯಾವಾಗಲಾದರೂ ಪುನಃ ಸಮಯ ಸಿಕ್ಕಾಗ ತೆರೆದು ನೋಡುವ ಕ್ಷಣಕ್ಕಾಗಿ ಕಾತರಿಸುತ್ತಾ ಇರುತ್ತಾನೆ. ಕಾತರಿಸುತ್ತಲೇ ಇರಬೇಕು. ಯಾಕೆಂದರೇ ಅವನು ಮನುಷ್ಯ. ಅವನಿಗೆ ಅವನು ಅನುಭವಿಸಿದ ಅನುಭವದ ಘಳಿಗೆಗಳು ಅವುಗಳು ಎಂಥವೇ ಆಗಿರಲಿ ಅವನಿಗೆ ಅವುಗಳು ಸುವರ್ಣಪುತ್ಥಳಿಗಳೇ ಸರಿ. ಅವನು ಅನುಭವಿಸಿದ ಕಟ್ಟ ಕಡೆಯ, ಕೀಳದ ಒಂದು ಚಿಕ್ಕ ಅವಮಾನವನ್ನು ಅವನು ಯಾವಾಗಲಾದರೂ ಪುನಃ ಹಿಂತಿರುಗಿ ನೋಡಬಯಸುತ್ತಾನೆ. ಅವುಗಳನ್ನು ಪುನಃ ಶೃತಿಯಂತೆ ಮೀಟುವ ಕಲಾ ಪ್ರಕಾರಗಳೇ ಮನುಷ್ಯನಿಗೆ ಮಾತ್ರವೇನೋ ಎಂದು ಇರುವ ಕಲಾ ಪ್ರಕಾರಗಳಾದ ಸಂಗೀತ, ಸಾಹಿತ್ಯ, ನೃತ್ಯ, ಚಲನಚಿತ್ರ ಮಾದ್ಯಮಗಳು.

ಈ ಮೇಲಿನ ಯಾವುದಾದರೂ ಒಂದರಲ್ಲಿ ಒಬ್ಬ ವ್ಯಕ್ತಿಗೆ ಅಸಕ್ತಿ ಇರಲೇ ಬೇಕು. ಇದ್ದೇ ಇರುತ್ತದೆ. ಯಾಕೆಂದರೇ ಮನುಷ್ಯ ತಾನು ಆರೋಗ್ಯಕರವಾಗಿ ಮುಂದೆ ಬೆಳೆಯಬೇಕೆಂದರೆ ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ತನ್ನನ್ನು ತಾನು ತೋಡಗಿಸಿಕೊಂಡಿರಲೇಬೇಕು. ತನ್ನ ಬಿಡುವಿನ ವೇಳೆ ಅದರಲ್ಲಿ ತಾನು ಮುಳುಗಿ ಹೋಗಲೇಬೇಕು ಎಂದು ನಿತ್ಯ ಕಾತರಿಸುತ್ತಿರುತ್ತಾನೆ. ಯಾಕೆಂದರೇ ತಾನು ತನ್ನ ಗತ ದಿನದ ವೈಭಗಳನ್ನು ಪುನಃ ನೆನಪು ಮಾಡಿಕೊಳ್ಳಲು, ಪುನಃ ಮನದ ಪಟಲದಲ್ಲಿ ಅದರ ವೈಭವದ ಮೆರವಣಿಗೆಯನ್ನು ಕಂಡು ತನ್ನ ಅಂದಿನ ಆ ಸಮಯದ ವರ್ತನೆ, ತನ್ನ ಪಾತ್ರವನ್ನು ಪರಮಾರ್ಶೆ ಮಾಡಿಕೊಳ್ಳಲು ಇಷ್ಟಪಡುತ್ತಾನೆ.

ತಾನು ಅನುಭವಿಸುವ ಈಗಿನ ಈ ಕಲಾ ಮಾದ್ಯಮಗಳ ಪಾತ್ರಗಳಾದ ಕಥೆಯಲ್ಲಿನ ನಾಯಕ ನಾಯಕಿಯ ಜೀವನ, ಹಾಡಿನಲ್ಲಿ ಬರುವ ನಾಯಕನ ಕಷ್ಟದ ಸನ್ನಿವೇಶ, ಸಿನಿಮಾದಲ್ಲಿ ಬರುವ ಅಲ್ಲಿನ ಅತಿ ಮೆಚ್ಚುಗೆಯ ಸನ್ನಿವೇಶವನ್ನು ತಾನು ಕಂಡೂಂಡ ಕ್ಷಣಗಳ ಜೊತೆಗೆ ಹೊಲಿಸಿಕೊಂಡು ತುಂಬ ಮಹಾನಂದವನ್ನು ಆ ಕ್ಷಣದಲ್ಲಿ ಮೈಮೆರತು ತಾನು ಅಂದು ಹೀಗೆ ಮಾಡಿದ್ದೇ. ತನ್ನವಳು ನನಗೆ ಅಂದು ಇವಳಂತೆ ಮಾಡಿದ್ದಳು. ತಾನು ಅಂದು ಹಾಗೆ ಮಾಡಬಾರದಗಿತ್ತು... ಹೀಗೆ ನಾನಾ ರೀತಿಯ ಮನಸ್ಸಿನ ವ್ಯವಕಲನ ಸಂಕಲನಗಳನ್ನು ಮಾಡುತ್ತಾ ಮಾಡುತ್ತಾ.. ಮುಂದೆ ನಾನು ಹೇಗೆ ಬಾಳಬಹುದು. ಯಾವುದರಲ್ಲಿ ತಪ್ಪಾಯಿತು.. ಎನ್ನುತ್ತಾ ಅವನು ಇನ್ನೂ ಹೆಚ್ಚು ಅರ್ಥವಂತಿಕೆಯನ್ನು ನಿತ್ಯ ಜೀವನದಲ್ಲಿ ಕಾಣಲು ಪ್ರಾರಂಭಿಸುತ್ತಾನೆ.

ನಮ್ಮ ಕಲಾಕರರು ಸಹ ತಾವು ಕಂಡುಕೊಂಡ ಜೀವನದ ಸತ್ಯಗಳನ್ನೇ ತಮ್ಮ ಕಲಾಪ್ರಕಾರಗಳಲ್ಲಿ ತರುವರು. ಯಾಕೆಂದರೇ ವ್ಯಕ್ತಿ ತಾನು ಎಷ್ಟೇ ಬೆಳೆದು ನಾನು ಬೇರೆ ಎಂದು ಹೇಳಲು ಬರುವುದಿಲ್ಲ. ತಾನುಂಡ ನೋವು, ನಲಿವುಗಳನ್ನು ಕಂಡ ಪೆಟ್ಟುಗಳನ್ನೇ ತನ್ನ ಕಲ್ಪನೆಯ ಮಾದ್ಯಮದಲ್ಲಿ ವಿವಿಧ ಪಾತ್ರಗಳ ಮೂಲಕವೋ, ತಾನೇ ಒಂದು ಪ್ರತೀಕವಾಗಿ ನಿಂತೂ ಅಲ್ಲಿ ಪರಮಾರ್ಶಿಸಿ ತಾನು ಗೊತ್ತು ಮಾಡಿಕೊಂಡ ಒಂದು ನಿಲುವನ್ನೋ, ಆದರ್ಶವನ್ನೋ ಇದು ಹೀಗೆ ಇರಬೇಕಾಗಿತ್ತು ಎಂದು ನಿರೂಪಿಸುತ್ತಾನೆ. ಅದಕ್ಕೆ ಪೂರಕವಾಗುವುದು ಅವನು ತನ್ನ ಜೊತೆಯವರೊಡನೆ ತನ್ನ ಜೀವನದಲ್ಲಿನ ಗತ ಸಮಯದ ಸನ್ನಿವೇಶಗಳೇ. ಅವುಗಳನ್ನು ಬಿಟ್ಟು ಅವನು ಬೇರೆಯದನ್ನು ಬರೆಯಲು, ಹಾಡಲು, ಚಿತ್ರಿಸಲು ಮತ್ತು ಚಿಂತಿಸಲು ಎಂದೂ ಸಾಧ್ಯವಿಲ್ಲ.

ಅದ್ದರಿಂದಲೇ ಅಂಥ ಸ್ಪರ್ಷವನ್ನು ಹೊಂದಿರುವ ಯಾವುದೇ ಸಿನಿಮಾವಾಗಲಿ, ಕಥೆಯಾಗಲಿ, ಕವಿತೆಯಾಗಲಿ ತುಂಬ ಸುಲಭವಾಗಿ ನಮ್ಮನ್ನು ತುಂಬ ಕಾಡುತ್ತವೆ. ಯಾಕೆಂದರೆ ಅಲ್ಲಿ ನಾವು ಅನುಭವಿಸಿದ ನೋವಿರುತ್ತದೆ, ವಿರಹವಿರುತ್ತದೆ, ಕಷ್ಟವಿರುತ್ತದೆ, ಪ್ರೀತಿಯಿರುತ್ತದೆ ಮತ್ತು ನಮ್ಮಷ್ಟೇ ಸ್ಥಾನವನ್ನು ಮಾನವನ್ನು ಅಲ್ಲಿನ ನಾಯಕ-ನಾಯಕಿ ಹೊಂದಿರುತ್ತವೆ. ಅಂಥವುಗಳೇ ಹೆಚ್ಚು ಕಾಲ ಜನ ಮಾನಸದಲ್ಲಿ ನೆಲೆಯಾಗುವುದು.

ಅದಕ್ಕೆ ಹೇಳುವುದು ಜೀವನವೆಂಬುದು ಒಂದು ವಿಶ್ವವಿದ್ಯಾನಿಲಯ ಇಲ್ಲಿ ಕಲಿಕೆಗೆ ಎಂದು ಕೂನೆಯಿಲ್ಲ. ಮನುಷ್ಯನ ಕೂನೆ ಉಸಿರು ಇರುವವರೆಗೂ ತನ್ನ ನಿತ್ಯ ಜೀವನದಲ್ಲಿ ಇರುವ ಗೆಳೆಯರು-ಗೆಳೆತಿಯರು, ತಂದೆ - ತಾಯಂದಿರು, ಅಣ್ಣ-ಅಕ್ಕಂದಿರುಗಳು, ಹಿರಿಯರು-ಕಿರಿಯರುಗಳು, ನೆರೆಹೊರೆಯರು, ಅಪರಿಚಿತರು -ಪರಿಚಿತರು, ನನ್ನ ಭಾಷೆ - ಪರ ಭಾಷೆ ಹೀಗೆ ವಿವಿಧ ಭಾವನ ಸಂಘರ್ಷದಲ್ಲಿ ತನ್ನತನವನ್ನು ಮೇಲಾಗಿ ತನ್ನ ಮನುಷ್ಯತ್ವದ ಮೇಲ್ಮೆಯನ್ನು ಕಂಡುಕೊಳ್ಳಲು ಎಂದೂ ಸಹ ಪ್ರಯತ್ನಿಸುತ್ತಾ ಇರುತ್ತಲೇ ನಡೆಯುತ್ತಾನೆ.

ಮೇಲೆ ಹೇಳಿದ ಆ ಒಂದೊಂದು ಸಂಬಂಧದಲ್ಲಿನ ಅಂತರತ್ವ ಸ್ವಲ್ಪ ಅದಲು ಬದಲಾದರೂ ಇಡೀ ವ್ಯಕ್ತಿಯ ಜೀವನ ಅಪಾಯದ ಸನ್ನಿವೇಶಕ್ಕೆ ಬಂದು ನಿಲ್ಲುತ್ತದೆ. ಅದ್ದರಿಂದ ತಾನು ನಿತ್ಯ ನೋಡುವ ಕೇಳುವ ಉತ್ತಮ ವಿಚಾರಗಳು ತನ್ನ ಜೀವನದ ಕೆಟ್ಟ ಘಳಿಗಳಿಗೆ ಒಳ್ಳೆಯತನದ ಸ್ಪರ್ಷವನ್ನು, ಉನ್ನತ ಘಳಿಗೆಗಳಿಗೆ ಜೀವನದ ಕಠೋರ ಸತ್ಯಗಳು ಇನ್ನೂ ಗಟ್ಟಿ ಕ್ಷಣಗಳಾಗಿ ಅತ್ಯುತ್ತಮ ಹಂತಕ್ಕೆ ಕೊಂಡು ಹೋಗುತ್ತವೆ. ಇದೇ ಪ್ರಯತ್ನ ನಿರಂತರ ಇರಬೇಕು ಎಂದು ಹಾರೈಸೋಣ.

ಗುರುವಾರ, ನವೆಂಬರ್ 18, 2010

ಕಾಮ-ವಾಮ-ರಾಜ ಮಾರ್ಗ


ಕಳೆದ ಭಾನುವಾರದ ಸಂಜೆ ರವೀಂದ್ರ ಕಲಾ ಕ್ಷೇತ್ರ. ಮುಖ್ಯ ದ್ವಾರದ ಇಕ್ಕೆಲೆಗಳಲ್ಲಿ ಇಟ್ಟ ನಮ್ಮ ಮಂತ್ರಿ ರೇಣುಕಾಚಾರ್ಯರ ಬೆತ್ತಲೆಯ ನರ್ಸ್ ಜೊತೆಗಿನ ವಿವಿಧ ಭಂಗಿಯ ರಂಗು ರಂಗಿನ ಅಳೆತ್ತರದ ಚಿತ್ರಗಳು. ಒಂದು ಕ್ಷಣ ನಿಮ್ಮನ್ನು ತಬ್ಬಿಬ್ಬು ಮಾಡಿದಂತೆ ಅನಿಸುತ್ತದೆ. ಆದರೇ ಆ ಕ್ಷಣ ನೀವು ಯಾರ ಕಾರ್ಯಕ್ರಮಕ್ಕೆ ಬಂದಿದ್ದೇವೆ ಎಂಬುದನ್ನು ನೆನಪಿಸಿಕೊಂಡರೆ ಸಾಕು.ಅದು ರವಿಯವರ ವಿಭಿನ್ನವಾದ ಶೈಲಿ. ಸಮಾಜಕ್ಕೆ ತೀರ ಹಸಿ ಹಸಿ ಸತ್ಯವನ್ನು ತಮ್ಮ ಪತ್ರಿಕೆಯ ಮೂಲಕ ತಿಳಿಸಿದ ಧೈರ್ಯವಂತರಲ್ಲವೇ. ಅದಕ್ಕೆ ಸಾವಿರಾರು ಓದುಗರ ಒಡೆಯ.

ಒಳಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರಙ್ಞವಂತ ಹಾಯ್ ಬೆಂಗಳೂರು ಓದುಗ ಸಮೊಹ. ಎದುರಿಗೆ ಜಗಮಗಿಸುತ್ತಿರುವ "ಎಂಥಾ ಪಕ್ಷವಯ್ಯಾ...." ವರ್ಣಮಯ ವೇದಿಕೆ. ಅಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಬಿ. ಆರ್. ಛಾಯರವರ ಬ್ಯಾಂಡ್ ನಿಂದ ಇಂಪಾದ ಸಂಗೀತ ರಸ ಸಂಜೇ. ಕನ್ನಡದ ಪ್ರಮುಖ ಕವಿಗಳ ಭಾವ ಗೀತೆಗಳ ತರಂಗ. ಪ್ರಸಿದ್ಧ ಗಾಯಕ ವಿಷ್ಣುರವರಿಂದ ಕನ್ನಡದ ಚಿತ್ರಗೀತೆಗಳ ರಸದೌತಣ. ವೀಕೆಂಡಗೆ ಮಸ್ತಿಯಾಗಿತ್ತು.

ಈ ಸಮಾರಂಭ ಕನ್ನಡ ಪುಸ್ತಕವೊಂದರ ಬಿಡುಗಡೆಯ ಸಮಾರಂಭವೆಂದರೇ ಯಾರು ನಂಬುವುದಕ್ಕಾಗುವುದಿಲ್ಲ. ಅಲ್ಲವಾ? ಹೌದು! ಅದು ಬೆಂಗಳೂರಿನಲ್ಲಿ ಕನ್ನಡ ಪುಸ್ತಕಗಳ ಬಿಡುಗಡೆಯೆಂದರೇ ಕೇವಲ ಬೆರಳೆಣಿಕೆಯ ಸಹೃದಯರನ್ನು ಕಾಣಬಹುದು. ಅದರೇ ಇಲ್ಲಿ ತದ್ವಿರುದ್ಧ. ಅದಕ್ಕೆ ಕಾರಣ ರವಿ ಬೆಳೆಗೆರೆ ಮತ್ತು ರವಿ ಬೆಳೆಗೆರೆ ಅಷ್ಟೇ.

ಈಗಾಗಲೇ ತಮ್ಮ ಬರವಣಿಗೆಯ ಮೋಡಿಯಿಂದ ಕರ್ನಾಟಕದ ಒಂದು ಸಮೊಹವನ್ನೇ ತಮ್ಮ ಕಡೆಗೆ ಒಲಿಸಿಕೊಂಡಿದ್ದಾರೆ. ಪ್ರತಿ ಓದುಗನೂ ಅವರ ಯಾವುದೇ ಹೊಸ ಪುಸ್ತಕಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾನೆ.

ಅಂದು ಬಿಡುಗಡೆಗೆ ಸಿದ್ಧವಾಗಿದ್ದ ಎರಡು ಪುಸ್ತಕಗಳೇಂದರೆ "ಕಾಮರಾಜ ಮಾರ್ಗ" ಮತ್ತು "ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು". ಇಂದಿನ ನಮ್ಮ ಕರ್ನಾಟಕದ ರಾಜಕೀಯ ಸ್ಥಿತ್ಯಂತರದ ಸಂದರ್ಭದಲ್ಲಿ ತುಂಬ ಸೇನ್ಸ್ ಸೇಶನ್ ಊಂಟು ಮಾಡಿರುವ "ಕಾಮರಾಜ ಮಾರ್ಗ" ಕೃತಿ ದೇಶದಲ್ಲಿಯೇ ತಲ್ಲಣವುಂಟು ಮಾಡಿದರೂ ಆಶ್ಚರ್ಯವಿಲ್ಲ.

ಯಾಕೆಂದರೇ ಅಲ್ಲಿ ಇರುವುದು ಕಲ್ಪನೆಯಾದರೂ ಕಾದಂಬರಿಯ ತುಂಬ ನಮ್ಮ ಕಣ್ಣ ಮುಂದೆ ಇಂದು ನಾಟಕವಾಡುತ್ತಿರುವ ಎಲ್ಲಾ ನಮ್ಮ ರಾಜಕಾರಣಿಗಳ ನೃತ್ಯಗಳು, ತೆವಲುಗಳು, ನೀಚತನಗಳು, ಕರ್ಮಗಳು, ಅನ್ಯಾಯಗಳು,ಕತ್ತೆ ವ್ಯಾಪಾರಗಳು,ವಾಮತನಗಳು ಮತ್ತು ಅವುಗಳ ಬೆತ್ತಲೆಗಳು ೪೦೦ ಪುಟಗಳ ತುಂಬ ಸವಿಸ್ತಾರವಾಗಿ ನಿರೂಪಿತವಗಿಯೇನೋ ಎನಿಸಿ ದಿಗ್ಬ್ರಮೆ ಗೊಳಿಸಿದರು ಅಚ್ಚರಿಯಿಲ್ಲ.

ಅಂದು ಈ ಮುಖ್ಯ ಸಮಾರಂಭಕ್ಕೆ ವೇದಿಕೆಯ ಮೇಲೆ ಆಸೀನಾರಾದವರೆಂದರೇ ಮಾಜಿ ಮುಖ್ಯ ಮಂತ್ರಿ ಎಂ.ಪಿ ಪ್ರಕಾಶ್, ರಮೇಶ್ ಕುಮಾರ್, ವಿಶ್ವೇಶ್ವರಭಟ್, ರವಿಬೆಳೆಗೆರೆ ಮತ್ತು ಚೇತನ ಬೆಳೆಗೆರೆ.

ತುಂಬ ಸರಳವಾದ ಸಮಾರಂಭದಲ್ಲಿ ಮುಖ್ಯ ಆಕರ್ಶಣೆಯೆಂದರೆ ಈ ಪುಸ್ತಕದ ಕತೃ ರವಿ ಮತ್ತು ರವಿ. ಓದುಗರ ಕಿವಿಗಳು ಅವರು ಈ ನಮ್ಮ ಪ್ರಸ್ತುತ ರಾಜಕೀಯದ ಹೊಲಸಿನ ಬಗ್ಗೆ ಹೇಗೆ ಮಾತನ್ನಾಡುತ್ತಾರೆ ಎಂಬುದರ ಕಡೆಗೆ ಕಿವಿಗೊಟ್ಟಿದ್ದರು ಅಷ್ಟೇ.

ಎಂ.ಪಿ.ಪ್ರಕಾಶ್ ರವರಿಂದ "ಕಾಮರಾಜ ಮಾರ್ಗ" ವಿಶ್ವೇಶ್ವರ ಭಟ್ ರವರಿಂದ "ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು" ಮತ್ತು ಚೇತನರವರ ಹೊಸ ಇಂಗ್ಲೀಷ್ ನಿಯತಕಾಲಿಕೆಯಾದ "ಸಿಟಿ ಬಜ್" ಲೋಕಾರ್ಪಣೆಗೊಂಡವು.

ಎಂ. ಪಿ. ಪ್ರಕಾಶ್ ತಮ್ಮ ಕಾಯಿಲೆಯಿಂದ ಬಹುಮುಖ ಸೋರಗಿದಂತೆ ಕಂಡರು ತಮ್ಮ ಒಳ್ಳೆಯತನ ಮತ್ತು ವಿಭಿನ್ನವಾದ ತಮ್ಮ ರಾಜಕೀಯತನದಿಂದ ಕೇಲವೇ ಮುಖ್ಯ ಕ್ಲೀನ್ ನಾಯಕರಾಗಿ ಸಭೆಯಲ್ಲಿ ಪ್ರಕಾಶಿಸುತ್ತಾ ಪುಸ್ತಕ ಬಿಡುಗಡೆಯ ಪ್ರಸ್ತಾವಿಕ ನುಡಿಗಳನ್ನು ರವಿಯವರನ್ನು ಹೊಗಳಲು ಮೀಸಲಿಟ್ಟರು.

ವಿಶ್ವೇಶ್ವರ ಭಟ್ ಪುಸ್ತಕದ ಮುನ್ನುಡಿಯನ್ನು ಬರೆದಿರುವ ಕಾರಣ ಪುಸ್ತಕದ ಒಟ್ಟು ತಂತುವನ್ನು ಚೊಕ್ಕವಾಗಿ ಪ್ರೇಕ್ಷಕರಿಗೆ ಕಟ್ಟಿ ಕೊಟ್ಟರು. ಏನೇ ಆಗಲಿ ಅವರು ಬರಹಗಾರರಲ್ಲವೇ. ಅವರು ಹೇಳಿದ ಅಂದಿನ ನುಡಿಗಳಲ್ಲಿ ಮನ ಕೊರದಿದ್ದೇಂದರೆ. "ಇಲ್ಲಿ ಈ ಸಮಾರಂಭಕ್ಕೆ ಕೇವಲ ಮಾಜಿ ರಾಜಕೀಯ ಪಟುಗಳನ್ನು ರವಿ ಆಹ್ವಾನಿಸಿದ್ದಾರೆ. ಹಾಲಿಗಳು ರಾಜಕಾರಣಿಗಳು ಬಂದಿದ್ದರೆ ತುಂಬ ಅರ್ಥವಂತಿಕೆಯಿರುತ್ತಿತ್ತು. ಆದರೆ ಹಾಲಿಯಲ್ಲಿ ಯಾರಾದರೂ ಒಬ್ಬರೂ ಎಸ್. ಸುರೇಶ್ ಕುಮಾರ್ ನ್ನು ಬಿಟ್ಟು ಉತ್ತಮ ಎನ್ನುವ ಮಂತ್ರಿ, ಶಾಶಕರು ಕರ್ನಾಟದಲ್ಲಿ ಇದ್ದಾರೆಯೇ?" ಹೌದು! ನಾವುಗಳು ದುರ್ಬಿನ್ ಹಾಕಿಕೊಂಡು ಹುಡುಕಿದರೂ ಒಬ್ಬೇಒಬ್ಬ ಸಚ್ಚಾರಿತ್ರವಂತ ರಾಜಕೀಯ ನಾಯಕ ನಮ್ಮ ಕಣ್ಣಿಗೆ ಸಿಗುವುದಿಲ್ಲ.

ಹಾಗಾದರೇ ನಮ್ಮ ಕರ್ನಾಟಕದಲ್ಲಿ ಎಂಥವರು ಸರ್ಕಾರದ ಆಡಳಿತ ನಡೆಸುತ್ತಿದ್ದಾರೆ ಎಂದು ನಾವುಗಳು ಕಳೆದ ತಿಂಗಳು ಪೂರಾ ಲೈವ್ ನಲ್ಲಿ ನೋಡಿದ್ದೇವೆ. ಒಂದಿಷ್ಟು ಭರವಸೆಯನ್ನು ಕೊಡಲಾರದ ಸ್ಥಿತಿಗೆ ರಾಜ್ಯ ರಾಜಕಾರಣವನ್ನು ತಂದು ನಿಲ್ಲಿಸಿದ್ದಾರೆ.

