ಮಂಗಳವಾರ, ಡಿಸೆಂಬರ್ 15, 2009

ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ ಬೇಡ!

ಇಂದಿನ ನಮ್ಮ ಕಾರ್ಪೊರೆಟ್ ರಂಗದಲ್ಲಿ ವಿವಿಧ ಭಾಷೆಯನ್ನು ಮಾತಾನ್ನಾಡುವ, ವಿವಿಧ ಸಂಸ್ಕೃತಿಯ, ವಿವಿಧ ರಾಜ್ಯದ ಕೆಲಸಗಾರರು ನಮ್ಮ ಕನ್ನಡದ ರಾಜಾಧಾನಿಯಾದ ಬೆಂಗಳೂರಿನಲ್ಲಿ ಹಲವಾರು ಕಡೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಇಲ್ಲಿ ಒಂದು ಮಿನಿ ಭಾರತವನ್ನೇ ಕಾಣಬಹುದಾಗಿದೆ.

ಎಲ್ಲ ಕಂಪನಿಗಳಲ್ಲಿ ಅವರದೇಯಾದ ಸಮಯದಲ್ಲಿ ಎಲ್ಲ ಉದ್ಯೋಗಿಗಳಿಗೂ ಖುಷಿ ಮತ್ತು ಸಂಭ್ರಮವನ್ನುಂಟು ಮಾಡಲು ತಿಂಗಳ ಅಥಾವ ವಾರದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿನ ಉದ್ಯೋಗಿಗಳಿಗೆ ಏರ್ಪಡಿಸುವ ಪದ್ಧತಿಯನ್ನು ಎಲ್ಲ ಕಡೆ ಕಾಣಬಹುದಾಗಿದೆ.

ಆ ಸಮಯದಲ್ಲಿ ಎಲ್ಲ ಕೆಲಸಗಾರರಿಗೂ ತಮ್ಮ ತಮ್ಮ ಸಂಸ್ಕೃತಿಯ ಮತ್ತು ತಮ್ಮ ಕ್ರೀಯಾಶೀಲವಾದ ಸೃಜನಾತ್ಮಕ ಕಲೆಗಳನ್ನು ತಮ್ಮ ಸ್ನೇಹಿತರ ಮುಂದೆ ಪ್ರದರ್ಶನವನ್ನು ಕೊಡಲು ತುಂಬ ಸಹಕಾರಿಯಾಗಿರುತ್ತದೆ ಮತ್ತು ಬಿಡುವಿಲ್ಲದ ಜಂಜಾಟದ ಬದುಕಿಗೆ ಉತ್ತೇಜನಕ ರೀತಿಯಲ್ಲಿ ಉತ್ಸಾಹವನ್ನುಂಟು ಮಾಡುತ್ತದೆ. ಇಂಥ ಕಾರ್ಯಕ್ರಮಗಳು ಇಂದಿನ ಯಾಂತ್ರಿಕ ಯುಗದ ಮೆಟ್ರೋ ಮಂದಿಗೆ ಬೇಕೆ ಬೇಕು ಬಿಡಿ.

ಆದರೆ, ಇಂಥ ಕಾರ್ಯಕ್ರಮಗಳಲ್ಲಿ ತುಂಬ ಅಭಾಸವಾದ ರೀತಿಯಲ್ಲಿ ಕೆಲವೊಮ್ಮೆ ಕೆಲವು ಕಹಿ ಘಟನೆಗಳು ನಡೆದು ಹೋಗಿ ಬಿಟ್ಟು ಹತ್ತಿರದವರೆಗೆ ತುಂಬ ನೋವಾಗುತ್ತದೆ. ಆ ಸಮಯದಲ್ಲಿ ಆ ರೀತಿ ಯಾರು ಯೋಚಿಸುವುದಿಲ್ಲ. ಆದರೆ ಅದರ ಬಗ್ಗೆ ಸ್ವಲ್ಪ ವಿಚಾರ ಮಾಡಿದರೆ ಹೌದು! ಅದು ಸತ್ಯ ಏನಿಸದೇ ಇರಲಾರದು.

