ಬುಧವಾರ, ಮಾರ್ಚ್ 4, 2009

'ಅವನೊಬ್ಬನಿದ್ದ ಗೋಡ್ಸೆ' ಸಕತ್ ಆಗಿದೆ

ಇತ್ತೀಚೆಗೆ ನಾನು ಓದಲು ಶುರು ಮಾಡಿರುವ ರವಿ ಬೆಳೆಗೆರೆಯವರ ಅನುವಾದಿತ ಕೃತಿ ಮನೋಹರ ಮಳಗಾವಂಕರರ 'ಅವನೊಬ್ಬನಿದ್ದ ಗೋಡ್ಸೆ' ಸಕತ್ ಆಗಿದೆ ಅಪರೂಪವಾದ ಅ ದಿನಗಳ ಪೋಟುಗಳನ್ನೂ ಇತಿಹಾಸದ ಚಿತ್ರಣದ ಜೊತೆ ಕೊಟ್ಟಿದ್ದಾರೆ. ಪುಟ ಪುಟವು ಆಕರ್ಷಕವಾಗಿ ಹಿಡಿದಿಟ್ಟು ಓದುಗರಿಗೆ ರೋಮಾಂಚನವನ್ನು ಉಂಟು ಮಾಡುತ್ತಾ ಪೂರ್ತಿಯಾಗಿ ಓದುವವರೆಗೂ ನಮ್ಮನ್ನು ಅಲ್ಲಿಯೇ ನಿಲ್ಲಿಸುತ್ತದೆ.

ನಾವು ನೀವೆಲ್ಲಾ ಓದಿರುವ ಇತಿಹಾಸ ಒಂದು ಕಡೆಯಾದರೆ ಇಲ್ಲಿ ಬೇರೆಯಾದ ಇತಿಹಾಸದ ದಿನಗಳನ್ನು ಮೆಲುಕು ಹಾಕುವ ಸಂಭ್ರಮ ಮತ್ತು ತಲ್ಲಣ ನಮ್ಮದಾಗಲಿದೆ. ೧೫ ಅಗಸ್ಟ್ ೪೭ ರ ನಂತರದ ಹಸಿ ಹಸಿ ಘಟನೆಗಳ್ಹ ಕರಾಳ ಛಾಯೆಯನ್ನು ತಮ್ಮ ದಿಟ್ಟವಾದ ಸಾಲುಗಳಲ್ಲಿ ಮನ ಮುಟ್ಟುವ ರೀತಿ ಚಿತ್ರಿಸಿರುವುದು ರವಿ ಬೆಳೆಗೆರೆಯವರ ಮಾಂತ್ರಿಕ ಬರವಣಿಗೆಯಲ್ಲಿ ವಿಭಿನ್ನವಾಗಿ ಮೊಡಿ ಬಂದಿದೆ.

ಭಾರತೀಯತೆ ಅಂದು ಹೇಗೆ ಇತ್ತು ಮತ್ತು ಅದಕ್ಕಾಗಿ ಅಂದು ಹೋರಾಡಿದ ನಮ್ಮ ಜನಗಳ ಮನ ಸ್ಥಿತಿಯನ್ನು ಗೋಡ್ಸೆ ಮತ್ತು ಅವನ ಅನುಯಾಯಿಗಳ ಮೂಲಕ ಪ್ರಕಟಿಸಿದ್ದಾರೆ. ಹಿಂದುತ್ವ ಅಂದರೆ ಏನು ಮತ್ತು ಅದು ಎಲ್ಲಿ ಎಂದು ಯಾವ ದಾರಿ ಹಿಡಿಯಿತು ಎಂಬುದನ್ನು ಮಹಾತ್ಮನ ಮರಣದಿಂದ ಭಾರತದಲ್ಲಿ ಉಂಟಾದ ಬದಲಾವಣೆ, ಚಿಂತನೆ ಎಲ್ಲವನ್ನು ಜೀವಂತವಾಗಿ ನಮ್ಮ ಮುಂದೆ ನಿಲ್ಲಿಸಿದ್ದಾರೆ.