ಪುಸ್ತಕದ ಬಗ್ಗೆ ಹೇಳುತ್ತಾ "ರವಿ ಈ ಪುಸ್ತದಲ್ಲಿ ಸೇಕ್ಸ್ ನ್ನು ಇಷ್ಟೊಂದು ವೈಭವಿಕರಿಸುವ ಅವಶ್ಯಕತೆ ಇತ್ತಾ?" ಎಂಬುದು. ಆದರೆ ನಾವುಗಳು ಯಾವುದನ್ನು ಮಾತನ್ನಾಡಲೂ ತೀರ ಹಿಂಜರಿಯುತ್ತೇವೋ ಅದನ್ನೇ ನಮ್ಮ ಆದರ್ಶ ಜನ ನಾಯಕರು ಹಾದಿ ಬೀದಿಗಳಲ್ಲಿ ಮಾಡಿಕೊಂಡು. ಯಾವುದು ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾಗಿತ್ತೋ ಅದು ತಮ್ಮ ವೀಪರಿತವಾದ ಭಂಗಿಗಳ ವರ್ಣಮಯ ಚಿತ್ರಗಳು ಮೀಡಿಯಾಗಳಲ್ಲಿ ತೋರಿಸುತ್ತಾರೆ. ಆಮೇಲೆ ಯಾವ ಮುಖವಿಟ್ಟುಕೊಂಡು ಜನರ ಮತವನ್ನು ಕೇಳಿ ಆರಿಸಿಕೊಂಡು ಸಹ ಬಂದು ಬಿಡುತ್ತಾರೆ.. ಮತ್ತೇ ನಾನು ಮುಖ್ಯಮಂತ್ರಿ, ಮಂತ್ರಿ ಸ್ಥಾನಕ್ಕೆ ಸ್ಪರ್ಧಿ ಎಂದು ಚಿಂದಿ ಚಿಂದಿ ಹೇಳಿಕೆಗಳನ್ನು ಪತ್ರಿಕೆ, ಟಿ. ವಿ ಮುಂದೆ ಕೊಡುತ್ತಾರೆ. ಇವರಿಗೇನಾದರೂ ಕಿಂಚಿತ್ತು ಮಾನ-ಮರ್ಯಾದೆ, ಅತ್ಮ ಸಾಕ್ಷಿ ಈ ಪದಗಳ ಮಹತ್ವ ತಿಳಿದಿದೇಯಾ ಎಂದರೇ? ಇಲ್ಲಾ ಎನ್ನಲೇಬೇಕು. ಯಾಕೆಂದರೇ ಅವುಗಳ ಮೀತಿಗೆ ಇವರುಗಳೂ ಎಂದೂ ಸಹ ಬರುವುದಿಲ್ಲ.

ಈ ನಿಟ್ಟಿನಲ್ಲಿ ಭಟ್ಟರ ನುಡಿಗಳು ನಮ್ಮ ವಿದ್ಯಾವಂತ ಪ್ರೇಕ್ಷಕರ ಕಣ್ಣು ತೆರೆಯಿಸಲು ಸಫಲವಾಯಿತು.

ರಮೇಶ್ ಕುಮಾರರು ಹೆಚ್ಚು ಭಾವುಕಾರಾಗಿದ್ದರೂ ಅಂದು ಅನಿಸುತ್ತದೆ. ಇಂದಿನ ರಾಜಕೀಯದ ವೈಚಿತ್ರ್ಯವನ್ನು ನೆನಪು ಮಾಡಿಕೊಂಡು ತುಂಬ ವ್ಯಥೆಪಟ್ಟರು. ಅವರ ಮಾತಿನಲ್ಲಿ ಉನ್ನತವಾದ ಸಮಾಜ ನಿರ್ಮಾಣದ ಕನಸು ಕಂಡು ಬರುತ್ತಿತ್ತು. ಬಡವರ ಬಗ್ಗೆ ಅವರ ಕಾಳಜಿ. ಇಂದಿನ ನಮ್ಮ ರಾಜಕೀಯ ಪಕ್ಷಗಳ ಬಗ್ಗೆ. ಎಲ್ಲಾ ಪಕ್ಷಗಳು ತಮ್ಮ ಪಕ್ಷ ಬೇದವನ್ನು ಮರೆತು ಎಲ್ಲಾರು ಒಂದು ಕಡೆಯಿಂದ ಇಡಿ ಕರ್ನಾಟಕವನ್ನು ಲೋಟಿ ಮಾಡಲು ಕಂಕಣ ಬದ್ಧರಾಗಿರುವುದನ್ನು ನೋಡಿ ಮಮ್ಮಲು ಮರಗಿದರು.

ಬಡವನ ಬಗ್ಗೆ ಯಾರು ಕೇಳುವವರೆ ಇಲ್ಲ. ಮತ್ತು ರೈತನೇ ನಮ್ಮ ಇಂದಿನ ಈ ಪ್ರಜಾಪ್ರಭುತ್ವದ ಬೆನ್ನೆಲುಬು ಯಾಕೆಂದರೇ ಅವನೊಬ್ಬನೇ ಸರಿಯಾಗಿ ಮತವನ್ನು ಚಲಾಯಿಸುವುದು. ನಾವುಗಳು ನಗರ ಜೀವಿಗಳು ಅದರ ಸಹವಾಸವೇ ಬೇಡವೇನೋ ಎಂಬಂತೆ ಅಂದು ನಮ್ಮ ಮಸ್ತಿ ಮತ್ತು ಮಜಾದಲ್ಲಿ ಲೀನವಾಗಿ ಸರಿಯಾದ ಸರ್ಕಾರ, ಶಾಶಕರು, ನೇತಾರರು ಆರಿಸಿ ಬರದಿದ್ದಾಗ ಸುಖ ಸುಮ್ಮನೇ ನಮ್ಮಲ್ಲಿ ನಾವುಗಳು ಮಾತನ್ನಾಡಿ ಕೈ ಕೈ ಹಿಸಿಕೊಳ್ಳುತ್ತಾ.. ಅಲ್ಲಿ ಹೀಗೆ ಚೆನ್ನಾಗಿದೆ. ಇಲ್ಲೇನೊ ಕರ್ಮ ಎಲ್ಲಾ ಲೋಟಿ ಮಾಡುವವರೆ ಎಂದು ಪಶ್ಚತಾಪಪಡುತ್ತೇವೆ. ನಮ್ಮ ಕೈಯಲ್ಲಿ ಇರುವ ನಮ್ಮ ಬಹು ಮುಖ್ಯವಾದ ಮತದಾನ ಎಂಬ ಅಸ್ತ್ರವನ್ನು ಸರಿಯಾಗಿ ಬಳಸಿಕೊಂಡು ಯೋಗ್ಯ ವ್ಯಕ್ತಿಯನ್ನು ಆರಿಸುವ ಜವಬ್ದಾರಿ ನಮ್ಮ ನಿಮ್ಮೇಲ್ಲಾರ ಹೊಣೆಯೆಂಬುದನ್ನು ಹಲವಾರು ಅವರ ನೈಜ ಜೀವನ ಘಟನೆಗಳ ಮೊಲಕ ಮನದಟ್ಟು ಮಾಡಿಕೊಟ್ಟರು.

ನಗರಗಳಲ್ಲಿ ಸೊಳ್ಳೆಗಳೋಪಾದಿಯಲ್ಲಿ ಸ್ಥಾಪಿತವಾಗುತ್ತಿರುವ ಹೈಟೆಕ್ ಕ್ಲೀನಿಕ್ ಗಳು, ಜಿಮ್ ಗಳು, ಮಹಾ ಮಹಲ್ ಗಳು ಇತ್ಯಾದಿ ಯಾರಿಗಾಗಿ. ಬಡವರಿಗಂತು ಅವುಗಳ ನೆರಳಲ್ಲಿ ನಿಲ್ಲಲು ಸಹ ಅವಕಾಶಗಳಿಲ್ಲ.
ಬಡವ ಅಸರೆಗೆ ಇರುವ ತಾಣಗಳೆಂದರೆ ಅವೇ ಸರ್ಕಾರಿ ಆಸ್ಪತ್ರೆಗಳು, ನ್ಯಾಯಬೆಲೆ ಅಂಗಡಿಗಳು ಇತ್ಯಾದಿ. ಅದರೇ ಅಲ್ಲಿ ಅವರೂಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಸೇವೆ ಉಚಿತವಾಗಿ ಸಿಗುತ್ತಿದೆಯಾ.
ಹಣವಂತರಿಗೆ ಮಾತ್ರ ಆರೋಗ್ಯ ಅವರುಗಳು ಮಾತ್ರ ಈ ಭೂಮಿಯ ಮೇಲೆ ಜೀವಿಸಲೂ ಅರ್ಹರೇ? ಯಾರು ಕೇಳಬೇಕು.

ಈ ಎಲ್ಲಾ ಪ್ರಶ್ನೇಗಳಿಗೆ ಉತ್ತರ. ಸರಿಯಾದ ನಾಯಕರ ಉಗಮ. ನೀತಿವಂತ ನೇತಾರನ ಜನನ. ಬಡವರ ಪರ ಮನಸ್ಸಿರುವವನ ಆಯ್ಕೇ ನಮ್ಮಿಂದ ಆಗಬೇಕು. ಕೇವಲ ಒಂದು ದಿನದ ಸುಖಕ್ಕಾಗಿ. ಅವರು ಕೊಡುವ ಹೆಂಡ, ಹಣ, ಚಿನ್ನ, ಸೀರೆ ಮುಂತಾದ ಚೀಪಾದ ವಸ್ತುಗಳಿಗೆ ತಮ್ಮ ಅಮೋಲ್ಯವಾದ ಮತವನ್ನು ಮಾಡಿಕೊಳ್ಳುವುದನ್ನು ಬಿಡಬೇಕು. ನಾವುಗಳು ನಮ್ಮ ಮತವನ್ನು ಮಾರಿಕೊಂಡು ಅವರುಗಳನ್ನು ಆರಿಸಿಕೊಂಡರೆ. ಅವರುಗಳು ನಮ್ಮ ನಾಡನ್ನೇ ಹೊರದೇಶದವರಿಗೆ ಆಡ ಇಡುವವರು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

ರವಿ ಬೆಳೆಗೆರೆಯವರ ಮಾತುಗಳನ್ನು ಕೇಳಲು ಕಾದು ಕುಳಿತಿದ್ದ ಅವರ ಓದುಗ ದೇವರುಗಳಿಗೆ ಅವರಿಂದ ನಿರಾಸೆಯೇನು ಆಗಲಿಲ್ಲ. ಅವರ ಒಂದೇ ಮಾತಿನಲ್ಲಿ ಹೇಳುವುದಾದರೇ ಇಂದಿನ ನಮ್ಮ ರಾಜಕಾರಣದ ಬಗ್ಗೆ ನಾನು ಏನು ಹೇಳಬೇಕು ಅದನ್ನೇಲ್ಲಾ ನನ್ನ "ಕಾಮರಾಜ ಮಾರ್ಗ" ಹೇಳುತ್ತದೆ. ಮತ್ತು ಇಂದು ನಡೆಯುತ್ತಿರುವ ಮೈನಿಂಗ ಮಾಫಿಯದ ಬಗ್ಗೆ ನಾವು ತಿಳಿದುಕೊಂಡಿರುವುದು ಅರೆಪಾವಷ್ಟೇ ಅದರ ಹಿಂದಿರುವ ಕಾಣದ ಕೈ ಮತ್ತು ಅದರ ಬೃಹತ್ ಜಾಲದ ಸವಿವರಗಳನ್ನು ನನ್ನ "ಅನಿಲ್ ಲಾಡ್.." ಪುಸ್ತಕ ಹೇಳುತ್ತದೆ ಎಂದರು.

ಹಾಗೆಯೇ! ಎಂ. ಎನ್. ಸಿ ಮತ್ತು ಸಾಪ್ಟವೇರ್ ಜಗತ್ತಿನ ಬಗ್ಗೆ ನಾವುಗಳು ಎಚ್ಚರದಿಂದ ಕಾಲು ಇಡಬೇಕಾದ ಸಂದರ್ಭ ಇದಾಗಿದೆ. ಮತ್ತು ಅಲ್ಲಿ ನಡೆಯುತ್ತಿರುವ ವ್ಯವಹಾರ ನಮ್ಮ ಮದ್ಯಮ ನಾಗರೀಕರಿಗೆ ದುಃಸಪ್ನವಾಗಿದೆ. ಮತ್ತು ನಾನು ಏನಾದರೂ ಮುಂದಿನ ಕಾದಂಬರಿ ಬರೆದರೆ ಅದು "ಸಾಪ್ಟವೇರ್" ಜಗತ್ತಿನ ಬಗ್ಗೆ ಇರುತ್ತದೆ. ಅದಕ್ಕಾಗಿ ದೇಶ ವಿದೇಶಗಳ ಬೇಟಿ ಮಾಡಬೇಕಾಗಿದೆ ಎಂದು ಹೇಳುತ್ತಾ ತಮ್ಮ ಮುಂದಿನ ನಿರೀಕ್ಷಿತ ಕಾದಂಬರಿಯ ಸುಳಿವನ್ನು ಬಿಟ್ಟು ಕೊಟ್ಟರು.

ಈ ರೀತಿಯ ವಿವಿಧ ಬಗೆಯಲ್ಲಿ ನಾವುಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅನ್ಯಾಯ ಮತ್ತು ಹಲವಾರು ವಾಮ ಮಾರ್ಗಗಳನ್ನು ಕಂಡು ನಮ್ಮ ಸಮಾಜದಲ್ಲಿ ಬದಲಾವಣೆಯ ಗಾಳಿಯನ್ನು ಬಿಸುವಂತೆ ಮಾಡುವವರು ಯಾರು ಎಂದು ಬೇರೊಬ್ಬ ಬರಲಿ ಎಂದು ಕಾಯುವ ಬದಲು ನಾವುಗಳೇ ನಮ್ಮ ನಮ್ಮಲ್ಲಿ ಬದಲಾವಣೆಯ ಹರಿಕಾರ ಹಾಕುವುದು ಇಂದು ಸುಸಂದರ್ಭ.

ಕೇವಲ ನಮ್ಮ ನಮ್ಮ ಸುಖವನ್ನು ಏಣಿಸದೇ ಮುಂದಿನ ಜನಾಂಗ, ನಮ್ಮ ನಾಡು, ಪ್ರಕೃತಿ, ಸಂಸ್ಕೃತಿ, ಸನ್ನಡತೆಯ ಪುನಾರುತ್ಥಾನವನ್ನು ಮಾಡುವ ಯುವ ಸಮೊಹ ರೂಪಿತವಾಗುವುದು ಬೇಕಾಗಿದೆ. ಅದು ಬರಲಿ ಎಂದು ಹಾರೈಸುವ.

ಶನಿವಾರ, ನವೆಂಬರ್ 13, 2010

ಮರೆಯುವ ಮುನ್ನಾ

ಜಡಿ ಜಡಿ ಜಿಗುಟು ಮಳೆಯಾದರೆ ನಮ್ಮ ಮನದ ತುಂಬ ಜಿಗುಟು ಭಾವನೆ. ಎಲ್ಲಿಯೊ ಹೊರಗಡೆ ಹೋಗದಂತೆ. ಆ ಕೆಸರು ಆ ತುಂತುರು. ಮೋಡವೇ ತೂತು ಆದಂತೆ ಹನಿ ಹನಿಯುತ್ತಿದ್ದಾಗ ನಮ್ಮ ಮನ ಬೆಚ್ಚನೆಯ ಒಂದು ಮೂಲೆಯಲ್ಲಿ ಸೇರಿಕೊಂಡು ಅಮ್ಮ ಮಾಡಿ ಕೊಟ್ಟ ಊಟವನ್ನು ಮಾಡಿಕೊಂಡು, ಆಗೀಷ್ಟು ಈಗೀಷ್ಟು ಬಿಸಿ ಬಿಸಿ ಕಾಫಿಯನ್ನು ಗುಟುಕರಿಸುತ್ತಾ ಮನಸ್ಸಿಗೆ ಹಿತ ನೀಡುವ ಯಾವುದಾದರೂ ಹಾಡುಗಳನ್ನು ಕೇಳಿಕೊಂಡೋ. ಮನಸ್ಸೇಲ್ಲಾ ಆ ಮಳೆಯೋಪಾದಿಯಲ್ಲಿ ಯಾವುದರಲ್ಲೂ ಬಲು ನಿಧಾನವೇ ಜೀವನವೆಂಬಂತೆ ಬೆಚ್ಚನೆಯ ಅನುಭವವಕ್ಕೆ ಜರುಗುವ ಸಮಯದಲ್ಲಿ ಯಾವುದಾದರೂ ನೆಚ್ಚಿನ ಪುಸ್ತಕದ ಮರೆಗೆ ಹೋದರೇ ಹೊರಗಡೆ ಏನೇ ಪ್ರಳಯವಾದರೂ ಅದರ ಬಗ್ಗೆ ಒಂದೀಷ್ಟು ಗಮನ ಕೊಡದೆ ತನ್ನ ಕೋಣೆಯಲ್ಲಿ ತನ್ನ ಪುಸ್ತಕದ ಗೆಳೆಯನೊಡನೆ ನಾವುಗಳು ತಲ್ಲಿನರಾಗಬಹುದು.


ಈ ರೀತಿಯ ಅನುಭವ ಮನ್ನೆಯಾ "ಜಲ್" ಚಂಡಮಾರುತದಿಂದ ಒಂದುವರೇ ದಿನ ಬರಿ ಮನೆಯಲ್ಲಿಯೇ ಕಳೆಯುವಂತಾಯಿತು. ಆಗ ಮನದ ನಲಿವಿಗೆ ಅಸರೆಯಾಗಿದ್ದು ಓಶೋ ರಜನೀಶ್, ಎಚ್ಚಸ್ವೀ ಮತ್ತು ಎಂ.ವೈ. ಘೋರ್ಪಡೆಯವರ ಪುಸ್ತಕಗಳು.

ಓಶೋ ಪುಸ್ತಕವೆಂದರೇ ಬಹಳಷ್ಟು ಜನರಿಗೆ ಎಂಥದೋ ಎದರಿಕೆ. ನಾನೇದರೂ ಏ ನಾನು ರಜನೀಶ್ ಪುಸ್ತಕ ಕೊಂಡುಕೊಂಡೇ ಅಂದರೇ "ಏ ಯಾಕೋ ಏನೋ ಸಮಾಚಾರ ಅನ್ನುತ್ತಾರೆ" ನನ್ನ ಗೆಳೆಯರು.


ಸಮಾಜ ನಮ್ಮ ನಮ್ಮಲ್ಲಿಯೇ ಈ ರೀತಿ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಒಂದೊಂದು ರೀತಿಯ ದೋರಣೆಯನ್ನು ನಮ್ಮ ಸುತ್ತ ಮುತ್ತಲಿನಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಮತ್ತು ಅವರುಗಳ ಬಗ್ಗೆ ನಾವುಗಳು ನಮ್ಮ ಹಿರಿ ಕಿರಿಯರಿಗೆ ಒಂದು ರೀತಿಯ ಮೈಲಿಗೆಯೇನೋ ಎಂಬಂತೆ ಅವರ ಬಗ್ಗೆ ತಿಳಿದು ಕೊಳ್ಳುವುದೇ ಅಪರಾಧವೇನೋ ಎಂಬಂತೆ ಮಾಡಿಬಿಟ್ಟಿರುತ್ತಾರೆ.


ರೀತಿಯಲ್ಲಿ ಏನೂ ಗೊತ್ತಿರದ ಜನಗಳು ಒಬ್ಬರಿಂದ ಒಬ್ಬರಿಗೆ ಸುಖ ಸುಮ್ಮನೇ ಒಂದೊಂದು ಕಾಮೇಂಟ್ ಪಾಸ್ ಮಾಡಿ ಅವರ ಬಗ್ಗೆ ಅರಿಯುವ ಕುತೋಹಲವನ್ನೇ ಮತ್ತು ಅವರುಗಳು ತಿಳಿಸಿರುವ ಅಪಾರ ವಿದ್ವತ್ ನಿಂದ ಒಂದು ಇಡೀ ಸಮೊಹವನ್ನೇ ವಂಚಿತರನ್ನಾಗಿ ಮಾಡಿ ಬಿಟ್ಟಿರುತ್ತಾರೆ.


ಒಶೋ ಬಗ್ಗೆ ಈ ರೀತಿಯ ಮಂಡೋಕತನದ ಪರದೆಯನ್ನು ಸರಿಸಿದ ಕೀರ್ತಿ ರವಿ ಬೆಳೆಗೆರೆ ಮತ್ತು ವಿಶ್ವೇಶ್ವರ ಭಟ್ ರಿಗೆ ಸೇರಿದ್ದು. ಈ ಲೇಖಕರುಗಳು ಅವರ ಅನುಭವದ ನುಡಿಗಳನ್ನು, ವಿಚಾರಗಳನ್ನು ಮತ್ತು ಅವರ ಬಗ್ಗೆ ಇರುವ ಹಲವಾರು ಕಥೆಗಳನ್ನು ತಮ್ಮ ಪತ್ರಿಕೆಗಳಲ್ಲಿ ಬರೆಯುವ ಮೊಲಕ ನಮ್ಮೆಲ್ಲಾರಿಗೂ ಸ್ವಲ್ಪವಾದರೂ ಅವರುಗಳು ಏನೂ ಹೇಳಿದ್ದಾರೆ ಎಂಬುದನ್ನು ತಿಳಿಯುವಂತೆ ಮಾಡಿದ್ದಾರೆ. ಇದರಿಂದ ಅವರ ಅಪಾರ ಸಮೃದ್ಧ ಸಂತ ಙ್ಞಾನವನ್ನು ಕೆಲವರ ಬಳಿಗಾದರೂ ಬರುವಂತೆ ಮಾಡಿದ್ದಾರೆ.

ಅವರು ತಮ್ಮ ಪ್ರವಚನದಲ್ಲಿ ತಾವು ಅಧ್ಯನ ಮಾಡಿರುವ ವಿಷಯಗಳ ವಿವಿಧ ರೀತಿಯಲ್ಲಿ ಜನರ ಮುಂದಿಟ್ಟಿದ್ದಾರೆ ಮತ್ತು ಆ ಎಲ್ಲಾ ನುಡಿಗಳು ಸಾವಿರಾರು ಗ್ರಂಥಗಳಾಗಿವೆ. ಹಲವಾರು ವಿಷಯಗಳ ಬಗ್ಗೆ ಧೀರ ಗಾಂಭಿರ್ಯದಿಂದ ಮಾತನ್ನಾಡುವವರಲ್ಲಿ ಅವರುಗಳು ಒಬ್ಬರಾಗಿದ್ದಾರೆ. ಭಾರತದ ಬಗ್ಗೆ ಇಲ್ಲಿರುವ ನಮ್ಮ ಸನಾತನ ಹಿಂದು ಧರ್ಮದ ಬಗ್ಗೆ, ವೇದ ಉಪನೀಷತ್, ಭಾರತದ ಯಾತ್ರಾ ಸ್ಥಳಗಳ ಬಗ್ಗೆ, ಭಾರತದ ಪುಣ್ಯ ಪುರುಷರ ಬಗ್ಗೆ, ಕೃಷ್ಣ ನ ಬಗ್ಗೆ, ಯುವಕರು, ಯುವತಿಯರ ಬಗ್ಗೆ, ಜನರ ಜಾಗೃತಿಯ ಬಗ್ಗೆ, ಪತ್ರಿಕೆಗಳ ಬಗ್ಗೆ, ವಿಙ್ಞಾನದ ಬಗ್ಗೆ ಇತ್ಯಾದಿ ಇತ್ಯಾದಿ ಆಡು ಮುಟ್ಟದ ಸೊಪ್ಪು ಇಲ್ಲ ಎಂಬ ರೀತಿಯಲ್ಲಿ ವಿಫುಲವಾದ ಸಾಹಿತ್ಯವನ್ನು ನಮ್ಮ ಪ್ರಪಂಚಕ್ಕೆ ನೀಡಿದ್ದಾರೆ.

ಹಾಗೇ ಈ ವಾರ ಅವರ ಸಂ. ಸಮಾಧಿ ಕಡೆಗೆ ಪುಸ್ತಕವನ್ನು ಓದಿದಾಗ ಅನಿಸಿದ್ದು. ಪ್ರೀತಿ, ಪ್ರೇಮ ಇಡೀ ಪ್ರಪಂಚದ ಜೀವನ ಜೀವಂತ ನಾಡಿ ಮೀಡಿತವಾಗಿದೆ. ಅದೊಂದು ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದನ್ನು ಟ್ರೂ ಲವ್ ಎಂಬುತ್ತಾರೋ ಅದರ ಬಗ್ಗೆ ಅವರುಗಳು ಎಷ್ಟೊಂದು ವಿಷದವಾಗಿ ಮಾತನ್ನಾಡಿದ್ದಾರೇ ಎಂದರೆ. ಲವ್ ಎಂದರೇ ಬರೀ ಸೇಕ್ಸ್ ಅಲ್ಲ ಎಂಬುದನ್ನು ಹಲವಾರು ದುಷ್ಟಾಂತ ಸತ್ಯ ಕಥೆಗಳ ಮೊಲಕ ಎಲ್ಲೂ ಸಹ ಅಸಹ್ಯ ಎಂಬ ಭಾವನೆ ನಮ್ಮ ಮನೋಭಾವದಲ್ಲಿ ಬರದ ರೀತಿ. ಪ್ರೇಮ ಒಂದು ಗಂಡು - ಹೆಣ್ಣು ಮಧ್ಯ ಮಾಮೋಲಿಯಾಗಿ ಘಟಿಸುವ ಪ್ರಕೃತಿ ಸಹಜ ಒಂದು ಕ್ರೀಯೆ ಎಂದು ಹೇಳಿ, ಆ ಒಂದು ಮೋಹರ್ತ ಸಮಯದಲ್ಲಿ ಸ್ಪುರಿಸುವ ಭಾವನೆಯಲ್ಲಿಯೇ ಶಿವನನನ್ನು ಕಾಣಬಹುದು ಎಂಬುದನ್ನು ತೋರಿಸಿದ್ದಾರೆ.