ಯಾವುದೇ ಹಾಡು, ಸಂಗೀತ, ನೃತ್ಯ, ನಟನೆಯ ಕಾರ್ಯಕ್ರಮಗಳನ್ನು ಎಲ್ಲರೂ ಯಾವುದೇ ಭಾಷೆ ಮತ್ತು ಜನಗಳ ಬೇದವಿಲ್ಲದೇ ಎಲ್ಲರೂ ತಮಗೆ ತಿಳಿದಿರುವ ಕಲೆಯ ಅಭಿವ್ಯಕ್ತಿಯನ್ನು ತೋರಿಸಲು ಸುಸಮಯವಾಗಿರುತ್ತದೆ.

ಪ್ರೇಕ್ಷಕರೇನಿಸಿದ ನೋಡುಗರು ತಮಗೆ ಅರ್ಥವಾಗದ ಭಾಷೆಯಲ್ಲಿನ ಅಥಾವ ತಿಳಿಯದ ಕಲೆಯನ್ನು ಕಂಡಾಗ ಇರಿಸು ಮುರಿಸಾಗುವುದು ಸಾಮಾನ್ಯ. ಆದರೆ ಅದಕ್ಕಾಗಿ ತಮ್ಮತನವನ್ನು ಕಳೆದುಕೊಂಡು ಅತ್ಯಂತ ಅನಾಗರಿಕತೆಯನ್ನು ತೋರಿಸಿ ವೇದಿಕೆಯ ಮೇಲೆ ತಮ್ಮ ಕಲೆಯನ್ನು ಪ್ರದರ್ಶಿಸುವವರಿಗೆ ಅವಮಾನ ಮಾಡುವುದು ಎಷ್ಟು ಸರಿ!

ಇಂದಿನ ಕಾರ್ಪೊರೆಟ್ ದಿನಮಾನಗಳಲ್ಲಿ ಎಲ್ಲ ಕಡೆ ನಮ್ಮ ಭಾಷೆ ಮತ್ತು ನಮ್ಮ ಸಂಸ್ಕೃತಿಯನ್ನು ಆಚರಿಸುವವರು ಸಿಗುವುದು ಕಷ್ಟ. ಅದ್ದರಿಂದ ನಾವ್ಯಾಕೇ ಬೇರೆಯವರ, ಬೇರೆ ರಾಜ್ಯದ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಗೌರವದಿಂದ ನೋಡಿ ಆನಂದಿಸಲಾರೆವು ಹೀಗೆ ಮಾಡುವುದರಿಂದ ಅಷ್ಟೋಂದು ಕಷ್ಟಪಟ್ಟು ನಮಗಾಗಿ ಅಪರೂಪದ ಕಲೆಯ ವೈಭವವನ್ನು ನಮ್ಮ ಮುಂದೆ ಇಡುವವರಿಗೆ ಪ್ರೋತ್ಸಹವವನ್ನು ಉತ್ತೇಜನವನ್ನು ಕೊಟ್ಟಂತಾಗಿ ನಾವುಗಳು ಅವರ ಬಗ್ಗೆ ಮತ್ತು ಅವರ ಮಣ್ಣಿನ ಬಗ್ಗೆ ತಿಳಿಯಲು ಕುತೊಹಲದಿಂದ ಇದ್ದೇವೆ ಎಂದರೆ ಅವರಿಗೇಷ್ಟು ಆನಂದ ಮತ್ತು ಮಮತೆ ಉಂಟಾಗುವುದಿಲ್ಲ. ಇದು ಎಷ್ಟೊಂದು ಹೆಮ್ಮೆಯ ವಿಚಾರವಾಗುವುದಿಲ್ಲವೇ.

