ಗುರುವಾರ, ಜನವರಿ 15, 2009

ಮತ್ತೇ ಜನಕ್ಕೆ ಸಂಭ್ರಮ

ಮತ್ತೇ ಜನಕ್ಕೆ ಸಂಭ್ರಮಪಡಲು ದುರ್ಗದ ಮೊದಲ ಕಾರಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ ಕೊನೆಯಲ್ಲಿ ಸಡಗರದಿಂದ ಪ್ರಾರಂಭವಾಗುತ್ತಿದೆ. ದುರ್ಗ ಇತಿಹಾಸದ ಕಾಲದಿಂದಲೂ ಹಲವಾರು ಐತಿಹಾಸಿಕ ಕಾರಣ, ಘಟನೆಗಳಿಗೆ, ವಿಚಾರಗಳಿಗೆ, ವ್ಯಕ್ತೀಗಳಿಗೆ, ವೀರ ಸಂಸ್ಕೃತಿಗೆ ಸಾಕ್ಷಿಯಾಗಿ ಪ್ರತಿಯೊಂದು ದುರ್ಗದ ಬಂಡೆ ಕಲ್ಲುಗಳು, ಮಣ್ಣು ಅದರ ಹಿರಿಮೆಯನ್ನು ಪ್ರತಿಪಲಿಸುತ್ತಿವೆ. ಈ ಎಲ್ಲಾ ಹೆಮ್ಮೆಯ ವಿಚಾರಗಳಿಗೆ ಕೀರಿಟ ಪ್ರಾಯವಾಗಿ ಈ ಕಾರ್ಯಾಕ್ರಮ ನಡೆಯುತ್ತಿರುವುದು ಕನ್ನಡಿಗರ ಕನಸಾಗಿತ್ತು ಇಂದು ಅದು ನಿಜಾವಾಗುವ ಕಾಲ ಬಂದಿದೆ. ಇದರಲ್ಲಿ ಸಂಭ್ರಮದಿಂದ ಪಾಲ್ಗೂಣ ಅಲ್ಲವಾ?

ಮಂಗಳವಾರ, ಜನವರಿ 6, 2009

ಹೊಸ ವರುಷ ಬರುವ ದಿನಗಳ ಮೇಲೆ..

ಹೊಸ ವರುಷ ಬರುವ ದಿನಗಳ ಮೇಲೆ..


ಮತ್ತೆ ಹೊಸ ಭರವಸೆ
ಮತ್ತೆ ಹೊಸ ಕಿರಣದ ಒಳಪು
ಏನೋ ಸಂಭ್ರಮ ಏನೋ ಸಡಗರ
ಬರುವ ದಿನಗಳ ಮೇಲೆ..

ಕಳೆದ ಗಳಿಗೆಗಳ ಬಗ್ಗೆ
ಕೊಂಚ ಬೇಸರ
ಕೊಂಚ ಅನಂದ
ಇದೆ ಅಲ್ಲವಾ ಜೀವನದ ನಾಡಿ
ಬರುವ ದಿನಗಳ ಮೇಲೆ..

ತಿರುಗುವ ಕಾಲದಲ್ಲಿ ನಿಲ್ಲುವರಾರು
ಬರುವ ಕಾಲದಲ್ಲಿ ಸಿಗುವವರಾರು
ಅಸೆ ಮಹದಾಸೆಯ ಆಶ ಕಿರಣ
ಬರುವ ದಿನಗಳ ಮೇಲೆ..

ಬದುಕಿನ ಬಾಳ ಮರ್ಮ ಕಾಲದ ಜೊತೆ
ಹೊಸ ಬದುಕು ಹೊಸ ಬಾಳು ಪುನಃ ಪುನಃ
ಸಾಗಬೇಕು ನಮ್ಮ ನಮ್ಮ ಗುರಿಯ ಪಯಣ
ಬರುವ ದಿನಗಳ ಮೇಲೆ..

ಹೋರಾಟ ಬಾಳಿಗಾಗಿ ಕಾಲದ ಜೊತೆ
ಹೋರಾಟ ನಲ್ಮೆಯ ಶಾಂತಿಗಾಗಿ
ಬೇಕು ನಮ್ಮ ನಮ್ಮಲ್ಲಿ ಹಕ್ಕಿ ಪಕ್ಕಿಗಳ ಕಲರವ
ಬರುವ ದಿನಗಳ ಮೇಲೆ..

ತಲಾಶ್

ತಲಾಶ್ !