ಆದರೇ ನಾವುಗಳು ಯಾವ ರೀತಿಯಲ್ಲಿ ಇಂದು ನಮ್ಮ ಭಾರತದಲ್ಲಿ ಸೇಕ್ಸ್ ಎಂದರೇ ಒಂದು ರೀತಿಯಲ್ಲಿ ನೋಡುವಾಂತಾಗಿದೆ. ಆದರ ಬಗ್ಗೆ ಮಾತನ್ನಾಡುವುದೇ ಅಸಭ್ಯ ವರ್ತನೆಯಾಗಿ, ಕೀಳಾಗಿ ಕಾಣುವಂತೆ ಅದರ ಪ್ರಾಮುಖ್ಯತೆಯ ಬಗ್ಗೆ ಕಿರಿಯಗೆ ತಿಳಿಸದೇ ಗೌಪ್ಯವಾಗಿ ಇಟ್ಟಿದ್ದರೂ ಅದು ಇನ್ನೂ ಹೆಚ್ಚು ಆಕರ್ಷಕವಾಗಿ ಹಲವು ರೀತಿಗಳಲ್ಲಿ ನಮ್ಮ ಮಂದಿಗಳಿಗೆ ಅದೇ ಬದುಕಾಗಿ ಹಲವಾರು ಅನಾಹುತಗಳಿಗೆ ಕಾರಣವಾಗಿದೆ ಎಂದು ಎಲ್ಲರಲ್ಲೂ ಮನೆ ಮಾಡಿರುವ ಪರಮಾತ್ಮನಿಗೆ ಪ್ರೀಯವಾಗುವ ರೀತಿಯಲಿ ತಿಳಿಸಿದ್ದಾರೆ. ಒಟ್ಟಾರೆ ಮಾನವ ಜೀವನವನ್ನು ಒಂದು ವೈಙ್ಞಾನಿಕವಾಗಿ ಚಿತ್ರಿಸಿದ್ದಾರೆ. ಒಂದು ಜೀವನವನ್ನು ಸಮಗ್ರವಾಗಿ ನೋಡುವಂತೆ ಮಾಡಿದ್ದಾರೆ. ಇದು ಇಂದು ಅಗತ್ಯವಾಗಿದೆ. ಆಗಲೇ ಇಡೀ ಪ್ರಪಂಚದಲ್ಲಿ ಶಾಂತಿಯನ್ನು ಕಾಣಬಹುದಾಗಿದೆ.



ಹಾಗೆಯೇ ನಮ್ಮ ಪ್ರಸಿದ್ಧ ರಾಜಕಾರಣಿಯಾಗಿರುವ ಎಂ.ವೈ ಘೋರ್ಪಡೆಯವರ "ರೆಕ್ಕೆಯ ಮಿತ್ರರು" ಸಂಡೂರಿನ ಸುತ್ತ ಮುತ್ತಲಿನಲ್ಲಿರುವ ನಮ್ಮ ಪಕ್ಷಿ ಮಿತ್ರರುಗಳನ್ನು ಉತ್ತಮವಾಗಿ ಮನ ಮುಟ್ಟುವಂತೆ ಅಪರೂಪದ ವರ್ಣ ಚಿತ್ರಗಳೊಂದಿಗೆ ಆ ಪಕ್ಷಿಯ ಬಗ್ಗೆ ಇರುವ ಕಥೆಗಳಾದ ಜನಸಾಮಾನ್ಯರ ಮಾತುಗಳು, ಪುರಾಣ ಕಥೆಗಳು, ದುಷ್ಟಾಂತಗಳು ಮತ್ತು ವೈಙ್ಞಾನಿಕವಾಗಿ ಅವುಗಳ ಜೀವನ ಶೈಲಿಯನ್ನು ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿ ಚಿತ್ರಿಸಿರುವುದು ಓದಲು ಖುಷಿಯನ್ನು ಕೊಡುತ್ತದೆ. ಈ ಪ್ರಯತ್ನ ನಮ್ಮ ಮಕ್ಕಳಿಗೆ ಪರಿಸರದ ಬಗ್ಗೆ ನಾವುಗಳು ಕಡಿಮೆ ಖರ್ಚಿನಲ್ಲಿ ನಮ್ಮ ಸುತ್ತ ಮುತ್ತಲಿನಲ್ಲಿ ಕಾಣುವ ನಿಸರ್ಗ ಸೌಂದರ್ಯವನ್ನು ನೋಡುವ ಮನಸ್ಸಿನ ಮೂಲಕ ನಾವು ಆನಂದ ಪಟ್ಟು ನಮ್ಮ ಜೊತೆಯಲಿ ನಮ್ಮ ಮುಂದಿನ ಜನಾಂಗಕ್ಕೆ ಈ ಅಪರೂಪದ ಜೀವಿಗಳನ್ನು ಉಳಿಸುವ ಕಾರ್ಯವನ್ನು ಮಾಡಲು ಪ್ರೇರಪಿಸುವಂತಾಗಿದೆ.


ಕವಿಗಳ ಜೀವನ ಮರ್ಮವನ್ನು ಅರಿಯಲು ಎಲ್ಲಾರಿಗೂ ಕುತೂಹಲ. ಯಾವ ಸಮಯದಲ್ಲಿ ಅಂಥ ಮುತ್ತಿನಂಥಹ ಪದಗಳ ಜಾದು ಘಟಿಸುತ್ತದೆ. ಅವರ ಆ ಕವನದ ಸಾಲುಗಳು ಯಾವ ಜಾಗದಲ್ಲಿ ಜನಿಸುತ್ತದೆ. ಆ ಸಾಲುಗಳ ಜನನಕ್ಕೆ ಕಾರಣರಾರು? ಹೀಗೆ ನಮ್ಮ ಹಿರಿಯ ಕನ್ನಡ ಕವಿಗಳ ಬಗ್ಗೆ ಅವರ ಜೀವನ ಚರಿತ್ರೆಯ ಬಗ್ಗೆ ಎಂಥ ಸಹೃದಯಿಗೂ ಒಂದು ಅಚ್ಚರಿ ಇರುತ್ತದೆ. ಈ ಮಾತಿಗೆ ಪೂರಕವಾಗಿ ಅದನ್ನು ಸ್ವಲ್ಪ ಮಟ್ಟಿಗೆ ಹಿಡೇರಿಸಲೂ ಸಹಾಯ ಮಾಡಿದ್ದಾರೆ ಎಂಬಂತೆಲೋ ನಮ್ಮ ಎಚ್. ಎಸ್. ವೇಂಕಟೇಶ್ ಮೂರ್ತಿಯವರ "ಅನಾತ್ಮ ಕಥನ" ಒಂದು ನವಿರಾಗಿ ಓದಿಸಿಕೊಳ್ಳುವ ಕವಿಯ ಜೀವನ ಕಥೆ ನಮ್ಮ ನಮ್ಮ ಬಾಲ್ಯ, ಯೌವನ, ಉದ್ಯೋಗದ ದಿನಗಳಿಗೆ ಕರೆದುಕೊಂಡು ಹೋಗುತ್ತದೆ.


ಅವರ ಅಂದಿನ ಬಾಲ್ಯ ಮತ್ತು ಯೌವನದ ದಿನಗಳ ಸಹಜ ತುಂಟತನ ಮತ್ತು ಅವರ ಜೊತೆಯಲ್ಲಿ ಇದ್ದ ಅಪರೂಪದ ಗೆಳೆಯರು, ಬಂಧುಗಳ, ಹಳ್ಳಿಯ ವ್ಯಕ್ತಿ ಚಿತ್ರಗಳು ಉತ್ಕೃಷ್ಟವಾಗಿವೆ. ಅಲ್ಲಿ ಮೊಡಿರುವ ಪ್ರತಿ ಸಾಲುಗಳು ಒಂದು ಧೀರ್ಘ ಕವನದಂತೆ ಒಂದೇ ಸಿಟ್ಟಿಂಗ್ ನಲ್ಲಿ ಓದುವಂತೆ ಮಾಡುತ್ತದೆ.

ಈ ಪುಸ್ತಕಗಳ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಹೀಗಾಗಲೇ ವಿವಿಧ ರೀತಿಯಲ್ಲಿ ಪ್ರಶಂಸೆಗಳು ಬಂದಿವೆ. ಮತ್ತೇನು ಅನ್ನುತ್ತಿರಾ? ಇಂಥ ಪುಸ್ತಕಗಳನ್ನು ಓದಿದರೇ ಅಲ್ಲಿ ಸಿಗುವ ಸಂತೋಷದ ಬುಗ್ಗೆಯನ್ನು ಜೀವಂತ ಸವಿಯಬಹುದು ಅಲ್ಲವಾ.

ಕತೃಗಳೇ ಥ್ಯಾಂಕ್ಯೂ!

ಗುರುವಾರ, ಅಕ್ಟೋಬರ್ 28, 2010

ಕನ್ನಡ ಜನಮನಗಳ ಉತ್ಸವ


ನವಂಬರ್ ಒಂದು ನಮ್ಮ ಕರ್ನಾಟಕ ಏಕೀಕರಣಗೊಂಡ ದಿನಾಚರಣೆ. ಕರ್ನಾಟಕ ಒಟ್ಟಿಗೊಡಿ ೫೪ (೧೯೫೬) ವರ್ಷಗಳಾಗಿವೆ.

ಇದಕ್ಕೆ ನಾವುಗಳು ಹೆಮ್ಮೆಪಡಬೇಕು. ಕನ್ನಡ ಮಾತನಾಡುವ ಎಲ್ಲಾ ಪ್ರಾಂತ್ಯಗಳನ್ನು ಒಂದು ಕಡೆ ಸೇರಿಸಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿದ ದಿನ. ಆ ದಿನವನ್ನು ಎಲ್ಲಾ ಕನ್ನಡಿಗರು ಮತ್ತು ಕನ್ನಡ ಮಣ್ಣಿನ ಮಕ್ಕಳು ಉತ್ಸಾಹದಿಂದ ರಾಜ್ಯೋತ್ಸವವನ್ನು ಆಚರಿಸುತ್ತಾ ನಮ್ಮ ರಾಜ್ಯಕ್ಕಾಗಿ ಹೋರಾಡಿದ ನಮ್ಮ ಹಲವು ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರು, ಸಾಧಕರು ಮತ್ತು ಕನ್ನಡದ ಕಟ್ಟಾಳುಗಳನ್ನು ನೆನೆಯುವ ದಿನವಾಗಿದೆ.


ನಾವು ಎಂಥ ಕಾಲ ಘಟ್ಟದಲ್ಲಿದ್ದೇವೆ ಎಂದರೇ ಅರ್ಧ ಶತಮಾನಗಳನ್ನು ಕಳೆದಿದ್ದೇವೆ. ಹಲವಾರು ರೀತಿಯ ಬದಲಾವಣೆಗಳನ್ನು ಕರ್ನಾಟಕದ ಭೂಪಟದಲ್ಲಿ ಮಾತ್ರ ಕಾಣದೆ ನಮ್ಮ ನಿಮ್ಮ ಸುತ್ತಲಿನ ಪರಿಸರ, ಮನಸ್ಸಿನಲ್ಲಿ, ನಡೆಯತ್ತಿರುವ ಜೀವನದಲ್ಲಿ ಉಯಿಸಲು ಸಾಧ್ಯವಾಗದ ರೀತಿಯಲ್ಲಿ ನಮ್ಮ ರಾಜ್ಯ- ಕನ್ನಡ- ಕರ್ನಾಟಕ ವಿಶ್ವ ಪ್ರಸಿದ್ಧಿಯಾಗಿದೆ. ಊರು ಊರುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿತವಾಗುತ್ತಿವೆ. ಅದಕ್ಕೆ ಹಲವು ಕಾರಣಗಳಿರಬಹುದು. ಅದಕ್ಕೆ ನಮಗೆಲ್ಲಾ ಗರ್ವವೇ ಸರಿ.


ಪ್ರತಿ ಭಾರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಎಲ್ಲಾ ಕನ್ನಡಾಭಿಮಾನಿಗಳ ಒಂದೇ ಕೂಗು ಕನ್ನಡವನ್ನು ಇನ್ನಾದರೂ ಉಳಿಸಿ. ಈ ರೀತಿಯ ಗಟ್ಟಿ ಕೂಗು ನನಗೆ ತಿಳಿದ ರೀತಿಯಲ್ಲಿ ಭಾರತದ ಯಾವುದೇ ಭಾಷೆಗೂ/ರಾಜ್ಯದಲ್ಲೂ ಬಂದಿಲ್ಲ. ಯಾಕೇ? ನಾವುಗಳು ನಮ್ಮ ಮಾತೃ ಭಾಷೆಯನ್ನು ಅಷ್ಟೊಂದು ವೇಗವಾಗಿ ಕಡೆಗಣಿಸುತ್ತಿದ್ದೇವೆ? ಉತ್ತರವನ್ನು ಎಲ್ಲಾ ಕನ್ನಡಿಗರು ಕೊಡಬೇಕು.
ಇಂದು ಐ.ಟಿ, ಬಿ.ಟಿ ಭರಾಟೆಯಲ್ಲಿ ನಾವುಗಳು ಯಾವುದೇ ಒಂದು ರಾಜ್ಯವನ್ನು, ಮೆಟ್ರೂ ನಗರವನ್ನು ಕೇವಲ ಆ ರಾಜ್ಯದವರೇ ವಾಸಿಸುವ ಸ್ಥಳವೆಂದು ಹೇಳುವುದು ಕಷ್ಟ. ಇಂದು ಯಾವುದೇ ರಾಜ್ಯಗಳಿಗೂ, ದೇಶಗಳಿಗೂ ಗಡಿಗಳೇ ಇಲ್ಲ. ಆ ರೀತಿಯಲ್ಲಿ ನಮ್ಮ ಸುಂದರ ಬೆಂಗಳೂರಿನಲ್ಲಿಯೇ ಮಿನಿ ವಿಶ್ವ-ಭಾರತವನ್ನು ಕಾಣಬಹುದು. ಕನ್ನಡವನ್ನು ಬಿಟ್ಟು ಎಲ್ಲಾ ಭಾಷೆಗಳನ್ನು ಮಾತನಾಡುವ ಜನರುಗಳನ್ನು ಎಲ್ಲಾ ಪ್ರಾಂತ್ಯದಲ್ಲೂ ಕಾಣಬಹುದು. ಇದು ಒಂದು ವಿವಿಧತೆಯಲ್ಲಿ ಏಕತೆ ಎನ್ನೋಣವೇ! ?


ಆದರೂ ನಮ್ಮ ಕನ್ನಡಕ್ಕಾಗಿ ಯಾವಗಲೂ ಹೋರಾಡುವ ಹುಟ್ಟು ಕನ್ನಡ ಮನಸ್ಸುಗಳು ಈ ರೀತಿಯ ವಾತವರಣವನ್ನು ಕಂಡು ಕೂರಗುತ್ತಿರುವುದು ನವ ತರುಣ ಜನಾಂಗಕ್ಕೆ ಮುಂದೆ ಎಚ್ಚರದಿಂದ ಹೆಜ್ಜೆ ಇಡಬೇಕಾದ ದಿನಗಳಿಗೆ ಎಚ್ಚರಿಕೆಯಾಗಿದೆ.

ಕರ್ನಾಟಕ ಎಂದರೇ ಕೇವಲ ಕನ್ನಡ ಮಾತನ್ನಾಡುವ ಭಾಷೆಯಲ್ಲ. ಅದಕ್ಕೆ ಸುಧಿರ್ಘ ಇತಿಹಾಸವಿದೆ, ಅಗಾಧ ಸಂಸ್ಕೃತಿಯಿದೆ. ಉನ್ನತ ಸಂಸ್ಕಾರವಿದೆ ಮತ್ತು ಹಲವು ಮಹನೀಯರ ಪರಿಶ್ರಮದ ಶ್ರೀಮಂತ ಸಂಪತ್ತು ಇದೆ. ಅದನ್ನು ನಾವುಗಳು ನಮ್ಮ ನಿತ್ಯ ಜೀವನದಲ್ಲಿ ಉಸಿರಾಗಿ ಉಳಿಸುವುದು ನಮ್ಮಗಳ ಕರ್ತವ್ಯವಾಗಿದೆ. ಯಾಕೆಂದರೇ ನಮ್ಮ ಕನ್ನಡತನವನ್ನು ಕನ್ನಡಿಗರಲ್ಲದೇ ಬೇರೆಯವರೂ ಬಳಸುವುದು/ಊಳಿಸಲಾರರು.


ಅದ್ದರಿಂದ ಹೀಗಾಗಲೇ ನಮ್ಮ ಕರ್ನಾಟಕದ ಹೃದಯ ಭಾಗವಾದ ನೆಚ್ಚಿನ ಐ.ಟಿ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಶೇ. ೩೦ ಕ್ಕೆ ಇಳಿದಿರುವ ಸಂದರ್ಭದಲ್ಲಿ ನಾವುಗಳು ಹೇಗೆ ನಮ್ಮ ಆಡು ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು ನಮ್ಮ ಜೊತೆಯಲ್ಲಿ ನಮ್ಮ ಮನೆ ಮನಗಳಿಂದ ಪ್ರಾರಂಭಿಸಿ ನಮ್ಮ ಮಕ್ಕಳಿಗೆ ಬಳುವಳಿಯಾಗಿ ಕೊಡುವೇವು? ಮತ್ತು ಇದನ್ನು ನೋಡಿ ಹೊರ ರಾಜ್ಯದಿಂದ ಬಂದಿರುವ ನಮ್ಮ ಎಲ್ಲಾ ಬಂಧುಗಳು ಸಹ ನಮ್ಮ ನಾಡು ನುಡಿಯ ಏಳ್ಗೆಗೆ ಯಾವ ರೀತಿಯಲ್ಲಿ ಕೈ ಜೋಡಿಸುವ ಕೆಲಸಕ್ಕೆ ಪ್ರೇರಪಿಸುವೆವು ಎಂಬುದು ಮಿಲಿಯನ್ ಡಾಲರ್ ಪ್ರಶ್ನೇ.


ನಮ್ಮ ರಾಷ್ಟ್ರ ಹಳ್ಳಿಗಳ ದೇಶ. ಹಳ್ಳಿಗಳಲ್ಲಿ ಈ ರೀತಿಯ ಮೇಲಿನ ಕೂಗುಗಳು ವಿರಳವೇ ಎನ್ನಬಹುದು. ಅದರೇ ಇಂದು ನಮ್ಮ ಹಳ್ಳಿಗಳಲ್ಲಿ ಎಷ್ಟುಮಂದಿ ಇದ್ದಾರೆ ಎಂದರೇ ಹಲವು ಹಳ್ಳಿಗಳು ವಿದ್ಯಾವಂತ ತರುಣರುಗಳಿಲ್ಲದೆ ಬೀಕೋ ಎನ್ನುತ್ತಿವೆ. ಯಾಕೇ ಹೀಗೆ? "ಹೊಟ್ಟೆ ಪಾಡು ಸ್ವಾಮಿ" ಎನ್ನುವ ಉತ್ತರ. ಹೌದು! ಯಾರೊಬ್ಬರೂ ಅದೇ ಹೊಲ, ಉಳಿಮೆ ಎಂದು ತಮ್ಮನ್ನು ತಾವುಗಳು ತೊಡಗಿಸಿಕೊಳ್ಳುವುದಿಲ್ಲ. ಸ್ವಲ್ಪ ಓದಿದರೇ ಸಾಕು ಅವರುಗಳ ಅಪ್ಪ ಅಮ್ಮ ತಮ್ಮ ಮಕ್ಕಳುಗಳನ್ನು ದೊಡ್ಡ ದೊಡ್ಡ ಪಟ್ಟಣಗಳಿಗೆ ಸಾಗು ಹಾಕುತ್ತಾರೆ. ಹೆಚ್ಚು ಹೆಚ್ಚು ಸಂಬಳ ಸಿಗುವ ಉದ್ಯೋಗಗಳನ್ನು ಹರಸಿಕೊಂಡು ಬೆಂಗಳೂರಿನಂತ ಬೃಹತ ನಗರಗಳ ಕಡೆ ಮುಖ ಮಾಡುತ್ತಾರೆ.


ಇಲ್ಲಿ ಬಂದಾಗ ಅವರಿಗೆ ತಿಳಿಯುತ್ತದೆ. ನಾವು ನಿಜವಾಗಿಯೋ ನಾವುಗಳಾ ಎಂದು. ಯಾಕೆಂದರೇ ಉತ್ತಮ ಉದ್ಯೋಗಗಳು ಬೇಕೆಂದರೆ ವಿವಿಧ ರೀತಿಯ ಕೌಶಲ್ಯವಿರಬೇಕು. ತಾನು ತನ್ನ ಕನ್ನಡ ಶಾಲೆ, ಕಾಲೇಜು, ವಿಶ್ವ ವಿದ್ಯಾನಿಲಯದಲ್ಲಿ ಅದೇ ಕನ್ನಡದಲ್ಲಿ ಕಲಿತ ವಿದ್ಯೆ ಮತ್ತು ಮಾತುಗಳು ಲೆಕ್ಕಕ್ಕೆ ಬರುವುದಿಲ್ಲ. ಅಟ್ ಲಿಸ್ಟ್ ಅವನು ವಿಶ್ವ ಭಾಷೆಯಾದ ಇಂಗ್ಲಿಷ್ ಕಮ್ಯುನಿಕೇಶನ್ ನಲ್ಲಿ ಸುಲಲಿತನಾಗಿ ಮಾತನಾಡುವ/ಯೋಚಿಸುವ ಯೋಗ್ಯತೆಯನ್ನು ಹೊಂದಿರಬೇಕು. ಆಗ ಮಾತ್ರ ಇಲ್ಲಿರುವ ಯಾವುದಾದರೂ ಒಂದು ಸಂಸ್ಥೆಯಲ್ಲಿ ಕೆಲಸ ಗ್ಯಾರಂಟಿ ಇಲ್ಲವಾದರೇ ನಾಲ್ಕನೇ ದರ್ಜೆಯ ಕೆಲಸಕ್ಕೆ ಶರಣು ಎನ್ನಬೇಕು.


ಈ ಮೇಲಿನ ಎಲ್ಲಾ ಅನುಭವಗಳಿಂದ ಪ್ರೇರಪಿತನಾಗಿ ಅದೇ ಹಳ್ಳಿಯ ಪಕ್ಕ ಕನ್ನಡದ ಮಣ್ಣಿನ ಮಗ ತಾನು ಮದುವೆಯಾಗಿ, ಮಕ್ಕಳು ಮಾಡಿಕೊಂಡ ಮೇಲೆ ಯೋಚಿಸುತ್ತಾನೆ. ಮುಂದೆ ನನ್ನ ಮಕ್ಕಳು ನನ್ನ ಹಾಗೇ ನರಳುವುದು ಬೇಡ. ನನ್ನ ಮಕ್ಕಳಾದರೂ ಉನ್ನತ ಶಿಕ್ಷಣ ಪಡೆಯಲಿ ಎಂದು ನಿರ್ಧರಿಸಿ, ಅದಕ್ಕೆ ಪ್ರಾರಂಭವೆನ್ನುವಂತೆ ಢಾಳಾಗಿ ಕಾಣಿಸುವ ಇಂಗ್ಲಿಷ್ ಕಾನ್ವೇಂಟ್ ಗಳಿಗೆ ಅಷ್ಟು ಇಷ್ಟು ಉಳಿಸಿ ಸೇರಿಸಿ ಸರಿಕರ ಮುಂದೆ ನನ್ನ ಮಕ್ಕಳು ಮಮ್ಮಿ, ಡ್ಯಾಡಿ, ಅಂಟಿ ಎನ್ನುವ ತುಂಟ ಮಾತುಗಳು ಕಿವಿಯ ಮೇಲೆ ಬಿಳಿಸಿಕೊಂಡು ಸುಖಿಸುತ್ತಾನೆ. ಇಲ್ಲಿ ಮುಖ್ಯವಾಗುವುದು ತಾನು ಮತ್ತು ತನ್ನ ಸಂಸಾರದ ಹೊಟ್ಟೆ ಪಾಡು ಅಲ್ಲಿ. ಅಷ್ಟೋತ್ತಿಗೆ ತನ್ನ ನಾಡು ನುಡಿ ಕಡೆಗಣಿಸಲ್ಪಟ್ಟಿರುತ್ತದೆ. ಯಾಕೆಂದರೇ ಜೀವನ ದೊಡ್ಡದಲ್ಲವಾ.