ಎಲ್ಲರಿಗೂ ತಿಳಿದಿರುವಂತೆ ನಮ್ಮ ದೇಶ ಭಾರತ ಅಂದರೆ ಬಹು ಸಂಸ್ಕೃತಿಯ ರಾಯಾಬಾರಿ. ಇಲ್ಲಿ ಒಂದು - ಒಂದೇ ಎನ್ನುವುದು ಸಮಗ್ರವಾಗಿ ನಾವೆಲ್ಲಾ ಒಂದು ಎನ್ನುವಾಗ. ನಮ್ಮ ಮಾತು, ಸಂಸ್ಕೃತಿ, ವಿಚಾರ - ಆಚರಗಳಿಗಲ್ಲಾ ಅಲ್ಲವಾ!

ಈ ಮಹನ್ ಸತ್ಯ ಗೊತ್ತಿರುವಾಗ ನಾವೇಕೆ ಪುನಃ ಕೀಳಾಗಿ ವರ್ತಿಸುವುದು. ಕಲೆಗೆ ಯಾವುದೇ ಗಡಿ ಪ್ರಾಂತ್ಯವಿಲ್ಲ ಮತ್ತು ಯಾವುದೇ ಭಾಷೆಯಿಲ್ಲ ಕಲೆಗೆ ಕಲೆಯೇ ಭಾಷೆ ಮತ್ತು ಮಾದ್ಯಮ. ಅದೇ ಗೊತ್ತು ಗುರಿಯಿಲ್ಲದ ನಮ್ಮ ಸಂಸ್ಕೃತಿಯಲ್ಲದ ರಾಕ್ ಪಾಪ್ ಸಂಗೀತ, ಡ್ಯಾನ್ಸ್ ಗಳನ್ನು ಕಣ್ಣು ಕಣ್ಣು ಬಿಟ್ಟು, ಬಾಯಿ ಬಾಯಿ ತೆರೆದು ಅಹ್ಲಾದಿಸುವುದು ನಮ್ಮ ಭಾರತೀಯರ ಅಭಿರುಚಿ ಎತ್ತ ಕಡೆ ದಾಪುಗಾಲು ಹಾಕುತ್ತಿದೆ ಎಂದು ಯೋಚಿಸುವಂತೆ ಮಾಡಿದೆ.

ನಮ್ಮ ನಮ್ಮ ಮನೆಯ ಮಾತು ಮತ್ತು ನಮ್ಮ ಮನೆಯಲ್ಲಿನ ಕಲೆಗಳನ್ನು ಪ್ರದರ್ಶಿಸುವುದೇ ಅಥಾವ ಹಾಡುವುದೇ ಅಸಹ್ಯವೇನೊ ಎಂಬ ರೀತಿಯಲ್ಲಿ ನಾವುಗಳು ಕಾಣುವುದು ಯಾವುದರ ಸಂಕೇತ?

ನಮಗೆ ತಿಳಿಯದೇ ಇದ್ದರೂ ಅದನ್ನು ವ್ಯಕ್ತಪಡಿಸುವ ಕಲೆಗಾರರಿಗೆ ಅವಕಾಶ ಮಾಡಿ ಅವರನ್ನು ಗೌರವಿಸಬೇಕು ಅದು ಬಿಟ್ಟು ತಮಗೆ ಆ ರೀತಿಯಲ್ಲಿ ಒಂದು ನಿಮಿಷ ವೇದಿಕೆಯ ಮೇಲೆ ನಿಲ್ಲಲು ಆಗದು ಅಂಥ ಸಮಯದಲ್ಲಿ ಸುಮ್ಮನೆ ವೇದಿಕೆಯ ಹಿಂದೆ ಮುಂದೆ ಕುಳಿತುಕೊಂಡೋ ನಿಂತುಕೊಂಡೋ ತಮ್ಮ ಗೆಳೆಯರು ಹಾಡುವ ಸಮಯದಲ್ಲಿ ಅಥಾವ ನೃತ್ಯ ಮಾಡುವ ಸಮಯದಲ್ಲಿ ಅಥಾವ ಮಾತನಾಡುವ ಸಮಯದ ಮದ್ಯದಲ್ಲಿಯೇ ಚಪ್ಪಾಳೆಯನ್ನು ತಟ್ಟುವುದು, ಕೊಗು ಹಾಕುವುದು ಎಲ್ಲಿನ ಸಂಸ್ಕೃತಿ?