ಪ್ರಾಥಮಿಕ ಶಾಲೆಗಳಲ್ಲಿ ನಾವುಗಳು ಪಠಿಸಿದ ಇತಿಹಾಸ ಪಾಠಕ್ಕೂ ಇಲ್ಲಿ ಇರುವ ನೈಜ ಇತಿಹಾಸಕ್ಕೂ ಎಲ್ಲಿ ಎಲ್ಲಿಯ ಸಂಬಂಧ ಎಂಬುವಂತೆ ಕಾಡುತ್ತದೆ . ಪ್ರತಿಯೊಬ್ಬರೂ ಒಮ್ಮೆ ಓದಲೇ ಬೇಕಾದ ಈ ಕೃತಿಯಾಗಿದೆ. ಮಳಗಾವಂಕರರ ಇನ್ನೂ ಈ ರೀತಿಯ ಪುಸ್ತಕಗಳು ಕನ್ನಡಕ್ಕೆ ರವಿಯವರ ಮೂಲಕ ಕನ್ನಡಕ್ಕೆ ಅರ್ಪಣೆಯಾಗಲಿ ಎಂದು ಹಾರೈಸುವೆ.

ಮಂಗಳವಾರ, ಮಾರ್ಚ್ 3, 2009

ಜನ ಸಮಾನ್ಯರಿಲ್ಲದಿದ್ದರೆ ಚಿತ್ರರಂಗ?

ಜನ ಸಾಮಾನ್ಯರಿಲ್ಲದಿದ್ದರೆ ಚಿತ್ರರಂಗ ಇಲ್ಲ ಇದು ಅಕ್ಷರಶಃ ಸತ್ಯ ಆದರೆ ನಾನು ನನ್ನ ಜೊತೆಯ ಗೆಳೆಯರು ಅಮೃತ ಮಹೋತ್ಸವ ಕಾರ್ಯ ಕ್ರಮವನ್ನು ಸವಿಯಲು ಅರಮನೆ ಮೈದಾನಕ್ಕೆ ಹೋದರೆ ಅಲ್ಲಿ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಎಂಬ ಕಾನೂನು ನಮಗೆಲ್ಲಾ ಭ್ರಮನಿರಾಸನಗೊಳಿಸಿತು. ಅಪರೂಪದ ಇಂಥ ಕಾರ್ಯ ಕ್ರಮಗಳಿಗೆ ಸರ್ವರಿಗೂ ಆತ್ಮಿಯ ಪ್ರವೇಶ ಇರಬೇಕಾಗಿದ್ದು ನಿಜವಾದದ್ದು.

ಸಾಹಿತ್ಯ ಸಮ್ಮೇಳನಗಳು ಇದಕ್ಕೆ ಹೊರತಾಗಿರುವುದು ಅಭಿಮಾನದ ಸಂಗತಿ, ಅಲ್ಲಿ ಸರ್ವರೂ ಸಮಾನವಾಗಿ ಜಾತ್ರೆಯ ಸಂಭ್ರಮವನ್ನು ಅನುಬವಿಸುವ ರೀತಿ ರೂಪಿಸಿರುತ್ತಾರೆ. ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಜನರನ್ನು, ಅಭಿಮಾನಿ ದೇವರುಗಳನ್ನು ನಿರ್ಲಕ್ಷಿಸಿದ್ದು ಬೇಸರದ ಸಂಗತಿ.

ಗುಂಪಿನಲ್ಲಿ ಬೆತ್ತದ ರುಚಿಯಾ ಬಾಗ್ಯ ದೂರೆತದ್ದೆ ಸಂಭ್ರಮ.

ಜೈ ಕನ್ನಡಾಂಬೆ!!