ಈ ರೀತಿಯ ಪರಿಸ್ಥಿತಿಯನ್ನು ತಂದಿರುವವರು ಯಾರು? ಇದಕ್ಕೆ ಪರಿಹಾರವಿಲ್ಲವೇ. ಮಾತು ಎತ್ತಿದರೇ ಎಲ್ಲಾರೂ ಯಾವುದೋ ಲೋಕದಿಂದ ಬಂದಿರುವ ಇಂಗ್ಲಿಷ್ ಪ್ರಾಡಕ್ಟ್ ರೀತಿಯಲ್ಲಿ ಟಸ್ಸ್ ಪೂಸ್ ಎಂದು ಮಾತನಾಡುವುದೇ ದೊಡ್ದಸ್ತಿಕೇ ಎನ್ನುವಂತಾಗಿರುವುದಾದರೂ ಯಾಕೇ?


ಇದರ ಬಗ್ಗೆ ಪ್ರತಿಯೊಬ್ಬರೂ ಒಂದು ಕ್ಷಣ ಚಿಂತಿಸುವುದು ಇಂದಿನ ಸಮಯಕ್ಕೆ ಅತ್ಯಗತ್ಯ.


ಪ್ರಸಿದ್ಧ ವಿಶ್ವ ವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣವನ್ನು ಅಧ್ಯಯನ ಮಾಡುವ ಕನ್ನಡ ಮಾಧ್ಯಮದ ಹುಡುಗರ ಪಾಡು ಹೇಳಬಾರದು. ಯಾಕೆಂದರೆ ಯಾವುದೇ ಪೂರಕ ಪುಸ್ತಕಗಳು ಬೇಕೆಂದರೇ ಪುನಃ ಇಂಗ್ಲಿಷ್ ಲೇಖಕರ ಕಡೆ ಮುಖ ಮಾಡಿಕೊಂಡು ಅವುಗಳನ್ನು ಅರ್ಥ ಮಾಡಿಕೊಂಡು ಪುನಃ ಕನ್ನಡದಲ್ಲಿ ತಮ್ಮ ಪರೀಕ್ಷೆಗಳಲ್ಲಿ ಉತ್ತರಿಸಬೇಕು. ಆ ಸಮಯದಲ್ಲಿಯೇ ಅವನಿಗೆ ತಿಳಿಯುತ್ತದೆ ನಾನು ಎಲ್ಲಿ ಎಡೆವಿದ್ದೇನೆ ಎಂದು.


ಈ ರೀತಿಯ ಪರಕೀಯ ವಾತವರಣವನ್ನು ಕನ್ನಡ ಕನ್ನಡ ಎಂದು ಕೂಗುವ ನಮ್ಮಗಳ ಜನ, ಸರ್ಕಾರ, ಸಂಸ್ಥೆಗಳು ಎಲ್ಲಾ ರಂಗದಲ್ಲೂ ಹೋಗಲಾಡಿಸಬೇಕು. ಪ್ರೀತಿ ಪಟ್ಟು ಮಾತೃ ಭಾಷೆ, ಸಂಸ್ಕೃತಿಯನ್ನು ತನ್ನಲ್ಲಿ ಇಟ್ಟುಕೊಳ್ಳಲು ತವಕಿಸುವ ಕನ್ನಡ ಜನ ಮನಗಳಿಗೆ ಉತ್ಸಹ ಕೊಡುವಂತ ಕೆಲಸಗಳು ಆಗಲಿ ಎಂದು ಕನ್ನಡಾಂಭೆಯಲ್ಲಿ ಬೇಡುವ ಕನ್ನಡಿಗ!

ಆದರೂ ಈ ರೀತಿಯ ಸಂಧಿಗ್ಧ ಪರಿಸ್ಥಿಯಲ್ಲೂ ಸಹ ಕೆಲವೇ ಕೆಲವರಾದರೂ ತಾವು ಕೆಲಸ ಮಾಡುವ ಜಾಗಗಳಲ್ಲಿ ಕನ್ನಡದಲ್ಲಿ ಉಸಿರು ಬಿಡದಂತಹ ವಾತವರಣ ಇದ್ದರೂ. ತಮ್ಮ ಮನೆಯಲ್ಲಿ ಮಾತೃ ಭಾಷೆ ಬೇರೆಯಾಗಿದ್ದರೂ, ತಾವು ಬೆಳೆದ ಬೆಂಗಳೂರು ಕನ್ನಡ ಮಣ್ಣು ಎಂಬ ಒಂದೇ ಪ್ರೀತಿಯಿಂದ ಕನ್ನಡ ಸ್ನೇಹಿತರ ಜೊತೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಸಾಂಸ್ಕೃತಿಕ ವಿಷಯಗಳಾದ ಸಾಹಿತ್ಯ, ಸಂಗೀತ, ಸಿನಿಮಾ, ಹಾಡು, ಭಾವಗೀತೆಗಳನ್ನು ನಿತ್ಯ ತಮ್ಮ ಮನದಲ್ಲಿ ಸಹೃದಯದಿಂದ ಆರಾಧಿಸುವ ಅಪರೂಪದ ಜಾಣ ಜಾಣೆಯರನ್ನು ಈ ಬೆಂಗಳೂರು ನಗರದಲ್ಲಿ ಕಂಡು ನನ್ನ ಮನ ಸುಖಿಸಿದೆ. ಅದಕ್ಕೆ ಯಾರಿಗೇ ಧನ್ಯವಾದಗಳನ್ನು ಅರ್ಪಿಸಬೇಕೂ ತಿಳಿಯದು. ನನಗೆ ಅನ್ನಿಸುತ್ತದೆ. ಈ ರೀತಿಯ ನೆಚ್ಚಿನತನವನ್ನು ಕನ್ನಡದಲ್ಲಿ ಕೊಟ್ಟ ನಮ್ಮ ಕನ್ನಡದ ಎಲ್ಲಾ ರಂಗದ ಸಾಧಕರಿಗೆ ಹೇಳಬೇಕು ಅಲ್ಲವಾ?

ಶನಿವಾರ, ಅಕ್ಟೋಬರ್ 23, 2010

ವೇದಾವತಿಯಲ್ಲಿ ಹೊಸ ನೀರು...

ನಾವು ಹುಡುಗಿಯರು ಎಷ್ಟು ಸೂಕ್ಷ್ಮ ಎಂಬುದು ನಿನಗೆ ಗೊತ್ತಿಲ್ಲದೇ ಎಷ್ಟೊಂದು ಒರಟು ಒರಟಾಗಿ ವರ್ತಿಸುತ್ತಿದ್ದೆಯಲ್ಲಾ ನನ್ನ ಗೆಳೆಯ. ನಾನು ನಿನ್ನ ಜೊತೆ ನಿನ್ನ ಸ್ನೇಹಕ್ಕಾಗಿ ಕಾತರಿಸಿದ್ದು ಆಗ ನಿನಗೆ ನಾನು ಹೇಳಲಿಲ್ಲ. ಅದು ನನಗೆ ಮತ್ತು ನನ್ನ ಗೆಳತಿ ಸೇವಂತಿಗೆ ಮಾತ್ರ ಗೊತ್ತು. ನಿನ್ನ ಕಂಡ ಆ ದಿನ ಯಾಕೋ ನನ್ನ ಮನ ಹೇಳಿತು "ತಿಳಿಯೇ ಇವನೇ ನಿನ್ನವನು" ಎಂದು. ಯಾಕೋ ಗೊತ್ತಿಲ್ಲ.



ನೀನು ಹೇಗಿದ್ದರೂ ನಿನ್ನ ನಾನು ಒಪ್ಪಿಕೊಳ್ಳುತ್ತೇನೆ. ನೀನು ಯಾರಾಗಿದ್ದರೂ ಎಲ್ಲಾ ಕಟ್ಟಳೆಗಳನ್ನು ನೂಕಿ ನಿನ್ನ ಸೇರಬೇಕು ಮತ್ತು ಸೇರಬಲ್ಲೇ ಎಂಬ ಛಲ ನನ್ನ ಮನದಲ್ಲಿ ಅದು ಹೇಗೆ ಸ್ಥಾಪಿತವಾಯಿತು ದೇವರೆ ಬಲ್ಲ.

ಆ ಮೊದಲ ದಿನ ನೀನು ಎಷ್ಟೊಂದು ಮುಗ್ಧನಾಗಿ ನಿನ್ನ ಆ ಪೋಲಿ ಸ್ನೇಹಿತರ ಜೊತೆ ಹಾಗೆ ಹೀಗೆ ಆವಭಾವ ಮಾಡಿಕೊಂಡು ನಡೆಯುತ್ತಿದ್ದರೆ ನನ್ನ ಎದೆಯಲ್ಲಿ ಢವಢವ ಹೆಜ್ಜೆ ಇಟ್ಟುಕೊಂಡು ನನ್ನ ಹೃದಯದ ಕಡೆ ನೀ ನಡೆದ ಅನುಭವ.

ನೀನು ನನ್ನ ಕಡೆ ಗಮನ ಹರಿಸಲಿಲ್ಲ. ಹೌದು! ಯಾವಾಗಲೂ ಹುಡುಗರ ಕಣ್ಣು ಸುಂದರವಾಗಿ ಕಾಣುವ ಹುಡುಗಿಯರ ಕಡೆಗಲ್ಲವಾ? ನೀನು ಅಂದು ನನ್ನ ಕಂಡಿದ್ದರೆ ಗೊತ್ತಾಗುತ್ತಿತ್ತು. ನಿನ್ನ ನನ್ನ ಅಂತರಾಳದ ಕೂಗು ಒಂದೇ ಎಂದು. ಕಣ್ಣು ಅರಿಯದಿದ್ದರೂ ಹೃದಯ ಅರಿಯಲೇಬೇಕು ಅಲ್ಲವಾ? ಆ ಹೃದಯದ ಪಿಸುಮಾತು ಹರಿಯದಷ್ಟು ಕಲ್ಲು ಹೃದಯದವರು ಹುಡುಗರು.

ನನಗೊ ಗೊತ್ತಿಲ್ಲ, ಹಾಗೆಯೇ ನಿನ್ನನ್ನು ನಾನು ದ್ಯಾನಿಸಲು ಪ್ರಾರಂಭಿಸಿದ ಮೇಲೆ, ಎಂದು ನಾವಿಬ್ಬರು ಹತ್ತಿರಕ್ಕೆ ಬರಲು ಪ್ರಾರಂಭಿಸಿದೇವು ಎಂದು. ಮೊದ ಮೊದಲು ನೀನು ಎಷ್ಟಂದು ಗುಮ್ಮನಾಗಿರುತ್ತಿದ್ದೇ ಅಲ್ಲವಾ? ಅದೇ ಇರಬೇಕು ನನಗೆ ಇಷ್ಟವಾಗಿದ್ದು. ನೀನಾಯಿತು ನಿನ್ನ ಕೆಲಸವಾಯಿತು. ಹತ್ತು ಮಾತಿಗೆ ಒಂದು ಮಾತು. ನನ್ನ ಗೆಳೆತಿಯರು ಹೇಳುತ್ತಿದ್ದರೂ "ಏ ಏನೇ ನಿನಗೆ ಯಾರು ಸಿಗಲಿಲ್ಲವಾ ಇಂಥವನನ್ನು ಇಷ್ಟಪಡುತ್ತಿಯಲ್ಲಾ". ಅದಕ್ಕೆ ನನ್ನ ಉತ್ತರ ಕೇವಲ ಮುಗಳ್ನಗೆ.

ಸ್ವಲ್ಪ ಸ್ವಲ್ಪ ನೀನು ನನಗೆ ಹತ್ತಿರವಾಗುತ್ತಾ ಆಗುತ್ತಾ ನೀನು ಆ ಯಾವ ಭಾವನೆಯೇ ಇಲ್ಲದವನಂತೆ ಸುಮ್ಮನೆ ಗೊತ್ತಿರುವವರು ಎಂಬಂತೆ ಬೇರೆಯವರ ಜೊತೆ ಮಾತನ್ನಾಡಿದಷ್ಟೇ ನನ್ನ ಜೊತೆ ಮಾತನ್ನಾಡುತ್ತಿದ್ದುದು. ನಾನು ನೋಡಿದಾಗೇ ಹುಡುಗರು ಸ್ವಲ್ಪ ಸಲಿಗೆ ಕೊಟ್ಟರೆ ಸಾಕು ಅವರ ನಡವಳಿಯೇ ಏನೋ ಒಂಥಾರವಾಗುತ್ತದೆ. ಇದಕ್ಕೆ ನೀನು ತದ್ವಿರುದ್ಧವಾಗಿದ್ದೇ ನನಗೆ ನಿನ್ನ ಮೆಚ್ಚಲು ಎರಡನೇಯ ಕಾರಣ.

ಆ ನಿನ್ನ ಸರಳತೆ ಮತ್ತು ಬೇರೆಯವರ ಬಗ್ಗೆ ನಿನಗಿರುವ ಕಾಳಜಿ, ನಿನ್ನ ಅಮ್ಮನ ಬಗ್ಗೆ ನಿನಗಿರುವ ಅಕ್ಕರೆ .. ಸ್ನೇಹಿತರ ಬಗ್ಗೆ ಕೊಡುವ ಪ್ರಾಮುಖ್ಯತೆ ಹೀಗೆ ಈ ನಿನ್ನ ಒಂದೊಂದು ನಿನ್ನ ತನವು ನನ್ನನ್ನು ಅತಿ ವೇಗವಾಗಿ ನಿನ್ನ ಬಳಿಗೆ ಸೆಳೆಯಲು ಕಾರಣವಾದವು.

ಯಾವಾಗಲೂ ನಿನ್ನದೇ ದ್ಯಾನವಾಗಿತ್ತು. ಮನದ ಛಾಯ ಮಂಟಪದಲ್ಲಿ ನಿನ್ನ ಚಿತ್ರವನ್ನು ಇಟ್ಟು ನಿನ್ನ ಬಗ್ಗೆ ಗೊತ್ತಿರುವ ಎಲ್ಲ ಪ್ರೀತಿಯ ಗೀತೆಗಳನ್ನು ಗುನುಗುತ್ತಿದ್ದೆ.

ಒಂದು ದಿನ ನಿದ್ದೆಯಲ್ಲಿ ಏನು ಏನೋ ಕನವರಿಸುತ್ತಿದ್ದೆನಂತೆ. ಬೆಳಿಗ್ಗೆ ಅಮ್ಮ ಹೇಳಿದಾಗ ನಿಜವಾಗಿಯೂ ನಾಚಿಕೆಯಾಯಿತು. ಅಂದೇ ಇರಬೇಕು ನಾನು ನಿರ್ಧರಿಸಿದ್ದು. ನನ್ನ ಮನದಾಳದ ಪ್ರೀತಿಯ ಒರತೆಯನ್ನು ನಿನ್ನಲ್ಲಿ ಸುರಿದು ನಾನು ಹಗುರಾಗಬೇಕು ಎಂದು.

ನನಗೆ ನಿನ್ನ ಕಂಡರೆ ಅಂದಿನಿಂದಲೂ ಏನೊ ಭರವಸೆ ನನ್ನನ್ನು ನೀನು ಅಚ್ಚು ಮೆಚ್ಚಾಗಿ ನೋಡಿಕೊಳ್ಳುವೇ ಮತ್ತು ನಾನು ನಿನ್ನ ಹೃದಯದಲ್ಲಿ ಮನದನ್ನೆಯಾಗಿ ಇರಬಹುದು. ಮುಂದಿನ ನನ್ನ ಜೀವನ ನಿನ್ನ ಆ ಪುಟ್ಟ ಸಂಸಾರವಾದ ನಿನ್ನ ಅಮ್ಮ ,ನೀನು ಮತ್ತು ನಾನು ಎಂದು ಅಷ್ಟೊಂದು ಬೆಚ್ಚನೆಯ ಚಂದದ ಕನಸನ್ನು ನಿರ್ಮಿಸಿಕೊಂಡು ಅಲ್ಲಿಯೇ ಮನೆಯತುಂಬ ಹಾಗೇ ಹೀಗೆ ಅಲ್ಲಿ ಇಲ್ಲಿ ಅಚ್ಚುಕಟ್ಟದ ಶುಭ್ರತೆಯನ್ನು ತಂದು ಬಿಟ್ಟಿದ್ದೇ.

ನಾನು ನಿನ್ನಲ್ಲಿ ನನ್ನ ಆಸೆಯನ್ನು ಹೇಳಿಕೊಳ್ಳಬೇಕು ಎಂದು ಅಂದು ಅಲ್ಲಿ ನೀನು ಬರುವ ದಾರಿಯಲ್ಲಿ ಚುಮುಚುಮು ಮುಂಜಾನೆಯ ಆ ಸವಿ ಚಳಿಯಲ್ಲಿ ಎಷ್ಟೊಂದು ಹೊತ್ತು ಕಾದಿದ್ದೇ ಎಂದು ನೀನು ಬಂದ ಮೇಲೆಯೇ ಗೊತ್ತಾಗಿದ್ದು.

ನಾನು ನನ್ನ ಆ ಒಂದು ಮಾತು ಹೇಳಲು ನಿನ್ನ ಮುಂದೆ ಅಪರಿಚಿತಳೇನೋ ಎಂಬಂತೆ ನಿಂತಿರುವಾಗ ನೀನು ಮುದ್ದು ಒರಟನಾಗಿ ಏನೊಂದು ಮಾತನಾಡದೇ, "ಏನು ಹೇಳಮ್ಮಾ" ಎನ್ನಬೇಕೇ? ಆಗೊಂತು ನಿನಗೆ ಸರಿಯಾಗಿ ಬಾರಿಸಬೇಕೆಂಬ ಕೋಪ ಬಂದಿತ್ತು. ಅದೇನೋ ಗೊತ್ತಿಲ್ಲ. ನಿಮ್ಮಂತ ಒಳ್ಳೆ ಹುಡುಗರು ಪ್ರೀತಿಯನ್ನು ಕೊಡುವ ಹುಡುಗಿಯರಿಗೆ ಅದೇಕೇ ಅಷ್ಟೊಂದು ಗೊಳು ಹೊಯ್ದು ಕೊಳ್ಳಿತ್ತಿರಾಪ್ಪ. ನಾನು ಅದೇಗೋ ಮನಸ್ಸನ್ನು ಗಟ್ಟಿ ಮಾಡಿಕೊಂಡು ಹೇಳಿದಾಗ, ನೀನು ನನಗೆ ಎಲ್ಲ ಗೊತ್ತು ಎಂಬಂತೆ ನಗುವುದೇ. ನಿನಗೂ ನನ್ನ ಕಂಡರೆ ಪ್ರೀತಿ ಇದ್ದರೂ ನಾನೇ ಹೇಳಲಿ ಎಂದು ಇಷ್ಟಂದು ಸತಾಯಿಸುವುದೇ ಮುದ್ದು ಗಮಾರ!

ಅಂದೇ ಇರಬೇಕು ಮೂಕ್ಕಾಲುಪಾಲು ದಂ-ಪತಿ ಗಳಂತಾದೆವು. ಅಂದೇ ಸಂಜೆ ನೀನು ನಿನ್ನ ಅಮ್ಮನಿಗೆ ನನ್ನ ತೋರಿಸಿದಾಗಲಂತೋ ನನಗೆ ನನ್ನ ಅಮ್ಮನನ್ನೇ ಕಂಡಷ್ಟು ಸಂತೋಷವಾಯಿತು. ಅವರಂತೂ ನಿನ್ನಂತೆ ಅಲ್ಲ ಬಿಡು ಎಷ್ಟು ಸಲಿಸಾಗಿ ಹೇಗೆ ನನ್ನ ಬಗ್ಗೆ ವಿಚಾರಿಸಿದರು. ಆಗ ನಿನ್ನ ಅಮ್ಮನಿಗೆ ಹೇಳಬೇಕೆನಿಸಿತ್ತು. ಸ್ವಲ್ಪ ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದು. ಮೊದಲ ದಿನವೇ ಯಾಕೆ ಮಾತನ್ನಾಡುವುದು ಎಂದು ಸುಮ್ಮನಿರಬೇಕಾಯಿತು.

ಎಷ್ಟೊಂದು ವಸಂತಗಳು ಕಳೆದು ಹೋಗಿದ್ದಾವೆ. ವೇದಾವತಿಯಲ್ಲಿ ಹೊಸ ನೀರು ಹಲವು ಭಾರಿ ಹರಿದಿವೆ. ಈಗಲೂ ನೀನು ನನಗೆ ಆ ಮುದ್ದು ಗಮಾರನೇ.. ಲೈಫು ಅಂದ್ರೇ ಇಷ್ಟೇ ಅಲ್ಲ ಅಲ್ವಾ!

ಬುಧವಾರ, ಅಕ್ಟೋಬರ್ 20, 2010

ನಮ್ಮ ಊರಿನ ದಸರ ಮಸ್ತ್ ಮಸ್ತ್

ನಾಡ ಹಬ್ಬ ಎಂದರೆ ಅದು ದಸರಾ ಹಬ್ಬ ಒಂಬತ್ತು ದಿನಗಳ ನವರಾತ್ರಿ ದಿನಗಳನ್ನು ಪ್ರತಿ ದಿನ ವಿವಿಧ ರೀತಿಯ ಪೂಜೆ ಪುರಸ್ಕಾರಗಳನ್ನು ತಮ್ಮ ಇಷ್ಟ ದೇವತೆಗೆ ಮಾಡಿ ಅದರಲ್ಲಿ ತಮ್ಮ ಮನವನ್ನು ತಲ್ಲಿನಗೊಳಿಸಿ ಪಾವನರಾಗಬೇಕೆಂಬ ಹಂಬಲ. ಹೀಗೆ ಒಂದು ಘಟ್ಟಕ್ಕೆ ಬಂದು ಕೂನೆ ದಿನವಾದ ವಿಜಯದಶಮಿಯಂದು ಸಡಗರದಿಂದ ವಿವಿಧ ರೀತಿಯಲ್ಲಿ ವಿವಿಧ ಕಡೆಗಳಲ್ಲಿ ತಮ್ಮ ಹಬ್ಬದ ಸಂಭ್ರಮವವನ್ನು ತೋರಿಸುತ್ತಾ ಆಚರಿಸುತ್ತಾರೆ.


ಆದರೆ ನಮ್ಮ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ನಡೆಯುವ ದಸರಾ ಸಂಭ್ರಮ ವಿಶ್ವ ಪ್ರಸಿದ್ಧಿ. ಅಲ್ಲಿ ನಡೆಯು ಕೂನೆಯ ದಿನದ ಆನೆ ಅಂಭಾರಿಯ ಉತ್ಸವ ಬಲು ಅಪರೂಪದ್ದು. ಸತತವಾಗಿ ೪೦೦ ವರ್ಷಗಳಿಂದ ನಿರಂತರವಾಗಿ ಹೆಚ್ಚು ಹೆಚ್ಚು ಆಕರ್ಷಣೆಯಿಂದ ಜರುಗುತ್ತಾ ಲಕ್ಷ ಲಕ್ಷ ಜನಗಳನ್ನು ಬರುವಂತೆ ಮಾಡಿ ತನ್ನ ಮೋಡಿಯನ್ನು ಮಾಡಿದೆ ಎಂದರೆ ಅತಿಶಯೋಕ್ತಿಯಲ್ಲ.


ನಮ್ಮ ಮೈಸೂರು ದಸರದ ರೀತಿ ನಮ್ಮ ರಾಜ್ಯದ ವಿವಿಧ ಭಾಗಗಳಲ್ಲೂ ಅದರಷ್ಟೂ ದೂಡ್ಡ ರೀತಿಯಲ್ಲಿ ನಡೆಯದಿದ್ದರೂ ಅದ್ದೂರಿಗೇನೂ ಕಡಿಮೆಯಿಲ್ಲ ಎಂಬಂತೆ ಸರಳವಾಗಿ ಅಲ್ಲಿನ ಸುತ್ತ ಮುತ್ತಲಿನ ಜನಗಳಿಗೆ ದಸರಾದ ಸಡಗರವನ್ನು ಕೂಡುವಂತೆ ನಮ್ಮ ಚಿತ್ರದುರ್ಗದಲ್ಲಿನ ಶರಣ ಸಂಸ್ಕೃತಿ ಉತ್ಸವ, ಕೂಡುಗಿನ ದಸರ, ಮಂಗಳೂರಿನಲ್ಲಿನ ದಸರಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿವೆ.


ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವ ಒಂದು ವಾರದವರಿಗೆ ವಿವಿಧ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳು ದಿನವಿಡಿ ನಡೆಯುತ್ತವೆ. ಇಲ್ಲಿನ ಈ ಕಾರ್ಯಕ್ರಮಗಳಿಗೆ ಉತ್ತರ ಕರ್ನಾಟಕ ಮತ್ತು ಮದ್ಯ ಕರ್ನಾಟಕದ ಊರು ಊರುಗಳಿಂದ ಜನರು ತಮ್ಮವರೂಡಗೂಡಿ ಬಂದು ಮಿನಿ ಮೈಸೂರು ದಸರಾವನ್ನು ಕಂಡಷ್ಟು ಸಂತೋಷಗೊಂಡು ವಿವಿಧ ವಿಚಾರಗಳನ್ನು ಆಲಿಸಿ ತಮ್ಮತನವನ್ನು ಉತ್ತಮಗೊಳಿಸಿಕೊಂಡು ನಲಿಯುತ್ತಾರೆ. ಇದಕ್ಕೆ ಕಾರಣೀಭೂತರಾದ ಶ್ರೀ ಶ್ರೀ ಶಿವಮೂರ್ತಿ ಶಿವ ಶರಣರಿಗೆ ಶರಣು ಶರಣಾರ್ಥಿ.