ನಾವುಗಳು ತುಂಬ ಇಷ್ಟಪಟ್ಟು ಆಚರಿಸಲು ಮನಸ್ಸು ಮಾಡುವ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನಾವೇಲ್ಲಾ ತಪ್ಪದೇ ಪಾಲಿಸಬೇಕಾದ ಆಚರಣೆಯಿದೆ ಅದೇ ಬೇರೆಯವರು ಏನಾದರೂ ಮಾತನಾಡುವಾಗ ಮದ್ಯದಲ್ಲಿ ಅಸಭ್ಯವಾಗಿ ವರ್ತಿಸದೇ ಅವರು ಪೂರ್ಣವಾಗಿ ಮುಗಿಸವವರೆಗೆ ಕಾದು ಅನಂತರ ತಾವು ಮಾತನ್ನಾಡುವುದು. ಈ ರೀತಿಯ ಅಮೊಲ್ಯವಾದ ಆಚರಣೆಗಳನ್ನು ಗಾಳಿಗೆ ತೊರಿ ತಮ್ಮ ತನವನ್ನು ಮೇರೆಯಬಾರದು ಅಲ್ಲವಾ!

ಯಾವುದೇ ಒಳ್ಳೆಯದನ್ನು ಎಲ್ಲರಿಂದ ಎಲ್ಲಾ ಕಡೆಯಿಂದ ತೆಗೆದುಕೊಳ್ಳಬೇಕು ಆಗಲೇ ನಾವು ಜೀವಿಸುತ್ತಿರುವ ಸುತ್ತಲಿನ ಸಮಾಜ ಜನಾಂಗ ಶಾಂತಿ ಮತ್ತು ಸಹ ಬಾಳ್ವೆಯ ಜೀವನ ನೆಡಸಲು ಸಾಧ್ಯ. ಇಲ್ಲವಾದರೆ ತಮ್ಮ ತಮ್ಮಲ್ಲಿಯೇ ಭಿನ್ನಮತ ಮತ್ತು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಇದು ನಾವುಗಳು ದಿನದ, ತಿಂಗಳಿನ, ವರ್ಷದ ಮತ್ತು ನಮ್ಮ ಜೀವಿತದ ಹೆಚ್ಚು ಸಮಯವನ್ನು ಕಳೆಯುವ ನಾವು ಕೆಲಸ ಮಾಡುವ ನಮ್ಮ ನಮ್ಮ ಕಂಪನಿಗಳಿಂದ ಪ್ರಾರಂಭವಾಗಲಿ ಎಂಬುದೇ ಈ ಭಾರತೀ (ಯನ) ಮನದ ಹಂಬಲ.

-ತ್ರಿಪುಟಪ್ರಿಯ

ಶನಿವಾರ, ಡಿಸೆಂಬರ್ 5, 2009

ಬಾಲ್ಕನಿಯಿಂದ ಸಹಜ ನೋಟ

ಹಿಂದಿನ ದಿನಗಳ ವಿಜಯ ಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ ಗಮನ ಸೆಳೆದ ನಮ್ಮೆಲ್ಲರನ್ನು ಆಶ್ಚರ್ಯವಾಗುವಂತೆ ಮಾಡಿದ ಪುಟ್ಟ ಅಂಕಣ ಬರಹಗಳಾದ "ಬಾಲ್ಕಾನಿಯಿಂದ" ಸಹಜ ಎಂಬುವ ಅರ್ದ ಮುಖವನ್ನು ಮಾತ್ರ ತನ್ನ ಛಾಯ ಚಿತ್ರದ ಮೂಲಕ ತೋರಿಸುತ್ತಾ ಎಲ್ಲಾ ಓದುಗರನ್ನು ವಿಸ್ಮಯಗೊಳಿಸಿದ ಅಪರೂಪದ ಅಂಕಣ.