ವಿಜಯ ದಶಮಿ ದಿನದಂದು ಇಲ್ಲೂ ಮೈಸೂರಿನ ರೀತಿಯಲ್ಲಿ ಮುಂಜಾನೆಯೇ ಶ್ರೀ ಮುರುಘ ಮಠದಿಂದ ಮೆರವಣಿಗೆ ಶಿವಶರಣರ ಸಾರಥ್ಯದಲ್ಲಿ ಸಾಗುತ್ತಾ ಅದು ಕೋಟೆಯನ್ನು ತಲುಪಿ ಕೊನೆಯಾಗುತ್ತದೆ. ಇದರಲ್ಲಿ ನಾಡಿನ ವಿವಿಧ ಭಾಗಗಳಿಂದ ಬಂದ ಜನರ ಜನಪದ ಕಲೆಗಳ ಪರಿಚಯವನ್ನು ಕಾಣಬಹುದು. ನಮ್ಮ ಸಂಸ್ಕೃತಿಯ ಪಳಿಯುಳಿಕೆಗಳೇನೋ ಎಂಬಂತೆ ಇಂಥ ಸಮಯದಲ್ಲಿ ಮಾತ್ರ ಈ ಕಲೆಗಳು ಹೊರಗಡೆ ಬಂದು ಜನರನ್ನು ರಂಜಿಸುತ್ತಾ ತಮ್ಮ ಹೆಮ್ಮೆಯನ್ನು ಮೆರೆಯುತ್ತವೆ.


ಈ ಬಾರಿಯ ಶರಣ ಸಂಸ್ಕೃತಿ ಉತ್ಸವದಲ್ಲಿ ಬಾಗಿಯಾಗುವ ಸೌಭಾಗ್ಯ ವಿಜಯದಶಮಿ ದಿನದಂದು ದೂರೆಯಿತು. ಅಂದಿನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಕಾರ್ಯಕ್ರಮವಾಗಿತ್ತು. ನಾಡಿನ ವಿವಿಧ ಭಾಗಗಳಿಂದ ಪ್ರಸಿದ್ಧಿ ಪಡೆದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಸಾಧನೆಯನ್ನು ಮಾಡಿದ ಎಳೆಯರನ್ನು ಆಹ್ವಾನಿಸಿ ವೇದಿಕೆಯ ಮೇಲೆ ಶಿವ ಶರಣರ ಜೊತೆ ಕೂಡಿಸಿದ್ದರು.


ಅವರುಗಳನ್ನು ನೋಡಿದಾಗ ಎಂಥವರಿಗೂ ಒಂದು ಸ್ಫೂರ್ತಿಯಾಗುತ್ತಿತ್ತು. ಅತಿ ಚಿಕ್ಕ ವಯಸ್ಸಿನಲ್ಲಿ ಅಂಥ ದೂಡ್ಡ ವೇದಿಕೆಯ ಮೇಲೆ ಕೂಡಲು ಅವರುಗಳು ಎಷ್ಟೊಂದು ಅದೃಷ್ಟ ಮತ್ತು ಪರಿಶ್ರಮವನ್ನು ತಮ್ಮ ಜೀವನದಲ್ಲಿ ಪಟ್ಟಿರಬೇಕು ಅಲ್ಲವಾ! ಈ ರೀತಿಯ ವಿವಿಧ ರಂಗದ ಕಾರ್ಯಕ್ರಮಗಳು ಪ್ರತಿದಿನ ಒಂದು ವಾರ ಆ ಜಿಲ್ಲೆಯ ಜನರಿಗೆ ಅಪರೂಪದ ಸಾಧನೆಯ ಶಿಖರಗಳನ್ನು ತಮ್ಮ ಕಣ್ಣ ಮುಂದೆ ಕಾಣುವುದು.



ಇದು ಸರಿ! ಆದರೆ ಅಲ್ಲಿ ಅಂದು ನಡೆದ ಒಂದು ಎರಡು ಕಾರ್ಯಕ್ರಮಗಳು ಸ್ವಲ್ಪ ತಮ್ಮ ಮಿತಿಯನ್ನು ಮೀರಿದವು ಎಂದು ಅನಿಸಿತು. ಈಗಾಗಲೇ ನಮಗೆಲ್ಲಾ ಗೊತ್ತಿರುವಂತೆ ನಮ್ಮ ಟಿ. ವಿ. ಚಾನೆಲ್ ಗಳು ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ರಿಯಾಲಿಟಿ ಶೋಗಳನ್ನು ದಿನಂಪ್ರತಿ ಮಕ್ಕಳಿಗಾಗಿ, ಹದಿಹರೆಯದವರಿಗಾಗಿ, ವಯಸ್ಸಾದವರಿಗಾಗಿ ವಿವಿಧ ರೀತಿಯಲ್ಲಿ ಜನರನ್ನು ಮೋಡಿ ಮಾಡಲು ತಾನು ಮುಂದು ನೀನು ಮುಂದು ಎಂದು ನಿಂತಿರುವಾಗ, ಅದೇ ರೀತಿಯ ಅದಕ್ಕೆ ಸಮೀಪವಾದಂತ ನೃತ್ಯಗಳನ್ನು ಸಿನಿಮಾ ಹಾಡುಗಳಿಗೆ ಮಾಡಿಸಿದ್ದು ಮನಸ್ಸಿಗೆ ತುಂಬ ಕಸಿವಿಸಿಯನ್ನುಂಟು ಮಾಡಿತು. ಮತ್ತು ಇದಕ್ಕೇ ಪ್ರೋತ್ಸಾಹವೇನೂ ಎಂಬ ರೀತಿಯಲ್ಲಿ ಸಭಿಕರ ಚಪ್ಪಾಳೆಗಳು ಮುಗಿಲು ಮುಟ್ಟಿದ್ದು ಮಾತ್ರ ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದನ್ನು ಕ್ಷಣ ಕಾಲ ಯೋಚಿಸುವಂತೆ ಮಾಡಿತು.


ಏನು ಅರಿಯದ ಈ ಚಿಕ್ಕ ವಯಸ್ಸಿನಲ್ಲಿ ಈ ಕಂದಮ್ಮಗಳಿಗೆ ಈ ರೀತಿಯ ಹಾಡಿನ ನೃತ್ಯಗಳನ್ನು ಕಲಿಸಿದ, ಅವರಿಗೆ ತೋಡಿಸಿದ ವೇಷ, ವಸ್ತ್ರ ಆ ದೇವರಿಗೆ ಪ್ರೀತಿ. ಶಿವಶರಣ ಸಮ್ಮುಖದಲ್ಲಿ ಇಂಥ ಅಪರೂಪವಾದ ಉತ್ಕೃಷ್ಟವಾದ ಸಂಭ್ರಮದಲ್ಲಿ ಈ ರೀತಿಯ ಯಾವುದೇ ಚಿಕ್ಕ ಚಿಕ್ಕ ಕಾರ್ಯಕ್ರಮಗಳು ಜರುಗುವುದನ್ನು ಆಯೋಜಕರು ತಪ್ಪಿಸಬೇಕು. ಹೆಸರೇ ಸೂಚಿಸುವಂತೆ ಸಂಸ್ಕೃತಿಯ ಉತ್ಸವ ನಮ್ಮ ಇಂದಿನ ಜನಕ್ಕೆ ಸಿನಿಮಾ ಹಾಡುಗಳ ನೃತ್ಯವೇ ಕನ್ನಡ ಸಂಸ್ಕೃತಿ ಎಂಬಂತೆ ಆಸ್ವಾದಿಸುತ್ತಾರೆ ಮತ್ತು ಈ ರೀತಿಯ ಕಾರ್ಯಕ್ರಮಗಳು ಹೇರಳವಾಗಿ ದಿನ ನಿತ್ಯ ಅಲ್ಲಿ ಇಲ್ಲಿ ನೋಡುತ್ತಲೇ ಇದ್ದೇವೆ. ಅವುಗಳನ್ನು ಪುನಃ ಇಂಥ ಮುಖ್ಯ ಕಾರ್ಯಕ್ರಮಗಳಲ್ಲಿ ತರುವುದು ನಿಲ್ಲಬೇಕು.


ಮಕ್ಕಳಿಗೂ ಸಹ ನಮ್ಮ ಸೂಗಡಿನ ಸಂಸ್ಕೃತಿಯ ಕಲೆಗಳನ್ನು ಕಲಿಸ ಬೇಕು ಮತ್ತು ಅವುಗಳನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಈ ಪಾಶ್ಚಾತ್ಯ ವೇಷ, ಭೂಷಣ, ಸಂಗೀತ, ಹಾಡು, ನೃತ್ಯ ನಮ್ಮಗಳ ಕಲೆಯ ಮುಂದೆ ಏನು ಅಲ್ಲ ಎಂಬುದನ್ನು ಅರಿಯುವಂತೆ ಮಾಡುವುದು ದೂಡ್ಡವರಾದ ಎಲ್ಲ ಗುರು ಹಿರಿಯರ ಕರ್ತವ್ಯ.


ಮಕ್ಕಳ ಸ್ಕೂಲ್ ಶಾಲೆಯಲ್ಲಿ ಅಲ್ವಾ! ಎಂಬಂತೆ ಇಂದಿನ ಈ ನಗರ ಜೀವನದಲ್ಲಿ ಪ್ರತಿ ಶಾಲೆಗಳಲ್ಲೂ ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ಕೈಯಿಂದ ಮಾಡಿಸುವ ನೃತ್ಯ ಕಣ್ಣಿಂದ ನೋಡಬಾರದು ಯಾವ ಮೂರನೇ ದರ್ಜೆಯ ಸಿನಿಮಾ ಕ್ಯಾಬರೆ ನೃತ್ಯಕ್ಕೆ ಕಡಿಮೆ ಇರುವುದಿಲ್ಲ. ಏನೂ ಅರಿಯದ ಆ ವಯಸ್ಸಿನ ಮಕ್ಕಳಿಗೆ ಕಲಿಸುವ ಹಾಡು ನೃತ್ಯ ಬರುತ್ತಾ ಬರುತ್ತಾ "ತೋ ಚಿಜ್ ಬಡಿ ಮಸ್ತ ಮಸ್ತ..." ತಮ್ಮ ನೆಚ್ಚಿನ ಗೀತೆಯಾಗುತ್ತದೆ. ಮತ್ತು ಇದೇ ಮುಂದೆ ಇಂಥ ಕಾರ್ಯಕ್ರಮಗಳಲ್ಲಿ ಪ್ರತಿಬಿಂಬಿಸುತ್ತದೆ. ಇದು ನಿಲ್ಲಬೇಕು ನಮ್ಮ ಜನಪದ, ಹಿಂದುಸ್ತಾನಿ, ಭರತನಾಟ್ಯ, ಕೋಲಾಟ, ವಚನಗಳು, ಭಾವ ಗೀತೆಗಳು ಹೀಗೆ ಮೂಲೆಗೆ ಸೇರುತ್ತಿರುವ ಕಲೆಗಳ ಪುನರಪಿ ಜನನಂ ಎಲ್ಲರ ಮನದಲ್ಲಾಗಲಿ ಎಂದು ಆಶಿಸೋಣ.

ಭಾನುವಾರ, ಅಕ್ಟೋಬರ್ 10, 2010

ಅಧಿಕಾರವೊಂದೇ ಎನಗೆ ಹಿರಿದು!


ಸಮಕಾಲಿನ ನಮ್ಮ ರಾಜ್ಯದ ರಾಜಕೀಯ ಸ್ಥಿತ್ಯಾಂತರಗಳನ್ನು ಗಮನಿಸಿದರೆ ಯಾರೊಬ್ಬರಿಗೂ ಯಾವ ಭರವಸೆಯ ಕಿರಣಗಳು ಕಾಣದಂತಾಗಿದೆ. ನಾವುಗಳೇ ನಮ್ಮ ಕೈಯಾರೆ ಆರಿಸಿದ ನಮ್ಮನಾಳುವ ನಮ್ಮ ಪ್ರತಿನಿಧಿಗಳು ಇವರುಗಳೇ ಎಂದು ನಾವುಗಳು ಯಾರನ್ನು ಕೇಳಬೇಕು ಎನ್ನುವಂತಾಗಿದೆ.


ಯಾವ ಸರ್ಕಾರವೂ ಹೀಗೆ ಎಂದೆಂದಿಗೂ ನಡೆಯಬಾರದು ಎನ್ನುವಷ್ಟರ ಮಟ್ಟಿಗೆ ನಮ್ಮ ಮುಖ್ಯಮಂತ್ರಿಗಳು ಎಲ್ಲಾ ರೀತಿಯಲ್ಲೂ ವಿಫಲರಾಗಿ ನಿಶಕ್ತರಾಗಿ ನಿಂತಿದ್ದಾರೇನೋ ಎಂಬುವಂತಾಗಿದೆ. ಈ ಸ್ಥಿತಿಗೆ ಅವರುಗಳು ಅಂದು ತಮ್ಮ ಜಾಗವನ್ನು ಭದ್ರ ಮಾಡಿಕೊಳ್ಳಲು ಅತಿ ಹೊಸದಾದ ತಂತ್ರವಾದ ಅಪರೇಷನ್ ಕಮಲವನ್ನು ಮಾಡಿದ್ದು. ಹೀಗಾಗಲೇ ಬೇರೆ ಪಕ್ಷದಿಂದ ಗೆದ್ದು ಬಂದಿರುವ ಪ್ರತಿಪಕ್ಷದವರನ್ನು ತಮ್ಮ ಪಕ್ಷದ ಕಡೆಗೆ ಸೆಳೆದು ಕೊಂಡು ತಾನು ಬಲಿಷ್ಟನಾಗುತ್ತಿದ್ದೇನೆ ಎಂಬ ಹುಸಿ ಕನಸಿನಲ್ಲಿ ಬಂದ ಹೊಸಬರಿಗೆ ವಿವಿಧ ರೀತಿಯ ಹುದ್ದೆಗಳು, ಜಾಗಗಳನ್ನು ಬಿಟ್ಟು ಕೊಟ್ಟು ತನ್ನ ಮನೆಯಲ್ಲಿ ತನ್ನ ಪಕ್ಷಕ್ಕಾಗಿ ದುಡಿದ ಸಾಮಾನ್ಯರನ್ನು ಕಡೆಗಣಿಸಿದ ಪಾಪವನ್ನು ಈಗ ನೋಡುವಂತಾಗಿದೆ.


ಒಬ್ಬ ವ್ಯಕ್ತಿಯ ನಿಜ ರೂಪವನ್ನು ನಾವು ನೋಡಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ಪರೀಕ್ಷಿಸಿ ನೋಡು ಎನ್ನುವಂತೆ. ಕೆಲವೇ ವರುಷಗಳಲ್ಲಿ ಪ್ರತಿ ತಿಂಗಳು ದಿನಂಪ್ರತಿ ವಿವಿಧ ಹಗರ‍ಣಗಳ ಸರಮಾಲೆಯಲ್ಲಿ, ದುರಾಸೆಯ ಬಲದಿಂದ ವಿವಿಧ ರೀತಿಯಲ್ಲಿ ಪ್ರತಿಯೊಬ್ಬರೂ ಸಿಕ್ಕಷ್ಟು ದಿನದಲ್ಲಿ ತಮ್ಮ ಅಧಿಕಾರವನ್ನು ತಾವು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ನಿರತಾರದರೇನೆ ವಿನಾಃ ತಮ್ಮ ಪಕ್ಷ ಮತ್ತು ತಮ್ಮ ನ್ನು ಆರಿಸಿದ ಜನಸಾಮಾನ್ಯರ ಕೂಗಿಗೆ, ಆಶಯಕ್ಕೆ ಬೆಲೆ ಇಲ್ಲವೇನೋ ಎಂಬ ರೀತಿಯಲ್ಲಿ ಎಲ್ಲಾ ಕಡೆಗಳಿಂದಲೂ ಅಸಮಾಧಾನದ ಹೂಗೆ ಏಳಲು ಆರಂಭವಾಗಿ ತಮ್ಮ ಸಿಸ್ತಿನ ಪಕ್ಷದಲ್ಲೂ ಸಹ ಏನೂ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಇಂದಿನ ಈ ಸಂಧಿಗ್ಧ ಸ್ಥಿತಿಗೆ ಬಂದು ದಿನಗಳನ್ನು ಏಣಿಸುವಂತಾಗಿದೆ.


ತಮ್ಮದೇ ಪಕ್ಷ ಪಕ್ಕದ ರಾಜ್ಯವಾದ ಗುಜರಾತಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯೊಂದೇ ಮಂತ್ರ ಎಂಬ ರೀತಿಯಲ್ಲಿ ಮೋದಿ ಮನಿಯಾ ಇಡೀ ಭಾರತದಲ್ಲಿ ಪ್ರಸಿದ್ಧವಾಗಿದ್ದರೂ ಅಲ್ಲಿನ ಆ ಸುಧಾರಣೆ ದಕ್ಷಿಣ ಭಾರತದಲ್ಲಿ ಯಾವ ಜಾದು ನಡೆಯಲಾರದೇ ಸರ್ಕಾರವೆಂದರೆ ಇದೇನಾ! ಎನ್ನುವಂತಾಗಿದ್ದು ವಿಪರ್ಯಾಸ.


ಜನರಿಂದ ಜನರಿಗಾಗಿ ರೂಪಿತವಾದ ಜನರ ಸರ್ಕಾರ ಎಂದು ಪ್ರಜಾಪ್ರಭುತ್ವದಲ್ಲಿ ಬಿಂಬಿತವಾದ ನಮ್ಮ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆವಲ ತಮ್ಮ ತಮ್ಮ ಕ್ಷೇಮಗಳನ್ನು ನೋಡಿಕೊಂಡರೇ ಮತ್ತು ಯಾವುದೇ ಉತ್ತಮ ಕೆಲಸಗಳನ್ನು ಮಾಡದಿದ್ದರೆ ಯಾವ ಸರ್ಕಾರಗಳು ಉಳಿಯಲಾರವು. ಜನರ ಹಿತ ಮತ್ತು ಅವರ ಸುಧಾರಣೆಯ ರೂವಾರಿಗಳಾಗ ಬೇಕಾದ ನಮ್ಮ ಪ್ರತಿನಿಧಿಗಳು, ತಮ್ಮ ಹಿತಾಸಕ್ತಿ ಮತ್ತು ಅಧಿಕಾರಕ್ಕಾಗಿ ಯಾವುದೇ ರೀತಿಯ ಕೆಲಸ ಮಾಡಲೂ ಸೈ ಎನ್ನುವುದನ್ನು ಕಳೆದೆರಡು ವಾರಗಳಲ್ಲಿ ಇಲ್ಲಿನ ಕೆಲವು ಜನಪ್ರತಿನಿಧಿಗಳು ಮಾತನ್ನಾಡುವ ರೀತಿ, ವರ್ತಿಸುತ್ತಿರುವ ಬಗೆಗಳನ್ನು ನೋಡಿದರೇ ಎಂಥವರಿಗಾದರೂ ವಾಕರಿಕೆ ಬರದೇ ಇರದು.


ಯಾವ ಕನಸುಗಳನ್ನು ಇಟ್ಟುಕೊಂಡು ತಮ್ಮನ್ನು ಆರಿಸಿರುವ ಮತದಾರನ ಮುಗ್ಧತೆಯ ಪರೀಕ್ಷೆಯನ್ನು ಕೆವಲ ಅವರು ಅವರುಗಳೇ ಕೋಟಿ ಕೋಟಿ ಡೀಲ್ ಕುದುರೆ ವ್ಯಾಪಾರದಲ್ಲಿ ಮತ್ತು ಹತ್ತು ಹಲವಾರು ಆಸ್ತಿಗಳನ್ನು ಸಂಪಾದಿಸುವಲ್ಲಿ ಮಗ್ನರಾಗಿರುವುದನ್ನು ಪತ್ರಿಕೆಗಳಲ್ಲಿ ಪುಟಗಟ್ಟಲೆ ಓದುತ್ತಿದ್ದರೆ, ಈ ವ್ಯವಸ್ಥೆಗೆ ಇನ್ನಾದರೂ ಒಂದು ಭವಿಷ್ಯ ಇದೆ ಅಂಥ ಅನ್ನಿಸುತ್ತದಾ?


ನಮ್ಮ ಒಳ್ಳೆತನವನ್ನು ಅಸಹಾಯಕತೆಯನ್ನು ಕೇವಲ ಅವರು ಸಂಪಾದಿಸುವ ದುಡ್ಡು, ಅವರ ಆಸೆ, ಅಧಿಕಾರಗಳು ನಿರ್ಧರಿಸುವಂತಾಗಬಾರದು.


ಒಂದು ಸಮಾಜ ಸರಿಯಾದ ಸಮಯದಲ್ಲಿ ದಿಕ್ಕೆಟ್ಟು ಏಚ್ಚೆತ್ತುಕೊಂಡರೆ ಉತ್ತಮ ಸಮಾಜದ ನಿರ್ಮಾಣದ ಕ್ರಾಂತಿ ಅಸಾಧ್ಯವೆನಲ್ಲಾ. ಅದು ಬರುವ ಸಮಯವೇನೂ ದೂರವಿಲ್ಲ..

ಶನಿವಾರ, ಅಕ್ಟೋಬರ್ 2, 2010

ಮತ್ತೇ ಬಾ ಬಾಪೂ!

ಗಾಂಧಿ ಜಯಂತಿ ಅಕ್ಟೋಬರ್ ೨ ಅಂದ ತಕ್ಷಣ ನನ್ನ ಮನ ಬಾಲ್ಯದ ದಿನಗಳ ದಸರ ರಜೆಗೂ ಮೊದಲು ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಣೆಯನ್ನು ಮಾಡಿ ಒಂದು ತಿಂಗಳು ರಜೆಯನ್ನು ಘೋಷಿಸುತ್ತಿದ್ದ ದಿನಗಳಿಗೆ ಜಾರುತ್ತದೆ.




ಅಂದು ಶಾಲೆಗೆ ಹೋಗಿ ಗಾಂಧಿ ಜನ್ಮ ದಿನಾಚರಣೆಯನ್ನು ಮಾಡುವ ಮುನ್ನ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಂದ ಚಿಕ್ಕವಾದ ಯಾವುದಾದರೂ ಕೆಲಸಗಳನ್ನು ಮಾಡಿಸುವುದು. ಶಾಲೆಯ ಮುಂದಿನ ಜಾಗವನ್ನು ಚೊಕ್ಕಟ ಮಾಡುವುದು.


 ಆಗಿನ ಆ ಹುರುಪು ತುಂಬ ಖುಷಿಯನ್ನು ಕೊಡುವ ಕ್ಷಣಗಳು. ಯಾಕೆಂದರೆ ನಾಳಿನಿಂದ ಒಂದು ತಿಂಗಳು ರಜಾ ಮಜಾವನ್ನು ನೆನಸಿ ನೆನಸಿಕೊಂಡು ಸಂಭ್ರಮಪಡುತ್ತಿದ್ದೇವು. ನಾನು ರಜೆಯಲ್ಲಿ ಹೀಗೆ -ಹಾಗೆ ಮಾಡುವೇನು. ಅಲ್ಲಿಗೆ ಅವರ ಜೋತೆ ಹೋಗುವೇನು ಎಂದು ಬಡಾಯಿ ಕೊಚ್ಚಿಕೊಳ್ಳುವುದೇನೂ.


ಬಿಡಿ ಆ ದಿನಗಳು ಮತ್ತೇ ಮರಳಲಾರವು.






ಗಾಂಧಿಯೇಂದರೇ ಏನೋ ಪ್ರೀತಿ. ಅವರ ಬಾಲ್ಯದಲ್ಲಿ ಅವರು ಮಾಡಿದ ಕಳ್ಳತನ. ದಾರಿ ತಪ್ಪಿ ಕೆಟ್ಟ ಹುಡುಗನಾಗಿ ತಂದೆಯ ಮುಂದೆ ಕ್ಷಮಾಪಣೆ ಕೇಳಿದ್ದು. ತಾಯಿಯ ಜೋತೆ ೨೧ ದಿನಗಳವರೆಗೂ ಉಪವಾಸ ಮಾಡಿದ್ದು. ಹೀಗೆ ಅವರ ಜೀವನವನ್ನು ನಮ್ಮ ಜೋತೆ ಸಮಕರಿಸಿಕೊಂಡು. ಮರಿ ಗಾಂಧಿಯನ್ನಾಗಿ ಮಾಡಿಕೊಂಡು. ನಮ್ಮವರೇ ಅವರು ಎಂಬ ಉತ್ಸಾಹದಿಂದ ಶಾಲೆಯಲ್ಲಿ ಸಿಹಿಯನ್ನು ತಿನ್ನುವ ಮೊಲಕ ಸಂತೋಷಪಡುತ್ತಿದ್ದೆವು. ಅವರ ಕಥೆಯನ್ನು ಪುಸ್ತಕದಲ್ಲಿ ಓದಿದ್ದರೂ, ಪುನಃ ನಮ್ಮ ಗುರುಗಳ ಬಾಯಿಯಲ್ಲಿ ಅವರ ಸಾಧನೆ ಮತ್ತು ಆದರ್ಶದ ನುಡಿಗಳನ್ನು ನಮ್ಮ ಕಿವಿಗೆ ತುಂಬಿಕೊಳ್ಳುತ್ತಿದ್ದೇವುಮುಂದೆ ಒಂದು ದಿನ ಅವರ ಮಟ್ಟಿಗೆ ಬೆಳೆಯಬೇಕು. ಅವರ ರೀತಿ ನಾವು ನಾಯಕರಾಗಬೇಕು. ಬಡವರ ಬಗ್ಗೆ ನಮ್ಮ ಕೈಯಿಂದ ಆಗುವ ಸಹಾಯವನ್ನು ಮಾಡಬೇಕು. ಇತ್ಯಾದಿ ಇತ್ಯಾದಿ ವಿಚಾರಗಳ ಸರಮಾಲೆಯನ್ನು ಆ ಕ್ಷಣದಲ್ಲಿ ಮನಸ್ಸಿನ ತುಂಬ ತುಂಬಿಕೊಂಡು ಬೀಗುತ್ತಿದ್ದೇವು.