ಯುವತಿಯ - ಯುವಕರ ಸಾಮಾನ್ಯ ವಯೋಸಹಜ ತಲ್ಲಣಗಳನ್ನು ತನ್ನ ಬರಹಗಳ ಮೂಲಕ ಜಗಜ್ಜಾಹೀರು ಮಾಡಿದ ಈ ಲೇಖನಗಳನ್ನು ಕಂಡಾಗ ಕೆಲವರಿಗೆ ಶಾಕ್! ಮತ್ತು ಕೆಲವರಿಗೆ ಏನ್ ಗುರು ಈ ಹುಡುಗಿ ಹೀಗೆ ಬರೆಯುವುದಾ ಎನ್ನುತ್ತಿದ್ದರು. ಆ ಎಲ್ಲಾ ಲೇಖನಗಳ ವಸ್ತು ಆಶ್ಚರ್ಯಕರ ರೀತಿಯಲ್ಲಿರುತ್ತಿದ್ದವು. ಮತ್ತು ಯಾರೊಬ್ಬರು ಬರಹಗಳಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ಬರಹಗಳಲ್ಲಿ ಮೊಡಿ ತಮ್ಮ ತುಂಟತನದ ಎಲ್ಲೇಯನ್ನು ಮೀರಿದವು ಎಂದು ಭಾಸವಾಗುವಂತಿರುವಂತೆಯೇ ತನ್ನ ಸತ್ಯದ ಮರ್ಮವನ್ನು ತೋರಿ ಎಲ್ಲಾರೂ ಒಮ್ಮೆ ಚಿಂತನೆಯನ್ನು ಮಾಡುವಂತಾಗುತ್ತಿತ್ತು.

ಹುಡುಗರು ಸಹ ಪ್ರಸ್ತಾಪಿಸಲೂ ಹಿಂಜರಿಯುವಂತ ಟಾಪಿಕ್ ಗಳನ್ನು ಸಹಜರವರು ತುಂಬ ಸರಳವಾಗಿ ಸಹಜವಾಗಿ ಯುವಕರು - ಯುವತಿಯರು ಎನ್ ಜಾಯ್ ಮಾಡುತ್ತಾ ತಮ್ಮ ನಲಿವಿನ ತಮಾಷೆಯ ದಿನಗಳನ್ನು ಈ ಲೇಖನಗಳನ್ನು ಓದುವ ಮೂಲಕ ಸಂತಸಪಡುವಂತೆ ಬರೆಯುತ್ತಿದ್ದರು.

ಆ ಸಮಯದಲ್ಲಿ ಕೆಲವೂಮ್ಮೆ ಈ ಬರಹಗಳನ್ನು ಮಿಸ್ ಮಾಡಿಕೊಂಡಿದ್ದುಂಟು. ಎಲ್ಲಾ ಬರಹಗಳನ್ನು ಒಟ್ಟಿಗೆ ಓದಬೇಕು ಅನಿಸಿದ್ದುಂಟು. ಈ ಎಲ್ಲಾ ಆಸೆಗಳಿಗೆ ಪೂರಕವಾಗಿ "ಸಾಹಿತ್ಯ ಭಂಡಾರ" ಪ್ರಕಾಶನದಿಂದ "ಬಾಲ್ಕಾನಿಯಿಂದ ಬಾಗ -೧ ಮತ್ತು ಬಾಗ - ೨" ಸುಂದರ ತುಂಟತನದ ಮುಖ ಪುಟದೊಂದಿಗೆ ಸಂಗ್ರಹ್ಯವಾದ ಎರಡು ಪುಟ್ಟ ಪುಸ್ತಕಗಳನ್ನು ಹೊರತಂದಿರುವುದು ನಮ್ಮಂತ ತರುಣ ಹೃದಯಗಳಿಗೆ ಕಿಚ್ಚು ಹಚ್ಚಿದಂತಾಗಿದೆ.

ಒಂದೇ ಸಿಟ್ಟಿಂಗ್ ನಲ್ಲಿ ಎರಡು ಪುಸ್ತಕಗಳು ಸಂತೋಷದಿಂದ ಓದಿಸಿಕೊಂಡುಬಿಡುತ್ತವೆ.

ಎಲ್ಲಾ ಲೇಖನಗಳು ಪ್ರತಿಯೊಬ್ಬ ೧೮ -೨೪ ತರುಣಿಯ ಯೋಚನಾ ದಾಟಿಯನ್ನು ಉಲ್ಲೇಖಿಸಿರುವಂತಿದೆ. ಆದರೆ ಯಾರೂ ಆ ರೀತಿ ಹೇಳಿಕೊಳ್ಳುವುದಿಲ್ಲ ಆದರೆ ತಮ್ಮ ಮನದ ಯಾವುದೂ ಜಾಗದಲ್ಲಿ ಒಮ್ಮೆಯಾದರೂ ಯೋಚಿಸಿರುತ್ತಾರೆ ಅದಂತು ೧೦೦% ನಿಜಾ!

ಆದರೆ ಸಹಜರವರು ತಮ್ಮ ಸ್ಕೋಟಿಯ ವೇಗದ ರೀತಿಯಲ್ಲಿ ವಿಚಾರಗಳನ್ನು ಲವ್ - ತರುಣಿಯ ಹಸಿ ಆಸೆ, ಹುಡುಗುತನ, ನಿರಾಶೆ, ಪಸ್ಟ್ ಕ್ರಶ್, ಹದಿ ಹರೆಯದ ಕಾತುರತೆ ಮತ್ತು ತನ್ನ ವಯಸ್ಸಿ ಹುಡುಗನೆಡೆಗೆ ಇರುವ ಸೆಳೆತ ಇತ್ಯಾದಿ ಇತ್ಯಾದಿ ವಿಚಾರಗಳನ್ನು ತಮ್ಮ ಪುಟ್ಟ ಪುಟ್ಟ ಬರಹಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಹಾಗೆಯೇ ಲೇಖಕಿ ಸಹಜ ತಮ್ಮ ಗಂಭೀರವಾದ ಸಾಹಿತ್ಯ ಅಧ್ಯಯನದ ಛಾಪನ್ನು ತಮ್ಮ ಲೇಖನಗಳಲ್ಲಿ ಮೊಡಿಸಿದ್ದಾರೆ. ಅವರು ಕನ್ನಡದ ಎಲ್ಲಾ ಪ್ರಸಿದ್ಧ ಬರಹಗಾರರ ಸಾಹಿತ್ಯವನ್ನು ಓದಿದ್ದಾರೆ. ಬೈರಪ್ಪ, ಲಂಕೇಶ, ಅನಂತ ಮೊರ್ತಿ, ತೇಜಸ್ವಿ, ಬೆಳಗೆರೆಯವರಿಂದ ಪ್ರಾರಂಭಿಸಿ ಒಶೋ ರಜನಿಶರವರೆಗೆ ಸಾಹಿತ್ಯವನ್ನು ಅರಗಿಸಿಕೊಂಡಿದ್ದಾರೆ. ಅದ್ದರಿಂದಲೇ ಯಾವೂಂದು ಬರಹಗಳು ಕೇವಲ ವಯೋ ಸಹಜ ಚಿತ್ರಣಗಳಾಗದೇ ಗಟ್ಟಿ ಅನುಭವಗಳ ಮೈಲಿಗಲ್ಲುಗಳಾಗಿ ನಿಲ್ಲುತ್ತವೆ.