ಈಗ ಅದು ಎಲ್ಲಾ ಸುಮಧುರ ನೆನಪು ಮಾತ್ರ!




ಶಾಲೆಯ ದಿನಗಳಿಂದ ಹೊರಗೆ ಬಂದ ನಂತರ ಈ ದಿನಗಳು ಕೇವಲ ರಜಾದಿನಗಳಾಗಿ ಬಿಟ್ಟಿವೆ. ರಾಷ್ಟ್ರಕ್ಕಾಗಿ ಹೋರಾಡಿ ತಮ್ಮನ್ನೇ ತಾವು ಅರ್ಪಿಸಿಕೊಂಡು ನಮ್ಮ ಇಂದಿನ ಈ ಸುಖಿ ದಿನಗಳಿಗೆ ಕಾರಣಕರ್ತರಾದ ಗಾಂಧಿ, ಲಾಲ ಬಹದ್ದೂರ್ ಶಾಸ್ತ್ರಿ ಮುಂತಾದ ಸ್ವಾತಂತ್ರ್ಯ ನಾಯಕರ ನೆನಪು ಇಂದು ಯಾವ ರೀತಿಯಲ್ಲೂ ಬೇರೆ ದಿನಗಳಲ್ಲಿ ಬರಲಾರದು ಅಲ್ಲವಾ?



ಗಾಂಧಿಜೀಯವರ ಆದರ್ಶ, ನೀತಿ, ಮೌಲ್ಯಗಳು ಮತ್ತು ಕನಸುಗಳು ಇಂದಿನ ಈ ದಿನಮಾನಗಳಲ್ಲಿ ಅವರ ಜಯಂತಿ ದಿನಕ್ಕೆ ಮಾತ್ರ ಸೀಮಿತ. ಆ ಒಂದು ದಿನ ಮಾತ್ರ ಎಲ್ಲೇ ಎಲ್ಲೂ ಅವರ ಗುಣಗಾನ ಮಾಡಿ ನಂತರ ಮುಂದಿನ ಜಯಂತಿ ಬರುವವರೆಗೂ ಗೊತ್ತು ಗೊತ್ತಿಲ್ಲದ ಗಾವಿದರ ರೀತಿ ಮಲಗಿ ಬಿಟ್ಟಿರುತ್ತೇವೆ.



ಗಾಂಧಿಯೇಂದರೆ ಇಂದಿನ ನಮ್ಮ ಹೈಟೆಕ್ ಯುವಕ ಯುವತಿಯರಿಗೆ ಹಾಡಿಕೊಳ್ಳುವ ವಸ್ತುವಾಗಿದೆ. ಅವರ ಹೆಸರು ಕೇವಲ ಎಲ್ಲ ಮುಖ್ಯ ನಗರಗಳಲ್ಲಿ ಒಂದು ಮುಖ್ಯ ರಸ್ತೆಗೆ, ಮುಖ್ಯ ಸರ್ಕಲ್ ಗೆ ಮಾತ್ರ ಇಟ್ಟು ಕೊಂಡಾಡುವವರ ರೀತಿ ನಮ್ಮ ಹಿರಿಮೆಯನ್ನು ಮೆರೆಯುತ್ತಿದ್ದೇವೆ.



ಯಾರಾದರೂ ಸ್ವಲ್ಪ ಸಾಧುವಾಗಿ ಮತ್ತು ಸಭ್ಯನಾಗಿ ಅಥಾವ ಹಳೆಕಾಲದವನ ರೀತಿಯಲ್ಲಿ ನೆಡೆದುಕೊಂಡರೆ ಮುಗಿಯಿತು ಪ್ರತಿಯೊಬ್ಬರೂ ಅವನನ್ನು "ನೋಡಾಪ್ಪ ಗಾಂಧಿ ಬಂದ" ಅನ್ನುವರು.



ಸಿನಿಮಾ ಥೇಟರ್ ನಲ್ಲಿ ಗಾಂಧಿ ಕ್ಲಾಸ್ ಎಂದು  ಮುಂದಿನ ಅಸನಗಳಿಗೆ ಇಟ್ಟಿರುವವರು. ಅಲ್ಲಿಗೆ ಹೋಗುವ ಮಂದಿಗಳು ಸ್ವಲ್ಪ ಯೋಚಿಸುವಂತೆ ಮಾಡಿರುವವರು ಯಾರು?



ಅಂದು ಇಡೀ ಭಾರತ ಅವರ ಒಂದು ಮಾತಿಗೆ ಅವರ ಹಿಂದೆ ಬರುವಂತೆ ಮಾಡಿದ್ದ ಪವಾಡವಾದರೂ ಏನೂ? ಕಲ್ಪಿಸಲೂ ಸಾಧ್ಯವಿಲ್ಲ. ಯಾವುದೇ ದುಡ್ಡು, ಪ್ರಲೋಭನೆ ಯಾವೊಂದು ಇಲ್ಲದೇ ತಮ್ಮ ಸರಳತೆ, ಸತ್ಯ ಶೋಧನೆಯ ಮಾರ್ಗದಲ್ಲಿ, ಅಹಿಂಸೆಯ ಸತ್ಯಾಗ್ರಹವೆಂಬ ಅಸ್ತ್ರವನ್ನು ಮಾತ್ರ ಇಟ್ಟುಕೊಂಡು. ಪ್ರತಿಯೊಬ್ಬರಿಗೂ ಮುಂದೆ ದೂರಕುವ ಭವ್ಯ ಭರವಸೆಯ ಸ್ವಾತಂತ್ರ್ಯದ ಫಲಕ್ಕಾಗಿ ಎಲ್ಲಾರೂ ಕಟಿ ಬದ್ಧರಾಗಿರುವಂತೆ ಮಾಡಿದ ಮೋಡಿಗಾರ ಮತ್ತೇ ಈ ನೆಲದಲ್ಲಿ ಹುಟ್ಟಿ ಬರಲಾರೇನೋ.




ಅಂದು ಸಮಾಜದಲ್ಲಿ ವಿದ್ಯಾವಂತರ ಕೊರತೆ ಇದ್ದಿರಬಹುದು, ಬಡತನವಿದ್ದಿರಬಹುದು ಮತ್ತು ಮೌಢ್ಯದಲ್ಲಿಯೇ ಬದುಕಿದ್ದಿರಬಹುದು. ಆದರೂ ಎಲ್ಲರೂ ಒಂದಾಗಿ ಗಾಂಧಿ ಹಾಕಿ ಕೊಟ್ಟ ಹಾದಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಅವರಿಗೆ ಬೆಂಬಲ ಕೊಟ್ಟಿರುವುದು ಆ ಜನರ ಹೆಮ್ಮೆಗೆ  ಮತ್ತು ದೊಡ್ಡತನಕ್ಕೇ ಹಿಡಿದ ಕನ್ನಡಿ.



ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದರೂ ನಮ್ಮ ಈ ರಾಜಕೀಯ ವ್ಯವಸ್ಥೆಯಲ್ಲಿರುವ ನಾಯಕರುಗಳ ಕನಸುಗಳು, ಅಧಿಕಾರ ದಾಹ, ಭ್ರಷ್ಟತೆ, ಯಾರನ್ನಾದರೂ ಏನಾದರೂ ಮಾಡುವಂತಿರುವ ಇವರುಗಳೆ ರಾಷ್ಟ್ರಪೀತ ಹುಟ್ಟಿದ ಭಾರತಾಂಬೆಯ ಮಕ್ಕಳೇ ಎಂಬ ಸಂಶಯ ಬರದೇ ಇರಲಾರದು.



ಇದ್ದಕ್ಕೆ ಇರಬೇಕು ಇಂದು ಕೆಲವರು ಹೇಳುತ್ತಿರುತ್ತಾರೆ ಇಂದು ನಡೆಯುತ್ತಿರು ಈ ಭ್ರಷ್ಟ ವ್ಯವಸ್ಥೆಯಲ್ಲಿ ಏನಾದರೂ ಗಾಂಧಿಜೀಯವರು ಬಂದು ಯಾವುದಾದರೂ ಕ್ಷೇತ್ರಕ್ಕೆ ಸ್ಪರ್ಧಿಸಿದರೇ ಅವರನ್ನು ನಮ್ಮ ಜನ ಅತಿ ಹೆಚ್ಚು ಮತಗಳ ಅಂತರದಿಂದ ಸೋಲಿಸುತ್ತಾರೆ!!?



ನಮ್ಮ ಇಂದಿನ ಮಕ್ಕಳಿಗೆ ಗಾಂಧಿಯ ನುಡಿ, ಕನಸು, ಜೀವನ ಕೇವಲ ಪುಸ್ತಕದಲ್ಲಿ ಇದ್ದು ಅಂಕ ಪಡೆಯುವ ವಸ್ತುವಾಗಿದೆ.




ತಾನು ಬೆಳೆದ ಮೇಲೆ ಅದನ್ನು ಗಾಳಿಗೆ ತೋರಿ ತಾನು ಮಾತ್ರ ಚೆನ್ನಾಗಿರಬೇಕು ಮತ್ತು ತನ್ನವರು ಮಾತ್ರ ಚೆನ್ನಾಗಿರಬೇಕು. ಎಂಬ ಸ್ವಾರ್ಥ ಸಮಾಜದ ನಿರ್ಮಾಣ ಕಾರ್ಯದಲ್ಲಿ ನಿರತವಾಗಿರುತ್ತಿದ್ದಾರೆ.



ಇಂದು ರಾಮ ರಾಜ್ಯದ ಕನಸು ಇನ್ನು ಕನಸಾಗಿಯೇ ಉಳಿಯುವಂತಾಗಿದೆ. ಅವರ ಅತಿ ಸರಳ ನಡೆ ನುಡಿ ನೇರವಂತಿಕೆ ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂದು ಅವರನ್ನು ಕಂಡು ಅವರ ಆದರ್ಶವನ್ನು ಪಾಲಿಸಿಕೊಂಡು ನಮ್ಮ ನಡುವೆ ಇಂದು ಬದುಕುತ್ತಿರುವ ಕೆಲವೇ ಕೆಲವು ಹಿರಿಯರುಗಳು ಮರೆಯಾದರೇ.. ಅವರ ಬಗ್ಗೆ ಹೇಳುವವರೆ ಸಿಗುವುದಿಲ್ಲವೇನೋ.



ಅದಕ್ಕೆ ಹಿಂದೆ ಗಾಂಧಿಯವರ ಸಮಯದಲ್ಲಿದ್ದ ಪ್ರಸಿದ್ಧ ಭೌತ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೀನ್ ರವರು "ಈ ವ್ಯಕ್ತಿ ಹಿಂದೆ ನಮ್ಮ ಭೂಮಿಯ ಮೇಲೆ ಇದ್ದು ನಡೆದಾಡಿದ್ದಾರೆ ಎಂದರೆ ಮುಂದಿನ ಜನಾಂಗ ನಂಬುವುದಿಲ್ಲ" ಎಂದು ಹೇಳಿರುವುದು.





ನಮ್ಮ ದೇಶದಲ್ಲಿಯೇ ಹುಟ್ಟಿ ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಉಸಿರನ್ನೇ ಮುಡಿಪಿಟ್ಟ ಮಹಾನ್ ವ್ಯಕ್ತಿಯನ್ನು ದಿನಂಪ್ರತಿ ನೆನೆಯುತ್ತ. ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಐನ್ ಸ್ಟೀನ್ ರವರ ಮಾತನ್ನು ಸುಳ್ಳು ಮಾಡೋಣವೇ!

ಗುರುವಾರ, ಸೆಪ್ಟೆಂಬರ್ 23, 2010

ಹಾಗೇ ಸುಮ್ಮನೆ

ನಿಯತವಾಗಿ ಲೇಖನಗಳನ್ನು ಪತ್ರಿಕೆಗಳಲ್ಲಿ ಬರೆಯುವವರು ಅದು ಹೇಗೆ ತಪ್ಪದೇ ವಾರ ವಾರವು ಓದುಗರಿಗೆ ನೀಡುತ್ತಾರೋ ಆಶ್ಚರ್ಯವಾಗುತ್ತದೆ. ಹೊಸ ಹೊಸ ವಿಷಯಗಳಿಂದ ನಮ್ಮನ್ನೆಲ್ಲಾ ಸಂಪ್ರಿತರನ್ನಾಗಿ ಮಾಡಿ ಪ್ರತಿ ವಾರವೂ ಅವರ ಲೇಖನಗಳಿಗಾಗಿ ನಾವುಗಳು ಕಾಯುವಂತೆ ಮಾಡುತ್ತಾರೆ.

ನಾನು ಅದೇ ರೀತಿ ಇಲ್ಲಿ ಏನಾದರೂ ಒಂದು ವಿಷಯದ ಬಗ್ಗೆ ವಾರ ವಾರವೂ ಬ್ಲಾಗಿಸಬೇಕು ಅಂದು ಕೊಂಡಿದ್ದೇ. ಆದರೆ ಅನಿವಾರ್ಯ ಕಾರಣಗಳಿಂದ ನನ್ನ ಕನಸು ನನಸಾಗಲಿಲ್ಲ. ಹೀಗಾಗಿ ಒಂದು ತಿಂಗಳಿನ ಮೇಲೆ ಇದರ ಕಡೆ ಕಣ್ಣು ಹಾಯಿಸುವುದು ಸಾಧ್ಯವಾಗಲಿಲ್ಲ. ಹೌದು ಯಾಕೆ ಬರೆಯಬೇಕು? ಇದನ್ನು ಯಾರು ಓದುತ್ತಾರೆ? ಗೊತ್ತಿಲ್ಲ!

ಅದರೂ ಈ ರೀತಿ ಏನಾದರೂ ಯಾವುದಾದರೂ ಗೊತ್ತಿರುವ ವಿಷಯದ ಮೇಲೆ ಕನ್ನಡದಲ್ಲಿ ಪ್ರಬಂಧ ಬರೆಯುವುದು ನನಗೊಂತೂ ಖುಷಿಯನ್ನು ಕೊಡುತ್ತದೆ. ಆದ್ದರಿಂದ ಈ ನನ್ನ ಸ್ವಾರ್ಥವನ್ನು ಪೂರೈಸಿಕೊಳ್ಳಲು ಈ ರೀತಿಯ ಬರವಣಿಗೆ.

ನಾನು ನಮ್ಮ ಯಾಂತ್ರಿಕ ಬೆಂಗಳೂರಿನ ದುಡಿಮೆಗಾರರ ಬಗ್ಗೆ ಕನಿಕರ ಪಟ್ಟು ಕೊಂಡಿದ್ದೇ. ಇಲ್ಲಿ ಏನಿದೆ ಮಾರಾಯರ್ರೆ ಅದೇ ಮಾಮೂಲು ಬದುಕು ಒಬ್ಬರನ್ನು ಕಂಡರು ಒಬ್ಬರಾದರೂ ನಗುವನ್ನು ಕೊಡದ ಅದೇ ನೀರಸ ಮುಖಗಳು. ನಿತ್ಯ ಪ್ರತಿ ದಿನ, ತಿಂಗಳುಗಟ್ಟಲೆ ಕಂಪನಿಯ ಕ್ಯಾಬ್ ಗಳಲ್ಲಿ ಪ್ರಯಾಣಿಸಿದರೂ ಒಬ್ಬರೂ ಸಹ ಪರಿಚಯವಿಲ್ಲದ ರೀತಿ ವರ್ತಿಸುವುದು. ಮುಖ ಪರಿಚಯವಿದ್ದರೂ ಮಾತನ್ನಾಡದೇ ಅವರು ಅವರ ಸೀಟ್ ನಲ್ಲಿ ಕೂತು ಕಿವಿಗೆ ಮೊಬೈಲ್ ಮೈಕ್ರೊ ಫೊನ್ ಸಿಗಿಸಿಕೊಂಡು ಕಿಟಿಕಿಯಿಂದ ಹೊರಗಡೆ ನೋಡುತ್ತಲೂ. ಎಸ್ ಎಮ್ ಎಸ್ ಕುಟ್ಟುತ್ತಲೂ, ಅವು ಇವು ಇಷ್ಟವಾದ ಎಸ್. ಎಮ್. ಎಸ್. ಓದಿ ತಾನೇ ತಾನೇ ನಗುತ್ತಲೂ, ಇಲ್ಲವಾದರೆ ಯಾರೊಡನೆಯಾದರೂ ಗಂಟೆಗಟ್ಟಲೆ ಪಿಸು ಪಿಸು ದ್ವನಿಯಲ್ಲಿ ಸೆಲ್ ನಲ್ಲಿ ಮಾತನಾಡುತ್ತಲೂ ಅಥವಾ ನಿದ್ದೆಗೆ ಜಾರಿ ತಮ್ಮ ಕನಸಿನ ಲೋಕಕ್ಕೆ ಹಗಲಿನಲ್ಲಿ ಪ್ರಯಾಣಿಸುತ್ತಿರುವುದು.

ಈ ರೀತಿಯ ಬೊರಿಂಗ್ ದರ್ಶನವನ್ನು ನಾವುಗಳು ನಮ್ಮ ದಿನ ನಿತ್ಯ ಗೊತ್ತಿದ್ದು ಗೊತ್ತಿಲ್ಲದವರ ರೀತಿಯಲ್ಲಿ ಕಾಲ ಕಳೆಯುವುದನ್ನು ನೋಡಿದರೆ, ಈ ಬೆಂಗಳೂರು ಟ್ರಾಫಿಕ್ ನಲ್ಲಿ ಯಾಕಾದರೂ ಆಫೀಸ್ ಗೆ ಹೋಗುತ್ತಿದ್ದೇನೋ ಎನಿಸದಿರದು.

ಆದರೊ ಈ ರೀತಿಯ ವಾತವರಣವನ್ನು ಬದಲಾಯಿಸುವ ಜಾಣ್ಮೆ ನಮ್ಮ ನಮ್ಮ ಕೈಯಲ್ಲಿಯೇ ಇದೆ. ಅದಕ್ಕೆ ಬೇಕಾಗಿರುವುದು. ಪರಸ್ಪರ ನಮಗೆ ಗೊತ್ತಿರುವ ನಮ್ಮ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ಸ್ವಲ್ಪ ಗೆಳೆತನ, ಸಂಬಂಧಗಳನ್ನು ಇಟ್ಟುಕೊಂಡರೆ. ನಾವುಗಳು ಪಯಣಿಸುವ ನಮ್ಮ ಕ್ಯಾಬ್ ಗಳ ಮೌನವನ್ನು ಮಜವಾಗಿ ನಾವು ಇಷ್ಟ ಪಡುವ ನಮ್ಮ ನಮ್ಮ ಮನೆಯ ವಾತವಾರಣಗಳಂತೆ ಮಾಡಿಕೊಂಡು ಹತ್ತು ಹಲವು ವಿಚಾರಗಳನ್ನು ಪರಸ್ಪರ ಹಂಚಿಕೊಂಡು ಹಗುರಾಗಬಹುದು.

ಪ್ರತಿಯೊಬ್ಬರಲ್ಲೂ ಕೆಲಸವನ್ನು ಮಾಡುವುದನ್ನು ಹೊರತುಪಡಿಸಿ ಹಲವಾರು ಅತಿ ಮುಖ್ಯವಾದ ತಮ್ಮ ಬಾಲ್ಯ, ವಿದ್ಯಾರ್ಥಿ ದಿನಗಳಲ್ಲಿ ಇರುವಂತ ವ್ಯಕ್ತಿತ್ವ, ನಿಪುಣತೆ ಹಲವು ರಂಗದಲ್ಲಿ ಇರುತ್ತವೆ. ಈ ನಮ್ಮ ಕೆಲಸದ ಜಂಜಾಟದಲ್ಲಿ, ಜೀವನವೆಂಬ ಓಟದಲ್ಲಿ ಅವುಗಳನ್ನೆಲ್ಲಾ ಕಟ್ಟಿ ಮೂಲೆಗೆ ಇಟ್ಟು ಆಫೀಸ್ ಆಯ್ತು ಮನೆಯಾಯ್ತು ಎಂಬಂತೆ ಗುಮ್ಮರಾಗಿ ಬದುಕುವುದನ್ನು ತಪ್ಪಿಸಬಹುದು.

ಹೊಸ ಹೊಸ ಸ್ನೇಹಿತರನ್ನು ನಮ್ಮ ಮನದಾಳದ ನೋವು ನಲಿವುಗಳನ್ನು ಕೇಳುವ ಕೇಳುಗರನ್ನಾಗಿ ಮಾಡಿಕೊಳ್ಳಬಹುದು.ವಿವಿಧ ಸಮಸ್ಯೆಗಳಿಗೆ ಅವರಿಂದ ನಾನಾ ಮುಖಗಳ ಸಲಹೆ ಸಾಂಗತ್ಯವನ್ನು ಪಡೆಯಬಹುದು.

ನಾನು ನಮ್ಮ ಹಳೆಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಮುಖ್ಯ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದಿದಾಗ ಅವರುಗಳು ತಮ್ಮ ತಮ್ಮಲ್ಲಿಯೇ ಸಮಾನ ಮನಸ್ಕರ ಸ್ನೇಹಕೂಟವನ್ನು ತಮ್ಮ ಮನೆಯ ಹತ್ತಿರ ಅಥವಾ ತಾವು ಕೆಲಸ ಮಾಡುವ ಕಛೇರಿಗಳಲ್ಲಿ ಅಥವಾ ತಾವು ಪ್ರತಿದಿನ ಹೋಗುವ ಹೋಟೆಲ್, ಬಾರ್ ಜಾಗಗಳಲ್ಲಿ ಇಟ್ಟುಕೊಂಡು ಪ್ರತಿದಿನ ತಪ್ಪದೇ ಗೊತ್ತಾದ ಸಮಯದಲ್ಲಿ ಪ್ರತಿಯೊಬ್ಬರೂ ಸೇರಿ ತಮ್ಮ ತಮ್ಮಲ್ಲಿ ತಾವುಗಳು ರಚಿಸಿದ ಕಥೆ, ಕವನಗಳು, ಹಾಡುಗಳನ್ನು ಮತ್ತು ಹತ್ತು ಹಲವು ವಿಚಾರಗಳನ್ನು ಎಲ್ಲರ ಮುಂದೆ ಇಟ್ಟು ಎಲ್ಲಾರ ಅಭಿಪ್ರಾಯಗಳನ್ನು ಕೇಳುತ್ತಿದ್ದರು.

ಇದು ಈಗ ಯಾಕೆ ಇಲ್ಲಾ ಅಂದುಕೊಂಡಿದ್ದೆ. ಮತ್ತು ಇದು ಎಲ್ಲಾ ಕಾಲದ ಮಹಿಮೆ ಅದು ಅವರ ಕಾಲ. ಇದು ನಮ್ಮ ಕಾಲ. ಅದರೂ ಎಲ್ಲಾ ಕಾಲಗಳು ಒಂದೇ, ಜನಗಳು ಬೇರೆ ಬೇರೆಯಾಗಬಹುದು ಮತ್ತು ಅವರುಗಳ ಅಭಿರುಚಿ ಬದಲಾಗಿರಬಹುದು. ಪ್ರತಿಯೊಬ್ಬರಿಗೂ ಎಲ್ಲೂ ಒಂದು ಮನದ ಮೂಲೆಯಲ್ಲಿ ಆ ರೀತಿಯ ಒಂದು ಸ್ನೇಹ ಬಳಗ ಬೇಕಾಗಿರುತ್ತದೆ. ಅಲ್ಲಿ ಅವರುಗಳು ತಮ್ಮ ವಯಸ್ಸಿನ ತಾರತಮ್ಯವನ್ನು ಮರೆತು ತಮ್ಮ ತುಂಟಾಟ, ತಮ್ಮ ಪ್ರೀತಿ ಪಾತ್ರ ದಿನಗಳ ಪಾತ್ರಗಳನ್ನು ಅಭಿನಯಿಸೋಣ ಎನ್ನುತ್ತಿರುತ್ತದೆ.

ಅದಕ್ಕೆ ಇಂದು ಆ ರೀತಿಯ ಯಾವುದೇ ಸ್ನೇಹಮಹಿ ವಾತವರಣವಿಲ್ಲದ ಕಾರಣ ಮನಸ್ಸಿನ ಒತ್ತಡ ನಿವಾರಣ ಜಾಗವಿಲ್ಲದ ಕಾರಣ, ಅತಿ ಚಿಕ್ಕ ವಯಸ್ಸಿಗೆ ಬಿ.ಪಿ, ಶುಗರ್ ನಾನಾ ರೀತಿಯ ಕಾಯಿಲೆಗಳ ಗುಲಾಮರಗುತ್ತಿದ್ದೇವೆ. ಯೋಚಿಸಿ ನಾವು ನಿತ್ಯ ಎಷ್ಟು ಸಮಯ ಹಗುರಾಗಿ ಮನ ಬಿಚ್ಚಿ ನಗುತ್ತಿದ್ದೇವೆ? ನಮಗೆ ಅನಿಸಿದ್ದನ್ನು ನಾವು ಯಾರಿಗಾದರೂ ಹೇಳಿದ್ದೇವೆಯೇ? ನಮ್ಮಲ್ಲಿರುವ ವಿಭಿನ್ನ ಕೌಶ್ಯಲ್ಯಕ್ಕೆ ಯಾರಿಂದಲಾದರೂ ಉತ್ತೇಜನ ಸಿಕ್ಕಿರುವುದೇ? ಕಲ್ಪಿಸಲೂ ಸಾಧ್ಯವಾಗುವುದಿಲ್ಲ.

ಈ ರೀತಿಯ ಚಿಕ್ಕ ಚಿಕ್ಕ ವಿಷಯಗಳು ನಮ್ಮ ಜೀವನದ ಒಂದು ಮುಖಕ್ಕೆ ಅತಿ ಮುಖ್ಯವಾಗಿರುತ್ತವೆ. ಅದರ ಬಗ್ಗೆ ಸ್ವಲ್ಪ ಯೋಚಿಸಿದರೆ ಎಲ್ಲಾರ ಜೊತೆ ನಮ್ಮ ಬಾಳ ದಿನಗಳನ್ನು ಸಂತೋಷವಾಗಿ ಇಟ್ಟು ರಸಮಯಗೊಳಿಸಬಹುದು.

ಮೇಲೆ ಹೇಳಿದ ಕನಸಿನ ಪ್ರಫುಲತೆಯ ಸ್ನೇಹಮಹಿ ಸಿಹಿ ವಾತವರಣ ನಿರ್ಮಾಣ ರ್ಸ್ಫೂರ್ತಿ: ನನ್ನ ಕ್ಯಾಬ್ ಗೆಳೆಯರಾದ: ಸಾಗರ ಕೃಷ್ಣ, ರಮ್ಯ, ಯೊಗೀಶ್, ವಿನುತ, ಗುರು,ಇರಣ್ಣ, ಲಕ್ಷ್ಮೀಶ್,ಅಭಯ್ ಮತ್ತು ವಿಜಯ್

ಬುಧವಾರ, ಆಗಸ್ಟ್ 4, 2010

ಕವಲು ಹೊಸಕಿರಣ





ಎಸ್. ಎಲ್ ಭೈರಪ್ಪರನವರ ಹೊಸ ಕಾದಂಬರಿ "ಕವಲು" ಕಳೆದ ಒಂದು ತಿಂಗಳಿನಿಂದ ಸಾಹಿತ್ಯ ಲೋಕದಲ್ಲಿ ವಿವಿಧ ರೀತಿಯಲ್ಲಿ ಚರ್ಚಿತವಾಗುತ್ತಿರುವ ವಸ್ತುವಾಗಿದೆ. ಭೈರಪ್ಪರನವರು ಬಹು ದಿನದ ನಂತರ "ಅವರಣ" ದ ಬಳಿಕ ತಮ್ಮ ಮತ್ತೊಂದು ಕೃತಿಯ ಮೂಲಕ ಕನ್ನಡ ಓದುಗರಿಗೆ ಹೊಸತನದ ಜೊತೆಗೆ ಓದುವ ಖುಷಿಯನ್ನು ಕೊಟ್ಟಿದ್ದಾರೆ.


ಕನ್ನಡದಲ್ಲಿ ಅತ್ಯಂತ ಬೇಡಿಕೆಯ ಕಾದಂಬರಿಗಳನ್ನು ರಚಿಸುವಲ್ಲಿ ಇವರು ಒಬ್ಬರು. ಕನ್ನಡದ ಸಾಮಾನ್ಯ ಓದುಗ ಇವರ ಹೊಸ ಕಾದಂಬರಿಗಾಗಿ ಜಾತಕ ಪಕ್ಷಿಯಂತೆ ಕಾದುಕೊಂಡಿದ್ದು ಬಿಡುಗಡೆಯಾದ ದಿನವೇ ಖರೀದಿಸಿ ಓದಬೇಕು ಎಂಬ ಮನಸ್ಸಿನಲ್ಲಿರುವನು ಎಂದರೇ ಅತಿಶಯೋಕ್ತಿಯಲ್ಲ. ಯಾಕೆಂದರೆ ಜನರ ಮನವನ್ನು ಎಲ್ಲಾ ರೀತಿಯಲ್ಲಿ ಸೆಳೆಯುವ ಜಾಣ್ಮೆಯನ್ನು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಅದ್ದರಿಂದಲೇ ಅಯಸ್ಕಾಂತದ ರೂಪದಲ್ಲಿ ಅವರ ಎಲ್ಲಾ ಕೃತಿಗಳು ಕನ್ನಡ ಮನೆ ಮನದಲ್ಲಿ ಇಂದಿಗೂ ರಾರಾಜಿಸುತ್ತಿವೆ.


ಭೈರಪ್ಪನವರ ಯಾವುದೇ ಕೃತಿ ಹೊರಬಂದರು ಅದು ಸಾಹಿತ್ಯ ವಲಯದಲ್ಲಿ ಸಂಚಲನವನ್ನುಂಟು ಮಾಡುವಂತಾಗುತ್ತದೆ. ಅತಿ ಹೆಚ್ಚು ವಿಮರ್ಶೆಗೆ ಒಳಪಡುವ ಲೇಖಕ ಮತ್ತು ಅವನ ಕೃತಿಯೆಂದರೇ ಅದು ಭೈರಪ್ಪನವರ ಕಾಂದಬರಿಗಳು. ಇವರ ಕೃತಿ ಹೊರ ಬಂದವೆಂದರೆ ಅದರ ಹಿಂದೆಯೇ ಹತ್ತು ಹಲವು ಲೇಖಕರ ಕೃತಿಗಳು ಇವರ ಕೃತಿಯ ವಿರುದ್ಧವೇ ರಚಿಸಲ್ಪಡುತ್ತವೆ. ಅಂದರೆ ಯೋಚಿಸಿ! ಅವರ ಸಾಹಿತ್ಯ ಹೇಗೆ ಎಲ್ಲಾ ರೀತಿಯಲ್ಲಿ ಕೇವಲ ಸುಮ್ಮನೆ ಓದುವ ವಿಷಯವಾಗುವುದಿಲ್ಲ. ಅದು ಹತ್ತು ಹಲವು ರೀತಿಯಲ್ಲಿ ವಿಮರ್ಶೆ ಮತ್ತು ಚರ್ಚೆಗೆ ಒಳಪಡುತ್ತದೆ. ಮತ್ತು ಈ ರೀತಿಯ ಒಂದು ಚಿಂತನ-ಮಂಥನವನ್ನು ಇದುವರೆಗೂ ಯಾರ ಕೃತಿಗಳು ಒಳಪಟ್ಟಿಲ್ಲ ಎನ್ನುವುದು ಹಲವು ವಾರಗಳಿಂದ ಅವರ "ಕವಲು" ಹೊಸ ಕಾದಂಬರಿಯ ಬಗ್ಗೆ ವಿಶ್ವದ್ಯಾಂತ ಬರುತ್ತಿರುವ ಋಣ ಮತ್ತು ಧನಾತ್ಮಕ ಅಭಿಪ್ರಾಯಗಳೇ ಸಾಕ್ಷಿ.


ಈ ಕವಲು ಕಾದಂಬರಿಯ ದಾಖಲೆಯನ್ನು ಗಮನಿಸಿದರೆ ಎಂಥವರಿಗೂ ಆಶ್ಚರ್ಯವಾಗುವುದು. ಕೃತಿ ಬಿಡುಗಡೆಗೆ ಮುನ್ನವೇ ಎರಡನೇ ಆವೃತ್ತಿ ಅಚ್ಚಾಗಿತ್ತು. ಮತ್ತು ಬಿಡುಗಡೆಯಾದ ದಿನವೇ ಮೊದಲ ಪ್ರಕಾಶನದ ಎಲ್ಲಾ ಪ್ರತಿಗಳು ಮಾರಾಟವಾಗಿವೆ. ಎರಡನೇ ದಿನವೇ ಮೂರನೇ ಮುದ್ರಣವನ್ನು ಕಂಡು, ನಾಲ್ಕನೇ ದಿನವೇ ಐದನೇ ಮುದ್ರಣವಾಗಿ ಒಂದು ವಾರಕ್ಕೇ ಆರನೇ ಮುದ್ರಣವನ್ನು ಕಂಡಿದೆ. ಮತ್ತು ಒಂದೇ ವಾರಕ್ಕೆ ಭಾರತದ ವಿವಿಧ ಭಾಷೆಗಳಿಗೆ ತರ್ಜುಮೆಯಾಗಲು ತಯಾರಗಿದೆ.


ಕನ್ನಡ ನೆಲವಲ್ಲದೇ ಭಾರತದ ಬೇರೆ ಬೇರೆ ರಾಜ್ಯಗಳಲ್ಲೂ ಅತಿ ಹೆಚ್ಚು ಬೇಡಿಕೆಯಿರುವ ಕನ್ನಡ ಕಾದಂಬರಿಗಳೆಂದರೇ ಅದು ಭೈರಪ್ಪನವರ ಕಾಂದಬರಿಗಳು. ಅತಿ ಹೆಚ್ಚು ಜನಪ್ರಿಯ ಕಾದಂಬರಿಕಾರರಲ್ಲಿ ಇವರು ಮೂದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇದು ನಮ್ಮ ಕರ್ನಾಟಕಕ್ಕೆ ಹೆಮ್ಮೆಯೇ ಸರಿ!


ಅವರ ಒಂದೊಂದು ಕಾದಂಬರಿಗಳು ಒಂದೊಂದು ರೀತಿಯಲ್ಲಿ ತಮ್ಮ ಛಾಪನ್ನು ಸ್ಥಾಪಿಸಿದ್ದಾವೆ. ಭಾರತ-ಭಾರತೀಯ ಸಂಸ್ಕೃತಿ,ನಮ್ಮ ಹಿಂದು ಸಂಸ್ಕೃತಿಯನ್ನು ,ಮಾನವ ಸಂಬಂಧಗಳು ಮತ್ತು ಕುಟುಂಬ ವ್ಯವಸ್ಥೆಯನ್ನು ಲೇಖಕರು ತಮ್ಮ ಕೃತಿಗಳ ಮೂಲಕ ಹೇಗೆ ನಿರೂಪಿಸಿದ್ದಾರೆ ಎಂದರೇ ಅದರ ಬಗ್ಗೆ ಎಂಥವರಿಗಾದರೂ ಕಾಳಜಿಯುಂಟಾಗುವಂತೆ ಮಾಡಿದ್ದಾರೆ.



ಅದಕ್ಕೆ ನಮ್ಮ ಜನಗಳು ಅಷ್ಟೊಂದು ಇಷ್ಟಪಟ್ಟು ಅವರ ಕಾದಂಬರಿಗಳನ್ನು ಮುಗಿ ಬಿದ್ದು ಓದುವುದು. ಅವರು ನೇಯುವ ಸಾಮಾಜಿಕತೆ ಮತ್ತು ಕೌಟಂಬಿಕ ನೆಲೆಯಲ್ಲಿ, ಮನುಷ್ಯ ಮನುಷ್ಯರ ನಡುವಿನ ಸಂಬಂಧ, ಸಂಸ್ಕೃತಿ ಮತ್ತು ಅದರ ನೀತಿ ಮೌಲ್ಯಗಳು. ನಮ್ಮ ಸಂಸ್ಕೃತಿಯ ಬಗ್ಗೆ ವ್ಯಕ್ತಿಯ ನೆಲೆಯಲ್ಲಿ ಹೇಗೆ ವೈರುಧ್ಯಗಳು ಉಂಟಾಗುವುವು ಎಂಬುದನ್ನು ಕಾದಂಬರಿಯ ವಿವಿಧ ಪಾತ್ರಗಳ ಪೋಷಣೆಯ ಮೂಲಕ ಮನನ ಮಾಡಿಸುತ್ತಾರೆ. ಅದಕ್ಕೆ ಸಾಕ್ಷಿಯೆಂದರೇ ವಂಶವೃಕ್ಷ, ದಾಟು, ತಂತು, ನಿರಾಕರಣ, ಗೃಹಭಂಗ ಇತ್ಯಾದಿ.


ಅವರ ಎಲ್ಲಾ ಹಳೆಯ ಕಾದಂಬರಿಗಳನ್ನು ಓದಿರುವ ಓದುಗ ಅವರಿಂದ ಇನ್ನೂ ಯಾವ ಯಾವ ಕೃತಿಗಳು ಬರುವುವೋ ಎಂದು ಕಾಯುವನು.


ಆದರೆ ನಾನು ಇತ್ತೀಚೆಗೆ "ಕವಲು" ಕಾದಂಬರಿಯ ಬಗ್ಗೆ ನಮ್ಮ ಬುದ್ಧಿವಂತ ಜನಗಳು ಮಾಡುತ್ತಿರುವ ವಿಮರ್ಶೆಯ ದಾಟಿಯನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಇಷ್ಟವಾಗಬಹುದು ಮತ್ತು ಅದೇ ಎಲ್ಲಾರ ಅಭಿರುಚಿಯಾಗಲಾರದು. ಕೆಲವು ವಿಮರ್ಶಕರು ಹೇಳುತ್ತಾರೆ ಭೈರಪ್ಪ ಸ್ತ್ರೀ ವಿರೋಧಿ,ಪ್ರಗತಿ ವಿರೋಧಿ, ಕಂದಾಚಾರ ಬೋಧಕ, ಸೆಕ್ಸ್ ವಿಜೃಂಭಕ ... ಹೀಗೆ ಹತ್ತು ಹಲವು ರೀತಿಯಲ್ಲಿ ಅವರ ಈ ಹೊಸ ಕಾದಂಬರಿಯ ಬಗ್ಗೆ ತಮ್ಮ ತಮ್ಮ ಬ್ಲಾಗ್, ಪತ್ರಿಕಾ ಲೇಖನಗಳಲ್ಲಿ ಚಿತ್ರಿಸುತ್ತಿರುವುದು ನಿಜವಾಗಿಯೂ ಬೇಸರದ ಸಂಗತಿ.


ಅವರು ಈ ಎಲ್ಲಾ ರೀತಿಯಲ್ಲಿ ತಮ್ಮ ವಿಚಾರಗಳನ್ನು ನಿರೊಪಿಸಲು ಕಾದಂಬರಿಯ ಮಾದ್ಯಮವನ್ನು ಬಳಸುವ ಅವಶ್ಯಕತೆಯಿರುವುದಿಲ್ಲ ಅಲ್ಲವಾ? ಕಾದಂಬರಿಯೇಂದರೆ ಅಲ್ಲಿ ಕೃತಿ ತನ್ನ ಪಾತ್ರಗಳ ಮೂಲಕ ಒಂದು ವಿಚಾರವನ್ನು ಸುತ್ತಲಿನ ಸನ್ನಿವೇಶ ಮತ್ತು ಪ್ರಸ್ತುತ ಭಾವನೆಗಳ ಸ್ಪಂದನೆಯ ಮುಖೇನ ಕೃತಿಕಾರನ ನಿರೀಕ್ಷೆಗೂ ಮೀರಿ ಬೆಳೆಯಬಹುದು ಮತ್ತು ಒಂದು ಸುಂದರ ಕಲಾಕೃತಿಯಾಗಿ ಅರಳಬಹುದು. ಇಲ್ಲಿ ಲೇಖಕನು ತನ್ನ ವಿಚಾರಗಳ ಭಾರವನ್ನು ಹಾಕಲು ಸಾಧ್ಯವಿಲ್ಲ. ಈ ರೀತಿ ಇರಬೇಕಾದರೇ ಇಡೀ ಕಾದಂಬರಿ ಕೇವಲ ಕೆಲವೇ ಕೆಲವು ವಿಚಾರಗಳ ಸುತ್ತ ಸುತ್ತಲು ಹೇಗೆ ಸಾಧ್ಯ? ಮತ್ತು ಅದು ಹೇಗೆ ಒಂದು ಕಾದಂಬರಿಯಾಗಿ ಮತ್ತು ಜನರ ಮೆಚ್ಚುಗೆಗೆ ಪಾತ್ರವಾಗಲು ಸಾಧ್ಯ?


ಕಾದಂಬರಿ ಓದುಗನನ್ನು ಹಿಡಿದಿಡುತ್ತದೆ ಎಂದರೇ ಯಾವುದೇ ಒಂದು ವಿಚಾರದಿಂದ ಅವನನ್ನು ಮಂತ್ರ ಮುಗ್ಧನಾಗಿ ಮಾಡಲು ಸಾಧ್ಯವಿಲ್ಲ. ಪಾತ್ರಗಳು ವಿವಿಧ ಸನ್ನಿವೇಶದಲ್ಲಿ ಹೇಗೆ ತಮ್ಮತನವನ್ನು ತೋರಿಸಿ ಅಲ್ಲಿ ಸಾಮಾಜಿಕ ಅಥವಾ ನೀತಿ ಮೌಲ್ಯಗಳನ್ನು ನಿರೂಪಿಸಿದಾಗ ಮಾತ್ರ ಅವುಗಳು ನಂಬಲರ್ಹ ವಿಚಾರವಾಗುತ್ತವೇ ವಿನಾಃ ಬರೀ ಯಾವುದೇ ಒಂದು ವಿಷಯದಿಂದಲ್ಲಾ.
ಇಷ್ಟಕ್ಕೂ ಕವಲಿನಲ್ಲಿರುವ ವಿಚಾರಗಳೇನೂ ಹೊಸ ಅಥವಾ ಅಪರಿಚಿತವಾದದ್ದಲ್ಲ. ಪಾತ್ರಗಳು ಸಹ ನಾವುಗಳು ನಮ್ಮ ಇಂದಿನ ಈ ಹೈಟೆಕ್ ಯುಗದಲ್ಲಿ ಕಾಣುವಂತ ಪಾತ್ರಗಳೇ. ಅವುಗಳ ಮಟ್ಟಿಗೆ ವೇಗದಲ್ಲಿ ಇಲ್ಲದಿದ್ದರೂ ಅವುಗಳ ಜಾಡನ್ನೇ ಹಿಡಿದಿರುವ ಎಷ್ಟೋ ಭಕ್ತರೂ ಇಂದು ಹೆರಳವಾಗಿ ಇಲ್ಲಿ ಕಾಣಬಹುದು ಅಲ್ಲವಾ?


ಕವಲು ಇಂದಿನ ನಮ್ಮಲ್ಲಿ ಕಾಣುತ್ತಿರುವ ಕತೆಯನ್ನೇ ಹೊಂದಿರುವುದರಿಂದ ನಮಗೆ ಅಷ್ಟೊಂದು ಗಂಭೀರವಾದ ಕತೆಯಾಗಿದೆ ಎಂದು ಅನಿಸುವುದಿಲ್ಲ. ತೀರ ಪ್ರಸ್ತುತ ಮತ್ತು ತೀರ ಮಾಮೊಲಿ ಕತೆಯಾಗಿ ಎಲ್ಲವೂ ನಮಗೆ ತಿಳಿದಿದೆಯೇನೂ ಎನಿಸುತ್ತದೆ. ಆದರೆ ಅಲ್ಲಿ ಲೇಖಕರು ತಾವು ಸೃಷ್ಟಿಸಿರುವ ಪಾತ್ರಗಳ ಮೂಲಕ ಕೊಡುತ್ತಿರುವ ಸಂದೇಶ ಮತ್ತು ಎಚ್ಚರಿಕೆಯ ಮಾತುಗಳು ನಮ್ಮ ಇಂದಿನ ಭಾರತೀಯ ಕೌಟಂಬಿಕ ವ್ಯವಸ್ಥೆಗೆ ಒಂದು ಕಿವಿಮಾತಾಗಿದೆ ಎಂದರೇ ತಪ್ಪಲ್ಲ.


ನಾವುಗಳು ಅತಿ ಮುಂದುವರೆಯುತ್ತ ಸಾಮಾನ್ಯವಾಗಿ ಅತಿ ಚಿಕ್ಕ ಚಿಕ್ಕ ವಿಷಯಗಳನ್ನು ಬಿಟ್ಟು ಕೊಡುತ್ತಾ, ಹೋಗುತ್ತಾ ನಗಣ್ಯಗೊಳಿಸುತ್ತಿರುವುದು ಮುಂದೊಂದು ದಿನ ಈ ನಮ್ಮ ಗಟ್ಟಿ ಕೌಟಂಬಿಕ ಬೇರನ್ನೇ ಅಲ್ಲಾಡಿಸುವ ದಿನಗಳು ಬರುವ ಮುನ್ಸೊಚನೆಯಾಗಿದೆ. ಹಾಗೆಯೇ ಕಾದಂಬರಿಯಲ್ಲಿ ಬರುವ ಇತ್ತೀಚಿನ ನವ ತರಣ/ತರುಣಿ ಜನಾಂಗ ನಮ್ಮ ಇಂದಿನ ಸ್ಥಿತಿಯ ಬಗ್ಗೆ ಅರಿವುಗೊಂಡು ಅದಕ್ಕಾಗಿ ನಮ್ಮ ಹಳ್ಳಿಯ ಕುಟುಂಬ ಮತ್ತು ಸಂಬಂಧಗಳ ವ್ಯವಸ್ಥೆಯನ್ನು ನೋಡಿ ಅದರ ನವೀಕರಣಕ್ಕೆ ಮತ್ತು ರಕ್ಷಣೆಗೆ ಮುಂದಾಗುತ್ತಿರುವುದು ಆಶದಾಯಕವಾದ ವಿಷಯ.


ಈ ರೀತಿಯ ಒಂದು ಅರಿವನ್ನುಂಟು ಮಾಡುವಲ್ಲಿ ಕವಲು ಹೊಸ ಸಾಧನವಾಗಿದೆ ಎಂದು ಮಾತ್ರ ಹೇಳಬಹುದು. ಸಾಕಷ್ಟು ವಿಷಯಗಳನ್ನು ಒಂದೇ ಕಡೆ ನಿರೀಕ್ಷಿಸುವುದು ತಪ್ಪು ಸಹ. ಆದರೆ ಅದರ ಎಳೆ ಮತ್ತು ನಮ್ಮ ಸಂಸ್ಕೃತಿ ಮತ್ತು ಮಾನವನ ಸಂಬಂಧಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಇರಬೇಕಾದ ಕಾಳಜಿ ಈ ಮೂಲಕ ಜಾಗೃತವಾಗಲಿ ಎಂಬುದು ಎಲ್ಲಾ ಓದುಗರ ಮತ್ತು ಭೈರಪ್ಪನವರ ಆಸೆಯಾಗಿದೆ ಅಲ್ಲವಾ!


ಅದು ಬಿಟ್ಟು ಕಾದಂಬರಿಗೆ ಸುಖ ಸುಮ್ಮನೇ ಒಂದು ಗಡಿ ರೇಖೆಯನ್ನು ಅಡ್ಡಪಟ್ಟಿಯನ್ನು ಕಟ್ಟುವುದು ಬೇಡ. ಇಲ್ಲವಾದರೇ ನಮ್ಮ ಜನಗಳು ಯಾಕೇ ಇನ್ನೂ ಭೈರಪ್ಪನವರಿಂದ ಉತ್ತಮ ಉತ್ತಮ ಕಾದಂಬರಿಗಳು ಬರಲಿ ಎಂದು ಕಾಯುತ್ತಿರುತ್ತಾರೆ. ಸಾಮಾನ್ಯ ಓದುಗನಿಗೆ ಯಾವ ಪಂಥ, ಸಾಹಿತ್ಯ ವಿಂಗಡಣೆಗಳು ಬೇಕಾಗಿಲ್ಲ. ಅವನಿಗೆ ಆ ಕ್ಷಣಕ್ಕೆ ಅದು ಇಷ್ಟವಾಗಿ ತನ್ನ ಮನಸ್ಸಿಗೆ ತಾಕಿ ತನ್ನ ಚಿಂತನೆಯ ದಾಟಿಗೆ ಮೀಟು ತಂತಿಯಾದರೆ ಸಾಕು. ಇಂಥ ಅದೇಷ್ಟೋ ಕೃತಿಗಳಿಗೆ ತನ್ನ ಮನದ ಮೂಲೆಯಲ್ಲಿ ಯಾವಾಗಲೂ ಒಂದು ಜಾಗವನ್ನು ಗಟ್ಟಿಯಾಗಿ ಇಟ್ಟಿರುತ್ತಾನೆ ಅಷ್ಟೇ.

ಮಂಗಳವಾರ, ಜುಲೈ 27, 2010

ನಾವೇಲ್ಲಿ ಇದ್ದೀವಿ!!