ಹಾಗೆಯೇ ಯಾವೊಂದು ವಿಷಯವನ್ನು ಯಾವ ಅಂಜಿಕೆಯಿಲ್ಲದೆ ಪ್ರಸ್ತಾಪಿಸಿ ಅದಕ್ಕೆ ನ್ಯಾಯ ಒದಗಿಸಿ ಅದರ ವಿಸ್ತಾರತೆಯನ್ನು ಕಟ್ಟಿ ಕೊಟ್ಟಿದ್ದಾರೆ. ರಜನೀಶರ "ಸಂಬೋಗದಿಂದ ಸಮಾಧಿಯ ಕಡೆಗೆ" ಪುಸ್ತಕದ ಬಗ್ಗೆ ಬರೆಯುತ್ತಾ, ಆ ಪುಸ್ತಕವನ್ನು ಓದಲು ಪ್ರಾರಂಭಿಸಿದಾಗ ತನ್ನ ಸುತ್ತಲಿನ ಗೆಳತಿಯರ ಪ್ರತಿಕ್ರೀಯೆ ಸಾಮಾನ್ಯವಾಗಿ ನಮ್ಮ - ನಿಮ್ಮ ವರ ಮಡಿವಂತಿಕೆಯ ರೀತಿಯಲ್ಲಿ ಸೆಕ್ಸ್ ಗುರುವಿನ ಗ್ರಂಥಾಧ್ಯನವೇ!! ಎಂದು ಅಶ್ಚರ್ಯಚಕಿತರಾಗಿದ್ದದು. ಹಾಗೆಯೇ ಲೇಖಕಿ ಆ ಪುಸ್ತಕವನ್ನು ಮತ್ತು ರಜನೀಶರ ವಿಚಾರಧಾರೆ ಯಾವ ಮಟ್ಟದ್ದು ಮತ್ತು ಅದು ಹೇಗೆ ನಮ್ಮ ಜೀವನಕ್ಕೆ ಧಾರಿ ದೀಪವಾಗಿರುವಲ್ಲಿ ಸಫಲವಾಗಿದೆ ಎಂದು ಚಿತ್ರಿಸಿರುವುದು ಅವರ ಗಟ್ಟಿ ವ್ಯಕ್ತಿತ್ವಕ್ಕೆ ಸಾಕ್ಷಿ.

ಹೀಗೆಯೇ ಲೇಖಕಿಯ ಈ ತುಂಟ ಬರಹಗಳಿಂದ ಯುವಕರಿಂದ ಯಾವ ರೀತಿಯ ಪತ್ರಗಳು - ಕರೆಗಳು ಲೇಖಕಿಯನ್ನೇ ಲೈನ್ ಹೊಡೆಯಲು ಪ್ರಾರಂಭಿಸಿರುವುದನ್ನು ಅದಕ್ಕೆಲ್ಲಾ ಯಾವ ರೀತಿಯಲ್ಲಿ ಸಹಜರವರು ಸಹಜ ರೀತಿಯಲ್ಲಿ ತಮ್ಮ ವ್ಯಕ್ತಿತ್ವದ ಮೂಲಕ ಅವರ ಆಸೆಗಳಿಗೆ ಯಾವ ರೀತಿಯಲ್ಲಿ ತಣ್ಣೀರು ಎರೆಚಿ ಬುದ್ಧಿ ಹೇಳಿರುವುದು ಮತ್ತು ಗೆಳೆತನ ಅಂದರೆ ಏನು, ಪರಿಚಯ ಅಂದರೇನು ಎಂದು ವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ.

ಸಹಜ ಮತ್ತು ತನ್ನ ಹಾಸ್ಟೇಲ್ ಗೆಳತಿ "ಚವತಿ" ಯರ ಸ್ವಗತ ಸಲ್ಲಾಪ, ಸಾಹಸದ ಹಾದಿಗಳು ಪ್ರತಿಯೊಬ್ಬ ಯುವತಿಯ ಯೋಚನಾ ಲಹರಿಗೆ ಉದಾಹರಣೆಯಾಗಿದೆ.

ಎಲ್ಲಾ ಯುವಕ ಯುವತಿಯರಿಗೆ ಈ ರೀತಿಯ ಬರಹಗಳಿಂದ ತಾವುಗಳು ವಿಭಿನ್ನವಾಗಿ ಯೋಚಿಸಬಹುದು ಎಂಬುದನ್ನು ಕಲಿಯುವುಂತಾಗುತ್ತಾದೆ. ಮತ್ತು ಹೇಗೆ ತಮ್ಮ ಯೌವನದ ದಿನಗಳನ್ನು ಯಾವ ರೀತಿಯಲ್ಲಿ ಕ್ರೀಯಶೀಲವಾಗಿ ಅಧ್ಯಯನದ ಜೋತೆ ಜೋತೆಯಲ್ಲಿ ಹಲವಾರು ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಬಹುದು ಎಂಬುದಕ್ಕೆ ಸಹಜ ಮತ್ತು ಚವತಿಯವರು ಮಾಡುವ ಹೊಸ ಹೊಸ ಪ್ರಯೋಗಗಳಾದ ಪ್ರವಾಸ, ಓದು, ಗೊಗಲ್ ನಲ್ಲಿ ವಿವಿಧ ರೀತಿಯ ವಿಷಯಗಳನ್ನು ತಿಳಿಯುವ ಆಟ ಇತ್ಯಾದಿ ಉತ್ತಮವಾದ ನಿದರ್ಶನಗಳನ್ನು ನೀಡಿದ್ದಾರೆ.

ಎರಡು ಪುಸ್ತಕಗಳನ್ನು ಒಂದೇ ಗುಕ್ಕಿಗೆ ಓದಿ ಹರ್ಷಿತನಾಗಿ ಪುನಃ ಈ ಲೇಖಕಿಯ ಬರಹಗಳು ಮತ್ತೋಮ್ಮೆ ಮೊಡಿ ರೋಮಾಂಚನವನ್ನುಂಟು ಮಾಡಿಸಬಾರದೇ ಎನ್ನುವಂತಾಯಿತು.

ನನ್ನ ಹರ್ಷದ ಕ್ಷಣಗಳನ್ನು ಸಹಜರಿಗೆ ತಿಳಿಯಪಡಿಸಲೇ ಎಂದು ಅದೇ ಅವರ ಹಳೆಯ ಮೈಲ್ ಐಡಿ "ಲವ್ ಸಹಜ ಅಟ್ ಜಿ ಮೈಲ್ ಡಾಟ್ ಕಾಂ" ಗೇ ಪತ್ರಿಸಿದ್ದೇನೆ. ಆದರೆ ಯಾವುದೇ ಪ್ರತಿಕ್ರೀಯೆ ಇದುವರೆಗೂ ಬಂದಿಲ್ಲ. ಅವರ ಪ್ರತಿಕ್ರೀಯೆಗಾಗಿ ಕಾಯುತ್ತಿರುವೆ. ಯಾರಿಗೆ ಗೊತ್ತು ಸಾಹಸಿ ಲೇಖಕಿ ಸಹಜ ಹೊಸ ವಿಚಾರಾನುಭವಗಳೊಂದಿಗೆ ತಮ್ಮ ಹೊಸ ಲೇಖನಗಳ ಮೂಲಕ ಹೊಸ ರೀತಿಯಲ್ಲಿ ಪ್ರತ್ಯಕ್ಷವಾದರೂ ಸರಿಯೇ! ಹಾಗೆಯೇ ಆಗಲಿ ಎಂದು ಆಶಿಸುವೆ.

-ತ್ರಿಪುಟಪ್ರಿಯ