ಮೂನ್ನೆ ನಾನು ಕಳೆದ ವಾರದ ಪ್ರಜಾವಾಣಿ ಪತ್ರಿಕೆಗಳನ್ನು ತಿರುವಿ ಹಾಕುವ ಸಮಯದಲ್ಲಿ ಸವಣೂರಿನಲ್ಲಿ ನಡೆದ ಮಲವನ್ನು ಮೈ ಮೇಲೆ ಸುರಿದು ಕೊಂಡ ಘಟನೆಯ ಚಿತ್ರ-ವರದಿಯನ್ನು ಓದಿದಾಗ ನಿಜವಾಗಿಯೂ ನಾವು ಯಾವ ಜಗತ್ತಿನಲ್ಲಿ ಇದ್ದೀವಿ ಎಂದು ನನ್ನ ಮನಸ್ಸು ಕಸಿವಿಸಿಯಾಯಿತು. ಯಾರೇ ಆಗಲಿ ಮನುಷ್ಯತ್ವವಿರುವವರು ಬೇಸರ ಪಡುವ ಮತ್ತು ಮರುಗುವ ಘಟನೆ ಇದಾಗಿದೆ.

ನಾವುಗಳು ನಮ್ಮ ನಮ್ಮಲ್ಲಿಯೇ ನಾವು ಹಾಗೇ ಮುಂದುವರಿದ್ದೀವಿ. ಹೀಗೆ ಪ್ರಪಂಚದಲ್ಲಿಯೇ ನಮ್ಮ ಭಾರತ ಮತ್ತು ಕರ್ನಾಟಕ ಮಿಂಚಿನಂತೆ ಸೆಳೆಯುವ ಚಮತ್ಕಾರಗಳನ್ನು ಮಾಡಿಬಿಟ್ಟಿವಿ ಅಂದು ಕೊಳ್ಳುವ ಸಮದಲ್ಲಿಯೇ ಈ ರೀತಿಯ ಅನಾಗರೀಕತೆಯ ಮುಂದುವರಿಕೆಯೇನೋ ಎಂಬಂತೆ ಎಲ್ಲರೂ ತಲೆ ತಗ್ಗಿಸುವಂತೆ ಇರುವ ಸಮಾಜಿಕ ಅನಿಷ್ಟ ಪದ್ಧತಿಗಳು ಜೊತೆ ಜೊತೆಯಲ್ಲಿಯೇ ಸಾಗುತ್ತಿರುವುದು ವಿಪರ್ಯಾಸ.

ಹಾಯ್ ಬೆಂಗಳೂರಿನಲ್ಲಿ ಬಂದಿರುವ ರವಿಬೆಳೆಗೆರೆಯವರ ಲೇಖನವನ್ನು ಸಮಾಜದ ಎಲ್ಲಾ ಬುದ್ಧಿವಂತರು, ರಾಜಕರಣಿಗಳು, ಅಧಿಕಾರಿಗಳು, ಚಿಂತನ ಜೀವಿಗಳು ಓದುವುದು ಒಳಿತು."ರಾಮ ಭಕ್ತ ರಾಜ್ಯ ಕಂಡ ಮಲ ಸ್ನಾನ" ಅಗ್ರ ಲೇಖನ ಮತ್ತು "ರಾಜಕೀಯ ನಾಯಕರ ತಟ್ಟೆಗಳಲ್ಲಿ ಕಾಣಿಸಿದ್ದು ಸವಣೂರಿನ ಭಂಗಿಗಳ ಮಲ" ಸಂಪಾದಕೀಯದಲ್ಲಿ ಅವರು ತೋಡಿಕೊಂಡಿರುವ ನೋವು ಮತ್ತು ಕಳಕಳಿ ಎಲ್ಲಾ ನಾಗರಿಕರುಗಳಿಗೂ ಉಂಟಾಗಬೇಕು.

ನಾವು ನಮ್ಮ ಜೀವನದ ಉನ್ನತ ಮಟ್ಟವನ್ನು ಕೇವಲ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಕೆಲವೇ ಕೆಲವು ಪಟ್ಟಣಗಳನ್ನು ನೋಡಿ ನಿರ್ಧರಿಸಬಾರದು. ಇನ್ನೂ ಅದೇಷ್ಟೋ ಕುಗ್ಗ್ರಾಮಗಳು ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಅದು ನಮ್ಮ ಸರ್ಕಾರದ ಕಣ್ಣಿಗೆ ಬಿಳದ ರೀತಿಯಲ್ಲಿ ಅದೇ ಕಷ್ಟ ನಷ್ಟಗಳಲ್ಲಿ ಹಳ್ಳಿಯ ಜೀವನದಲ್ಲಿ ನರಳುತ್ತಿರುವುವೇನೋ ಬಲ್ಲವರಿಲ್ಲ. ಈ ರೀತಿಯ ಘಟನೆಗಳ ಮೂಲಕ ಅವುಗಳು ನಮ್ಮ ಕಣ್ಣಿಗೆ ಬಿಳುತ್ತವೆ.

ನಮ್ಮ ಸಮಾಜದಲ್ಲಿ ನಾವುಗಳು ಎಲ್ಲರೂ ಸುಖವಾಗಿರಬೇಕು ಎಂದು ಸರ್ಕಾರ ವಿವಿಧ ಯೋಜನೆಗಳ ಮಹಾಪೂರವನ್ನೇ ಹರಿಸಿದರೂ ಅವುಗಳ ಪ್ರಯೋಜನ ಯೋಗ್ಯರಿಗೆ ಸಮಯಕ್ಕೆ ಸರಿಯಾಗಿ ಸಿಗದೇ ಇರುವುದು, ಈ ರೀತಿಯ ಪದ್ಧತಿಗಳು ಇನ್ನೂ ಜೀವಂತವಾಗಿ ಜಾರಿಯಾಗಿ ಇರಲು ಸಾಧ್ಯ.

ನಾವುಗಳು ನಮ್ಮ ಸಾಕ್ಷರತೆಯನ್ನು ನೂರಕ್ಕೆ ನೂರು ಹಿಡೇರಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಂಡರೇ ಹಳ್ಳಿಗಳಲ್ಲಿ ಇನ್ನೂ ಅದೇಷ್ಟೋ ಮಕ್ಕಳು ವಿವಿಧ ಕಾರಣದಿಂದ ಶಾಲೆಯ ಮುಖವನ್ನೇ ಕಾಣದ ಸ್ಥಿತಿಯಲ್ಲಿ ಇರುವುದು ಬಹುಮುಖ್ಯ ಸಮಸ್ಯೆ.

ಹೌದು, ಈ ರೀತಿಯ ಅನಿಷ್ಟ ಪದ್ಧತಿಗಳ ಜೀವಂತಿಕೆಗೆ ನಮ್ಮ ಜನಗಳಲ್ಲಿ ಸಮಯಕ್ಕೆ ಸರಿಯಾಗಿ ಅರಿವು ಮೂಡದಿರುವುದು ಒಂದು ಕಾರಣ. ಅವರಲ್ಲಿ ಅರಿವು ಬರಬೇಕು ಅಂದರೆ ಅವರಲ್ಲಿ ಶಿಕ್ಷಣದ ಕ್ರಾಂತಿಯನ್ನು ಮೂಡಿಸಬೇಕಾದದ್ದು, ನಮ್ಮ ಸರ್ಕಾರ ಮತ್ತು ನಮ್ಮ ಬುದ್ಧಿವಂತ ಜನಗಳ ಕರ್ತವ್ಯ. ಇಲ್ಲವಾದರೇ ಅವರುಗಳಿಗೆ ತಾವು ಜೀವಿಸುತ್ತಿರುವುದೇ ಅಮೂಲ್ಯ ಬದುಕು ಎಂಬ ರೀತಿಯಲ್ಲಿ ಯಾವುದೇ ರೀತಿಯ ದಬ್ಬಾಳಿಕೆಯನ್ನು ಮತ್ತು ಅನಿಷ್ಟಕಾರಿ ಕೆಲಸಗಳನ್ನು ವಂಶಪಾರಂಪರ್ಯವಾಗಿ ಸಾಗಿಸಿಕೊಂಡು ಬದುಕುತ್ತಾರೆ. ಮತ್ತು ಅವರ ಮುಂದಿನ ಸಂತತಿಯು ಸಹ ಇಂದಿನ ಈ ಮುಂದುವರೆದ ಯುಗದಲ್ಲಿ ಬದುಕಲು ಅರ್ಹರಲ್ಲವೇನೋ ಎಂಬಂತೆ ಸಾವಿರ ವರ್ಷದ ಹಿಂದಿನ ಬದಕನ್ನು ಸಹನೀಯವಾಗಿ ಜೀವಿಸುವಂತಾಗುತ್ತದೆ.

ಮನುಷ್ಯನ ತಿಳುವಳಿಕೆ ಮತ್ತು ತನ್ನ ಸುತ್ತಲಿನ ಸಮಾಜದಲ್ಲಿನ ಈ ರೀತಿಯ ನೋವು ನಲಿವುಗಳನ್ನು ತಿಳುವಳಿಕೆ ಇರುವ ಮಂದಿಗಳು ಸರಿಪಡಿಸಲು ಕೈಲಾದ ಸಹಾಯ ಮಾಡಬೇಕಾದದ್ದು ಕರ್ತವ್ಯ. ಅಲ್ಲಿನ ಊರಲ್ಲಿ ಅಲ್ಲಿನ ಜನಗಳು ತಮ್ಮ ಜೊತೆಯಲ್ಲಿರುವ ತಮ್ಮ ಜನಗಳಿಂದಲೇ ತಮ್ಮ ಮಲವನ್ನು ಹೊರುವಂತೆ ಮಾಡಿಕೊಂಡಿರುವ ಪದ್ಧತಿಯನ್ನು ಕಂಡರೇ ನಿಜವಾಗಿಯೂ ನಾವುಗಳು ಯಾವ ರೀತಿಯಲ್ಲಿ ಬದುಕುತ್ತಿದ್ದೇವೆ ಎಂದಾಂತಾಗುತ್ತದೆ ಅಲ್ಲವಾ?

ನಮ್ಮಲ್ಲಿರುವ ಚಿಕ್ಕ ಚಿಕ್ಕ ಸಮಸ್ಯೆಗಳನ್ನೇ ದೊಡ್ಡದು ಮಾಡಿಕೊಂಡು ಬಡಿದಾಡುತ್ತಿರುವ ನಮ್ಮ ಜನಗಳು ಇಂಥ ರೀತಿಯ ನೋವುಗಳಿಗೆ ಸ್ಪಂದಿಸುವ ಮನಸ್ಸನ್ನು ಮಾಡಬೇಕು. ಮನುಷ್ಯರನ್ನು ಮನುಷ್ಯರಾಗಿ ನೋಡುವಂತಾಗಬೇಕು. ಆಗ ಮಾತ್ರ ಸುಖಿ ಸಮಾಜದ ಕನಸು ನನಸಾಗಲು ಸಾಧ್ಯ.

ಬುಧವಾರ, ಜುಲೈ 21, 2010

ಆಷಾಢದ ಮನ


ಒಂದು ತಿಂಗಳೂ ಆಷಾಢ ಹೊಸದಾಗಿ ಮದುವೆಯಾದ ಜೋಡಿಗಳಿಗೆ ಬೇರೆಯಾಗಿರಬೇಕಾದ ವಿರಹ. ಸಡಗರದಿಂದ ಮದುವೆಯಾಗಿ ಹೊಸ ಕ್ಷಣಗಳಿಗಾಗಿ ಕಾತುರತೆಯಿಂದ ಕಾದದ್ದು ಈ ಮಾಸಕ್ಕಾಗಿಯೇ ಎಂಬಂತೆ ತನ್ನ ಮನದನ್ನೆಯನ್ನು ತವರು ಮನೆಗೆ ಬಿಟ್ಟು ಬಂದು, ಪುನಃ ಹಳೆಯ ಬ್ಯಾಚಲರ್ ಲೈಪ್ ಎಂಬ ಜೀವನವನ್ನು ಕಳೆಯಬೇಕಾದ ಬೇಜಾರು. ಇದಕ್ಕೆ ಕೂಳ್ಳಿ ಇಡುವಂತೆ ಮೈ ಮನವನ್ನು ತಣ್ಣಾಗಿಸುವ ಚಳಿ. ಮನೆಯಲ್ಲಿ ಯಾವುದೇ ಸಡಗರವಿಲ್ಲದೆ ಮುಂಜಾನೆ ಎಷ್ಟು ಸಮಯದವರೆಗಾದರೂ ಮಲಗೋಣ ಎಂಬ ಸೋಮಾರಿತನ. ಯಾಕಾದರೂ ಈ ತಿಂಗಳು ಬರುತ್ತದೋ ಎಂಬ ಹುಸಿ ಮುನಿಸು. ಹಿರಿಯರ ಕಟ್ಟಾಪ್ಪಣೆ "ಏನಿದ್ದರೂ ಒಂದು ತಿಂಗಳು ಆದ ಮೇಲೆ" ಎಂಬ ಮಾತು. ಅವರುಗಳಿಗೆ ಖುಷಿ ಇಲ್ಲಿ ಇವನ/ಇವಳ ಮನದಲ್ಲಿ ಸುಮ್ಮನೆಯ ಸಣ್ಣ ನೋವು.






ಆಫೀಸ್ ಗೆ ಹೋದರೆ ಎಲ್ಲರ ಆಶ್ಚರ್ಯಕರ ನೋಟ. "ಇಷ್ಟು ಬೇಗ ಹೇಗೆ ನಿನ್ನ ಮದುವೆಯ ಎಲ್ಲಾ ಸಡಗರ ಮುಗಿದು ಹೋಯ್ತಾ?" ಎಂಬ ಮಾತು. "ಹನಿಮೊನ್ ಇಲ್ವ? ಇಷ್ಟು ಬೇಗ ವಾಪಸ್ಸ ಬಂದು ಬಿಟ್ಯಾ?" "ಇಷ್ಟು ಬೇಗ ಹೆಂಡ್ತಿ ಬೋರ್ ಆದಳಾ" ಎಂಬ ಪ್ರಶ್ನೇ. ಅವರಿಗೇನೂ ಗೊತ್ತು ಇವಳ/ಇವನ ತಳಮಳ, ಮನದಲ್ಲಿಯೇ ಕನಸು. ಹೀಗೆ ಹೊಸದಾಗಿ ಮದುವೆಯಾದ ಯುವತಿ/ಯುವಕರು ಈ ಒಂದು ತಿಂಗಳು ಅನುಭವಿಸುವ ಕಷ್ಟ ನಷ್ಟಗಳು ಯಾರಿಗೂ ಬೇಡಾ ಅನಿಸುವುದಿಲ್ಲವಾ? ನನಗೆ ಗೊತ್ತಿಲ್ಲಾ. ನಿಮಗೇ?


ಅದರೂ ಈ ಒಂದು ತಿಂಗಳು ಪ್ರಕೃತಿ ಒಂದು ಕ್ಷಣ ಬಿರು ಬೇಸಿಗೆಯ ಬೆವರು ಹನಿಗಳಿಗೆ ತಂಪು ತರುವಂತೆ ಎಲ್ಲೇ ಮೀರಿ ಕಾವುಗೊಂಡ ಮನಸುಗಳಿಗೆ ಪನ್ನೀರನ್ನು ಚೆಲ್ಲುವಂತೆ ಮಾಡಿ ಹಾಯ್ ಎನಿಸುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಈ ಒಂದು ತಿಂಗಳು ಹೊಸ ಅನುಭವವನ್ನು ಕೊಡುತ್ತದೆ.


ಪ್ರಕೃತಿ ತನ್ನ ಋತು ಚಕ್ರದಲ್ಲಿ ಯಾವುದನ್ನು ಚಾಚೂ ತಪ್ಪದೇ ಸಮಯಕ್ಕೆ ತಕ್ಕ ಹಾಗೇ ತನ್ನ ತನವನ್ನು ತನ್ನ ಜೀವನ ಮರ್ಮವನ್ನು ತೋರಿಸುತ್ತಾ ಸಾಗುತ್ತದೆ. ಅದಕ್ಕೆ ತಕ್ಕ ಹಾಗೇ ನಾವುಗಳು ಹೆಜ್ಜೆ ಹಾಕಬೇಕಾದದ್ದು ನಮ್ಮ ಕರ್ತವ್ಯ ಅಷ್ಟೇ.
ಬೆಚ್ಚಗೆ ಹಾಸಿಗೆಯ ಮೇಲೆ ಮಲಗಲು ಮುಂಜಾನೆಯನ್ನು ಕಳೆದು ಮದ್ಯಾನದವರೆಗೂ ನಿದ್ದೆಯ ಸವಿಯನ್ನು ಸವಿಯಲು ಸೊರ್ಯದೇವನ ಯಾವುದೇ ಅಡ್ಡಿ ಆಡಚಣೆಗಳು ಇರುವುದಿಲ್ಲ. ಯಾಕೆಂದರೆ ಅವನು ಸಹ ತನ್ನ ಸವಿ ನಿದ್ದೆಯ ಮಂಪರಿನಲ್ಲಿ ಜಗತ್ತನ್ನು ನೋಡುತ್ತಾ, ತನ್ನ ಕಾರ್ಯವನ್ನು ಮಾಡಬೇಕಲ್ಲಾ ಎಂಬಂತೆ ಕಪ್ಪು ಮೊಡಗಳ ಮರೆಯಲ್ಲಿ ಕಣ್ಣ ಮುಚ್ಚಾಲೆಯಾಡುತ್ತಾ ನಮಗೆಲ್ಲಾ ಸಹಕರಿಸುತ್ತಾನೆ.


ಈ ವಾತವರಣಕ್ಕೆ ಸ್ವಲ್ಪ ಮೆರಗನ್ನು ನೀಡೋಣವೇನೋ ಎಂಬಂತೆ ಅಲ್ಲಿ ಇಲ್ಲಿ ಇರುವ ಚಿಕ್ಕ ಚಿಕ್ಕ ಮೊಡಗಳು ಕರಗಿ ತುಂತುರು ಮಳೆಯ ಆಟವನ್ನಾಡುತ್ತಾವೆ. ನಿಜವಾಗಿಯೊ ಎನ್-ಜಾಯ್ ಮಾಡಲು ಇದಿಷ್ಟು ಸಾಕು ಎನಿಸುತ್ತದೆ. ಎನಾದರೂ ಸರಿ ಸ್ಪಲ್ಪ ಹಾಟ್ , ಬಿಸಿ ಬಿಸಿ ಇದ್ದರೆ ಸಾಕು ಅನ್ನುತ್ತಾ ಯಾವಗಲೂ ಬಾಯಿಯನ್ನು ಆಡಿಸುತ್ತಿರೋಣ ಎಂದು ಚುರುಕು ಮುರುಕು ತಿನ್ನುವುದು.
ಈ ಒಂದು ತಿಂಗಳು ಯಾವುದೇ ರೀತಿಯ ಹಬ್ಬ ಹರಿ ದಿನಗಳು ಇಲ್ಲದೇ ಯಾವುದೇ ಒಂದು ಕಾರ್ಯ ಕೆಲಸಗಳಿಗೂ ಒಂದು ತಿಂಗಳ ಚಿಕ್ಕದಾದ ಬ್ರೇಕ್.

ಆದರೂ ನಮ್ಮ ಹಳ್ಳಿಗಳ ಜನ ಬಹಳ ಬುದ್ಧಿವಂತರು ಕಣ್ರೀ! ಅವರು ಎಲ್ಲಾ ತಿಂಗಳಲ್ಲೂ ಒಂದು ಒಂದು ರೀತಿಯಲ್ಲಿ ಒಂದು ಹಬ್ಬ ಆಚರಣೆಗಳನ್ನು ಪ್ರತಿ ಮಾಸದಲ್ಲೂ ಜಾರಿಯಲ್ಲಿ ಇಟ್ಟು ಕೊಂಡಿರುತ್ತಾರೆ. ಹಾಗೆಯೇ ಈ ಆಷಾಡದ ಮಾಸದಲ್ಲೂ ಒಂದು ಹಬ್ಬವನ್ನು ಆಚರಿಸುತ್ತಾರೆ ಅದೆಂದರೇ "ಏಕಾದಸಿ". ಇಲ್ಲಿ ನಮ್ಮ ಪೇಟೆಯ ಜನಗಳಿಗೆ ಏಕಾದಸಿ ಅಂದರೇ ಉಪವಾಸ. ಆದರೆ ಅಲ್ಲಿ ಈ ತಿಂಗಳಲ್ಲಿ ಏಕಾದಸಿಯ ಹಬ್ಬದಲ್ಲಿ ಹುರಿ ಹಿಟ್ಟಿನಿಂದ ಮಾಡಿದ ಉಂಡೆಗಳ ಭಾರಿ ಬೋಜನ. ಆ ಉಂಡೆಗಳನ್ನು ಹೊಡೆಯಲು ಈ ತಿಂಗಳು ಹೇಳಿ ಮಾಡಿಸಿದ ತಿಂಗಳು. ಈ ಚಳಿಯಲ್ಲಿ ಅವುಗಳನ್ನು ತಿನ್ನುವುದೇ ಒಂದು ಖುಷಿಯ ವಿಚಾರ. ಏಕೆಂದರೆ ಅವುಗಳನ್ನು ಅಷ್ಟೊಂದು ಗಟ್ಟಿಯಾಗಿ ಬಾಯಿಂದ ಮುರಿಯಲು ಸಾಧ್ಯವಾಗುವುದಿಲ್ಲವೇನೋ ಎಂಬ ರೀತಿಯಲ್ಲಿ ಬೆಲ್ಲದ ಪಾಕದಿಂದ ಹದವರಿತು ತಯಾರಿಸುತ್ತಾರೆ. ಈ ವಿವರಣೆಯನ್ನು ಕೇಳಿ ಬಾಯಲ್ಲಿ ನೀರು ಬಂದಿತೇ? ಹಾಗದರೆ ಮರಳಿ ಹಳ್ಳಿಯ ಕಡೆ ಒಮ್ಮೆ ಬನ್ನಿ.


ಈ ರೀತಿಯ ವಿವಿಧ ಮಹತ್ವವನ್ನು ಹೊಂದಿರುವ ಈ ಮಾಸದಲ್ಲಿ, ಪ್ರಚಲಿತವಾಗಿ ಈಗಿನ ರಾಜಕೀಯ ದಿನ ಮಾನಗಳಲ್ಲಿ ಬೆಂಗಳೂರಲ್ಲಿ ಸಣ್ಣದಾಗಿ ನಮ್ಮ ಜನಪ್ರತಿನಿಧಿಗಳು ತಮ್ಮ ತಮ್ಮಲ್ಲಿಯೇ ತಲ್ಲಣಗೊಂಡಿದ್ದಾರೆ. ಗಣಿ ದಣಿಗಳು, ಗಣಿ ಹಗರಣಗಳು, ಅವುಗಳನ್ನು ಧೂಳು ಧೊಳ್ ಮಾಡೋಣ ಎಂಬಂತೆ ಪ್ರತಿಪಕ್ಷದವರು ಬೆಂಗಳೂರ್ ಟು ಬಳ್ಳಾರಿ ಪಾದಯಾತ್ರೆಯನ್ನು ಈ ಚುಮು ಚುಮು ಚಳಿಯಲ್ಲಿ ಹಾಕಿಕೊಂಡಿರುವುದು ಆರೋಗ್ಯಕರ. ಪ್ರಕೃತಿಯೇ (?) ಅವರ ಮನಸ್ಸಿಗೆ ಪ್ರೇರಣೆಯನ್ನು ಕೊಟ್ಟಿರುವಂತೆ ಇದೆ. ಅವರುಗಳು ಸಹ ಸಕತ್ತಾಗಿ ಸಂಭ್ರಮಿಸಿಕೊಳ್ಳಬಹುದು.


ಈ ರೀತಿಯ ಚಿಕ್ಕ ಚಿಕ್ಕ ಸಂತೋಷಗಳೇ ಜನ ಸಾಮಾನ್ಯರಿಗೆ ಪ್ರಕೃತಿಯಿಂದ ದೊರೆಯುವ ಚಿನ್ನದ ದಿನಗಳು. ಅದನ್ನು ನೋಡುವ ಮತ್ತು ಅದರ ಜೊತೆ ಸೇರಿ ಅನುಭವಿಸುವ ಮನಸ್ಸು ಮಾತ್ರ ನಮಗೆ ಬೇಕಾದಾದ್ದು. ಋತುಮಾನಗಳು ಯಾವ ರೀತಿಯಲ್ಲೂ ಬದಲಾವಣೆಯಾಗುವುದಿಲ್ಲ. ನಾವುಗಳು ಮಾತ್ರ ಬದಲಾಗಬಹುದು ಅಷ್ಟೇ. ಆದರೂ ಮನುಷ್ಯನ ಅತಿಯಾದ ದುರಾಸೆಯ ಫಲದಿಂದ ಈ ರೀತಿಯ ಉನ್ನತವಾದ ಪ್ರಕೃತಿಯ ಕೊಡುಗೆಗಳಿಗೆ ಧಕ್ಕೆ ತರುತ್ತಿರುವುದು ನಿಲ್ಲಬೇಕು. ಪರಿಸರ ಪ್ರೀತಿ ಇರಬೇಕು. ಅವುಗಳು ಯಾವ ಯಾವ ರೀತಿಯಲ್ಲಿ ಇರುವುದೂ ಆ ರೀತಿಯಲ್ಲಿಯೇ ನಾವುಗಳು ಅರ್ಪಿಸಿಕೊಳ್ಳಬೇಕು. ಆಗ ಮಾತ್ರ ನಾವುಗಳು ನಮ್ಮ ಸುತ್ತಲೂ ಇರುವ ಎಲ್ಲಾರೂ ಒಂದಾಗಿ ನಮ್ಮ ಪರಿಸರದಲ್ಲಿ ಒಂದಾಗಬಹುದು. ಅಲ್ಲವಾ?